ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
January 2023 » Page 2 of 5 » Dynamic Leader
October 23, 2024
Home 2023 January (Page 2)
ದೇಶ ಸಿನಿಮಾ

ಹೈದರಾಬಾದ್: ಖ್ಯಾತ ನಟಿ ಜಮುನಾ (86) ಅನಾರೋಗ್ಯದಿಂದ ಹೈದರಾಬಾದ್‌ನಲ್ಲಿ ನಿಧನರಾದರು. ನಟಿ ಜಮುನಾ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಪ್ರಮುಖ ನಟರೊಂದಿಗೆ ಅಭಿನಯಿಸಿದ್ದಾರೆ.

ಕನ್ನಡದಲ್ಲಿ ಜಮುನಾ 8 ಚಿತ್ರಗಳಲ್ಲಿ ನಟಿಸಿದ್ದರು. ತೆನಾಲಿ ರಾಮಕೃಷ್ಣ, ಭೂಕೈಲಾಸ ಮೊದಲಾದ ಸಿನಿಮಾಗಳಲ್ಲಿ ಜಮುನಾ ಬಣ್ಣ ಹಚ್ಚಿದ್ದರು. ತೆಲುಗಿನಲ್ಲಿ ಸುಮಾರು 100 ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

ಜಮುನಾ ಅವರು 1936 ಆಗಸ್ಟ್ 30 ರಂದು ಹಂಪಿಯಲ್ಲಿ (Hampi) ಜನಿಸಿದ್ದರು. 1953ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ಹಲವು ದಶಕಗಳ ಕಾಲ ಚಿತ್ರರಂಗಕ್ಕಾಗಿ ಶ್ರಮಿಸಿದರು.

ಜಮುನಾ ಪಾರ್ಥಿವ ಶರೀರವನ್ನು ಬೆಳಗ್ಗೆ 11ಗಂಟೆಗೆ ಹೈದರಾಬಾದ್​ನಲ್ಲಿರುವ ಫಿಲಂ ಚೇಂಬರ್‌ಗೆ ತರಲಾಗುತ್ತದೆ. ಅಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಜಮುನಾ ಅವರ ನಟನೆಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಜಮುನಾ ಅವರು ನಟನೆಯ ಜತೆಗೆ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. 1980ರಲ್ಲಿ ಅವರು ಕಾಂಗ್ರೆಸ್​ಗೆ ಸೇರ್ಪಡೆ ಆದರು. 1989ರಲ್ಲಿ ಜಮುನಾ ಅವರು ರಾಜಮಂಡ್ರಿಯಿಂದ ಸಂಸದೆಯಾಗಿ ಆಯ್ಕೆ ಆದರು. 1991ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಸೋತರು. ಆ ಬಳಿಕ ರಾಜಕೀಯದಿಂದ  ದೂರ ಉಳಿದರು. 

ದೇಶ

ಲಕ್ನೋ: ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯಲ್ಲಿ ಮಗನ ಸಾವಿನ ನಂತರ 28 ವರ್ಷದ ಸೊಸೆಯನ್ನು ಮದುವೆಯಾದ ಮಾವನ ಕುತೂಹಲಕಾರಿ ಘಟನೆಯೊಂದು ಅಚ್ಚರಿ ಮೂಡಿಸಿದೆ.

ಕೈಲಾಶ್ ಯಾದವ್ (70) ಸಬಿಯಾ ಉಮ್ರಾವ್ ಗ್ರಾಮದವರು. ಅವರಿಗೆ ಮದುವೆಯಾಗಿ ನಾಲ್ಕು ಮಕ್ಕಳಿದ್ದಾರೆ. ಆತನ ಹೆಂಡತಿ ಈಗ ಜೀವಂತವಾಗಿಲ್ಲ. ಇದರ ಬೆನ್ನಲ್ಲೇ ಅವರ ಮೂರನೇ ಮಗ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದಾನೆ.

ಈ ವೇಳೆ ಅವರು ಇತ್ತೀಚೆಗೆ ತಮ್ಮ ಸೊಸೆ ಪೂಜಾ (28) ಅವರನ್ನು ದೇವಸ್ಥಾನದಲ್ಲಿ ವಿವಾಹವಾಗಿದ್ದರು. ಈ ಮದುವೆಯ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿವಾಹವಾದರು ಎಂದು ಹೇಳಲಾಗಿದ್ದು, ಪೂಜಾ ತನ್ನ ಹೊಸ ಸಂಬಂಧದಲ್ಲಿ ಸಂತೋಷವಾಗಿದ್ದಾಳೆ.

ಪತಿಯ ಮರಣದ ನಂತರ ಪೂಜಾ ಒಂಟಿಯಾಗಿದ್ದಳು ಎಂದು ಕೆಲವರು ಹೇಳುತ್ತಾರೆ. ಹಾಗಾಗಿ ಆಕೆ ತನ್ನ ಮಾವನನ್ನು ಮದುವೆಯಾಗಲು ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ.

ವಿಷಯ ಪೊಲೀಸರ ಮೊರೆ ಹೋಗಿದ್ದು, ಫೋಟೋ ನೋಡಿ ಅಧಿಕಾರಿಗಳು ಅಚ್ಚರಿಗೊಂಡಿದ್ದಾರೆ.

ಪರ್ಹಲ್‌ಗಂಜ್ ಪೊಲೀಸ್ ಠಾಣೆಯಲ್ಲಿ ವೃದ್ಧೆಯೊಬ್ಬರ ಮದುವೆಯ ಮಾತು ಸಾಮಾಜಿಕ ಜಾಲತಾಣಗಳ ಮೂಲಕ ಗ್ರಾಮ ಹಾಗೂ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ವೈರಲ್ ಆಗುತ್ತಿರುವ ಫೋಟೋ ಮೂಲಕವೇ ಈ ಮದುವೆಯ ಬಗ್ಗೆ ನಮಗೆ ತಿಳಿದು ಬಂದಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಈ ಬಗ್ಗೆ ಯಾವುದೇ ದೂರು ಬಂದಿಲ್ಲ. ಇದು ಇಬ್ಬರ ನಡುವಿನ ಪರಸ್ಪರ ವಿಚಾರವಾಗಿದ್ದು, ಯಾರಿಂದಾದರು ದೂರು ಬಂದರೆ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಹೇಳಿದರು.

ಇವರಿಬ್ಬರ ಮದುವೆಗೆ ಕೆಲವರು ಪರವಾಗಿದ್ದರೆ, ಇನ್ನು ಕೆಲವರು ವಿರೋಧಿಸುತ್ತಿದ್ದಾರೆ. ಸೊಸೆ ಬೇರೆಯವರನ್ನ ಮದುವೆಯಾಗಿದ್ದರೆ ಚೆನ್ನಾಗಿತ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ರಾಜಕೀಯ ರಾಜ್ಯ

ಡಿ.ಸಿ.ಪ್ರಕಾಶ್, ಸಂಪಾದಕರು

‘ತಮಿಳುನಾಡಿನ ಕೊಡೈಕಾನಲ್ ಪ್ರದೇಶದಲ್ಲಿ ಬೆಳೆಯುವ ಒಂದು ರೀತಿಯ ಮಾದಕ ಅಣಬೆಯೆ ಇದಕ್ಕೆ ಕಾರಣ’ ಎಂದು ಅಲ್ಲಿನ ಬಿಜೆಪಿಯವರು ಹೇಳುತ್ತಿರುವುದು ಆಶ್ಚರ್ಯವಾಗಿದೆ!

ತಮಿಳುನಾಡಿನ ಬಿಜೆಪಿ ಪಕ್ಷಕ್ಕೆ ಸೇರಿದವನು ಸೆಲ್ವಕುಮಾರ್. ಕರೂರು ಜಿಲ್ಲೆಯ ಇಲುಪ್ಪೂರು ಪ್ರದೇಶಕ್ಕೆ ಸೇರಿದ ಶಕ್ತಿ ಎಂಬ ಡ್ರಗ್ ಪೆಡ್ಲರ್ ಇವನ ಸಂಬಂಧಿ. ತಮಿಳುನಾಡು ಪೊಲೀಸರು ಡ್ರಗ್ಸ್ ಜಾಲವೊಂದನ್ನು ಪತ್ತೆಹಚ್ಚಿದಾಗ, ಅವರ ಸೆಲ್ ಫೋನ್ ನಂಬರ್ ಬಳಸಿ ಶಕ್ತಿಯನ್ನು ಬಂಧಿಸಿದ್ದರು. ಈ ಶಕ್ತಿ ಶ್ರೀಲಂಕಾ ಸೇರಿದಂತೆ ಹಲವು ದೇಶಗಳಿಗೆ ಕೊಕೇನ್ ಮತ್ತು ಹೆರಾಯಿನ್‌ನಂತಹ ಮಾದಕವಸ್ತುಗಳನ್ನು ಪೂರೈಸುವ ಡ್ರಗ್ ಗ್ಯಾಂಗ್‌ನ ಒಂದು ಭಾಗ. ಡ್ರಗ್ ಪೆಡ್ಲರ್ ಶಕ್ತಿಯ ಸೋದರ ಸಂಬಂಧಿ ಸೆಲ್ವಕುಮಾರ್ ಬಿಜೆಪಿಯ ಅನುಯಾಯಿ. ಸೋಶಿಯಲ್ ಮೀಡಿಯಾದಲ್ಲಿ ತಮಿಳುನಾಡು ಅಧ್ಯಕ್ಷ ಅಣ್ಣಾಮಲೈ ಖ್ಯಾತಿಯನ್ನು ಬಿತ್ತರಿಸುವುದೇ ಇವನ ದಿನನಿತ್ಯದ ಕಾಯಕ. ಶಕ್ತಿ ಬಂಧನಕ್ಕೊಳಗಾದ ನಂತರ ಪೊಲೀಸರು ತನ್ನ ಕಡೆಗೂ ಬರಬಹುದು ಎಂದು ಅನುಮಾನಿಸಿದ ಸೆಲ್ವಕುಮಾರ್ ಅಣ್ಣಾಮಲೈ ಬಳಿ ಶರಣಾಗುತ್ತಾನೆ. ಸೆಲ್ವಕುಮಾರನನ್ನು ಪಕ್ಷಕ್ಕೆ ಸೇರಿಸಿಕೊಂಡ ಅಣ್ಣಾಮಲೈ, ಕೂಡಲೇ ಪಕ್ಷದಲ್ಲಿ ಜವಾಬ್ದಾರಿಯನ್ನೂ ನೀಡುತ್ತಾರೆ. ಅಮರ್ ಪ್ರಸಾದ್ ರೆಡ್ಡಿ, ತಿರುಚ್ಚಿ ಸೂರ್ಯ, ಸೆಲ್ವಕುಮಾರ್ ಮತ್ತು ಅಲಿಶಾ ಅವರನ್ನೊಳಗೊಂಡ ಅಣ್ಣಾಮಲೈ ತಂಡದಲ್ಲಿ ಸೆಲ್ವಕುಮಾರ್ ಪ್ರಮುಖ ಭಾಗವಾಗುತ್ತಾನೆ. ಈ ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದ ಸೆಲ್ವಕುಮಾರ್ ಪೊಲೀಸ್ ಕಾರ್ಯಾಚರಣೆಯಿಂದ ಪಾರಾಗುತ್ತಾನೆ.

