ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Double Engine Government Archives » Dynamic Leader
October 17, 2024
Home Posts tagged Double Engine Government
ರಾಜಕೀಯ

“ಮಣಿಪುರ ಹೊತ್ತಿ ಉರಿಯುತ್ತಿದೆ! ಮಣಿಪುರದಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರವಿದೆ! ಪ್ರಧಾನಿ ಮತ್ತು ಗೃಹ ಸಚಿವರು ಕರ್ನಾಟಕದಲ್ಲಿ ರೋಡ್ ಷೋ ಮಾಡುತ್ತ ಬ್ಯುಸಿಯಾಗಿದ್ದಾರೆ”! ಎಂದು ಕರ್ನಾಟಕ ಕಾಂಗ್ರೆಸ್ ಪಕ್ಷವು ಸರಣಿ ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದೆ.

“ಎಲ್ಲಾ ಗಲಭೆಗಳು ನಡೆಯೋದು ಬಿಜೆಪಿ ಆಡಳಿತದಲ್ಲೇ ಏಕೆ? ಗುಜರಾತ್ ಗಲಭೆ: ಬಿಜೆಪಿ ಸರ್ಕಾರ, ತ್ರಿಪುರ ಗಲಭೆ: ಬಿಜೆಪಿ ಸರ್ಕಾರ, ಬೆಂಗಳೂರು ಗಲಭೆ: ಬಿಜೆಪಿ ಸರ್ಕಾರ, ದೆಹಲಿ ಗಲಭೆ: ಬಿಜೆಪಿ ಸರ್ಕಾರ, ಈಗ ಮಣಿಪುರ ಗಲಭೆ: ಬಿಜೆಪಿ ಸರ್ಕಾರ. ಬಿಜೆಪಿ ಆಡಳಿತದಲ್ಲಿ ಜನರಿಗೆ ತಮ್ಮ ಸ್ವಂತ ಮನೆಯೊಳಗೇ ರಕ್ಷಣೆ ಇಲ್ಲವಾದಾಗ ದೇಶದ ರಕ್ಷಣೆ ಸಾಧ್ಯವೇ?

ನಿಜವಾದ ಭಜರಂಗಿಗಳು (ಕ್ರೀಡಾಪಟುಗಳು) ದೆಹಲಿಯ ಜಂತರ್ ಮಂಥರ್‌ನಲ್ಲಿ ತಮಗಾದ ಶೋಷಣೆಯ ನೋವು ತಾಳದೆ ಪ್ರತಿಭಟಿಸುತ್ತಿದ್ದಾರೆ. ನರೇಂದ್ರ ಮೋದಿ ಅವರೇ, ಇಲ್ಲಿನ ನಕಲಿ ಭಜರಂಗಿಗಳ ಓಲೈಕೆ ಬಿಟ್ಟು ಅಸಲಿ ಭಜರಂಗಿಗಳ ನೋವು ಆಲಿಸಿ. ಅಲ್ಲೂ “ಬಜರಂಗಿ ಪುನಿಯಾ” ಎಂಬ ಹೆಸರಿನ ಕ್ರೀಡಾಪಟು ನೋವಿನಲ್ಲಿದ್ದಾರೆ. ನಿಮಗೆ ಆ ಅಸಲಿ ಬಜರಂಗಿಗಳ ಹಿತ ಬೇಡವೇ?

ಬಜರಂಗದಳ ಬಿಜೆಪಿಯ ಮುದ್ದಿನ ಕೂಸು ಎಂದಾದರೆ, ದಿನೇಶ್ ನಾಯ್ಕ ಎಂಬ ದಲಿತನ ಕೊಲೆಯ ಹೊಣೆಯನ್ನು ಬಿಜೆಪಿ ಹೊರಲಿ; ಮಂಗಳೂರಿನ ಪಬ್ ದಾಳಿಯ ಹೊಣೆಯನ್ನು ಬಿಜೆಪಿ ಹೊರಲಿ; ಸಮಾಜಘಾತುಕ ಕೃತ್ಯಗಳೆಲ್ಲದರ ಹೊಣೆಯನ್ನು ಬಿಜೆಪಿಯೇ ಹೊರಲಿ; ನಂತರ ಬಜರಂಗದಳವನ್ನು ಸಮರ್ಥಿಸಿಕೊಳ್ಳಲಿ.

ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುವ ಬಜರಂಗದಳ, PFI ಸೇರಿದಂತೆ ಯಾವುದೇ ಸಂಘಟನೆಯ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದರೆ ಉರಿದು ಬೀಳುವ ಬಿಜೆಪಿ ಸಂವಿಧಾನ ಬದಲಿಸುತ್ತೇವೆ ಎಂದವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆ? ನರೇಂದ್ರ ಮೋದಿ ಅವರೇ ಹಾಗೂ ಬಿಜೆಪಿಗೆ ಸಂವಿಧಾನ ಮುಖ್ಯವೇ, ಸಂವಿಧಾನ ವಿರೋಧಿ ಸಂಘಟನೆಗಳು ಮುಖ್ಯವೇ? ಸ್ಪಷ್ಟಪಡಿಸಿ ನಂತರ ಮಾತಾಡಲಿ.

ಬಜರಂಗದಳ ಬಿಜೆಪಿಯ ಅಂಗಸಂಘಟನೆಯೇ? ಇಷ್ಟೊಂದು ಮಮಕಾರ ತೋರುವ ಕರ್ನಾಟಕ ಬಿಜೆಪಿ, ಬಜರಂಗದಳದವರಿಗೆ ಎಷ್ಟು ಟಿಕೆಟ್ ನೀಡಿದೆ? ಹಿರಿಯರ ನಾಯಕತ್ವವನ್ನು ಮುಗಿಸಲು ಅವರ ಮಕ್ಕಳು, ಸೊಸೆಯಂದಿರು, ಪತ್ನಿಯರಿಗೆ ಟಿಕೆಟ್ ನೀಡುವ ಬದಲು ಬಜರಂಗದಳದವರಿಗೆ ಟಿಕೆಟ್ ನೀಡಿಲ್ಲವೇಕೆ? ಅಮಾಯಕ ಹುಡುಗರನ್ನು ಕಾನೂನು ವಿರೋಧಿ ಕೃತ್ಯಗಳಿಗೆ ಬಳಸಿ ಲಾಭ ಪಡೆಯುವುದು ಮಾತ್ರ ಬಿಜೆಪಿಯ ಕೆಲಸವೇ?

ಬಜರಂಗದಳ ಅತ್ಯತ್ತಮ ಸಂಘಟನೆಯಾಗಿದ್ದರೆ ಅಮಿತ್ ಶಾ ಅವರು ತಮ್ಮ ಮಗನನ್ನು BCCI ಹುದ್ದೆಯಿಂದ ಕಿತ್ತು ಬಜರಂಗದಳದ ರಾಷ್ಟ್ರಾಧ್ಯಕ್ಷನನ್ನಾಗಿ ನೇಮಿಸಲಿ. ಬೊಮ್ಮಾಯ್ ತಮ್ಮ ಮಗನ ಉದ್ಯಮವನ್ನು ಮುಚ್ಚಿಸಿ ರಾಜ್ಯಾಧ್ಯಕ್ಷನನ್ನಾಗಿ ಮಾಡಲಿ. ಬಿಜೆಪಿಗರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಡವರ, ದಲಿತ, ಹಿಂದುಳಿದವರ ಮಕ್ಕಳನ್ನು ಬಳಸಿ ಕೋರ್ಟು, ಕೇಸಿಗೆ ಅಲೆಯುವಂತೆ ಮಾಡುವುದನ್ನು ಬಿಡಲಿ.

