17ನೇ ಲೋಕಸಭೆ ಅಧಿವೇಶನಗಳು: ಒಂದೇ ಒಂದು ಪ್ರಶ್ನೆ ಎತ್ತದ ಕರ್ನಾಟಕದ 4 ಬಿಜೆಪಿ ಸಂಸದರು! » Dynamic Leader
October 23, 2024
ರಾಜ್ಯ

17ನೇ ಲೋಕಸಭೆ ಅಧಿವೇಶನಗಳು: ಒಂದೇ ಒಂದು ಪ್ರಶ್ನೆ ಎತ್ತದ ಕರ್ನಾಟಕದ 4 ಬಿಜೆಪಿ ಸಂಸದರು!

17ನೇ ಲೋಕಸಭೆಯ ಅಧಿವೇಶನದಲ್ಲಿ 9 ಸಂಸದರು ಒಂದೇ ಒಂದು ಪ್ರಶ್ನೆಯನ್ನೂ ಎತ್ತಲಿಲ್ಲ ಎಂಬ ವರದಿ ಅಚ್ಚರಿ ಮೂಡಿಸಿದೆ.

17ನೇ ಲೋಕಸಭೆಯಲ್ಲಿ ಚಲನಚಿತ್ರ ನಟರು ಹಾಗೂ ರಾಜಕಾರಣಿಗಳೂ ಆಗಿರುವ ಸನ್ನಿ ಡಿಯೋಲ್ ಮತ್ತು ಶತ್ರುಘ್ನ ಸಿನ್ಹಾ ಸೇರಿದಂತೆ 9 ಸಂಸದರು ಒಂದೂ ಮಾತನಾಡಲಿಲ್ಲ ಎಂದು ವರದಿಯಾಗಿದೆ. ಈ ಪಟ್ಟಿಯಲ್ಲಿರುವ 9 ಸಂಸದರ ಪೈಕಿ 6 ಮಂದಿ ಬಿಜೆಪಿಗೆ ಸೇರಿದವರಾಗಿದ್ದು ಅದರಲ್ಲಿ 4 ಜನ ಕರ್ನಾಟಕದವರು ಎಂಬುದು ಗಮನಾರ್ಹ.

ಮೇ 2019ರಲ್ಲಿ ಲೋಕಸಭೆ ಚುನಾವಣೆಯ ನಂತರ 17ನೇ ಲೋಕಸಭೆಯ ಮೊದಲ ಅಧಿವೇಶನವು ಜೂನ್ 17, 2019 ರಂದು ಪ್ರಾರಂಭವಾಯಿತು. ಒಟ್ಟು 543 ಸಂಸದರ ಪೈಕಿ ಬಿಜೆಪಿಯ 6 ಸಂಸದರು, ತೃಣಮೂಲ ಕಾಂಗ್ರೆಸ್‌ನ 2 ಮತ್ತು ಬಹುಜನ ಸಮಾಜ ಪಕ್ಷದ ಒಬ್ಬರು ಕಳೆದ 5 ವರ್ಷಗಳಲ್ಲಿ ನಡೆದ ಲೋಕಸಭೆ ಅಧಿವೇಶನಗಳಲ್ಲಿ ಯಾವುದೇ ಚರ್ಚೆಯಲ್ಲಿ ಭಾಗವಹಿಸಿಲ್ಲ ಎಂದು ಲೋಕಸಭೆಯ ದಾಖಲೆಗಳು ತೋರಿಸುತ್ತವೆ.

