ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Ramesh Jigajinagi Archives » Dynamic Leader
October 23, 2024
Home Posts tagged Ramesh Jigajinagi
ರಾಜ್ಯ

17ನೇ ಲೋಕಸಭೆಯ ಅಧಿವೇಶನದಲ್ಲಿ 9 ಸಂಸದರು ಒಂದೇ ಒಂದು ಪ್ರಶ್ನೆಯನ್ನೂ ಎತ್ತಲಿಲ್ಲ ಎಂಬ ವರದಿ ಅಚ್ಚರಿ ಮೂಡಿಸಿದೆ.

17ನೇ ಲೋಕಸಭೆಯಲ್ಲಿ ಚಲನಚಿತ್ರ ನಟರು ಹಾಗೂ ರಾಜಕಾರಣಿಗಳೂ ಆಗಿರುವ ಸನ್ನಿ ಡಿಯೋಲ್ ಮತ್ತು ಶತ್ರುಘ್ನ ಸಿನ್ಹಾ ಸೇರಿದಂತೆ 9 ಸಂಸದರು ಒಂದೂ ಮಾತನಾಡಲಿಲ್ಲ ಎಂದು ವರದಿಯಾಗಿದೆ. ಈ ಪಟ್ಟಿಯಲ್ಲಿರುವ 9 ಸಂಸದರ ಪೈಕಿ 6 ಮಂದಿ ಬಿಜೆಪಿಗೆ ಸೇರಿದವರಾಗಿದ್ದು ಅದರಲ್ಲಿ 4 ಜನ ಕರ್ನಾಟಕದವರು ಎಂಬುದು ಗಮನಾರ್ಹ.

ಮೇ 2019ರಲ್ಲಿ ಲೋಕಸಭೆ ಚುನಾವಣೆಯ ನಂತರ 17ನೇ ಲೋಕಸಭೆಯ ಮೊದಲ ಅಧಿವೇಶನವು ಜೂನ್ 17, 2019 ರಂದು ಪ್ರಾರಂಭವಾಯಿತು. ಒಟ್ಟು 543 ಸಂಸದರ ಪೈಕಿ ಬಿಜೆಪಿಯ 6 ಸಂಸದರು, ತೃಣಮೂಲ ಕಾಂಗ್ರೆಸ್‌ನ 2 ಮತ್ತು ಬಹುಜನ ಸಮಾಜ ಪಕ್ಷದ ಒಬ್ಬರು ಕಳೆದ 5 ವರ್ಷಗಳಲ್ಲಿ ನಡೆದ ಲೋಕಸಭೆ ಅಧಿವೇಶನಗಳಲ್ಲಿ ಯಾವುದೇ ಚರ್ಚೆಯಲ್ಲಿ ಭಾಗವಹಿಸಿಲ್ಲ ಎಂದು ಲೋಕಸಭೆಯ ದಾಖಲೆಗಳು ತೋರಿಸುತ್ತವೆ.

9 ಸಂಸದರು ಯಾರು?
ಬಿಜೆಪಿ ಸಂಸದರುಗಳಾದ ರಮೇಶ ಚಂದಪ್ಪ ಜಿಗಜಿಣಗಿ (ಬಿಜಾಪುರ-ಎಸ್‌ಸಿ), ಬಿ.ಎನ್.ಬಚ್ಚೇಗೌಡ (ಚಿಕ್ಕಬಳ್ಳಾಪುರ), ಅನಂತ್ ಕುಮಾರ್ ಹೆಗಡೆ (ಉತ್ತರ ಕನ್ನಡ), ವಿ.ಶ್ರೀನಿವಾಸ್ ಪ್ರಸಾದ್ (ಸಮರಾಜನಗರ-ಎಸ್‌ಸಿ), ಪ್ರಧಾನ್ ಬರುವಾ (ಲಖಿಂಪುರ, ಅಸ್ಸಾಂ), ಸನ್ನಿ ಡಿಯೋಲ್ (ಗುರುದಾಸ್ಪುರ್, ಪಂಜಾಬ್)

ಬಹುಜನ ಸಮಾಜ ಪಕ್ಷದ ಸಂಸದ ಅತುಲ್ ಕುಮಾರ್ ಸಿಂಗ್ (ಘೋಸಿ, ಉತ್ತರಪ್ರದೇಶ), ಅವರು ಪ್ರಸ್ತುತ ಜೈಲಿನಲ್ಲಿದ್ದಾರೆ.

ಟಿಎಂಸಿಯ ಶತ್ರುಘ್ನ ಸಿನ್ಹಾ (ಅಸನ್ಸೋಲ್, ಪಶ್ಚಿಮ ಬಂಗಾಳ) ಮತ್ತು ಅಧಿಕಾರಿ ದಿಬ್ಯೇಂದು (ತಮ್ಲುಕ್, ಪಶ್ಚಿಮ ಬಂಗಾಳ)

