ಶಿಕ್ಷಣ Archives » Page 2 of 2 » Dynamic Leader
October 23, 2024
Home Archive by category ಶಿಕ್ಷಣ (Page 2)

ಶಿಕ್ಷಣ

ವಿದೇಶ ಶಿಕ್ಷಣ

ಚೀನಾದ ವುಹಾನ್ ಪ್ರಾಂತ್ಯದಲ್ಲಿ ಹುಟ್ಟಿಕೊಂಡಿದ್ದ ಕೋವಿಡ್-19 ವೈರಸ್, ಅಲ್ಲಿನ ಪ್ರಯೋಗಾಲಯದಿಂದ ಜನರಿಗೆ ಸೋಂಕು ತಗುಲಿಸುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ರಚಿಸಲಾಗಿದ್ದು, ಇದು ಜೈವಿಕ ಅಸ್ತ್ರ ಎಂದು ವುಹಾನ್ ಸಂಶೋಧಕರು ಆಘಾತಕಾರಿ ಮಾಹಿತಿ ನೀಡಿದ್ದಾರೆ.

2019ರ ಕೊನೆಯಲ್ಲಿ ಚೀನಾದ ವುಹಾನ್‌ನಲ್ಲಿ; ಮಾನವರಲ್ಲಿ ‘ಕೋವಿಡ್ -19’ ಎಂಬ ಕೊರೊನಾ ವೈರಸ್ ಪತ್ತೆಯಾಗಿತ್ತು. ಅದರ ನಂತರ, ವೈರಸ್ ಕ್ರಮೇಣ ಚೀನಾದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಹರಡಿತು. ಈ ಕಾರಣದಿಂದಾಗಿ, ಕೋವಿಡ್ ವೈರಸ್‌ನಿಂದ ಕೋಟ್ಯಂತರ ಜನರು ಬಾಧಿತರಾದರು. ಅವರಲ್ಲಿ ಅನೇಕರು ಗುಂಪು ಗುಂಪಾಗಿ ಸಾವನ್ನಪ್ಪಿದರು.

ಈ ಕೋವಿಡ್ ಸೋಂಕು ಮನುಕುಲಕ್ಕೆ ದೊಡ್ಡ ವಿನಾಶವನ್ನು ಉಂಟುಮಾಡಿತು. ಏತನ್ಮಧ್ಯೆ, ಅಮೆರಿಕ ಸೇರಿದಂತೆ ವಿವಿಧ ದೇಶಗಳು ಇದು ವುಹಾನ್‌ನಲ್ಲಿರುವ ವೈರಸ್ ಪ್ರಯೋಗಾಲಯದಿಂದ ಹೊರಬಂದಿದೆ ಎಂದು ಆರೋಪಿಸಿತು. ಚೀನಾ ಈ ವೈರಸ್ ಅನ್ನು ಜೈವಿಕ ಅಸ್ತ್ರವಾಗಿ ಬಳಸಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿತ್ತು.

ಈ ಹಿನ್ನಲೆಯಲ್ಲಿ ಚೀನಾ ಮತ್ತು ಚೀನೀ ಕಮ್ಯುನಿಸ್ಟ್ ಪಕ್ಷದ ಬಗ್ಗೆ ಅನನ್ಯ ಮಾಹಿತಿ ಮತ್ತು ಒಳನೋಟಗಳನ್ನು ಒದಗಿಸುವ ಅಂತರರಾಷ್ಟ್ರೀಯ ಪತ್ರಿಕಾ ಸಂಘದ ಸದಸ್ಯರೂ ಆದ, ಚೀನಾ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತೆ ಮತ್ತು ಬರಹಗಾರ ಜೆನ್ನಿಫರ್ ಝೆಂಗ್ ಅವರು, ವುಹಾನ್ ಮೂಲದ ಸಂಶೋಧಕ ಚಾವೊ ಶಾವೊ ಅವರೊಂದಿಗೆ ವಿಶೇಷ ಸಂದರ್ಶನ ನಡೆಸಿದ್ದಾರೆ. ಈ ಸಂದರ್ಶನದ ವೇಳೆ ಚಾವೊ ಶಾವೊ ಅವರು ಹಲವು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

“ಕೊರೊನಾ ವೈರಸ್ ಒಂದು ‘ಜೈವಿಕ ಶಸ್ತ್ರಾಸ್ತ್ರ’ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ಇನ್ನೊಬ್ಬ ಸಂಶೋಧಕ ಮತ್ತು ನನ್ನ ಮೇಲಧಿಕಾರಿ ಶಾನ್ ಚಾವೊ, ನನ್ನ ಬಳಿ ನಾಲ್ಕು ಕೊರೊನಾ ವೈರಸ್ ಮಾದರಿಗಳನ್ನು ನೀಡಿ, ಇದರಲ್ಲಿ ಹೆಚ್ಚು ಪರಿಣಾಮಕಾರಿ ಮತ್ತು ಮನುಷ್ಯರಲ್ಲಿ ಹಾಗೂ ಪ್ರಾಣಿಗಳಲ್ಲಿ ಸುಲಭವಾಗಿ ಹರಡುವ ವೈರಸ್ ಯಾವುದು ಎಂಬುದನ್ನು ಕಂಡು ಹಿಡಿಯುವಂತೆ ಹೇಳಿದರು.

