ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಮೋದಿ Archives » Page 3 of 7 » Dynamic Leader
October 23, 2024
Home Posts tagged ಮೋದಿ (Page 3)
ರಾಜಕೀಯ

ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶದಿಂದ ದ್ವೇಷ ಮತ್ತು ಅಹಂಕಾರದ ರಾಜಕಾರಣಕ್ಕೆ ಮತದಾರ ಮೂಗುದಾರ ತೊಡಿಸಿದ್ದಾನೆ. ಬಣ್ಣದ ಮಾತುಗಳು ಹೆಚ್ಚು ಕಾಲ ನಡೆಯದು ಎಂಬುದು ಈ ಫಲಿತಾಂಶದಿಂದ ಸ್ಪಷ್ಟವಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ

ಅವರು ಮಾತನಾಡುತ್ತಾ, ‘ಸ್ವತಃ ಪ್ರಧಾನಿಗಳೇ ಧರ್ಮದ ಭಾವನೆ ಕೆರಳಿಸುವ ಪ್ರಯತ್ನ ಮಾಡಿಯೂ ರಾಜ್ಯದಲ್ಲಿ ಮೋದಿ ವರ್ಚಸ್ಸು ಪರಿಣಾಮ ಬೀರಲಿಲ್ಲ; ಕೈಯಲ್ಲಿರುವ ಸೀಟನ್ನು ಉಳಿಸಿಕೊಳ್ಳಲು ಅವರಿಂದಾಗಲಿಲ್ಲ. ರಾಜ್ಯ ಸರ್ಕಾರ ಕೂಡಾ ಹೆಚ್ಚಾಗಿ ಗ್ಯಾರಂಟಿಯನ್ನೇ ಅವಲಂಭಿಸಿತು. ನಿರೀಕ್ಷಿತ ಸ್ಥಾನವನ್ನು ಗಳಿಸದಿದ್ದರೂ ಒಂಬತ್ತು ಸ್ಥಾನ ಬಗಲಿಗೆ ಹಾಕಿದೆ. ಬಿಜೆಪಿಯ ಅಹಂಕಾರದ ಹುಚ್ಚು ನಾಗಾಲೋಟಕ್ಕೆ ಮತದಾರ ಲಗಾಮು ಹಾಕಿದ್ದಾನೆ.

ಕೇಂದ್ರದ ಆರ್ಥಿಕ ನೀತಿ, ರೈತರನ್ನು ಸತಾಯಿಸಿದ್ದು, ಕಾರ್ಪೊರೇಟ್ ದಿಗ್ಗಜರ ಹಿತಾಸಕ್ತಿಗಳನ್ನು ಕಾಪಾಡಿದ್ದು ಕೇಂದ್ರದ ಬಗ್ಗೆ ಜನರಿಗೆ ಅಸಹನೆ ಮೂಡಿಸಿದೆ. ರಾಮಮಂದಿರದ ವಿಚಾರ ಪ್ರಸ್ತಾಪಿಸಿ ಭಾವನಾತ್ಮಕವಾಗಿ ಮತವನ್ನಾಗಿಸುವ ಪ್ರಯತ್ನ ಫಲ ನೀಡಲಿಲ್ಲ. ರಾಜ್ಯ ಸರ್ಕಾರವನ್ನು ಉರುಳಿಸಲು ಇನ್ನು ಬಿಜೆಪಿ ಮುಂದಾಗದು. ತಮ್ಮವರನ್ನು ನಿಯಂತ್ರಿಸುವ ಕಾರ್ಯದಲ್ಲಿ ಲೀನವಾಗಬಹುದು. 

ರಾಜ್ಯದಲ್ಲಿ ಕಾಂಗ್ರೆಸ್ ಗೆ ನಿರೀಕ್ಷಿತಾ ಫಲಿತಾಂಶ ದೊರಕಲಿಲ್ಲ ಈ ಫಲಿತಾಂಶದಿಂದ ಕಾಂಗ್ರೆಸ್ ಕೂಡ ಪಾಠ ಕಲಿಯಬೇಕಾಗಿದೆ. ಕೇವಲ ಗ್ಯಾರಂಟಿಗಳಿಂದ ಗೆಲ್ಲಲಾಗದು. ದ್ವೇಷ ರಾಜಕಾರಣವನ್ನು ಮಟ್ಟ ಹಾಕಿ, ಭ್ರಷ್ಟಾಚಾರ ರಹಿತರಾಗಿ ಜನರ ಹಿತಾಸಕ್ತಿಗಳನ್ನು ಕಾಪಾಡಲು ಸರಕಾರ ಮುಂದಾಗಬೇಕು ಎಂದು ಅವರು ಕರೆ ನೀಡಿದ್ದಾರೆ.

ರಾಜಕೀಯ

ನವದೆಹಲಿ: ಸಂಸತ್ ಚುನಾವಣೆಯ ಮತದಾನ ಮುಗಿದ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಹೊರಬಿದ್ದಿತು. ಇದರಲ್ಲಿ ಬಹುತೇಕ ಸಮೀಕ್ಷೆಗಳು ಆಡಳಿತಾರೂಢ ಬಿಜೆಪಿ ಪರವಾಗಿತ್ತು. ಸಮೀಕ್ಷೆ ನಡೆಸಿದ ಬಹುತೇಕ ಕಂಪೆನಿಗಳು, ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ 300ಕ್ಕೂ ಹೆಚ್ಚು ಸ್ಥಾನಗಳನ್ನು ವಶಪಡಿಸಿಕೊಳ್ಳಲಿದೆ ಎಂದು ಹೇಳಿದರು.

