• About
  • Advertise
  • Privacy & Policy
  • Contact
Dynamic Leader | ಡೈನಾಮಿಕ್ ಲೀಡರ್
Advertisement
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಲೇಖನ
  • ಸಂಪಾದಕೀಯ
No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಲೇಖನ
  • ಸಂಪಾದಕೀಯ
No Result
View All Result
Dynamic Leader | ಡೈನಾಮಿಕ್ ಲೀಡರ್
No Result
View All Result
Home ದೇಶ

ಅಮೆರಿಕ ಭಾರತದ ದೊಡ್ಡಣ್ಣನೇ? – ಭಾರತ ಸರ್ಕಾರದ ವಿದೇಶಾಂಗ ನೀತಿಯಲ್ಲಿ ಸಮಸ್ಯೆ ಏನು? ಒಂದು ನೋಟ

ಭಾರತ-ಪಾಕಿಸ್ತಾನ ಕದನ ವಿರಾಮ ಒಪ್ಪಂದದ ಬಗ್ಗೆ ಟ್ರಂಪ್ ಅವರ ಆರಂಭಿಕ ಘೋಷಣೆಯೇ ಭಾರತ ಎಷ್ಟು ದುರ್ಬಲವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

by Dynamic Leader
14/05/2025
in ದೇಶ
0
ಅಮೆರಿಕ ಭಾರತದ ದೊಡ್ಡಣ್ಣನೇ? – ಭಾರತ ಸರ್ಕಾರದ ವಿದೇಶಾಂಗ ನೀತಿಯಲ್ಲಿ ಸಮಸ್ಯೆ ಏನು? ಒಂದು ನೋಟ
0
SHARES
18
VIEWS
Share on FacebookShare on Twitter

ಡಿ.ಸಿ.ಪ್ರಕಾಶ್

ಭಾರತ-ಪಾಕಿಸ್ತಾನ ವಿವಾದದಲ್ಲಿ ಮೂರನೇ ರಾಷ್ಟ್ರದ ಹಸ್ತಕ್ಷೇಪ ಮತ್ತು ನೆರೆಹೊರೆಯವರಲ್ಲಿ ಅಸಾಮರಸ್ಯ ಮುಂತಾದವುಗಳು ಭಾರತದ ವಿದೇಶಾಂಗ ನೀತಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳು ಕದನ ವಿರಾಮ ಘೋಷಿಸುವ ಮೊದಲೇ ಅಮೆರಿಕ ಕದನ ವಿರಾಮ ಘೋಷಿಸುತ್ತಿದೆ. ಎರಡು ರಾಷ್ಟ್ರಗಳ ವಿವಾದದಲ್ಲಿ ಅಮೆರಿಕದ ‘ಮಧ್ಯಸ್ಥಿಕೆ’ ನಿಲುವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ನಾವು ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಗೆ ಬಾಗಿಲು ತೆರೆದಿದ್ದೇವೆಯೇ? ಎಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದದ ಬಗ್ಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಆರಂಭಿಕ ಘೋಷಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಕೇಂದ್ರ ಸರ್ಕಾರಕ್ಕೆ ಹಲವಾರು ಪ್ರಶ್ನೆಗಳನ್ನು ಎತ್ತಿದೆ.

ಭಾರತವು ಪಾಕಿಸ್ತಾನದೊಂದಿಗೆ ಮಾತ್ರವಲ್ಲ, ಏಷ್ಯಾದ ಅನೇಕ ನೆರೆಯ ರಾಷ್ಟ್ರಗಳೊಂದಿಗೂ ಸಮಸ್ಯೆಗಳನ್ನು ಹೊಂದಿದೆ. ಶ್ರೀಲಂಕಾ ಆಗಿರಲಿ, ಬಾಂಗ್ಲಾದೇಶ ಆಗಿರಲಿ ಅಥವಾ ಚೀನಾ ಆಗಿರಲಿ, ಯಾರೂ ಭಾರತದ ಸ್ನೇಹಪರರಲ್ಲ. ಭಾರತ-ಪಾಕಿಸ್ತಾನ ವಿವಾದದಲ್ಲಿ ಮೂರನೇ ರಾಷ್ಟ್ರದ ಹಸ್ತಕ್ಷೇಪ ಮತ್ತು ಅದರ ನೆರೆಹೊರೆಯವರ ನಿಷ್ಠುರತೆ ಭಾರತದ ವಿದೇಶಾಂಗ ನೀತಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಪಾಕಿಸ್ತಾನದ ಗಡಿಯೊಳಗೆ ಇರುವ ಭಯೋತ್ಪಾದಕ ಶಿಬಿರಗಳಿಗೆ ಭಾರತ ನೀಡಿದ ಪ್ರತಿಕ್ರಿಯೆ ಮತ್ತು ನಂತರದ ಎರಡೂ ದೇಶಗಳ ಸೇನೆಗಳ ನಡುವಿನ ಉದ್ವಿಗ್ನತೆಯು ನಂತರದ ಪ್ರತಿಕ್ರಿಯೆಗಳ ಪರಿಣಾಮವಾಗಿದೆ. ಆದರೆ, ಇದು ದೀರ್ಘಕಾಲದ ಯುದ್ಧವಾಗಬಾರದು. ಈ ನಿರ್ಧಾರವು ಭಾರತದ ಹಿತದೃಷ್ಟಿಯಿಂದ ನಾವು ತೆಗೆದುಕೊಂಡ ನಿರ್ಧಾರವಾಗಿರಬೇಕು.

