ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Kashmir Files Archives » Dynamic Leader
October 20, 2024
Home Posts tagged Kashmir Files
ಸಿನಿಮಾ

ತಮಿಳಿನಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದ ಜೈ ಭೀಮ್ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ನೀಡದಿರುವ ಬಗ್ಗೆ ಟೀಕೆಗಳ ಮಹಾಪೂರವೇ ಹರಿದು ಬರುತ್ತಿದೆ. ಕೇಂದ್ರ ಸರ್ಕಾರವು 2021ರಲ್ಲಿ ಬಿಡುಗಡೆಯಾದ ಚಲನಚಿತ್ರಗಳಿಗೆ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಿತು. ಬಿಡುಗಡೆ ಆದಾಗ ದೇಶಾದ್ಯಂತ ಭಾರೀ ವಿವಾದ ಸೃಷ್ಟಿಸಿದ್ದ ಕಾಶ್ಮೀರ ಪೈಲ್ಸ್ ಚಿತ್ರಕ್ಕೆ ರಾಷ್ಟ್ರೀಯ ಏಕತಾ ಪ್ರಶಸ್ತಿ ಘೋಷಿಸಲಾಗಿದೆ. ಇದು ವಿವಿಧ ವಲಯಗಳಿಂದ ಟೀಕೆಗೆ ಗುರಿಯಾಗಿದೆ.

ಬಿಜೆಪಿಯಿಂದ ಭಾರೀ ಬೆಂಬಲ ಪಡೆದ ಕಾಶ್ಮೀರ ಫೈಲ್ಸ್‌ಗೆ ಪ್ರಶಸ್ತಿ ಪ್ರದಾನ ಮಾಡಿರುವುದರಲ್ಲಿ ಅಚ್ಚರಿ ಏನೂ ಇಲ್ಲ ಎಂಬ ಅಭಿಪ್ರಾಯಗಳಿವೆ. ಅದೇ ಸಮಯದಲ್ಲಿ, ವಿಮರ್ಶಾತ್ಮಕವಾಗಿ ಮತ್ತು ಆರ್ಥಿಕವಾಗಿ ದೊಡ್ಡ ಯಶಸ್ಸನ್ನು ಗಳಿಸಿದ್ದ ಜ್ಞಾನವೇಲ್ ನಿರ್ದೇಶನದ ಮತ್ತು ಸೂರ್ಯ ನಟಿಸಿದ ತಮಿಳು ಚಲನಚಿತ್ರ ಜೈ ಭೀಮ್‌ಗೆ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡದೆ ಇರುವುದನ್ನು ಟೀಕಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ ಪ್ರಕಾಶ್ ರಾಜ್, “ಗಾಂಧಿಯನ್ನು ಕೊಂದವರು, ಭಾರತದ ಸಂವಿಧಾನ ನೀಡಿದ ಅಂಬೇಡ್ಕರ್ ಅವರ ಸಮಾನತೆಯ ತತ್ವವನ್ನು ಕೊಲ್ಲಲು ಪ್ರಯತ್ನಿಸುವವರು ಜೈ ಭೀಮ್ ಚಿತ್ರಕ್ಕೆ ಹೇಗೆ ಪ್ರಶಸ್ತಿ ನೀಡುತ್ತಾರೆ” ಎಂದು ಪ್ರಶ್ನಿಸಿದ್ದಾರೆ.

ದೇಶ ರಾಜಕೀಯ ಸಿನಿಮಾ

ಕೇರಳ: ಪಠಾಣ್ ಚಿತ್ರ ರೂ.700 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿರುವುದನ್ನು ಎತ್ತಿ ತೋರಿಸಿರುವ ಪ್ರಕಾಶ್ ರಾಜ್, ಚಿತ್ರವನ್ನು ಬ್ಯಾನ್ ಮಾಡಬೇಕು ಎಂದು ಹೇಳಿದವರನ್ನು ತೀವ್ರವಾಗಿ ಟೀಕಿಸಿದ್ದಾರೆ.

