ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
July 2023 » Page 6 of 7 » Dynamic Leader
October 23, 2024
Home 2023 July (Page 6)
ದೇಶ

ಬಕ್ರೀದ್ ಆಚರಣೆ ವೇಳೆ ವಿದ್ಯಾರ್ಥಿಗಳು ಟೋಪಿ ಧರಿಸಿ ನೃತ್ಯ: ಶಾಲಾ ಮುಖ್ಯೋಪಾಧ್ಯಾಯರ ವಜಾ

ಕಛ್: ಬಿಜೆಪಿ ಆಡಳಿತಾರೂಢ ಗುಜರಾತ್ ರಾಜ್ಯದ ಕಛ್ ಪ್ರದೇಶದ ಖಾಸಗಿ ಶಾಲೆಯೊಂದರಲ್ಲಿ ಬಕ್ರೀದ್ ಆಚರಿಸಲು ಸಣ್ಣ ಪ್ರಮಾಣದ ಹಬ್ಬವನ್ನು ನಡೆಸಲಾಯಿತು. ಈ ಸಮಾರಂಭದಲ್ಲಿ ಮುಸ್ಲಿಂ ವಿದ್ಯಾರ್ಥಿಗಳೊಂದಿಗೆ ಇತರ ವಿದ್ಯಾರ್ಥಿಗಳು ಟೋಪಿ ಧರಿಸಿ ನೃತ್ಯ ಮಾಡಿದ್ದಾರೆ. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ಉತ್ತಮ ಧಾರ್ಮಿಕ ಸೌಹಾರ್ದತೆಗೆ ಉದಾಹರಣೆ ಎಂದು ಪ್ರಶಂಸೆ ವ್ಯಕ್ತವಾಗಿತ್ತು.

ಆದರೆ ಗುಜರಾತ್‌ನಲ್ಲಿ 23 ವರ್ಷಗಳಿಂದ ಧಾರ್ಮಿಕ ದ್ವೇಷದ ಆಧಾರದ ಮೇಲೆ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ, ಇದನ್ನು ಸಹಿಸಲಾಗದೆ ಶಾಲೆಯವರು ಬಕ್ರೀದ್ ಆಚರಣೆ ಮಾಡಿ ಮುಸ್ಲಿಮೇತರ ವಿದ್ಯಾರ್ಥಿಗಳನ್ನು ‘ಟೋಪಿ’ ಧರಿಸುವಂತೆ ಮಾಡಿದ್ದು ಘೋರ ಅಪರಾಧವೆಂದು ಹೇಳಿ, ಆ ಖಾಸಗಿ ಶಾಲೆಯ ಪ್ರಾಂಶುಪಾಲರನ್ನು ಜಿಲ್ಲಾ ಪ್ರಧಾನ ಶಿಕ್ಷಣಾಧಿಕಾರಿ ಸಂಜಯ್ ಪರ್ಮಾರ್ ಮೂಲಕ ವಜಾಗೊಳಿಸಿದ್ದಾರೆ.

ಇದರ ಬಗ್ಗೆ ಪ್ರತಿಕ್ರಿಯಿಸಿರುವ ಕಛ್ ಜಿಲ್ಲಾ ಪ್ರಾಥಮಿಕ ಶಿಕ್ಷಣ ಅಧಿಕಾರಿ ಸಂಜಯ್ ಪರ್ಮಾರ್, ‘ಮುಸ್ಲಿಮರು ಧರಿಸುವ ‘ಇಸ್ಲಾಮಿಕ್ ಟೋಪಿ’ ಧರಿಸಲು ಹಿಂದೂ ವಿದ್ಯಾರ್ಥಿಗಳಿಗೆ ಹೇಳುವುದು ಕೀಳು ಮಟ್ಟದ ಕೃತ್ಯ’ ಎಂದು ಮುಂದೇನು ಹೇಳದೆ ಸುದ್ದಿಗಾರರಿಂದ ಜಾರಿಕೊಂಡರು.

ದೇಶ

2019ರ ಲೋಕಸಭೆ ಚುನಾವಣೆಗೂ ಮುನ್ನ ಮೋದಿ ಉಪನಾಮದ ಟೀಕೆಗೆ ಸಂಬಂಧಿಸಿದ ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಅವರಿಗೆ ಜಾರ್ಖಂಡ್ ಹೈಕೋರ್ಟ್ ಮಂಗಳವಾರ ರಿಲೀಫ್ ನೀಡಿದೆ. ಖುದ್ದು ಹಾಜರಾಗುವಂತೆ ರಾಂಚಿ ಸಂಸದ-ಶಾಸಕ ನ್ಯಾಯಾಲಯ ಈ ಹಿಂದೆ ಗಾಂಧಿ ಅವರಿಗೆ ಸೂಚಿಸಿತ್ತು.

ನ್ಯಾಯಮೂರ್ತಿ ಎಸ್.ಕೆ.ದ್ವಿವೇದಿಯವರು ರಾಹುಲ್ ಗಾಂಧಿಯವರ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡಿದರು ಮತ್ತು ಅವರ ವಿರುದ್ಧ ಯಾವುದೇ ಬಲವಂತದ ಕ್ರಮವನ್ನು ತೆಗೆದುಕೊಳ್ಳದಂತೆ ನಿರ್ದೇಶಿಸಿದ್ದಾರೆ. ನ್ಯಾಯಾಲಯವು ಮುಂದಿನ ಆಗಸ್ಟ್ 16 ರಂದು ಪ್ರಕರಣದ ವಿಚಾರಣೆ ನಡೆಸಲಿದೆ.

ರಾಂಚಿಯಲ್ಲಿ ವಕೀಲರಾದ ಪ್ರದೀಪ್ ಮೋದಿ ಅವರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯು 2019ರ ಲೋಕಸಭೆ ಚುನಾವಣೆಗೆ ಮುನ್ನ ಚುನಾವಣಾ ರ‍್ಯಾಲಿಯಲ್ಲಿ ‘ಮೋದಿಗಳು’ ಕುರಿತು ರಾಹುಲ್ ಗಾಂಧಿ ಮಾಡಿದ ಹೇಳಿಕೆಗೆ ಸಂಬಂಧಿಸಿದೆ.

