ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ನಿಯಂತ್ರಣ Archives » Dynamic Leader
October 23, 2024
Home Posts tagged ನಿಯಂತ್ರಣ
ದೇಶ

ಸುಳ್ಳು ಸುದ್ದಿಗಳು ವೇಗವಾಗಿ ಹರಡುವುದರಿಂದ ನೈಜ ಮಾಹಿತಿಗಳು ದುರ್ಬಲಗೊಳ್ಳುತ್ತದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಡಿ.ವೈ.ಚಂದ್ರಚೂಡ್, ‘ಸುಳ್ಳು ಸುದ್ದಿಗಳಿಂದ ಉಂಟಾಗುವ ಹಿಂಸಾಚಾರಗಳನ್ನು ನಾವು ಸುದ್ಧಿಯಾಗಿ ಪ್ರತಿದಿನವೂ ನೋಡುತ್ತಿದ್ದೇವೆ. ವೆಬ್‌ಸೈಟ್‌ಗಳ ಮೂಲಕ ಸುಳ್ಳು ಸುದ್ದಿ ಹರಡುವುದನ್ನು ನಿಯಂತ್ರಿಸಲು ಕ್ರಮಕೈಗೊಳ್ಳಬೇಕು.

ಜರ್ಮನಿ, ಅಮೇರಿಕಾ ಮುಂತಾದ ದೇಶಗಳಲ್ಲಿ ಚುನಾವಣೆಗಳು ಮತ್ತು ಸಮುದಾಯಗಳನ್ನು ಸುಳ್ಳು ಸುದ್ದಿಗಳು ನಾಶಮಾಡುತ್ತವೆ. ದೇಶವು ದುರಂತ ಕೋವಿಡ್ ಸಾಂಕ್ರಾಮಿಕವನ್ನು ಎದುರಿಸಿದಾಗ, ಜಾಲತಾಣಗಳು ಸುಳ್ಳು ಸುದ್ದಿ ಮತ್ತು ವದಂತಿಗಳಿಂದ ತುಂಬಿತ್ತು ಎಂದು ನನಗೆ ನೆನಪಿದೆ.

ವೇಗವಾಗಿ ಹರಡುವ ನಕಲಿ ಸುದ್ದಿಗಳು ನೈಜ ಮಾಹಿತಿಯನ್ನು ದುರ್ಬಲಗೊಳಿಸುತ್ತವೆ. ಅಂತರ್ಜಾಲದಲ್ಲಿ ನಕಲಿ ಸುದ್ದಿಗಳು ಹರಡುತ್ತಿರುವ ಈ ಯುಗದಲ್ಲಿ ವಾಕ್ ಸ್ವಾತಂತ್ರ್ಯವನ್ನು ನಿಯಂತ್ರಿಸಲು ಹೊಸ ತತ್ವಗಳ ಅಗತ್ಯವಿದೆ. ಸರ್ಕಾರದ ವಿರುದ್ಧ ಕೆಲವರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವಿಸ್ತರಿಸಲು ಫೇಸ್‌ಬುಕ್, ಟ್ವಿಟರ್ ಮತ್ತು ಯೂಟ್ಯೂಬ್‌ನಂತಹ ಸಾಮಾಜಿಕ ಮಾಧ್ಯಮ ಸಂಸ್ಥೆಗಳನ್ನು ಅವಲಂಬಿಸಿದ್ದಾರೆ’ ಎಂದು ಹೇಳಿದ್ದಾರೆ.