ಸ್ಪೇನ್ ಪ್ರತಿನಿಧಿಗಳೊಂದಿಗಿನ ಚರ್ಚೆಯಲ್ಲಿ, ಡಿಎಂಕೆ ಸಂಸದೆ ಕನಿಮೋಳಿ ಭಾರತದ ರಾಷ್ಟ್ರೀಯ ಭಾಷೆ ಯಾವುದು ಎಂಬುದರ ಕುರಿತು ಮಾತನಾಡಿದರು.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿಯಲ್ಲಿ ಸ್ಥಳೀಯ ಹಮಾಲಿ ಸೇರಿದಂತೆ 26 ಜನರು ಸಾವನ್ನಪ್ಪಿದರು. ಇದಕ್ಕೆ ಪಾಕಿಸ್ತಾನವೇ ಕಾರಣ ಎಂದು ಭಾರತ ಹೇಳಿತು. ಇದರ ನಂತರ, ಮೇ 7 ರಂದು ಭಾರತವು ಪಾಕಿಸ್ತಾನದೊಳಗಿನ ಹಲವಾರು ಸ್ಥಳಗಳಲ್ಲಿ ವೈಮಾನಿಕ ದಾಳಿ ನಡೆಸಿತು.
ಇದರ ಬೆನ್ನಲ್ಲೇ, ಪಾಕಿಸ್ತಾನದಲ್ಲಿ ವಾಯುದಾಳಿಗಳು ಮತ್ತು ಭಯೋತ್ಪಾದನೆಯ ಬಗ್ಗೆ ಭಾರತದ ನಿಲುವನ್ನು ಜಗತ್ತಿಗೆ ವಿವರಿಸಲು ಭಾರತವನ್ನು ಪ್ರತಿನಿಧಿಸುವ ಸಂಸದರ ನಿಯೋಗವು ವಿವಿಧ ದೇಶಗಳಿಗೆ ಪ್ರಯಾಣ ಬೆಳೆಸಿದೆ.
ಅದರ ಭಾಗವಾಗಿ, ಡಿಎಂಕೆ ಸಂಸದೆ ಕನಿಮೋಳಿ ಸೇರಿದಂತೆ ಭಾರತೀಯ ಪ್ರತಿನಿಧಿಗಳು ಸ್ಪೇನ್ಗೆ ಹೋಗಿದ್ದಾರೆ. ಸ್ಪೇನ್ ಪ್ರತಿನಿಧಿಗಳು ರಾಜಧಾನಿ ಮ್ಯಾಡ್ರಿಡ್ನಲ್ಲಿ ಭಾರತೀಯ ನಿಯೋಗದೊಂದಿಗೆ ಮಾತುಕತೆ ನಡೆಸಿದರು.
ಆ ಸಮಯದಲ್ಲಿ, ಅವರನ್ನು ಭಾರತದ ರಾಷ್ಟ್ರೀಯ ಭಾಷೆ ಯಾವುದು ಎಂದು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಕನಿಮೋಳಿ, “ಭಾರತದ ರಾಷ್ಟ್ರೀಯ ಭಾಷೆ ವೈವಿಧ್ಯತೆಯಲ್ಲಿ ಏಕತೆ” ಎಂದು ಉತ್ತರಿಸಿದರು.
ಕೃಪೆ: ಬಿಬಿಸಿ-ತಮಿಳು