ರಾಹುಲ್ ಗಾಂಧಿಯವರು, “ನನಗೊಂದು ಪ್ರಶ್ನೆಯಿದೆ. ಇವರೆಲ್ಲರ – ಈ ಎಲ್ಲಾ ಕಳ್ಳರು – ಅವರ ಹೆಸರಿನಲ್ಲಿ ಮೋದಿ ಮೋದಿ ಮೋದಿ ಏಕೆ? ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಮತ್ತು ನಾವು ಸ್ವಲ್ಪ ಹೆಚ್ಚು ಹುಡುಕಿದರೆ, ಇನ್ನೂ ಅನೇಕ ಮೋದಿಗಳು ಹೊರಬರುತ್ತಾರೆ” ಎಂದು ಹೇಳಿದ್ದರು.

ಈ ಮಾನನಷ್ಟ ಪ್ರಕರಣಕ್ಕೆ ಸಂಬಂಧ್ಪಟ್ಟಂತೆ ಈ ವರ್ಷದ ಮಾರ್ಚ್‌ನಲ್ಲಿ ಗುಜರಾತ್‌ನ ಸೂರತ್ ನ್ಯಾಯಾಲಯವು ರಾಹುಲ್ ಗಾಂಧಿಯವರ ಹೇಳಿಕೆಗಳ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಅವರನ್ನು ದೋಷಿ ಎಂದು ಘೋಷಿಸಿತು. ಅವರಿಗೆ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು. ಸೂರತ್ ನ್ಯಾಯಾಲಯದ ತೀರ್ಪಿನ ಒಂದು ದಿನದ ನಂತರ, ಕಾಂಗ್ರೆಸ್ ನಾಯಕನನ್ನು ಲೋಕಸಭಾ ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಯಿತು.

Modi Surname Defamation Case: Jharkhand High Court Protects Rahul Gandhi From Coercive Action
The Jharkhand High Court on Tuesday granted relief to senior Congress leader Rahul Gandhi in a defamation case related to the Modi surname remark he made before the Lok Sabha elections in 2019. Gandhi had earlier been directed by the Ranchi MP-MLA court to appear in person in the defamation case.

Justice S.K. Dwivedi exempted Gandhi from personal appearance and also directed that no coercive action be taken against him. The court will hear the case next on August 16.

ದೇಶ

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದತಿ ವಿರುದ್ಧದ ಮೊಕದ್ದಮೆಯು 3 ವರ್ಷಗಳ ನಂತರ ಇದೇ ತಿಂಗಳು 11 ರಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠದಲ್ಲಿ ಮತ್ತೆ ವಿಚಾರಣೆಗೆ ಬರಲಿದೆ. ಆಗಸ್ಟ್ 5, 2019 ರಂದು, ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ 370ನೇ ವಿಧಿಯನ್ನು ಹಿಂತೆಗೆದುಕೊಂಡಿತು.

ಜಮ್ಮು ಮತ್ತು ಕಾಶ್ಮೀರವನ್ನು, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿದೆ. ತೀವ್ರ ಪ್ರತಿಭಟನೆಯ ನಡುವೆ ನಡೆದ ಈ ಕ್ರಮದ ವಿರುದ್ಧ 20ಕ್ಕೂ ಹೆಚ್ಚು ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿದ್ದವು. 2019ರ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ 5 ನ್ಯಾಯಾಧೀಶರ ಪೀಠದಲ್ಲಿ ಅರ್ಜಿಗಳು ವಿಚಾರಣೆಗೆ ಬಂದಾಗ, ಅರ್ಜಿದಾರರು ಪ್ರಕರಣವನ್ನು 7 ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸಲು ಮನವಿ ಮಾಡಿದರು.

ಆದರೆ, 2020ರ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್ ಹೊರಡಿಸಿದ ಆದೇಶದಲ್ಲಿ, 5 ನ್ಯಾಯಾಧೀಶರ ಪೀಠದಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ಎನ್‌.ವಿ.ರಮಣ ಘೋಷಿಸಿದರು. ಅದರ ನಂತರ, ಎನ್‌.ವಿ.ರಮಣ ಮತ್ತು ಯು.ಯು.ಲಲಿತ್ ಅವರು ಸತತವಾಗಿ ಮುಖ್ಯ ನ್ಯಾಯಮೂರ್ತಿಗಳಾಗಿ ಪ್ರಮಾಣವಚನ ಸ್ವೀಕರಿಸಿ ನಿವೃತ್ತರಾದರು. ನಂತರ ಈ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಲಾಗಿಲ್ಲ.

ಈ ಹಿನ್ನಲೆಯಲ್ಲಿ ಮೂರು ವರ್ಷ 4 ತಿಂಗಳ ಬಳಿಕ ಪ್ರಕರಣದ ವಿಚಾರಣೆ ಇದೇ 11 ರಂದು ನಡೆಯಲಿದೆ. ಎಸ್.ಕೆ.ಕೌಲ್, ಬಿ.ಆರ್.ಕವಾಯಿ ಮತ್ತು ಸೂರ್ಯಕಾಂತ್ ಅವರೊಂದಿಗೆ ಈಗಾಗಲೇ ಪ್ರಕರಣದ ವಿಚಾರಣೆ ನಡೆಸಿದ್ದ ಎನ್.ವಿ.ರಮಣ ಮತ್ತು ಸುಭಾಷ್ ರೆಡ್ಡಿ ಅವರು ನಿವೃತ್ತರಾಗಿದ್ದು, ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಮತ್ತು ಸಂಶಿವ್ ಖನ್ನಾ ಹೊಸ ಪೀಠದಲ್ಲಿ ಇರಲಿದ್ದಾರೆ.