2019ರಲ್ಲಿ ವುಹಾನ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಮಿಲಿಟರಿ ಕ್ರೀಡಾಕೂಟದಲ್ಲಿ ನನ್ನ ಸಹೋದ್ಯೋಗಿಗಳು, (ವೈರಸ್ ಸಂಶೋಧಕರು) ಕ್ರೀಡಾಪಟುಗಳು ತಂಗಿದ್ದ ಹೊಟೇಲ್‌ಗೆ ಹೋಗಿದ್ದರು. ಏಕೆ ಎಂದು ಕೇಳಿದಾಗ, ಆಟಗಾರರ ಆರೋಗ್ಯ ತಪಾಸಣೆಗೆ ಹೋಗಿದ್ದೆವು ಎಂದು ಹೇಳಿದರು. ಆಟಗಾರರ ಆರೋಗ್ಯ ಸ್ಥಿತಿಯನ್ನು ತಿಳಿಯಲು ವೈರಾಲಜಿ ಸಂಶೋಧಕರು ಅಗತ್ಯವಿಲ್ಲ. ಸೈನಿಕರಿಗೆ ವೈರಸ್ ಹರಡಲು ಅವರನ್ನು ಅಲ್ಲಿಗೆ ಕಳುಹಿಸಲಾಗಿದೆ ಎಂದು ಶಾನ್ ಚಾವೊ ಹೇಳಿದರು.

ಅದರ ನಂತರ ಏಪ್ರಿಲ್ 2020ರಲ್ಲಿ, ಶಾನ್ ಚಾವೊ, ಶಿಬಿರಗಳಲ್ಲಿ ಬಂಧಿಯಾಗಿರುವ ಉಯಿಘರ್ ಮುಸ್ಲಿಮರ ಆರೋಗ್ಯವನ್ನು ಪರೀಕ್ಷಿಸಲು ಅವರನ್ನು ಕ್ಸಿನ್‌ಜಿಯಾಂಗ್‌ಗೆ ಕಳುಹಿಸಲಾಯಿತು. ವೈರಸ್ ಅನ್ನು ಮನುಷ್ಯರಿಗೆ ಹರಡಿಸಿ, ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಗಮನಿಸಲು ಅವರನ್ನು ಅಲ್ಲಿಗೆ ಕಳುಹಿಸಲಾಯಿತು ಎಂದು ಅವರೇ ಹೇಳಿದ್ದಾರೆ” ಎಂದು ಅವರು ಹೇಳಿದ್ದಾರೆ.

ವುಹಾನ್ ಸಂಶೋಧಕ ಚಾವೋ ಶಾವೊ ನೀಡಿದ ಈ ಮಾಹಿತಿಯ ಪ್ರಕಾರ, ‘ಕೋವಿಡ್-19’ ವೈರಸ್ ಅನ್ನು ‘ಜೈವಿಕ ಶಸ್ತ್ರಾಸ್ತ್ರ’ವನ್ನಾಗಿ ರಚಿಸಿ, ಪ್ರಪಂಚದಾದ್ಯಂತ ಜೈವಿಕ ಭಯೋತ್ಪಾದನೆಗೆ ಬಳಸಲು, ಚೀನಾ ಪ್ರಯತ್ನಿಸಿದೆ ಎಂದು ಹಲವರ ಅಭಿಪ್ರಾಯವಾಗಿದೆ.

ವಿದೇಶ ಶಿಕ್ಷಣ

ಮನುಷ್ಯರು ಭೂಮಿಯಿಂದ ಹೆಚ್ಚು ಅಂತರ್ಜಲವನ್ನು ಹೀರಿಕೊಳ್ಳುತ್ತಾರೆ. ಪರಿಣಾಮವಾಗಿ, 1993 ಮತ್ತು 2010 ರ ನಡುವೆ ಭೂಮಿಯು 80 ಸೆಂ.ಮೀ. ಪೂರ್ವ ಭಾಗಕ್ಕೆ ವಾಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇದು ಭೂಮಿಯ ಹವಾಮಾನದ ಮೇಲೆ ದೊಡ್ಡ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಅವರು ಹೆಚ್ಚರಿಸಿದ್ದಾರೆ. ಜಿಯೋಫಿಸಿಕಲ್ ರಿಸರ್ಚ್ ಲೆಟರ್ಸ್ ಎಂಬ ಜರ್ನಲ್‌ನಲ್ಲಿ ಪ್ರಕಟವಾಗಿರುವ ಈ ಸಂಶೋಧನಾ ವರದಿಯಲ್ಲಿ, 1993 ರಿಂದ 2010 ರವರೆಗೆ, ಮನುಷ್ಯರಿಂದ 2150 ಗಿಗಾ ಟನ್ ಅಂತರ್ಜಲವನ್ನು ಹೀರಿಕೊಳ್ಳಲಾಗಿದೆ. ಇದು 6 ಮಿಲಿ ಮೀಟರ್‌ಗಿಂತ ಹೆಚ್ಚು ಸಮುದ್ರ ಮಟ್ಟ ಏರಿಕೆಗೆ ಸಮನಾಗಿದೆ ಎಂದು ಹೇಳಲಾಗಿದೆ.

ಅಂತರ್ಜಲ ಮಟ್ಟವನ್ನು ಕಡಿಮೆ ಮಾಡುವುದರಿಂದ ಭೂಮಿಯ ಪರಿಚಲನೆ ಬದಲಾಗುತ್ತಿದೆ ಎಂದು 2016ರಲ್ಲೇ ಸಂಶೋಧಕರು ತಿಳಿಸಿದ್ದರು. ಆದರೆ ಇಲ್ಲಿಯವರೆಗೆ ಈ ಪರಿಚಲನೆ ಬದಲಾವಣೆಗಳಿಗೆ ಅಂತರ್ಜಲದ ನಿರ್ದಿಷ್ಟ ಕೊಡುಗೆಯನ್ನು ಸಂಶೋಧನೆ ಮಾಡಲಾಗಿಲ್ಲ. 1993 ರಿಂದ 2010 ರವರೆಗೆ ಪಶ್ಚಿಮ ಉತ್ತರ ಅಮೆರಿಕಾ ವಾಯುವ್ಯ ಭಾರತದ ಮಧ್ಯ ಅಕ್ಷಾಂಶಗಳಲ್ಲಿ ಹೆಚ್ಚಿನ ನೀರನ್ನು ಮರುಹಂಚಿಕೆ ಮಾಡಲಾಗಿದೆ ಎಂದು ಸಂಶೋಧಕರು ವರದಿ ಮಾಡಿದ್ದಾರೆ.