ಇಂಡಿಯಾ ಟುಡೇ ಮತ್ತು ಆಕ್ಸಿಸ್ ಮೈ ಇಂಡಿಯಾ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ, ಬಿ.ಜೆ.ಪಿ ಮೈತ್ರಿಕೂಟವು 361 ರಿಂದ 401 ಸ್ಥಾನಗಳನ್ನು ವಶಪಡಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿ ಮಾಡಿತ್ತು. ಆದರೆ ಇಂದು ಬಿಡುಗಡೆಯಾದ ಚುನಾವಣಾ ಫಲಿತಾಂಶಗಳು ಚುನಾವಣೋತ್ತರ ಸಮೀಕ್ಷೆಗನ್ನು ಸುಳ್ಳೆಂದು ಸಾಬೀತುಪಡೆಸಿವೆ.

ಮತ ಎಣಿಕೆಯ ಆರಂಭದಿಂದಲೂ ಬಿ.ಜೆ.ಪಿ ಮೈತ್ರಿಕೂಟಕ್ಕೆ ಸವಾಲೆಸೆಯುವ ರೀತಿಯಲ್ಲಿ ಇಂಡಿಯಾ ಮೈತ್ರಿಕೂಟವೂ ಹಲವೆಡೆ ಮುನ್ನಡೆ ಸಾಧಿಸಿವೆ. ಸದ್ಯಕ್ಕೆ ಬಿ.ಜೆ.ಪಿ ಮೈತ್ರಿಕೂಟ 291 ಕ್ಷೇತ್ರಗಳಲ್ಲಿ ಮತ್ತು ಇಂಡಿಯಾ ಮೈತ್ರಿಕೂಟ 234 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ದೆಹಲಿಯಲ್ಲಿ ಸುದ್ದಿಗಾರರನ್ನು ಭೇಟಿ ಮಾಡಿದರು.

ಆಗ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಸಂವಿಧಾನವನ್ನು ರಕ್ಷಿಸಲು ಜನರು ನಮಗೆ ಮತ ನೀಡುತ್ತಾರೆ ಎಂದು ನಾವು ಭಾವಿಸಿದ್ದೆವು. ಬಿಜೆಪಿ ಅಷ್ಟೇ ಅಲ್ಲ ಸಿಬಿಐ, ಜಾರಿ ನಿರ್ದೇಶನಾಲಯದ ವಿರುದ್ಧ ನಿಂತು ಗೆದ್ದಿದ್ದೇವೆ. ಜನರ ತೀರ್ಪು ಸಂವಿಧಾನದ ರಕ್ಷಣೆಗೆ ಸಹಕಾರಿಯಾಗಿದೆ. ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಧ್ವನಿ ಕೇಳುವ ಭರವಸೆ ಇದೆ. ಜನರು ಪ್ರಧಾನಿ ಮೋದಿಯನ್ನು ಕಡೆಗಣಿಸಿದ್ದಾರೆ. ರೈತರು, ಬಡವರು ಮತ್ತು ಪರಿಶಿಷ್ಟ ಪಂಗಡದವರು ಸಂವಿಧಾನವನ್ನು ಉಳಿಸಿದ್ದಾರೆ.

ನಾನು ಎರಡೂ ಕ್ಷೇತ್ರಗಳಲ್ಲಿ ಯಶಸ್ವಿಯಾಗಿದ್ದೇನೆ. ರಾಯ್ಬರೇಲಿ ಮತ್ತು ವಯನಾಡು ಕ್ಷೇತ್ರದ ಜನತೆಗೆ ಧನ್ಯವಾದಗಳು. ವಯನಾಡು, ರಾಯ್ಬರೇಲಿ ಕ್ಷೇತ್ರಗಳಲ್ಲಿ ಯಾವುದನ್ನುರಾಜೀನಾಮೆ ನೀಡಬೇಕು ಎಂಬುದನ್ನು ಇನ್ನು ನಿರ್ಧರಿಸಿಲ್ಲ. ನಾಳೆ ದೆಹಲಿಯಲ್ಲಿ ಇಂಡಿಯಾ ಮೈತ್ರಿ ಪಕ್ಷಗಳ ಸಮಾಲೋಚನಾ ಸಭೆ ನಡೆಯಲಿದೆ. ನಾವು ನಮ್ಮ ಮೈತ್ರಿ ಪಕ್ಷಗಳನ್ನು ಗೌರವಿಸುತ್ತೇವೆ ಮತ್ತು ಅವರನ್ನು ಸಂಪರ್ಕಿಸದೆ ಯಾವುದೇ ಹೇಳಿಕೆಗಳನ್ನು ನೀಡುವುದಿಲ್ಲ.

ನಾಳೆ ನಡೆಯಲಿರುವ ಸಭೆಯಲ್ಲಿ, ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ ಮತ್ತು ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾ ದಳ ಪಕ್ಷಗಳನ್ನು ಮೈತ್ರಿಕೂಟಕ್ಕೆ ಆಹ್ವಾನಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು” ಎಂದು ಅವರು ಹೇಳಿದರು.

ಲೇಖನ

ಜಾಗತಿಕ ರೈತರು ಕ್ವಿಂಟಾಲ್ ಗೋಧಿಯನ್ನು 3,000 ರಿಂದ 4,000 ರೂ.ಗೆ ಮಾರಾಟ ಮಾಡುತ್ತಿರುವಾಗ, ಭಾರತೀಯ ರೈತರಿಗೆ ಸಿಗುವುದು ಕೇವಲ 2,400 ರಿಂದ 2,600 ರೂ. ಮಾತ್ರ!

“ರೈತರು ಬದುಕಬಾರದು” ಎಂಬುದಕ್ಕಾಗಿ ಭಾರತದಲ್ಲಿ ಒಬ್ಬ ವ್ಯಕ್ತಿ ದಣಿವರಿಯದೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರೆ, ಅವರು ಬೇರೆ ಯಾರೂ ಅಲ್ಲ; ಅವರೇ ನಮ್ಮ ‘ದೇವಮಾನವ’ ಭಾರತದ ಪ್ರಧಾನಿ ಮೋದಿ!