ಆದರೆ, ಆಘಾತಕಾರಿ ಸಂಗತಿಯೆಂದರೆ, ಈ ಕದನ ವಿರಾಮ ನಮ್ಮಿಂದ ಆಗಿದ್ದು ಎಂದು ಹೇಳಿಕೊಂಡು ಅಮೆರಿಕ ಅಧ್ಯಕ್ಷ ಟ್ರಂಪ್ ಎರಡು ಪೋಸ್ಟ್‌ಗಳನ್ನು ಮಾಡಿದ್ದಾರೆ. ತಮ್ಮ ಎರಡನೇ ಪೋಸ್ಟ್‌ನಲ್ಲಿ, ಅವರು ಕಾಶ್ಮೀರ ವಿಷಯದಲ್ಲಿ ‘ಮಧ್ಯಸ್ಥಿಕೆ’ ವಹಿಸಲು ಬಯಸುತಿರುವುದು ತಿಳಿಯುತ್ತದೆ. ಭಾರತದ ದೊಡ್ಡಣ್ಣ ಎಂದು ಬಿಂಬಿಸಿಕೊಳ್ಳುವ ಉದ್ದೇಶದಿಂದ ಅಮೆರಿಕ ಹೀಗೆ ಮಾಡುತ್ತಿದೆ.

ಕೆಲವು ತಿಂಗಳ ಹಿಂದೆ, ಡೊನಾಲ್ಡ್ ಟ್ರಂಪ್ ಉಕ್ರೇನಿಯನ್ ಅಧ್ಯಕ್ಷರನ್ನು ಅಮೆರಿಕಕ್ಕೆ ಆಹ್ವಾನಿಸಿ, ನೇರ ದೂರದರ್ಶನದಲ್ಲಿ ಬೆದರಿಸಿ, ಪಾಲಿಸುವಂತೆ ಮಾಡಿ ನಂತರ ಖನಿಜ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಅನುಮತಿ ಪಡೆದರು. ಗಾಜಾ ಪಟ್ಟಿಯಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಿ ಅಲ್ಲಿ ಪ್ರವಾಸಿ ಕೇಂದ್ರವನ್ನು ನಿರ್ಮಿಸುವುದಾಗಿ ಟ್ರಂಪ್ ಘೋಷಿಸಿದ್ದರು. ಅದೇ ರೀತಿ ಕಾಶ್ಮೀರದ ಖನಿಜ ಸಂಪನ್ಮೂಲಗಳು ಮತ್ತು ಪ್ರವಾಸಿ ತಾಣಗಳನ್ನು ಅವರು ಗುರಿಯಾಗಿಸಿಕೊಂಡಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ.

ನಮ್ಮ ದೇಶದ ಆಡಳಿತಗಾರರಿಂದ ಕಠಿಣ ಪ್ರತಿಕ್ರಿಯೆಯ ಮೂಲಕ ಅಮೆರಿಕ ದೇಶವನ್ನು ದೂರ ಸರಿಯುವಂತೆ ಮಾಡಬೇಕು. ಕಿರಿಯ ಸಂಗಾತಿಯಂತೆ ರಹಸ್ಯವಾಗಿರುವುದು ದೇಶದ ಭವಿಷ್ಯ ಮತ್ತು ಖ್ಯಾತಿಗೆ ಒಳ್ಳೆಯದಲ್ಲ.

ಶ್ರೀಲಂಕಾ ಮತ್ತು ಬಾಂಗ್ಲಾದೇಶದಲ್ಲಿ ಆಡಳಿತ ಬದಲಾವಣೆಯ ನಂತರ, ನಮ್ಮ ದೇಶದೊಂದಿಗಿನ ಸ್ನೇಹ ಸಂಬಂಧಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸಿದೆ. ಶ್ರೀಲಂಕಾದಲ್ಲಿ ಅದಾನಿಗೆ ನೀಡಲಾದ ವಿದ್ಯುತ್ ಉತ್ಪಾದನಾ ಯೋಜನೆ ಮತ್ತು ಬಾಂಗ್ಲಾದೇಶ ಹಾಗೂ ಅದಾನಿ ನಡುವಿನ ವಿದ್ಯುತ್ ಒಪ್ಪಂದವು ಆಯಾ ದೇಶಗಳಲ್ಲಿನ ಭ್ರಷ್ಟಾಚಾರ ವಿರೋಧಿ ಚಳವಳಿಯಲ್ಲಿ ಚರ್ಚೆಯ ವಿಷಯಗಳಾದವು.

ಇಂತಹ ಕಾರಣಗಳಿಂದ ಮತ್ತು ಯಾವುದೇ ಕಾರಣವಿಲ್ಲದೆ ಭಾರತ ತನ್ನ ನೆರೆಹೊರೆಯವರಿಂದ ತನ್ನನ್ನು ಪ್ರತ್ಯೇಕಿಸಿಕೊಳ್ಳುತ್ತಿರುವುದು ಆತಂಕಕಾರಿಯಾಗಿದೆ.

ಈ ಸಮಸ್ಯೆಯನ್ನು ಮತ್ತೊಂದು ಕೋನದಿಂದ ನೋಡಿದಾಗ, ಚೀನಾ ಮತ್ತು ಅಮೆರಿಕ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೂ, ಬಹುಧ್ರುವೀಯ ಆರ್ಥಿಕ ಸಹಭಾಗಿತ್ವದ ಕೆಲವು ಅಂಶಗಳಲ್ಲಿ ಭಾರತವು ಚೀನಾ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳೊಂದಿಗೆ ನಿಂತಿದೆ. ಆದರೆ, ಮಿಲಿಟರಿ ಮೈತ್ರಿಯ ವಿಷಯದಲ್ಲಿ ಅದು ಅಮೆರಿಕಕ್ಕೆ ಹತ್ತಿರವಾಗಿದೆ. ಈ ವಿಧಾನವು ನಮ್ಮ ಪ್ರದೇಶದಲ್ಲಿ ಶಾಂತಿಯನ್ನು ಕದಡುತ್ತದೆ ಎಂಬುದಕ್ಕಾಗಿ ನೆರೆಯ ರಾಷ್ಟ್ರಗಳು ನಮ್ಮಿಂದ ದೂರವಾಗಲು ಒಂದು ಕಾರಣವಾಗಿದೆ.