ಭೂಮಿಯ ತಿರುಗುವಿಕೆ ಬಹಳಷ್ಟು ಬದಲಾಗಿದೆ. ಇದರಿಂದ ಭೂಮಿಯ ಅನೇಕ ಭಾಗಗಳಲ್ಲಿ ಹವಾಮಾನದ ಮೇಲೆ ದೊಡ್ಡ ಪರಿಣಾಮಗಳನ್ನು ಉಂಟುಮಾಡಿದೆ. ಅದೇ ಸಂದರ್ಭದಲ್ಲಿ ಅಂತರ್ಜಲ ಮಟ್ಟ ಕುಸಿಯುವುದನ್ನು ತಡೆಯಲು ಹಲವು ದೇಶಗಳು ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಇದರಿಂದ ಭೂಮಿಯ ತಿರುಗುವಿಕೆಯನ್ನು ಬದಲಾಯಿಸಬಹುದು ಎಂದು ವಿಜ್ಞಾನಿಗಳು ನಂಬುತ್ತಾರೆ.

ಭೂಮಿಯ ತಿರುಗುವಿಕಯ ಧೃವವು ಸಾಮಾನ್ಯವಾಗಿ ಒಂದು ವರ್ಷದೊಳಗೆ ಅನೇಕ ಮೀಟರ್‌ಗಳು ಬದಲಾಗುವುದರಿಂದ, ಅಂತರ್ಜಲ ಹೊರತೆಗೆಯುವಿಕೆಯಿಂದಾಗಿ ಸಂಭವಿಸುವ ಬದಲಾವಣೆಗಳು, ಋತುಗಳನ್ನು ಬದಲಾಯಿಸುವಂತಹ ಯಾವುದೇ ಅಪಾಯವನ್ನುಂಟು ಮಾಡುವುದಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.

Groundwater extraction has tilted Earth’s spin; how likely is it to fuel climate change?

Humans have caused marked tilts in the Earth’s axis by pumping water out of the ground and moving it elsewhere,  according to a new study.

Pronounced shifts in the Earth’s axis of rotation can impact our planet’s climate, noted the study published in Geophysical Research Letters, the journal of the American Geophysical Union, on June 15, 2023.

Groundwater pumping has tilted the planet nearly 80 centimeters east between 1993 and 2010 alone.

The water circulated across the planet determines how mass is distributed. Scientists had predicted that between 1993 and 2010, people pumped 2,150 gigatons of groundwater, or more than 6 millimeters (0.24 inches), of sea level increase. However, it is difficult to validate that estimate.

ವಿದೇಶ ಶಿಕ್ಷಣ

ಕೋಳಿ ಮೊದಲ-ಮೊಟ್ಟೆ ಮೊದಲ ಎಂಬುದು ಪ್ರಾಚೀನ ಕಾಲದಿಂದಲೂ ಬಿಡಿಸಲಾಗದ ಒಗಟಾಗಿದೆ. ಕೋಳಿ, ಮೊಟ್ಟೆಯಿಂದಲೇ ಬಂದಿದೆ ಎಂದು ಕೆಲವರು ಹೇಳುತ್ತಾರೆ. ಮೊಟ್ಟೆಯನ್ನು ಕೋಳಿಯೇ ಇಟ್ಟಿದ್ದು ಎಂದು ಕೆಲವರು ವಾದಿಸುತ್ತಾರೆ, ಆದ್ದರಿಂದ ಕೋಳಿಯೇ ಮೊದಲು ಬಂದಿತ್ತು ಎಂಬುದು ಕೆಲವರ ವಾದ. ಈ ಒಗಟಿನ ವಾದಗಳಿಗೆ ಈಗ ಸಂಶೋಧಕರು ಉತ್ತರವನ್ನು ಕಂಡುಕೊಂಡಿದ್ದಾರೆ.

ಕೋಳಿ ಮೊದಲ-ಮೊಟ್ಟೆ ಮೊದಲ ಎಂಬ ವಾದಕ್ಕೆ ವೈಜ್ಞಾನಿಕವಾಗಿ ಉತ್ತರಿಸಲು, ಮೊದಲು 51 ಪಳೆಯುಳಿಕೆ ಜಾತಿಗಳು ಮತ್ತು 29 ಜೀವಂತ ಜಾತಿಗಳನ್ನು ಅಧ್ಯಯನ ಮಾಡಲಾಯಿತು. ಈ ಜೀವಿಗಳನ್ನು ಮೊಟ್ಟೆ ಇಟ್ಟು ಮರಿಮಾಡುವ ಜೀವಿಗಳು (oviparous) ಮತ್ತು ಮರಿಹಾಕುವ ಜೀವಿಗಳು  (viviparous) ಎಂದು ವರ್ಗೀಕರಿಸಲಾಯಿತು.