ಸ್ಪೀಕರ್ ಓಂ ಬಿರ್ಲಾ ಅವರು ಸನ್ನಿ ಡಿಯೋಲ್‌ಗೆ ಎರಡು ಬಾರಿ ಕರೆ ಮಾಡಿ, ಯಾವುದೇ ರೂಪದಲ್ಲಿ ಸದನವನ್ನು ಉದ್ದೇಶಿಸಿ ಮಾತನಾಡುವಂತೆ ಕೇಳಿಕೊಂಡರು. ಆದರೆ, ಸನ್ನಿ ಡಿಯೋಲ್ ಮಾತನಾಡಲಿಲ್ಲ ಎಂದು ಆಂಗ್ಲ ಮಾಧ್ಯಮ ವರದಿ ಮಾಡಿದೆ. ಆದರೆ ಶೂನ್ಯವೇಳೆ ಚರ್ಚೆಯಲ್ಲಿ ಸನ್ನಿ ಡಿಯೋಲ್ ಸೇರಿದಂತೆ ಒಂಬತ್ತು ಸಂಸದರ ಪೈಕಿ 6 ಮಂದಿ ಲಿಖಿತ ಪ್ರಶ್ನೆಗಳನ್ನು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ಆದರೆ, ಉಳಿದ 3 ಜನ (ಶತ್ರುಘ್ನ ಸಿನ್ಹಾ, ಅತುಲ್ ಕುಮಾರ್ ಸಿಂಗ್ ಮತ್ತು ರಮೇಶ್ ಜಿಗಜಿಣಗಿ) 17ನೇ ಲೋಕಸಭೆಯಲ್ಲಿ ಲಿಖಿತ ಅಥವಾ ಮೌಖಿಕ ರೂಪದಲ್ಲಿ ಯಾವುದೇ ಚರ್ಚೆಯಲ್ಲಿ ಭಾಗವಹಿಸಲಿಲ್ಲ ಎಂದು ಹೇಳಲಾಗಿದೆ.

ಪಿಆರ್‌ಎಸ್ ಲೆಜಿಸ್ಲೇಟಿವ್ ರಿಸರ್ಚ್ (PRS Legislative Research) ಎಂಬ ಎನ್‌ಜಿಒ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, 17ನೇ ಲೋಕಸಭೆಯಲ್ಲಿ ಸಂಸದರು ಸರಾಸರಿ 45 ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ. ಕೇರಳ ಮತ್ತು ರಾಜಸ್ಥಾನದ ಸಂಸದರು ಸರಾಸರಿ ಹೆಚ್ಚು ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಬಂದಿದೆ.

ರಾಜಕೀಯ ರಾಜ್ಯ

2009 ರಿಂದ ದೇಶದಲ್ಲಿ 71 ಸಂಸದರ ಆಸ್ತಿ ಮೌಲ್ಯವು ಸರಾಸರಿ ಶೇ.286 ರಷ್ಟು ಹೆಚ್ಚಾಗಿದೆ.

ನವದೆಹಲಿ: ಫೆಡರೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಪ್ರಕಟಿಸಿದ ವರದಿಯಲ್ಲಿ, 2009 ರಿಂದ 2019 ರವರೆಗೆ ಲೋಕಸಭೆಗೆ ಮರು ಆಯ್ಕೆಯಾದ 71 ಸಂಸದರ ಆಸ್ತಿ ಮೌಲ್ಯವು ಸರಾಸರಿ ಶೇ.286 ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದೆ.

ಈ ಪೈಕಿ ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿಯ ರಮೇಶ ಜಿಗಜಿಣಗಿ ಅವರ ಆಸ್ತಿ ಮೌಲ್ಯವೇ ಅತಿ ಹೆಚ್ಚಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

2009ರಲ್ಲಿ ಅವರ ಒಟ್ಟು ಆಸ್ತಿ ರೂ.1.18 ಕೋಟಿ, 2014ರಲ್ಲಿ ರೂ.8.94 ಕೋಟಿ ಮತ್ತು 2019ರಲ್ಲಿ ರೂ.50.41 ಕೋಟಿಗೆ ಏರಿಕೆಯಾಗಿದೆ. ಇದು ಒಟ್ಟು ಶೇ. 4,189 ಆಗಿದೆ. ಲೋಕಸಭೆ ಚುನಾವಣೆ ವೇಳೆ ಅವರು ಸಲ್ಲಿಸಿರುವ ಅಫಿಡವಿಟ್‌ಗಳ ಮೂಲಕ ಇದು ಬೆಳಕಿಗೆ ಬಂದಿದೆ ಎಂದು ವರದಿ ತಿಳಿಸಿದೆ.

ಅವರು ಕರ್ನಾಟಕದ ವಿಜಯಪುರ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ ಮತ್ತು 2016 ರಿಂದ 2019 ರವರೆಗೆ ಕೇಂದ್ರದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯದ ಜಂಟಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಬಿಜೆಪಿಯ ಮತ್ತೊಬ್ಬ ಸಂಸದ ಪಿ.ಸಿ.ಮೋಹನ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸತತವಾಗಿ 3ನೇ ಬಾರಿಗೆ ಆಯ್ಕೆಯಾಗಿರುವ ಇವರು 2009ರಲ್ಲಿ ಅವರ ಆಸ್ತಿ ರೂ.5.37 ಕೋಟಿಯಾಗಿತ್ತು. 2019ರಲ್ಲಿ 10 ವರ್ಷಗಳಲ್ಲಿ ರೂ. 75.55 ಕೋಟಿ ಹೆಚ್ಚಾಗಿದೆ ಇದು ಶೇ.1,306 ಆಗಿರುತ್ತದೆ.