ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
April 2023 » Page 5 of 7 » Dynamic Leader
October 23, 2024
Home 2023 April (Page 5)
ರಾಜ್ಯ

ಡಿ.ಸಿ.ಪ್ರಕಾಶ್ ಸಂಪಾದಕರು

ಒಬಿಸಿ ಕೆಟಗರಿಯಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಶೇ 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿ, ಅವೈಜ್ಞಾನಿಕವಾಗಿ EWS ವರ್ಗದಲ್ಲಿ ಸೇರಿಸಿರುವುದು ಸಾಮಾಜಿಕ ದಬ್ಬಾಳಿಕೆ ಎಂದು ಒತ್ತಿ ಹೇಳಿದರೂ ಅದನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ನೀತಿ ನಿರ್ಧಾರಗಳ ವಿರುದ್ಧ ವಿವಿಧ ಮುಸ್ಲಿಂ ಸಂಘಟನೆಗಳು ಮತ್ತು ವ್ಯಕ್ತಿಗಳು ಸಲ್ಲಿಸಿರುವ ಹಲವು ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಪೀಠ, ಸರ್ಕಾರದ ನಡೆಯು ಅಸ್ಥಿರ ಹಾಗೂ ದೋಷಪೂರಿತವಾಗಿರುವಂತೆ ಕಾಣಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಒಬಿಸಿ ಕೆಟಗರಿಯಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಶೇ 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿರುವ ನಿರ್ಧಾರವನ್ನು ಏಪ್ರಿಲ್ 18ರವರೆಗೂ ಜಾರಿಗೊಳಿಸುವುದಿಲ್ಲ ಎಂದು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‌ಗೆ ಗುರುವಾರ ಭರವಸೆ ನೀಡಿದೆ.

ನ್ಯಾಯಾಲಯದ ಎದುರು ಹಾಜರುಪಡಿಸಿರುವ ದಾಖಲೆಗಳನ್ನು ಗಮನಿಸಿದರೆ, ಮೇಲ್ನೋಟಕ್ಕೆ ಕರ್ನಾಟಕ ಸರ್ಕಾರದ ನಿರ್ಧಾರವು ‘ಸಂಪೂರ್ಣ ತರ್ಕರಹಿತ ಕಲ್ಪನೆ’ ಎಂಬಂತೆ ಕಾಣಿಸುತ್ತದೆ ಎಂಬುದಾಗಿ ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಹಾಗೂ ಬಿ.ವಿ.ನಾಗರತ್ನ ಅವರನ್ನೊಳಗೊಂಡ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ರಾಜ್ಯದ ಜನಸಂಖ್ಯೆಯಲ್ಲಿ ಶೇ.13ರಷ್ಟಿರುವ ಮುಸ್ಲಿಂ ಜನಸಂಖ್ಯೆ ವಿರುದ್ಧ ತಾರತಮ್ಯ ಮಾಡುವ ಮೂಲಕ ಸಮಾನತೆಯ ಸಾಂವಿಧಾನಿಕ ತತ್ವವನ್ನು ಹಾಗೂ ಜಾತ್ಯತೀತತೆಯನ್ನು ಕರ್ನಾಟಕ ಸರ್ಕಾರ ಉಲ್ಲಂಘನೆ ಮಾಡಿದೆ ಎಂದು ಅರ್ಜಿದಾರರು ವಾದಿಸಿದರು. ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಸರ್ಕಾರವು ಯಾವುದೇ ಅಧ್ಯಯನ ನಡೆಸಿಲ್ಲ ಅಥವಾ ಯಾವುದೇ ಪ್ರಾಯೋಗಿಕ ದತ್ತಾಂಶ ಸಂಗ್ರಹಿಸಿಲ್ಲ ಎಂದು ಪ್ರತಿಪಾದಿಸಿದರು.

ಈ ನಿರ್ಧಾರವನ್ನು ಸಮರ್ಥಿಸಿಕೊಂಡ ರಾಜ್ಯ ಸರ್ಕಾರ, ರಾಜ್ಯದಲ್ಲಿನ ವಿವಿಧ ಸಮುದಾಯಗಳ ಸಮಾಜೋ- ಆರ್ಥಿಕ ಸ್ಥಿತಿಗತಿಯನ್ನು ಪರಿಶೀಲಿಸಿ ಆಯೋಗ ಸಲ್ಲಿಸಿದ್ದ ಶಿಫಾರಸಿನ ಆಧಾರದಲ್ಲಿ ಇದನ್ನು ಕೈಗೊಳ್ಳಲಾಗಿದೆ ಎಂದು ಹೇಳಿತು. ರಾಜ್ಯದ ಜನಸಂಖ್ಯೆಯಲ್ಲಿ ಒಟ್ಟು ಶೇ.40 ರಷ್ಟಿರುವ ಒಕ್ಕಲಿಗರು ಮತ್ತು ಲಿಂಗಾಯತರ ಪ್ರಮಾಣದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಈ ಸಮುದಾಯಗಳು ಅಧಿಕ ಮೀಸಲಾತಿಗೆ ಅರ್ಹವಾಗಿವೆ ಎಂದು ಸರ್ಕಾರ ತಿಳಿಸಿದೆ.

ಆದರೆ ಆಯೋಗದ ವರದಿಯ ಸಿಂಧುತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕೋರ್ಟ್, ತನ್ನ ನಿರ್ಧಾರಕ್ಕೆ ಪೂರಕವಾದ ಮತ್ತಷ್ಟು ಪುರಾವೆಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ಹಿಂದಿನ ಕಾಂಗ್ರೆಸ್ ಸರ್ಕಾರವು 2013ರಲ್ಲಿ ಜಾರಿಗೊಳಿಸಿದ ಮೀಸಲಾತಿಯಲ್ಲಿ ಮುಸ್ಲಿಮರ ಶೇ.4ರಷ್ಟನ್ನು ಹೇಗೆ ಗುರುತಿಸಲಾಗಿದೆ ಎಂಬ ವಿವರಣೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ.

1992ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ನಿರ್ಣಾಯಕ ತೀರ್ಪಿನಲ್ಲಿ ನಿಗದಿಪಡಿಸಲಾಗಿದ್ದ ಶೇ.50ರ ಮೀಸಲಾತಿಯ ಮಿತಿಯನ್ನು ಕರ್ನಾಟಕ ಸರ್ಕಾರದ ನಿರ್ಧಾರ ಮೀರಿದೆ ಎಂಬುದನ್ನು ಕೋರ್ಟ್ ಗಮನಿಸಿದೆ. ಈ ಮಿತಿಯನ್ನು ದಾಟಲು ಅಸಾಧಾರಣ ಸನ್ನಿವೇಶ ಹಾಗೂ ನಿರಾಕರಿಸಲಾಗದ ಕಾರಣಗಳು ಅತಿ ಅಗತ್ಯ ಎಂದು ಕೋರ್ಟ್ ತಿಳಿಸಿದೆ.

ಬಳಿಕ ಏಪ್ರಿಲ್ 18ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ, ಕರ್ನಾಟಕ ಸರ್ಕಾರ ಹಾಗೂ ಒಕ್ಕಲಿಗ ಮತ್ತು ಲಿಂಗಾಯತ ಪ್ರತಿನಿಧಿಗಳು ಅರ್ಜಿಗಳಿಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸುವಂತೆ ಹೇಳಿದೆ. ಮುಂದಿನ ಆದೇಶದವರೆಗೂ ಈ ನಿರ್ಧಾರದ ಆಧಾರದಲ್ಲಿ ಯಾವುದೇ ನೇಮಕಾತಿ ಅಥವಾ ಪ್ರವೇಶಾತಿ ನಡೆಸದಂತೆ ನಿರ್ದೇಶನ ನೀಡಿದೆ. ಒಟ್ಟಾರೆಯಾಗಿ ಇದು ಬಿಜೆಪಿ ಸರ್ಕಾರದಿಂದ ಮೀಸಲಾತಿ ವಂಚಿತರಾದ ಮುಸ್ಲಿಮರ ಕಾನೂನಾತ್ಮಕ ಹೋರಾಟಕ್ಕೆ ಸಿಕ್ಕಿದ ಮೊದಲ ಜಯವಾಗಿದೆ. Muslim OBC Reservation: Supreme Court Slams Karnataka Govt For Scrapping 4 percent Quota.

ದೇಶ

ಸೂರತ್: ಮೋದಿ ಉಪನಾಮಕ್ಕೆ ಸಂಬಂಧಿಸಿದ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಮೇಲ್ಮನವಿ ಕುರಿತು ಸೂರತ್ ಕೋರ್ಟ್ ಇದೇ 20ರಂದು ಆದೇಶ ಹೊರಡಿಸಲಿದೆ.

ಗುಜರಾತ್‌ನ ಸೂರತ್‌ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ರಾಹುಲ್ ಗಾಂಧಿ ವಿರುದ್ಧ ಮೋದಿ ಹೆಸರಿಗೆ ಮಾನಹಾನಿ ಮಾಡಿದ ಪ್ರಕರಣ ದಾಖಲಾಗಿತ್ತು. ಈ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿ ಕಳೆದ ತಿಂಗಳು 23ರಂದು ತೀರ್ಪು ನೀಡಲಾಗಿತ್ತು. ಮೇಲ್ಮನವಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಿ ಜಾಮೀನು ನೀಡಲಾಯಿತು. 2 ವರ್ಷಗಳ ಶಿಕ್ಷೆಯ ಮರುದಿನ ರಾಹುಲ್ ಗಾಂಧಿಯನ್ನು ಸಂಸದ ಸ್ಥಾನದಿಂದ ಅನರ್ಹ ಗೊಳಿಸಲಾಯಿತು. ಶಿಕ್ಷೆಯ ವಿರುದ್ಧ ಅವರು ಸೂರತ್‌ನ ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ಜತೆಗೆ ಜೈಲು ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಹಾಗೂ ಪ್ರಕರಣದ ಅಂತಿಮ ತೀರ್ಪಿನವರೆಗೆ ಜಾಮೀನು ವಿಸ್ತರಿಸುವಂತೆ ಕೋರಿ ಎರಡು ಅರ್ಜಿಗಳನ್ನು ಸಲ್ಲಿಸಿದ್ದರು.