ಮೀನಿನಂಥ ಜಲಚರಗಳಿಂದ ವಿಕಾಸದಲ್ಲಿ ಕಶೇರುಕ ಆಮ್ನಿಯೋಟ್ಸ್ (Amniotes) ಕಾಣಿಸಿಕೊಂಡಿತು. ಅವು ನೀರಿನಲ್ಲಿ ಮತ್ತು ಭೂಮಿಯಲ್ಲಿ ವಾಸಿಸುವ ಉಭಯಚರಗಳ ಗುಣಲಕ್ಷಣಗಳನ್ನು ಹೊಂದಿದ್ದವು. ಈ ಜೀವಿಗಳು ಬದುಕಲು ಮತ್ತು ಸಂತಾನೋತ್ಪತ್ತಿ ಮಾಡಲು ನೀರಿನ ಹತ್ತಿರವೇ ಇದ್ದವು. ಉದಾಹರಣೆಗೆ, ಕಪ್ಪೆಗಳು ಮತ್ತು ಮೊಸಳೆಯಂತಹ (Salamander) ಜೀವಂತ ಜೀವಿಗಳು.

320 ಮಿಲಿಯನ್ ವರ್ಷಗಳ ಹಿಂದೆ ಕಾಣಿಸಿಕೊಂಡ ಆ ಜೀವಿಗಳು, ಜಲನಿರೋಧಕ ಚರ್ಮ ಮತ್ತು ನೀರಿನ ನಷ್ಟವನ್ನು ನಿಯಂತ್ರಿಸಲು ಪಳಗಿಕೊಂಡಿತು. ಆ ಮೂಲಕ ನೀರಿನಿಂದ ಬೇರ್ಪಟ್ಟು ಭೂಮಿಯಲ್ಲಿ ವಾಸಿಸುವ ಅಭ್ಯಾಸವನ್ನು ಬೆಳೆಸಿಕೊಂಡಿತು.

ಈ ಹಿನ್ನಲೆಯಲ್ಲಿ ಅನೇಕ ಹಲ್ಲಿಗಳು ಮತ್ತು ಹಾವುಗಳು, ಮರಿಹಾಕುವ ಸ್ವಭಾವದಿಂದ ಬದಲಾಗಿ ಮೊಟ್ಟೆ ಇಡುವ ಸ್ವಭಾವಕ್ಕೆ ಬದಲಾವಣೆಗೊಂಡಿತು. ಹಾಗೆಯೇ  ಕೋಳಿಯ ಪೂರ್ವಜ ಕೂಡ ಮರಿಹಾಕುವ ಸ್ವಭಾವದಿಂದ ಮೊಟ್ಟೆಯಿಡುವಿಕೆಗೆ ಬದಲಾವಣೆಗೊಂಡಿತು. ಮೊಟ್ಟೆಯ ಚಿಪ್ಪುಗಳು, ಆರಂಭದಲ್ಲಿ ಮೃದುವಾಗಿದ್ದವು ನಂತರ ಗಟ್ಟಿಯಾದ ಚಿಪ್ಪುಗಳಾಗಿ ವಿಕಸನಗೊಂಡಿತು.

ತಾಯಿ ಜೀವಿಗಳು ಮರಿಗಳನ್ನು ದೀರ್ಘಕಾಲದವರೆಗೆ ಗರ್ಭಾಶಯದಲ್ಲಿ ಇಟ್ಟು, ಸಾಕಷ್ಟು ತಾಪಮಾನ ಮತ್ತು ಬೇಕಾದಷ್ಟು ಆಹಾರದ ಸಿದ್ದತೆಯನ್ನು ಮಾಡಿಕೊಂಡ ನಂತರ ಮರಿಗಳನ್ನು ಬಿಡುಗಡೆ ಮಾಡಲು ಅವಕಾಶ ನೀಡಿರಬಹುದು. ವಿಜ್ಞಾನಿಗಳು ಇದನ್ನು ವಿಸ್ತೃತ ಭ್ರೂಣ ಧಾರಣೆ (Extended Embryo Retention) ಎಂದು ಕರೆಯುತ್ತಾರೆ.

ಇದರಿಂದ ಕೋಳಿಯಿಂದ ಮೊಟ್ಟೆಯೇ ಬಂದಿತು ಎಂದು ಅಧ್ಯಯನದಲ್ಲಿ ತಿಳಿದುಕೊಂಡಿದ್ದಾರೆ. ಹಾಲಿ ಇರುವ ಸರೀಸೃಪಗಳು, ಪಕ್ಷಿಗಳು ಮತ್ತು ಸಸ್ತನಿಗಳ ಪೂರ್ವಜರು ಮೊದಲು ಮೊಟ್ಟೆ ಇಡದೆ ಮರಿಗಳನ್ನು ಹಾಕಿರುವುದು ಇದೀಗ ಕಂಡುಬಂದಿದೆ.

ಈ ಅಧ್ಯಯನದ ವರದಿ `Nature Ecology & Evolution’ ಎಂಬ ದಿನ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಶಿಕ್ಷಣ

ಬೆಂಗಳೂರು: ಇನ್ ಸೈಟ್ ಐಎಎಸ್ ಅಕಾಡೆಮಿ ಇಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಶ್ರೀಗಳು, ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್, ಇನ್ ಸೈಟ್ ಸಂಸ್ಥೆಯ ನಿರ್ದೇಶಕರಾದ ವಿನಯ್ ಕುಮಾರ್ ಹಾಗೂ ಮಧುಕರ್ ನಾಗಣ್ಣ ಅವರು ಉಪಸ್ಥಿತರಿದ್ದರು.

“ಉತ್ತರದಾಯಿತ್ವ ಇರುವ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಅಗತ್ಯ ನಮ್ಮ ದೇಶಕ್ಕೆ ಹೆಚ್ಚಾಗಿದೆ. ಉತ್ತರದಾಯಿತ್ವ ಇಲ್ಲದಿದ್ದರೆ ನಾವು ಆ ಸ್ಥಾನದಲ್ಲಿ, ಆ ಹುದ್ದೆಯಲ್ಲಿರಲು ಅನರ್ಹರು. ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ಕೆಲಸ ಮಾಡುವ ಹೊಣೆಗಾರಿಕೆ ಐಎಎಸ್, ಕೆಎಎಸ್ ಅಧಿಕಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಮೇಲಿರುತ್ತದೆ.