ನಟ ಪ್ರಕಾಶ್ ರಾಜ್ ಹಲವು ವರ್ಷಗಳಿಂದ ಕೇಂದ್ರ ಸರ್ಕಾರವನ್ನು ಟೀಕಿಸುತ್ತಲೇ ಬಂದಿದ್ದಾರೆ. ಈ ಕಾರಣಕ್ಕಾಗಿ, ಅವರು #JustAsking ಎಂಬ ಹ್ಯಾಶ್‌ಟ್ಯಾಗ್ ಅನ್ನು ರಚಿಸಿಕೊಂಡು ಹಲವಾರು ಟೀಕೆಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ. ಬಾಲಿವುಡ್‌ನ ಬಾದ್‌ಶಾ ಎಂದು ಕರೆಯಲ್ಪಡುವ ಶಾರುಖ್ ಖಾನ್ ಅಭಿನಯದ `ಝೀರೋ’ ಚಿತ್ರವು 2018 ರಲ್ಲಿ ಬಿಡುಗಡೆಯಾಗಿತ್ತು. ಆ ನಂತರ ಚಿತ್ರಗಳು ಬಿಡುಗಡೆಯಾಗಿರಲಿಲ್ಲ. ಸುಮಾರು 3 ವರ್ಷಗಳ ನಂತರ ಅವರು ನಾಯಕನಾಗಿ ನಟಿಸಿರುವ ಪಠಾಣ್ ಚಿತ್ರವು ಬಿಡುಗಡೆಯಾಗಿ ಕಲೆಕ್ಷನ್ ಹಿಟ್ ಹೊಡೆಯುತ್ತಿದೆ.

ಮೊದಲು, ಚಿತ್ರದ ‘ಬೇಷರಂ ರಂಗ್’ ಹಾಡು ಬಿಡುಗಡೆಯಾಗಿತ್ತು. ಇದು ಅಭಿಮಾನಿಗಳನ್ನು ತುಂಬಾ ಪ್ರಭಾವಿಸಿತು. ಅದರೊಂದಿಗೆ ವಿವಾದವನ್ನೂ ಸೃಷ್ಟಿಸಿತು. ‘ದೀಪಿಕಾ ಪಡುಕೋಣೆ ಕೇಸರಿ ಬಿಕಿನಿಯಲ್ಲಿ ತೋರಿಸಿರುವುದು ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸಿದೆ’ ಎಂದು ಆರೋಪಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆದವು. ಹಾಡು ಸಾಂಸ್ಕೃತಿಕವಾಗಿ ಆಕ್ಷೇಪಾರ್ಹವಾಗಿರುವುದರಿಂದ ಚಿತ್ರವನ್ನು ಬ್ಯಾನ್ ಮಾಡುವಂತೆ ‘boycott pathaan’ ಎಂಬ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡ್ ಆಯಿತು. ಅದರಲ್ಲೂ ‘ದೀಪಿಕಾ ಕೇಸರಿ ಬಣ್ಣದ ಬಿಕಿನಿ ಯಾಕೆ ತೊಟ್ಟರು’? ಎಂಬ ವಿವಾದವನ್ನು ಸೃಷ್ಟಿಸಲಾಯಿತು.

ಇದೇ ವೇಳೆ ಪಠಾಣ್ ಹಾಡಿನ ವಿರುದ್ಧದ ಕಾಮೆಂಟ್‌ಗಳನ್ನು ಪ್ರಕಾಶ್‌ರಾಜ್ ಖಂಡಿಸಿದರು. ಸಚಿವ ನರೋತ್ತಮ್ ಅವರ ಸಂದೇಶವನ್ನು ಹಂಚಿಕೊಂಡ ಪ್ರಕಾಶ್ ರಾಜ್, ‘ಇದು ಅಸಹ್ಯಕರವಾಗಿದೆ. ಈ ರೀತಿಯ ಬಣ್ಣ ಕುರುಡುತನವನ್ನು ಎಷ್ಟು ದಿನ ಸಹಿಸಿಕೊಳ್ಳಬೇಕು’ ಎಂದು ಪ್ರಶ್ನಿಸಿದ್ದರು.

