• About
  • Advertise
  • Privacy & Policy
  • Contact
Dynamic Leader | ಡೈನಾಮಿಕ್ ಲೀಡರ್
Advertisement
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಲೇಖನ
  • ಸಂಪಾದಕೀಯ
No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಲೇಖನ
  • ಸಂಪಾದಕೀಯ
No Result
View All Result
Dynamic Leader | ಡೈನಾಮಿಕ್ ಲೀಡರ್
No Result
View All Result
Home ದೇಶ

ಜಾತಿವಾರು ಜನಗಣತಿ: “ಸುಳ್ಳುಗಳನ್ನು ಹರಡುವ ಬದಲು ಉತ್ತರಿಸಿ..” – ಅಮಿತ್ ಶಾ ಅವರನ್ನು ಪ್ರಶ್ನಿಸಿದ ತೇಜಸ್ವಿ ಯಾದವ್!

by Dynamic Leader
05/11/2023
in ದೇಶ, ರಾಜಕೀಯ
0
ಜಾತಿವಾರು ಜನಗಣತಿ: “ಸುಳ್ಳುಗಳನ್ನು ಹರಡುವ ಬದಲು ಉತ್ತರಿಸಿ..” – ಅಮಿತ್ ಶಾ ಅವರನ್ನು ಪ್ರಶ್ನಿಸಿದ ತೇಜಸ್ವಿ ಯಾದವ್!
0
SHARES
0
VIEWS
Share on FacebookShare on Twitter

ಪಾಟ್ನಾ: 1871ರಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತದಲ್ಲಿ ಜನಗಣತಿ ನಡೆಸಲಾಯಿತು. ತರುವಾಯ, 1881ರಲ್ಲಿ, ಭಾರತದಲ್ಲಿ ಮೊದಲ ಜಾತಿವಾರು ಜನಗಣತಿಯನ್ನು ನಡೆಸಲಾಯಿತು. ಅದರ ನಂತರ ಅಂತಿಮವಾಗಿ 1931ರಲ್ಲಿ ಜಾತಿವಾರು ಜನಗಣತಿಯನ್ನು ನಡೆಸಲಾಯಿತು. ಸ್ವಾತಂತ್ರ್ಯದ ನಂತರ 1951 ರಲ್ಲಿ ದೇಶವು ತನ್ನ ಮೊದಲ ಜನಗಣತಿಯನ್ನು ನಡೆಸಿತು. ಆದರೆ, ಅದರಲ್ಲಿ ಜಾತಿವಾರು ವಿವರಗಳನ್ನು ತೆಗೆದುಕೊಂಡಿಲ್ಲ.

1931ರ ಜಾತಿವಾರು ಜನಗಣತಿಯ ಪ್ರಕಾರ ಜಾತಿವಾರು ಮೀಸಲಾತಿಯನ್ನು ವರ್ಗೀಕರಿಸಲಾಯಿತು. ಅದು ಇದುವರೆಗೂ ಆಚರಣೆಯಲ್ಲಿದೆ. ಭಾರತದಲ್ಲಿ ಪ್ರತಿ 10 ವರ್ಷಗಳಿಗೊಮ್ಮೆ ಜನಗಣತಿ ನಡೆಸಲಾಗುತ್ತದೆ. ಈ ಹಿನ್ನೆಲೆಯಲ್ಲಿ 2011ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರಾಷ್ಟ್ರವ್ಯಾಪಿ ಜನಗಣತಿ ನಡೆಸಿ ಪೂರ್ಣಗೊಳಿಸಲಾಯಿತು.

ಆದರೆ, 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬಂದ ನಂತರ ಅದನ್ನು ಪ್ರಕಟಿಸಲಿಲ್ಲ. ಈ ಹಿನ್ನಲೆಯಲ್ಲಿ, ಜಾತಿವಾರು ಜನಗಣತಿ ನಡೆಸಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದಿವೆ. ಆದರೆ, ಬಿಜೆಪಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿದೆ.

