ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಪುರಿ Archives » Dynamic Leader
October 23, 2024
Home Posts tagged ಪುರಿ
ರಾಜಕೀಯ

ದೇಶಾದ್ಯಂತ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, 5 ಹಂತಗಳು ಪೂರ್ಣಗೊಂಡಿವೆ. ಈ ಸನ್ನಿವೇಶದಲ್ಲಿ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಪಕ್ಷಗಳು ಉಳಿದ ಕ್ಷೇತ್ರಗಳಿಗೆ ಪ್ರಚಾರ ನಡೆಸುತ್ತಿವೆ. ಆ ನಿಟ್ಟಿನಲ್ಲಿ 6ನೇ ಹಂತದ ಚುನಾವಣೆ ನಡೆಯುವ ಕ್ಷೇತ್ರ ಒಡಿಶಾದ ಪುರಿ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ನಿನ್ನೆ ರೋಡ್ ಶೋ ನಡೆಸಿದರು.

ಇದರಲ್ಲಿ ಪುರಿ ಬಿಜೆಪಿ ಅಭ್ಯರ್ಥಿ ಸಂಬಿತ್ ಪಾತ್ರ ಕೂಡ ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಮಾಧ್ಯಮದವೊರೊಂದಿಗೆ ಮಾತನಡಿದ ಅವರು, “ಪ್ರಧಾನಿ ಮೋದಿ ಅವರನ್ನು ನೋಡಲು ಲಕ್ಷಾಂತರ ಜನರು ಇಲ್ಲಿ ಜಮಾಯಿಸಿದ್ದಾರೆ. ಮಹಾಪ್ರಭು ಜಗನ್ನಾಥ ದೇವರು ಮೋದಿ ಅವರ ಭಕ್ತ. ನಾವೆಲ್ಲರೂ ಅವರ ಆಗಮನಕ್ಕಾಗಿ ಕಾಯುತ್ತಿದ್ದೇವೆ. ನನ್ನಿಂದ ನನ್ನ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಒಡಿಶಾದ ಜನರಿಗೆ ಇದು ಅದ್ಭುತ ದಿನವಾಗಿದೆ” ಎಂದರು.

ಆ ದೇವರೇ ಮೋದಿ ಭಕ್ತ ಎಂದ ಬಿಜೆಪಿ ಅಭ್ಯರ್ಥಿಗೆ ಟೀಕೆಗಳ ಮಹಾಪೂರವೇ ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ, ಬಿಜೆಪಿ ದೇವರಿಗೆ ಅವಮಾನ ಮಾಡುತ್ತಿರುವುದು ಇದೇ ಮೊದಲಲ್ಲ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷೆ ಸುಪ್ರಿಯಾ ಶ್ರೀನಾಟೆ ಪಟ್ಟಿ ಮಾಡಿ ಟೀಕಿಸಿದ್ದಾರೆ. ಈ ಬಗ್ಗೆ ಅವರು ನೀಡಿರುವ ಸಂದರ್ಶನ ಹೀಗಿದೆ:

ಬಿಜೆಪಿ ದೇವರಿಗೆ ಅವಮಾನ ಮಾಡಿದ್ದು ಇದೇ ಮೊದಲಲ್ಲ!
ರಾಮ ಮಂದಿರದ ಉದ್ಘಾಟನಾ ಸಮಾರಂಭದ ವೇಳೆ, ಮಗುವಿನ ರೂಪದಲ್ಲಿದ್ದ ಭಗವಾನ್ ಶ್ರೀರಾಮನನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೈಯಿಂದ ಹಿಡಿದುಕೊಂಡು ಹೋಗುತ್ತಿರುವ ಛಾಯಾಚಿತ್ರವನ್ನು ಬಿಜೆಪಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು.

ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಅಯೋಧ್ಯೆಯಲ್ಲಿನ ರಾಮ ಕಟ್‌ಔಟ್‌ಗಳಿಗಿಂತ ದೊಡ್ಡದಾಗಿ ನರೇಂದ್ರ ಮೋದಿ ಅವರ ಕಟ್‌ಔಟ್‌ಗಳನ್ನು ಅಳವಡಿಸಲಾಗಿತ್ತು.

ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಸಂಪತ್ ರಾಯ್ ಅವರು ಮೋದಿಯನ್ನು ವಿಷ್ಣುವಿನ ಅವತಾರ ಎಂದು ಕರೆದರು.

ಮೋದಿ ದೇವರ ಅವತಾರ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.

ನಟಿ ಮತ್ತು ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್, ಬಿಜೆಪಿ ನಾಯಕ ಸಾಕ್ಷಿ ಮಹಾರಾಜ್ ಮತ್ತು ಇತರರು ಮೋದಿಯನ್ನು ಶ್ರೀರಾಮನ ಅವತಾರ ಎಂದು ಬಣ್ಣಿಸಿದ್ದರು.

ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಮೋದಿಯನ್ನು ದೇವರಿಗೆ ಹೋಲಿಸಿದ್ದರು.