Supreme Court to hear petitions challenging abrogation of Article 370 on 11 July
Supreme Court of India will hear the petitions challenging the abrogation of Article 370 of the constitution on 11 July. A release from the apex court informed that the Chief Justice of India DY Chandrachud-led five-judge constitution bench of the Supreme Court will hear the case.

ದೇಶ

ತೆಲಂಗಾಣದಲ್ಲಿ ಈ ಯೋಜನೆಯಿಂದ ಶೋಷಣೆಗೆ ಒಳಗಾಗಿದ್ದು ಸೌಂದರ್ಯ ಒಬ್ಬರೇ ಅಲ್ಲ, ಇನ್ನೂ ಅನೇಕ ಮಹಿಳೆಯರು ಅದೇ ರೀತಿ ಬಳಲುತ್ತಿದ್ದಾರೆ.

ಜೂನ್ 19 ರಂದು, ತೆಲಂಗಾಣದ ಸಿಕಂದರಾಬಾದ್‌ನ ಬನ್ಸಿಲಾಲ್ ಪೇಟೆನಲ್ಲಿ 27 ವರ್ಷದ ಮಹಿಳೆ ತನ್ನ 18 ತಿಂಗಳ ಅವಳಿ ಮಕ್ಕಳಾದ ನಿತ್ಯ ಮತ್ತು ನಿದರ್ಶ್ ಜೊತೆಗೆ 8ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಹಡಿಯಿಂದ ಬಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಗಂಡಂ ಸೌಂದರ್ಯ ಎಂಬ ಮಹಿಳೆಗೆ ಮದುವೆಯಾಗಿ ಮೂರು ವರ್ಷವೂ ಆಗಿರಲಿಲ್ಲ. ಈ ಅವಧಿಯಲ್ಲಿ ಆಕೆ ಪತಿ ಗಣೇಶ್ ಮತ್ತು ಅತ್ತೆಯಿಂದ ನಿರಂತರ ವರದಕ್ಷಿಣೆ ಕಿರುಕುಳ ಅನುಭವಿಸುತ್ತಿದ್ದಳು. ದೈಹಿಕ ಮತ್ತು ಮಾನಸಿಕ ಎರಡೂ ಚಿತ್ರಹಿಂಸೆಗಳಿಂದಾಗಿ, ಅವರು ಬಹಳ ದುಃಖಕ್ಕೆ ಒಳಗಾಗಿದ್ದರು ಮತ್ತು ಒಂದು ಹಂತದಲ್ಲಿ ಆತ್ಮಹತ್ಯೆ ಮಾಡಿಕೊಂಡರು.

ವರದಕ್ಷಿಣೆ ಮಾತ್ರವಲ್ಲದೆ, ತೆಲಂಗಾಣ ಸರ್ಕಾರದ ಕಲ್ಯಾಣ ಲಕ್ಷ್ಮಿ ಯೋಜನೆಯಡಿ ಸೌಂದರ್ಯಾ ಅವರ ಪೋಷಕರು ಪಡೆದ ಮೊತ್ತವನ್ನೂ ನೀಡುವಂತೆ ಗಣೇಶ್ ಅವರಿಗೆ ಚಿತ್ರಹಿಂಸೆ ನೀಡುತ್ತಿದ್ದನು. ಕಲ್ಯಾಣ ಲಕ್ಷ್ಮಿ ಯೋಜನೆಯು ತೆಲಂಗಾಣ ಸರ್ಕಾರ ಅವಿವಾಹಿತ ಮಹಿಳೆಯರಿಗೆ ನೀಡುವ ಒಂದು ಬಾರಿ ನಗದು ವರ್ಗಾವಣೆ ಯೋಜನೆಯಾಗಿದೆ. ವಾರ್ಷಿಕ ಆದಾಯ ರೂ.2 ಲಕ್ಷಕ್ಕಿಂತ ಕಡಿಮೆ ಇರುವ ಎಲ್ಲಾ ಮಹಿಳಾ ಕುಟುಂಬಗಳು ಈ ಯೋಜನೆಯ ಲಾಭ ಪಡೆಯಬಹುದು.

ಈ ಯೋಜನೆಯು ಬಡ ಕುಟುಂಬಗಳ ಮೇಲಿನ ಮದುವೆಯ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದೆ ಮತ್ತು ಬಾಲ್ಯ ವಿವಾಹಗಳನ್ನು ಗಣನೀಯವಾಗಿ ಕಡಿಮೆ ಮಾಡಲು ಸಹಾಯ ಮಾಡಿದೆ ಎಂದು ತೆಲಂಗಾಣ ಸರ್ಕಾರ ಪದೇ ಪದೇ ಹೇಳಿಕೊಳ್ಳುತ್ತಿದೆ. ಆದರೆ ಇದು ಅನೇಕ ಮಹಿಳೆಯರ ಜೀವನದಲ್ಲಿ ವರದಕ್ಷಿಣೆ ಕ್ರೌರ್ಯಕ್ಕೆ ಕಾರಣವಾಗಿದೆ ಎಂದು ಹಲವರು ಹೇಳುತ್ತಿದ್ದಾರೆ.