ಸೆಲ್ವಕುಮಾರ್, ಶಕ್ತಿ

‘ಅಣ್ಣಾಮಲೈ ಸದಾ ಸೈಕೋ ತರಹ ವರ್ತಿಸುತ್ತಾನೆ. ಇದ್ದಕ್ಕಿದ್ದಂತೆ ನಾನು ಚಾಣಕ್ಯ ಎಂದು ಕೂಗುತ್ತಾನೆ. ಮುಂದಿನ ನಿಮಿಷ ಮೇಜಿನ ಮೇಲೆ ತಲೆಯಿಟ್ಟು ಮಲಗಿಕೊಳ್ಳುತ್ತಾನೆ. ಆತನು ಪ್ರತಿದಿನ ಸಾಕಷ್ಟು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾನೆ. ಆತನಿಗೆ ಮಾನಸಿಕ ಖಾಯಿಲೆ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ’ ಎಂಬ ಸುದ್ದಿ ಬಿಜೆಪಿ ಕಾರ್ಯಕರ್ತರಲ್ಲಿ ಹಬ್ಬಿತ್ತು. ‘ಅವನಿಗೆ ಯಾವುದೇ ಮಾನಸಿಕ ಕಾಯಿಲೆಗಳು ಇಲ್ಲ. ಯಹೂದಿಗಳು ದೇಶವನ್ನು ಆಳಬೇಕಾದರೆ ಅವರು ಮತಾಂಧರಾಗಿರಬೇಕು ಎಂಬುದಕ್ಕಾಗಿ ಅವರು ಡ್ರಗ್ಸ್ ಸೇವನೆ ಮಾಡುತ್ತಿದ್ದರು. ಹಾಗಾಗಿ ಕೊಡೈಕಾನಲ್ ಪ್ರದೇಶದಿಂದ ನೈಸರ್ಗಿಕವಾಗಿ ಬೆಳೆಯುವ ಅಣಬೆ ಮಾದರಿಯ ಮಾದಕ ವಸ್ತುವನ್ನು ಖರೀದಿಸಿ ಅಣ್ಣಾಮಲೈ ಸೇವಿಸುತ್ತಿದ್ದಾನೆ’ ಎಂದು ಅಮರ್ ಪ್ರಸಾದ್ ರೆಡ್ಡಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾನೆ ಎಂದು ಬಿಜೆಪಿ ವಲಯದಲ್ಲಿ ಗುಸುಗುಸು ಇದೆ.

ಅಮರ್ ಪ್ರಸಾದ್ ರೆಡ್ಡಿ ಮತ್ತು ನೈಸರ್ಗಿಕವಾಗಿ ಬೆಳೆಯುವ ಅಣಬೆ ಮಾದರಿಯ ಮಾದಕ ವಸ್ತು

ಅಣ್ಣಾಮಲೈ ಹಾಗೂ ಬಿಜೆಪಿ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಡಿಸೆಂಬರ್ 10 ರಂದು ವಿಮಾನದ ತುರ್ತು ಬಾಗಿಲು ತೆರೆಯುವ ಹಿಂದಿನ ದಿನ, ಪೂರ್ವ ಕರಾವಳಿ (ECR) ರಸ್ತೆಯಲ್ಲಿರುವ ಜನಪ್ರಿಯ ಐಷಾರಾಮಿ ರೆಸಾರ್ಟ್‌ ಒಂದರಲ್ಲಿ ವಾಸ್ತವ್ಯ ಹೂಡಿದ್ದರು. 10ರಂದು ತಿರುಚ್ಚಿಯಲ್ಲಿ ನಡೆಯುವ ಬಿ.ಜೆ.ಪಿ. ಯುವ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ತೇಜಸ್ವಿ ಸೂರ್ಯ ಬೆಂಗಳೂರಿನಿಂದ ಬಂದಿದ್ದನು.

‘ಆ ರಾತ್ರಿ ತೇಜಸ್ವಿ ಸೂರ್ಯನೊಂದಿಗೆ ಅಣ್ಣಾಮಲೈ ಜೊತೆಗೂಡಿ ಮದ್ಯಪಾನ, ಡ್ಯಾನ್ಸು, ಡ್ರಗ್ಸು ಎಂದು ಇಬ್ಬರೂ ಸಂಭ್ರಮಿಸಿದ್ದರು. ತೇಜಸ್ವಿ ಸೂರ್ಯ ಮಹಿಳೆಯೊಬ್ಬರ ಜೊತೆಯಿರುವ ಖಾಸಗಿ ವಿಡಿಯೋವೊಂದನ್ನು ಅಣ್ಣಾಮಲೈ ತಮ್ಮ ಹನಿ ಟ್ರ್ಯಾಪ್ ಶೈಲಿಯಲ್ಲಿ ಚಿತ್ರೀಕರಿಸಿದ್ದಾನೆ’ ಎಂಬ ಸುದ್ಧಿಗಳು ಅಲ್ಲಿನ ಮಾಧ್ಯಮಗಳಲ್ಲಿ ಬಿತ್ತರಿಸಲಾಗಿದೆ.

ಅಣ್ಣಾಮಲೈ ಹಾಗೂ ತೇಜಸ್ವಿ ಸೂರ್ಯ ಕರ್ನಾಟಕದ ಶೃಂಗೇರಿ ಶಂಕರ ಮಠದ ಬೆಂಬಲಿಗರಾಗಿದ್ದಾರೆ. ಬಿಜೆಪಿಯನ್ನು ನಿಯಂತ್ರಿಸಲು ಆರ್‌ಎಸ್‌ಎಸ್ ನಿಯೋಜಿಸಿದ ವ್ಯಕ್ತಿಯೇ ಬಿ.ಎಲ್.ಸಂತೋಷ್. ಅವರು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯೂ ಆಗಿದ್ದಾರೆ. ಇವರು ಶೃಂಗೇರಿ ಶಂಕರ ಮಠದ ಪ್ರಮುಖರಲ್ಲಿ ಒಬ್ಬರು. ತೇಜಸ್ವಿ ಸೂರ್ಯನನ್ನು ಸಂಸದನಾಗಿ ಮಾಡಿದವರು ಇದೇ ಬಿ.ಎಲ್.ಸಂತೋಷ್.

ಬಿ.ಎಲ್.ಸಂತೋಷ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದಶಿ

ಸೂರ್ಯನ ಅಮಲಿನ ಮಾತು ಕರ್ನಾಟಕದಲ್ಲಿ ಜನಪ್ರಿಯ. ಈತನ ಬಗ್ಗೆ ಮಾಧ್ಯಮಗಳಲ್ಲಿ ಆಗಾಗ ಚರ್ಚೆಯಾಗುತ್ತಿರುತ್ತದೆ. ಬೆಂಗಳೂರು ನಗರವು ಮಳೆಯ ಅಬ್ಬರಕ್ಕೆ ತತ್ತರಸಿ ಹೋಗಿದ್ದ ಸಂದರ್ಭದಲ್ಲಿ ಪದ್ಮನಾಭನಗರದ ಹೋಟೆಲ್‌ ಒಂದರಲ್ಲಿ ನಿಂತು ‘ನಾನು ಖುಷಿಯಿಂದ ಮಸಾಲೆ ದೋಸೆ ತಿನ್ನುತ್ತಿದ್ದೇನೆ’ ಎಂದು ವಿಡಿಯೋ ಮಾಡಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು, ಅವಹೇಳನಕ್ಕೆ ಒಳಗಾದವನು ಈ ತೇಜಸ್ವಿ ಸೂರ್ಯ. ಕೋವಿಡ್ ಸಮಯದಲ್ಲಿ ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ಬೇಟಿ ನೀಡಿ, ‘ಹಿಂದೂ ರೋಗಿಗಳನ್ನು ಮುಸ್ಲಿಂ ಸಿಬ್ಬಂದಿಗಳು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ’ ಎಂಬ ಸುಳ್ಳು ನಾಟಕವಾಡಿ ಜನರಿಂದ ಉಗಿಸಿಕೊಂಡಿದ್ದನ್ನು ಯಾರೂ ಇನ್ನೂ ಮರೆತಿಲ್ಲ.  

ಇದೇ ತೇಜಸ್ವಿ ಸೂರ್ಯ ಅರಬ್ ಮಹಿಳೆಯರನ್ನು ಅವಹೇಳನ ಮಾಡಿ ‘ಕಳೆದ ಕೆಲವು ಶತಮಾನಗಳಿಂದ 95% ಅರಬ್ ಮಹಿಳೆಯರು ಪರಾಕಾಷ್ಠೆಯನ್ನು (Orgasm) ತಲುಪಲಿಲ್ಲ’ ಎಂದು ಬರೆದ ಟ್ವೀಟ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಸ್ಲಿಂ ರಾಷ್ಟ್ರಗಳ ಮದ್ಯೆ ಭಾರತವು ತಲೆ ತಗ್ಗಿಸುವಂತೆ ಮಾಡಿತು.

ಬಿ.ಎಲ್.ಸಂತೋಷ್ ಮುಖಾಂತರ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ತಮಿಳುನಾಡು ಅಧ್ಯಕ್ಷ ಅಣ್ಣಾಮಲೈ ಹಾಗೂ ಸಂಸದ ತೇಜಸ್ವಿ ಸೂರ್ಯ ಡಿಸಂಬರ್ 10ರಂದು ಮದ್ಯದ ಅಮಲಿನಲ್ಲಿ ತಿರುಚ್ಚಿಗೆ ವಿಮಾನ ಹತ್ತಿದರು. ಇವರ ಜೊತೆ ನಾಲ್ವರು ಬಿಜೆಪಿ ಸದಸ್ಯರು ಇದ್ದರು ಎಂದು ಈ ಹಿಂದೆ ತಮಿಳುನಾಡು ಬಿಜೆಪಿಯಲ್ಲಿ ರಾಜ್ಯ ಉಪಾಧ್ಯಕ್ಷರಾಗಿದ್ದ ಪಿ.ಟಿ.ಅರಸುಕುಮಾರ್, ಆ ದಿನ ನಡೆದ ಘಟನೆಯನ್ನು ವಿವರಿಸಿದ್ದಾರೆ. ತಮಿಳುನಾಡು ಬಿಜೆಪಿಯಲ್ಲಿ ರಾಜ್ಯ ಉಪಾಧ್ಯಕ್ಷರಾಗಿದ್ದ ಪಿ.ಟಿ.ಅರಸುಕುಮಾರ್ 2019ರಲ್ಲಿ ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷದಲ್ಲಿ ಸೇರ್ಪಡೆಯಾದರು. ಅರಸುಕುಮಾರ್ ಕೂಡ ಇದೇ ವಿಮಾನದಲ್ಲಿ ಅಂದು ಪ್ರಯಾಣ ಮಾಡಿರುತ್ತಾರೆ. ಇವರು ಈ ಘಟನೆಯನ್ನು ಹತ್ತಿರದಿಂದ ನೋಡಿದ ಪ್ರತ್ಯಕ್ಷದರ್ಶಿಯೂ ಆಗಿದ್ದಾರೆ.

