ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಭಾರತ ಮಾತ Archives » Dynamic Leader
October 17, 2024
Home Posts tagged ಭಾರತ ಮಾತ
ದೇಶ

ಚೆನ್ನೈ: “ಹಲವು ಭಿನ್ನಾಭಿಪ್ರಾಯಗಳ ನಡುವೆಯೂ ಭಾರತವು ಒಂದೇ ದೇಶವಾಗಿದೆ” ಎಂದು ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್ ಹೇಳಿದರು.

ಚೆಂಗಲ್ಪಟ್ಟು ಜಿಲ್ಲೆಯ ಪೌಂಜೂರ್ ಸಮೀಪದ ನೀಲಮಂಗಲಂ ಗ್ರಾಮದಲ್ಲಿ, ಶಾಸ್ತ್ರಾಲಯ ಆಶ್ರಮದಲ್ಲಿ, ಭಾರತ ಮಾತಾ ದೇವಾಲಯವನ್ನು ನಿರ್ಮಿಸಲಾಗಿದೆ. 300 ಟನ್ ತೂಕದ ಒಂದೇ ಕಲ್ಲಿನಿಂದ ಮಾಡಲ್ಪಟ್ಟ, ಭಾರತ ಮಾತೆಯ 9 ಅಡಿ ಎತ್ತರದ ಪ್ರತಿಮೆಯನ್ನು ಅಖಂಡ ಭಾರತ ನಕ್ಷೆಯೊಂದಿಗೆ ಕೆತ್ತಲಾಗಿದೆ.

ಈ ದೇವಾಲಯದ ಕುಂಭಾಭಿಷೇಕ ಸಮಾರಂಭವು ನೆನ್ನೆ ನಡೆದಿತ್ತು. ಈ ಸಮಾರಂಭದಲ್ಲಿ ಆರ್‌ಎಸ್‌ಎಸ್ ರಾಷ್ಟ್ರೀಯ ಅಧ್ಯಕ್ಷ ಮೋಹನ್ ಭಾಗವತ್, ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್, ಶಾಸ್ತ್ರಾಲಯ ಆಶ್ರಮದ ಸಂಸ್ಥಾಪಕ ಸ್ವಾಮಿ ಬ್ರಹ್ಮ ಯೋಗಾನಂದ ಮುಂತಾದವರು ಪಾಲ್ಗೊಂಡಿದ್ದರು. 100ಕ್ಕೂ ಹೆಚ್ಚು ಬಾಲಕಿಯರು ಭಾರತ ಮಾತೆಯ ವೇಷವನ್ನು ಧರಿಸಿ, ಭಾರತ ಮಾತೆಯ ಪ್ರತಿಮೆಗೆ ದೀಪಾರಾಧನೆ ಸಲ್ಲಿಸಿದರು.

ನಂತರ ಮಾತನಾಡಿದ ಮೋಹನ್ ಭಾಗವತ್, “ಭಾಷೆ, ಆಹಾರ, ಉಡುಗೆ, ಪೂಜೆಯ ವಿಧಾನ ಹೀಗೆ ನಮ್ಮಲ್ಲಿ ಹಲವು ವ್ಯತ್ಯಾಸಗಳಿದ್ದರೂ, ಭಾರತ ಯಾವಾಗಲೂ ಒಂದೇ ದೇಶವಾಗಿದೆ. ಹಿಮಾಲಯದಿಂದ ಹಿಂದೂ ಮಹಾಸಾಗರದವರೆಗೆ ಭಾರತದ ಈ ಭೂ ಪ್ರದೇಶವು ದೇವರಿಂದ ನಿರ್ಧರಿಸಲ್ಪಟ್ಟಿದೆ. ಭೂಪ್ರದೇಶದಿಂದ ಭಾರತವನ್ನು ಹಲವಾರು ದೇಶಗಳಾಗಿ ವಿಂಗಡಿದ್ದರೂ, ಧರ್ಮದಿಂದ ಅಖಂಡ ಭರತವಾಗಿಯೇ ಉಳಿದಿದೆ.

‘ಭಾರತವು ವಿಶ್ವಕ್ಕೆ ಮಾರ್ಗದರ್ಶಿಯಾಗಿರುತ್ತದೆ’ ಎಂದು ಮಹಾನ್ ಅರಬಿಂದೋ ಹೇಳಿದರು. ನಾವು ದೇಶದ ಮೇಲೆ ಭರವಸೆಯನ್ನು ಇಡಬೇಕು. ಆ ಭರವಸೆಯು ನಮ್ಮ ದೇಶವನ್ನು ತೊರೆದವರನ್ನು ಮರಳಿ ಬರುವಂತೆ ಮಾಡುತ್ತದೆ. ಇಲ್ಲಿನ ಮುಸ್ಲಿಮರು ವಿಭಜನೆಯ ಸಮಯದಲ್ಲಿ ಪಾಕಿಸ್ತಾನಕ್ಕೆ ಹೋಗದೆ, ಭಾರತ ನಮ್ಮ ದೇಶ ಎಂದು ಇಲ್ಲೇ ಉಳಿದುಕೊಂಡರು. ಭಾರತವು ಸತ್ಯ, ಪ್ರೀತಿ, ಪರಿಶುದ್ಧತೆ ಮತ್ತು ತಪಸ್ಸು ಎಂಬ ನಾಲ್ಕು ಸ್ತಂಭಗಳ ಮೇಲೆ ನಿಂತಿದೆ. ಅಖಂಡ ಭಾರತವು ರಚನೆಯಾಬೇಕೆ ಎಂಬುದರ ಸಂಕೇತವಾಗಿ, ಇಲ್ಲಿ ಭಾರತ ಮಾತೆಯ ಪ್ರತಿಮೆಯನ್ನು ಇರಿಸಲಾಗಿದೆ” ಎಂದು ಹೇಳಿದರು. RSS chief takes part in consecration of Bharata Mata temple in Tamilnadu.