ಸೌಂದರ್ಯ ಅವರ ಮದುವೆ ಸಂದರ್ಭದಲ್ಲಿ ಗಣೇಶ್ ಮನೆಯವರು ವರದಕ್ಷಿಣೆಯಾಗಿ 2 ಲಕ್ಷ ರೂಪಾಯಿ ನಗದು, 4 ಸವರನ್ ಚಿನ್ನಾಭರಣ ಮತ್ತು ಒಂದು ಜಮೀನು ನೀಡಿದ್ದರು. ಅದೂ ಅಲ್ಲದೇ ಕಲ್ಯಾಣ ಲಕ್ಷ್ಮಿಯೋಜನೆಯಡಿ ಬಂದ ಹಣವನ್ನೂ ಗಣೇಶ್ ಕಡೆಯವರು ಕೇಳಿದ್ದಾರೆ. ತೆಲಂಗಾಣದಲ್ಲಿ ಈ ಯೋಜನೆಯ ಆರ್ಥಿಕ ಲಾಭಕ್ಕಾಗಿ ಕಿರುಕುಳಕ್ಕೊಳಗಾದವರು ಸೌಂದರ್ಯ ಮಾತ್ರವಲ್ಲ, ಇನ್ನೂ ಅನೇಕ ಮಹಿಳೆಯರು ಅದೇ ರೀತಿ ಬಳಲುತ್ತಿದ್ದಾರೆ.

ಒಬ್ಬ ಮಹಿಳೆಯ ಸಹೋದರ, ‘ಈಗಾಗಲೇ ಮದುವೆ ಸಂದರ್ಭದಲ್ಲಿ 7 ಲಕ್ಷ ರೂಪಾಯಿ ವರದಕ್ಷಿಣೆ ನೀಡಿದ್ದೇವೆ. ಆದರೂ ಈ ಯೋಜನೆಯ ಮೂಲಕ ಹಣ ಬಂದ ಮರುಕ್ಷಣವೇ ಈ ವಿಚಾರ ಕೇಳಿ ತಂಗಿಗೆ ಕಿರುಕುಳ ನೀಡತೊಡಗಿದರು. ಹಾಗಾಗಿ ಮೊತ್ತದ ಒಂದು ಭಾಗವನ್ನು ಅವರಿಗೆ ನೀಡಿದ್ದೇವೆ’ ಎಂದರು.

ಇದರ ಬಗ್ಗೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತರೊಬ್ಬರು, ‘ಕಲ್ಯಾಣ ಲಕ್ಷ್ಮಿ ಎಂಬ ಈ ಯೋಜನೆಯಡಿ ಬರುವ ಹಣವನ್ನು ವಧುವಿಗೆ ನೀಡುವ ಪರಿಪಾಠ ತೆಲಂಗಾಣ ರಾಜ್ಯದಾದ್ಯಂತ ಸಾಮಾನ್ಯವಾಗಿದೆ. ಕೆಲವು ಸಂದರ್ಭಗಳಲ್ಲಿ ವರ ಅಥವಾ ಅವನ ತಾಯಿ ಈ ಯೋಜನೆಯಡಿ ಪಡೆದ ಮೊತ್ತದ ಶೇ.50 ರಷ್ಟನ್ನು ಕೇಳುತ್ತಾರೆ.

ಬಾಲ್ಯವಿವಾಹಗಳನ್ನು ತಡೆಯುವ ಸರ್ಕಾರದ ಉದ್ದೇಶವೇ ಈ ಯೋಜನೆಯ ಹಿಂದಿನ ಕಾರಣವಾಗಿದೆ. ಆದರೆ, ಅದನ್ನು ವರದಕ್ಷಿಣೆ ಎಂದು ದುರುಪಯೋಗಪಡಿಸಿಕೊಳ್ಳಲಾಗಿದೆ. ಆದ್ದರಿಂದ ತೆಲಂಗಾಣ ಸರ್ಕಾರ ಮಧ್ಯ ಪ್ರವೇಶಿಸಿ ಯೋಜನೆ ದುರ್ಬಳಕೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು.

Source: Vikatan.com 

ದೇಶ

ದಿನನಿತ್ಯ ಬಳಸುವ ಟೊಮೆಟೊ ಬೆಲೆ ಏರಿಕೆಯಾಗುತ್ತಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಇಂತಹ ವಾತಾವರಣದಲ್ಲಿ ಟೊಮೆಟೊ ಪೇಸ್ಟ್ ಮಾರುಕಟ್ಟೆಗೆ ಬಂದಿದೆ.

ಇತ್ತೀಚಿನ ದಿನಗಳಲ್ಲಿ ನಾವು ತಂತ್ರಜ್ಞಾನದಲ್ಲಿ ಸಾಕಷ್ಟು ಪ್ರಗತಿಯನ್ನು ಕಾಣುತ್ತಿದ್ದೇವೆ. ಸತ್ಯವೇನೆಂದರೆ, ಆ ಪ್ರಗತಿಯು ನಮ್ಮ ಅಡುಗೆ ಮನೆಗಳನ್ನೂ ಬಿಟ್ಟಿಲ್ಲ. ಅಂತಹ ಒಂದು ಮಹತ್ವದ ಬದಲಾವಣೆಯ ನೋಟ ಇಲ್ಲಿದೆ!

ನಾವು ಪ್ರತಿನಿತ್ಯ ಎದ್ದಾಗ ಬಳಸುವ ಟೂತ್ ಬ್ರಶ್‌ನಿಂದ ಆರಂಭಿಸಿ, ಮೊಬೈಲ್ ಫೋನ್, ಹ್ಯಾಂಡ್ ಬ್ಯಾಗ್ ಹೀಗೆ ಪ್ರತಿ ದಿನ ಬಳಸುವ ಎಲ್ಲ ವಸ್ತುಗಳಲ್ಲೂ ಹೊಸ ತಂತ್ರಜ್ಞಾನ ಬಂದಿದೆ. ಈ ನಾವೀನ್ಯತೆ ಕೇವಲ ಪದಾರ್ಥಗಳಲ್ಲಿ ಮಾತ್ರವಲ್ಲದೆ ಅಡುಗೆಯಲ್ಲೂ ಹರಿದಾಡುತ್ತಿವೆ. ಉದಾಹರಣೆಗೆ ದಿನನಿತ್ಯ ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ತೆಂಗಿನಕಾಯಿ, ಜೀರಿಗೆ ಮತ್ತು ಮೆಣಸು ಇತ್ಯಾದಿಗಳನ್ನು ರುಬ್ಬಿ ಆಹಾರಕ್ಕೆ ಸೇರಿಸುವುದು ವಾಡಿಕೆಯಾಗಿತ್ತು.