ಏತನ್ಮಧ್ಯೆ, ಜೆಡಿಯು-ಕಾಂಗ್ರೆಸ್-ಆರ್.ಜೆ.ಡಿ ಮೈತ್ರಿ ಸರ್ಕಾರ ಆಡಳಿತವಿರುವ ಬಿಹಾರ ರಾಜ್ಯದಲ್ಲಿ ಕಳೆದ ತಿಂಗಳು ಜಾತಿವಾರು ಜನಗಣತಿ ಬಿಡುಗಡೆ ಮಾಡಲಾಯಿತು. ಇದರ ಬೆನ್ನಲ್ಲೇ ವಿವಿಧ ರಾಜ್ಯಗಳಲ್ಲಿ ಜಾತಿವಾರು ಜನಗಣತಿ ನಡೆಸುವುದಾಗಿ ಘೋಷಿಸಲಾಗಿದೆ. ಈ ಸಮೀಕ್ಷೆಯಿಂದ ಬಿಜೆಪಿಗೆ ದೊಡ್ಡ ಹಿನ್ನಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಛತ್ತೀಸ್‌ಗಢದಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ, ಮಾತನಾಡುವ ವೇಳೆ, “ಜಾತಿವಾರು ಗಣತಿಯನ್ನು ಬಿಜೆಪಿ ಎಂದಿಗೂ ವಿರೋಧಿಸಿಲ್ಲ “ಎಂದರು. “ಬಿಹಾರದಲ್ಲಿ ನಡೆದ ಜಾತಿವಾರು ಜನಗಣತಿಯಲ್ಲಿ ಯಾದವ ಮತ್ತು ಮುಸ್ಲಿಂ ಸಮುದಾಯದವರ ಸಂಖ್ಯೆ ಹೆಚ್ಚಾಗಿದ್ದು, ಇತರೆ ಸಮುದಾಯಗಳ ಸಂಖ್ಯೆ ಕಡಿಮೆಯಾಗಿದೆ” ಎಂದೂ ಆರೋಪಿಸಿದ್ದಾರೆ.

ಈ ಹಿನ್ನಲೆಯಲ್ಲಿ, ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಅಮಿತ್ ಶಾ ಅವರ ಆರೋಪವನ್ನು ಖಂಡಿಸಿದ್ದಾರೆ. ಮತ್ತು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಪೋಸ್ಟ್ ನಲ್ಲಿ “ಸುಳ್ಳು ಮತ್ತು ಗೊಂದಲವನ್ನು ಹರಡುವ ಬದಲು, ದಯವಿಟ್ಟು ಇದಕ್ಕೆ ಉತ್ತರಿಸಿ ಅಮಿತ್ ಶಾ ಜೀ” ಎಂದು ಹೇಳಿ 5 ಪ್ರಶ್ನೆಗಳು ಕೇಳಿದ್ದಾರೆ.

1. ಬಿಹಾರದ ಜಾತಿವಾರು ಜನಗಣತಿ ದತ್ತಾಂಶ ತಪ್ಪಾಗಿದ್ದರೆ, ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಲ್ಲಿ ಜಾತಿವಾರು ಜನಗಣತಿ ನಡೆಸಿ ಅದರ ಅಂಕಿ ಸಂಖ್ಯೆ ಮಾಹಿತಿಯನ್ನು ಏಕೆ ಪ್ರಕಟಿಸಲಿಲ್ಲ?

2. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಿಜೆಪಿ ಜಾತಿವಾರು ಜನಗಣತಿಯನ್ನು ಏಕೆ ನಡೆಸಲಿಲ್ಲ?

3. ಕೇಂದ್ರ ಸರ್ಕಾರದಲ್ಲಿ ಎಷ್ಟು ಕ್ಯಾಬಿನೆಟ್ ಮಂತ್ರಿಗಳು ???????????? / ???????? / ???????? ವರ್ಗಕ್ಕೆ ಸೇರಿದ್ದಾರೆ ಮತ್ತು ಎಷ್ಟು ಮಂದಿ ???????????? / ???????? / ???????? ವರ್ಗಕ್ಕೆ ಸೇರಿದವರಲ್ಲ; ಪಟ್ಟಿಯನ್ನು ಪ್ರಕಟಿಸಿ. ಹೀಗಿದ್ದರೂ ಅವರಿಗೆ ಏಕೆ ಅಮುಖ್ಯ ಇಲಾಖೆಗಳನ್ನು ನೀಡಲಾಗಿದೆ.

