ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ರಘು Archives » Dynamic Leader
October 16, 2024
Home Posts tagged ರಘು
ರಾಜ್ಯ

ರಾಜ್ಯದಲ್ಲಿ ಈಗ ಸೌಹಾರ್ದತೆ ನೆಲೆಸಿದೆ; ಅದನ್ನು ಹಾಳು ಮಾಡುವವರು ಯಾರೇ ಆಗಲಿ, ಯಾವುದೇ ಸಮುದಾಯವಾಗಲಿ, ಅವರ ವಿರುದ್ಧ ಕ್ರಮಕೈಗೊಳ್ಳಲು ಹಿಂಜರಿಕೆ ಬೇಡ.

ಬೆಂಗಳೂರು: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಇತ್ತೀಚಿಗೆ ನಡೆದ ಸಂಘಟನೆಯ ಸಭೆಯೊಂದರಲ್ಲಿ ಮುಸ್ಲಿಮರ ವಿರುದ್ಧ ನಿಂದನಾತ್ಮಕ, ಅವಹೇಳನಕಾರಿಯಾಗಿ ಹಾಗೂ ಮುಸ್ಲಿಮರು ತರಕಾರಿ, ಮೀನು ಮಾರಾಟಕ್ಕೆ ಹಿಂದೂಗಳ ಮನೆಗೆ ಬಂದರೆ ಗುಂಡಿಕ್ಕಿ ಎಂಬ ಹೇಳಿಕೆ ನೀಡಿರುವ ಬಜರಂಗ ದಳದ ರಘು ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಮುಸ್ಲಿಮ್ ಯುನಿಟಿಯ ರಾಜ್ಯ ಕಾರ್ಯಾಧ್ಯಕ್ಷ ಶೇಕಬ್ಬ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, “ಮತೀಯ ದ್ವೇಷ ಮತ್ತು ಕೋಮು ಗಲಭೆಗೆ ಪ್ರಚೋದನೆ ನೀಡುವಂತಹ ಭಾಷಣ ಮಾಡಿ, ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಸೃಷ್ಟಿಯಾಗುವಂತಹ ಹೇಳಿಕೆಯನ್ನು ರಘು ನೀಡಿದ್ದಾರೆ. ಶಾಂತಿ ಕದಡುವ ಹೇಳಿಕೆಯಿಂದ ಸಹಬಾಳ್ವೆಗೆ ಧಕ್ಕೆ ಬರುವ ಕಾರಣ, ಸರ್ಕಾರ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಕೇಳಿಕೊಳ್ಳುತ್ತೇನೆ.

ರಾಜ್ಯದಲ್ಲಿ ಈಗ ಸೌಹಾರ್ದತೆ ನೆಲೆಸಿದೆ; ಅದನ್ನು ಹಾಳು ಮಾಡುವವರು ಯಾರೇ ಆಗಲಿ, ಯಾವುದೇ ಸಮುದಾಯವಾಗಲಿ, ಅವರ ವಿರುದ್ಧ ಕ್ರಮಕೈಗೊಳ್ಳಲು ಹಿಂಜರಿಕೆ ಬೇಡ” ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.