ಆದರೆ ಕಾಲ ಕಳೆದಂತೆ ಎಲ್ಲವೂ 10 ರೂಪಾಯಿ ಪ್ಯಾಕಟ್‌ನಲ್ಲಿ ಅಡಗಿಕೊಂಡಿತು. ನಾವು ಮಾತ್ರ ಹೊರತಾಗಿಲ್ಲ ಎಂದು ಈಗ ಟೊಮೆಟೊ ಪೇಸ್ಟ್ ಮಾರುಕಟ್ಟೆಗೆ ಬಂದಿವೆ. ಇದು ಬೇರೇನೂ ಇಲ್ಲ, ಟೊಮೆಟೊಗಳನ್ನು ರುಬ್ಬಿ ಪ್ಯಾಕೆಟ್‌ಗಳಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡುವುದೇ ಟೊಮೆಟೊ ಪೇಸ್ಟ್.

ಕಳೆದ ವರ್ಷಕ್ಕೆ ಹೋಲಿಸಿದರೆ ಜೀರಿಗೆ ಮತ್ತು ಮೆಣಸಿನ ಬೆಲೆ ದುಪ್ಪಟ್ಟಾಗಿರುವುದರಿಂದ ಕನಿಷ್ಟ ಬೆಲೆಯಲ್ಲಿ ಸಿಗುವ ಪುಡಿ ಮಾಡಿದ ಜೀರಿಗೆ ಮತ್ತು ಮೆಣಸನ್ನು ಖರೀದಿಸಿ ಜನ ಅಡುಗೆಗೆ ಬಳಸುತ್ತಿದ್ದಾರೆ. ಅದೇ ರೀತಿ ಆ್ಯಪಲ್‌ಗೆ ಸವಾಲೆಸೆಯುವಂತೆ ಪ್ರತಿದಿನ ಕೆಜಿ 100-160 ರೂಪಾಯಿಯವರೆಗೆ ಟೊಮೆಟೊ ಬೆಲೆ ಮಾರಾಟವಾಗುತ್ತಿದ್ದು, ಇದೀಗ ಟೊಮೆಟೊ ಪೇಸ್ಟ್ ಮಾರಾಟ ಬಿಸಿ ಶುರುವಾಗಿದೆ.

5 ರಿಂದ 6 ಟೊಮೆಟೊಗಳನ್ನು ಬಳಸುವ ಜಾಗದಲ್ಲಿ 10 ರೂಪಾಯಿಯ ಟೊಮೆಟೊ ಪೇಸ್ಟ್ ಪ್ಯಾಕೆಟ್ ಖರೀದಿಸಿ ಸುರಿದರೆ ಅಡುಗೆ ಸಿದ್ಧ. ಈರುಳ್ಳಿ ಬೆಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದೆ ಈರುಳ್ಳಿಯನ್ನೂ ಪುಡಿ ಮಾಡಿ ಪ್ಯಾಕೆಟ್‌ಗಳಲ್ಲಿ ಮಾರಾಟ ಮಾಡಿದರೂ ಆಶ್ಚರ್ಯವಿಲ್ಲ.

ಸಿನಿಮಾ

ವರದಿ: ಅರುಣ್ ಜಿ.,

ರಾಘವ್ ಲಾರೆನ್ಸ್-ಕಂಗನಾ ಜೋಡಿಯ ’ಚಂದ್ರಮುಖಿ-2’ ಎಂಟ್ರಿಗೆ ಮುಹೂರ್ತ ಫಿಕ್ಸ್; ಗಣೇಶ ಚತುರ್ಥಿಗೆ ಪಿ.ವಾಸು ನಿರ್ದೇಶನ 65ನೇ ಸಿನಿಮಾ ಬಿಡುಗಡೆ!

ಸೌತ್ ಸಿನಿ ದುನಿಯಾದ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಭತ್ತಳಿಕೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಚಂದ್ರಮುಖಿ-2 ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಖ್ಯಾತ ನಿರ್ದೇಶಕ, ನಟ ಹಾಗೂ ಸ್ಟಾರ್ ಕೊರಿಯೋಗ್ರಾಫರ್ ರಾಘವ್ ಲಾರೆನ್ಸ್ ಹಾಗೂ ಬಾಲಿವುಡ್ ಬ್ಯೂಟಿ ಕಂಗನಾ ನಟನೆಯ ಈ ಚಿತ್ರ ಸೆಪ್ಟಂಬರ್ 19ರ ಗಣೇಶ ಚತುರ್ಥಿಗೆ ಸ್ಪೆಷಲ್ ಆಗಿ ವಿಶ್ವಾದ್ಯಂತ ತೆರೆಗಪ್ಪಳಿಸಲಿದೆ. ಖ್ಯಾತ ಹಿರಿಯ ನಿರ್ದೇಶಕ ಪಿ.ವಾಸು ನಿರ್ದೇಶನದ 65ನೇ ಚಿತ್ರ ಚಂದ್ರಮುಖ-2.