ಈ ಮೇಲ್ಮನವಿ ಇಂದು ವಿಚಾರಣೆಗೆ ಬಂದಿತ್ತು. ರಾಹುಲ್ ಗಾಂಧಿಗೆ ಸೂರತ್‌ ಮ್ಯಾಜಿಸ್ಟ್ರೇಟ್ ಕೋರ್ಟ್‌ ನೀಡಿದ್ದ 2 ವರ್ಷ ಜೈಲು ಶಿಕ್ಷೆ ರದ್ದಾಗಬಹುದೇ ಎಂಬ ನಿರೀಕ್ಷೆಯಿತ್ತು. ಆದರೆ, ರಾಹುಲ್ ಗಾಂಧಿ ಮೇಲ್ಮನವಿ ಪ್ರಕರಣದ ಕುರಿತು ಗುಜರಾತ್ ಸೂರತ್ ಕೋರ್ಟ್ ಇದೇ 20ರಂದು ಆದೇಶ ಹೊರಡಿಸಲಿದೆ ಎಂದು ವರದಿಯಾಗಿದೆ. ಮೇಲ್ಮನವಿ ಪ್ರಕರಣದಲ್ಲಿ ಪ್ರತಿಕ್ರಿಯೆ ನೀಡುವಂತೆ ಅರ್ಜಿದಾರ ಬಿಜೆಪಿ ಶಾಸಕ ಬ್ರೂನೇಶ್ ಮೋದಿ ಅವರಿಗೆ ಹಾಗೂ ಗುಜರಾತ್ ಸರ್ಕಾರಕ್ಕೆ ಈಗಾಗಲೇ ಕೋರ್ಟ್ ಆದೇಶಿಸಿದೆ ಎಂಬುದು ಗಮನಾರ್ಹ. A Surat Sessions Court, while hearing an appeal seeking stay on Congress leader Rahul Gandhi’s conviction by the Magistrate court in the criminal defamation case against him has reserved it verdict, saying the order will be pronounced on April 20, reported Bar and Bench.

ದೇಶ

ಸೌದಿಕ್ ಬಿಸ್ವಾಸ್, ಬಿಬಿಸಿ ವರದಿಗಾರ
ಕನ್ನಡಕ್ಕೆ ಡಿ.ಸಿ.ಪ್ರಕಾಶ್
ಕೃಪೆ: ಬಿಬಿಸಿ

ನವೆಂಬರ್ 25, 1949 ರಂದು, ಭಾರತದ ಸಂವಿಧಾನದ ಅಂತಿಮ ವಾಚನದ ಕೊನೆಯಲ್ಲಿ, ಭಾರತದ ಶ್ರೇಷ್ಠ ರಾಜಕಾರಣಿಗಳಲ್ಲಿ ಒಬ್ಬರಾದ ಮತ್ತು ದೇಶದ ದಲಿತರ ನಿರ್ವಿವಾದ ನಾಯಕರಾದ ಡಾ.ಭೀಮರಾವ್ ಅಂಬೇಡ್ಕರ್ ಅವರು ಪೂರ್ವಭಾವಿ ಭಾಷಣವೊಂದನ್ನು ಮಾಡಿದರು.

“ಜನವರಿ 26, 1950 ರಂದು ನಾವು ವಿರೋಧಾಭಾಸದ ಜೀವನವನ್ನು ಪ್ರವೇಶಿಸಲಿದ್ದೇವೆ, ರಾಜಕೀಯದಲ್ಲಿ ಸಮಾನತೆ ಇರುತ್ತದೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ಅಸಮಾನತೆ ಎದುರಾಗುತ್ತದೆ’’ ಎಂದು ಅಂಬೇಡ್ಕರ್ ಹೇಳಿದರು.

ಸಂವಿಧಾನ ಜಾರಿಗೆ ಬಂದ ದಿನವೇ ಭಾರತವು ತನ್ನನ್ನು ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯ ರಾಷ್ಟ್ರವೆಂದು ಘೋಷಿಸಿಕೊಂಡಿತು. ಅಂಬೇಡ್ಕರ್ ಅವರು ತಮ್ಮ ಭಾಷಣದಲ್ಲಿ ಯುವ ಗಣರಾಜ್ಯ ಮತ್ತು ಹಳೆಯ ನಾಗರಿಕತೆಯ ನಡುವಿನ ವೈರುಧ್ಯಗಳ ಬಗ್ಗೆ ಸಂಭಾವ್ಯವಾಗಿ ಉಲ್ಲೇಖಿಸಿದ್ದರು ಎಂದೇ ಅನಿಸುತ್ತಿದೆ. ಅವರು ಬೇರೊಂದು ಸಂದರ್ಭದಲ್ಲಿ ಮಾತನಾಡುವಾಗ ಪ್ರಜಾಪ್ರಭುತ್ವವು ಕೇವಲ ‘ಮೂಲಭೂತವಾಗಿ ಪ್ರಜಾಸತ್ತಾತ್ಮಕವಲ್ಲದ’ ‘ಭಾರತದ ಮಣ್ಣಿನ ಮೇಲ್ಭಾಗ’ ಮತ್ತು ಗ್ರಾಮವು “ಸ್ಥಳೀಯತೆ, ಅಜ್ಞಾನ, ಸಂಕುಚಿತ ಮನೋಭಾವ ಮತ್ತು ಕೋಮುವಾದದ ಹೊಂಡ” ಎಂದರು.

ಅಸ್ಪೃಶ್ಯತೆ ನಿವಾರಣೆ, ದೃಢವಾದ ಕ್ರಮ, ಎಲ್ಲಾ ವಯಸ್ಕರಿಗೆ ಮತದಾನದ ಹಕ್ಕು ಮತ್ತು ಎಲ್ಲರಿಗೂ ಸಮಾನ ಹಕ್ಕುಗಳು ಭಾರತದಂತಹ ಬಡ, ಅಸಮಾನ ದೇಶಕ್ಕೆ ಗಮನಾರ್ಹ ಸಾಧನೆಯಾಗಿದೆ. ಪ್ರಸಿದ್ಧ ಜರ್ಮನ್ ತತ್ವಜ್ಞಾನಿ ಜಾರ್ಜ್ ವಿಲ್ಹೆಲ್ಮ್ ಫ್ರೆಡ್ರಿಕ್ ಹೆಗೆಲ್ ಭಾರತವನ್ನು ‘ಬದಲಾಗದ ಸ್ಥಿರ’ ದೇಶ ಎಂದು ಬಣ್ಣಿಸಿದ್ದಾರೆ.

299 ಸದಸ್ಯರ ಸಂವಿಧಾನ ಸಭೆಯು ಪ್ರಕ್ಷುಬ್ಧ ಸಮಯದಲ್ಲಿ 1946 ಮತ್ತು 1949ರ ನಡುವೆ ಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸಿತು. ಈ ಅವಧಿಯಲ್ಲಿ ಧಾರ್ಮಿಕ ಗಲಭೆಗಳು ಮತ್ತು ವಿಭಜನೆಗಳು ನಡೆದವು. ಮಾನವ ಇತಿಹಾಸದಲ್ಲಿ ಅತಿ ದೊಡ್ಡ ವಲಸೆ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯಿತು. ನೂರಾರು ರಾಜಪ್ರಭುತ್ವದ ರಾಜ್ಯಗಳನ್ನು ಭಾರತಕ್ಕೆ ಸೇರಿಸಲು ಬಹಳ ಕಷ್ಟಕರವಾದ ಹೆಜ್ಜೆಯನ್ನು ತೆಗೆದುಕೊಳ್ಳಲಾಯಿತು.

ಅಂಬೇಡ್ಕರ್ ಅವರು ಏಳು ಸದಸ್ಯರ ಕೋರ್ ಕಮಿಟಿಯ ನೇತೃತ್ವ ವಹಿಸಿದ್ದರು.ಕಮಿಟಿಯು 395 ಭಾಗಗಳ ದಾಖಲೆಯನ್ನು ತಯಾರಿಸಿತು.

ಅಂಬೇಡ್ಕರ್ ಅವರ ಜನ್ಮದಿನದಂದು, ಏಪ್ರಿಲ್ 14, 1942 ರಂದು ಮುಂಬೈ (ಆಗಿನ ಬಾಂಬೆ) ನಲ್ಲಿರುವ ತಮ್ಮ ಮನೆಯಲ್ಲಿ ಮಹಿಳಾ ಕಾರ್ಯಕರ್ತರ ಗುಂಪಿನೊಂದಿಗೆ.

ಅಶೋಕ್ ಗೋಪಾಲ್ ಅವರ ಹೊಸ ‘ಎ ಪಾರ್ಟ್ ಅಪಾರ್ಟ್ ಜೀವನಚರಿತ್ರೆ’, ಅಂಬೇಡ್ಕರ್ ಅವರು ವಿಶ್ವದ ಅತಿ ಉದ್ದದ ಸ್ಥಾಪನೆಯ ದಾಖಲೆಗಳಲ್ಲಿ ಒಂದನ್ನು ರಚಿಸಲು, ಅಂಬೇಡ್ಕರ್ ಅವರು ಹೇಗೆ ಅನಾರೋಗ್ಯದಿಂದ ಹೋರಾಡಿದರು ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕರೊಂದಿಗಿನ ಭಿನ್ನಾಭಿಪ್ರಾಯಗಳನ್ನು ಹೇಗೆ ಬದಿಗಿರಿಸಿದರು ಎಂಬುದನ್ನು ಸಹ ವಿವರಿಸುತ್ತದೆ.

ಅಂಬೇಡ್ಕರ್ ಅವರ ವ್ಯಕ್ತಿತ್ವವು ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಬೆಂಬಲವನ್ನು ಪಡೆಯಲು ಹೇಗೆ ಸಹಾಯ ಮಾಡಿತು ಎಂಬುದನ್ನು ಪುಸ್ತಕವು ಬಹಿರಂಗಪಡಿಸುತ್ತದೆ. ಕರಡು ಸಮಿತಿಯ ಏಳು ಸದಸ್ಯರಲ್ಲಿ ಐವರು ಮೇಲ್ಜಾತಿಯವರು. ಆದರೆ ಅವರೆಲ್ಲರೂ ಅಂಬೇಡ್ಕರ್ ಅವರನ್ನು ಸಮಿತಿಯನ್ನು ಮುನ್ನಡೆಸುವಂತೆ ಕೇಳಿಕೊಂಡರು.

ಭಾರತೀಯ ಸ್ವಾತಂತ್ರ್ಯ ಚಳುವಳಿಯನ್ನು ಬೆಂಬಲಿಸಿದ ಐರ್ಲೆಂಡ್‌ನ ಸಂವಿಧಾನವನ್ನು ಬರೆದ ಐರಿಶ್ ರಾಜಕಾರಣಿ ಎಮನ್ ಡಿ ವಲೇರಾ ಅವರು ಸಂವಿಧಾನ ಕರುಡು ಸಮಿತಿಗೆ ಮುಖ್ಯಸ್ಥರನ್ನಾಗಿ ಅಂಬೇಡ್ಕರ್ ಅವರ ಹೆಸರನ್ನು ಬ್ರಿಟಿಷ್ ಭಾರತದ ಕೊನೆಯ ವೈಸ್‌ರಾಯ್ ಮೌಂಟ್ ಬ್ಯಾಟನ್ ಅಥವಾ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ  ಶಿಫಾರಸು ಮಾಡಿದರು ಎಂದು ಗೋಪಾಲ್ ಬರೆಯುತ್ತಾರೆ. (ವೈಸರಾಯ್ ಅವರ ಪತ್ನಿ ಎಡ್ವಿನಾ ಮೌಂಟ್ ಬ್ಯಾಟನ್ ಅವರು ಅಂಬೇಡ್ಕರ್ ಅವರಿಗೆ ಬರೆದ ಕೊನೆಯ ಪತ್ರದಲ್ಲಿ ಇದು ಬಹಿರಂಗವಾಗಿದೆ.)

“ಎಲ್ಲ ವರ್ಗಗಳಿಗೆ ಮತ್ತು ಧರ್ಮಕ್ಕೆ ಸಮಾನ ನ್ಯಾಯವನ್ನು ನೀಡುವ ಏಕೈಕ ಪ್ರತಿಭೆ” ಅವರಾಗಿರುವುದರಿಂದ ಸಂವಿಧಾನ ರಚನೆಯ “ಮೇಲ್ವಿಚಾರಣೆ” ಮಾಡುತ್ತಿರುವುದು ನನಗೆ “ವೈಯಕ್ತಿಕ ಸಂತೋಷ” ಆಗಿದೆ ಎಂದು ಎಡ್ವಿನಾ ಮೌಂಟ್‌ಬ್ಯಾಟನ್ ಅವರು ಅಂಬೇಡ್ಕರ್ ಅವರಿಗೆ ಹೇಳಿದರು.

1947 ಮಾರ್ಚ್ ತಿಂಗಳು ವೈಸರಾಯ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಲಾರ್ಡ್ ಮೌಂಟ್ ಬ್ಯಾಟನ್ ಅವರು ಅಂಬೇಡ್ಕರ್ ಅವರೊಂದಿಗೆ ಅತ್ಯಂತ ಆಸಕ್ತಿದಾಯಕ ಮತ್ತು ಮೌಲ್ಯಯುತ ಮಾತುಕತೆಗಳನ್ನು ನಡೆಸಿದರು ಎಂದು ಗೋಪಾಲ್ ಬರೆಯುತ್ತಾರೆ. ನೆಹರೂ ಅವರ ಹಂಗಾಮಿ ಕೇಂದ್ರ ಸಚಿವ ಸಂಪುಟದ 15 ಮಂತ್ರಿಗಳ ಪಟ್ಟಿಯಲ್ಲಿ ಅಂಬೇಡ್ಕರ್ ಅವರ ಹೆಸರನ್ನು ನೋಡಲು “ಅತ್ಯಂತ ಸಂತೋಷವಾಗಿದೆ” ಎಂದು ವೈಸರಾಯ್ ಅವರು ಹಿರಿಯ ಬ್ರಿಟಿಷ್ ಅಧಿಕಾರಿಗೆ ತಿಳಿಸಿದರು.

1947 ಮೇ ತಿಂಗಳು ಸಂವಿಧಾನ ಸಭೆಯಲ್ಲಿ ಸಲ್ಲಿಸಲಾದ ಸಂವಿಧಾನದ ಸಂಪೂರ್ಣವಾದ ಕರಡನ್ನು ಅಂಬೇಡ್ಕರ್ ನೇತೃವದ ಸಮಿತಿ ಪರಿಶೀಲಿಸಿತು. ಅದನ್ನು ಸಂಬಂಧಪಟ್ಟ ಸಚಿವರಿಗೆ ನಂತರ ಕಾಂಗ್ರೆಸ್ ಪಕ್ಷಕ್ಕೆ ಕಳುಹಿಸಿಕೊಡಲಾಯಿತು. ಕೆಲವು ಭಾಗಗಳನ್ನು ಏಳು ಬಾರಿ ಮಾರ್ಪಡಿಸಲಾಯಿತು.

ಅಂಬೇಡ್ಕರ್ ಏಪ್ರಿಲ್ 1948ರಲ್ಲಿ ಶಾರದ ಕಬೀರ್ ಎಂಬ 36 ವರ್ಷದ ವೈದ್ಯೆಯನ್ನು ವಿವಾಹವಾದರು

ಸಂವಿಧಾನ ರಚನಾ ಸಭೆಯ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಅವರಿಗೆ ಅಂಬೇಡ್ಕರ್ ಅವರಿಂದ ಸಲ್ಲಿಸಲಾದ ಪರಿಷ್ಕೃತ ಕರಡಿನಲ್ಲಿ 20 ತಿದ್ದುಪಡಿಗಳನ್ನು ಮಾಡಲಾಯಿತು. ನ್ಯಾಯ, ಸಮಾನತೆ ಮತ್ತು ಭ್ರಾತೃತ್ವದ ಪ್ರತಿಜ್ಞೆಗಳನ್ನು ಒದಗಿಸುವ ಮತ್ತು ಸ್ಥಾಪನಾ ದಾಖಲೆಯ ಮೂಲಭೂತ ಲಕ್ಷಣಗಳನ್ನು ಒಳಗೊಂಡಿರುವ ಮುನ್ನುಡಿಗೆ ಮಾಡಿದ ತಿದ್ದುಪಡಿಯು ಸಹ ಇದರಲ್ಲಿ ಒಳಗೊಂಡಿರುತ್ತದೆ.

ಮೂಲ ಪೀಠಿಕೆಯಲ್ಲಿ ಸೇರಿಸಲಾದ “ಭ್ರಾತೃತ್ವ” ಎಂಬ ಪದವನ್ನು, “81 ನಿಜವಾದ ಅದ್ಭುತ ಮತ್ತು ಐತಿಹಾಸಿಕ ಪದಗಳ ಸಂಗ್ರಹವಾದ” ಉಳಿದ ತಿದ್ದುಪಡಿಗಳೆಲ್ಲವೂ ಸಂಪೂರ್ಣವಾಗಿ ಅಂಬೇಡ್ಕರ್ ಅವರದ್ದು. ತತ್ವಜ್ಞಾನಿ ಆಕಾಶ್ ಸಿಂಗ್ ರಾಥೋಡ್ ಬರೆದ “Ambedkar’s Preamble: A Secret History of the Constitution of India” ಎಂಬ ಪುಸ್ತಕವನ್ನು ಉಲ್ಲೇಖಿಸಿ ಗೋಪಾಲ್ ಹೇಳುತ್ತಾರೆ.

ಅಂಬೇಡ್ಕರ್ ಅವರೇ ಹೆಚ್ಚಿನ ಕೆಲಸವನ್ನು ಮಾಡಿದ್ದಾರೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೂ ಅವರು ಸುಮಾರು 100 ದಿನಗಳ ಕಾಲ ಸಂವಿಧಾನ ಸಭೆಯಲ್ಲಿ ನಿಂತು, “ಪ್ರತಿ ಷರತ್ತನ್ನು ತಾಳ್ಮೆಯಿಂದ ವಿವರಿಸಿ, ಕಾರಣಗಳನ್ನು ನೀಡಿದರು ಅಥವಾ ಸೂಚಿಸಿದ ಪ್ರತಿ ತಿದ್ದುಪಡಿಯನ್ನು ತಿರಸ್ಕರಿಸಿದರು”.

ಎಲ್ಲ ಸದಸ್ಯರು ಸಭೆಗೆ ಹಾಜರಾಗಿರಲಿಲ್ಲ. “ಈ (ಪರಿಷ್ಕೃತ) ಸಂವಿಧಾನವನ್ನು ರೂಪಿಸುವ ಹೊರೆ ಅಂಬೇಡ್ಕರ್ ಅವರ ಮೇಲೆ ಬಿದ್ದಿತು. ಏಕೆಂದರೆ ಹೆಚ್ಚಿನ ಸದಸ್ಯರು ಸಾವು, ಅನಾರೋಗ್ಯ ಮತ್ತು ಇತರ ಕೆಲಸಗಳಿಂದಾಗಿ ಗಣನೀಯವಾದ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ” ಎಂದು ಸಮಿತಿಯ ಸದಸ್ಯರಲ್ಲೊಬ್ಬರಾದ ಟಿಟಿ ಕೃಷ್ಣಮಾಚಾರಿ 1948 ನವೆಂಬರ್ ತಿಂಗಳಲ್ಲಿ ಸಭೆಗೆ ತಿಳಿಸಿದರು.