ಪಿ.ಟಿ.ಅರಸುಕುಮಾರ್

‘ಬೆಳಿಗ್ಗೆ ಹತ್ತು ಗಂಟೆಯ ಸಮಯಕ್ಕೆ ತಿರುಚ್ಚಿಗೆ ಹೊರಡಲಿರುವ ಆ ಪುಟ್ಟ ವಿಮಾನದಲ್ಲಿ ಒಟ್ಟು 76 ಪ್ರಯಾಣಿಕರು ಕುಳಿತುಕೊಳ್ಳಬಹುದು. ನಾನು ತಡವಾಗಿಯೇ ಆ ವಿಮಾನದೊಳಗೆ ಪ್ರವೇಶ ಮಾಡಿದೆ. ವಿಮಾನದ ತುರ್ತು ನಿರ್ಗಮನದ ಬಾಗಿಲ ಬಳಿ ಅಣ್ಣಾಮಲೈ ಹಾಗೂ ತೇಜಸ್ವಿ ಸೂರ್ಯ ಕುಳಿತಿದ್ದರು. ಪ್ರಯಾಣಿಕರು ಯಾವುದೇ ಅಪಘಾತ ಸಂಭವಿಸಿದಾಗ ತುರ್ತು ಬಾಗಿಲು ತೆರೆಯುವುದು ಹೇಗೆ ಎಂದು ಪ್ರಯಾಣಿಕರಿಗೆ ವಿವರಿಸಿಕೊಂಡಿದ್ದ ಗಗನಸಖಿಯರು ಹಿಂದಿನ ಬಾಗಿಲುಗಳನ್ನು ಮುಚ್ಚಿ ಪಕ್ಕಕ್ಕೆ ನಡೆದರು.

ಪ್ರಯಾಣಿಕರ ಆಗಮನವು ಮುಗಿಯುತ್ತಿದ್ದಂತೆ, ವಿಮಾನ ಚಲಿಸಲು ಜೋರಾಗಿ ಎಂಜಿನ್ ಆನ್ ಮಾಡಲಾಯಿತು. ವಿಮಾನ ಟೇಕ್ ಆಫ್ ಆಗುತ್ತಿದೆ ಎಂದು ನಾವು ಭಾವಿಸುತ್ತಿದ್ದಂತೆ, ವಿಮಾನ ಸಿಬ್ಬಂದಿಗಳು (ಕಾಕ್‌ಪಿಟ್ ಕಡೆಗೆ) ಪೈಲಟ್ ಕೋಣೆಯ ಕಡೆಗೆ ಓದಿದರು. ಅದೇ ವೇಳೆಯಲ್ಲಿ ಪೊಲೀಸರೂ ಏಕಾಏಕಿ ವಿಮಾನವನ್ನು ಪ್ರವೇಶಿಸಿದರು.

‘ವಿಮಾನದಲ್ಲಿ ದೊಡ್ಡ ಸೋರಿಕೆಯಾಗಿದೆ ಎಂದು ಪೈಲಟ್ ನ ಕಂಪ್ಯೂಟರ್ ತಿಳಿಸುತ್ತಿದೆ. ಆದ್ದರಿಂದ ಈ ವಿಮಾನವನ್ನು ಚಲಾಯಿಸಲು ಸಾಧ್ಯವಿಲ್ಲ. ಆ ಸೋರಿಕೆಯನ್ನು ಸರಿಪಡಿಸಲಾಗುತ್ತದೆಯೇ? ಅಥವಾ ಪ್ರಯಾಣಿಕರನ್ನು ಬೇರೆ ವಿಮಾನಕ್ಕೆ ಸ್ಥಳಾಂತರಿಸಲಾಗುತ್ತದೆಯೇ? ಇದನ್ನು ಇಂಡಿಗೋ ಏರ್‌ಲೈನ್ಸ್ ನಿರ್ಧರಿಸುತ್ತದೆ’ ಎಂದು ಗಗನಸಖಿಯರು ಘೋಷಣೆ ಮಾಡಿದರು.

ವಿಮಾನದ ತುರ್ತು ನಿರ್ಗಮನದ ಬಾಗಿಲು

ವಿಮಾನದೊಳಗೆ ಬಂದಿದ್ದ ಪೊಲೀಸರು ಅಣ್ಣಾಮಲೈ, ತೇಜಸ್ವಿ ಸೂರ್ಯ ಹಾಗೂ ಅವರೊಂದಿಗಿದ್ದ ಬಿಜೆಪಿಯವರನ್ನು ಪ್ರತ್ಯೇಕವಾದ ಒಂದು ಬಸ್ಸಿನಲ್ಲಿ ಹತ್ತಿಸಿ ವಿಮಾನ ನಿಲ್ದಾಣದೊಳಗೆ ಕರೆದೊಯ್ದರು. ನಾನೂ ಸೇರಿದಂತೆ ಇತರ ಪ್ರಯಾಣಿಕರನ್ನು ಬೇರೆಯ ಬಸ್ಸಿನೊಳಗೆ ಕೂರಿಸಿ, ನಮಗೆ ಸ್ನಾಕ್ಸ್ ಮತ್ತು ಕೂಲ್ ಡ್ರಿಂಕ್ಸ್ ಕೊಟ್ಟರು. ಅಷ್ಟರೊಳಗೆ ಅಣ್ಣಾಮಲೈ ಹಾಗೂ ತೇಜಸ್ವಿ ಸೂರ್ಯ ಇಬ್ಬರು ಸೇರಿಕೊಂಡು ವಿಮಾನದ ತುರ್ತು ನಿರ್ಗಮನದ ಬಾಗಿಲನ್ನು (Emergency Exit) ತೆರೆದಿದ್ದ ಕಾರಣ, ವಿಮಾನದೊಳಗೆ ದೊಡ್ಡ ಸೋರಿಕೆ ಉಂಟಾಯಿತು ಎಂಬುದನ್ನು ಪೈಲಟ್ ಪತ್ತೆ ಮಾಡಿದ್ದರು. ಪೈಲಟ್ ಅದನ್ನು ಕಂಡುಹಿಡಿದಿರದಿದ್ದರೆ ನೇಪಾಳ ದೇಶದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 76 ಜನರು ಅಪಘಾತದಲ್ಲಿ ಸತ್ತಂತೆ ನಾವು ಕೂಡ ಸತ್ತಿರಬೇಕು. ಪೈಲೆಟ್ ಸಾಮಾರ್ಥ್ಯದಿಂದ ಅಣ್ಣಾಮಲೈ ಮತ್ತು ಇತರರು ಮಾಡಿದ ಕೆಲಸ ಪತ್ತೆ ಮಾಡಲಾಯಿತು.

ಅಗ್ನಿಶಾಮಕ ವಾಹನಗಳು ಸೇರಿದಂತೆ ಎಲ್ಲಾ ತುರ್ತು ವಾಹನಗಳು ವಿಮಾನದ ಸುತ್ತಲೂ ನಿಂತಿದ್ದವು. ಫ್ಲೈಟ್ ಎಂಜಿನಿಯರ್‌ಗಳು ವಿಮಾನವನ್ನು ಇಂಚಿಂಚಾಗಿ ಪರೀಕ್ಷಿಸಿದರು. ತೇಜಸ್ವಿ ಸೂರ್ಯ ಹಾಗೂ ಅಣ್ಣಾಮಲೈ ವಿಮಾನದ ತುರ್ತು ಬಾಗಿಲನ್ನು ಏಕೆ ತೆರೆದರು? ಅವರು ಭಯೋತ್ಪಾದಕರೇ? ಎಂದೆಲ್ಲ ಅವರನ್ನು ಪ್ರತ್ಯೇಕವಾಗಿ ತನಿಖೆಗೆ ಒಳಪಡಿಸಲಾಯಿತು. ಆ ನಂತರ ಅವರ ಆಸನಗಳನ್ನು ಬದಲಾಯಿಸಿ ಬೇರೆಕಡೆ ಕೂರಿಸಲಾಯಿತು. ಹತ್ತು ಗಂಟೆಗೆ ಹೊರಡಬೇಕಿದ್ದ ವಿಮಾನ ಒಂದೂವರೆ ಗಂಟೆ ತಡವಾಗಿ ಹನ್ನೊಂದು ಮೂವತ್ತಕ್ಕೆ ಟೇಕ್ ಆಫ್ ಆಯಿತು’ ಎಂದು ಅಲ್ಲಿ ನಡೆದ ಘಟನೆಯನ್ನು ಬಿಡಿಬಿಡಿಯಾಗಿ ವಿವರಿಸಿದ್ದಾರೆ ಅರಸುಕುಮಾರ್.

ಅಮಿತ್ ಶಾ, ಗೃಹ ಸಚಿವರು

ಇದರ ಬಗ್ಗೆ ಇಂಡಿಗೋ ಸಂಸ್ಥೆಯು ನಾಗರಿಕ ವಿಮಾನಯಾನ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿತ್ತು. ದೂರಿನ ಆಧಾರದ ಮೇಲೆ, ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ತನಿಖೆ ನಡೆಸಿ, ಅಣ್ಣಾಮಲೈ ಮತ್ತು ತೇಜಸ್ವಿ ಸೂರ್ಯ ಇಬ್ಬರಿಂದಲೂ ಕ್ಷಮಾಪಣೆ ಪತ್ರ ಬರೆದು ಕೊಂಡಿದ್ದಾರೆ. ಗೃಹ ಸಚಿವ ಅಮಿತ್ ಶಾ ಮಧ್ಯಪ್ರವೇಶದ ನಂತರ ಇಬ್ಬರನ್ನೂ ಬಿಡುಗಡೆ ಮಾಡಲಾಗಿತ್ತು.

ತಮಿಳುನಾಡು ಮತ್ತು ಕರ್ನಾಟಕದ ಬಿ.ಜೆ.ಪಿ. ನಾಯಕರು ಮದ್ಯದ ಅಮಲಿನಲ್ಲಿ ವಿಮಾನದ ತುರ್ತು ನಿರ್ಗಮನದ ಬಾಗಿಲನ್ನು ತೆರೆದಿದ್ದನ್ನು ಕೇಂದ್ರ ಸರ್ಕಾರ ಮರೆತ್ತಿದ್ದರೂ ಇಂಡಿಗೋ ವಿಮಾನ ಸಂಸ್ಥೆ ನೀಡಿದ ದೂರಿನ ಮೇರೆಗೆ ಒಂದು ತಿಂಗಳ ನಂತರ ಪ್ರಕರಣ ವಿಚಾರಣೆಗೆ ಬಂದಿತ್ತು. ‘ಇಂತಹ ಒಂದು ಘಟನೆ ನಡೆದಿದ್ದು ನಿಜ; ಅದನ್ನು ನಾವು ವಿಚಾರಣೆ ಮಾಡುತ್ತಿದ್ದೇವೆ’ ಎಂದು ನಾಗರಿಕ ವಿಮಾನಯಾನ ಇಲಾಖೆ ತಿಳಿಸಬೇಕಾದ ಅನಿವಾರ್ಯತೆ ಇವರಿಂದ ಎದುರಾಯಿತು. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜೋತಿರಾಧಿತ್ಯ ಸಿಂಧ್ಯ, ‘ವಿಮಾನದ ತುರ್ತು ಬಾಗಿಲನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹಾಗೂ ಸಂಸದ ತೇಜಸ್ವಿ ಸೂರ್ಯ ಕಳಚಿದ್ದನ್ನು ಒಪ್ಪಿಕೊಂಡಿದ್ದು ಅಲ್ಲದೆ, ಈಗಾಗಲೇ ಅವರು ಕ್ಷಮಾಪಣೆ ಪತ್ರ ಬರೆದು ಕೊಟ್ಟಿದ್ದಾರೆ ಎಂದು ಹೇಳಿ ಈ ಪ್ರಕರಣಕ್ಕೆ ಇತಿಶ್ರೀ ಹಾಡಿದರು.