4. ???????????? / ???????? / ???????? ಬಣದಿಂದ ಎಷ್ಟು ಬಿಜೆಪಿ ಮುಖ್ಯಮಂತ್ರಿಗಳಿದ್ದಾರೆ? ಹಿಂದುಳಿದ ಮತ್ತು ಹಿಂದುಳಿದವರಲ್ಲದ ಮುಖ್ಯಮಂತ್ರಿಗಳ ಹೋಲಿಕೆ ಮಾಡಿ ಶೇಕಡಾವಾರು ಪ್ರಮಾಣವನ್ನು ತಿಳಿಸಿ.

5. ಕೇಂದ್ರ ಕ್ಯಾಬಿನೆಟ್ ಮಂತ್ರಿಗಳಲ್ಲಿ ಬಿಹಾರದಿಂದ ಎಷ್ಟು ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ಮಂತ್ರಿಗಳು ಇದ್ದಾರೆ? ಶೂನ್ಯವೇ ???? ?

ಈ ಪ್ರಶ್ನೆಗಳಿಗೆ ಉತ್ತರಿಸುವುದರಿಂದ ನಿಮ್ಮನ್ನೂ ಸೇರಿಸಿ 8????% ಹಿಂದುಳಿದ ಮತ್ತು ದಲಿತ ಹಿಂದೂಗಳ ಕಣ್ಣು ತೆರೆಯುತ್ತದೆ.” ಎಂದು ಉಲ್ಲೇಖಿಸಿದ್ದಾರೆ.

Tags: Amit ShahbiharBJpCast CensusJDURJDTejashwi Yadavಅಮಿತ್ ಶಾಆರ್.ಜೆ.ಡಿಜಾತಿ ಗಣತಿಜೆಡಿಯುತೇಜಸ್ವಿ ಯಾದವ್ಬಿಜೆಪಿಬಿಹಾರ್
Previous Post

2024ರಲ್ಲಿ ರಷ್ಯಾದ ಅಧ್ಯಕ್ಷ ಪುಟಿನ್ ತನ್ನ ದೇಶದವನೊಬ್ಬನಿಂದ ಹತ್ಯೆಯಾಗುತ್ತಾರೆ: ಬಾಬಾ ವಂಗಾ ಭವಿಷ್ಯ.!

Next Post

68ನೇ ಕನ್ನಡ ರಾಜ್ಯೋತ್ಸವವನ್ನು ಸಾಂಸ್ಕೃತಿಕವಾಗಿ ಆಚರಿಸಿದ ಕುವೆಂಪು ನಗರದ ನಿವಾಸಿಗಳು!

Dynamic Leader

Next Post
68ನೇ ಕನ್ನಡ ರಾಜ್ಯೋತ್ಸವವನ್ನು ಸಾಂಸ್ಕೃತಿಕವಾಗಿ ಆಚರಿಸಿದ ಕುವೆಂಪು ನಗರದ ನಿವಾಸಿಗಳು!

68ನೇ ಕನ್ನಡ ರಾಜ್ಯೋತ್ಸವವನ್ನು ಸಾಂಸ್ಕೃತಿಕವಾಗಿ ಆಚರಿಸಿದ ಕುವೆಂಪು ನಗರದ ನಿವಾಸಿಗಳು!

Stay Connected test

  • 23.9k Followers
  • 99 Subscribers
  • Trending
  • Comments
  • Latest
edit post
ಜಾತಿಯೇ ಇಲ್ಲದಿದ್ದರೆ, ನೀವೆಲ್ಲರೂ ಯಾರು? – ಫುಲೆ ಚಿತ್ರದ ವಿಚಾರವಾಗಿ ಅನುರಾಗ್ ಗರಂ!