2005ರಲ್ಲಿ ಬಿಡುಗಡೆಯಾಗಿದ್ದ ಕ್ಲಾಸಿಕ್ ಸಿನಿಮಾ ಚಂದ್ರಮುಖಿ ಬಾಕ್ಸಾಫೀಸ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ಸೂಪರ್ ಸ್ಟಾರ್ ರಜನಿಕಾಂತ್ ನಾಯಕನಾಗಿ ನಟಿಸಿದ್ದ ಹಿಟ್ ಲಿಸ್ಟ್ ಸೇರಿತ್ತು. 18 ವರ್ಷದ ಬಳಿಕ ಚಂದ್ರಮುಖಿ ಸೀಕ್ವೆಲ್ ಬರ್ತಿದ್ದು, ನಿರೀಕ್ಷೆಯನ್ನು ಹೆಚ್ಚಿಸಿದೆ. ಲೈಕಾ ಸಂಸ್ಥೆಯ ಒಡೆಯ ಸುಭಾಷ್ ಕರಣ್ ಬಹಳ ಅದ್ಧೂರಿಯಾಗಿ ಚಿತ್ರ ನಿರ್ಮಿಸಿದ್ದು, ಆಸ್ಕರ್ ಅವಾರ್ಡ್ ವಿನ್ನರ್ ಎಂ.ಎಂ.ಕೀರವಾಣಿ ಸಂಗೀತ ನಿರ್ದೇಶನ, ಆರ್.ಡಿ.ರಾಜಶೇಖರ್ ಛಾಯಾಗ್ರಹಣ, ಅಂಥೋನಿ ಸಂಕಲನ ಚಿತ್ರಕ್ಕಿದೆ. ವಡಿವೇಲು, ಲಕ್ಷ್ಮೀ ಮೆನನ್, ಮಹಿಮಾ ನಂಬಿಯಾರ್, ರಾಧಿಕಾ ಶರತ್ ಕುಮಾರ್, ಸುರೇಶ್ ಮೆನನ್ ತಾರಾಬಳಗದಲ್ಲಿದ್ದಾರೆ. 18 ವರ್ಷದ ಬಳಿಕ ಗಣೇಶ ಹಬ್ಬಕ್ಕೆ ಚಂದ್ರಮುಖಿ-2 ಸೀಕ್ವೆಲ್ ಕನ್ನಡ,ತೆಲುಗು,ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಗ್ ಸ್ಕ್ರೀನ್ ಗೆ ಲಗ್ಗೆ ಇಡಲಿದೆ.

ಸಿನಿಮಾ

ವರದಿ: ಅರುಣ್ ಜಿ.,

ವರುಣ್ ಸಿನಿ ಕ್ರಿಯೇಷನ್ಸ್ ಚೊಚ್ಚಲ ಹೆಜ್ಜೆ ‘ನಿಮ್ಮೆಲ್ಲರ ಆರ್ಶೀರ್ವಾದ’ ಸಿನಿಮಾ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ಮುಗಿಸಿ ಬಿಡುಗಡೆಗೆ ಹಂತಕ್ಕೆ ಬಂದಿದೆ. ಯುವ ಸಿನಿ ಸಿನಿಮೋತ್ಸಾಹಿಗಳೇ ಸೇರಿಕೊಂಡು ತಯಾರಿಸಿರುವ ಈ ಚಿತ್ರಕ್ಕೆ ವರುಣ್ ಹೆಗ್ಡೆ ಹಣ ಹಾಕಿದ್ದು, ಇದು ಇವರ ಮೊದಲ ಪ್ರಯತ್ನವಾಗಿದೆ. ಚಿತ್ರರಂಗದ ಮೇಲಿನ ಅಪಾರ ಅಭಿಮಾನ ಹಾಗೂ ಆಸಕ್ತಿಯಿಂದಾಗಿ ವರುಣ್ ಹೆಗ್ಡೆ ಸಿನಿಮಾ ನಿರ್ಮಾಣಕ್ಕಿಳಿದಿದ್ದಾರೆ. ಈ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದ್ದು‌ ನೋಡುಗರ ಗಮನಸೆಳೆಯುತ್ತಿದೆ.

ಕೌಟುಂಬಿಕ ಕಥಾಹಂದರದ ‘ನಿಮ್ಮೆಲ್ಲರ ಆಶೀರ್ವಾದ’ ಸಿನಿಮಾದಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರ ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕಿನ ದಿನಚರಿಯನ್ನು ವಿಭಿನ್ನವಾಗಿ ಕಟ್ಟಿಕೊಡಲಾಗಿದೆ. ಈ ಚಿತ್ರದ ಮೂಲಕ ಪ್ರತೀಕ್‌ ಶೆಟ್ಟಿ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ್ದು, ಭಿನ್ನ ಸಿನಿಮಾ ಖ್ಯಾತಿಯ ಪಾಯಲ್‌ ರಾಧಾಕೃಷ್ಣ ನಾಯಕಿಯಾಗಿ ನಟಿಸಿದ್ದಾರೆ. ಎಂ.ಎನ್‌.ಲಕ್ಷ್ಮೀದೇವಿ, ಅರವಿಂದ ಬೋಳಾರ್‌, ಗೋವಿಂದೇಗೌಡ, ಸ್ವಾತಿ ಗುರುದತ್, ದಿನೇಶ್‌ ಮಂಗಳೂರು ಸೇರಿದಂತೆ ಹಿರಿಯ ಹಾಗೂ ಅನುಭವಿ ಕಲಾದಂಡು ಚಿತ್ರದಲ್ಲಿದೆ.

‘ನಿಮ್ಮೆಲ್ಲರ ಆಶೀರ್ವಾದ’ ಸಿನಿಮಾಗೆ ಯುವ ನಿರ್ದೇಶಕ ರವಿಕಿರಣ್‌ ಆಕ್ಷನ್ ಕಟ್ ಹೇಳಿದ್ದು, ಸರವಣನ್ ಜಿ.ಎನ್. ಛಾಯಾಗ್ರಹಣ, ರಘು ನಿಡುವಳ್ಳಿ ಡೈಲಾಗ್, ರೂಪೇಂದ್ರ ಆಚಾರ್‌ ಕಲಾ ನಿರ್ದೇಶನ, ಸುನಾದ್‌ ಗೌತಮ್‌ ಸಂಗೀತ ಮತ್ತು ವಿವೇಕ್‌ ಚಕ್ರವರ್ತಿ ಹಿನ್ನೆಲೆ ಸಂಗೀತ, ಸುರೇಶ್‌ ಆರುಮುಗಂ ಸಂಕಲನ ಸಿನಿಮಾದ ಶ್ರೀಮಂತಿಕೆ ಹೆಚ್ಚಿಸಿದೆ. 