‘ವಿಶ್ವಗುರು’ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಮೋದಿಯವರ ಬಿಂಬವು ಕೇವಲ ಪೊಳ್ಳು ರಾಜಕೀಯ ಪ್ರಚಾರವಾಗಿದೆ. ಈ ಇಮೇಜ್ ಅನ್ನು ನಿರ್ಮಿಸಲು, ಪ್ರಧಾನಿ ಮೋದಿ ಅವರು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾಗವಹಿಸಿ ಡೊನಾಲ್ಡ್ ಟ್ರಂಪ್ ಪರ ಪ್ರಚಾರ ಮಾಡಿದರು. ಆದರೆ, ಅದು ಪ್ರತಿಕೂಲವಾಗಿ ಕೊನೆಗೊಂಡಿತು. ಇತ್ತೀಚೆಗೆ, ಇಸ್ರೇಲ್ ಗಾಜಾದ ಮೇಲೆ ತನ್ನ ನರಮೇಧದ ದಾಳಿಯನ್ನು ಪ್ರಾರಂಭಿಸಿದಾಗ, ಭಾರತದಿಂದ ಬೆಂಬಲದ ಧ್ವನಿಗಳು ಕೇಳಿಬಂದವು. ಇದುಕೂಡ ನಮ್ಮ ದೀರ್ಘಕಾಲೀನ ಖ್ಯಾತಿಗೆ ಧಕ್ಕೆಯನ್ನು ತಂದಿತು.

ದೇಶೀಯ ರಾಜಕೀಯ ಅಗತ್ಯಗಳಿಗಾಗಿ ವಿದೇಶಾಂಗ ನೀತಿಯನ್ನು ವಿರೂಪಗೊಳಿಸಿ ಅನುಸರಿಸಿದರೆ, ಅದು ನಮ್ಮ ದೇಶದ ಖ್ಯಾತಿಗೆ ಕಳಂಕವನ್ನೆ ತರುತ್ತದೆ. ನೆಹರೂ ಅವರನ್ನು ಅಲಿಪ್ತ ಚಳುವಳಿಯ ನಾಯಕ ಎಂದು ಬಣ್ಣಿಸಲಾಯಿತು. ಅವರ ಪಂಚಶೀಲ ತತ್ವಗಳು ಇಂದಿಗೂ ಜನಪ್ರಿಯ. ನಾವು ತಂಡವನ್ನು ಸೇರದೆ ನಿಂತಿದ್ದರೂ ಏಕಾಂಗಿಯಾಗಿ ನಿಂತಿಲ್ಲ. ಸೋಷಲಿಸ್ಟ್ ದೇಶಗಳಿಂದ ನೆರವು ಪಡೆದವು. ನಾವು ಬಂಡವಾಳಶಾಹಿ ದೇಶಗಳೊಂದಿಗೂ ಅನೇಕ ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ.

ಅಮೆರಿಕದ ಅತಿರೇಕದ ಹಸ್ತಕ್ಷೇಪವನ್ನು ತಿರಸ್ಕರಿಸಿದ ಉದಾಹರಣೆಗಳೂ ಇವೆ. ಇಂದಿರಾ ಗಾಂಧಿಯವರ ಇಂತಹ ಭಾಷಣ ಈಗ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗುತ್ತಿದೆ. ಆದಾಗ್ಯೂ, ಅಂತಹ ವಿದೇಶಾಂಗ ನೀತಿಗಳು ಒಬ್ಬ ನಾಯಕನನ್ನು ಅವಲಂಬಿಸಿ ಬದಲಾಗಿಲ್ಲ. ಅದು ಕಾಲಕ್ಕೆ ತಕ್ಕಂತೆ ಬದಲಾಗಿದೆ.

ವಾಸ್ತವವಾಗಿ, ಒಂದು ದೇಶದ ವಿದೇಶಾಂಗ ನೀತಿಯು ಸರ್ಕಾರಿ ಅಧಿಕಾರಿಗಳ ಮಟ್ಟದಲ್ಲಿ ನಡೆಯುವ ಮಾತುಕತೆಗಳು, ಒಪ್ಪಂದಗಳು, ವ್ಯಾಪಾರ, ಸಾಲ, ಬ್ಯಾಂಕಿಂಗ್ ಚಟುವಟಿಕೆಗಳು ಮತ್ತು ಮಿಲಿಟರಿ ಮೈತ್ರಿಗಳಂತಹ ಹಲವು ಅಂಶಗಳಲ್ಲಿ ವ್ಯಕ್ತವಾಗುತ್ತದೆ.

ಹಾಗೆ ನೋಡಿದರೆ, ಮೋದಿ ಆಡಳಿತದ ಅವಧಿಯಲ್ಲಿ ನಮ್ಮ ವಿದೇಶಾಂಗ ನೀತಿಯನ್ನು ಬಹಳ ಹಿಂಜರಿಕೆಯಿಂದ ಅನುಸರಿಸಲಾಗುತ್ತದೆ ಎಂಬುದನ್ನು ನಾವು ನೋಡುತ್ತೇವೆ. ದಾಖಲೆಗಳಿಲ್ಲದೆ ಅಮೆರಿಕದಲ್ಲಿ ನೆಲಸಿದ್ದ ಭಾರತೀಯರನ್ನು ಗಡೀಪಾರು ಮಾಡಿದಾಗ, ಅವರ ಕೈಕಾಲುಗಳಿಗೆ ಸಂಕೋಲೆ ಹಾಕಲಾಗಿತ್ತು. ಅವರನ್ನು ಮಿಲಿಟರಿ ವಿಮಾನಗಳಲ್ಲಿ ಭಾರತಕ್ಕೆ ಕಳುಹಿಸಲಾಯಿತು. ಅಂತಹ ಅವಮಾನಗಳನ್ನು ನಾವು ದೃಢವಾಗಿ ವಿರೋಧಿಸಲು ಸಾಧ್ಯವಾಗದಿರಲು ನಮ್ಮ ದೋಷಪೂರಿತ ನೀತಿಯೇ ಕಾರಣ.

