ವಿದೇಶ Archives » Page 12 of 12 » Dynamic Leader
October 23, 2024
Home Archive by category ವಿದೇಶ (Page 12)

ವಿದೇಶ

ದೇಶ ವಿದೇಶ

ಉಜ್ಬೇಕಿಸ್ತಾನದಲ್ಲಿ 18 ಮಕ್ಕಳ ಸಾವಿಗೆ ಕಾರಣವಾದ ಭಾರತೀಯ ಕೆಮ್ಮು ಔಷಧಿಗಳ ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ವಿರೋಧ!

ಉತ್ತರ ಪ್ರದೇಶದ ನೋಯ್ಡಾ ಮೂಲದ ಮೆರಿಯನ್ ಬಯೋಟೆಕ್ ಕಂಪನಿಯು ತಯಾರಿಸಿದ ಕೆಮ್ಮಿನ ಔಷಧಿ ‘ಡಾಕ್-1 ಮ್ಯಾಕ್ಸ್’ ಸೇವನೆಯಿಂದ ಉಜ್ಬೇಕಿಸ್ತಾನ್‌ನಲ್ಲಿ 18 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯವು ಆರೋಪವನ್ನು ಮಾಡಿದೆ. ಅಲ್ಲದೆ, ಈ ಔಷಧದಲ್ಲಿ ಎಥಿಲೀನ್ ಗ್ಲೈಕಾಲ್ ಎಂಬ ರಾಸಾಯನಿಕ ಅಂಶ ಇರುವುದನ್ನು ಪರೀಕ್ಷೆಗೊಳಪಡಿಸಿದ ಸಂದರ್ಭದಲ್ಲಿ ದೃಢಪಟ್ಟಿದೆ ಎಂದು ಸಚಿವಾಲಯವು ಆರೋಪ ಮಾಡಿದೆ.

ಇದರ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆಯ ಸಂಶೋಧನಾ ತಂಡವು ‘ಮರಿಯನ್ ಬಯೋಟೆಕ್’ ತಯಾರಿಸಿದ ‘ಡಾಕ್-1 ಮ್ಯಾಕ್ಸ್’ ಮತ್ತು ‘ಆಂಬ್ರೊನಾಲ್’ ಎಂಬ ಎರಡು ಕೆಮ್ಮು ಔಷಧಿಗಳನ್ನು ಅಧ್ಯಯನ ಮಾಡಿ, ‘ಕೆಮ್ಮಿನ ಎರಡೂ ಔಷಧಿಗಳಲ್ಲಿ ಅಧಿಕ ಪ್ರಮಾಣದ ಎಥಿಲೀನ್ ಗ್ಲೈಕಾಲ್ ರಾಸಾಯನಿಕ ಅಂಶವಿರುವುದರಿಂದ ಎರಡೂ ಔಷಧಗಳು ಮಕ್ಕಳ ಬಳಕೆಗೆ ಯೋಗ್ಯವಾಗಿಲ್ಲ ಎಂಬುದು ದೃಢಪಟ್ಟಿದೆ’ ಎಂದು ಪ್ರಕಟಿಸಿದೆ.

ಈಗಾಗಲೇ ಕಳೆದ ಅಕ್ಟೋಬರ್‌ನಲ್ಲಿ ಪಶ್ಚಿಮ ಆಫ್ರಿಕಾದ ಗ್ಯಾಂಬಿಯಾದಲ್ಲಿ 66 ಮಕ್ಕಳು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಹರಿಯಾಣದ ಸೋನಿಪತ್‌ನಲ್ಲಿರುವ ಮೇಡನ್ ಫಾರ್ಮಾಸ್ಯುಟಿಕಲ್ಸ್‌ ನಲ್ಲಿ ಅನುಮಾನಾಸ್ಪದವಾಗಿ ತಯಾರಿಸಲಾದ ನಾಲ್ಕು ಕೆಮ್ಮಿನ ಔಷಧಿಗಳು ಇದಕ್ಕೆ ಕಾರಣವಾಗಿರಬಹುದೆಂದು ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಸಿದೆ.