ಅದೇ ರೀತಿ ಫುಟ್ಬಾಲ್ ವಿಶ್ವಕಪ್‌ನೊಂದಿಗೆ ದೀಪಿಕಾ ಪಡುಕೋಣೆ ಇರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಹಾಕಿದ ನಟ ಪ್ರಕಾಶ್ ರಾಜ್, ‘ದೀಪಿಕಾ ಪಡುಕೋಣೆ ಬಗ್ಗೆ ನನಗೆ ಹೆಮ್ಮೆಯಿದೆ’ ಎಂದು ಕೇಳಿದ್ದರು. ಮತ್ತು ‘ಬೇಷರಂ ರಂಗ್’ ಹಾಡನ್ನು ಪ್ರತಿಭಟಿಸಿದ ಮತಾಂಧರು ಈಗ ವಿಶ್ವಕಪ್ ಅನ್ನು ಬಹಿಷ್ಕರಿಸುತ್ತಾರೆಯೇ ಎಂದೂ ಕೇಳಿದ್ದರು.

ಈ ಹಿನ್ನಲೆಯಲ್ಲಿ ಇದೀಗ ಮತ್ತೊಮ್ಮೆ ಪ್ರಶ್ನೆಯನ್ನು ಎತ್ತಿದ್ದಾರೆ ನಟ ಪ್ರಕಾಶ್ ರಾಜ್. ಪಠಾಣ್ ಚಿತ್ರ ರೂ.700 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿರುವುದನ್ನು ಎತ್ತಿ ತೋರಿಸಿರುವ ಅವರು ‘ಪಠಾಣ್ ಚಿತ್ರ ರೂ.700 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಆದರೆ ಈ ಚಿತ್ರವನ್ನು ವಿರೋಧಿಸಿದವರು ನರೇಂದ್ರ ಮೋದಿ ಚಿತ್ರಕ್ಕೆ 30 ಕೋಟಿ ಕೂಡ ಕಲೆಕ್ಷನ್ ಮಾಡಲು ಸಾಧ್ಯವಾಗಿಲ್ಲ.

ಇದಕ್ಕೆ ಮೊದಲು ಕಾಶ್ಮೀರ ಫೈಲ್ಸ್ ಎಂಬ ಪ್ರಚಾರ ಸಿನಿಮಾ ಮಾಡಿದರು. ಈ ಚಿತ್ರವನ್ನು ನೋಡಿದ ಅಂತರಾಷ್ಟ್ರೀಯ ಕಲಾವಿದರು ಉಗುಳಿ ಹೋಗಿದ್ದಾರೆ. ಆದರೂ ಇವರಿಗೆ ಬುದ್ದಿ ಬಂದಂತೆ ಕಾಣುತ್ತಿಲ್ಲ. ‘ಕಾಶ್ಮೀರ್ ಫೈಲ್ಸ್’ ಅನ್ನು ನಿರ್ದೇಶಿಸಿದ ವಿವೇಕ್ ಅಗ್ನಿಹೋತ್ರಿ ಈ ಚಿತ್ರಕ್ಕೆ ಏಕೆ ಆಸ್ಕರ್ ನೀಡಲಿಲ್ಲ? ಎಂದು ಕೊರಗುತ್ತಿರುವುದು ವಿಚಿತ್ರವಾಗಿದೆ. ಈ ಸಿನಿಮಾಗೆ ಆಸ್ಕರ್ ಇಲ್ಲ; ಭಾಸ್ಕರ್ ಕೂಡ ಸಿಗುವುದಿಲ್ಲ’. ಎಂದು ಪ್ರಕಾಶ್ ರಾಜ್ ಹೇಳಿದಾರೆ.