ಜಾತಿಯೇ ಇಲ್ಲದಿದ್ದರೆ, ನೀವೆಲ್ಲರೂ ಯಾರು? – ಫುಲೆ ಚಿತ್ರದ ವಿಚಾರವಾಗಿ ಅನುರಾಗ್ ಗರಂ!

18/04/2025
edit post
ಯಾದಗಿರಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಮಟ್ಟದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿಯ ಸಭೆ!

ಯಾದಗಿರಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಮಟ್ಟದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿಯ ಸಭೆ!

10/04/2025
edit post
ರಾಜೀವ್ ಗಾಂಧಿ ನಗರ ಮೈದಾನದಲ್ಲಿ ಅಂಬೇಡ್ಕರ್ ಜಯಂತ್ಯೋತ್ಸವ ಅಂಗವಾಗಿ ಪಂದ್ಯಾವಳಿ

ರಾಜೀವ್ ಗಾಂಧಿ ನಗರ ಮೈದಾನದಲ್ಲಿ ಅಂಬೇಡ್ಕರ್ ಜಯಂತ್ಯೋತ್ಸವ ಅಂಗವಾಗಿ ಪಂದ್ಯಾವಳಿ

12/04/2025
edit post
ಚಲಾವಣೆಯಲ್ಲಿರುವ 500 ರೂಪಾಯಿ ನೋಟುಗಳನ್ನು ಹಿಂಪಡೆಯಬೇಕು: ಚಂದ್ರಬಾಬು ನಾಯ್ಡು ಒತ್ತಾಯ!

ಚಲಾವಣೆಯಲ್ಲಿರುವ 500 ರೂಪಾಯಿ ನೋಟುಗಳನ್ನು ಹಿಂಪಡೆಯಬೇಕು: ಚಂದ್ರಬಾಬು ನಾಯ್ಡು ಒತ್ತಾಯ!

28/05/2025
edit post
ಫಿಪ ವಿಶ್ವಕಪ್ ಫುಟ್ ಬಾಲ್ ಫೈನಲ್:

ಫಿಪ ವಿಶ್ವಕಪ್ ಫುಟ್ ಬಾಲ್ ಫೈನಲ್:

0
edit post
‘ಶ್ರೀ.ಸಿದ್ದಗಂಗಾ ಸಿರಿ ಪ್ರಶಸ್ತಿ’

‘ಶ್ರೀ.ಸಿದ್ದಗಂಗಾ ಸಿರಿ ಪ್ರಶಸ್ತಿ’

0
edit post
ಅಖಿಲ ಭಾರತ ಹಿಂದೂ ಮಹಾಸಭಾ ಹೆಸರಿನಲ್ಲಿ ಪುಂಡಾಟಿಕೆ!

ಅಖಿಲ ಭಾರತ ಹಿಂದೂ ಮಹಾಸಭಾ ಹೆಸರಿನಲ್ಲಿ ಪುಂಡಾಟಿಕೆ!

0
edit post
ಕೊರೊನಾ ಆರ್ಭಟಕ್ಕೆ ಚೀನಾ ತತ್ತರ!

ಕೊರೊನಾ ಆರ್ಭಟಕ್ಕೆ ಚೀನಾ ತತ್ತರ…!

0
edit post
ಭಾರತ ಮತ್ತು ಪಾಕಿಸ್ತಾನ ನಡುವಿನ ಪರಮಾಣು ಸಂಘರ್ಷವನ್ನು ನಾನೇ ತಡೆದಿದ್ದು ಎಂದು ಟ್ರಂಪ್ 21 ದಿನಗಳಲ್ಲಿ 11ನೇ ಬಾರಿಗೆ ಹೇಳಿಕೊಂಡಿದ್ದಾರೆ.

ಮೋದಿಯಂತೆ ಟ್ರಂಪ್ ಕೂಡ ಸುಳ್ಳು ಹೇಳುತ್ತಿದ್ದಾರೆಯೇ?: ಜೈರಾಮ್ ರಮೇಶ್ ಪ್ರಶ್ನೆ!