ಕರಡು 7,500ಕ್ಕೂ ಹೆಚ್ಚು ತಿದ್ದುಪಡಿಗಳನ್ನು ಸೂಚಿಸಿತು. ಅವುಗಳಲ್ಲಿ ಸುಮಾರು 2,500 ಸ್ವೀಕರಿಸಲಾಯಿತು. “ಅತ್ಯಂತ ಸಂಕೀರ್ಣವಾದ ಪ್ರಸ್ತಾವನೆಗಳನ್ನು ಸರಳ ಕಾನೂನು ರೂಪಕ್ಕೆ ಹಾಕುವ ಸಾಮರ್ಥ್ಯ” ಹೊಂದಿದ ಹಿರಿಯ ಸರ್ಕಾರಿ ನೌಕರರಾದ ಎಸ್.ಎನ್.ಮುಖರ್ಜಿಯವರಿಗೆ ಕರಡನ್ನು ಸಿದ್ಧಪಡಿಸಿದ್ದಕ್ಕಾಗಿ ಅಂಬೇಡ್ಕರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಅಂಬೇಡ್ಕರ್ ಅವರ ಜನ್ಮದಿನದಂದು ಭಾರತೀಯ ಸಂವಿಧಾನದ ಪುಸ್ತಕವನ್ನು ಹಿಡಿದಿರುವ ವ್ಯಕ್ತಿ.

ಭಾರತದ ‘ಹಿಂದುಳಿದ ವರ್ಗಗಳ’ ಬೆಂಬಲಿಗರೆಂಬ ಖ್ಯಾತಿ ಇದ್ದರೂ ಸಹ ಅಂಬೇಡ್ಕರ್ ಎಲ್ಲಾ ವರ್ಗಗಳ ಹಿತಾಸಕ್ತಿಗಳಿಗೆ ಅವಕಾಶ ಕಲ್ಪಿಸಿದರು. ಮೀಸಲು ಕ್ಷೇತ್ರಗಳ ಅವರ ಬೇಡಿಕೆಯನ್ನು ಸಂವಿಧಾನ ಸಭೆಯ ಅಲ್ಪಸಂಖ್ಯಾತರ ಸಮಿತಿಯು ತಿರಸ್ಕರಿಸಿತು. ಪ್ರಮುಖ ಕೈಗಾರಿಕೆಗಳ ರಾಷ್ಟ್ರೀಕರಣಕ್ಕಾಗಿ ಅವರ ಆರಂಭಿಕ ಬೇಡಿಕೆಯನ್ನು ಸಹ ಸ್ವೀಕರಿಸಲಿಲ್ಲ. ಸಂವಿಧಾನದ ಉದ್ದೇಶಗಳಲ್ಲಿ ಸಮಾಜವಾದವನ್ನೂ ಉಲ್ಲೇಖಿಸಿಲ್ಲ.

1946 ಡಿಸೆಂಬರ್ ನಲ್ಲಿ ಸಂವಿಧಾನ ಸಭೆ ಮೊದಲ ಬಾರಿಗೆ ಸೇರಿದಾಗ, ಅಂಬೇಡ್ಕರ್ ಅವರು “ಇಂದು ನಾವು ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ವಿಭಜನೆಯಾಗಿದ್ದೇವೆ ಎಂದು ನನಗೆ ತಿಳಿದಿದೆ. ನಾವು ಯುದ್ಧ ಮಾಡುವ ಶಿಬಿರಗಳ ಗುಂಪುಗಳಾಗಿದ್ದೇವೆ. ಒಂದುವೇಳೆ ಅಂತಹ ಒಂದು ಶಿಬಿರದ ನಾಯಕನಾಗಿ ನಾನಿರಬಹುದು ಎಂಬುದನ್ನು ಒಪ್ಪಿಕೊಳ್ಳುವ ಮಟ್ಟಕ್ಕೆ ನಾನು ಹೋಗಬಹುದು” ಎಂದು ಉಲ್ಲೇಖಿಸಿದರು.

“ಅಂಬೇಡ್ಕರ್ ಅವರ ಹಿಂದಿನ ಬೇಡಿಕೆಗಳನ್ನು ನಿಭಾಯಿಸಿದ ರೀತಿ ಅವರ ರಾಜಕೀಯ ಸ್ವರೂಪವನ್ನು ಸೂಚಿಸುತ್ತದೆ. ಪರಿಶಿಷ್ಟ ಜಾತಿಗಳು ಎಂಬ ನಿರ್ದಿಷ್ಟವಾದ ಒಂದು ವರ್ಗದ ಹಿತಾಸಕ್ತಿಗಳನ್ನು ಮಾತ್ರವಲ್ಲದೆ, ಎಲ್ಲರ ಹಿತಾಸಕ್ತಿಗಳನ್ನು ಅವರು ಪರಿಗಣಿಸಿದ್ದಾರೆ,” ಎಂದು ಗೋಪಾಲ್ ಹೇಳುತ್ತಾರೆ. (ಭಾರತದ 140 ಕೋಟಿ ಜನಸಂಖ್ಯೆಯಲ್ಲಿ 23 ಕೋಟಿ ಜನರು ಪರಿಶಿಷ್ಟ ಜಾತಿ ಮತ್ತು ಪಂಗಡದವರು)

ಇವೆಲ್ಲವನ್ನು ನೋಡಿದಾಗ, ಅಂಬೇಡ್ಕರ್ ಅವರು ಸಂವಿಧಾನದ ಪ್ರಧಾನ ಶಿಲ್ಪಿ ಎಂದು, “ವಿಶಾಲ ದೃಷ್ಟಿಯನ್ನು ಹೊಂದಿದವರು” ಮತ್ತು ದಾಖಲೆಯ “ಪ್ರತಿಯೊಂದು ಭಾಗವನ್ನು” ಅಂತಿಮಗೊಳಿಸಲು ಮಾರ್ಗದರ್ಶನ ನೀಡಿದವರು ಎಂಬುದನ್ನು ಖಚಿತಪಡಿಸಿಕೊಳ್ಳಬಹುದು ಎನ್ನುತ್ತಾರೆ ಗೋಪಾಲ್.

‘ಅಂಬೇಡ್ಕರ್ ಅವರು ಸಾಂವಿಧಾನಿಕತೆಗೆ ಸಮರ್ಥ ಮಾರ್ಗದರ್ಶಕರಾಗಿದ್ದರು’ ಎಂದು ರಾಜೇಂದ್ರ ಪ್ರಸಾದ್ ವರ್ಷಗಳ ನಂತರ ಒಪ್ಪಿಕೊಂಡರು. ‘ಡಾ.ಅಂಬೇಡ್ಕರ್ ಅವರಿಗಿಂತ ಸಂವಿಧಾನದ ಬಗ್ಗೆ ಹೆಚ್ಚು ಕಾಳಜಿ ವಹಿಸಿದವರು ಯಾರೂ ಇಲ್ಲ’ ಎಂದು ಪ್ರಧಾನಿ ನೆಹರೂ ಅವರು ಡಿಸೆಂಬರ್ 6, 1956 ರಂದು ತಮ್ಮ 63ನೇ ವಯಸ್ಸಿನಲ್ಲಿ ಅಂಬೇಡ್ಕರ್ ನಿಧನರಾದ ಸಂದರ್ಭದಲ್ಲಿ ಹೇಳಿದರು.

ಏಳು ದಶಕಗಳ ನಂತರ, ಭಾರತದ ಶ್ರೇಷ್ಠ ಮತ್ತು ವೈವಿಧ್ಯಮಯ ಪ್ರಜಾಪ್ರಭುತ್ವವು ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಹೆಚ್ಚುತ್ತಿರುವ ಧ್ರುವೀಕರಣ ಮತ್ತು ಸಾಮಾಜಿಕ ಅಸಮಾನತೆಗಳು ಅದರ ಭವಿಷ್ಯದ ಬಗ್ಗೆ ಅನೇಕರನ್ನು ಚಿಂತಿಸುವಂತೆ ಮಾಡಿದೆ. ಸಂವಿಧಾನದ ಪರಿಷ್ಕೃತ ಕರಡನ್ನು ಪರಿಚಯಿಸುವಾಗ ಅಂಬೇಡ್ಕರ್ ಅವರು ಮಾಡಿದ ಮತ್ತೊಂದು ಅಂತಃಪ್ರಜ್ಞೆ ಭಾಷಣವನ್ನು ಅವರು ಎತ್ತಿ ತೋರಿಸುತ್ತಿದ್ದಾರೆ.

“ಭಾರತದಲ್ಲಿ ಅಲ್ಪಸಂಖ್ಯಾತರು ಬಹುಮತದ ಆಡಳಿತವನ್ನು ನಿಷ್ಠೆಯಿಂದ ಒಪ್ಪಿಕೊಂಡಿದ್ದಾರೆ. ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಮಾಡದ ಕರ್ತವ್ಯವನ್ನು ಈ ಬಹುಸಂಖ್ಯಾತರು ಭಾವಿಸಬೇಕು ಎಂದು ಹೇಳಿದ್ದರು.

ಸಿನಿಮಾ

ವರದಿ: ಅರುಣ್ ಜಿ.,

ಇಂದಿನ ವಿದ್ಯಾರ್ಥಿಗಳೆ ಮುಂದಿನ ಸತ್ ಪ್ರಜೆಗಳು ಎಂಬ ಮಾತಿದೆ. ಅದಕ್ಕೆ ಅನುಗುಣವಾಗಿ ಈಗಿನ ಶಿಕ್ಷಣ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳನ್ನು  ಕುರಿತಾದ ಕಥಾಹಂದರ ಹೊಂದಿರುವ “SCAM (1770)” ಚಿತ್ರ ಬರುತ್ತಿದೆ. 

ಡಿ.ಕ್ರಿಯೇಷನ್ಸ್ ಲಾಂಛನದಲ್ಲಿ ದೇವರಾಜ್ ಆರ್ ನಿರ್ಮಿಸಿರುವ,  ವಿಕಾಸ್ ಪುಷ್ಪಗಿರಿ ನಿರ್ದೇಶಿಸಿರುವ ಈ ಚಿತ್ರದ ಮೊದಲ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಯಿತು. ಬೆಂಗಳೂರು ನಗರದ ಆಟದ ಮೈದಾನವೊಂದರಲ್ಲಿ ಸುಮಾರು  20 ತಂಡಗಳು ಭಾಗವಹಿಸಿರುವ ಕ್ರಿಕೆಟ್ ಟೂರ್ನಮೆಂಟ್ ನಡೆಯುತ್ತಿದ್ದು. ಆ ತಂಡಗಳ ನಾಯಕರು (ವಿದ್ಯಾರ್ಥಿಗಳು) “SCAM (1770)” ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದರು.