ಬೆಂಗಳೂರು ರಾಜಕೀಯ ರಾಜ್ಯ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಮಾಜಿ ಸಚಿವ ರಮೇಶ್‌ ಜಾರಕಿಹೋಳಿಯ ವಿರುದ್ಧ ಇಂದು ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ದೂರನ್ನು ದಾಖಲಿಸಿದ್ದಾರೆ.

ಇದರ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಡಿ.ಕೆ.ಶಿವಕುಮಾರ್ ‘ಕರ್ನಾಟಕ ಹಗರಣಗಳಿಂದ ಗ್ರಹಣ ಹಿಡಿದಿದ್ದು, ಇವುಗಳಿಗೆ ಕಡಿವಾಣ ಹಾಕಲು ಸಿಎಂ ಬೊಮ್ಮಾಯಿ ಗಂಭೀರವಾಗಿ ಚಿಂತಿಸಿದ್ದರೆ ಏನಾದರೂ ಮಾಡುತ್ತಿದ್ದರು.

ಸಿಐಡಿ ಅಧಿಕಾರಿ 3 ಕೋಟಿ ಲಂಚ ಕೇಳಿದ್ದಾರೆ ಎಂದು ಪಿಎಸ್‌ಐ ಹಗರಣದ ಆರೋಪಿ ಬಹಿರಂಗವಾಗಿ ಹೇಳಿಕೊಂಡಿರುವುದು ಕೊಳೆತ ಎಷ್ಟು ಆಳವಾಗಿದೆ ಎಂಬುದನ್ನು ತೋರಿಸುತ್ತದೆ.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಮಾಜಿ ಸಚಿವ ರಮೇಶ್‌ ಜಾರಕಿಹೋಳಿ ಹಾಗೂ ಇತರರ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಡಿ.ಕೆ.ಶಿವಕುಮಾರ್ ದೂರು.

ರಾಜ್ಯ BJP ಸರ್ಕಾರದ ಲಂಚಾವತಾರ ಯಾವ ಮಟ್ಟಕ್ಕೆ ತಲುಪಿದೆ ಎಂದರೆ ಇಲ್ಲಿ ಹಗರಣಗಳ ಸಂಬಂಧ ನಡೆಯುತ್ತಿರುವ ತನಿಖೆಗಳೂ ನ್ಯಾಯಸಮ್ಮತವಾಗಿಲ್ಲ. PSI ಹಗರಣ ಸಂಬಂಧ ನಡೆಯುತ್ತಿರುವ CID ತನಿಖೆಯ ದಾರಿ ತಪ್ಪಿಸಲು ಅಧಿಕಾರಿಗಳು ರೂ.3 ಕೋಟಿ ಲಂಚ ಕೇಳಿದ್ದರು, ಈಗಾಗಲೇ ರೂ.76 ಲಕ್ಷ ನೀಡಿರುವುದಾಗಿ RD ಪಾಟೀಲ್‌ ಹೇಳಿದ್ದಾರೆ.

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಮತದಾರರಿಗೆ 6ಸಾವಿರ ಲಂಚ ನೀಡುವುದಾಗಿ ಹೇಳುತ್ತಿದ್ದಾರೆ. ಒಂದು ಕಡೆ ನ್ಯಾಯಸಮ್ಮತ ತನಿಖೆಯೂ ನಡೆಯುತ್ತಿಲ್ಲ, ಮತ್ತೊಂದು ಕಡೆ PSI ಉದ್ಯೋಗಾಕಾಂಕ್ಷಿಗಳಿಗೆ ಮರು ಪರೀಕ್ಷೆಯನ್ನೂ ನಡೆಸುತ್ತಿಲ್ಲ. ಮತದಾರರಿಗೆ ಲಂಚ ನೀಡುವುದಾಗಿ ಹೇಳುತ್ತಿರುವ ತಮ್ಮ ಪಕ್ಷದ ನಾಯಕನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

ತಮ್ಮ ಮೂಗಿನ ಕೆಳಗೆ ಇಷ್ಟೆಲ್ಲಾ ನಡೆಯುತ್ತಿದ್ದರೂ ಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ? ಪಿಎಸ್‌ಐ ಹಗರಣದ ಸಂಬಂಧ ನ್ಯಾಯಯುತ ತನಿಖೆ ನಡೆಸದ ಗೃಹ ಸಚಿವರು ಈ ಕೂಡಲೇ ರಾಜೀನಾಮೆ ನೀಡಬೇಕು. ಹಾಗೆಯೇ ಪ್ರಕರಣ ಸಂಬಂಧ ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಯಬೇಕು’ ಎಂದು ಒತ್ತಾಯಿಸಿದ್ದಾರೆ.

ರಾಜಕೀಯ

ಬೆಂಗಳೂರು: ಬೆಂಗಳೂರಿನ ಕಣ್ವ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ವಂಚನೆಯಿಂದ 23,000ಕ್ಕೂ ಹೆಚ್ಚು ಜನರು 50೦ ಕೋಟಿಗೂ ಅಧಿಕ ಹಣವನ್ನು ಕಳೆದುಕೊಂಡು ಕಳೆದ 3 ವರ್ಷಗಳಿಂದ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೆರಡು ಬ್ಯಾಂಕ್’ಗಳಾದ ಗುರು ರಾಘವೇಂದ್ರ ಹಾಗೂ ವಸಿಷ್ಠ ಕೋ-ಆಪರೇಟಿವ್ ಸೊಸೈಟಿಯದ್ದು ಸಹ ಇದೇ ರೀತಿಯ ವಂಚನೆಯಾಗಿದೆ ಎಂದು ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ಅಪಾದನೆ ಮಾಡಿದ್ದಾರೆ.

‘ವಂಚನೆಗೊಳಗಾದವರಲ್ಲಿ ಸುಮಾರು 10೦ ನಾಗರಿಕರು ನನ್ನನ್ನು ಭೇಟಿ ಮಾಡಿ ನ್ಯಾಯ ದೊರಕಿಸಿಕೊಡುವಂತೆ ಮನವಿ ಸಲ್ಲಿಸಿದರು. ನಾನು ಈಗಾಗಲೇ ಸಹಕಾರ ಸಚಿವ ಎಸ್.ಟಿ.ಸೋಮಶೇಕರ್ ಅವರೊಂದಿಗೆ ಈ ಕುರಿತು ಚರ್ಚೆ ನಡೆಸಿದ್ದು, ಕಣ್ವ ಸೇರಿ ಈ ವಂಚನೆ ಪ್ರಕರಣಗಳನ್ನು ಸಿಬಿಐ ತನಿಖೆಗೆ ನೀಡುವಂತೆ ಕೋರಿದ್ದೇನೆ. ಬಹುತೇಕ ಜನ ಅದರಲ್ಲೂ ವಿಶೇಷವಾಗಿ ಹಿರಿಯ ನಾಗರಿಕರು ತಮ್ಮ ಜೀವಮಾನ ಪರ್ಯಂತ ದುಡಿದು ಕೂಡಿಟ್ಟಿದ್ದ ಹಣವನ್ನು ಕಳೆದುಕೊಂಡು ಕಷ್ಟದಲ್ಲಿದ್ದು, ಹಣ ವಾಪಸಾಗಿ ನ್ಯಾಯ ಸಿಗುವವರೆಗೂ ಅವರ ಹೋರಾಟದಲ್ಲಿ ನಾನು ಭಾಗಿಯಾಗುತ್ತೇನೆ’ ಎಂದು ಶಾಸಕಿ ಸೌಮ್ಯ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಕಣ್ವ, ರಾಘವೇಂದ್ರ ಹಾಗೂ ವಸಿಷ್ಠ ಕೋ-ಆಪರೇಟಿವ್ ಸೊಸೈಟಿಯಂತಹ ಜನವಿರೋಧಿ, ವಂಚಿತ ಸೊಸೈಟಿಗಳನ್ನು ಈ ಹಿಂದೆ ವಿನಿವಿಂಕ್ ಸೊಸೈಟಿಯನ್ನು ತಡೆಮಾಡಿದ ರೀತಿಯಲ್ಲಿ ತಡೆಮಾಡಿ, ಸೊಸೈಟಿಯ ಮುಖ್ಯಸ್ಥರನ್ನು ಜೈಲಿಗೆ ತಳ್ಳಿ ಅವರ ಆಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಮತ್ತು ಹೂಡಿಕೆದಾರರಿಗೆ ಹಣವನ್ನು ಹಿಂತಿರುಗಿಸಿ ಕೊಡುವಂತಹ ವ್ಯವಸ್ಥೆಯನ್ನೂ ಮಾಡಬೇಕು. ಶಾಸಕಿ ಸೌಮ್ಯ ರೆಡ್ಡಿಯ ನ್ಯಾಯ ಸಮ್ಮತವಾದ ಈ ಬೇಡಿಕೆಯನ್ನು ಪರಿಗಣಿಸಿ, ಸರ್ಕಾರ ಈ ಪ್ರಕರಣಗಳನ್ನು ಕೂಡಲೇ ಸಿಬಿಐ ತನಿಖೆಗೆ ವಹಿಸಿಕೊಡಬೇಕು.

ದೇಶ ರಾಜಕೀಯ

ಡಿ.ಸಿ.ಪ್ರಕಾಶ್, ಸಂಪಾದಕರು

ಇಂಗ್ಲೆಂಡಿನ ಪ್ರಸಿದ್ಧ ಖಾಸಗಿ ಮಾಧ್ಯಮ ಸಂಸ್ಥೆಯಾದ ಬಿಬಿಸಿ, ಭಾರತದಲ್ಲಿ 2002ರ ಗುಜರಾತ್ ಗಲಭೆಗಳ ಕುರಿತು ರಹಸ್ಯ ತನಿಖೆ ನಡೆಸಿ, ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿತ್ತು. ಈ ಗಲಭೆಗೆ ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಕೂಡ ಕಾರಣ ಎಂಬ ಸುದ್ದಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ‘ಭಾರತ-ಮೋದಿ ಪ್ರಶ್ನೆಗಳು’ ಶೀರ್ಷಿಕೆಯಡಿ ಪ್ರಕಟಗೊಂಡಿದ್ದ ಈ ಸಾಕ್ಷ್ಯಚಿತ್ರಕ್ಕೆ ವಿವಿಧೆಡೆಯಿಂದ ಬೆಂಬಲ-ವಿರೋಧ ವ್ಯಕ್ತವಾಗಿತ್ತು. ಈ ಪರಿಸ್ಥಿತಿಯಲ್ಲಿ, ಕೇಂದ್ರ ಸರ್ಕಾರವು ಭಾರದಲ್ಲಿ ಸಾಕ್ಷ್ಯಚಿತ್ರವನ್ನು ನಿಷೇಧ ಮಾಡಿರುತ್ತದೆ.