ಕರಾವಳಿಯ ವಿವಿಧ ಭಾಗಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಈಗಾಗಲೇ ಒಂದಷ್ಟು ಪೋಸ್ಟರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ‘ನಿಮ್ಮೆಲ್ಲರ ಆಶೀರ್ವಾದ’ ಚಿತ್ರ ಇದೇ ತಿಂಗಳು ರಾಜ್ಯಾದ್ಯಂತ ತೆರೆಗಪ್ಪಳಿಸಲಿದೆ. ಅದಕ್ಕೂ ಮುನ್ನ ಚಿತ್ರತಂಡ ಇದೇ ವಾರ ಆಡಿಯೋ ಬಿಡುಗಡೆಗೆ ತಯಾರಿ ನಡೆಸಿದೆ.

ರಾಜ್ಯ

ರಾಜ್ಯದಲ್ಲಿ ಈಗ ಸೌಹಾರ್ದತೆ ನೆಲೆಸಿದೆ; ಅದನ್ನು ಹಾಳು ಮಾಡುವವರು ಯಾರೇ ಆಗಲಿ, ಯಾವುದೇ ಸಮುದಾಯವಾಗಲಿ, ಅವರ ವಿರುದ್ಧ ಕ್ರಮಕೈಗೊಳ್ಳಲು ಹಿಂಜರಿಕೆ ಬೇಡ.

ಬೆಂಗಳೂರು: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಇತ್ತೀಚಿಗೆ ನಡೆದ ಸಂಘಟನೆಯ ಸಭೆಯೊಂದರಲ್ಲಿ ಮುಸ್ಲಿಮರ ವಿರುದ್ಧ ನಿಂದನಾತ್ಮಕ, ಅವಹೇಳನಕಾರಿಯಾಗಿ ಹಾಗೂ ಮುಸ್ಲಿಮರು ತರಕಾರಿ, ಮೀನು ಮಾರಾಟಕ್ಕೆ ಹಿಂದೂಗಳ ಮನೆಗೆ ಬಂದರೆ ಗುಂಡಿಕ್ಕಿ ಎಂಬ ಹೇಳಿಕೆ ನೀಡಿರುವ ಬಜರಂಗ ದಳದ ರಘು ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಮುಸ್ಲಿಮ್ ಯುನಿಟಿಯ ರಾಜ್ಯ ಕಾರ್ಯಾಧ್ಯಕ್ಷ ಶೇಕಬ್ಬ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, “ಮತೀಯ ದ್ವೇಷ ಮತ್ತು ಕೋಮು ಗಲಭೆಗೆ ಪ್ರಚೋದನೆ ನೀಡುವಂತಹ ಭಾಷಣ ಮಾಡಿ, ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಸೃಷ್ಟಿಯಾಗುವಂತಹ ಹೇಳಿಕೆಯನ್ನು ರಘು ನೀಡಿದ್ದಾರೆ. ಶಾಂತಿ ಕದಡುವ ಹೇಳಿಕೆಯಿಂದ ಸಹಬಾಳ್ವೆಗೆ ಧಕ್ಕೆ ಬರುವ ಕಾರಣ, ಸರ್ಕಾರ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಕೇಳಿಕೊಳ್ಳುತ್ತೇನೆ.

ರಾಜ್ಯದಲ್ಲಿ ಈಗ ಸೌಹಾರ್ದತೆ ನೆಲೆಸಿದೆ; ಅದನ್ನು ಹಾಳು ಮಾಡುವವರು ಯಾರೇ ಆಗಲಿ, ಯಾವುದೇ ಸಮುದಾಯವಾಗಲಿ, ಅವರ ವಿರುದ್ಧ ಕ್ರಮಕೈಗೊಳ್ಳಲು ಹಿಂಜರಿಕೆ ಬೇಡ” ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸಿನಿಮಾ

ವರದಿ: ಅರುಣ್ ಜಿ.,

ವಿಖ್ಯಾತ್‌ ಪ್ರೊಡಕ್ಷನ್‌ ಅಂದರೇನೆ, ಅದ್ಧೂರಿತನ ಕಣ್ಮುಂದೆ ಬರುತ್ತದೆ. ಈ ವರೆಗೆ ನಿರ್ಮಾಪಕ ವಿಖ್ಯಾತ್‌ ನಿರ್ಮಿಸಿರುವ ಪುಷ್ಪಕ ವಿಮಾನ, ಇನ್ಸ್‌ಪೆಕ್ಟರ್‌ ವಿಕ್ರಂ, ಮಾನ್ಸೂನ್‌ ರಾಗ ಮೊದಲಾದ ಚಿತ್ರಗಳು ತಾಂತ್ರಿಕವಾಗಿ ಶ್ರೀಮಂತಿಕೆ ಹೊಂದಿದ್ದವು.

ಅದೆಷ್ಟೇ ಕಷ್ಟವಾದರೂ ತೆರೆಮೇಲಿನ ದೃಶ್ಯಗಳು ರಿಚ್‌ ಆಗಿ ಮೂಡಿಬರಬೇಕು ಅಂತಾ ಬಯಸೋ ನಿರ್ಮಾಪಕರಲ್ಲಿ ವಿಖ್ಯಾತ್‌ ಖ್ಯಾತರಾಗಿದ್ದಾರೆ. ಸ್ಟಾರ್‌ಗಳ ಡೇಟ್ಸ್‌ ಸಿಕ್ತಾ, ರಪಾರಪಾ ಸಿನಿಮಾ ಮುಗಿಸಿ, ವ್ಯಾಪಾರ ಮುಗಿಸುವ ಜಾಯಮಾನ ವಿಖ್ಯಾತ್‌ ಅವರದ್ದಲ್ಲ. ಇಂಥ ವಿಖ್ಯಾತ್‌ ಈಗ ಗೋಲ್ಡನ್‌ಸ್ಟಾರ್ ಗಣೇಶ್‌ ಅವರಿಗಾಗಿ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಇನ್ನೂ ಟೈಟಲ್‌ ರಿವೀಲ್‌ ಆಗದ ಚಿತ್ರದ ಪೋಸ್ಟರ್‌ ಇಂದು ಹೊರಬಂದಿದೆ. ಈ ಬಾರಿ ಗಣೇಶ್‌ ಜನರನ್ನು ಗ್ಲೋಬಲ್‌ ಲೆವೆಲ್ಲಿನಲ್ಲಿ ರಂಜಿಸಲೆಂದೇ ಸಿದ್ದವಾಗುತ್ತಿದ್ದಾರೆ ಅನ್ನೋ ಸೂಚನೆಯಂತೂ ದೊರಕಿದೆ.