ಬಜರಂಗದಳ ಬಗ್ಗೆ ಭಯಂಕರವಾಗಿ ಮಾತನಾಡುವ ಕರ್ನಾಟಕ ಬಿಜೆಪಿ ನಾಯಕರು ಉತ್ತರಿಸಲಿ. ಸಿ.ಟಿ.ರವಿ ಮಕ್ಕಳು, ಬಜರಂಗದಳದ ಯಾವ ಹುದ್ದೆಯಲ್ಲಿದ್ದಾರೆ? ಆರ್.ಅಶೋಕ್ ಮಗ ಬಜರಂಗದಳಲ್ಲಿ ಏನು ಕೆಲಸ ಮಾಡುತ್ತಿದ್ದಾರೆ? ತೇಜಶ್ವಿ ಸೂರ್ಯ ಏಕೆ ಬಜರಂಗದಳ ಸೇರಿಲ್ಲ? ಬೊಮ್ಮಾಯ್ ಮಗ ಬಜರಂಗದಳ ಸೇರಿ ಬೆಂಕಿ ಹಚ್ಚುವುದನ್ನು ಬಿಟ್ಟು ಉದ್ಯಮಿಯಾಗಿದ್ದೇಕೆ”? ಎಂದು ಕರ್ನಾಟಕ ಕಾಂಗ್ರೆಸ್ ಪಕ್ಷವು ಸರಣಿ ಟ್ವೀಟ್ ಮಾಡಿ ಬಿಜೆಪಿಯ ವಿರುದ್ಧ ಕೆಂಡ ಕಾರಿದೆ.

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಬಿಜೆಪಿಯವರು ಪದೇ ಪದೇ ‘ಡಬಲ್ ಎಂಜಿನ್ ಸರ್ಕಾರ; ಡಬಲ್ ಎಂಜಿನ್ ಸರ್ಕಾರ’ ಎಂದು ಹೇಳುತ್ತಿರುವುದನ್ನು ನಾವೆಲ್ಲರು ಕೇಳಿದ್ದೇವೆ. “ಕೇಂದ್ರದಲ್ಲೂ ಬಿಜೆಪಿ ಸರ್ಕಾರವಿದೆ; ರಾಜ್ಯದಲ್ಲೂ ಬಿಜೆಪಿ ಸರ್ಕಾರವಿದೆ; ಅದರಿಂದ ರಾಜ್ಯದ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಆದ್ದರಿಂದ ‘ಡಬಲ್ ಎಂಜಿನ್ ಸರ್ಕಾರ’ ಮುಂದುವರಿಯಲು ಬಿಜೆಪಿಯನ್ನು ಬೆಂಬಲಿಸಿ” ಎಂದು ಅದರ ನಾಯಕರು ಹೇಳುತ್ತೀದ್ದಾರೆ.

ಉದಾಹರಣೆಗೆ: ನೀವೆ ಹೇಳಿ, ಜೋಡೆತ್ತಿನ ಬಂಡಿಯಲ್ಲಿ ಎರಡು ಎತ್ತುಗಳು ಸಮಾನವಾದ ತೂಕದಲ್ಲಿರಬೇಕು. ಒಂದು ಗಟ್ಟಿಯಾಗಿ ಮತ್ತೊಂದು ಸಡಿಲವಾಗಿದ್ದರೆ ಅಥವಾ ಒಂದು ಎತ್ತು ಎತ್ತರಕ್ಕೆ ಮತ್ತೊಂದು ಕುಳ್ಳಗೆ ಇದ್ದರೆ ಬಂಡಿ ಓಡುತ್ತೆ? ಕೇಂದ್ರ ಸರ್ಕಾರದ ಎಂಜಿನ್ ಬೇರೆ; ರಾಜ್ಯ ಸರ್ಕಾರಗಳ ಎಂಜಿನೇ ಬೇರೆ. ಕೇಂದ್ರಾಡಳಿತ ಪ್ರದೇಶಗಳ ಎಂಜಿನ್‌ಗಳು ಇದಕ್ಕಿಂತ ಬಿನ್ನವಾದದ್ದು. ಕೇಂದ್ರ ಸರ್ಕಾರದ ಎಂಜಿನ್ 500 ಸಿಸಿ ಆದರೆ, ರಾಜ್ಯ ಸರ್ಕಾರಗಳ ಇಂಜಿನ್ 200 ಸಿಸಿ. ಕೇಂದ್ರಾಡಳಿತ ಪ್ರದೇಶಗಳ ಎಂಜಿನ್ ಬರೀ 100 ಸಿಸಿ ಮಾತ್ರ. ಎಲ್ಲವೂ ಗಾಡಿಗಳೇ ಎಲ್ಲಾ ಗಾಡಿಗಳಿಗೂ ಎಂಜಿನ್ ಇದೆ. ಆದರೆ ಒಂದಕ್ಕೊಂದು ಹೊಲಿಕೆಯಾಗುವುದಿಲ್ಲ. ಅದರದ್ದೇ ಆದ ವಿಶೇಷತೆಗಳು ಇರುತ್ತದೆ. ಒಂದು ಗಾಡಿ ರಿಪೇರಿ ಆದಾಗ, ಮತ್ತೊಂದು ಗಾಡಿಯಿಂದ ಅದನ್ನು ಎಳೆದುಕೊಂಡು ಅಥವಾ ತಳ್ಳಿಕೊಂಡು ಹೋಗಿ ನಿರ್ದಿಷ್ಟವಾದ ಜಾಗಕ್ಕೆ ಸೇರಿಸಬಹುದು. ಆದರೆ ವಿಭಿನ್ನವಾದ ಎರಡು ಗಾಡಿಗಳನ್ನು ಒಂದಾಗಿ ಜೋಡಿಸಿ, ಅದರ ಮೇಲೆ ಕೇಂದ್ರವು ಸವಾರಿ ಮಾಡುತ್ತದೆ ಎಂದರೆ ಅದು ಸಾದ್ಯವಿಲ್ಲ. ಅದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ; ಪ್ರಜಾಪ್ರಭುತ್ವ ಅದನ್ನು ಒಪ್ಪುವುದೂ ಇಲ್ಲ.