ಬಹುಸಂಖ್ಯಾತ ಸಮುದಾಯ ಅಕ್ಷರ ಕಲಿಕೆಯಿಂದ ವಂಚಿತವಾಗಿದೆ. ಇದಕ್ಕೆ ಸಮಾಜದಲ್ಲಿರುವ ಅಸಮಾನತೆ ಕಾರಣ. ಈ ಅಸಮಾನತೆಯನ್ನು ಅಳಿಸಲು ಸಾಧ್ಯವಾಗದಿದ್ದರೆ, ಆ ದಿಕ್ಕಿನಲ್ಲಿ ಶ್ರಮಿಸದಿದ್ದರೆ ನಾವು ಜನಪ್ರತಿನಿಧಿಗಳಾಗಿ, ಐಎಎಸ್-ಕೆಎಎಸ್ ಅಧಿಕಾರಿಗಳಾಗಿ ಏನು ಪ್ರಯೋಜನ?

ಸಮಾಜದಲ್ಲಿನ ಅಸಮಾನತೆ, ತಾರತಮ್ಯ ಅಳಿಸಲು ಯತ್ನಿಸದೇ ಹೋದರೆ ಈ ದೇಶದ ಜನರೇ ದೇಶಕ್ಕೆ ಸಿಕ್ಕಿರುವ ಸ್ವಾತಂತ್ರ್ಯದ ಸೌಧವನ್ನು ಧ್ವಂಸ ಮಾಡುತ್ತಾರೆ ಎನ್ನುವ ಎಚ್ಚರಿಕೆಯ ಮಾತನ್ನು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದರು. ಈ ಎಚ್ಚರಿಕೆಯ ಮಾತನ್ನು ನೆನಪಿನಲ್ಲಿ ಇಟ್ಟುಕೊಂಡು ಅಸಮಾನತೆ, ತಾರತಮ್ಯವನ್ನು ಅಳಿಸಬೇಕು

ಹಸಿದವರಿಗೆ ಮಾತ್ರ ಊಟದ ಮಹತ್ವ ಗೊತ್ತಿರುತ್ತದೆ. ಹಸಿವಿನಿಂದ ನರಳುವವರಿಗೆ ನೆರವಾದರೆ ಮಾತ್ರ ಐಎಎಸ್, ಕೆಎಎಸ್ ನಲ್ಲಿ ಟಾಪರ್ಸ್ ಆಗಿರುವುದಕ್ಕೂ ಸಾರ್ಥಕತೆ ಬರುತ್ತದೆ. ಹೀಗಾಗಿ ಹಸಿವು ಗೊತ್ತಿರುವ ಹಳ್ಳಿ ಮಕ್ಕಳನ್ನು ಐಎಎಸ್ ಗಳಾಗಿ ಮಾಡಬೇಕು” ಎಂದು ಸಿದ್ದರಾಮಯ್ಯ ಮಾತನಾಡಿದರು.

ಶಿಕ್ಷಣ

ಮೆಟ್ರಿಕ್‌ ನಂತರದ ಪರೀಕ್ಷೆಗಳಲ್ಲಿ ಪ್ರಥಮ ದರ್ಜೆಯಲ್ಲಿ ಪ್ರಥಮ ಪರೀಕ್ಷೆಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅಗಸ್ಟ್‌ 31 ಕೊನೆಯ ದಿನಾಂಕವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆದ್ದರಿಂದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಸಕಾಲದಲ್ಲಿ ಅರ್ಜಿ ಸಲ್ಲಿಸಿ ಸದುಪಯೋಗ ಪಡಿಸಿಕೊಳ್ಳಿ.   

ಅರ್ಜಿ ಸಲ್ಲಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ: https://sw.kar.nic.in/swprizemoney/Home.aspx?ReturnUrl=%2Fswprizemoney%2F

ಶಿಕ್ಷಣ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬಂದಾಗ, ಅದು ಹೆಣ್ಣುಮಕ್ಕಳ ಶಿಕ್ಷಣವನ್ನು ನಿಷೇಧಿಸಿತು. ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆಯ ಎಚ್ಚರಿಕೆಯನ್ನೂ ನೀಡಿತು.

ಈ ಹಿನ್ನಲೆಯಲ್ಲಿ 2021ರಲ್ಲಿ ಚೆನ್ನೈ ಐಐಟಿಯಲ್ಲಿ ಎಂ.ಟೆಕ್ ಪ್ರವೇಶ ಪರೀಕ್ಷೆ ಬರೆದು, ಫಲಿತಾಂಶಕ್ಕಾಗಿ ಕಾಯುತ್ತಿದ್ದ ದೇಶದ ವಿದ್ಯಾರ್ಥಿ ಬೆಹಿಸ್ತಾ ತಾಲಿಬಾನಿಗಳ ಕೈಗೆ ಸಿಕ್ಕಿಬಿದ್ದಳು. ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರವೂ ಬೆಹಿಸ್ತಾ ಕಾಲೇಜು ಸೇರಲು ಸಾಧ್ಯವಾಗಲಿಲ್ಲ. ಮೂಲಭೂತವಾದಿ ಪ್ರತಿಗಾಮಿ ನೀತಿಗಳನ್ನು ಪ್ರತಿಪಾದಿಸುವ ತಾಲಿಬಾನ್‌ಗಳು ಅವರನ್ನು ಗೃಹ ಬಂಧನದಲ್ಲಿ ಇರಿಸಿದರು.