ಫೆಬ್ರವರಿ 27, 2002 ರಂದು ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ಘಟನೆಯಲ್ಲಿ 59 ಜನರು ಪ್ರಾಣ ಕಳೆದುಕೊಂಡರು. ಇದನ್ನು ಆಧರಿಸಿ ಗುಜರಾತ್ ನಲ್ಲಿ ಗಲಭೆಗಳು ನಡೆದವು. ಈ ಗಲಭೆಯ ಸಂದರ್ಭದಲ್ಲಿ 790 ಮುಸ್ಲಿಮರು, 254 ಹಿಂದೂಗಳು ಕೊಲ್ಲಲ್ಪಟ್ಟಿರುವುದಾಗಿ ಮತ್ತು 223 ಮಂದಿ ನಾಪತ್ತೆಯಾಗಿದ್ದು, 2500 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು 2005ರಲ್ಲಿ ಸಂಸತ್ತಿನಲ್ಲಿ ಹೇಳಿದ್ದನ್ನೇ ಬಿಬಿಸಿ ತನ್ನ ಸಾಕ್ಷ್ಯಚಿತ್ರದಲ್ಲೂ ಹೇಳಿಕೊಂಡಿದೆ.

2001-2006ರಲ್ಲಿ ಬ್ರಿಟನ್‌ನ ವಿದೇಶಾಂಗ ಸಚಿವರಾಗಿದ್ದ ಜಯಿಕಾ ಸ್ಟ್ರಾ ಅಂದು ಗಲಭೆಯ ಬಗ್ಗೆ ಮಾತನಾಡಿರುವುದು ಕೂಡ ಈ ಸಾಕ್ಷ್ಯಚಿತ್ರದಲ್ಲಿದೆ. ಅಲ್ಲದೆ ಮೋದಿಯವರು ಬಿಬಿಸಿ ದೂರದರ್ಶನಕ್ಕೆ ನೀಡಿದ್ದ ಸಂದರ್ಶನವನ್ನೂ ಇದರೊಂದಿಗೆ ಲಗತ್ತಿಸಲಾಗಿದೆ.

ಈ ಸಾಕ್ಷ್ಯಚಿತ್ರ ಬಿಡುಗಡೆಯಾದ ನಂತರ ಈ ಬಗ್ಗೆ ಚರ್ಚೆಗಳು ಪ್ರಾರಂಭವಾದವು. ಕೇಂದ್ರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ‘ಸಾಕ್ಷ್ಯಚಿತ್ರವನ್ನು ಭಾರತ ವಿರೋಧಿ ಪ್ರಚಾರಕ್ಕಾಗಿ ತಯಾರಿಸಲ್ಪಟ್ಟಿದೆ. ಇದು ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ ಕಂಪನಿಯ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ’ ಎಂದು ಟೀಕಿಸಿದ್ದರು. ಇದರ ನಂತರ ಭಾರತದ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗಳು ಬಿಸಿಯಾದವು. ನಿರ್ದಿಷ್ಟವಾಗಿ ಹೇಳುವುದಾದರೆ, Who is BBC? ಹ್ಯಾಶ್‌ಟ್ಯಾಗ್ ಟ್ರೆಂಡ್ ಆಯಿತು.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು ಮಾಹಿತಿ ತಂತ್ರಜ್ಞಾನ ನಿಯಮಗಳ (2021) ಅಡಿಯಲ್ಲಿ ಕೆಲವು ಒತ್ತಾಯಗಳನ್ನು ಮುಂದಿಟ್ಟರು. ಈ ಕುರಿತು ಕೇಂದ್ರ ಸರ್ಕಾರದ ಕೆಲವು ಅಧಿಕಾರಿಗಳು ‘BBC ಸಾಕ್ಷ್ಯ ಚಿತ್ರವನ್ನು ಪರಿಶೀಲಿಸಿದಾಗ, ಇದು ಸುಪ್ರೀಂ ಕೋರ್ಟ್‌ನ ವಿಶ್ವಾಸಾರ್ಹತೆಯನ್ನು ಕಳಂಕಗೊಳಿಸುತ್ತದೆ ಮತ್ತು ಭಾರತದಲ್ಲಿನ ವಿವಿಧ ಸಮುದಾಯಗಳ ನಡುವೆ ವಿಭಜನೆಯನ್ನು ಉಂಟುಮಾಡುವ ರೀತಿಯಲ್ಲಿದೆ. ಹಾಗಾಗಿ ಭಾರತದ ಸಮಗ್ರತೆಗೆ ಧಕ್ಕೆ ತರುವ ಇದನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಹಾಕುವಂತೆ ಮನವಿ ಮಾಡಿದ್ದೇವೆ’ ಎಂದು ಹೇಳಿದ್ದಾರೆ. ಹೀಗಾಗಿ, ಪ್ರಸಾರ ಸಚಿವಾಲಯವು ವೀಡಿಯೊ ಕಾಣಿಸಿಕೊಂಡಿರುವ ಟ್ವಿಟರ್ ಮತ್ತು ಯೂಟ್ಯೂಬ್ ಖಾತೆಗಳಿಂದ ಸಾಕ್ಷ್ಯ ಚಿತ್ರವನ್ನು ತೆಗೆದುಹಾಕಲು ವಿನಂತಿಸಿ ಕೊಂಡಿತ್ತು. ಸಂಬಂಧಪಟ್ಟ ಕಂಪನಿಗಳು ಅದನ್ನು ಒಪ್ಪಿಕೊಂಡು ತೆಗೆದುಹಾಕಿವೆ ಎಂದು ವರದಿಯಾಗಿದೆ.

ಗೋಧ್ರ ಗಲೆಭೆಯ ಸಂಧರ್ಭದಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ

ಸಾಕ್ಷ್ಯಚಿತ್ರದ ಎರಡನೇ ಭಾಗವು ಈ ವಾರ ಬಿಡುಗಡೆಯಾಗಲಿದ್ದು, ಭಾರತ ಸರ್ಕಾರವು ಸಾಕ್ಷ್ಯಚಿತ್ರವನ್ನು ನಿಷೇಧಿಸಿದೆ. ಅದೇ ಸಂದರ್ಭದಲ್ಲಿ, ‘ವ್ಯಾಪಕ ಸಂಶೋಧನೆಯ ನಂತರವೇ ಸಾಕ್ಷ್ಯಚಿತ್ರವನ್ನು ಮಾಡಲಾಯಿತು’ ಎಂದು ಬಿಬಿಸಿ ವಿವರಿಸಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಶಶಿಕಾಂತ್ ಸೆಂಥಿಲ್, ‘ಬಿಬಿಸಿ ಬಿಡುಗಡೆ ಮಾಡಿರುವ ಸಾಕ್ಷ್ಯಚಿತ್ರದಲ್ಲಿ ಹೊಸದೇನೂ ಇಲ್ಲ. ಅದು ಈಗಾಗಲೇ ಪ್ರಕಟವಾಗಿರುವ ಹಳೆಯ ಮಾಹಿತಿಯೇ ಆಗಿದೆ. ಈ ಗಲಭೆಗೆ ಮೋದಿಯೇ ಕಾರಣ ಎಂದು ಈ ಹಿಂದೆಯೂ ಹಲವರು ಮಾತನಾಡಿದ್ದಾರೆ. ಆದರೆ, ಅವರಲ್ಲಿ ಯಾರೂ ಈಗ ಜೀವಂತವಾಗಿಲ್ಲ. ಜೀವಂತವಾಗಿದ್ದಿದ್ದರೆ ಅವರೆಲ್ಲರು ಇಂದು ಜೈಲು ಪಾಲಾಗುತ್ತಿದ್ದರು. ಪ್ರಸ್ತುತ ಈ ಸಾಕ್ಷ್ಯಚಿತ್ರವನ್ನು ಯುಕೆ ಮೂಲದ ಬಿಬಿಸಿ ತನಿಖೆ ಮಾಡಿ, ಕ್ಷೇತ್ರ ಅಧ್ಯಯನ ನಡೆಸಿ, ಸಿದ್ಧಪಡಿಸಿದ ಸಂಶೋಧನಾ ಪ್ರಬಂಧವಾಗಿರುತ್ತದೆ. ಇದು ನಿಜವೆಂದು ಎಲ್ಲರಿಗೂ ತಿಳಿದಿದ್ದೆ. ಅವರು ಅದನ್ನು ವರದಿಯ ರೂಪದಲ್ಲಿ ಸಿದ್ಧಪಡಿಸಿ ಪ್ರಕಟಿಸಿದ್ದಾರೆ. ಆದ್ದರಿಂದ, ನನ್ನ ದೃಷ್ಟಿಯಲ್ಲಿ ಇದು ನರಮೇಧದ ಸಾಕ್ಷಿಯಾಗಿದೆ. ಶ್ರೀಲಂಕಾ ತಮಿಳರನ್ನು ಕೊಂದ ರಾಜಪಕ್ಸೆಯ ಬಗ್ಗೆ ನಾವು ಯೋಚಿಸುತ್ತಿದ್ದಂತೆ, ಈ ನರಮೇಧವೂ ಹೌದು. ಹಾಗಾಗಿ ಅವರು ತೋರಿಸಿದ್ದರಲ್ಲಿ ತಪ್ಪೇನೂ ಇಲ್ಲ. ಈ ಗಲಭೆಗಳು ನಡೆದು 20 ವರ್ಷಗಳಾದರೂ ಇದಕ್ಕೆ ಕಾರಣರಾದ ನರೇಂದ್ರ ಮೋದಿಯವರು ಒಮ್ಮೆಯೂ ವಿಷಾದ ವ್ಯಕ್ತಪಡಿಸಿಲ್ಲ ಎಂಬುದು ಐತಿಹಾಸಿಕ ಸತ್ಯ. ಅದನ್ನು ಯಾರೂ ಅಲ್ಲಗಳೆಯುವಂತಿಲ್ಲ’ ಎಂದರು.