ಭಾರತದಲ್ಲಿ ತಯಾರಿಸುವ ಕೆಮ್ಮು ಔಷಧಿಗಳನ್ನು ಬಳಸುವುದನ್ನು ನಿಲ್ಲಿಸುವಂತೆ ಸಂಸ್ಥೆಯು ವಿಶ್ವವನ್ನು ಕೇಳಿಕೊಂಡಿದೆ. ಈ ಘಟನೆಯಿಂದ ಜಾಗತಿಕವಾಗಿ ಭಾರತೀಯ ಔಷಧಗಳ ಖ್ಯಾತಿಯ ಮೇಲೆ ನಕಾರಾತ್ಮಕವಾದ ಪರಿಣಾಮವನ್ನು ಬೀರಿರುತ್ತದೆ.

ವಿದೇಶ

ಡಿ.ಸಿ.ಪ್ರಕಾಶ್, ಸಂಪಾದಕರು

ಎಲ್‌ಟಿಟಿಇ ವಿರುದ್ಧ ಶ್ರೀಲಂಕಾ ಸರ್ಕಾರ ನಡೆಸಿದ ಯುದ್ಧದ ಸಂದರ್ಭದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಮಹಿಂದ ರಾಜಪಕ್ಸೆ ಸೇರಿದಂತೆ ನಾಲ್ವರು ಕೆನಡಾ ಪ್ರವೇಶಿಸುವುದನ್ನು ಕೆನಡಾ ಸರ್ಕಾರ ನಿಷೇಧಿಸಿದೆ. 1983 ರಿಂದ 2009 ರವರೆಗೆ ಎಲ್‌ಟಿಟಿಇ ಮತ್ತು ಶ್ರೀಲಂಕಾ ಸರ್ಕಾರದ ನಡುವೆ ಸಶಸ್ತ್ರ ಯುದ್ಧ ನಡೆದಿತ್ತು. 2009ರಲ್ಲಿ ಶ್ರೀಲಂಕಾ ಸರ್ಕಾರವು ಎಲ್‌ಟಿಟಿಇ ನಾಯಕ ಪ್ರಭಾಕರನ್ ಯುದ್ಧದ ಉತ್ತುಂಗದ ಸಮಯದಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟರು ಎಂದು ಘೋಷಿಸಿತು.

‘ಯುದ್ಧದ ಸಮಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ಮಹಿಂದ ರಾಜಪಕ್ಸೆ ಭಾಗಿಯಾಗಿದ್ದಾರೆ ಎಂದು ಅನೇಕ ಮಾನವ ಹಕ್ಕುಗಳ ಆಯೋಗಗಳು ಶ್ರೀಲಂಕಾ ಸರ್ಕಾರವನ್ನು ಆರೋಪಿಸಿತ್ತು. ಈ ಹಿನ್ನಲೆಯಲ್ಲಿ ಕೆನಡಾದ ವಿಶೇಷ ಆರ್ಥಿಕ ಕ್ರಮಗಳ ಕಾಯ್ದೆಯಡಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ಭಾಗಿಯಾಗಿರುವ ಮಹಿಂದ ರಾಜಪಕ್ಸೆ ಸೇರಿದಂತೆ ನಾಲ್ವರ ಪ್ರವೇಶಕ್ಕೆ ಕೆನಡಾ ಸರ್ಕಾರ ನಿರ್ಬಂಧಗಳನ್ನು ವಿಧಿಸಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಮೆಲಾನಿ ಜೋಲಿ ನಿನ್ನೆ ಘೋಷಿಸಿದ್ದಾರೆ.

Melanie Joly, Minister of Foreign Affairs, Canada

‘ಮತ್ತು ವಿಶೇಷ ಆರ್ಥಿಕ ಕ್ರಮಗಳ ಕಾಯಿದೆಯಡಿ, ಅವರ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ಮತ್ತು ಪೌರತ್ವ ಹಾಗೂ ನಿರಾಶ್ರಿತರ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಕೆನಡಾಕ್ಕೆ ಪ್ರವೇಶಿಸದಂತೆ ಅವರನ್ನು ನಿರ್ಬಂಧಿಸಬಹುದು’ ಎಂದು ಮೆಲಾನಿ ಜೋಲಿ ಹೇಳಿದರು.