ಆದರೆ ವಿದ್ಯಾರ್ಥಿಯು ಎಂದಿಗೂ ತನ್ನ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ, ತನ್ನ ಎಲ್ಲಾ ಸೆಮಿಸ್ಟರ್‌ಗಳನ್ನು ಅಲ್ಲಿಂದಲೇ ಆನ್‌ಲೈನ್‌ ಮೂಲಕ ಪೂರ್ಣಗೊಳಿಸಿದಳು. ಪ್ರಸ್ತುತ ಚೆನ್ನೈನ ಐಐಟಿಯಲ್ಲಿ ಎಂಟೆಕ್ ಕೋರ್ಸ್ ಪೂರ್ಣಗೊಳಿಸಿದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಬೆಹಿಸ್ತಾ ಕೂಡ ಒಬ್ಬರಾಗಿ ಸಾಧನೆ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ವಿದ್ಯಾರ್ಥಿನಿ, ‘ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಾಗ ನಾನು ರಾಸಾಯನಿಕ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಗಾಗಿ ಚೆನ್ನೈ ಐಐಟಿಯನ್ನು ಆಯ್ಕೆ ಮಾಡಿಕೊಂಡಿದ್ದೆ. ನಂತರ ನಾನು ಸಂದರ್ಶನದಲ್ಲಿ ಉತ್ತೀರ್ಣನಾಗಿದ್ದೇನೆ ಎಂಬ ಮಾಹಿತಿ ಸಿಕ್ಕಿತು. ಆದರೆ ತಾಲಿಬಾನಿಗಳ ಹಿಡಿತದಲ್ಲಿದ್ದ ಕಾರಣ ನಾನು ತಕ್ಷಣ ಚೆನ್ನೈಗೆ ಮರಳಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಕಾಲೇಜಿಗೆ ಇಮೇಲ್ ಮೂಲಕ ತಿಳಿಸಿದ್ದೆ. ಪ್ರೊ.ರಘು ಅವರು ಈ ವಿಚಾರದಲ್ಲಿ ನನಗೆ ಸಹಾಯ ಮಾಡಿದರು.

ನಂತರ ನನ್ನ ಅಧ್ಯಯನವನ್ನು ಆನ್‌ಲೈನ್ ಮೂಲಕ ಮುಂದುವರಿಸಿದೆ. ಮೊದಲ ಎರಡು ಸೆಮಿಸ್ಟರ್‌ಗಳಿಗೆ ನಾನು ತುಂಬಾ ಕಷ್ಟಪಟ್ಟೆ. ನಾನು ಈಗಾಗಲೇ ಅಫ್ಘಾನಿಸ್ತಾನದಲ್ಲಿ ಬಿ.ಟೆಕ್ ಮುಗಿಸಿದ್ದೇನೆ. ಇಲ್ಲಿ ಅಧ್ಯಯನದ ಮೂಲಕ ಪಡೆದ ಜ್ಞಾನಕ್ಕೆ ಹೋಲಿಸಿದರೆ ಚೆನ್ನೈ ಐಐಟಿಯಲ್ಲಿ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ. ಅಫ್ಘಾನಿಸ್ತಾನದಲ್ಲಿ ಅಂತಹ ಶಿಕ್ಷಣ ವ್ಯವಸ್ಥೆಯ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ಐ.ಐ.ಟಿ. ಮಾದರಿಯ ಉತ್ತಮ ಗುಣಮಟ್ಟವನ್ನು ನನ್ನ ದೇಶಕ್ಕೆ ತರಲು ನಾನು ಬಯಸುತ್ತೇನೆ. ನನ್ನನ್ನು ನಿರ್ಬಂಧಿಸಿದ್ದರಿಂದ ನಾನು ಇನ್ನೊಂದು ಮಾರ್ಗವನ್ನು ಕಂಡುಕೊಂಡೆ. ತಾಲಿಬಾನ್ ಬಗ್ಗೆ ನನಗೆ ಕನಿಕರವಿದೆ. ಅಧಿಕಾರವಿದೆ ಎಂಬುದಕ್ಕಾಗಿ ಆಟವಾಡುತ್ತಿದ್ದಾರೆ’ ಎಂದರು.

ಈಗಾಗಲೇ ಅಫ್ಘಾನಿಸ್ತಾನದಲ್ಲಿ ದೇಶದ ಮಾತೃಭಾಷೆಯಲ್ಲಿ ವ್ಯಾಸಂಗ ಮಾಡಿರುವ ಬೆಹಿಸ್ತಾ, ಇಂಗ್ಲಿಷ್ ಕಲಿತು ಪ್ರಸ್ತುತ ಆನ್‌ಲೈನ್‌ನಲ್ಲಿ ಎಂ.ಟೆಕ್ ಮಾಡಿ ಉತ್ತೀರ್ಣರಾಗಿರುವುದು ದೊಡ್ಡ ಸಾಧನೆ ಎಂದು ಪರಿಗಣಿಸಲಾಗಿದೆ. ಪ್ರೊ.ರಘು ಮಾತನಾಡಿ, ‘ವಿದ್ಯಾರ್ಥಿ ಬೆಹಿಸ್ತಾ ಈಗ ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದಾಳೆ. ವಿದ್ಯಾರ್ಥಿಯು ರಾತ್ರಿಯಲ್ಲಿ ನಾಲ್ಕೈದು ಗಂಟೆಗಳ ಕಾಲ ಮಾತ್ರ ವಿಶ್ರಾಂತಿ ಪಡೆಯುತ್ತಿದ್ದಳು. ಉಳಿದ ಸಮಯವನ್ನು ವಿದ್ಯಾಭ್ಯಾಸದಲ್ಲಿಯೇ ಕಳೆದಳು’ ಎಂದರು.