31/05/2025
edit post
ದೇಶಾದ್ಯಂತ ಯುದ್ಧ ಪ್ರಯೋಗಗಳಲ್ಲಿ ಆತ್ಮಹತ್ಯಾ ಡ್ರೋನ್‌ಗಳ ಪರೀಕ್ಷೆ ಯಶಸ್ವಿ!

ದೇಶಾದ್ಯಂತ ಯುದ್ಧ ಪ್ರಯೋಗಗಳಲ್ಲಿ ಆತ್ಮಹತ್ಯಾ ಡ್ರೋನ್‌ಗಳ ಪರೀಕ್ಷೆ ಯಶಸ್ವಿ!

31/05/2025
edit post
ಶಿವರಾಜ್ಕುಮಾರ್ ಚೇತರಿಸಿಕೊಂಡ ಸಂತೋಷದಲ್ಲಿ ಕಮಲ್ ಹಾಸನ್ ವ್ಯಕ್ತಪಡಿಸಿದ ಮಾತುಗಳನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.

ಕನ್ನಡ ಭಾಷೆಯ ಪ್ರತಿಪಾದಕರಾಗಿರುವ ಕಮಲ್ ಹಾಸನ್ ಎಂದಿಗೂ ಕೀಳಾಗಿ ಕಾಣುವ ಉದ್ದೇಶವನ್ನು ಹೊಂದಿರಲಿಲ್ಲ – ದಕ್ಷಿಣ ಭಾರತೀಯ ಕಲಾವಿದರ ಸಂಘ ಸ್ಪಷ್ಟನೆ!

30/05/2025
edit post
10 ಲಕ್ಷ ಸರ್ಕಾರಿ ಕಚೇರಿಗಳಲ್ಲಿ ಚೀನೀ ಕ್ಯಾಮೆರಾಗಳು.. ಭದ್ರತಾ ದತ್ತಾಂಶ ಸೋರಿಕೆ?

10 ಲಕ್ಷ ಸರ್ಕಾರಿ ಕಚೇರಿಗಳಲ್ಲಿ ಚೀನೀ ಕ್ಯಾಮೆರಾಗಳು.. ಭದ್ರತಾ ದತ್ತಾಂಶ ಸೋರಿಕೆ?

30/05/2025

Recent News

edit post
ಭಾರತ ಮತ್ತು ಪಾಕಿಸ್ತಾನ ನಡುವಿನ ಪರಮಾಣು ಸಂಘರ್ಷವನ್ನು ನಾನೇ ತಡೆದಿದ್ದು ಎಂದು ಟ್ರಂಪ್ 21 ದಿನಗಳಲ್ಲಿ 11ನೇ ಬಾರಿಗೆ ಹೇಳಿಕೊಂಡಿದ್ದಾರೆ.

ಮೋದಿಯಂತೆ ಟ್ರಂಪ್ ಕೂಡ ಸುಳ್ಳು ಹೇಳುತ್ತಿದ್ದಾರೆಯೇ?: ಜೈರಾಮ್ ರಮೇಶ್ ಪ್ರಶ್ನೆ!

31/05/2025
edit post
ದೇಶಾದ್ಯಂತ ಯುದ್ಧ ಪ್ರಯೋಗಗಳಲ್ಲಿ ಆತ್ಮಹತ್ಯಾ ಡ್ರೋನ್‌ಗಳ ಪರೀಕ್ಷೆ ಯಶಸ್ವಿ!

ದೇಶಾದ್ಯಂತ ಯುದ್ಧ ಪ್ರಯೋಗಗಳಲ್ಲಿ ಆತ್ಮಹತ್ಯಾ ಡ್ರೋನ್‌ಗಳ ಪರೀಕ್ಷೆ ಯಶಸ್ವಿ!

31/05/2025
edit post
ಶಿವರಾಜ್ಕುಮಾರ್ ಚೇತರಿಸಿಕೊಂಡ ಸಂತೋಷದಲ್ಲಿ ಕಮಲ್ ಹಾಸನ್ ವ್ಯಕ್ತಪಡಿಸಿದ ಮಾತುಗಳನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.