ಇದು ಗಣೇಶ್ ಅವರ ವೃತ್ತಿ ಬದುಕಿನಲ್ಲಿ ಮಹತ್ತರವಾಗಿ ದಾಖಲಾಗಬಹುದಾದ ಚಿತ್ರವಾಗಲಿದೆ ಅನ್ನೋದು ನಿರ್ಮಾಪಕ ವಿಖ್ಯಾತ್‌ ಅಭಿಪ್ರಾಯವಾಗಿದೆ. ಇದು ಗಣೇಶ್ ನಟನೆಯ 42ನೇ ಚಿತ್ರವಾಗಿದೆ. ವಿಖ್ಯಾತ್ ಚಿತ್ರ ಪ್ರೊಡಕ್ಷನ್ಸ್ ನಿರ್ಮಾಣದ 6ನೇ ಚಿತ್ರವಿದು. ವಿಶೇಷವೆಂದರೆ, ಇದು ಬಿಗ್ ಬಜೆಟ್ಟಿನ, ದೊಡ್ಡ ಕ್ಯಾನ್ವಾಸಿನ ಪ್ಯಾನಿಂಡಿಯಾ ಚಿತ್ರ. ಈ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ಪ್ಯಾನಿಂಡಿಯಾ ಲೆವೆಲ್ಲಿಗೆ ಲಗ್ಗೆಯಿಡಲಿದ್ದಾರೆ. ಈ ಸಿನಿಮಾ ಬಗೆಗಿನ ತಯಾರಿಗಳು ಚಾಲ್ತಿಯಲ್ಲಿವೆ. ನಿರ್ದೇಶಕರು, ತಾರಾಗಣ, ತಾಂತ್ರಿಕ ವರ್ಗ, ನಾಯಕಿ ಯಾರು ಎಂಬ ವಿಚಾರಗಳು ಇಷ್ಟರಲ್ಲಿಯೇ ಬಯಲಾಗಲಿವೆ.

ದೇಶ ರಾಜಕೀಯ

“ಬಿಜೆಪಿ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ನಾಗರಿಕ ಸಂಹಿತೆ ಜಾರಿಗೊಳಿಸಲು ಪ್ರಯತ್ನಿಸುತ್ತಿದೆ” ಎಂದು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಹೇಳಿದ್ದಾರೆ.

ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೆ ತಮ್ಮ ಪಕ್ಷದ ವಿರೋಧವಿಲ್ಲ ಎಂದು ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಭಾನುವಾರ ಹೇಳಿದ್ದಾರೆ. “ಏಕರೂಪ ನಾಗರಿಕ ಸಂಹಿತೆಯನ್ನು ಈಗಾಗಲೇ ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಅದನ್ನು ಹೇರುವುದನ್ನು ಸಂವಿಧಾನ ಬೆಂಬಲಿಸುವುದಿಲ್ಲ. ಯುಸಿಸಿಗೆ ಸಂಬಂಧಿಸಿದ ಎಲ್ಲಾ ಆಯಾಮಗಳನ್ನು ಬಿಜೆಪಿ ಪರಿಗಣಿಸಬೇಕಿತ್ತು.

ನಮ್ಮ ಪಕ್ಷ (ಬಿಎಸ್‌ಪಿ) ಯುಸಿಸಿ ಅನುಷ್ಠಾನಕ್ಕೆ ವಿರುದ್ಧವಾಗಿಲ್ಲ; ಆದರೆ, ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಬಿಜೆಪಿ ಪ್ರಯತ್ನಿಸುತ್ತಿರುವ ವಿಧಾನವನ್ನು ನಾವು ಬೆಂಬಲಿಸುವುದಿಲ್ಲ. ಈ ವಿಷಯವನ್ನು ರಾಜಕೀಯಗೊಳಿಸುವುದು ಮತ್ತು ದೇಶದಲ್ಲಿ ಯುಸಿಸಿಯನ್ನು ಬಲವಂತವಾಗಿ ಜಾರಿಗೊಳಿಸುವುದು ಸರಿಯಲ್ಲ.

ಪ್ರತಿಯೊಂದು ಸಂದರ್ಭದಲ್ಲೂ ಒಂದೇ ಕಾನೂನು ಎಲ್ಲಾ ಧರ್ಮದ ಜನರಿಗೆ ಅನ್ವಯಿಸಿದರೆ, ಅದು ದೇಶವನ್ನು ಬಲಪಡಿಸುತ್ತದೆ ಎಂದು ಬಹುಜನ ಸಮಾಜ ಪಕ್ಷದ ನಾಯಕರು ಒತ್ತಿ ಹೇಳಿದ್ದಾರೆ” ಎಂದು ಹೇಳಿದ್ದಾರೆ. ಜುಲೈ 3 ರಂದು ಏಕರೂಪ ನಾಗರಿಕ ಸಂಹಿತೆಯ ಸಂಸದೀಯ ಸ್ಥಾಯಿ ಸಮಿತಿಯ ಚರ್ಚೆಗೆ ಮುನ್ನ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.