ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಶಿವಾಜಿ ಪ್ರತಿಮೆ Archives » Dynamic Leader
October 23, 2024
Home Posts tagged ಶಿವಾಜಿ ಪ್ರತಿಮೆ
ರಾಜಕೀಯ

ಮುಂಬೈ: ಭಾರೀ ಗಾಳಿಗೆ ಮರಾಠ ರಾಜ ಛತ್ರಪತಿ ಶಿವಾಜಿ ಅವರ 35 ಅಡಿ ಎತ್ತರದ ಪ್ರತಿಮೆ ಭಗ್ನಗೊಂಡಿರುವುದಕ್ಕೆ ಪ್ರಧಾನಿ ಮೋದಿ ತಲೆಬಾಗಿ ಕ್ಷಮೆಯಾಚಿಸಿದ್ದಾರೆ.

ಮಹಾರಾಷ್ಟ್ರಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ ಅವರು ಪಾಲ್ಘರ್ (Palghar) ಪ್ರದೇಶದಲ್ಲಿ 76 ಸಾವಿರ ಕೋಟಿ ರೂಪಾಯಿ ವೆಚ್ಚದ ವಧಾವನ್ ಬಂದರು (Vadhavan Port) ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಇದು ಭಾರತದ ಅತಿದೊಡ್ಡ ಆಳವಾದ ಸಮುದ್ರ ಬಂದರುಗಳಲ್ಲಿ ಒಂದಾಗಿದೆ.

ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, “ಭಾರತಮಾತೆಯ ಮಗ ಛತ್ರಪತಿ ಶಿವಾಜಿಯನ್ನು ಅವಮಾನಿಸುವ ಗುಂಪು ನಾವಲ್ಲ. ಶಿವಾಜಿ ನನಗೆ ದೇವರಿದ್ದಂತೆ. ಗಾಳಿ ಮಳೆಯಿಂದಾಗಿ ವಿಗ್ರಹಕ್ಕೆ ಹಾನಿಯುಂಟಾಗಿದ್ದಕ್ಕಾಗಿ ನನ್ನ ದೇವರಾದ ಶಿವಾಜಿಯ ಬಳಿ ತಲೆಬಾಗಿ ಕ್ಷಮೆಯಾಚಿಸುತ್ತೇನೆ.

ಈ ನೆಲದ ಮಗ ಸಾವರ್ಕರ್ ಅವರನ್ನು ಅವಮಾನಿಸಿದ ಕೆಲವರು (ಕಾಂಗ್ರೆಸ್) ಅದಕ್ಕೆ ಕ್ಷಮೆ ಕೇಳಲು ಸಿದ್ಧರಿಲ್ಲ. ಇಂದು ಭಾರತದ ಅಭಿವೃದ್ಧಿಗೆ ಮಹತ್ವದ ದಿನ. ಕಳೆದ 10 ವರ್ಷಗಳಾಗಲಿ ಅಥವಾ ಈಗ ನನ್ನ ಸರ್ಕಾರದ ಮೂರನೇ ಅವಧಿಯಲ್ಲಾಗಲಿ,  ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಮಹಾರಾಷ್ಟ್ರವು ಬೆಳವಣಿಗೆಗೆ ಬೇಕಾದ ಶಕ್ತಿ ಮತ್ತು ಸಂಪನ್ಮೂಲಗಳನ್ನು ಹೊಂದಿದೆ. ಇಂದು ರೂ.76 ಸಾವಿರ ಕೋಟಿ ಮೌಲ್ಯದ ವಧಾವನ್ ಬಂದರಿನ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇದು ದೇಶದ ಅತಿ ದೊಡ್ಡ ಆಳ ಸಮುದ್ರ ಬಂದರು ಆಗಲಿದೆ” ಎಂದು ಅವರು ಹೇಳಿದರು.

ಮಹಾರಾಷ್ಟ್ರದ ರಾಜ್ ಕೋಟ್ ಕೋಟೆಯಲ್ಲಿ ಕಳೆದ ವರ್ಷ ಡಿಸೆಂಬರ್ 4 ರಂದು ಪ್ರಧಾನಿ ಮೋದಿ ಉದ್ಘಾಟಿಸಿದ್ದ ಮರಾಠ ರಾಜ ಛತ್ರಪತಿ ಶಿವಾಜಿ ಅವರ 35 ಅಡಿ ಎತ್ತರದ ಪ್ರತಿಮೆ ಕೆಲ ದಿನಗಳ ಹಿಂದೆ ಕುಸಿದು ಬಿದ್ದಿತ್ತು.