ಶಿಕ್ಷಣ

ನಾವು ಬ್ಲೂಟೂತ್ (Bluetooth) ಎಂದು ತಿಳಿದಿರುವ ತಂತ್ರಜ್ಞಾನದ ಹೆಸರು ಮತ್ತು ಅದರ ಚಿಹ್ನೆಗೆ ಕಾರಣ, ಒಬ್ಬ ರಾಜನ ಹಲ್ಲುಗಳೇ ಎಂದರೆ ನೀವು ನಂಬುತ್ತೀರಾ? ನಂಬದಿದ್ದರೂ ಅದುವೇ ಸತ್ಯ! ಅದನ್ನೇ ನಾವು ಇಲ್ಲಿ ಕಾಣಲಿದ್ದೇವೆ.

ಹರಾಲ್ಡ್ ಬ್ಲೂಟೂತ್ ಗೋರ್ಮ್ಸನ್ (Harald Bluetooth Gormsson), ಇವರು ಡೆನ್ಮಾರ್ಕ್ ಮತ್ತು ನಾರ್ವೆಯ ರಾಜ, ರೂನಿಕ್ ಹರಾಲ್ಡ್ ಕುನುಕ್ ಅವರ ಇನ್ನೊಂದು ಹೆಸರು. ಇವರ ಆಳ್ವಿಕೆಯು ಬರೀ 28 ವರ್ಷಗಳೇ (ಕ್ರಿ.ಶ.958-986) ಆಗಿದ್ದರೂ ಆ ಅವಧಿಯೊಳಗೆ ಡೆನ್ಮಾರ್ಕ್ ಮತ್ತು ನಾರ್ವೆಯನ್ನು ಒಂದುಗೂಡಿಸಿದ್ದಾರೆ.

ಅವರ ಅಡ್ಡ ಹೆಸರು ಬ್ಲೂಟೂತ್ ಮತ್ತು ಬ್ಲ್ಯಾಕ್‌ಟೂತ್ ಎಂದು ಹೇಳಲಾಗುತ್ತಿದೆ. ರಾಜ ಬ್ಲೂಟೂತ್ ಡೆನ್ಮಾರ್ಕ್ ಮತ್ತು ನಾರ್ವೆಯನ್ನು ಬಹಳ ಕಡಿಮೆ ಸಮಯದಲ್ಲಿ ಒಂದುಗೂಡಿಸಿದಂತೆ, ಬ್ಲೂಟೂತ್ ತಂತ್ರಜ್ಞಾನವು ಕಡಿಮೆ ಸಮಯದಲ್ಲಿ ವಿವಿಧ ವಿದ್ಯುನ್ಮಾನ ಸಾಧನಗಳನ್ನು ಒಂದುಗೂಡಿಸುತ್ತದೆ. ಅದಕ್ಕಾಗಿಯೇ ವಿಜ್ಞಾನಿಗಳು ಈ ತಂತ್ರಜ್ಞಾನಕ್ಕೆ ಬ್ಲೂಟೂತ್ ಎಂದು ಹೆಸರಿಸಿದ್ದಾರೆ!

ಅದು ಸರಿ, ಅವನಿಗೆ ಬ್ಲೂಟೂತ್ ಎಂಬ ಅಡ್ಡಹೆಸರು ಹೇಗೆ ಬಂದಿತು? ಅವರ ಹಲ್ಲುಗಳು ಗೋಚರವಾಗಿ ಮತ್ತು ಗಾಢ ನೀಲಿ ಬಣ್ಣವನ್ನು ಹೊಂದಿದ್ದವು. ಆದ್ದರಿಂದಲೇ ಅವರಿಗೆ ಈ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.

ಇವರ ಹಲ್ಲುಗಳು ಇಷ್ಟು ಕೆಟ್ಟದಾಗಿರಲು ಬ್ಲೂಬೆರ್ರಿ (Blueberry) ಕಾರಣ ಎಂದು ಹೇಳಲಾಗುತ್ತದೆ. ಹೌದು, ಅವರು ಬೆರ್ರಿ ಹಣ್ಣುಗಳನ್ನು ಹೆಚ್ಚು ಇಷ್ಟಪಡುತ್ತಿದ್ದರಂತೆ. ಎಡೆಬಿಡದೆ ತಿನ್ನುತ್ತಿದ್ದರಿಂದ ಇವರ ಹಲ್ಲುಗಳು ನೀಲಿ ಬಣ್ಣಕ್ಕೆ ತಿರುಗಿದವು ಎಂದು ಇತಿಹಾಸಕಾರರು ಹೇಳುತ್ತಾರೆ.

ಇದೊಂದೆಡೆಯಾದರೆ, ಬ್ಲೂಟೂತ್‌ನಲ್ಲಿನ ಚಿಹ್ನೆ Hagall (*) ಮತ್ತು Bjarkan (B) ಎಂಬ ಅವರ ಹೆಸರಿನ ಮೊದಲಕ್ಷರಗಳನ್ನು ಸೂಚಿಸುತ್ತದೆ. ಇದು ರೂನಿಕ್ ಕೋಡ್ ಕೂಡ ಆಗಿರುತ್ತದೆ. ಇವುಗಳನ್ನು ಸಂಯೋಜಿಸುವ ಮೂಲಕ ಬ್ಲೂಟೂತ್‌ನ ಲೋಗೋವನ್ನು ರಚಿಸಲಾಗಿದೆ. ಇವುಗಳನ್ನು ಸಂಯೋಜಿಸಿಯೇ ಬ್ಲೂಟೂತ್‌ನ ಲೋಗೋವನ್ನು ರಚಿಸಲಾಗಿದೆ.