ಈ ಹಿಂದೆ, ಭಾರತದ ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇನೆ ಎಂದು ಹೇಳುತ್ತಲೇ ಗೋಧಿಯನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡಿದ ನಿರ್ದಯಿ ಮಗುವೇ ಈ ದೇವಮಾನವ?

ಒಂದು ಕ್ವಿಂಟಲ್ ಗೋಧಿಯ ಅಂತಾರಾಷ್ಟ್ರೀಯ ಬೆಲೆ ರೂ.3,000 ಕ್ಕಿಂತ ಕಡಿಮೆ ಇಲ್ಲ. ಇದು ಗರಿಷ್ಠ 4,000 ರೂ.ಗೆ ಮಾರಾಟವಾಗುತ್ತದೆ. ವಿಶ್ವದಾದ್ಯಂತ ರೈತರು ಕ್ವಿಂಟಲ್ ಗೋಧಿಯನ್ನು 4,000 ರೂ.ಗೆ ಮಾರಾಟ ಮಾಡುವ ಮೂಲಕ ಲಾಭ ಗಳಿಸುತ್ತಿದ್ದಾರೆ. ಆದರೆ ಭಾರತದ ರೈತರಿಗೆ ಸಿಗುವುದು ಕೇವಲ 2,400 ರಿಂದ 2,600 ರೂ. ಮಾತ್ರ. ಭಾರತ ಸರ್ಕಾರವು ಒದಗಿಸಿದ ಕನಿಷ್ಠ ಬೆಂಬಲ ಬೆಲೆ (Minimum Support Price) ಕೇವಲ 2,275 ರೂ. ಮಾತ್ರ.

ಜಾಗತಿಕವಾಗಿ ಗೋಧಿಯ ಬೆಲೆ ಗಗನಕ್ಕೇರುತ್ತಿರುವಾಗ, ರಫ್ತು ಮಾಡಿದರೆ, ಭಾರತೀಯ ರೈತರಿಗೆ ಸ್ವಯವಾಗಿಯೇ ದುಪ್ಪಟ್ಟು ಆದಾಯ ಸಿಗುತ್ತವೆ. ಆದರೆ, ಇದನ್ನು ‘ದೇವಮಾನವ’ ಸಹಿಸಿಕೊಳ್ಳುತ್ತಿಲ್ಲ. ಕಳೆದ ಮೂರು ವರ್ಷಗಳಿಂದ ಗೋಧಿ ರಫ್ತನ್ನು ನಿಷೇಧಿಸಲಾಗಿದೆ.

‘ಉತ್ತಮ ಬೆಲೆ ಸಿಕ್ಕರೆ ರೈತರು ನಮ್ಮ ಮಾತು ಕೇಳುವುದಿಲ್ಲ. ನಿರ್ದಿಷ್ಟವಾಗಿ ಹೇಳುವುದಾದರೆ, ಬಹಳಷ್ಟು ಗೋಧಿಯನ್ನು ಉತ್ಪಾದಿಸುವವರು ಉತ್ತರದ ರೈತರು. ನಾವು ಅವರನ್ನು ಸದಾ ಸಾಲದಲ್ಲಿಟ್ಟರೆ, ಅವರು ಪ್ರಧಾನಮಂತ್ರಿಗಳ ಆರ್ಥಿಕ ನೆರವು ಯೋಜನೆಯ ಹೆಸರಿನಲ್ಲಿ ನಾವು ನೀಡುವ 6000 ರೂಪಾಯಿಗಾಗಿ ನಮ್ಮ ಪಾದಗಳನ್ನು ಕಾಯುತ್ತಾರೆ’ ಎಂದು ಮೋದಿ ಭಾವಿಸಿರಬಹುದು?

ಈ ದೇವಮಾನವರ ಯೋಜನೆಗಳ ಹೊರತಾಗಿಯೂ, ಪ್ರಕೃತಿ ಈ ವರ್ಷ ರೈತರಿಗೆ ಸ್ವಲ್ಪ ಹೆಚ್ಚುವರಿ ಬೆಲೆ ಪಡೆಯಲು ಸಹಾಯ ಮಾಡಿದೆ. ಹೆಚ್ಚಿನ ಹಾನಿ ಇಲ್ಲದೆ ಬೆಳೆದಿದೆ. ಗೋಧಿ ಆಮದಿಗೆ ಉತ್ತೇಜನ ನೀಡದಿದ್ದರೆ ಭಾರತೀಯ ರೈತರಿಗೆ ಹೆಚ್ಚಿನ ಬೆಲೆ ಸಿಗಲಿದೆ. ಆದರೆ ಮೋದಿ ರಷ್ಯಾದಿಂದ ಐದು ಮಿಲಿಯನ್ ಟನ್ ಗೋಧಿ ಆಮದು ಮಾಡಿಕೊಳ್ಳಲು ಅನುಮತಿ ನೀಡಿದ್ದಾರೆ.

ಸರಿ, ಆಮದು ಮಾಡಿಕೊಂಡು ಹೇಗಾದರೂ ತೊಲಗಲಿ ಎಂದರೂ ಭಾರತದ ಗೋಧಿ ರೈತರು ವಿಶ್ವದ ಗೋಧಿ ರೈತರೊಂದಿಗೆ ಪೈಪೋಟಿ ನಡೆಸುತ್ತಾರೆ ಎಂದು ಬಯಸಿದರೆ, ಆಮದು ಸುಂಕ ಮುಕ್ತಕ್ಕೆ ಅವಕಾಶ ನೀಡುವ ಮೂಲಕ ಮೋದಿ ಭಾರತೀಯ ರೈತರ ಹೊಟ್ಟೆಗೆ ಹೊಡೆದಿದ್ದಾರೆ.

ವಿಶ್ವ ವ್ಯಾಪಾರ ಸಂಸ್ಥೆ (WTO) ನಿಬಂಧನೆಗಳ ಪ್ರಕಾರ, ಭಾರತವು ವಿದೇಶದಿಂದ ಆಮದು ಮಾಡಿಕೊಳ್ಳುವ ಗೋಧಿಗೆ 40% ಸುಂಕವನ್ನು ವಿಧಿಸಬಹುದು. ಆದರೆ ಉದ್ಯಮಿಗಳಿಗಾಗಿ ಅವತರಿಸಿರುವ ‘ದೇವಮಾನವ’ ಹೇಗೆ ತೆರಿಗೆ ವಿಧಿಸುತ್ತಾರೆ? ಬಿಸ್ಕತ್ತು ತಯಾರಕರು ಮತ್ತು ಗೋಧಿ ಹಿಟ್ಟಿನ ಗಿರಣಿ ಮಾಲೀಕರಂತಹ ಕಾರ್ಪೊರೇಟ್ ಕಂಪನಿಗಳಿಗೆ ಲಾಭದಾಯಕವಾಗಲು ಅವರು ಗೋಧಿಯನ್ನು ಸುಂಕ ರಹಿತ ಆಮದು ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ.

ಅಂತಹ ಸುಂಕವಿಲ್ಲದೆ ವಿದೇಶಿ ಗೋಧಿ ಭಾರತದ ಮಾರುಕಟ್ಟೆಗೆ ಬರುವುದಾದರೇ ಇಲ್ಲಿ ಗೋಧಿ ಬೆಲೆ ಕ್ವಿಂಟಲ್‌ಗೆ 2000 ರೂಪಾಯಿಗಿಂತ ಕಡಿಮೆಯಾದರೂ ಆಶ್ಚರ್ಯವಿಲ್ಲ. ಇದುವೇ ಈ ‘ದೇವಮಾನವ’ ರೈತನ ಆದಾಯವನ್ನು ದ್ವಿಗುಣಗೊಳಿಸುವ ಯೋಗ್ಯತೆ.

ರೈತರಿಂದ 32 ಮಿಲಿಯನ್ ಟನ್ ಗೋಧಿಯನ್ನು ಖರೀದಿಸುವ ಬದಲು ಭಾರತ ಸರ್ಕಾರವು ಕೇವಲ 26 ಮಿಲಿಯನ್ ಟನ್ ಗೋಧಿಯನ್ನು ಮಾತ್ರ ಖರೀದಿಸಿದೆ.

ಭಾರತವು ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಗೋಧಿ ಉತ್ಪಾದಕ ರಾಷ್ಟ್ರವಾಗಿದೆ. ಇದು 2024-25ರ ವಾರ್ಷಿಕ ಗುರಿ 112 ಮಿಲಿಯನ್ ಟನ್‌ಗಳಲ್ಲಿ ಸ್ವಲ್ಪ ಇಳಿಕೆಯಾಗಿದೆ. ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನವು ಇಳುವರಿ ಮೇಲೆ ದೊಡ್ಡ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂದು ಪರಿಸರ ತಜ್ಞರು ಹೇಳುತ್ತಾರೆ. ಇತಿಹಾಸದಲ್ಲಿ ಮೊದಲ ಬಾರಿಗೆ ನವದೆಹಲಿಯಲ್ಲಿ ತಾಪಮಾನ 52.9C ಗೆ ಏರಿದರೆ, ಭವಿಷ್ಯದಲ್ಲಿ ಭಾರತವು ಇನ್ನೂ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಇದೆಲ್ಲದರ ಬಗ್ಗೆ ಯಾವುದೇ ಆಲೋಚನೆಯಿಲ್ಲದೆ, ‘ದೇವಮಾನವ’ ಕನ್ಯಾಕುಮಾರಿ ವಿವೇಕಾನಂದ ಬಂಡೆಯ ಮೇಲೆ ಕುಳಿತು ಧ್ಯಾನ ಮಾಡುತ್ತಾರೆ. ಇದಕ್ಕೆ ಕಾಲವೇ ಉತ್ತರಿಸಬೇಕು.

ಅವತಾರ ಪುರುಷನಾದ ಶ್ರೀಕೃಷ್ಣನು ತಾಯಿಯ ಗರ್ಭದಲ್ಲಿ ಜನಿಸಿದವರು. ಮತ್ತೊಂದು ಅವತಾರ ಪುರುಷನಾದ ಭಗವಾನ್ ಶ್ರೀರಾಮನು ಕೂಡ ತಾಯಿಯ ಗರ್ಭದಲ್ಲಿ ಜನಿಸಿದವರು. ಆದರೆ ನಮ್ಮ ‘ದೇವಮಾನವ’ ಮೋದಿಜಿ ತನ್ನ ತಾಯಿಯ ಗರ್ಭದಿಂದ ಹುಟ್ಟಿರುವುದನ್ನು ಒಪ್ಪಿಕೊಳ್ಳಲು ನಿರಾಕರಿಸಿ ‘ನಾನು ಆಕಾಶದಿಂದ ಜಿಗಿದವನು’ ಎನ್ನುತ್ತಾರೆ.

ಹೀಗೆ ತಲೆ ಬುರುಡೆ ಒಣಗಿ ಹೋದವರಬಳಿ ಮಾತನಾಡಿ ಏನು ಪ್ರಯೋಜನ? ಜೈ ಭಾರತ್.

ಅಂಕಣಕಾರ: ದೂರನ್ ನಂಬಿ
ಮೂಲ: ವಿಕಟನ್.ಕಾಂ
ಕನ್ನಡಕ್ಕೆ: ಡಿ.ಸಿ.ಪ್ರಕಾಶ್

ದೇಶ

ನಾಗರಕೋಯಿಲ್: ಲೋಕಸಭೆ ಚುನಾವಣೆಯ ಅಂತಿಮ ಹಂತದ ಮತದಾನ ಜೂನ್ 1 ರಂದು  ಪೂರ್ಣಗೊಳ್ಳಲಿದ್ದು, ಇಂದು (ಮೇ 30) ಅಂತಿಮ ಹಂತದ ಪ್ರಚಾರ ಕಾರ್ಯ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ಅವರು 3 ದಿನಗಳ ಭೇಟಿಗಾಗಿ ಕನ್ಯಾಕುಮಾರಿಗೆ ಬಂದಿದ್ದಾರೆ.

ರಸ್ತೆ ಮಾರ್ಗವಾಗಿ ಸರ್ಕಾರಿ ಅತಿಥಿಗೃಹಕ್ಕೆ ತೆರಳಿದ ಮೋದಿ, ಸ್ವಲ್ಪ ಸಮಯ ಅಲ್ಲಿ ವಿಶ್ರಾಂತಿ ಪಡೆದರು. ನಂತರ ಅಲ್ಲಿಂದ ಭಗವತಿ ಅಮ್ಮನ್ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಅವರಿಗೆ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಭಗವತಿ ಅಮ್ಮನವರ ಭಾವಚಿತ್ರವನ್ನು ಸ್ಮರಣಿಕೆಯಾಗಿ ನೀಡಲಾಯಿತು.

ಅಲ್ಲಿಂದ ಕಡಲತೀರಕ್ಕೆ ಹೊರಟ ಮೋದಿಯವರು ವಿಶೇಷ ದೋಣಿಯ ಮೂಲಕ ವಿವೇಕಾನಂದ ಬೆಟ್ಟೆಕ್ಕೆ ತೆರಳಿದರು. ಕನ್ಯಾಕುಮಾರಿಗೆ ಆಗಮಿಸಿರುವ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ತಮಿಳುನಾಡು ಬಿಜೆಪಿ ಸದಸ್ಯರು ಯಾರೂ ಬರಬಾದೆಂದು ಬಿಜೆಪಿ ಹೈಕಮಾಂಡ್ ಆದೇಶ ಹೊರಡಿಸಿದೆ.

ಪ್ರಧಾನಿಯವರ ವೈಯಕ್ತಿಕ ಧ್ಯಾನ ಕಾರ್ಯಕ್ರಮವನ್ನು ರಾಜಕೀಯ ಕಾರ್ಯಕ್ರಮವನ್ನಾಗಿ ಮಾಡಬಾರದೆಂದು ಹೇಳಿದೆ. ಇದೇ ವೇಳೆ ಕೇಂದ್ರದ ಮಾಜಿ ಸಚಿವ ಪೊನ್ ರಾಧಾಕೃಷ್ಣನ್ ಅತಿಥಿ ಗೃಹಕ್ಕೆ ಬಂದಿದ್ದರು. ಪೊಲೀಸರು ಅವರಿಗೆ ಅನುಮತಿ ನಿರಾಕರಿಸಿದರು. ಇದಾದ ಬಳಿಕ ಅವರು ಅಲ್ಲಿಂದ ವಾಪಸ್ ತೆರಳಿದರು.

ದೇಶ

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರು ಮೇ 30 ರಂದು ಸಂಜೆ ಕನ್ಯಾಕುಮಾರಿಗೆ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ. ಈ ನಿಟ್ಟಿನಲ್ಲಿ ಕನ್ಯಾಕುಮಾರಿಯಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗುತ್ತಿದೆ.

ಮೇ 30 ರಂದು ತಮಿಳುನಾಡಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಅವರು ಮೇ 31 ಮತ್ತು ಜೂನ್ 1 ರಂದು ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಬಂಡೆಯಲ್ಲಿ ಧ್ಯಾನ ಮಾಡಲಿದ್ದಾರೆ. ವಿವೇಕಾನಂದರು ಧ್ಯಾನ ಮಾಡಿದ ಸ್ಥಳದಲ್ಲಿಯೇ ಪ್ರಧಾನಿ ಮೋದಿ ಧ್ಯಾನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ 2019ರ ಸಂಸತ್ ಚುನಾವಣೆಯ ಕೊನೆಯ ಹಂತದ ಮತದಾನದ ವೇಳೆ ಪ್ರಧಾನಿ ಮೋದಿ ಹಿಮಾಲಯಕ್ಕೆ ಭೇಟಿ ನೀಡಿದ್ದರು. ಪ್ರಧಾನಿ ಮೋದಿ ಅಲ್ಲಿನ ಗುಹೆಯೊಂದಕ್ಕೆ ತೆರಳಿ ಧ್ಯಾನ ಮಾಡಿದರು. ಈ ಪ್ರಯಾಣದಲ್ಲಿ ಅವರು ಕೇದಾರನಾಥ ಶಿವ ದೇವಾಲಯದಲ್ಲಿ ಪೂಜೆಯನ್ನೂ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ, ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಸೆಲ್ವಪೆರುಂತಗೈ ಅವರು ತಮ್ಮ ಎಕ್ಸ್ ಪೇಜ್ ನಲ್ಲಿ “ಪ್ರಜಾಪ್ರತಿನಿಧಿ ಕಾಯ್ದೆಯಂತೆ ಚುನಾವಣಾ ನೀತಿ ನಿಯಮಗಳು ಜಾರಿಯಲ್ಲಿರುವ ಕಾರಣ ಮೋದಿಯವರ ಕನ್ಯಾಕುಮಾರಿ ಕಾರ್ಯಕ್ರಮಕ್ಕೆ ಚುನಾವಣಾ ಆಯೋಗ ಅನುಮತಿ ನೀಡಬಾರದು.