ಭಾರತದ ವಿದೇಶಾಂಗ ನೀತಿಯಲ್ಲಿ ಯಾವುದೇ ಸೈದ್ಧಾಂತಿಕ ಸಮಸ್ಯೆ ಇಲ್ಲ. ನಮ್ಮ ಎಲ್ಲಾ ನೆರೆಯ ರಾಷ್ಟ್ರಗಳನ್ನು ಒಳಗೊಳ್ಳಬಹುದಾದ ‘SAGAR’ ಎಂಬ ನೀತಿ ಇದೆ. ‘Look East’ ಎಂಬ ನೀತಿ ಕೂಡ ಇದೆ.

ಅಂದರೆ, ನಾವು ಪೂರ್ವದಲ್ಲಿರುವ ಏಷ್ಯಾದ ರಾಷ್ಟ್ರಗಳನ್ನು ಪ್ರವೇಶಿಸಬಹುದು. ಅವರು ನಮ್ಮನ್ನು ಅಪ್ಪಿಕೊಳ್ಳುತ್ತಾರೆ ಎಂಬ ನೀತಿ ಇದಾಗಿದೆ. ಹೀಗೆ, ಸೈದ್ಧಾಂತಿಕವಾಗಿ, ಭಾರತದ ನೀತಿಗಳು ಬಲಿಷ್ಠವಾಗಿಯೇ ಇದೆ. ಆದರೆ, ವಾಸ್ತವದಲ್ಲಿ ಪರಿಸ್ಥಿತಿ ಬೇರೆಯೇ ಇದೆ. “ನಾವು ನಿಮಗಾಗಿ ಇದನ್ನು ಮಾಡಿದ್ದೇವೆ; ಅದಕ್ಕಾಗಿ ನೀವು ನಮಗೆ ಇದನ್ನು ಮಾಡಿ” ಎಂಬ ಧೋರಣೆಯಲ್ಲೇ ಭಾರತ ತನ್ನ ನೆರೆಹೊರೆಯವರನ್ನು ಸಂಪರ್ಕಿಸುತ್ತದೆ.

ಇದಲ್ಲದೆ, ಈ ಸರ್ಕಾರವು ಕಾರ್ಪೊರೇಟ್‌ಗಳ ಪರವಾಗಿ, ವಿಶೇಷವಾಗಿ ಅದಾನಿ ಪರವಾಗಿ ಕಾರ್ಯನಿರ್ವಹಿಸಬಲ್ಲ ಸರ್ಕಾರವಾಗಿದೆ. ಇದು ಸಮಸ್ಯೆ. ಇಸ್ಲಾಮಿಕ್ ರಾಷ್ಟ್ರಗಳು ಇಸ್ರೇಲ್ ಜೊತೆ ಸಾಮರಸ್ಯ ಹೊಂದಿಲ್ಲದಿದ್ದರೂ, ಅವು ಅವರೊಂದಿಗೆ ಯುದ್ಧಕ್ಕೆ ನಿಂತಿಲ್ಲ. ಆದರೆ, ಭಾರತ ಇಸ್ರೇಲ್ ಜೊತೆ ಹೆಚ್ಚಿನ ಸಂಪರ್ಕವನ್ನು ಹೊಂದಿದೆ. ಅರಬ್ ರಾಷ್ಟ್ರಗಳಿಗೆ ಇದು ಅಷ್ಟಾಗಿ ಇಷ್ಟವಾಗುತ್ತಿಲ್ಲ. ಟರ್ಕಿ, ಮಲೇಷ್ಯಾ ಮತ್ತು ಮಾಲ್ಡೀವ್ಸ್‌ನಂತಹ ದೇಶಗಳು ಇಸ್ರೇಲ್‌ಗೆ ಹೆಚ್ಚು ವಿರೋಧಿಯಾಗಿರುತ್ತವೆ.

ಅವರೂ ಸಹ ಭಾರತ ವಿರೋಧಿ ಭಾವನೆಯನ್ನು ಹರಡುತ್ತಾರೆ. ವಿದೇಶಾಂಗ ಸಚಿವ ಜೈಶಂಕರ್, ವಿದೇಶಾಂಗ ಸೇವಾ ಅಧಿಕಾರಿಯಾಗಿದ್ದಾಗ ಅತ್ಯುತ್ತಮ ಕೆಲಸ ಮಾಡುತ್ತಿದ್ದರು. ಆದರೆ ಈಗ ಅವರು ತುಂಬಾ ಆಕ್ರಮಣಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಪ್ರತಿಯೊಂದಕ್ಕೂ ‘ನಾವು ಪ್ರತೀಕಾರ ತೀರಿಸಿಕೊಳ್ಳುತ್ತೇವೆ; ಪಾಶ್ಚಿಮಾತ್ಯ ದೇಶಗಳು ಹೇಳುವುದನ್ನು ನಾವು ಕೇಳುವುದಿಲ್ಲ’ ಎಂದು ಅವರು ಬಹಿರಂಗವಾಗಿ ಹೇಳುತ್ತಿದ್ದಾರೆ. ಭಾರತ ಇದನ್ನೆಲ್ಲಾ ಮೊದಲೇ ಮಾಡುತ್ತಿತ್ತು. ಮೊದಲು ರಾಜತಾಂತ್ರಿಕವಾಗಿ ಮತ್ತು ಸೂಕ್ತವಾಗಿ ಮಾಡಿದ್ದನ್ನು ಈಗ ಬಹಿರಂಗವಾಗಿ ಹೇಳುತ್ತಿದ್ದಾರೆ. ಇದರಿಂದಾಗಿಯೇ ಹಲವು ದೇಶಗಳಿಗೆ ಭಾರತದೊಂದಿಗೆ ವಿರೋಧಾಭಾಸ ಸಂಭವಿಸುತ್ತದೆ.