ಕನ್ನಡ ಭಾಷೆಯ ಪ್ರತಿಪಾದಕರಾಗಿರುವ ಕಮಲ್ ಹಾಸನ್ ಎಂದಿಗೂ ಕೀಳಾಗಿ ಕಾಣುವ ಉದ್ದೇಶವನ್ನು ಹೊಂದಿರಲಿಲ್ಲ – ದಕ್ಷಿಣ ಭಾರತೀಯ ಕಲಾವಿದರ ಸಂಘ ಸ್ಪಷ್ಟನೆ!

30/05/2025
edit post
10 ಲಕ್ಷ ಸರ್ಕಾರಿ ಕಚೇರಿಗಳಲ್ಲಿ ಚೀನೀ ಕ್ಯಾಮೆರಾಗಳು.. ಭದ್ರತಾ ದತ್ತಾಂಶ ಸೋರಿಕೆ?

10 ಲಕ್ಷ ಸರ್ಕಾರಿ ಕಚೇರಿಗಳಲ್ಲಿ ಚೀನೀ ಕ್ಯಾಮೆರಾಗಳು.. ಭದ್ರತಾ ದತ್ತಾಂಶ ಸೋರಿಕೆ?

30/05/2025
Dynamic Leader | ಡೈನಾಮಿಕ್ ಲೀಡರ್

DYNAMIC LEADER is a popular online Kannada newsportal, going source for technical and digital content for its influential audience around the globe.

Follow Us

Browse by Category

  • ಇತರೆ ಸುದ್ಧಿಗಳು
  • ಉದ್ಯೋಗ
  • ಕ್ರೀಡೆ
  • ಕ್ರೈಂ ರಿಪೋರ್ಟ್ಸ್
  • ದೇಶ
  • ಬೆಂಗಳೂರು
  • ರಾಜಕೀಯ
  • ರಾಜ್ಯ
  • ಲೇಖನ
  • ವಿದೇಶ
  • ಶಿಕ್ಷಣ
  • ಸಂಪಾದಕೀಯ
  • ಸಿನಿಮಾ

You can reach us via email or phone.

ನಮ್ಮ ಸಂಪರ್ಕ: ಡಿ.ಸಿ.ಪ್ರಕಾಶ್, ಸಂಪಾದಕರು
ಫೋನ್ / ವಾಟ್ಸಾಪ್: +91-9741553161
ಈ-ಮೇಲ್: dynamicleaderdesk@gmail.com

Recent News

ಭಾರತ ಮತ್ತು ಪಾಕಿಸ್ತಾನ ನಡುವಿನ ಪರಮಾಣು ಸಂಘರ್ಷವನ್ನು ನಾನೇ ತಡೆದಿದ್ದು ಎಂದು ಟ್ರಂಪ್ 21 ದಿನಗಳಲ್ಲಿ 11ನೇ ಬಾರಿಗೆ ಹೇಳಿಕೊಂಡಿದ್ದಾರೆ.

ಮೋದಿಯಂತೆ ಟ್ರಂಪ್ ಕೂಡ ಸುಳ್ಳು ಹೇಳುತ್ತಿದ್ದಾರೆಯೇ?: ಜೈರಾಮ್ ರಮೇಶ್ ಪ್ರಶ್ನೆ!

31/05/2025
ದೇಶಾದ್ಯಂತ ಯುದ್ಧ ಪ್ರಯೋಗಗಳಲ್ಲಿ ಆತ್ಮಹತ್ಯಾ ಡ್ರೋನ್‌ಗಳ ಪರೀಕ್ಷೆ ಯಶಸ್ವಿ!

ದೇಶಾದ್ಯಂತ ಯುದ್ಧ ಪ್ರಯೋಗಗಳಲ್ಲಿ ಆತ್ಮಹತ್ಯಾ ಡ್ರೋನ್‌ಗಳ ಪರೀಕ್ಷೆ ಯಶಸ್ವಿ!

31/05/2025
  • Site Terms
  • Privacy
  • Advertisement
  • Cookies Policy
  • Contact Us

Copyrights © 2019 - 25 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS

No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಲೇಖನ
  • ಸಂಪಾದಕೀಯ

Copyrights © 2019 - 25 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS