ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ದಮನಕಾರಿ ಜೀವನಶೈಲಿ Archives » Dynamic Leader
October 23, 2024
Home Posts tagged ದಮನಕಾರಿ ಜೀವನಶೈಲಿ
ದೇಶ

ಕೇಂದ್ರ ಸರ್ಕಾರಿ ನೌಕರರ ಮೇಲೆ ವಿಧಿಸಲಾದ ನಿಷೇಧದಿಂದ ವಿನಾಯಿತಿ ಪಡೆದ ನಂತರ, ರಾಜಸ್ಥಾನದಲ್ಲಿ ಆರ್‌ಎಸ್‌ಎಸ್  (RSS) ಮೇಲಿನ ನಿಷೇಧಕ್ಕೂ ವಿನಾಯಿತಿ ನೀಡಲಾಗಿದೆ!

ಧಾರ್ಮಿಕ ರಾಜಕೀಯ ಮತ್ತು ತಾರತಮ್ಯ ರಾಜಕಾರಣವನ್ನು ಉತ್ತೇಜಿಸುವ ಆರ್‌ಎಸ್‌ಎಸ್ – ಬಿಜೆಪಿಯ ಪ್ರಾಬಲ್ಯವು ಸರ್ಕಾರಿ ಉದ್ಯೋಗಗಳಿಗೂ ವಿಸ್ತರಿಸಲು ಪ್ರಾರಂಭಿಸಿದೆ.

40 ವರ್ಷಗಳ ಹಿಂದೆ, ಭಾರತೀಯ ಸರ್ಕಾರಿ ನೌಕರರು ಮತ್ತು ರಾಜ್ಯ ಸರ್ಕಾರಿ ನೌಕರರು ಆರ್‌ಎಸ್‌ಎಸ್ ಸಂಘಟನೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ಆಗಿನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಷೇಧಿಸಿದ್ದವು.

ಕಾರಣ, ನಿರ್ದಿಷ್ಟ ದಮನಕಾರಿ ಜೀವನಶೈಲಿಯನ್ನು ಜಾರಿಗೆ ತರುವುದು ಆರ್‌ಎಸ್‌ಎಸ್‌ನ ಮೂಲ ಸಿದ್ಧಾಂತವಾಗಿದ್ದು, ಸಾವಿರಾರು ವರ್ಷಗಳ ಹಿಂದೆ ಹುಟ್ಟಿನಿಂದಲೇ ಮನುಷ್ಯನನ್ನು ಪ್ರತ್ಯೇಕಗೊಳಿಸಿದ್ದು ಕೂಡಾ ಆ ವಿಚಾರಧಾರೆಯೆ ಆಗಿತ್ತು. ಹಾಗಾಗಿ, ನಾಗರಿಕ ಸೇವಕರು ಹುಟ್ಟಿನಿಂದ ಪ್ರತ್ಯೇಕತೆಯ ಸಿದ್ಧಾಂತವನ್ನು ಅನುಸರಿಸಿದರೆ, ಅವರು ಎಲ್ಲಾ ಜನರಿಗೆ ಸಮಾನ ಸೇವೆಗಳನ್ನು ನೀಡಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ನಿಷೇಧಿಸಲಾಗಿತ್ತು.

ಆದಾಗ್ಯೂ, ದಬ್ಬಾಳಿಕೆಯ ಜೀವನಶೈಲಿಯನ್ನು ಕಾರ್ಯರೂಪಕ್ಕೆ ತರಲೇಬೇಕು ಎಂಬ ಉದ್ದೇಶದಿಂದ ಆಡಳಿತದ ಚುಕಾಣಿಯನ್ನು ಹಿಡಿದಿರುವ ಬಿಜೆಪಿ, ಅದನ್ನು ಕಾರ್ಯರೂಪಕ್ಕೆ ತರಲು ಕಾರ್ಯನಿರ್ವಹಿಸುತ್ತಿದೆ. ಅದು ರಾಜ್ಯ ಸರ್ಕಾರವೇ ಇರಲಿ ಅಥವಾ ಕೇಂದ್ರ ಸರ್ಕಾರವೇ ಇರಲಿ, ಅದನ್ನು ಸಾಬೀತುಪಡಿಸಲು, ಕಳೆದ ತಿಂಗಳು ಕೇಂದ್ರ ಬಿಜೆಪಿ ಸರ್ಕಾರವು ಕೇಂದ್ರ ಸರ್ಕಾರಿ ನೌಕರರು ಆರ್‌ಎಸ್‌ಎಸ್ ಸಂಘಟನೆಗೆ ಸೇರುವ ನಿಷೇಧವನ್ನು ತೆಗೆದುಹಾಕಿತು.

ಅದರ ಮುಂದುವರಿದ ಭಾಗವಾಗಿ, ರಾಜಸ್ಥಾನ ಬಿಜೆಪಿ ಸರ್ಕಾರವು, ರಾಜ್ಯ ಸರ್ಕಾರಿ ನೌಕರರು ಆರ್‌ಎಸ್‌ಎಸ್‌ಗೆ ಸೇರ್ಪಡೆಗೊಳ್ಳಲು ರಾಜ್ಯ ಸರ್ಕಾರಿ ನೌಕರರ ಮೇಲೆ ಹೇರಿದ್ದ ನಿಷೇಧವನ್ನು ತೆರವುಗೊಳಿಸಿದೆ. ಈಗಾಗಲೇ, ಬಿಜೆಪಿ ಆಡಳಿತವಿರುವ ರಾಜ್ಯಗಳಾದ ಹರಿಯಾಣ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಆರ್‌ಎಸ್‌ಎಸ್ ಮೇಲೆ ಹೇರಲಾಗಿದ್ದ ನಿಷೇಧವನ್ನು ತೆಗೆದುಹಾಕಿರುವುದು ಗಮನಾರ್ಹ.