ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಮಾಲೂರು ಕ್ಷೇತ್ರ Archives » Dynamic Leader
October 17, 2024
Home Posts tagged ಮಾಲೂರು ಕ್ಷೇತ್ರ
ಬೆಂಗಳೂರು ರಾಜಕೀಯ

ವರದಿ: ಮಂಜುಳಾ ರೆಡ್ಡಿ

ಬೆಂಗಳೂರು: ಮಾಲೂರು ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಆರ್.ವಿ.ಭೂತಪ್ಪ ಬೆಂಗಳೂರಿನಲ್ಲಿ ಪತ್ರಿಕಾ ಘೋಷ್ಟಿ ನಡೆಸಿ, ಸುಮಾರು ವರ್ಷಗಳಿಂದ ಮಾಲೂರು ಜನರ ಸೇವೆಯಲ್ಲಿ ತೊಡಗಿರುವ ಸ್ಥಳೀಯನಾದ ನನಗೆ, ಈ ಬಾರಿ ಬಿಜೆಪಿ ಪಕ್ಷದಿಂದ ವಿಧಾನಸಭಾ  ಟಿಕೆಟ್ ಕೊಡಬೇಕೆಂದು ಬಿಜೆಪಿ ವರಿಷ್ಠರಿಗೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಾನು ಮೂಲತಃ ಮಾಲೂರು ತಾಲೂಕಿನ ರಾಜೇನಹಳ್ಳಿ ಗ್ರಾಮದವನಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ, ಎಸ್.ಆರ್.ಬೊಮ್ಮಾಯಿ ಅವರ ರಾಜ್ಯಾಡಳಿತವನ್ನು ಮತ್ತು ದೇಶ, ನಾಡಿನ ಬಗ್ಗೆ ಅವರಿಗಿರುವ ಗೌರವ, ಮುಂದಾಲೋಚನೆ, ಅಭಿವೃದ್ಧಿ ಮಂತ್ರ ಇವೆಲ್ಲವನ್ನು ನೋಡಿ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಬಂದಿದ್ದೇನೆ. ಕ್ಷೇತ್ರದ ಜನರ ನಾಡಿಮಿಡಿತ ಏನೆಂಬುದು ನನಗೆ ಗೊತ್ತಿದೆ. ಅಲ್ಲಿನ ಸಮಸ್ಯೆಗಳೇನು ಅವುಗಳಿಗೆ ಯಾವ ರೀತಿ ಪರಿಹಾರ ಕೊಡಬೇಕೆಂಬುದನ್ನು ನಾನು ಈಗಾಗಲೇ ಯೋಚಿಸಿದ್ದೀನಿ. ಬಿಜೆಪಿ ಪಕ್ಷದಿಂದ ನಾಲ್ಕು ಜನರು ಆಕಾಂಕ್ಷಿಗಳಿದ್ದಾರೆ ಆದರೆ ಅವರೆಲ್ಲ ಹೊರ ಕ್ಷೇತ್ರಗಳಿಂದ ಬಂದವರು. ನನಗೆ ಪಕ್ಷ ಟಿಕೆಟ್ ಕೊಟ್ಟರೆ ನೂರಕ್ಕೆ ನೂರರಷ್ಟು ಗೆದ್ದು ಬರುತ್ತೇನೆ’ ಎಂದರು.

‘ಮಾಲೂರು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೇ. ತಾಲ್ಲೂಕಿನಲ್ಲಿ ರಸ್ತೆ, ಆಸ್ಪತ್ರೆ, ಸಾರಿಗೆ ಯಾವುದು ಸರಿ ಇಲ್ಲ. ಹಾಲಿ ಶಾಸಕರು ಅಭಿವೃದ್ಧಿಯ ಕಡೆ ಗಮನಹರಿಸದೆ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ನಾನು ಬಿಜೆಪಿ ಪಕ್ಷದಿಂದ ಆಯ್ಕೆಯಾದರೆ, ನೀರಾವರಿ, ರೈತರ ಸಮಸ್ಯೆ ಸೇರಿದಂತೆ ಎಲ್ಲವನ್ನು ಬಗೆಹರಿಸುತ್ತೇನೆ’ ಎಂದು ಆಶ್ವಾಸನೆ ಕೊಟ್ಟರು. ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಬೆನಗಟ್ಟ ರವಿ, 15 ವರ್ಷಗಳಿಂದ ರಾಜಕೀಯ ಪಕ್ಷಗಳನ್ನು ನೋಡುತ್ತಾ ಬಂದಿದ್ದೇನೆ. ತಾಲ್ಲೂಕಿನಲ್ಲಿ ಮಂಜುನಾಥಗೌಡರು ಬಿಟ್ಟರೆ ಬೇರೆ ಯಾವ ಶಾಸಕರು ತಾಲೂಕಿನ ಅಭಿವೃದ್ಧಿಗೆ ಗಮನ ಹರಿಸಲಿಲ್ಲ. ರಸ್ತೆಗಳು ಹದಗೆಟ್ಟಿವೆ. ಕುಡಿಯುವ ನೀರಿಲ್ಲದೆ ಆಹಾಕಾರ ಎದ್ದಿದೆ. ಸದ್ಯ ಇರುವ ಕಾಂಗ್ರೆಸ್ ಪಕ್ಷದ ಶಾಸಕ ನಂಜೇಗೌಡ ಅವರಿಗೆ ಬಿಜೆಪಿ ಸರ್ಕಾರ ಅಭಿವೃದ್ಧಿಗೆ ಸಹಕಾರ ನೀಡಿತು. ಅದನ್ನು ಉಪಯೋಗಿಸುವಕೊಳ್ಳುವ ಜಾಣ್ಮೆ, ತಿಳುವಳಿಕೆ, ಅವರಿಗಿಲ್ಲ. ಅವರ ಹೋಬಳಿಗೆ ಮಾತ್ರ ಅವರು ಎಂಎಲ್ಎ. ಉಳಿದ ಕ್ಷೇತ್ರಗಳನ್ನು ಕಡೆಗಣಿಸಿ ತಾರತಮ್ಯ ಮೆರೆಯುತ್ತಿದ್ದಾರೆ’ ಎಂದು ದೂರಿದರು.

ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಸೋಮಶೇಖರ್. ಆರ್‌.ಸಿ.ವೆಂಕಟಗಿರಿಯಪ್ಪ, ಆರ್.ಎಂ.ಚಂದ್ರೇಗೌಡ, ರಾಮಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.