ರಾಜಪಕ್ಷ ಸಹೋದರರು

ಅವರು ಮುಂದುವರಿದು, ಗುಜರಾತ್ ಗಲಭೆ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಇಂಗ್ಲಿಷ್ ನಿರೂಪಕರು ಕೇಳಿದ ಪ್ರಶ್ನೆಗೆ, ‘ಮಾನವ ಹಕ್ಕುಗಳ ಬಗ್ಗೆ ನೀವು ಕಲಿಸುವ ಅಗತ್ಯವಿಲ್ಲ’ ಎಂದು ಮೋದಿ ಹೇಳಿದ್ದನ್ನೇ ಆಧಾರವಾಗಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಬ್ರಿಟಿಷ್ ಇಂಡಿಯಾದ ದಬ್ಬಾಳಿಕೆಯ ಹಿನ್ನೆಲೆ ಮತ್ತು ಕಂಪನಿಯ ಬಗ್ಗೆ ಮಾತನಾಡುತ್ತಾ ತಪ್ಪಿಸಿಕೊಳ್ಳುತ್ತಿದ್ದಾರೆ ಎಂಬುದು ವಾದದ ಸುಳ್ಳು (Argumentative Fallacies) ಈ ಅಪರಾಧ ಏಕೆ ನಡೆಯಿತು ಎಂದು ಕೇಳಿದರೆ ಅದಕ್ಕೆ ಉತ್ತರ ಹೇಳಬೇಕು. ಅದರಿಂದ ತಪ್ಪಿಸಿಕೊಳ್ಳಲು ಇನ್ನೊಂದು ಅಪರಾಧದ ಬಗ್ಗೆ ಮಾತನಾಡಬಾರದು.

ಆದರೆ, ಬಹುತೇಕ ಬಿಜೆಪಿ ಸದಸ್ಯರು ಈ ರೀತಿಯ ವಾದವನ್ನೆ ಅನುಸರಿಸುತ್ತಿದ್ದಾರೆ. 3000 ಜೀವಗಳ ಮೇಲೆ ಚೆಲ್ಲಾಟವಾಡಿ, ಅವರನ್ನು ಅಪಾಯಕಾರಿ ಪರಿಸ್ಥಿತಿಗೆ ತಳ್ಳಿದಕ್ಕಾಗಿ ಪಶ್ಚಾತ್ತಾಪ ಪಡುವುದು ಮಾನವನ ಸಹಜ ಗುಣ. ಈ ಗಲಭೆಯ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದವರಿಗೆ ಬಹು ಪಶ್ಚಾತ್ತಾಪಗಳು ಇದ್ದಿರಬೇಕು. ಆದರೆ ಯಾವುದೇ ಪಶ್ಚಾತ್ತಾಪವನ್ನು ವ್ಯಕ್ತಪಡಿಸದ ವ್ಯಕ್ತಿಯನ್ನು, ಈ ಘಟನೆಗೆ ಅವರು ಹೊಣೆಯಲ್ಲ ಎಂದು ಹೇಳುವುದು ಎಷ್ಟು ಸರಿ’ ಎಂದು ಕೇಳುತ್ತಾರೆ.

ದೇಶ ಬೆಂಗಳೂರು ರಾಜಕೀಯ ರಾಜ್ಯ

ಬೆಂಗಳೂರು: ದ್ವೇಷ ಮತ್ತು ಹಿಂಸಾಚಾರದ ವಿರುದ್ಧ ಹೋರಾಡುತ್ತಾ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3500 ಕಿ.ಮೀ. ನಡೆದು ಜನರಲ್ಲಿ ಸೌಹಾರ್ದತೆಯ ಸಂದೇಶವನ್ನು ಹರಡಿಸಿರುವ ರಾಹುಲ್ ಗಾಂಧಿಯವರ ನಡೆಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.  

2023, ಜನವರಿ 10 ರಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಪತ್ರ ಬರೆದು, ಜನವರಿ 30 ರಂದು ಶ್ರೀನಗರದಲ್ಲಿ ನಡೆಯಲಿರುವ ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದರು. ಮಲ್ಲಿಕಾರ್ಜುನ ಖರ್ಗೆಯವರ ಆಹ್ವಾನ ಪತ್ರಕ್ಕೆ ಇಂದು ಪ್ರತಿಯುತ್ತರ ನೀಡಿದ ದೇವೇಗೌಡರು, ‘ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ನನ್ನನ್ನು ಆಹ್ವಾನಿಸಿರುವುದಕ್ಕೆ ಧನ್ಯವಾದಗಳು, ರಾಷ್ಟ್ರಪಿತ ಹುತಾತ್ಮರಾದ ದಿನದಂದು ಶ್ರೀನಗರದಲ್ಲಿ ಕಾರ್ಯಕ್ರಮವನ್ನು ಆಯೋಜಿಸುವುದು ತುಂಬಾ ಸೂಕ್ತವಾಗಿದೆ.

ನಾನು ಕಾರ್ಯಕ್ರಮಕ್ಕೆ ಖುದ್ದಾಗಿ ಹಾಜರಾಗಲು ಸಾಧ್ಯವಾಗದಿದ್ದರೂ ನನ್ನ ಶುಭಾಶಯಗಳು ರಾಹುಲ್ ಗಾಂಧಿಯವರಿಗಿದೆ. ಅವರು ದ್ವೇಷ ಮತ್ತು ಹಿಂಸಾಚಾರದ ವಿರುದ್ಧ ಹೋರಾಡುತ್ತಿದ್ದಾರೆ ಮತ್ತು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3500 ಕಿ.ಮೀ. ನಡೆದು ಜನರಲ್ಲಿ ಸೌಹಾರ್ದತೆಯ ಸಂದೇಶವನ್ನು ಹರಡಿಸಿದ್ದಾರೆ. ದಯವಿಟ್ಟು ಅವರಿಗೆ ನನ್ನ ಆಳವಾದ ಮೆಚ್ಚುಗೆಯನ್ನು ಸೂಚಿಸಿ’ ಎಂದು ಮಲ್ಲಿಕಾರ್ಜುನ ಖರ್ಗೆಯವರಿಗೆ ಇಂದು ಬರೆದ ಪತ್ರದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಿಳಿಸಿದ್ದಾರೆ. 

ಬೆಂಗಳೂರು ರಾಜ್ಯ

ಬೆಂಗಳೂರು: ಕಳೆದ ಎಂಟು ತಿಂಗಳ ಅವಧಿಯಲ್ಲಿ ತೊಗರಿ ಬೇಳೆ ಬೆಳೆಯುವ 61 ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಶೋಚನಿಯ ಸುದ್ದಿ ಹೊರಬಂದಿದೆ. ಜಿಲ್ಲಾ ಅಪರಾಧ ದಾಖಲೆಗಳ ಬ್ಯುರೊ ಬಿಡುಗಡೆ ಮಾಡಿರುವ ಈ ಮಾಹಿತಿಯು ನಾಗರಿಕ ಸಮಾಜ ತಲೆತಗ್ಗಿಸುವ ಸಂಗತಿ. ರೈತರ ಬದುಕು, ಕೃಷಿಯ ಬಗ್ಗೆ ಉದಾಸೀನ ತೋರುವ ರಾಜ್ಯ ಬಿಜೆಪಿ ಸರ್ಕಾರದ ಬಳಿ ಈ ಬಗ್ಗೆ ಏನಿದೆ ಉತ್ತರ? ಎಂದು ಜೆಡಿಎಸ್ ಪಕ್ಷವು ಟ್ವಿಟ್ಟರ್ ಮೂಲಕ ಬಿಜೆಪಿ ಸರ್ಕಾರವನ್ನು ಖಾರವಾಗಿ ಪ್ರಶ್ನೆ ಮಾಡಿದೆ.

ಅಕಾಲಿಕ‌ ಮಳೆ, ನೀರಿನ‌ ಕೊರತೆ, ಸರಿಯಾದ ಸಮಯದಲ್ಲಿ ಸಮರ್ಪಕವಾಗಿ ಸಿಗದ ಗೊಬ್ಬರ, ವಿವಿಧ ಕೀಟ-ರೋಗಗಳ ಬಾಧೆ, ಬೆಂಬಲ ಬೆಲೆಯ ಅಭಾವ ಇಂತಹ ಹಲವು ಗಂಭೀರ ಸಮಸ್ಯೆಗಳಿಂದ ತೊಗರಿ ನಾಡಿನ ಕೃಷಿಕರು ತತ್ತರಿಸಿಹೋಗಿದ್ದಾರೆ. ಇಷ್ಟು ವ್ಯಾಪಕ ಸಮಸ್ಯೆಗಳ ಸುಳಿಗೆ ಸಿಕ್ಕ ರೈತನಿಗೆ, ಬೆಂಗಾವಲಾಗಿ ನಿಲ್ಲಬೇಕಿದ್ದ ರಾಜ್ಯ ಸರ್ಕಾರ ಗಾಢ ನಿದ್ದೆಯಲ್ಲಿದೆ.

ಕೇಂದ್ರ-ರಾಜ್ಯದ ಡಬಲ್ ಎಂಜಿನ್ ಬಿಜೆಪಿ ಸರ್ಕಾರಗಳು ಈ ಮಟ್ಟದ ನಿರ್ಲಕ್ಷ್ಯ ತೋರಿರುವುದು ಅಕ್ಷಮ್ಯವಷ್ಟೇ ಅಲ್ಲ, ಅತ್ಯಂತ ಅಮಾನವೀಯ ಕೂಡ. ಬೆಳೆ ನಷ್ಟದ ಬಗ್ಗೆ ಅಗತ್ಯ ಮತ್ತು ಸಮರ್ಪಕ ಸಮೀಕ್ಷೆ ಮಾಡಿ, ಪರಿಹಾರ ನೀಡಬೇಕಿರುವ ಜವಾಬ್ದಾರಿ ಸರ್ಕಾರದ್ದು. ರೈತನ ಆತ್ಮಹತ್ಯೆ ಸುದ್ದಿ ಆತಂಕಹುಟ್ಟುಹಾಕದಿದ್ದರೆ, ಅಧಿಕಾರದಲ್ಲಿದ್ದು ಏನು ಪ್ರಯೋಜನ?

ದುಡಿಯುವ ರೈತಾಪಿ ವರ್ಗಕ್ಕೆ ಕನಿಷ್ಟ ಸ್ಪಂದನೆ ನೀಡುವ ಮಾನವೀಯತೆ ಕೂಡ ಇಲ್ಲದಷ್ಟು ದಪ್ಪ ಚರ್ಮ ಸರ್ಕಾರಕ್ಕೆ ಬರಬಾರದು. ಈಗಲಾದರೂ, ಅನ್ನದಾತನ ಸಂಕಷ್ಟಕ್ಕೆ ರಚನಾತ್ಮಕವಾದ ಪರಿಹಾರ ಕೊಡಿಸಿ. ಇಲ್ಲದಿದ್ದರೆ, ಎಷ್ಟು ಉಗಿದರು ಒರೆಸಿಕೊಳ್ಳುವ ಭಂಡ ಸರ್ಕಾರ ಎಂದು ಜನತೆಯ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂಬ ಎಚ್ಚರವನ್ನು ಬಿಜೆಪಿ ಸರ್ಕಾರಕ್ಕೆ ಜೆಡಿಎಸ್ ಪಕ್ಷವು ಕೊಟ್ಟಿರುತ್ತದೆ.

