ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಗೋಲ್ಡನ್ ಸ್ಟಾರ್ ಗಣೇಶ್ Archives » Dynamic Leader
October 17, 2024
Home Posts tagged ಗೋಲ್ಡನ್ ಸ್ಟಾರ್ ಗಣೇಶ್
ಸಿನಿಮಾ

ವರದಿ: ಅರುಣ್ ಜಿ.,

ವಿಖ್ಯಾತ್‌ ಪ್ರೊಡಕ್ಷನ್‌ ಅಂದರೇನೆ, ಅದ್ಧೂರಿತನ ಕಣ್ಮುಂದೆ ಬರುತ್ತದೆ. ಈ ವರೆಗೆ ನಿರ್ಮಾಪಕ ವಿಖ್ಯಾತ್‌ ನಿರ್ಮಿಸಿರುವ ಪುಷ್ಪಕ ವಿಮಾನ, ಇನ್ಸ್‌ಪೆಕ್ಟರ್‌ ವಿಕ್ರಂ, ಮಾನ್ಸೂನ್‌ ರಾಗ ಮೊದಲಾದ ಚಿತ್ರಗಳು ತಾಂತ್ರಿಕವಾಗಿ ಶ್ರೀಮಂತಿಕೆ ಹೊಂದಿದ್ದವು.

ಅದೆಷ್ಟೇ ಕಷ್ಟವಾದರೂ ತೆರೆಮೇಲಿನ ದೃಶ್ಯಗಳು ರಿಚ್‌ ಆಗಿ ಮೂಡಿಬರಬೇಕು ಅಂತಾ ಬಯಸೋ ನಿರ್ಮಾಪಕರಲ್ಲಿ ವಿಖ್ಯಾತ್‌ ಖ್ಯಾತರಾಗಿದ್ದಾರೆ. ಸ್ಟಾರ್‌ಗಳ ಡೇಟ್ಸ್‌ ಸಿಕ್ತಾ, ರಪಾರಪಾ ಸಿನಿಮಾ ಮುಗಿಸಿ, ವ್ಯಾಪಾರ ಮುಗಿಸುವ ಜಾಯಮಾನ ವಿಖ್ಯಾತ್‌ ಅವರದ್ದಲ್ಲ. ಇಂಥ ವಿಖ್ಯಾತ್‌ ಈಗ ಗೋಲ್ಡನ್‌ಸ್ಟಾರ್ ಗಣೇಶ್‌ ಅವರಿಗಾಗಿ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಇನ್ನೂ ಟೈಟಲ್‌ ರಿವೀಲ್‌ ಆಗದ ಚಿತ್ರದ ಪೋಸ್ಟರ್‌ ಇಂದು ಹೊರಬಂದಿದೆ. ಈ ಬಾರಿ ಗಣೇಶ್‌ ಜನರನ್ನು ಗ್ಲೋಬಲ್‌ ಲೆವೆಲ್ಲಿನಲ್ಲಿ ರಂಜಿಸಲೆಂದೇ ಸಿದ್ದವಾಗುತ್ತಿದ್ದಾರೆ ಅನ್ನೋ ಸೂಚನೆಯಂತೂ ದೊರಕಿದೆ.

ಇದು ಗಣೇಶ್ ಅವರ ವೃತ್ತಿ ಬದುಕಿನಲ್ಲಿ ಮಹತ್ತರವಾಗಿ ದಾಖಲಾಗಬಹುದಾದ ಚಿತ್ರವಾಗಲಿದೆ ಅನ್ನೋದು ನಿರ್ಮಾಪಕ ವಿಖ್ಯಾತ್‌ ಅಭಿಪ್ರಾಯವಾಗಿದೆ. ಇದು ಗಣೇಶ್ ನಟನೆಯ 42ನೇ ಚಿತ್ರವಾಗಿದೆ. ವಿಖ್ಯಾತ್ ಚಿತ್ರ ಪ್ರೊಡಕ್ಷನ್ಸ್ ನಿರ್ಮಾಣದ 6ನೇ ಚಿತ್ರವಿದು. ವಿಶೇಷವೆಂದರೆ, ಇದು ಬಿಗ್ ಬಜೆಟ್ಟಿನ, ದೊಡ್ಡ ಕ್ಯಾನ್ವಾಸಿನ ಪ್ಯಾನಿಂಡಿಯಾ ಚಿತ್ರ. ಈ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ಪ್ಯಾನಿಂಡಿಯಾ ಲೆವೆಲ್ಲಿಗೆ ಲಗ್ಗೆಯಿಡಲಿದ್ದಾರೆ. ಈ ಸಿನಿಮಾ ಬಗೆಗಿನ ತಯಾರಿಗಳು ಚಾಲ್ತಿಯಲ್ಲಿವೆ. ನಿರ್ದೇಶಕರು, ತಾರಾಗಣ, ತಾಂತ್ರಿಕ ವರ್ಗ, ನಾಯಕಿ ಯಾರು ಎಂಬ ವಿಚಾರಗಳು ಇಷ್ಟರಲ್ಲಿಯೇ ಬಯಲಾಗಲಿವೆ.

ಸಿನಿಮಾ

ವರದಿ: ಅರುಣ್ ಜಿ.,

ಗಣೇಶ್ ಹುಟ್ಟುಹಬ್ಬಕ್ಕೆ ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭಕೋರಿದ ಚಿತ್ರತಂಡ!

ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸುತ್ತಿರುವ ಹೊಸ ಚಿತ್ರ ” ಕೃಷ್ಣಂ ಪ್ರಣಯ ಸಖಿ”. ಗಣೇಶ್ ನಾಯಕರಾಗಿ ನಟಿಸುತ್ತಿರುವ 41ನೇ ಚಿತ್ರವಿದು‌. ಕನ್ನಡದ ಹಲವು ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿರುವ ಶ್ರೀನಿವಾಸರಾಜು ಈ ಚಿತ್ರವನ್ನು ನಿರ್ದೇಶಿಸಿಸುತ್ತಿದ್ದಾರೆ. 

ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮೈಸೂರು, ರಾಜಸ್ಥಾನ ಹಾಗೂ ಯುರೋಪ್ ನಲ್ಲಿ ಚಿತ್ರೀಕರಣ ನಡೆಯಲಿದೆ. ಜುಲೈ 2, ನಾಯಕ ಗಣೇಶ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಗಣೇಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.

ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೂರನೇ ಚಿತ್ರವಿದು. ಅರ್ಜುನ್ ಜನ್ಯ ಈ ಚಿತ್ರದ ಸಂಗೀತ ನಿರ್ದೇಶಕರು.

ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸುತ್ತಿದ್ದಾರೆ. ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಸುಧಾರಾಣಿ, ಶ್ರೀನಿವಾಸಮೂರ್ತಿ, ಶಿವಧ್ವಜ್ ಶೆಟ್ಟಿ, ಬೆನಕ ಗಿರಿ ಮುಂತಾದ ಕಲಾವಿದರು “ಕೃಷ್ಣಂ ಪ್ರಣಯ ಸಖಿ” ಚಿತ್ರದಲ್ಲಿ ನಟಿಸಿದ್ದಾರೆ.