2022ರಲ್ಲಿ ಶ್ರೀಲಂಕಾ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಅನುಭವಿಸಿತು. ಆ ಸಮಯದಲ್ಲಿ ಜೈಶಂಕರ್ ಶ್ರೀಲಂಕಾಕ್ಕೆ ಹೋಗಿದ್ದರು. ಅವರು ಅಲ್ಲಿನ ಪೆಟ್ರೋಲ್ ಬಂಕ್‌ಗಳಿಗೆ ತೆರಳಿ, ವಾಹನಗಳು ಕಿಲೋಮೀಟರ್ ಗಟ್ಟಲೆ ಸಾಲುಗಟ್ಟಿ ನಿಂತಿರುವುದನ್ನು ಖುದ್ದಾಗಿ ನೋಡಿದರು. ಆ ದೇಶದ ರಾಜಕಾರಣಿಗಳು ಕೂಡ ಅದನ್ನು ಮಾಡಲಿಲ್ಲ. ಅದಕ್ಕಾಗಿಯೇ ಶ್ರೀಲಂಕಾದ ರಾಜಕಾರಣಿಗಳು ಭಾರತದ ವಿರುದ್ಧ ದ್ವೇಷ ಸಾಧಿಸಿದರು.

ಅದೇ ರೀತಿ, ಭಾರತದಲ್ಲಿ ಮುಸ್ಲಿಮರ ಮೇಲಿನ ದಾಳಿಗಳ ಬಗ್ಗೆ ಇಸ್ಲಾಮಿಕ್ ರಾಷ್ಟ್ರಗಳು ಸಹ ಕಳವಳಗೊಂಡಿವೆ. ಆ ವಿಚಾರದಲ್ಲಿ ಭಾರತದ ವಿರುದ್ಧ ನಿಲ್ಲಲು ತಮಗೆ ಅನುಕೂಲವಾದ ಸಂದರ್ಭದಲ್ಲಿ ಅದನ್ನು ಅವರು ಬಳಸಿಕೊಳ್ಳುತ್ತಾರೆ. ಇತಿಹಾಸದಲ್ಲಿ ಎಂದೂ ಕಾಣದ ಮಟ್ಟಿಗೆ ಇದೀಗ, ಭಾರತ-ಪಾಕಿಸ್ತಾನ ವಿಷಯದಲ್ಲಿ ಮೂರನೇ ದೇಶವಾಗಿ ಅಮೆರಿಕ ಮಧ್ಯಪ್ರವೇಶಿಸಿದೆ. ಭಾರತದ ವಿದೇಶಾಂಗ ನೀತಿಗಳು ಕಾಗದದ ಮೇಲೆ ಅದ್ಭುತವಾಗಿಯೇ ಕಾಣುತ್ತಿದೆ. ಆದರೆ, ನಾವು ಅದನ್ನು ಕಾರ್ಯಗತಗೊಳಿಸುವ ವಿಚಾರದಲ್ಲೇ ಎಡವುತ್ತಿದ್ದೇವೆ.

ಬಿಜೆಪಿ ಅಧಿಕಾರಕ್ಕೆ ಬಂದ ನಂತರ, 50 ವರ್ಷಗಳಿಂದ ನಾವು ಅನುಸರಿಸಿಕೊಂಡು ಬಂದ ಭಾರತದ ವಿದೇಶಾಂಗ ನೀತಿಗೆ ವಿರುದ್ಧವಾಗಿ ವರ್ತಿಸುತ್ತಿದೆ. ಇಂದಿರಾ ಗಾಂಧಿ, ನೆಹರು ಮತ್ತು ರಾಜೀವ್ ಗಾಂಧಿ ಅಧಿಕಾರದಲ್ಲಿದ್ದಾಗ ಭಾರತ ಅಲಿಪ್ತ ಚಳುವಳಿಯ ನಾಯಕತ್ವ ವಹಿಸಿತ್ತು. ನಾವು ಅಮೆರಿಕದೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ; ರಷ್ಯಾದೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಅಮೆರಿಕ ಮತ್ತು ರಷ್ಯಾವನ್ನು ವಿರೋಧಿಸಿಯೂ ಇಲ್ಲ. ಭಾರತ ಬಡ ದೇಶಗಳಿಗೆ ಸಹಾಯ ಮಾಡುವ ಸ್ಥಿತಿಯಲ್ಲಿತ್ತು.

ವಿಶ್ವ ಭೂಪಟದಲ್ಲೇ ಚೀನಾಕ್ಕೆ ಸವಾಲು ಒಡ್ಡುತ್ತಿರುವ ದೇಶವೆಂದರೆ ಅದು ನಮ್ಮ ಭಾರತ. ವಿಶ್ವ ಮಾರುಕಟ್ಟೆ ಮೌಲ್ಯದಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ಚೀನಾದ ಉತ್ಪನ್ನಗಳನ್ನು ಮಾರಾಟ ಮಾಡುವಲ್ಲಿ ಭಾರತವು ಅತ್ಯಗತ್ಯ ಪಾತ್ರ ವಹಿಸುತ್ತದೆ. ಆದರೆ, ರಫ್ತು-ಆಮದು ನೀತಿಗೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವಿನ ಸಮಸ್ಯೆಯಿಂದಾಗಿ, ಭಾರತ ಕೊರಿಯನ್ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದೆ.

ಚೀನಾ ಸರ್ಕಾರ ನಮ್ಮನ್ನು ವ್ಯವಹಾರದಲ್ಲಿ ಗುಲಾಮರನ್ನಾಗಿ ಮಾಡಲು ಏನೆಲ್ಲಾ ಮಾಡುತ್ತಿದೆ ಎಂದರೆ, ‘ನೀವು ಒಂದು ಮರವನ್ನು ಕಡಿಯಲು ಬಯಸಿದರೆ, ಅದಕ್ಕೆ ಆಧಾರವಾಗಿರುವ ಅಂಶವನ್ನು ತೆಗೆದುಹಾಕಬೇಕು. ಆಗ ಆ ಮರವು ತನ್ನಿಂದ ತಾನೇ ಬೀದ್ದು ಹೋಗುತ್ತದೆ’ ಅದೇ ರೀತಿ, ಚೀನಾವು ಭಾರತದ ಹತ್ತಿರವಿರುವ ಎಲ್ಲಾ ನೆರೆಯ ರಾಷ್ಟ್ರಗಳನ್ನು ತನ್ನ ನಿಯಂತ್ರಣಕ್ಕೆ ತರಲು ಬಯಸುತ್ತದೆ. ಹೀಗಾಗಿ, ಭಾರತ ಅಸಹಾಯಕ ದೇಶವಾಗುತ್ತದೆ.  ಭಾರತವು ನೆರೆಯ ರಾಷ್ಟ್ರಗಳೊಂದಿಗೆ ಸಮಸ್ಯೆಯಲ್ಲಿದ್ದರೆ, ಭಾರತವನ್ನು ಸೋಲಿಸುವುದು ಚೀನಾಕ್ಕೆ ತುಂಬಾ ಸುಲಭವಾಗುತ್ತದೆ.