ನೆನೆಪಿರಲಿ: ಬಿಜೆಪಿಯ ‘ಒಂದು ದೇಶ ಒಂದೇ ಧರ್ಮ’, ‘ಒಂದು ದೇಶ ಒಂದೇ ಭಾಷೆ’, ಒಂದು ದೇಶ ಒಂದೇ ಚುನಾವಣೆ’ ಮಾದರಿಯಲ್ಲಿ ‘ಒಂದು ದೇಶ ಒಂದೇ ಪಕ್ಷ’ ವೆಂಬ ರಾಜಕೀಯ ಘೋಷನೆಗೆ ಮತ್ತೊಂದು ಅಡ್ಡ ಹೆಸರೇ ‘ಡಬಲ್ ಎಂಜಿನ್ ಸರ್ಕಾರ’. ಈ ಡಬಲ್ ಎಂಜಿನ್ ಸರ್ಕಾರದ ಅಂತಿಮ ಗುರಿಯೇ ಏಕ ನಾಯಕತ್ವದ ಹಿಂದೂ ಬಿಜೆಪಿ ಸರ್ವಾಧಿಕಾರ ಆಡಳಿತ. ಅದರ ಉದ್ದೇಶ ಅಖಂಡ ಭಾರತವೆಂಬ ಹಿಂದೂ ರಾಷ್ಟ್ರ. ಭಾರತವು ಅನೇಕ ರಾಜ್ಯಗಳ ರಾಷ್ಟ್ರವಾಗಿದೆ. ಒಂದು ದೇಶ, ಒಂದು ಭಾಷೆ, ಒಂದು ಧರ್ಮ ಎಂಬ ತತ್ವವನ್ನು ತರಲು ಇಲ್ಲಿ ಸಾಧ್ಯವಿಲ್ಲ. 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳು ಹಾಗೂ ವೈವಿಧ್ಯಮಯ ಸಾಮಾಜಿಕ ಸಂಸ್ಕೃತಿಗಳನ್ನು ಹೊಂದಿರುವ ಭಾರತದಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಫೆಡರಲ್ ರಚನೆಯ ಆಧಾರದ ಮೇಲೆ ರಾಷ್ಟ್ರೀಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಕೊಡುಗೆ ನೀಡಬೇಕು. ಅದನ್ನು ಬಿಟ್ಟು, ಡಬಲ್ ಎಂಜಿನ್ ಸರ್ಕಾರದ ಹೆಸರಿನಲ್ಲಿ ಒಂದು ದೇಶ ಒಂದೇ ಪಕ್ಷವನ್ನು ಜಾರಿಗೊಳಿಸಲು ಮುದಾಗುವುದು ಸಮಯ ವ್ಯರ್ಥ. “ರಾಜ್ಯದಲ್ಲಿ ಸ್ವಾಯತ್ತ ಸರ್ಕಾರ ಕೇಂದ್ರದಲ್ಲಿ ಸಂಯುಕ್ತ ಸರ್ಕಾರ” ಎಂಬುದೇ ನಮ್ಮ ಘೋಷಣೆಯಾಗಬೇಕು; ಅದುವೇ ನಮಗೆ ಶ್ರೀರಕ್ಷೆ.