ಅಂತಹ ಜನರಿಂದಾಗಿ ಮೋದಿ ಈಗ ನಾಜಿಸ್ಟಾಗಿದ್ದಾರೆ ಮತ್ತು ದೇವರ ಸಂದೇಶವಾಹಕ ಎಂದು ಭಾವಿಸಲು ಪ್ರಾರಂಭಿಸಿದ್ದಾರೆ. ಎಂದು ಹೇಳಿದ್ದಾರೆ.

ದೇಶ

ಅಯೋಧ್ಯಯಲ್ಲಿ ಭಗವಾನ್ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡುವುದಕ್ಕೆ ಪುರಿ ಶಂಕರಾಚಾರ್ಯ ವಿರೋಧ ವ್ಯಕ್ತಪಡಿಸಿದ್ದಾರೆ.

2019ರಲ್ಲಿ ಉತ್ತರ ಪ್ರದೇಶದ ಅಯೋಧ್ಯೆ ರಾಮ ಜನ್ಮಭೂಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಇದರ ಬೆನ್ನಲ್ಲೇ ರಾಮನ ಜನ್ಮಭೂಮಿ ಎಂದು ನಂಬುತ್ತಿರುವ ಅಯೋಧ್ಯೆಯ ರಾಮ ಜನ್ಮ ಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣವಾಗುತ್ತಿದೆ.

ಈ ದೇವಸ್ಥಾನದ ನಿರ್ಮಾಣ ಕಾಮಗಾರಿ ಮುಗಿದು ಜನವರಿ 22 ರಂದು ರಾಮ ಮಂದಿರ ಕುಂಭಾಭಿಷೇಕ ನಡೆಯಲಿದೆ ಎಂದು ಘೋಷಿಸಲಾಗಿದೆ. ಈ ಕುಂಭಾಭಿಷೇಕ ಸಮಾರಂಭಕ್ಕೆ 3000 ವಿಐಪಿಗಳು ಸೇರಿದಂತೆ 7000 ಜನರನ್ನು ಆಹ್ವಾನಿಸಲಾಗಿದೆ.

ಈ ಸಂಬಂಧ ಆಮಂತ್ರಣ ಪತ್ರಿಕೆಗಳನ್ನು ಸಂಬಂಧಪಟ್ಟವರಿಗೆ ಖುದ್ದಾಗಿ ನೀಡಲಾಗುತ್ತಿದೆ. ಇದಕ್ಕಾಗಿ ಶ್ರೀರಾಮ ಜನ್ಮಭೂಮಿ ಟ್ರಸ್ಟ್, ಆರ್‌ಎಸ್‌ಎಸ್‌ ಸಂಘಟನೆ ಮತ್ತಿತರರು ಶ್ರಮಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಅಯೋಧ್ಯೆಯಲ್ಲಿ ವಿಶೇಷ ವಿಮಾನ ಮತ್ತು ರೈಲು ಸೇವೆಗಳನ್ನು ಸ್ಥಾಪಿಸಲಾಗಿದೆ.

ಈ ಹಿನ್ನಲೆಯಲ್ಲಿ, ಒಡಿಶಾದ ಪುರಿ ಮಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರು ಅಯೋಧ್ಯೆಯಲ್ಲಿರುವ ರಾಮ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸುವ ಆಹ್ವಾನವನ್ನು ತಿರಸ್ಕರಿಸಿದ್ದಾರೆ. ಈ ಕುರಿತು ಅವರು ನೀಡಿರುವ ಸಂದರ್ಶನದಲ್ಲಿ,

“ಅಯೋಧ್ಯೆಯಿಂದ ನಮ್ಮ ಮಠಕ್ಕೆ ಆಹ್ವಾನ ಬಂದಿದೆ. ನಾನು ಅಲ್ಲಿಗೆ ಹೋಗುವುದಾದರೆ ಒಬ್ಬ ಸಹಾಯಕನ ಜೊತೆ ಬರಬಹುದು ಎಂದಿತ್ತು. ನೀವು ನೂರು ಜನರೊಂದಿಗೆ ಬಂದರೂ ನಿಮಗೆ ಅವಕಾಶ ನೀಡುವುದಾಗಿ ಹೇಳಿದರೂ ನಾನು ಆ ದಿನ ಅಲ್ಲಿಗೆ ಹೋಗುವುದಿಲ್ಲ. ಇದರಲ್ಲಿ ನನಗೆ ಸ್ವಲ್ಪವೂ ವಿಷಾದವಿಲ್ಲ. ಆದರೆ ನಾನು ಇತರ ಸನಾತನ ಹಿಂದೂಗಳಂತೆ ಸಂತೋಷವಾಗಿದ್ದೇನೆ.

ನಾನು ಹಿಂದಿನಿಂದಲೂ ಅಯೋಧ್ಯೆಗೆ ಭೇಟಿ ನೀಡುತ್ತಿದ್ದೇನೆ ಮತ್ತು ಮುಂದೆ ಶ್ರೀರಾಮನ ದರ್ಶನಕ್ಕಾಗಿ ಅದೇ ನಗರಕ್ಕೆ ಭೇಟಿ ನೀಡುತ್ತೇನೆ. ಅದರಲ್ಲೂ ಶತಮಾನಗಳಿಂದ ನನೆಗುದಿಗೆ ಬಿದ್ದಿದ್ದ ರಾಮಮಂದಿರದ ಕಾಮಗಾರಿ ಕೊನೆಗೂ ಈಡೇರಿದೆ.