ಅಂದರೆ, ವ್ಯಾಪಾರದಿಂದ ಹಿಡಿದು ಯುದ್ಧದವರೆಗೆ ಎಲ್ಲದರಲ್ಲೂ ಸೋಲಿಸುವುದು ಚೀನಾಗೆ ಸುಲಭವಾಗುತ್ತದೆ. ನಮ್ಮ ನೆರೆಯ ದೇಶಗಳಲ್ಲಿ ಚೀನಾದ ಒಳನುಸುಳುವಿಕೆ ತುಂಬಾ ಹೆಚ್ಚಾಗಿದೆ. ಅರುಣಾಚಲ ಪ್ರದೇಶದಲ್ಲಿ ಚೀನಾ ಸಾವಿರಾರು ಕಿಲೋಮೀಟರ್ ವರೆಗೆ ಭಾರತೀಯ ಪ್ರದೇಶವನ್ನು ಆಕ್ರಮಿಸಿಕೊಂಡಿದೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಚೀನಾ ಬಗ್ಗೆ ಮಾತನಾಡಲು ಪ್ರಧಾನಿ ಹಿಂಜರಿಯುತ್ತಿದ್ದಾರೆ.

ಅದೇ ರೀತಿ, ಭಾರತ-ಪಾಕಿಸ್ತಾನ ಕದನ ವಿರಾಮ ಒಪ್ಪಂದದ ಬಗ್ಗೆ ಟ್ರಂಪ್ ಅವರ ಆರಂಭಿಕ ಘೋಷಣೆಯೇ ಭಾರತ ಎಷ್ಟರಮಟ್ಟಿಗೆ ದುರ್ಬಲವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ನೇಪಾಳ ಭಾರತಕ್ಕೆ ಹತ್ತಿರವಾಗಿತ್ತು. ಆದರೆ ಇಂದು ಅದು ಸಂಪೂರ್ಣವಾಗಿ ಚೀನಾದ ಪಾಲಾಗಿದೆ. ಅದೇ ರೀತಿ, ಬಾಂಗ್ಲಾದೇಶವನ್ನು ಸೃಷ್ಟಿಸಿದ್ದು ಭಾರತ.

ಆದರೆ ಈಗ ಬಾಂಗ್ಲಾದೇಶ ಕ್ರಮೇಣ ಬದಲಾಗಿದ್ದು, ಭಾರತದ ವಿರುದ್ಧ ತಿರುಗಿ ಬೀಳುತ್ತಿದೆ. ಮಾಲ್ಡೀವ್ಸ್ ಕೂಡ ಚೀನಾದೊಂದಿಗೆ ಸಂಬಂಧ ಹೊಂದಿದೆ. ನೆರೆಯ ರಾಷ್ಟ್ರಗಳಲ್ಲಿ, ಈಗ ನಮ್ಮೊಂದಿಗಿರುವುದು ಭೂತಾನ್ ಮಾತ್ರ. ನಾವು ಶ್ರೀಲಂಕಾಕ್ಕೆ ಎಷ್ಟೇ ಬೆಂಬಲ ನೀಡಿದರೂ ಅದು ಚೀನಾದ ಪರವಾಗಿಯೇ ಇರುತ್ತದೆ. ವಿದೇಶಾಂಗ ನೀತಿಯಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗುತ್ತಿರುವುದು ಹೀಗೆಯೇ.

Tags: ಅಮೆರಿಕಆಪರೇಷನ್ ಸಿಂಧೂರಕದನ ವಿರಾಮಕಾಂಗ್ರೆಸ್ ಆರೋಪಚೀನಾಡೊನಾಲ್ಡ್ ಟ್ರಂಪ್ದೊಡ್ದಣ್ಣಪಹಲ್ಗಾಮ್ ದಾಳಿಪಾಕಿಸ್ತಾನಬಿಜೆಪಿಭಾರತ ವಿದೇಶಾಂಗ ನೀತಿಮಧ್ಯಸ್ಥಿಕೆಮೂರನೇ ರಾಷ್ಟ್ರಮೋದಿ ಸರ್ಕಾರಹಸ್ತಕ್ಷೇಪ
Previous Post

ಕರ್ನಲ್ ಸೋಫಿಯಾ ಖುರೇಷಿ ಪಹಲ್ಗಾಮ್ ದಾಳಿಕೋರರ ಸಹೋದರಿ ಎಂದ ಬಿಜೆಪಿ ಮಂತ್ರಿ!