ಬೆಂಗಳೂರು ರಾಜಕೀಯ ರಾಜ್ಯ

ಡಿ.ಸಿ.ಪ್ರಕಾಶ್, ಸಂಪಾದಕರು

ಬೆಂಗಳೂರು: ಬೆಂಗಳೂರು ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ, ನಗರೇಶ್ವರ ನಾಗೇನಹಳ್ಳಿ ಸರ್ವೆ ನಂ.13ರಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ PMAY (HLF)-Phase-3 ಯೋಜನೆಯಡಿ 912 ಮನೆಗಳನ್ನು ನಿರ್ಮಿಸುತ್ತಿದ್ದೆ. (768  G+3 ಮನೆಗಳು ಮತ್ತು 144 G+4 ಮನೆಗಳು) ಕೊಳಗೇರಿ ಮಂಡಳಿಯ ನಂ.3ನೇ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರ ದಿನಾಂಕ: 23.12.2022ರ ಪತ್ರದ ಪ್ರಕಾರ, 912 ಮನೆಗಳು ಅಡಿಪಾಯ / ಪ್ಲಿಂತ್ ಮಟ್ಟ, 638 ಮನೆಗಳು ಮೇಲ್ಛಾವಣಿ ಮಟ್ಟ ಮತ್ತು 96 ಮನೆಗಳು ಪೂರ್ಣತಾ ಹಂತಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿರುತ್ತದೆ ಎಂದು ತಿಳಿದು ಬರುತ್ತಿದೆ.

ಸದರಿ 912 ಮನೆಗಳ ಪೈಕಿ 768 ಜಿ+3 ಮನೆಗಳನ್ನು ರಾಜೀವ್‍ಗಾಂಧಿ ನಗರಕ್ಕೆ (ದೇವಸಂದ್ರ) 107 ಮನೆಗಳು, ಸಂಜಯ್‍ಗಾಂಧಿ ನಗರಕ್ಕೆ (ದೇವಸಂದ್ರ) 245 ಮನೆಗಳು, ರಾಮಮೂರ್ತಿನಗರ ಸರ್ವೆ ನಂ.85ರಲ್ಲಿನ ಕೊಳಗೇರಿ ಪ್ರದೇಶಕ್ಕೆ 337 ಮನೆಗಳು ಹಾಗೂ ಭಟ್ಟರಹಳ್ಳಿ ಜನತಾ ಕಾಲೋನಿಗೆ 79 ಮನೆಗಳು ಒಟ್ಟು 738 ಮನೆಗಳನ್ನು ಸ್ಥಳಾಂತರ ಮಾಡುವ ಉದ್ದೇಶದಿಂದ ಕೊಳಗೇರಿ ಮಂಡಳಿ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ಸಿದ್ದಪಡಿಸಿರುವುದಾಗಿ ಹೇಳುತ್ತಿದೆ.

ವಸತಿ ಯೋಜನೆಗೆ ಸರ್ಕಾರದಿಂದ ಅನುಮೋದನೆ ಪಡೆಯಲಿಕ್ಕಾಗಿ, ಕೊಳಗೇರಿ ಮಂಡಳಿ ಅನಿವಾರ್ಯತೆಯ ಕಾರಣಗಳಿಂದ ಕೆಲವೊಂದು ಸಂದರ್ಭಗಳಲ್ಲ್ಲಿ ನಕಲಿಯಾಗಿ (Dummy) ಫಲಾನುಭವಿಗಳ ಪಟ್ಟಿಯನ್ನು ತಯಾರಿಸಿ, ವಿಸ್ತೃತ ಯೋಜನಾ ವರದಿಯೊಂದಿಗೆ ಲಗತ್ತಿಸಿ ಸರ್ಕಾರಕ್ಕೆ ಸಲ್ಲಿಸುವುದು ವಾಡಿಕೆ. ಅದು ಮನೆಗಳ ಹಂಚಿಕೆಗಾಗಿ ಅಲ್ಲ. ಪ್ರಸ್ತಾಪಿತ ನಾಲ್ಕು ಕೊಳಗೇರಿ ಪ್ರದೇಶಗಳ ಪೈಕಿ ರಾಜೀವ್‍ಗಾಂಧಿ ನಗರ, ಸಂಜಯ್‍ಗಾಂಧಿ ನಗರ, ರಾಮಮೂರ್ತಿನಗರ ಮುಂತಾದ ಮೂರು ಕೊಳಗೇರಿ ಪ್ರದೇಶಗಳು ಘೋಷಿತ ಕೊಳಗೇರಿ ಪ್ರದೇಶಗಳು. ಸುಮಾರು 40 ವರ್ಷಗಳಿಗೂ ಮೇಲ್ಪಟ್ಟ ಹಳೆಯ ಪ್ರದೇಶಗಳಾಗಿದ್ದು, ಈ ಮೂರು ಕೊಳಗೇರಿ ಪ್ರದೇಶಗಳ ನಿವಾಸಿಗಳಿಗೆ ಈಗಾಗಲೇ ಮಂಡಳಿ ಗುರುತು / ಹಂಚಿಕೆ ಪತ್ರಗಳನ್ನು ನೀಡಿರುತ್ತದೆ. ಈ ಪ್ರದೇಶಗಳೆಲ್ಲವೂ ಮೂಲಭೂತ ಸೌಲಭ್ಯಗಳನ್ನು ಪಡೆದು ಒಂದು ಮಟ್ಟಕ್ಕೆ ಅಭಿವೃದ್ಧಿ ಹೊಂದಿದ ಪ್ರದೇಶಗಳಾಗಿರುತ್ತದೆ. ಇವರುಗಳನ್ನು ನಗರೇಶ್ವರ ನಾಗೇನಹಳ್ಳಿಗೆ ಸ್ಥಳಾಂತರಿಸುವ ಯಾವ ಯೋಜನೆಯೂ ಮಂಡಳಿಗೆ ಇರುವುದಿಲ್ಲ.

ಈ ಹಿನ್ನಲೆಯಲ್ಲಿ ಬೆಂಗಳೂರು ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ನೇತಾಜಿ ಕಾಲೋನಿಯ 250 ನಿವಾಸಿಗಳಿಗೆ ಕೆ.ಆರ್.ಪುರಂ, ನಗರೇಶ್ವರ ನಾಗೇನಹಳ್ಳಿಯಲ್ಲಿ ಮಂಡಳಿ ನಿರ್ಮಿಸರುವ PMAY (HLF)-Phase-3 ಮನೆಗಳಿಗೆ ಅಥವಾ ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ JnNURM-BSUP-Phase-3  ಯೋಜನೆಯಡಿ ನಿರ್ಮಿಸಿರುವ ಮನೆಗಳಿಗೆ ಸ್ಥಳಾಂತರಿಸಿ ಹಂಚಿಕೆ ಮಾಡುವಂತೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಆಯುಕ್ತರು ದಿನಾಂಕ: 04.01.2022 ರಂದು ನೀಡಿದ ನಿರ್ದೇಶನದ ಮೇರೆಗೆ ಮಂಡಳಿಯ ನಂ.4ನೇ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು, ಮಂಡಳಿಯ ನಂ.3ನೇ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ದಿನಾಂಕ: 19.01.2022 ರಂದು ಪತ್ರ ಬರೆದಿರುತ್ತಾರೆ.

ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರ, ನೇತಾಜಿ ಕಾಲೋನಿ

ಇದೇ ನೇತಾಜಿ ಕಾಲೋನಿಯ 221 (250) ನಿವಾಸಿಗಳಿಗೆ ಮಹದೇವಪುರ ವಿಧಾನಸಭಾ ಕ್ಷೇತ್ರ, ಮಾರತ್‍ಹಳ್ಳಿ ಸರ್ವೆ ನಂ.33ರಲ್ಲಿ JnNURM-BSUP-Phase-3 ಯೋಜನೆಯಡಿ ನಿರ್ಮಿಸಿದ್ದ 920 ಮನೆಗಳ ಪೈಕಿ 221 ಮನೆಗಳನ್ನು ಹಂಚಿಕೆ ಮಾಡಲು ಮಂಡಳಿ ಸಭೆಯಲ್ಲಿ ಈ ಮೊದಲೇ ಅನುಮೋದನೆ ನೀಡಲಾಗಿತ್ತು. ಆದರೆ, ಮಂಡಳಿಯ ಅಧಿಕಾರಿಗಳು 221 ಕುಟುಂಬಗಳನ್ನು ಮಾರತ್‍ಹಳ್ಳಿಗೆ ಸ್ಥಳಾಂತರಿಸಲು ಕಾಲವಿಳಂಬ ಮಾಡಿದ್ದ ಕಾರಣ, ಖಾಲಿಯಿದ್ದ ಮನೆಗಳಲ್ಲಿ ಅನಧೀಕೃತದಾರರು ಬಂದು ಸೇರಿಕೊಂಡರು. ಅನಧೀಕೃತದಾರರನ್ನು ಆರಂಭದ ಹಂತದಲ್ಲೆ ಕಾನೂನಿನ ನೆರವಿನಿಂದ ಖಾಲಿ ಮಾಡಿಸಿ, ನೇತಾಜಿ ಕಾಲೋನಿಗೆ ಮನೆಗಳನ್ನು ಹಂಚಿಕೆ ಮಾಡದ ಕೊಳಗೇರಿ ಮಂಡಳಿ, ಈಗ ರೈಲ್ವೆಯವರ ನೆಪ ಹೇಳಿಕೊಂಡು 221 ಮನೆಗಳನ್ನು 250ಕ್ಕೆ ಹೆಚ್ಚಿಸಿ ನಗರೇಶ್ವರ ನಾಗೇನಹಳ್ಳಿಯಲ್ಲಿ ನಿರ್ಮಿಸಿರುವ ಮನೆಗಳನ್ನು ಹಂಚಿಕೆ ಮಾಡಲು ಕಾರ್ಯರೂಪಿಸುತ್ತಿದೆ.

768 ಜಿ+3 ಮನೆಗಳನ್ನು ಘೋಷಿತ ಕೊಳಗೇರಿ ಪ್ರದೇಶಗಳಾದ ರಾಜೀವ್‍ಗಾಂಧಿ ನಗರದ 107 ಕುಟುಂಬಗಳಿಗೆ, ಸಂಜಯ್‍ಗಾಂಧಿ ನಗರದ 245 ಕುಟುಂಬಗಳಿಗೆ, ರಾಮಮೂರ್ತಿನಗರದ 337 ಕುಟುಂಬಗಳಿಗೆ ವಿಸ್ತೃತ ಯೋಜನಾ ವರದಿಯ (ಡಿಪಿಆರ್) ಪ್ರಕಾರ ಹಂಚಿಕೆ ಮಾಡುವುದಾದರೆ ಸಾರ್ವಜನಿಕ ಹಿತದೃಷ್ಟಿಯಿಂದ ಒಳ್ಳೆಯದು. ನಗರೇಶ್ವರ ನಾಗೇನಹಳ್ಳಿ ಸರ್ವೆ ನಂ.13ರಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ PMAY (HLF)-Phase-3 ಯೋಜನೆಯಡಿ ನಿರ್ಮಿಸಿರುವ 912 ಮನೆಗಳನ್ನು (768 ಜಿ+3 ಮನೆಗಳು ಮತ್ತು 144 ಜಿ+3 ಮನೆಗಳು) ಮಂಡಳಿ ನಿಯಮಗಳ ಪ್ರಕಾರ ನಿಜವಾದ ಕೊಳಗೇರಿ ಬಡಜನರಿಗೆ ಹಂಚಿಕೆ ಮಾಡಬೇಕೆಂಬುದು ನಮ್ಮ ಉದ್ದೇಶವಾಗಿದೆ. ಕೊಳಗೇರಿ ಮಂಡಳಿಯ ಮನೆಗಳು; ಕೊಳಗೇರಿ ಜನರಿಗೆ ಮಾತ್ರ.! ಇದು ಮಂಡಳಿ ನಿಯಮ.!!