9 ಸಂಸದರು ಯಾರು?
ಬಿಜೆಪಿ ಸಂಸದರುಗಳಾದ ರಮೇಶ ಚಂದಪ್ಪ ಜಿಗಜಿಣಗಿ (ಬಿಜಾಪುರ-ಎಸ್‌ಸಿ), ಬಿ.ಎನ್.ಬಚ್ಚೇಗೌಡ (ಚಿಕ್ಕಬಳ್ಳಾಪುರ), ಅನಂತ್ ಕುಮಾರ್ ಹೆಗಡೆ (ಉತ್ತರ ಕನ್ನಡ), ವಿ.ಶ್ರೀನಿವಾಸ್ ಪ್ರಸಾದ್ (ಸಮರಾಜನಗರ-ಎಸ್‌ಸಿ), ಪ್ರಧಾನ್ ಬರುವಾ (ಲಖಿಂಪುರ, ಅಸ್ಸಾಂ), ಸನ್ನಿ ಡಿಯೋಲ್ (ಗುರುದಾಸ್ಪುರ್, ಪಂಜಾಬ್)

ಬಹುಜನ ಸಮಾಜ ಪಕ್ಷದ ಸಂಸದ ಅತುಲ್ ಕುಮಾರ್ ಸಿಂಗ್ (ಘೋಸಿ, ಉತ್ತರಪ್ರದೇಶ), ಅವರು ಪ್ರಸ್ತುತ ಜೈಲಿನಲ್ಲಿದ್ದಾರೆ.

ಟಿಎಂಸಿಯ ಶತ್ರುಘ್ನ ಸಿನ್ಹಾ (ಅಸನ್ಸೋಲ್, ಪಶ್ಚಿಮ ಬಂಗಾಳ) ಮತ್ತು ಅಧಿಕಾರಿ ದಿಬ್ಯೇಂದು (ತಮ್ಲುಕ್, ಪಶ್ಚಿಮ ಬಂಗಾಳ)

ಸ್ಪೀಕರ್ ಓಂ ಬಿರ್ಲಾ ಅವರು ಸನ್ನಿ ಡಿಯೋಲ್‌ಗೆ ಎರಡು ಬಾರಿ ಕರೆ ಮಾಡಿ, ಯಾವುದೇ ರೂಪದಲ್ಲಿ ಸದನವನ್ನು ಉದ್ದೇಶಿಸಿ ಮಾತನಾಡುವಂತೆ ಕೇಳಿಕೊಂಡರು. ಆದರೆ, ಸನ್ನಿ ಡಿಯೋಲ್ ಮಾತನಾಡಲಿಲ್ಲ ಎಂದು ಆಂಗ್ಲ ಮಾಧ್ಯಮ ವರದಿ ಮಾಡಿದೆ. ಆದರೆ ಶೂನ್ಯವೇಳೆ ಚರ್ಚೆಯಲ್ಲಿ ಸನ್ನಿ ಡಿಯೋಲ್ ಸೇರಿದಂತೆ ಒಂಬತ್ತು ಸಂಸದರ ಪೈಕಿ 6 ಮಂದಿ ಲಿಖಿತ ಪ್ರಶ್ನೆಗಳನ್ನು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ಆದರೆ, ಉಳಿದ 3 ಜನ (ಶತ್ರುಘ್ನ ಸಿನ್ಹಾ, ಅತುಲ್ ಕುಮಾರ್ ಸಿಂಗ್ ಮತ್ತು ರಮೇಶ್ ಜಿಗಜಿಣಗಿ) 17ನೇ ಲೋಕಸಭೆಯಲ್ಲಿ ಲಿಖಿತ ಅಥವಾ ಮೌಖಿಕ ರೂಪದಲ್ಲಿ ಯಾವುದೇ ಚರ್ಚೆಯಲ್ಲಿ ಭಾಗವಹಿಸಲಿಲ್ಲ ಎಂದು ಹೇಳಲಾಗಿದೆ.

ಪಿಆರ್‌ಎಸ್ ಲೆಜಿಸ್ಲೇಟಿವ್ ರಿಸರ್ಚ್ (PRS Legislative Research) ಎಂಬ ಎನ್‌ಜಿಒ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, 17ನೇ ಲೋಕಸಭೆಯಲ್ಲಿ ಸಂಸದರು ಸರಾಸರಿ 45 ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ. ಕೇರಳ ಮತ್ತು ರಾಜಸ್ಥಾನದ ಸಂಸದರು ಸರಾಸರಿ ಹೆಚ್ಚು ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಬಂದಿದೆ.

Related Posts