Next Post

ಆಗಮ ನಿಯಮಗಳಿಗೆ ಒಳಪಡದ ದೇವಾಲಯಗಳಲ್ಲಿ ಎಲ್ಲಾ ಜಾತಿಗಳ ಅರ್ಚಕರನ್ನು ನೇಮಿಸಬಹುದು: ಸುಪ್ರೀಂ ಕೋರ್ಟ್

Dynamic Leader

Next Post
ಆಗಮ ನಿಯಮಗಳಿಗೆ ಒಳಪಡದ ದೇವಾಲಯಗಳಲ್ಲಿ ಎಲ್ಲಾ ಜಾತಿಗಳ ಅರ್ಚಕರನ್ನು ನೇಮಿಸಬಹುದು: ಸುಪ್ರೀಂ ಕೋರ್ಟ್

ಆಗಮ ನಿಯಮಗಳಿಗೆ ಒಳಪಡದ ದೇವಾಲಯಗಳಲ್ಲಿ ಎಲ್ಲಾ ಜಾತಿಗಳ ಅರ್ಚಕರನ್ನು ನೇಮಿಸಬಹುದು: ಸುಪ್ರೀಂ ಕೋರ್ಟ್

Stay Connected test

  • 23.9k Followers
  • 99 Subscribers
  • Trending
  • Comments
  • Latest
edit post
ಜಾತಿಯೇ ಇಲ್ಲದಿದ್ದರೆ, ನೀವೆಲ್ಲರೂ ಯಾರು? – ಫುಲೆ ಚಿತ್ರದ ವಿಚಾರವಾಗಿ ಅನುರಾಗ್ ಗರಂ!

ಜಾತಿಯೇ ಇಲ್ಲದಿದ್ದರೆ, ನೀವೆಲ್ಲರೂ ಯಾರು? – ಫುಲೆ ಚಿತ್ರದ ವಿಚಾರವಾಗಿ ಅನುರಾಗ್ ಗರಂ!

18/04/2025
edit post
ಯಾದಗಿರಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಮಟ್ಟದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿಯ ಸಭೆ!

ಯಾದಗಿರಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಮಟ್ಟದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿಯ ಸಭೆ!

10/04/2025
edit post
ರಾಜೀವ್ ಗಾಂಧಿ ನಗರ ಮೈದಾನದಲ್ಲಿ ಅಂಬೇಡ್ಕರ್ ಜಯಂತ್ಯೋತ್ಸವ ಅಂಗವಾಗಿ ಪಂದ್ಯಾವಳಿ

ರಾಜೀವ್ ಗಾಂಧಿ ನಗರ ಮೈದಾನದಲ್ಲಿ ಅಂಬೇಡ್ಕರ್ ಜಯಂತ್ಯೋತ್ಸವ ಅಂಗವಾಗಿ ಪಂದ್ಯಾವಳಿ

12/04/2025
edit post
ಕೆ.ಆರ್.ಪುರಂ: ಕಾಂಗ್ರೆಸ್ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಬಹಳ ವಿಜೃಂಭಣೆಯಿಂದ ನಡೆದ ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ!

ಕೆ.ಆರ್.ಪುರಂ: ಕಾಂಗ್ರೆಸ್ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಬಹಳ ವಿಜೃಂಭಣೆಯಿಂದ ನಡೆದ ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ!

14/04/2025
edit post
ಫಿಪ ವಿಶ್ವಕಪ್ ಫುಟ್ ಬಾಲ್ ಫೈನಲ್:

ಫಿಪ ವಿಶ್ವಕಪ್ ಫುಟ್ ಬಾಲ್ ಫೈನಲ್:

0
edit post
‘ಶ್ರೀ.ಸಿದ್ದಗಂಗಾ ಸಿರಿ ಪ್ರಶಸ್ತಿ’

‘ಶ್ರೀ.ಸಿದ್ದಗಂಗಾ ಸಿರಿ ಪ್ರಶಸ್ತಿ’

0
edit post
ಅಖಿಲ ಭಾರತ ಹಿಂದೂ ಮಹಾಸಭಾ ಹೆಸರಿನಲ್ಲಿ ಪುಂಡಾಟಿಕೆ!

ಅಖಿಲ ಭಾರತ ಹಿಂದೂ ಮಹಾಸಭಾ ಹೆಸರಿನಲ್ಲಿ ಪುಂಡಾಟಿಕೆ!

0
edit post
ಕೊರೊನಾ ಆರ್ಭಟಕ್ಕೆ ಚೀನಾ ತತ್ತರ!

ಕೊರೊನಾ ಆರ್ಭಟಕ್ಕೆ ಚೀನಾ ತತ್ತರ…!

0
edit post
ಭಯೋತ್ಪಾದಕರ ಸಹೋದರಿ: ಬಿಜೆಪಿಗರ ಮನಸ್ಸಿನಲ್ಲಿ ಫ್ಯಾಸಿಸ್ಟ್ ಭಯೋತ್ಪಾದನೆ ಹರಡಿದೆ – ತಮಿಮುನ್ ಅನ್ಸಾರಿ

ಭಯೋತ್ಪಾದಕರ ಸಹೋದರಿ: ಬಿಜೆಪಿಗರ ಮನಸ್ಸಿನಲ್ಲಿ ಫ್ಯಾಸಿಸ್ಟ್ ಭಯೋತ್ಪಾದನೆ ಹರಡಿದೆ – ತಮಿಮುನ್ ಅನ್ಸಾರಿ

14/05/2025
edit post
ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಬಾಲಕಿ ಖುಷಿ ಅವರ ಪೋಷಕರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಡಿ.ಕೆ.ಶಿವಕುಮಾರ್

ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಬಾಲಕಿ ಖುಷಿ ಅವರ ಪೋಷಕರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಡಿ.ಕೆ.ಶಿವಕುಮಾರ್

14/05/2025
edit post
ಆಗಮ ನಿಯಮಗಳಿಗೆ ಒಳಪಡದ ದೇವಾಲಯಗಳಲ್ಲಿ ಎಲ್ಲಾ ಜಾತಿಗಳ ಅರ್ಚಕರನ್ನು ನೇಮಿಸಬಹುದು: ಸುಪ್ರೀಂ ಕೋರ್ಟ್

ಆಗಮ ನಿಯಮಗಳಿಗೆ ಒಳಪಡದ ದೇವಾಲಯಗಳಲ್ಲಿ ಎಲ್ಲಾ ಜಾತಿಗಳ ಅರ್ಚಕರನ್ನು ನೇಮಿಸಬಹುದು: ಸುಪ್ರೀಂ ಕೋರ್ಟ್