ಈ ಹಿನ್ನಲೆಯಲ್ಲಿ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ, ನಗರೇಶ್ವರ ನಾಗೇನಹಳ್ಳಿ ಸರ್ವೆ ನಂ.13ರಲ್ಲಿ ಕೊಳಗೇರಿ ಮಂಡಳಿ ನಿರ್ಮಿಸಿರುವ 912 ಮನೆಗಳನ್ನು ಕೊಳಗೇರಿ ಫಲಾನುಭವಿಗಳಲ್ಲದ ಇತರ ಅನುಕೂಲಸ್ಥ ವರ್ಗದವರಿಗೆ ಹಂಚಿಕೆ ಮಾಡಲಿಕ್ಕಾಗಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಲವರಿಂದ ಡಿ.ಡಿ.ರೂಪದಲ್ಲಿ ವಂತಿಗೆ ಹಣವನ್ನು ರಹಸ್ಯವಾಗಿ ಪಡೆಯುತ್ತಿರುವುದು ಈಗ ಬೆಳಕಿಗೆ ಬಂದಿದೆ. ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಕೆಲವು ಮುಖಂಡರುಗಳು, ನಗರೇಶ್ವರ ನಾಗೇನಹಳ್ಳಿಯಲ್ಲಿ ಮನೆ ಕೊಡಿಸುವುದಾಗಿ ತಿಳಿಸಿ ಇತರ ಅನುಕೂಲಸ್ಥ ವರ್ಗದವರಿಂದ ಹಣ ಮತ್ತು ಡಿ.ಡಿ.ಗಳನ್ನು ಪಡೆಯುತ್ತಿರುವುದು ಕೊಳಗೇರಿ ಜನರ ಆತಂಕಕ್ಕೆ ಕಾರಣವಾಗಿದೆ.

ಕೊಳಗೇರಿ ಮಂಡಳಿಯ ಭ್ರಷ್ಟಾಚಾರವನ್ನು ಖಂಡಿಸಿ, ಈ ಹಿಂದೆ ಬೆಂಗಳೂರಿನ ಟೌನ್ ಹಾಲ್ ಮುಂದೆ ನಡೆದ ಪ್ರತಿಭಟನೆ.

ಕೊಳಗೇರಿ ಮಂಡಳಿ ನಿರ್ಮಿಸುವ ಮನೆಗಳನ್ನು ಇತರ ಅನುಕೂಲಸ್ಥ ವರ್ಗದವರಿಗೆ ಹಂಚಿಕೆ ಮಾಡುವುದು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನಾ) (ತಿದ್ದುಪಡಿ) ನಿಯಮಗಳು, 2004. ನಿಯಮ 8(i), (ii) ಮತ್ತು (iii)ಕ್ಕೆ ಮತ್ತು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಅಭಿವೃದ್ಧಿ ಪಡಿಸಲಾದ ಕೊಳಗೇರಿ ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ ಫಲಾನುಭವಿಗಳನ್ನು ಗುರ್ತಿಸಿ ವಾಸದ ಘಟಕಗಳನ್ನು ಹಂಚಿಕೆ ಮಾಡುವಲ್ಲಿ ಪಾರಾದರ್ಶಕತೆಯನ್ನು ನಿರ್ವಹಿಸುವ ಸರ್ಕಾರದ ಆದೇಶ ಸಂಖ್ಯೆ: ವಇ 115 ಕೊಮಂಇ 2013 (1) ಮತ್ತು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಅಭಿವೃದ್ಧಿಪಡಿಸಲಾದ ವಾಸದ ಘಟಕವನ್ನು ಹಂಚಿಕೆ ಮಾಡಲು ಹಂಚಿಕೆ ನಿಯಮ, ನಿಬಂಧನೆ ಮತ್ತು ಷರತ್ತುಗಳ ಕುರಿತು ಸರ್ಕಾರದ ಆದೇಶ ಸಂಖ್ಯೆ: ವಇ 115 ಕೊಮಂಇ 2013 (2)ಕ್ಕೆ ವಿರೋಧವಾದದ್ದು.

ಈ ಹಿಂದೆ ಇದೇ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ, ನಗರೇಶ್ವರ ನಾಗೇನಹಳ್ಳಿ ಪ್ರದೇಶದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ನರ್ಮ್-ಬಿಎಸ್‍ಯುಪಿ ಯೋಜನೆಯಡಿ ನಿರ್ಮಿಸಿದ್ದ 208 ಮನೆಗಳನ್ನು ಕೊಳಗೇರಿ ನಿವಾಸಿಗಳಲ್ಲದ ಇತರ ಅನಕೂಲಸ್ಥರಿಗೆ ಕೊಳಗೇರಿ ಮಂಡಳಿ ಹಂಚಿಕೆ ಮಾದಿದ್ದ ವಿಚಾರದಲ್ಲಿ ಮಾನ್ಯ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷರು, ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನಾ) (ತಿದ್ದುಪಡಿ) ನಿಯಮಗಳು, 2004. ನಿಯಮ 8(i), (ii) ಮತ್ತು (iii) ರಲ್ಲಿನ ನಿಯಮಗಳನ್ನು ಉಲ್ಲಂಘನೆ ಮಾಡಿ ಫಲಾನುಭವಿಗಳ ಪಟ್ಟಿಗೆ ಅನುಮೋದನೆ ನೀಡಿದ ಒಂಬತ್ತು ಜನರನ್ನು ಅಪರಾಧಿ ಎಂದು ತಿಳಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬಹುದಾಗಿದೆ ಎಂದು ತಮ್ಮ ವಿಚಾರಣಾ ವರದಿಯಲ್ಲಿ ಉಲ್ಲೇಖಿಸಿ ಮುಂದಿನ ಕ್ರಮಕ್ಕಾಗಿ ಮಾನ್ಯ ಲೋಕಾಯುಕ್ತರಿಗೆ ಸಲ್ಲಿಸಿದ್ದಾರೆ. ಮಾನ್ಯ ಲೋಕಾಯುಕ್ತರ ಬಳಿ ಪ್ರಕರಣವು ಬಾಕಿಯಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಚುನಾವಣೆಯ ಹೊಸ್ತಿಲಲ್ಲಿ ನಗರೇಶ್ವರ ನಾಗೇನಹಳಿ ಸರ್ವೆ ನಂ.13ರಲ್ಲಿ ನಿರ್ಮಿಸಿರು 912 (PMAY (HLF)-Phase-3 ಯೋಜನೆಯ 768 ಜಿ+3 ಮನೆಗಳು ಮತ್ತು 144 ಜಿ+3 ಮನೆಗಳು) ಮನೆಗಳ ಬಹುಪಾಲನ್ನು ಕೊಳಗೇರಿ ನಿವಾಸಿಗಳಲ್ಲದ ಇತರ ಅನೂಕೂಲಸ್ಥ ವರ್ಗದವರಿಗೆ ಹಂಚಿಕೆ ಮಾಡಲು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮುಂದಾಗಿರುವುದು ಖಂಡನೀಯ. ಇದನ್ನು ಸರ್ಕಾರ ಕೂಡಲೇ ತಡೆಗಟ್ಟಿ, ಕೊಳಗೇರಿ ಮಂಡಳಿ ನಿರ್ಮಿಸುವ ಮನೆಗಳು; ಕೊಳಗೇರಿ ಜನರಿಗೆ ಮಾತ್ರ’ ಎಂಬುದನ್ನು ಸಾಬೀತು ಪಡಿಸಿ, ಕೊಳಗೇರಿ ಜನರ ಹಕ್ಕುಗಳನ್ನು ರಕ್ಷಣೆ ಮಾಡಬೇಕಾಗಿದೆ.

ದೇಶ

ಹೊಸದಿಲ್ಲಿ: 2024ರ ಲೋಕಸಭೆ ಚುನಾವಣೆಗೆ ಗೆಲುವಿನ ರಣತಂತ್ರ ರೂಪಿಸುವುದು, ಗಡಿ ಗ್ರಾಮಗಳಲ್ಲಿ ಭದ್ರತೆಯನ್ನು ಬಲಪಡಿಸುವುದು ಸೇರಿದಂತೆ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯ ಮುಕ್ತಾಯದ ದಿನವಾದ ಇಂದು ಪ್ರಮುಖವಾಗಿ ಚರ್ಚಿಸಲಾಯಿತು ಎಂದು ತಿಳಿದು ಬಂದಿದೆ.

ಬಿಜೆಪಿಯ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ನಿನ್ನೆ ನವದೆಹಲಿಯಲ್ಲಿ ಪ್ರಾರಂಭವಾಯಿತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಟ್ಟಾ ಮತ್ತು 350 ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಪಕ್ಷದ ಹಿರಿಯ ಮುಖಂಡರುಗಳು ಭಾಗವಹಿಸಿದ್ದರು.

ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿದೆ. ಈ ವರ್ಷದ ಆರಂಭದಲ್ಲಿ ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ, ಮಿಜೋರಾಂ, ಕರ್ನಾಟಕ, ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ಒಂಬತ್ತು ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆಯಲಿವೆ.

ಇಂದಿನ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ‘ಮುಂಬರುವ 2024ರ ಲೋಕಸಭೆ ಚುನಾವಣೆಗೆ 400 ದಿನಗಳು ಬಾಕಿಯಿದ್ದು, ನಾವು ಈಗಲೇ ತಯಾರಿ ಮಾಡಿಕೊಳ್ಳಬೇಕಾಗಿದೆ. ಸರ್ಕಾರದ ಯೋಜನೆಗಳನ್ನು ಜನರ ಬಳಿಗೆ ಕೊಂಡೊಯ್ಯಲು ನೂತನ ಪದಾಧಿಕಾರಿಗಳ ನೇಮಕ ಅಗತ್ಯವಾಗಿದೆ. ಯುವ ಮತದಾರರನ್ನು ಸೆಳೆಯುವುದು ಮತ್ತು ವಿಶೇಷವಾಗಿ ಗಡಿ ಗ್ರಾಮಗಳಲ್ಲಿ ಭದ್ರತೆ ಹಾಗೂ ಪಕ್ಷದ ಬಲವರ್ಧನೆಯನ್ನು ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸಲು ಬದ್ದರಾಗಿರಬೇಕು’ ಎಂದು ಹೇಳಿರುವುದಾಗಿ ಬಿಜೆಪಿಯ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.