ಚುನಾವಣೆಗೆ ಮುನ್ನ 48 ಗಂಟೆಗಳ ವಿರಾಮದ ವೇಳೆಯಲ್ಲಿ ಇಂತಹ ಘಟನೆಯ ಮೂಲಕ ಮಾಧ್ಯಮಗಳನ್ನು ಬಳಸಿಕೊಂಡು ರಹಸ್ಯವಾಗಿ ಪ್ರಚಾರ ಮಾಡಲು ಮೋದಿ ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿದೆ. ನಾಳೆ (ಇಂದು) ಈ ಸಂಬಂಧ ಚುನಾವಣಾ ಆಯೋಗಕ್ಕೆ ಪತ್ರ ನೀಡಬೇಕಿದೆ. ಅಗತ್ಯವಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ” ಎಂದು ಹೇಳಿದ್ದಾರೆ.

ಕ್ರೀಡೆ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಸರಿನಲ್ಲಿ ನಕಲಿ ಅರ್ಜಿಗಳು ಬಂದಿವೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಹೇಳಿದೆ.

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ಅವಧಿ ಮುಂಬರುವ ಟಿ20 ವಿಶ್ವಕಪ್‌ನೊಂದಿಗೆ ಕೊನೆಗೊಳ್ಳಲಿದೆ. ಇದರ ಬೆನ್ನಲ್ಲೇ ಭಾರತ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ ಎಂದು ಬಿಸಿಸಿಐ ಪ್ರಕಟಿಸಿದೆ. ಅದರಂತೆ ಬಿಸಿಸಿಐ ಗೂಗಲ್ ಫಾರಂಗಳ ಮೂಲಕ ಅರ್ಜಿಗಳನ್ನು ಸ್ವೀಕರಿಸುತ್ತಿತ್ತು. ಅರ್ಜಿ ಸಲ್ಲಿಸುವ ಗಡುವು ನಿನ್ನೆ (ಮೇ 27) ಕೊನೆಗೊಂಡಿದೆ.

ಈ ಹಿನ್ನೆಲೆಯಲ್ಲಿ, ಒಟ್ಟು 3000ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ ಎಂದು ಬಿಸಿಸಿಐ ಹೇಳಿಕೊಂಡಿದೆ. ಅವುಗಳಲ್ಲಿ ಹೆಚ್ಚಿನವು ನಕಲಿ ಅರ್ಜಿಗಳು ಎಂದು ವರದಿಯಾಗಿದೆ. ನಿರ್ದಿಷ್ಟವಾಗಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಸೆಹ್ವಾಗ್, ಧೋನಿ ಮತ್ತಿತರರ ಹೆಸರಿನಲ್ಲೂ ನಕಲಿಯಾಗಿ ಅರ್ಜಿ ಸಲ್ಲಿಸಲಾಗಿದೆ.

ಇದರಿಂದ ಹಲವರು ಆಘಾತಕ್ಕೊಳಗಾಗಿದ್ದಾರೆ. ಹಿಂದೆಂದೂ ಕಾಣದ ರೀತಿಯಲ್ಲಿ ಗೂಗಲ್ ಫಾರಂಗಳ ಮೂಲಕ ಅರ್ಜಿಗಳು ಬಂದಿರುವುದರಿಂದ ಹೆಚ್ಚು ನಕಲಿಗಳು ಬಂದಿವೆ ಎನ್ನಲಾಗಿದೆ. ಇದರಲ್ಲಿನ ಅರ್ಹ ಅರ್ಜಿಗಳನ್ನು ಪರಿಗಣಿಸಿ, ಇವರಲ್ಲಿ ಒಬ್ಬರನ್ನು ಭಾರತ ತಂಡದ ಮುಖ್ಯ ಕೋಚ್ ಆಗಿ ಬಿಸಿಸಿಐ ನೇಮಕ ಮಾಡಲಿದೆ ಎಂದು ಹೇಳಲಾಗುತ್ತಿದೆ.

ರಾಜಕೀಯ

ಬುಲ್ಡೋಜರ್‌ಗಳನ್ನು ಎಲ್ಲಿ ಬಳಸಬೇಕು ಮತ್ತು ಎಲ್ಲಿ ಬಳಸಬಾರದು ಎಂಬುದನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಕಲಿಯಬೇಕು ಎಂದು ಪ್ರಧಾನಿ ಮೋದಿ ಹೇಳಿದರು.

ಲಕ್ನೋ,
ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಗೆದ್ದು ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿ ರಾಮಮಂದಿರವನ್ನು ಬುಲ್ಡೋಜರ್‌ ಮೂಲಕ ಕೆಡವುತ್ತಾರೆ. ಬಾಲರಾಮ, ದೇವಸ್ಥಾನದಿಂದ ಗುಡಾರಕ್ಕೆ ಹಿಂತಿರುಗುತ್ತಾರೆ.

ಬುಲ್ಡೋಜರ್‌ಗಳನ್ನು ಎಲ್ಲಿ ಬಳಸಬೇಕು ಮತ್ತು ಎಲ್ಲಿ ಬಳಸಬಾರದು ಎಂಬ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ತರಬೇತಿ ಪಡೆಯಬೇಕು. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ದೇಶದ ಪ್ರಗತಿಗೆ ಶ್ರಮಿಸುತ್ತಿದೆ. ಇನ್ನೊಂದೆಡೆ ಇಂಡಿಯಾ ಮೈತ್ರಿಕೂಟ ಗೊಂದಲಗಳನ್ನು ಸೃಷ್ಟಿಸುತ್ತಿದೆ. ಚುನಾವಣೆಯಲ್ಲಿ ಗೆಲ್ಲುವ ಮೂಲಕ ಮೋದಿ ಸರ್ಕಾರ ಹ್ಯಾಟ್ರಿಕ್ ಸಾಧನೆ ಮಾಡಲಿದೆ.” ಎಂದು ಹೇಳಿದರು.

ಲೇಖನ

ಡಿ.ಸಿ.ಪ್ರಕಾಶ್

ಕನಿಷ್ಠ ಬೆಂಬಲ ಬೆಲೆ ಸೇರಿದಂತೆ 13 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ರಾಜ್ಯಗಳ 200ಕ್ಕೂ ಹೆಚ್ಚು ಕೃಷಿ ಸಂಘಟನೆಗಳು ಮತ್ತು ರೈತರು ದೆಹಲಿಗೆ ಮುತ್ತಿಗೆ ಹಾಕಿ ಎರಡು ಹಂತಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಹೋರಾಟ ನಡೆಸಿದ ರೈತರನ್ನು, ನೆರೆಯ ದೇಶದ ಗಡಿಯಲ್ಲಿ ಯುದ್ಧ ನಡೆಸುತ್ತಿರುವ ವಿದೇಶಿಯರ ಮೇಲೆ ದಾಳಿ ಮಾಡಿದಂತೆ, ದೆಹಲಿ ಗಡಿಯಲ್ಲಿ ಮೋದಿ ಸರ್ಕಾರವು ತನ್ನ ನಿಯಂತ್ರದಲ್ಲಿರುವ ದೆಹಲಿ ಪೊಲೀಸರು, ಅರೆಸೇನಾ ಪಡೆ ಮತ್ತು ಹರಿಯಾಣ ಬಿಜೆಪಿ ಸರ್ಕಾರದ ಪೊಲೀಸರ ಮೂಲಕ ರೈತರ ಮೇಲೆ ಮಾರಣಾಂತಿಕ ದಾಳಿ ನಡೆಸಿದೆ. ಮೋದಿ ಸರ್ಕಾರದ ದಾಳಿಗೆ ಎರಡು ಹಂತದ ಹೋರಾಟಗಳಲ್ಲಿ 800ಕ್ಕೂ ಹೆಚ್ಚು ರೈತರು ಪ್ರಾಣ ಕಳೆದುಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ, “ನಮ್ಮ ಮೇಲೆ ಹಲ್ಲೆ ನಡೆಸಿ, ನಮ್ಮ ಸಹಪಾಟಿಗಳನ್ನು ಕೊಂದು ಹಾಕಿದ್ದ ನೀವುಗಳು, ನಮ್ಮ ಊರಿಗೆ ಮತ ಕೇಳಲು ಏಕೆ ಬರುತ್ತಿದ್ದೀರಿ?” ಎಂದು ಪ್ರಶ್ನಿಸಿ, ಹರಿಯಾಣ ಮತ್ತು ಪಂಜಾಬ್ ನಲ್ಲಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಆಗಮಿಸುವ ಬಿಜೆಪಿ ಸದಸ್ಯರನ್ನು ರೈತರು ಓಡಿಸುತ್ತಿದ್ದಾರೆ. ಇದರಲ್ಲಿ ಹರಿಯಾಣ ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರಿಸ್ಥಿತಿ ತೀರಾ ಹೀನಾಯವಾಗಿದೆ.

ಸಿರ್ಸಾದಲ್ಲಿ ಅಶೋಕ್ ತನ್ವಾರ್, ಅಂಬಾಲಾದಲ್ಲಿ ಬಾಂಟೊ ಕಟಾರಿಯಾ, ಸೋನಿಪತ್‌ನಲ್ಲಿ ಮೋಹನ್ ಲಾಲ್ ಬಡೋಲಿ, ರೋಡಕ್‌ನಲ್ಲಿ ಅರವಿಂದ್ ಶರ್ಮಾ, ಮಹೇಂದ್ರ ಘಾಟ್‌ನಲ್ಲಿ ಧರಂಬೀರ್ ಸಿಂಗ್ ಮತ್ತು ಕುರುಕ್ಷೇತ್ರದಲ್ಲಿ ನವೀನ್ ಜಿಂದಾಲ್ ಅವರಂತಹ ಬಿಜೆಪಿ ಅಭ್ಯರ್ಥಿಗಳನ್ನು ರೈತರು ಒಟ್ಟಾಗಿ ಸೇರಿ ಓಡಿಸಿದ್ದರಿಂದ ಅವರು ತಮ್ಮ ಪ್ರಚಾರ ಮತ್ತು ರ‍್ಯಾಲಿಗಳನ್ನುರದ್ದುಗೊಳಿಸಿ ಮನೆ ಸೇರಿದ್ದಾರೆ.

ಮಾಜಿ ಮುಖ್ಯಮಂತ್ರಿ ಖಟ್ಟರ್
ಬಿಜೆಪಿಯ ಹಿರಿಯ ನಾಯಕ ಹಾಗೂ ಹರಿಯಾಣದ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಲೋಕಸಭೆ ಚುನಾವಣೆಯಲ್ಲಿ ಕರ್ನೂಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಅವರು ಪ್ರಚಾರ ಮಾಡಿದಲ್ಲೆಲ್ಲ ರೈತರು ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಮನೋಹರ್ ಲಾಲ್ ಖಟ್ಟರ್ ಪ್ರಚಾರ ಸಭೆಗಳನ್ನು ರದ್ದುಪಡಿಸಿ ಪಕ್ಷದ ಕಚೇರಿಗೆ ವಾಪಸ್ ತೆರಳಿದ್ದಾರೆ. ಕಳೆದ 4 ದಿನಗಳಿಂದ ಅವರು ತಲೆಮರೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಪ್ರಧಾನಿ ಮೋದಿ ಪ್ರಚಾರ ರದ್ದು
ಮೇ 18 ರಂದು ಹರಿಯಾಣದಲ್ಲಿ ಪ್ರಧಾನಿ ಮೋದಿ ಪ್ರಚಾರ ಆರಂಭಿಸಲಿದ್ದು, ಮೇ 25 ರಂದು 6ನೇ ಹಂತದಲ್ಲಿ ರಾಜ್ಯದ ಎಲ್ಲಾ 10 ಲೋಕಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಖಟ್ಟರ್ ಸೇರಿದಂತೆ ಬಿಜೆಪಿ ಅಭ್ಯರ್ಥಿಗಳನ್ನು ರೈತರು ಓಡಿಸುತ್ತಿರುವುದರಿಂದ ಪ್ರಧಾನಿ ಮೋದಿ ಅವರ ಪ್ರಚಾರ ಸಭೆಗಳು ನಡೆಯುವುದು ಖಚಿತವಾಗಿಲ್ಲ ಎಂದು ವರದಿಯಾಗಿದೆ.