14/05/2025
edit post
ಅಮೆರಿಕ ಭಾರತದ ದೊಡ್ಡಣ್ಣನೇ? – ಭಾರತ ಸರ್ಕಾರದ ವಿದೇಶಾಂಗ ನೀತಿಯಲ್ಲಿ ಸಮಸ್ಯೆ ಏನು? ಒಂದು ನೋಟ

ಅಮೆರಿಕ ಭಾರತದ ದೊಡ್ಡಣ್ಣನೇ? – ಭಾರತ ಸರ್ಕಾರದ ವಿದೇಶಾಂಗ ನೀತಿಯಲ್ಲಿ ಸಮಸ್ಯೆ ಏನು? ಒಂದು ನೋಟ

14/05/2025

Recent News

edit post
ಭಯೋತ್ಪಾದಕರ ಸಹೋದರಿ: ಬಿಜೆಪಿಗರ ಮನಸ್ಸಿನಲ್ಲಿ ಫ್ಯಾಸಿಸ್ಟ್ ಭಯೋತ್ಪಾದನೆ ಹರಡಿದೆ – ತಮಿಮುನ್ ಅನ್ಸಾರಿ

ಭಯೋತ್ಪಾದಕರ ಸಹೋದರಿ: ಬಿಜೆಪಿಗರ ಮನಸ್ಸಿನಲ್ಲಿ ಫ್ಯಾಸಿಸ್ಟ್ ಭಯೋತ್ಪಾದನೆ ಹರಡಿದೆ – ತಮಿಮುನ್ ಅನ್ಸಾರಿ

14/05/2025
edit post
ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಬಾಲಕಿ ಖುಷಿ ಅವರ ಪೋಷಕರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಡಿ.ಕೆ.ಶಿವಕುಮಾರ್

ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಬಾಲಕಿ ಖುಷಿ ಅವರ ಪೋಷಕರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಡಿ.ಕೆ.ಶಿವಕುಮಾರ್

14/05/2025
edit post
ಆಗಮ ನಿಯಮಗಳಿಗೆ ಒಳಪಡದ ದೇವಾಲಯಗಳಲ್ಲಿ ಎಲ್ಲಾ ಜಾತಿಗಳ ಅರ್ಚಕರನ್ನು ನೇಮಿಸಬಹುದು: ಸುಪ್ರೀಂ ಕೋರ್ಟ್

ಆಗಮ ನಿಯಮಗಳಿಗೆ ಒಳಪಡದ ದೇವಾಲಯಗಳಲ್ಲಿ ಎಲ್ಲಾ ಜಾತಿಗಳ ಅರ್ಚಕರನ್ನು ನೇಮಿಸಬಹುದು: ಸುಪ್ರೀಂ ಕೋರ್ಟ್

14/05/2025
edit post
ಅಮೆರಿಕ ಭಾರತದ ದೊಡ್ಡಣ್ಣನೇ? – ಭಾರತ ಸರ್ಕಾರದ ವಿದೇಶಾಂಗ ನೀತಿಯಲ್ಲಿ ಸಮಸ್ಯೆ ಏನು? ಒಂದು ನೋಟ

ಅಮೆರಿಕ ಭಾರತದ ದೊಡ್ಡಣ್ಣನೇ? – ಭಾರತ ಸರ್ಕಾರದ ವಿದೇಶಾಂಗ ನೀತಿಯಲ್ಲಿ ಸಮಸ್ಯೆ ಏನು? ಒಂದು ನೋಟ

14/05/2025
Dynamic Leader | ಡೈನಾಮಿಕ್ ಲೀಡರ್

DYNAMIC LEADER is a popular online Kannada newsportal, going source for technical and digital content for its influential audience around the globe.

Follow Us

Browse by Category

  • ಇತರೆ ಸುದ್ಧಿಗಳು
  • ಉದ್ಯೋಗ
  • ಕ್ರೀಡೆ
  • ಕ್ರೈಂ ರಿಪೋರ್ಟ್ಸ್
  • ದೇಶ
  • ಬೆಂಗಳೂರು
  • ರಾಜಕೀಯ
  • ರಾಜ್ಯ
  • ಲೇಖನ
  • ವಿದೇಶ
  • ಶಿಕ್ಷಣ
  • ಸಂಪಾದಕೀಯ
  • ಸಿನಿಮಾ

You can reach us via email or phone.

ನಮ್ಮ ಸಂಪರ್ಕ: ಡಿ.ಸಿ.ಪ್ರಕಾಶ್, ಸಂಪಾದಕರು
ಫೋನ್ / ವಾಟ್ಸಾಪ್: +91-9741553161
ಈ-ಮೇಲ್: dynamicleaderdesk@gmail.com

Recent News

ಭಯೋತ್ಪಾದಕರ ಸಹೋದರಿ: ಬಿಜೆಪಿಗರ ಮನಸ್ಸಿನಲ್ಲಿ ಫ್ಯಾಸಿಸ್ಟ್ ಭಯೋತ್ಪಾದನೆ ಹರಡಿದೆ – ತಮಿಮುನ್ ಅನ್ಸಾರಿ

ಭಯೋತ್ಪಾದಕರ ಸಹೋದರಿ: ಬಿಜೆಪಿಗರ ಮನಸ್ಸಿನಲ್ಲಿ ಫ್ಯಾಸಿಸ್ಟ್ ಭಯೋತ್ಪಾದನೆ ಹರಡಿದೆ – ತಮಿಮುನ್ ಅನ್ಸಾರಿ

14/05/2025
ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಬಾಲಕಿ ಖುಷಿ ಅವರ ಪೋಷಕರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಡಿ.ಕೆ.ಶಿವಕುಮಾರ್

ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಬಾಲಕಿ ಖುಷಿ ಅವರ ಪೋಷಕರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಡಿ.ಕೆ.ಶಿವಕುಮಾರ್

14/05/2025
  • Site Terms
  • Privacy
  • Advertisement
  • Cookies Policy
  • Contact Us

Copyrights © 2019 - 25 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS

No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಲೇಖನ
  • ಸಂಪಾದಕೀಯ

Copyrights © 2019 - 25 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS