ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ದೇವಾಲಯ Archives » Dynamic Leader
October 21, 2024
Home Posts tagged ದೇವಾಲಯ
ರಾಜಕೀಯ

ಹೈದರಾಬಾದ್: ತಮಿಳುನಾಡಿನಲ್ಲಿರುವ ಹಿಂದೂ ದೇವಾಲಯಗಳನ್ನು ಡಿಎಂಕೆ ಸರ್ಕಾರ ಅತಿಕ್ರಮಣ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ಬಹಿರಂಗ ಆರೋಪ ದೇಶಾದ್ಯಂತ ಸಂಚಲನ ಮೂಡಿಸಿದೆ. ಬಿಜೆಪಿ ಈಗಾಗಲೇ ‘ಸನಾತನ’ ವಿಚಾರದಲ್ಲಿ ಡಿಎಂಕೆ ವಿರುದ್ಧ ಭಾರತದಾದ್ಯಂತ ಪ್ರಚಾರ ನಡೆಸುತ್ತಿದ್ದು, ಈ ಆರೋಪವನ್ನು ಪ್ರಧಾನಿ ಮೋದಿ ಸಾರ್ವಜನಿಕವಾಗಿ ಮಾಡಿರುವುದು ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.

ತೆಲಂಗಾಣ ವಿಧಾನಸಭೆಗೆ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ. ತೆಲಂಗಾಣದಲ್ಲಿ ಆಡಳಿತಾರೂಢ ಭಾರತೀಯ ರಾಷ್ಟ್ರ ಸಮಿತಿ, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ತೆಲಂಗಾಣದಲ್ಲಿ ಇಲ್ಲಿಯವರೆಗೆ ನೆಲೆ ಸ್ಥಾಪಿಸದ ಬಿಜೆಪಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಗಮನಾರ್ಹ ಸ್ಥಾನಗಳನ್ನು ಗೆಲ್ಲುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಇದರಿಂದ ತೆಲಂಗಾಣದಲ್ಲಿ ಈ ಬಾರಿ ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕೆಂದು ಬಿಜೆಪಿ ಕಸರತ್ತು ನಡೆಸುತ್ತಿದೆ.

ಇದನ್ನೂ ಓದಿ: ಸ್ಥಳೀಯ ಅಧಿಕಾರಿಗಳ ಕುಮ್ಮಕ್ಕಿನಿಂದ ದಲಿತ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಬಹಿಷ್ಕಾರ!

ಆ ನಿಟ್ಟಿನಲ್ಲಿ ಇಂದು ತೆಲಂಗಾಣದ ನಿಜಾಮಾಬಾದ್‌ನಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡು ಭಾಷಣ ಮಾಡಿದರು. ತಮ್ಮ ಭಾಷಣದ ಭಾಗವಾಗಿ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಸರ್ಕಾರವನ್ನೂ ಮೋದಿ ಟೀಕಿಸಿ ಮಾತನಾಡಿದರು.

“ತಮಿಳುನಾಡಿನಲ್ಲಿ ಸನಾತನ ಧರ್ಮ ನಿರ್ಮೂಲನೆ ಮಾಡಬೇಕು ಎಂದು ರಾಜ್ಯ ಸರ್ಕಾರ ಸೂಚಿಸಿದೆ. ಹಿಂದೂ ಜನರ ಜೀವ ಉಸಿರಾದ ಸನಾತನ ಧರ್ಮ ನಾಶವಾಗಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಪುತ್ರ ಸಾರ್ವಜನಿಕವಾಗಿ ಹೇಳುತ್ತಿದ್ದಾರೆ. ಅದರ ಭಾಗವಾಗಿ ತಮಿಳುನಾಡಿನಲ್ಲಿ ಹಿಂದೂ ದೇವಾಲಯಗಳನ್ನು ಸರ್ಕಾರ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಹಿಂದೂ ದೇವಾಲಯಗಳನ್ನು ತಮಿಳುನಾಡು ಸರ್ಕಾರ ವಶಪಡಿಸಿಕೊಂಡಿದೆ. ಇದು ಅತ್ಯಂತ ದೊಡ್ಡ ಅರಾಜಕತೆ.

ಇದನ್ನೂ ಓದಿ: 19 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ: ಅಕ್ಟೋಬರ್ 14 ರಂದು ಅಮೇರಿಕಾದಲ್ಲಿ ಅನಾವರಣ!

ಹಿಂದೂ ದೇವಾಲಯಗಳ ನಿಯಂತ್ರಣದಿಂದ ಸರ್ಕಾರ ಹಿಂದೆ ಸರಿಯಬೇಕೆಂದು ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ದನಿಯೆತ್ತಿದೆ? ಕಾಂಗ್ರೆಸಿಗೆ ಧೈರ್ಯವಿದ್ದರೆ ಅವರು ತಮಿಳುನಾಡಿನಲ್ಲಿ ಹಾಗೆ ಹೇಳಲು ಸಾಧ್ಯವೇ? ನೀವು (ಕಾಂಗ್ರೆಸ್) ಡಿಎಂಕೆ ಸರ್ಕಾರದ ಜೊತೆ ಮೈತ್ರಿ ಮಾಡಿಕೊಂಡಿದ್ದೀರಿ; ಹಾಗಾಗಿ ಹಿಂದೂ ದೇವಾಲಯಗಳ ನಿರ್ವಹಣೆಯಿಂದ ಸರ್ಕಾರ ಹಿಂದೆ ಸರಿಯಬೇಕು ಎಂದು ನೀವು ಡಿಎಂಕೆಗೆ ಹೇಳಬೇಕು” ಎಂದು ಮೋದಿ ಹೇಳಿದಾರೆ.

ವಿದೇಶ

ಮಿಸೌರಿ: ಜಗತ್ತಿನಲ್ಲಿ ಎಲ್ಲೋ ಒಂದು ಕಡೆ ಪವಾಡ ಸದೃಶ ಘಟನೆಗಳು ನಡೆಯುತ್ತಿರುತ್ತವೆ. ಅದರಂತೆ ಅಮೆರಿಕದ ಮಿಸೌರಿ ಎಂಬ ಪುಟ್ಟ ಪಟ್ಟಣದಲ್ಲಿ ಪವಾಡವೊಂದು ನಡೆದಿದೆ. ಅಲ್ಲಿನ ಕ್ಯಾಥೋಲಿಕ್ ಸನ್ಯಾಸಿನಿ ವಿಲ್‌ಹೆಲ್ಮಿನಾ ಲಾನ್‌ಸಾಸ್ಟರ್ 2019 ರಲ್ಲಿ ತಮ್ಮ 95ನೇ ವಯಸ್ಸಿನಲ್ಲಿ ನಿಧನರಾದರು.

ಅವರ ದೇಹವನ್ನು ಮರದ ಶವಪೆಟ್ಟಿಗೆಯಲ್ಲಿ ಇರಿಸಿ ಸಮಾಧಿ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಅವರ ಶವವನ್ನು ಬೇರೆಡೆ ಹೂಳಲು ಕ್ರಮಕೈಗೊಳ್ಳಲಾಗಿದೆ. ಅದರಂತ ಕೆಲ ದಿನಗಳ ಹಿಂದೆ ಅವರ ದೇಹವನ್ನು ಹೊರತೆಗೆಯಲಾಗಿತ್ತು. ನಂತರ ಇತರ ಸನ್ಯಾಸಿನಿಯರು ಶವಪೆಟ್ಟಿಗೆಯನ್ನು ತೆರೆದಾಗ ಅವರಿಗೆ ಆಶ್ಚರ್ಯವಾಯಿತು. ಕಾರಣ, ಸನ್ಯಾಸಿನಿ ವಿಲ್‌ಹೆಲ್ಮಿನಾ ಲಾನ್‌ಸಾಸ್ಟರ್ ಅವರ ದೇಹವು ಸಮಾಧಿಯಾದ 4 ವರ್ಷಗಳ ನಂತರವೂ ಅದು ಹಾಗೇ ಇತ್ತು. ಅವರ ಕೂದಲು, ಮೂಗು, ತುಟಿಗಳು ಮತ್ತು ಕಣ್ಣುಗಳು ಹಾನಿಗೊಳಗಾಗದೆ ಹಾಗೆಯೇ ಇತ್ತು. ಅವರ ಮುಖದಲ್ಲಿ ನಗು ಬೆಳಗಿತು.

ಸಾಮಾನ್ಯವಾಗಿ ಯಾರಾದರೂ ಸತ್ತರೆ, ಅವರ ದೇಹವನ್ನು ಹೂಳಿದಾಗ ಅದು ಕೆಲವೇ ತಿಂಗಳುಗಳಲ್ಲಿ ಅಸ್ಥಿಪಂಜರವಾಗಿ ಬದಲಾಗುತ್ತದೆ. ಆದರೆ ಸನ್ಯಾಸಿನಿಯ ಶವ ಅಂತಹದ್ದೇನೂ ಇಲ್ಲದೇ ಇದ್ದುದರಿಂದ ಆ ಸುದ್ದಿ ವೇಗವಾಗಿ ಹಬ್ಬಿತ್ತು. ಇದರಿಂದ ಮಿಸೌರಿ ಪಟ್ಟಣದ ಜನರು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ಆಗಮಿಸಿದರು. ಅವರು ಸನ್ಯಾಸಿನಿಯ ದೇಹವನ್ನು ಆಶ್ಚರ್ಯದಿಂದ ನೋಡಿದರು. ಜನರು ಅವರ ಪಾದಗಳನ್ನು ಮುಟ್ಟಿ ನಮಿಸಿದರು. ಇಂದಿಗೂ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ಬಳಿಕ ಮತ್ತೆ ಅಂತ್ಯಕ್ರಿಯೆ ನಡೆಯಲಿದೆ. ಇದು ಮಿಸೌರಿಯ ಪವಾಡ ಎಂದು ಆ ಊರಿನವರು ಹೇಳುತ್ತಿದ್ದಾರೆ.

ಅವರ ಶವದ ಬಳಿ ಸೂಚನಾ ಫಲಕವೊಂದನ್ನು ಹಾಕಲಾಗಿದೆ. ಅದರಲ್ಲಿ ‘ಸಹೋದರಿಯ ದೇಹವನ್ನು ವಿಶೇಷವಾಗಿ ಅವರ ಪಾದಗಳನ್ನು ಸ್ಪರ್ಶಿಸುವಲ್ಲಿ ದಯವಿಟ್ಟು ಮೃದುವಾಗಿರಿ’ ಎಂದು ಉಲ್ಲೇಖಿಸಲಾಗಿದೆ.