ಇದೊಂದು ಪ್ರಸ್ತುತ ಶಿಕ್ಷಣ ವ್ಯವಸ್ಥೆ ಆಧಾರಿತ ಚಿತ್ರ. ಸತ್ಯ ಘಟನೆಗಳನ್ನು ಕಟ್ಟಿಕೊಂಡು ವಾಸ್ತವದಲ್ಲಿ ಏನೆನೆಲ್ಲಾ ನಡೆಯುತ್ತಿದೆ ಎಂಬ  ವಿಚಾರವನ್ನು ಇಟ್ಟುಕೊಂಡು ಮಾಡಿರುವ ಸಿನಿಮಾನೆ SCAM (1770) ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ಸಂಸ್ಥೆ ನಡೆಸುತ್ತಿರುವವರು ನೋಡಲೇ ಬೇಕಾದ ಚಿತ್ರವಿದು ಎಂದು ನಿರ್ದೇಶಕ ವಿಕಾಸ್ ಪುಷ್ಪಗಿರಿ ತಿಳಿಸಿದ್ದಾರೆ. 

ಡಿ.ಕ್ರಿಯೇಷನ್ಸ್ ಇತ್ತೀಚೆಗೆ ಆಕ್ಟ್-1978 ಮತ್ತು 19.20.21 ಎಂಬ ಸದಭಿರುಚಿ ಚಿತ್ರಗಳನ್ನು ನೀಡಿದ್ದು,  ದೇವರಾಜ್ ಆರ್ ಅವರ ನಿರ್ಮಾಣದ ಈ ಚಿತ್ರಕ್ಕೆ ಡಾ.ಇಂದು ನಟೇಶ್ ಹಾಗೂ ನೇತ್ರಾವತಿ (ಅಡ್ವೊಕೇಟ್) ಕಥೆ ಬರೆದಿದ್ದಾರೆ. ಚಿತ್ರ ಕಥೆಯನ್ನು ಶಂಕರ್ ರಾಮನ್ ಹಾಗೂ ವಿಕಾಸ್ ಪುಷ್ಪಗಿರಿ ಬರೆದಿದ್ದಾರೆ. ಸಂಭಾಷಣೆ ಶಂಕರ್ ರಾಮನ್ ಅವರದು. ಸತೀಶ್ ಆರ್ಯನ್ ಸಂಗೀತ ನಿರ್ದೇಶನ. ಶೋಯೆಬ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಕಲೈ – ರಾಮು ನೃತ್ಯ ನಿರ್ದೇಶನ ಹಾಗೂ ಚಂದ್ರು ಬಂಡೆ ಸಾಹಸ ನಿರ್ದೇಶನವಿದೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದ ಖ್ಯಾತಿಯ ರಂಜನ್ (ದಡ್ಡ ಪ್ರವೀಣ), ಬಿ.ಸುರೇಶ್, ಅವಿನಾಶ್, ಶ್ರೀನಿವಾಸಪ್ರಭು, ರಮೇಶ್ ಪಂಡಿತ್, ರಾಘು ಶಿವಮೊಗ್ಗ, ನಾರಾಯಣ ಸ್ವಾಮಿ, ಉಗ್ರಂ ಸಂದೀಪ್, ಹರಿಣಿ, ಹಂಸ, ಸುನೇತ್ರ ಪಂಡಿತ್, ಶೃತಿ ನಾಯಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. 

ಈಗಾಗಲೇ “SCAM (1770)” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಸದ್ಯದಲ್ಲೇ ಪ್ರಥಮ ಪ್ರತಿ ಸಿದ್ದವಾಗಲಿದೆ.

ಏಪ್ರಿಲ್ 15 ಕ್ಕೆ ಈ ಸಿನಿಮಾದ ಟೀಸರ್ ಬಿಡುಗಡೆಯಾಗಲಿದೆ.

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಬಹು ನಿರೀಕ್ಷಿತ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ನೆನ್ನೆ ರಾತ್ರಿ 9 ಗಂಟೆಯ ವೇಳೆಗೆ ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯದ 189 ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ಪಟ್ಟಿಯಲ್ಲಿ 52 ಹೊಸ ತಲೆಮಾರಿನ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗಿದೆ. ಮತ್ತು 9 ವೈದ್ಯರಿಗೆ, ನಿವೃತ್ತ ಐಎಸ್ಎಸ್, ಐಪಿಎಸ್ ಗಳಿಗೆ ಟಿಕೆಟ್ ನೀಡಲಾಗಿದೆ. 32 ಒಬಿಸಿಗಳಿಗೆ ಟಿಕೆಟ್ ನೀಡಲಾಗಿದೆ  ಎಂಬ ಸುಳಿವನ್ನು ಸುದ್ದಿಗೋಷ್ಠಿಯಲ್ಲಿ ನೀಡಿದರು. ಇತ್ತೀಚೆಗಷ್ಟೇ ಆಮ್ ಆದ್ಮಿ ಪಕ್ಷ ತೊರೆದು ಬಿಜೆಪಿ ಸೇರಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಗೆ ಟಿಕೆಟ್ ಘೋಷಿಸಲಾಗಿದೆ.

ಬೆಂಗಳೂರಿನ ಯಲಹಂಕ-ಎಸ್.ಆರ್.ವಿಶ್ವನಾಥ್, ಕೆ.ಆರ್.ಪುರ-ಬಿ.ಎ.ಬಸವರಾಜ, ಬ್ಯಾಟರಾಯನಪುರ-ತಮ್ಮೇಶ್ ಗೌಡ, ಯಶವಂತಪುರ-ಎಸ್.ಟಿ.ಸೋಮಶೇಖರ್, ರಾಜರಾಜೇಶ್ವರಿನಗರ-ಮುನಿರತ್ನ ನಾಯ್ಡು, ದಾಸರಹಳ್ಳಿ-ಎಸ್.ಮುನಿರಾಜು, ಮಹಾಲಕ್ಷ್ಮಿ ಲೇಔಟ್-ಕೆ.ಗೋಪಾಲಯ್ಯ, ಮಲ್ಲೇಶ್ವರಂ-ಡಾ.ಸಿ.ಎಸ್.ಅಶ್ವಥ್ ನಾರಾಯಣ್, ಪುಲಕೇಶಿನಗರ (ಎಸ್.ಸಿ) ಮುರಳಿ, ಸರ್ವಜ್ಞನಗರ-ಪದ್ಮನಾಭರೆಡ್ಡಿ, ಸಿ.ವಿ.ರಾಮನ್ ನಗರ (ಎಸ್.ಸಿ) ಎಸ್.ರಘು, ಶಿವಾಜಿನಗರ-ಎನ್.ಚಂದ್ರ, ಶಾಂತಿನಗರ-ಶಿವಕುಮಾರ್, ಗಾಂಧಿನಗರ-ಎ.ಅರ್.ಸಪ್ತಗಿರಿ ಗೌಡ, ರಾಜಾಜಿನಗರ-ಎಸ್.ಸುರೇಶ್ ಕುಮಾರ್, ವಿಜಯನಗರ-ಹೆಚ್.ರವೀಂದ್ರ, ಚಾಮರಾಜಪೇಟೆ-ಭಾಸ್ಕರ್ ರಾವ್ (ನಿವೃತ್ತಿ), ಚಿಕ್ಕಪೇಟೆ-ಉದಯ್ ಗರುಡಾಚಾರ್, ಬಸವನಗುಡಿ-ರವಿ ಸುಬ್ರಮಣ್ಯ, ಪದ್ಮನಾಭನಗರ-ಆರ್.ಅಶೋಕ್, ಬಿಟಿಎಂ ಲೇಔಟ್-ಶ್ರೀಧರ್ ರೆಡ್ಡಿ, ಜಯನಗರ-ಸಿ.ಕೆ.ರಾಮಮೂರ್ತಿ, ಬೊಮ್ಮನಹಳ್ಳಿ-ಸತೀಶ್ ರೆಡ್ಡಿ, ಬೆಂಗಳೂರು ದಕ್ಷಿಣ-ಎಂ.ಕೃಷ್ಣಪ್ಪ ಮುಂತಾದವರಿಗೆ ಮೊದಲ ಪಟ್ಟಿಯಲ್ಲೇ ಹೆಸರನ್ನು ಘೋಷಿಸಲಾಗಿದೆ.

ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಮಯ್ಯ

ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಪದ್ಮನಾಭನಗರ ಕ್ಷೇತ್ರದೊಂದಿಗೆ ಕನಕಪುರ ಕ್ಷೇತ್ರವನ್ನೂ ನೀಡಲಾಗಿದೆ. ಇದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕ್ಷೇತ್ರ, ಅದೇ ರೀತಿ ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಚಾಮರಾಜನಗರ ಕ್ಷೇತ್ರದೊಂದಿಗೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸ್ಪರ್ದಿಸಲಿರುವ ವರುಣ ಕ್ಷೇತ್ರವನ್ನೂ ನೀಡಲಾಗಿದೆ. 