ಶಿಕ್ಷಣ

ಬೆಂಗಳೂರು: ನಾಳೆ (ದಿನಾಂಕ: 21.04.2023) ಬೆಳಿಗ್ಗೆ 11 ಗಂಟೆಯ ನಂತರ karresults.nic.in ಜಾಲತಾಣದಲ್ಲಿ ವೀಕ್ಷಿಸಬಹುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಮಾರ್ಚ್ 2023ರ ದ್ವೀತಿಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ದಿನಾಂಕ: 09.03.2023 ರಿಂದ 29.03.2023 ರವರೆಗೆ ನಡೆಸಲಾಯಿತು. ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯವಾಗಿದೆ. ದ್ವೀತಿಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಿಸುವ ಸಂಬಂಧ ದಿನಾಂಕ: 21.04.2023 ರಂದು ಬೆಳಿಗ್ಗೆ 10:00 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಲ್ಲಿ ಸುದ್ಧಿ ಘೋಷ್ಠಿಯನ್ನು ಕರೆಯಲಾಗಿದೆ. ಮತ್ತು ಫಲಿತಾಂಶವನ್ನು karresultes.nic.in ಜಾಲತಾಣದಲ್ಲಿ ದಿನಾಂಕ: 21.04.2023 ಬೆಳಿಗ್ಗೆ 11 ಗಂಟೆಯ ನಂತರ ವೀಕ್ಷಿಸಬಹುದಾಗಿದೆ. ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. “ಫಲಿತಾಂಶವನ್ನು ನಮ್ಮಲ್ಲೂ ನೋಡಬಹುದು”

Karnataka 2nd PUC Result 2023 Live Updates: Karnataka School Examination and Assessment Board will announce Karnataka 2nd PUC Result 2023 on April 21, 2023. The results for Karnataka Class 12 can be checked by all appeared candidates on the official site of Karnataka Results at karresults.nic.in. The press conference will be conducted in which the results will be announced. The press meet will be conducted at 10 am onwards. The result link will be available for all the appeared candidates to check their scores from 11 am onwards.      

ಶಿಕ್ಷಣ

WhatsApp ನಲ್ಲಿ ಕರೆ ಮತ್ತು ಸ್ಟೇಟಸ್ ಸೇರಿದಂತೆ Navigation bar ಸೌಲಭ್ಯಗಳು ಐಫೋನ್‌ನಲ್ಲಿರುವಂತೆ ಕೆಳಗೆ ಬದಲಾಯಿಸಲಾಗುವುದು ಎಂದು ವರದಿಯಾಗಿದೆ.

ಮೆಟಾ ಕಂಪನಿಯ ಒಡೆತನದ ವಾಟ್ಸಾಪ್ ಅನ್ನು ಅನೇಕ ಜನರು ಬಳಸುತ್ತಾರೆ. ವಾಟ್ಸ್ ಆಪ್ ಕಂಪನಿಯೂ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಸೌಲಭ್ಯಗಳನ್ನು ಪರಿಚಯಿಸುತ್ತಿದೆ. ಆ ಮೂಲಕ ಇದೀಗ ವಾಟ್ಸ್ ಆಪ್ Navigation bar ಫೀಚರ್ ಅನ್ನು ಐಫೋನ್ ನಲ್ಲಿರುವಂತೆ ಕೆಳಭಾಗದ ಪರದೆಯ ಮೇಲೂ ತರಲಿದೆ ಎನ್ನಲಾಗುತ್ತಿದೆ chat, calls, communities ಮತ್ತು status ಟ್ಯಾಬ್ ಸೌಲಭ್ಯಗಳನ್ನು ಪರದೆಯ ಕೆಳಭಾಗಕ್ಕೆ (bottom of the screen) ಸರಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಈ ಬದಲಾವಣೆ ತರಲಾಗುವುದು ಎನ್ನಲಾಗುತ್ತಿದೆ. ಈ ಸೌಲಭ್ಯಗಳು ಈಗಾಗಲೇ ಐಫೋನ್‌ನಲ್ಲಿ ಲಭ್ಯವಿದ್ದರೂ, ಅದನ್ನು ಈಗ ಆಂಡ್ರಾಯ್ಡ್‌ಗೂ ತರಲಾಗುತ್ತಿದೆ.

ಮತ್ತು ಈ ಸೌಲಭ್ಯವನ್ನು ಪ್ರಸ್ತುತ ಪರೀಕ್ಷಾ ಕ್ರಮದಲ್ಲಿ ಅಳವಡಿಸಲಾಗಿದೆ. ಈ ಸೌಲಭ್ಯವನ್ನು ಪ್ರಾಯೋಗಿಕವಾಗಿ WhatsApp ಬೀಟಾ ಆವೃತ್ತಿಯಲ್ಲಿ ಅಳವಡಿಸಲಾಗಿದೆ (v2.23.8.4). ಶೀಘ್ರದಲ್ಲೇ ಎಲ್ಲರಿಗೂ ಲಭ್ಯವಾಗುವ ನಿರೀಕ್ಷೆಯಿದೆ.

WhatsApp ಈ ವರ್ಷದ ಆರಂಭದಿಂದ ವಿವಿಧ ನವೀಕರಣಗಳನ್ನು ಹೊರತರುತ್ತಿದೆ. ಈ ಮೂಲಕ ಪ್ರತ್ಯೇಕ chat ಅಂಶವನ್ನು ಲಾಕ್ ಮಾಡುವ ಸೌಲಭ್ಯ, status ನಲ್ಲಿ ವಾಯ್ಸ್ ಮೆಸೇಜ್ ಹಾಕುವ ಸೌಲಭ್ಯ ಹೀಗೆ ನಾನಾ ರೀತಿಯ Update ಗಳನ್ನು ಬಿಡುಗಡೆ ಮಾಡಿದ್ದಾರೆ.