ಡಬಲ್ ಎಂಜಿನ್ ಸರ್ಕಾರಕ್ಕೆ ಮತ್ತೊಂದು ಅರ್ಥವಿದೆ: ಕೇಂದ್ರದಲ್ಲೂ ರಾಜ್ಯದಲ್ಲೂ ಒಂದೇ ಸರ್ಕಾರ ಇದ್ದರೆ ಅದಕ್ಕೆ ಡಬಲ್ ಎಂಜಿನ್ ಸರ್ಕಾರ ಎಂದು ಕರೆಯಾಲಾಗುತ್ತದೆ. ಆದರೆ, ಅದಕ್ಕೆ ಮತ್ತೊಂದು ಅರ್ಥವಿದೆ. ಸಾಮಾನ್ಯವಾಗಿ ದೇವಾಲಯಗಳಲ್ಲಿ ಎರಡು ವಿಧದ ಮೂರ್ತಿಗಳು ಇರುತ್ತವೆ. ಒಂದು ‘ಮೂಲವರ್ ಮೂರ್ತಿ’ ಎಂದರೆ, ಗರ್ಭ ಗೃಹದಲ್ಲಿ ಯಾವಾಗಲೂ ಇರುವ ವಿಗ್ರಹ. ಮತ್ತು ‘ಉತ್ಸವ ಮೂರ್ತಿ’ ಎಂದರೆ, ಉತ್ಸವಗಳಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯುವ ವಿಗ್ರಹ. ಗರ್ಭ ಗೃಹದಲ್ಲೇ ಇರುವ ‘ಮೂಲವರ್ ಮೂರ್ತಿ’ ಗೃಹ ಸಚಿವ ಅಮಿತ್ ಶಾ ಅವರು ದೇಶವನ್ನು ಬಿಟ್ಟು ಎಲ್ಲೂ ಹೋಗದೆ, 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಕಾರ್ಯವೈಕರಿಯನ್ನು ನೋಡಿಕೊಂಡು, ಪಕ್ಷ ಬಲವರ್ಧನೆಗಾಗಿ ಮತ್ತು ಶತ್ರುಗಳನ್ನು ಹಾಗೂ ವಿರೋಧ ಪಕ್ಷಗಳ ನಾಯಕರುಗಳನ್ನು ಮಟ್ಟ ಹಾಕುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಸದಾ ಪ್ರವಾಸ ಮತ್ತು ಉತ್ಸವಗಳಲ್ಲೇ ಇರುವ ‘ಉತ್ಸವ ಮೂರ್ತಿ’ ಪ್ರಧಾನಿ ನರೇಂದ್ರ ಮೋದಿಯವರು, ದೇಶ, ವಿದೇಶ ಪ್ರವಾಸ, ಅಂತಾರಾಷ್ಟ್ರೀಯ ನಾಯಕರುಗಳ ಭೇಟಿ ಮತ್ತು ಮಾತುಕತೆ, ವರ್ಚುವಲ್ ಮೀಟಿಂಗ್, ಚುನಾವಣೆ ಪ್ರಚಾರ, ಉದ್ಘಾಟನೆ, ರೋಡ್ ಶೋ ಹಾಗೂ ಫೋಟೋ ಸೆಷನ್‌ಗಳಲ್ಲಿಯೇ ಬಿಸಿಯಾಗಿದ್ದಾರೆ. ಒಬ್ಬರು ಪಿಎಂ ಮತ್ತೊಬ್ಬರು ಸೂಪರ್ ಪಿಎಂ. ಒಬ್ಬರು ಪ್ರಜಾಪ್ರಭುತ್ವವಾದಿ  ಮತ್ತೊಬ್ಬರು ಸರ್ವಾಧಿಕಾರಿ. ಇವರಿಬ್ಬರೇ ಕೇಂದ್ರ ಸರ್ಕಾರದ ಡಬಲ್ ಎಂಜಿನ್. ಕೇಂದ್ರ ಸರ್ಕಾರವೇ ಡಬಲ್ ಎಂಜಿನ್ ಸರ್ಕಾರ.