ಶ್ರೀಲಂಕಾದಲ್ಲಿ ಪ್ರಸ್ತುತ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಜನರು ನರಳುತ್ತಿರುವುದನ್ನು ಮತ್ತು ಆಡಳಿತಗಾರರು ಪಲಾಯನ ಮಾಡುತ್ತಿರುವುದನ್ನು ಈ ಜಗತ್ತೆ ವಿಶ್ಮಯದಿಂದ ನೋಡಿದೆ. ಈ ಪರಿಸ್ಥಿತಿಯಲ್ಲಿ ಕೆನಡಾ ಸರ್ಕಾರದ ಈ ಘೋಷಣೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.

‘ಕೆನಡಾ ಸರ್ಕಾರವು ಶ್ರೀಲಂಕಾವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಕಳೆದ ನಾಲ್ಕು ದಶಕಗಳಿಂದಲೂ ಶ್ರೀಲಂಕಾದ ಜನರು ಸಶಸ್ತ್ರ ಸಂಘರ್ಷಗಳು, ಆರ್ಥಿಕ ಮತ್ತು ರಾಜಕೀಯ ಅಸ್ಥಿರತೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯಿಂದಾಗಿ ಅಪಾರವಾಗಿ ಬಳಲುತ್ತಿದ್ದಾರೆ. ಶ್ರೀಲಂಕಾದಲ್ಲಿ ಶಾಂತಿ, ಸೌಹಾರ್ದತೆ ಮತ್ತು ನ್ಯಾಯವನ್ನು ಕಾಪಾಡಲು ಕೆನಡಾ ಬದ್ಧವಾಗಿದೆ’.

‘ಅಂತರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುವವರ ವಿರುದ್ಧ ಅಂತಾರಾಷ್ಟ್ರೀಯ ಶಿಕ್ಷೆಯನ್ನು ತರಲು ಕೆನಡಾ ಇಂದು ನಿರ್ಣಾಯಕ ಕ್ರಮ ಕೈಗೊಂಡಿದೆ. ದೇಶೀಯ ಬಿಕ್ಕಟ್ಟನ್ನು ಪರಿಹರಿಸಲು ಅಂತಾರಾಷ್ಟ್ರೀಯ ನೆರವಿನ ಮೂಲಕ ಶಾಂತಿ ಮತ್ತು ಅಭಿವೃದ್ಧಿಗೆ ಶ್ರೀಲಂಕಾದ ಮಾರ್ಗವನ್ನು ಬೆಂಬಲಿಸಲು ಕೆನಡಾ ಸಿದ್ಧವಾಗಿದೆ’. ಎಂದು ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಹೇಳಿದ್ದಾರೆ.

ವಿದೇಶ

ಮುಂದಿನ 3 ತಿಂಗಳಲ್ಲಿ ಚೀನಾದಲ್ಲಿ 16 ಲಕ್ಷ ಜನರು ಸಾಯುವ ಸಾದ್ಯತೆಯಿದೆ!


– ಸಾಂಕ್ರಾಮಿಕ ತಜ್ಞ ಎರಿಕ್ ಫಿಗಲ್ ಡಿಂಗ್

ಮುಂದಿನ 3 ತಿಂಗಳಲ್ಲಿ ಚೀನಾದಲ್ಲಿ ಶೇ.60ಕ್ಕೂ ಮೇಲಾದ ಜನರು ಕೊರೊನಾ ಸೋಂಕಿಗೆ ಗುರಿಯಾಗಬಹುದು. ಅದೇ ರೀತಿ 16 ಲಕ್ಷ ಜನರು ಸಾಯುವ ಸಾದ್ಯತೆಯೂ ಇದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಎರಿಕ್ ಫೀಗಲ್ ಡಿಂಗ್ ಎಚ್ಚರಿಕೆಯನ್ನು ನೀಡಿದ್ದಾರೆ.