ಗೋವರ್ಧನ ಪೀಠ ಹಾಗೂ ಮಠದ ಅಧಿಕಾರ ವ್ಯಾಪ್ತಿಯು ಪ್ರಯಾಗದವರೆಗೆ ವ್ಯಾಪಿಸಿದೆ. ಆದರೆ ಕುಂಭಾಭಿಷೇಕ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಮ್ಮಿಂದ ಯಾವುದೇ ಸಲಹೆ, ಮಾರ್ಗದರ್ಶನ ಪಡೆದಿಲ್ಲ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿಯವರು ತಮ್ಮನ್ನು ಜಾತ್ಯತೀತರು ಎಂದು ಬಿಂಬಿಸಿಕೊಳ್ಳಲು ಒಲವು ತೋರುತ್ತಿಲ್ಲ.

ಅವರು ಧೈರ್ಯಶಾಲಿ; ಹಿಂದುತ್ವ ಮತ್ತು ವಿಗ್ರಹಾರಾಧನೆಯ ಪರಿಕಲ್ಪನೆಯಲ್ಲಿ ಹೆಮ್ಮೆಪಡುತ್ತಿದ್ದಾರೆ. ತಾನು ಜಾತ್ಯತೀತ ಎಂದು ಬಿಂಬಿಸಿಕೊಳ್ಳುವ ಹೇಡಿಯಲ್ಲ. ಆದರೆ, ಶಂಕರಾಚಾರ್ಯರಾಗಿ ನಾನು ಅಲ್ಲಿ ಏನು ಮಾಡುವುದು, ಪ್ರಧಾನಿ ಮೋದಿ ಪ್ರತಿಮೆಯನ್ನು ಮುಟ್ಟಿ ಅಲ್ಲಿ ಸ್ಥಾಪಿಸುವಾಗ, ನಾನು ಅವರನ್ನು ಶ್ಲಾಘಿಸಬೇಕೇ? ಶಾಸ್ತ್ರಗಳಲ್ಲಿ ಹೇಳಿರುವ ನಿಯಮಗಳ ಪ್ರಕಾರ ಮೂಲವರ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು.

ಪ್ರಧಾನಿ ನರೇಂದ್ರ ಮೋದಿಯವರು ರಾಮನ ಮೂರ್ತಿಯನ್ನು ಮುಟ್ಟಿ ದೇವಾಲಯದ ಗರ್ಭಗುಡಿಯೊಳಗೆ ಪ್ರತಿಷ್ಠಾಪಿಸುವಾಗ ಶಂಕರಾಚಾರ್ಯನಾಗಿ ನಾನು ಏನು ಮಾಡಬೇಕು? ಅವರು ಪ್ರತಿಮೆಯನ್ನು ಪ್ರತಿಷ್ಠಾಪಿಸುವಾಗ ನಾನು ಅಲ್ಲಿ ಚಪ್ಪಾಳೆ ತಟ್ಟಿ ಅಥವಾ ಹುರಿದುಂಬಿಸಬೇಕೆಂದು ನೀವು ನಿರೀಕ್ಷಿಸುತ್ತೀರಾ? ನನ್ನ ಜವಾಬ್ದಾರಿಗೆಂದು ಒಂದು ಗೌರವವಿದೆ” ಎಂದು ಹೇಳಿದ್ದಾರೆ.

ಈ ಹಿಂದೆ ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಕೂಡ ಪ್ರಧಾನಿ ಮೋದಿಯವರು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿರುವುದನ್ನು ಟೀಕಿಸಿದ್ದರು.

ಅವರು ತಮ್ಮ ‘ಎಕ್ಸ್’ ಸೈಟ್‌ನಲ್ಲಿ, “ರಾಮನು ತನ್ನ ಪತ್ನಿ ಸೀತೆಯನ್ನು ರಕ್ಷಿಸಿಕೊಳ್ಳಲು ಸುಮಾರು ಒಂದೂವರೆ ದಶಕಗಳ ಕಾಲ ಹೋರಾಡಿದರು. ಇಂತಹ ರಾಮನ ಭಕ್ತರಾದ ನಾವು, ಪತ್ನಿಯನ್ನು ತ್ಯಜಿಸಿದ ಮೋದಿಗೆ ರಾಮಮಂದಿರ ಪೂಜೆ ಮಾಡಲು ಹೇಗೆ ಅವಕಾಶ ನೀಡುವುದು” ಎಂಬ ಪ್ರಶ್ನೆಯನ್ನು ಎತ್ತಿದ್ದರು ಇದು ಟೀಕೆಗೆ ಕಾರಣವಾಗಿತ್ತು.

“ಇದು ಬಿಜೆಪಿಯ ರಾಮ ಮಂದಿರ” ಎಂಬುದು ಸರಿಯಾಗಿಯೇ ಇದೆ!