“ಇಂಡಿಯಾ” ಮೈತ್ರಿಕೂಟ 7ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ
ಹರಿಯಾಣದಲ್ಲಿ ಮೋದಿ ಮತ್ತು ಬಿಜೆಪಿ ವಿರುದ್ಧ ರೈತರು ಮತ್ತು ಸಾರ್ವಜನಿಕರು ತೀವ್ರ ಅಸಮಾಧಾನ ಹೊಂದಿದ್ದಾರೆ. ಬಿಜೆಪಿಯು ಪ್ರಚಾರಕ್ಕೆ ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ, ‘ಝೀರೋ ಗ್ರೌಂಡ್’ ಮತ್ತು ‘ಲೋಕ್ ಪೋಲ್’ ಸೇರಿದಂತೆ ಮತಗಟ್ಟೆ ಸಮೀಕ್ಷಾ ಸಂಸ್ಥೆಗಳು ಬಿಡುಗಡೆ ಮಾಡಿರುವ ಸಮೀಕ್ಷೆಗಳಲ್ಲಿ, ಒಟ್ಟು 10 ಸ್ಥಾನಗಳ ಪೈಕಿ 7ಕ್ಕೂ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್-ಆಮ್ ಆದ್ಮಿ ಪಕ್ಷ ಒಳಗೊಂಡ “ಇಂಡಿಯಾ” ಮೈತ್ರಿಕೂಟ ಗೆಲ್ಲುವ ಸಾಧ್ಯತೆಯಿದೆ ಎಂದು ಬಹಿರಂಗಪಡಿಸಿದೆ. ಜೆಜೆಪಿ ಪಕ್ಷದ ಬೆಂಬಲವನ್ನು ಉಳಿಸಿಕೊಂಡರೆ ಹರಿಯಾಣದಲ್ಲಿ ಬಿಜೆಪಿ “ವೈಟ್‌ವಾಶ್” ಆಗಲಿದೆ ಎಂಬುದು ಗಮನಾರ್ಹ.

SOURCE: theekkathir.in

ರಾಜಕೀಯ

ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಮೂರನೇ ಅವಧಿಗೆ ಸ್ಪರ್ಧಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ಸಕ್ರಿಯವಾಗಿ ಪ್ರಚಾರ ನಡೆಸುತ್ತಿದ್ದಾರೆ.

ಇದೇ ವೇಳೆ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು, “ನಾನು ಎಂದಿಗೂ ಹಿಂದೂ-ಮುಸ್ಲಿಂ ವಿಭಜನೆಯನ್ನು ಸೃಷ್ಟಿಸುವುದಿಲ್ಲ. ಮೋದಿ ಮಾದರಿಯಲ್ಲಿ ಹಿಂದೂ-ಮುಸ್ಲಿಂ ವಿಭಜನೆಗೆ ಅವಕಾಶವಿಲ್ಲ. ನನ್ನ ಬಾಲ್ಯದಿಂದಲೂ ನಾನು ನನ್ನ ಮುಸ್ಲಿಂ ಸ್ನೇಹಿತರೊಂದಿಗೆ ಈದ್ ಅನ್ನು ನನ್ನ ಮನೆಯ ಸಮೀಪದಲ್ಲಿ ಆಚರಿಸಿದ್ದೇನೆ.

ನಾನು ಬಾಲ್ಯದಿಂದಲೂ ಮುಸ್ಲಿಂ ಕುಟುಂಬದೊಂದಿಗೆ ವಾಸಿಸುತ್ತಿದ್ದೇನೆ. 2002 ರಿಂದ ನನ್ನ ಹೆಸರನ್ನು ಹಾಳು ಮಾಡಿದ್ದಾರೆ.

ಹಿಂದೂಗಳಲ್ಲಿ ಕೂಡ ಹೆಚ್ಚು ಮಕ್ಕಳನ್ನು ಹೊಂದಿರುವವರು ಇದ್ದಾರೆ. ಮುಸ್ಲಿಮರು ನನಗೆ ಮತ ಹಾಕುತ್ತಾರೆ. ಹಿಂದೂ-ಮುಸ್ಲಿಂ ವಿಭಜನೆಗೆ ಕಾರಣವಾದರೆ ನಾನು ಸಾರ್ವಜನಿಕ ಜೀವನಕ್ಕೆ ಅನರ್ಹ” ಎಂದು ಹೇಳಿದ್ದಾರೆ.

ರಾಜಕೀಯ

ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಪ್ರಧಾನಿ ಮೋದಿ ಇಂದು (ಮೇ 14) ನಾಮಪತ್ರ ಸಲ್ಲಿಸಿದ್ದಾರೆ. ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ 3ನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ.

ಈ ಕ್ಷೇತ್ರಕ್ಕೆ ಜೂನ್ 1 ರಂದು 7ನೇ ಮತ್ತು ಅಂತಿಮ ಹಂತದ ಚುನಾವಣೆಯ ಸಮಯದಲ್ಲಿ ಮತದಾನ ನಡೆಯಲಿದೆ. ಇಂದು (ಮೇ 14) ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಇಂದು ಪ್ರಧಾನಿ ಮೋದಿ ಅವರು ನಾಮಪತ್ರ ಸಲ್ಲಿಸಲು ವಾರಣಾಸಿಗೆ ಆಗಮಿಸಿದ್ದರು. ಇದಕ್ಕೂ ಮುನ್ನ ಅವರು ಗಂಗಾನದಿ ದಡದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ನಂತರ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ವೇಳೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ಥಿತರಿದ್ದರು.