ಚೀನಾದಲ್ಲಿ ಕೊರೊನಾ ಹರಡುವಿಕೆ ಮತ್ತೆ ಹೆಚ್ಚುತ್ತಿದೆ. ಪ್ರತಿದಿನ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ವ್ಯಾಪಕವಾಗಿ ಹರಡುತ್ತಿರುವ ಕೊರೊನಾವನ್ನು ತಡೆಗಟ್ಟಲು ಸರ್ಕಾರ ನಾನಾ ರೀತಿಯ ನಿರ್ಬಂಧಗಳನ್ನು ಹಾಕಿತ್ತು. ಆದರೇ ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಚೀನಿಯರು ಹೋರಾಟದ ದಾರಿಯನ್ನು ಕೈಗೆತ್ತಿಕೊಂಡರು. ಜನಪರವಾದ ಹೋರಾಟಕ್ಕೆ ಮಣಿದ ಸರ್ಕಾರ, ತಮ್ಮ ನಿರ್ಬಂಧಗಳನ್ನು ಸಡಿಲಗೊಳಿಸಿತು.

ಕ್ರಿಸ್ಮಸ್, ನ್ಯೂ ಇಯರ್ ಮತ್ತು ಚಂದ್ರಮಾನದ ಹೊಸ ವರ್ಷಾಚರಣೆಯಿಂದ ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋಗು ಸಾದ್ಯತೆ ಇದೆಯೆಂದು ಹೇಳಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಸ್ಮಶಾನಗಳಿಗೆ ಬರುವ ಮೃತರ ಶವಗಳ ಸಂಖ್ಯೆಯೂ ಹೆಚ್ಚಾಗುತ್ತಿವೆ. ಅದೇರೀತಿ ಆಸ್ಪತ್ರೆಗಳಲ್ಲಿಯೂ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಇದರ ಬಗ್ಗೆ ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಎರಿಕ್ ಫೀಗಲ್ ಡಿಂಗ್ ‘ಮುಂದಿನ 3 ತಿಂಗಳಲ್ಲಿ ಚೀನಾದಲ್ಲಿ ಕೊರೊನಾದಿಂದ ಶೇ.60 ರಷ್ಟು ಜನ ಸೋಂಕಿಗೆ ಗುರಿಯಾಗಬಹುದು. ಇದರಿಂದ 16 ಲಕ್ಷ ಜನರು ಸಾಯಬಹುದು. ಬೀಜಿಂಗ್‍ನಲ್ಲಿರುವ ಸ್ಮಶಾನಗಳಲ್ಲಿ ಶವಗಳನ್ನು ಮಣ್ಣು ಮಾಡುವ ಕೆಲಸಗಳು ದಿನದ 24 ಗಂಟೆಯೂ ನಡೆಯುತ್ತಿದೆ. ಪ್ರತಿ ಸ್ಮಶಾನಕ್ಕೆ ಪ್ರತಿದಿನ 2000 ಶವಗಳನ್ನು ತರಲಾಗುತ್ತಿದೆ. ಇಲ್ಲಿನ ಶವಗಾರಗಳು ಹೆಚ್ಚು ಹೊರೆಯಾಗುತ್ತಿದೆ.

ಸೋಂಕಿನ ತ್ವರಿತ ಹರಡುವಿಕೆಯಿಂದ 90 ದಿಗಳಲ್ಲಿ 87 ಕೋಟಿ ಜನರು ಸೋಂಕಿಗೆ ಒಳಗಾಗುತ್ತಾರೆ. ಮತ್ತು ಹಲವಾರು ಲಕ್ಷ ಜನರು ಸಾಯುತ್ತಾರೆ. ಚೀನಾದ ಕಮ್ಯುನಿಷ್ಟ್ ಪಕ್ಷದ ಈಗಿನ ಧ್ಯೇಯವಾಕ್ಯ ಏನಂದರೆ, ಸಾಯುತ್ತೇವೆ ಎಂದುಕೊಂಡವರು ಸಾಯಲಿ ಎಂಬುದೇ ಆಗಿದೆ. ಎಂದು ಹೇಳುತ್ತಿದ್ದಾರೆ.