ಆರ್.ಅಶೋಕ್ ಮತ್ತು ವಿ.ಸೋಮಣ್ಣ

52 ಹೊಸ ತಲೆಮಾರಿಗೆ ಟಿಕೆಟ್ ನೀಡಲಾಗಿದೆ. ಅದೇ ಸಂದರ್ಭದಲ್ಲಿ ಪಕ್ಷ ಕಟ್ಟಿದ ಹಿರಿಯರನ್ನು ಕೈಬಿಡಲಾಗಿದೆ. ಆರ್.ಅಶೋಕ್ ಅವರನ್ನು ಡಿ.ಕೆ.ಶಿವಕುಮಾರ್ ವಿರುದ್ಧ ಹಾಗೂ ವಿ.ಸೋಮಣ್ಣ ಅವರನ್ನು ಸಿದ್ದರಾಮಯ್ಯನವರ ವಿರುದ್ಧ ಎತ್ತಿಕಟ್ಟಲಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂಬುದು ಜನರ ಅಭಿಪ್ರಾಯವಾಗಿದೆ. ‘ಬಿಜೆಪಿಗೆ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರನ್ನು ಕಂಡರೆ ಭಯ’ ಎಂಬುದನ್ನೇ ಇದು ಎತ್ತಿ ತೋರಿಸುತ್ತಿದೆ. ಕನಕಪುರ ಮತ್ತು ವರುಣ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲ್ಲುವ ವಿಶ್ವಾಸ ಇದ್ದರೆ ಆರ್.ಅಶೋಕ್ ಹಾಗೂ ವಿ.ಸೋಮಣ್ಣ ಅವರನ್ನು ಎರಡೆರಡುಕಡೆ ನಿಲ್ಲಿಸದೇ ನೇರವಾಗಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯನ ವಿರುದ್ಧ ಸ್ಪರ್ದಿಸುವಂತೆ ಮಾಡಬಹುದಿತ್ತು. ಆಗ ಬಿಜೆಪಿಯ ಗೆತ್ತನ್ನು ಎಲ್ಲರೂ ಕೊಂಡಾಡಿರುತ್ತಾರೆ.

ಜಗದೀಶ್ ಶೆಟ್ಟರ್

ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ಓಟಕ್ಕೆ ಕಡಿವಾಣ ಹಾಕಲಿಕ್ಕಾಗಿ ಅಥವಾ ಅವರನ್ನು ಡಿಸ್ಟರ್ಬ್ ಮಾಡಲಿಕ್ಕಾಗಿ ಅಥವಾ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲಿಕ್ಕಾಗಿ ಬಿಜೆಪಿ ಈ ತಂತ್ರವನ್ನು ಅನುಸರಿಸಿದೆ ಎಂದು ಹೇಳಿಕೊಂಡಾರೂ ‘ಈ ಎರಡೂ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಅನುಕೂಲ ಮಾಡಲಿಕ್ಕಾಗಿಯೇ ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡು ಈ ರೀತಿಯ ತಂತ್ರವನ್ನು ಅನುಸರಿಸುತ್ತಿದೆ ಎಂದು ಕಾಂಗ್ರೆಸ್ ಪ್ರಚಾರವನ್ನು ಕೈಗೆತ್ತಿಕೊಂಡರೆ, ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯ ಜೊತೆಗೆ ಜೆಡಿಎಸ್ ಗೂ ಹೆಚ್ಚಿನ ರೀತಿಯಲ್ಲಿ ಹಾನಿಯಾಗುತ್ತದೆ. ಮತ್ತು ಆರ್.ಅಶೋಕ್ ಹಾಗೂ ವಿ.ಸೋಮಣ್ಣ ಅವರನ್ನು ಎರಡೆರಡು ಕಡೆ ಅಲೆದಾಡಿಸಿ ಸೋಲಿಸುವಂತೆ ಮಾಡಲು ಬಿಜೆಪಿ ಪಕ್ಷ ಏನಾದರೂ ಕುತಂತ್ರ ಮಾಡಿದೆಯೇ ಎಂಬುದನ್ನು ಮೇ 13 ರಂದು ಬರುವ ಫಲಿತಾಂಶವೇ ಹೇಳಬೇಕು. ಆರ್.ಆಶೋಕ್ ನೆನ್ನೆ ಸುದ್ದಿಗಾರರೊಂದಿಗೆ ಮಾತನಾಡುವಾಗ, “ನಾನು ಪಕ್ಷದ ಶಿಸ್ತಿನ ಸಿಪಾಯಿ; ಪಕ್ಷ ಸೂಚಿಸುವುದನ್ನು ಪಾಲಿಸುತ್ತೇನೆ” ಎಂದರು. ಆದರೆ, ವಿ.ಸೋಮಣ್ಣ ಪಾಳಯದಲ್ಲಿ ಅಸಮಧಾನವಿದೆ.

ಲಕ್ಷ್ಮಣ ಸವದಿ

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ, ಮಾಜಿ ಸಚಿವ ಆರ್.ಶಂಕರ್, ಮಾಜಿ ಮೀನುಗಾರಿಕೆ ಸಚಿವ ಎಸ್.ಅಂಗಾರ, ಶಾಸಕರುಗಳಾದ ಸಂಜೀವ್ ಮಠಂದೂರು, ಲಾಲಾಜಿ ಮೆಂಡನ್, ರಘುಪತಿ ಭಟ್, ಗೂಳಿಹಟ್ಟಿ ಶೇಖರ್, ಅನಿಲ್ ಬೆನಕ, ಮಹದೇವಪ್ಪ ಯಾದವಾಡ, ರಾಮಪ್ಪ ಲಮಾಣಿ ಮುಂತಾದವರಿಗೆ ಟಿಕೆಟ್ ಕೈತಪ್ಪಿಸಲಾಗಿದೆ. ಇವರೆಲ್ಲರ ಬಂಡಾಯವನ್ನು ಬಿಜೆಪಿ ಹೇಗೆ ಸರಿಮಾಡುತ್ತದೆ ಎಂಬುದು ಕುತೂಹಲ. ಮತ್ತು ಬಿಜೆಪಿಯ ಬಂಡಾಯವನ್ನು ವಿರೋಧ ಪಕ್ಷಗಳು ಯಾವ ರೀತಿ ಬಳಕೆ ಮಾಡಿಕೊಳ್ಳುತ್ತದೆ ಎಂಬುದನ್ನು ಕಾದು ನೋಡೋಣ. Karnataka assembly elections: BJP’s first list has 8 women, 52 new faces, 8 social activists. In this list, tickets have been given to Lingayat-51, Vokkalinga-41, Kuruba-7, SC-30, ST-16 and 32 from the OBC community.

ರಾಜಕೀಯ

“ಬಿಜೆಪಿಯ ಸಂಸದೀಯ ಮಂಡಳಿಯ ಸದಸ್ಯರಾಗಿದ್ದರೂ ಟಿಕೆಟ್ ವಿಚಾರವಾಗಿ ಬಿ.ಎಸ್.ಯಡಿಯೂರಪ್ಪ ಅವರನ್ನು ಹೊರಗಿಟ್ಟು ಸಭೆ ನಡೆಸಲಾಗಿದೆ. ರಾಜ್ಯದಲ್ಲಿ ಪಕ್ಷ ಕಟ್ಟಿಬೆಳೆಸಿದ ನಾಯಕನ ದುಸ್ಥಿತಿಯಿದು. ಬಳಸಿ ಎಸೆಯುವುದು ಬಿಜೆಪಿಯ ಜನ್ಮಸಿದ್ದ ಹಕ್ಕು. ವಿಶ್ವದ ಅತ್ಯಂತ ದೊಡ್ಡ ಪಕ್ಷ ಎಂದು ಕೊಚ್ಚಿಕೊಳ್ಳುವ ಕರ್ನಾಟಕ ಬಿಜೆಪಿ ಟಿಕೆಟ್ ಘೋಷಣೆ ಮಾಡದೆ ದಿನ ದೂಡುತ್ತಿವೆ.

ರೌಡಿಗಳನ್ನು ಸೆಳೆಯುವ ಪಕ್ಷವು, ತನ್ನನ್ನು ಕಟ್ಟಿ ಬೆಳೆಸಿದ ನಾಯಕನನ್ನು ಮೂಲೆಗುಂಪು ಮಾಡಲು ನಾಟಕವಾಡುತ್ತಿದೆ. ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದಂತೆ ಪೇಶ್ವೆಗಳನ್ನು ಮುನ್ನೆಲೆಗೆ ತರಲು ವೇದಿಕೆ ತಯಾರಾಗುತ್ತಿದೆ. ಹೀಗಾಗಿಯೆ ಕರ್ನಾಟಕ ಬಿಜೆಪಿ ತನ್ನ ಟಿಕೆಟ್ ಘೋಷಣೆಗೆ ಮೀನಮೇಷ ಎಣಿಸುತ್ತಿದೆ.

ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ ಎಂದು ತೀರ್ಮಾನಿಸಲು ನಡೆಸಿದ ಸಭೆಯ ಮುಖ್ಯ ಸೂತ್ರದಾರ ಅಮಿತ್ ಶಾ ತನ್ನ ಮಗನಿಗೆ ಆಯಕಟ್ಟಿನ ಜಾಗ ನೀಡಿದವರು ಎನ್ನುವುದೆ ಪರಿಸ್ಥಿತಿಯ ವ್ಯಂಗ್ಯ. ಎಲ್ಲಾ ಸಮುದಾಯಗಳ ಕೋಪಕ್ಕೆ ಗುರಿಯಾಗಿರುವ BJP ಈ ಬಾರಿ ತಿಪ್ಪರಲಾಗ ಹಾಕಿದರೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಜೆಡಿಎಸ್ ಟ್ವೀಟ್ ಮಾಡಿದೆ. BJP’s list of candidates delayed again, Yediyurappa returns to Bengaluru

ರಾಜಕೀಯ

ಶಿವಮೊಗ್ಗ:ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಪಕ್ಷದ ಟಿಕೆಟ್ ಪಟ್ಟಿ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಪಕ್ಷದ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿರುವ ಅವರು, “ನಾನು ಸ್ವ– ಇಚ್ಛೆಯಿಂದ ಚುನಾವಣಾ ರಾಜಕೀಯದಿಂದ ನಿವೃತ್ತನಾಗಲು ಬಯಸಿದ್ದೇನೆ. ಹಾಗಾಗಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನನ್ನ ಹೆಸರನ್ನು ಯಾವುದೇ ಕ್ಷೇತ್ರಕ್ಕೆ ಪರಿಗಣಿಸಬಾರದು ಎಂದು ವಿನಂತಿಸುತ್ತೇನೆ” ಎಂದಿದ್ದಾರೆ.

“ಕಳೆದ 40ಕ್ಕೂ ಹೆಚ್ಚು ವರ್ಷದ ರಾಜಕೀಯ ಜೀವನದಲ್ಲಿ ಬೂತ್ ಮಟ್ಟದಿಂದ ರಾಜ್ಯ ಉಪ–ಮುಖ್ಯಮಂತ್ರಿಯವರೆಗೆ ಗೌರವದ ಸ್ಥಾನಮಾನಗಳನ್ನು ನೀಡಿದ ಪಕ್ಷದ ಹಿರಿಯರಿಗೆ ಧನ್ಯವಾದ ಸಲ್ಲಿಸುತ್ತೇನೆ” ಎಂದಿದ್ದಾರೆ.

“ಬಿಜೆಪಿ ಕಡೆಯಿಂದ ಅಭ್ಯರ್ಥಿಗಳ ಪಟ್ಟಿ ಹೊರಬರುವ ಬದಲು ರಾಜಕೀಯ ನಿವೃತ್ತಿ ಪಡೆಯುವವರ ಪಟ್ಟಿ ಹೊರಬರುತ್ತಿವೆ! ಟಿಕೆಟ್ ಘೋಷಣೆಯಾಗುವ ಬದಲು ವಿಕೆಟ್ ಬೀಳುತ್ತಿವೆ! ಮಂತ್ರಿಗಿರಿಗಾಗಿ ಲಾಭಿ ಮಾಡಿ ಸುಸ್ತಾದ ಕೆ.ಎಸ್.ಈಶ್ವರಪ್ಪ ಈಗ ಟಿಕೆಟ್‌ಗೂ ಲಾಭಿ ನಡೆಸಿ ಸುಸ್ತಾದರು. ಬಿಜೆಪಿಯ ಅವಮಾನ ಸಹಿಸದೆ ರಾಜಕೀಯದಿಂದಲೇ ಪಲಾಯನ ಮಾಡಿದರು” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. “I am withdrawing from electoral politics,” KS Eshwarappa said in a letter to BJP president JP Nadda.

ರಾಜಕೀಯ

ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೂ ಮೊದಲೇ ಬಿಜೆಪಿ ಕಛೇರಿಗೆ ಬಿಗಿ ಪೊಲೀಸ್ ಭದ್ರತೆ ಮಾಡಿರುವುದರ ಬಗ್ಗೆ ಜೆಡಿಎಸ್ ವ್ಯಂಗ್ಯವಾಡಿದೆ!

ಇದರ ಬಗ್ಗೆ ಟ್ವೀಟ್ ಮಾಡಿರುವ ಜೆಡಿಎಸ್ “ಈ ವರೆಗೂ ಬಿಜೆಪಿ ಯಾಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ ಎಂಬುವುದಕ್ಕೆ ಸಾಕ್ಷಿ ಸಿಕ್ಕಿದೆ. ‘ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೂ ಮೊದಲು ಕಚೇರಿಗೆ ಬಿಗಿ ಭದ್ರತೆ ಮಾಡಲಾಗಿದೆ’ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಧಿಕಾರ ಉಳಿಸಲು ರೌಡಿಗಳನ್ನು, ಕ್ರಿಮಿನಲ್ ಗಳನ್ನು ಸಾಕಿಕೊಂಡಿದ್ದ ಬಿಜೆಪಿಗೆ ಅದುವೆ ತಲೆ ನೋವಾಗಿ ಪರಿಣಮಿಸಿದೆ.

Prime Minister Narendra Modi with Rowdy Sheeter Mallikarjuna alias Fighter Ravi

ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಲ್ಲದೆ, ಪ್ರಧಾನಿ ನರೇಂದ್ರ ಮೋದಿ ರೌಡಿಯೊಬ್ಬನಿಗೆ ಕೈಮುಗಿದಿದ್ದರು. ಇದೀಗ ಅವರ ಹೆಸರು ಹೇಳಿ ರೌಡಿಗಳು ಕೂಡಾ ಟಿಕೆಟ್ ಕೇಳುತ್ತಿರಬಹುದು. ಮೊದಲೆ ಕ್ರಿಮಿನಲ್ ಗಳ ಪಕ್ಷ, ಇದೀಗ ಹೊಸ ಕ್ರಿಮಿನಲ್ ಗಳ ಸೇರ್ಪಡೆಯಿಂದಾಗಿ, ಟಿಕೆಟ್ ಸಿಗದ ರೌಡಿಗಳ ಭಯದಿಂದ ಕಚೇರಿಗೆ ಬಿಗಿ ಭದ್ರತೆ ಮಾಡಿರಬಹುದು.

ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಕ್ಕೂ ಮುನ್ನ ಪಕ್ಷದ ಕಚೇರಿಗೆ ನೂರಕ್ಕೂ ಹೆಚ್ಚು ಪೊಲೀಸರು ಇರುವ 2 KSRP ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ ಅಂದರೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಎಷ್ಟೊಂದು ಡೇಂಜರ್ಸ್ ಆಗಿರಬೇಕಲ್ಲವೇ” ಎಂದು ವ್ಯಂಗ್ಯವಾಡಿದೆ. Karnataka Congress says PM Modi made to fold hands before ‘rowdy sheeter’

ರಾಜ್ಯ

ಮಾವಿನ ಹಣ್ಣನ್ನು ತಿನ್ನಬೇಕೆನಿಸಿದರೂ ಅದು ಕಾರ್ಬನ್ ಮಾಗಿದ ಹಣ್ಣಾಗಿರಬುದೆಂಬ ಭಯವಿದೆಯೇ? ಚಿಂತಿಸಬೇಡಿ. ಕಾರ್ಬನ್ ಮಾಗಿದ ಮಾವಿನಹಣ್ಣುಗಳನ್ನು ಪತ್ತೆಹಚ್ಚಲು 3 ಮಾರ್ಗಗಳಿವೆ.

ಕಾರ್ಬನ್ ಮಾಗಿದ ಮಾವಿನ ಹಣ್ಣುಗಳನ್ನು ಪತ್ತೆಹಚ್ಚಲು ಆಹಾರ ಸುರಕ್ಷತಾ ಅಧಿಕಾರಿಗಳು ಹಲವಾರು ಸ್ಥಳಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಇದು ಒಳ್ಳೆಯ ಮಾವಿನ ಹಣ್ಣೋ ಅಥವಾ ಕಾರ್ಬನ್ ಮಾಗಿದ ಮಾವಿನ ಹಣ್ಣೋ ಎಂದು ತಿಳಿಯಲು ಇಲ್ಲಿ 3 ಸಲಹೆಗಳಿವೆ.

1. ರುಚಿ
ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣು ಮತ್ತು ಕೃತಕವಾಗಿ ಮಾಗಿದ ಮಾವಿನ ಹಣ್ಣುಗಳನ್ನು ಸುಲಭವಾಗಿ ಗುರುತಿಸಬಹುದು. ನೀವು ಕೃತಕವಾಗಿ ಮಾಗಿದ ಮಾವಿನ ಹಣ್ಣನ್ನು ತಿಂದ ನಂತರ, ನಿಮ್ಮ ನಾಲಿಗೆಯ ರುಚಿ ಮೊಗ್ಗುಗಳು ಸ್ವಲ್ಪ ಸುಡುವ ಸಂವೇದನೆಯನ್ನು ಅನುಭವಿಸುತ್ತವೆ. ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣನ್ನು ತಿಂದ ನಂತರ ಹಾಗಾಗಲ್ಲ. ಇದರಿಂದ ನೈಸರ್ಗಿಕವಾದ ಮಾವಿನ ಸಿಹಿಕಾರಕ ಮತ್ತು ಕೃತಕವಾಗಿ ಸಿಹಿಗೊಳಿಸಿದ ಮಾವಿನ ಹಣ್ಣಿನ ನಡುವೆ ಇರುವ ವ್ಯತ್ಯಾಸವನ್ನು ನೀವು ಸುಲಭವಾಗಿ ಗುರುತಿಸಬಹುದು.

2. ಜ್ಯೂಸ್
ಕೃತಕವಾಗಿ ಮಾಗಿದ ಮಾವಿನ ಹಣ್ಣಿನಲ್ಲಿ ರಸವಿರುವುದಿಲ್ಲ ಅಥವಾ ಒಳಗೆ ಸ್ವಲ್ಪವೇ ರಸವಿರುತ್ತದೆ. ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣಿನೊಳಗೆ ಸಾಕಷ್ಟು ರಸವಿರುತ್ತದೆ. ಇದು ಮಾವಿನ ಹಣ್ಣುಗಳನ್ನು ಪರೀಕ್ಷಿಸುವ ಮುಖ್ಯ ವಿಧಾನವಾಗಿರುತ್ತದೆ.

3. ಬಣ್ಣ
ಇಂಗಾಲದೊಂದಿಗೆ ಕೃತಕವಾಗಿ ಮಾಗಿದ ಮಾವು ತಿಳಿ ಮತ್ತು ಗಾಢ ಹಳದಿ ಮಿಶ್ರಿತ ಬಣ್ಣವನ್ನು ಹೊಂದಿರುತ್ತದೆ. ಮಾವು ಸಂಪೂರ್ಣವಾಗಿ ಹಣ್ಣಾಗಿಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಕೃತಕವಾಗಿ ಮಾಗಿದ ಮಾವಿನ ಹಣ್ಣುಗಳು ಹೊರಭಾಗದಲ್ಲಿ ಮಾಗಿದಂತೆ ಕಂಡರೂ ಒಳಭಾಗದಲ್ಲಿ ಕಾಯಾಗಿರುತ್ತದೆ. ಕಾರ್ಬನ್ ನಿಂದ ಮಾಗಿದ ಮಾವು ಕಣ್ಣಿಗೆ ಆಕರ್ಷಕವಾಗಿ ಕಾಣಿಸಬಹುದು. ಆದರೆ, ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಆಗಿರುತ್ತದೆ.

ರಾಜಕೀಯ

ವರದಿ: ರಾಮು ನೀರಮಾನ್ವಿ

ರಾಯಚೂರು: (ಮಾನ್ವಿ) ರಾಯಚೂರು ಜಿಲ್ಲೆಯಲ್ಲಿ ಬೇಸಿಗೆಯ ಬಿಸಿಲಿನಂತೆ ಬರುವ ವಿಧಾನ ಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದೇ ರೀತಿ ಪ್ರಮುಖ ಪಕ್ಷಗಳ ನಾಯಕರು, ಪಕ್ಷದ ಟಿಕೆಟ್ ಗಾಗಿ ಜಂಗಿ ಕುಸ್ತಿಗೆ ಇಳಿದಿದ್ದಾರೆ. ಎಲ್ಲರೂ, ‘ನಾನೇನು ಕಡಿಮೆಯಿಲ್ಲ; ನಾನೂ ಒಂದು ಕೈ ನೋಡುತ್ತೇನೆ’ ಎನ್ನುವ ಅಹಂನಲ್ಲಿದ್ದಾರೆ. ಕಾಂಗ್ರೆಸ್ ನ ಮೊದಲನೆಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಯಿತು. ಆದರೆ, ಯಾವುದೇ ಭಿನ್ನಮತ ಕಾಣಿಸಿಕೊಂಡಿಲ್ಲ. ಆದರೆ, ಎರಡನೆಯ ಪಟ್ಟಿ ಬಿಡುಗಡೆ ಅಗಿದ್ದೇ ಅಗಿದ್ದು, ಕಾಂಗ್ರೆಸ್ ನಲ್ಲಿ ಭಿನ್ನಮತ ಮುಗಿಲೆತ್ತರಕ್ಕೆ ಜಿಗಿದಿದೆ. ಇದರಿಂದ ಪಕ್ಷದ ಹೈ ಕಮಾಂಡ್ ಗೆ ತಲೆಬಿಸಿ ಆದಂತಿದೆ. ರಾಜ್ಯದ ಕಾಂಗ್ರೆಸ್ ನಾಯಕರು ಭಿನ್ನಮತ ಶಮನ ಮಾಡಲು ಹರಸಾಹಸ ಪಡುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ, ಲಿಂಗಸುಗೂರು, ಮಸ್ಕಿ, ಸಿಂಧನೂರು, ಮಾನ್ವಿ, ರಾಯಚೂರು ನಗರ, ರಾಯಚೂರು (ಗ್ರಾಮೀಣ) ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಬಹಳ ದೊಡ್ಡದಿದೆ. ಮಾನ್ವಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು 1) ಹಂಪಯ್ಯ ನಾಯಕ, 2) ಶರಣಯ್ಯ ನಾಯಕ, 3) ವಸಂತ ನಾಯಕ, 4)ಲಕ್ಷ್ಮಿ ದೇವಿ ನಾಯಕ, 5) ಡಾ.ತನುಶ್ರೀ, 6) ದೇವದುರ್ಗದ ಬಿ.ವಿ.ನಾಯಕ ಇಷ್ಟು ಜನರು ಟಿಕೆಟ್ ಗಾಗಿ ಶತಃ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ರಾಜ ವೆಂಕಟಪ್ಪ ನಾಯಕ

ಇದು ಹೈ ಕಮಾಂಡ್ ಗೆ ದೊಡ್ಡ ತಲೆನೋವಾಗಿದೆ. ಹಂಪಯ್ಯ ನಾಯಕ ಮತ್ತು ಶರಣಯ್ಯ ನಾಯಕರ ಮದ್ಯೆ ಟಿಕೆಟ್ ಗೆ ಪೈಪೋಟಿ ನಡೆಯುತ್ತಿರುವ ಹಿನ್ನಲೆಯಲ್ಲೇ ಪಕ್ಕದ ದೇವದುರ್ಗದ ಬಿ.ವಿ.ನಾಯಕರಿಗೆ ಟಿಕೆಟ್ ಖಚಿತವಾಯಿತು ಎಂಬ ಸುದ್ಧಿ ಹೊರಬಿದ್ದಿದೆ. ಇದರಿಂದ ಕೆರಳಿ ಕೆಂಡವಾದ ಮಾನ್ವಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು, ತಮ್ಮ ಹಿಂಬಾಲಕರ ಸಭೆ ಕರೆದು ಬಿ.ವಿ.ನಾಯಕರ ವಿರುದ್ಧ ಬಹಿರಂಗವಾಗಿ ಕೆಂಡ ಕಾರಿದ್ದಾರೆ. ಬೇರೆ ತಾಲೂಕಿನವರಿಗೆ ಟಿಕೆಟ್ ಕೊಟ್ಟರೆ ಸ್ಥಳೀಯ ನಾಯಕರು ಗಡ್ಡ ಬಿಟ್ಟು ಗುಡ್ಡ ಸೇರಬೇಕಾ..? ಎಂದು ಗುಡುಗು ಹಾಕಿದ್ದಾರೆ. ಅದೇ ಸಮಯದಲ್ಲಿ ಕೆಲವೊಂದು ಕಾರ್ಯಕರ್ತರು ‘ನಾವು ಹಂಪಯ್ಯ ನಾಯಕ, ಬಿ.ವಿ.ನಾಯಕರ ರಾಜಕೀಯ ನೋಡಿದ್ದೇವೆ, ಇವರು ಅಧಿಕಾರ ಇಲ್ಲದಾಗ ಒಂದು ರೀತಿ, ಅಧಿಕಾರ ಸಿಕ್ಕಾಗ ಕಾರ್ಯಕರ್ತರನ್ನು ನಡೆಸಿಕೊಳ್ಳುವುದು ಒಂದು ರೀತಿಯಾಗಿದೆ. ಇವರಿಗೆ ಅಧಿಕಾರ ಸಿಕ್ಕಾಗ ಕಾರ್ಯಕರ್ತರನ್ನು  ಕ್ಯಾರೆ ಅನ್ನುವುದಿಲ್ಲ ಎಂದು ಕಿಡಿಕಾರಿದ್ದಾರೆ. ಇದರ ಫಲವಾಗಿಯೇ 2018ರ ಚುನಾವಣೆಯಲ್ಲಿ ಹಂಪಯ್ಯ ನಾಯಕ ಸೋತು ನಾಲ್ಕನೇ ಸ್ಥಾನಕ್ಕೆ ಹೋಗಿದ್ದು ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಹಂಪಯ್ಯ ನಾಯಕ ಹಾಗೂ ಬಿ.ವಿ.ನಾಯಕ ಇವರಿಬ್ಬರೂ ಬೇಡ, ಇವರಿಬ್ಬರ ರಾಜಕೀಯ ನೋಡಿ ಬೇಸತ್ತಿದ್ದೇವೆ. ಬೇರೆ ಹೊಸ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರು.

ಬಿ.ವಿ.ನಾಯಕ

ಇನ್ನೊಂದು ಕಡೆ ಹಂಪಯ್ಯ ನಾಯಕರಿಗೆ ಟಿಕೆಟ್ ಸಿಕ್ಕರೆ, ಡಾ.ತನುಶ್ರೀ ಪಕ್ಷೇತರರಾಗಿ ಸ್ಪರ್ಧಿಸುವುದು ನಿಶ್ಚಿತ. ಹೀಗಿರುವಾಗ ಮತಗಳು ದೃವೀಕರಣವಾಗಿ, ಇಬ್ಬಾಗವಾಗುತ್ತದೆ. ಇದರಿಂದ ಮತ್ತೆ ಜನತಾದಳದ ರಾಜ ವೆಂಕಟಪ್ಪ ನಾಯಕ ಗೆಲ್ಲುವುದು ಸುಲುಭವಾಗುತ್ತದೆ. ಈಗಿನ ಸಂದರ್ಭ ಬೇರೆಯಾದರೂ ಡಾ.ತನುಶ್ರೀ ಪಕ್ಷೇತರರಾಗಿ ಸ್ಪರ್ದಿಸಿದರೆ ಕನಿಷ್ಟ 20 ರಿಂದ 25 ಸಾವಿರ ಮತ ಪಡೆಯುತ್ತಾರೆಂಬ ಲೆಕ್ಕಾಚಾರವಿದೆ. ಹೀಗಿರುವಾಗ ಹಂಪಯ್ಯ ನಾಯಕ ಹಾಗೂ ಶರಣಯ್ಯ ನಾಯಕರ ಗೆಲುವು ಅಷ್ಟು ಸುಲಭವಲ್ಲದ ಮಾತು ಎಂದು ತಾಲ್ಲೂಕು ತುಂಬ ಸುದ್ದಿ ಆಗಿದೆ. ವಲಸಿಗರಾದ ಬಿ.ವಿ.ನಾಯಕರಿಗೆ ಟಿಕೆಟ್ ಕೊಟ್ಟರೆ, ಕಾರ್ಯಕರ್ತರು ಬೇರೆ ಪಕ್ಷಕ್ಕೆ ವಲಸೆ ಹೋಗುತ್ತೆವೆ ಅನ್ನುವ ಸುದ್ದಿ ಗುಟ್ಟಾಗಿ ಉಳಿದಿಲ್ಲ.

ಭಿನ್ನಮತ ಶಮನವಾಗುವುದು ಕನಸಿನ ಮಾತಾಗಿದೆ. ಟಿಕೆಟ್ ವಿಷಯ ಬಹಳ ಶೂಕ್ಷ್ಮವಾಗಿದೆ. ಪಕ್ಷದ ಹೈಕಮಂಡ್ ಸೂಕ್ತ ನಿರ್ದಾರ ತೆಗೆದುಕೊಂಡು ಎಲ್ಲಾ ಕಾರ್ಯಕರ್ತರು ಒಪ್ಪುವಂತ ಸ್ಥಳೀಯ ನಾಯಕರಿಗೆ ಟಿಕೆಟ್ ಕೊಟ್ಟರೆ ನಾವು ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷದ ಅಭ್ಯರ್ತಿಯನ್ನು ಗೆಲ್ಲಿಸುತ್ತೇವೆ ಎಂಬುದು ಪಕ್ಷದ ನಿಷ್ಟಾವಂತರ ಕೂಗಾಗಿದೆ.