ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಕಾಂಗ್ರೆಸ್ Archives » Page 3 of 10 » Dynamic Leader
October 17, 2024
Home Posts tagged ಕಾಂಗ್ರೆಸ್ (Page 3)
ರಾಜಕೀಯ

ವರದಿ: ಯೋಗಿತಾ ಲಿಮಾಯೆ, ಶ್ರುತಿ ಮೇನನ್ ಮತ್ತು ಜೇಕ್ ಗುಡ್‌ಮ್ಯಾನ್
ಬಿಬಿಸಿ ನ್ಯೂಸ್
ಕನ್ನಡಕ್ಕೆ: ಡಿ.ಸಿ.ಪ್ರಕಾಶ್

ಅಂಕುರ್ ರಾಣಾ ಅವರು ನಿರ್ವಹಿಸುವ ನೂರಾರು ವಾಟ್ಸಾಪ್ (WhatsApp) ಗುಂಪುಗಳಲ್ಲಿ ಸಂದೇಶಗಳನ್ನು ಕಳುಹಿಸಲು ತಮ್ಮ ಮೊಬೈಲ್ ಫೋನ್‌ನಲ್ಲಿ ಅತ್ಯಂತ ವೇಗವಾಗಿ ‘ಟೈಪ್’ ಮಾಡುತ್ತಾರೆ.

“ನನ್ನ ಬಳಿ 400-450 ವಾಟ್ಸಾಪ್ ಗುಂಪುಗಳಿವೆ. ಪ್ರತಿ ಗುಂಪಿನಲ್ಲಿ ಸುಮಾರು 200-300 ಜನರಿದ್ದಾರೆ. ಇದಲ್ಲದೆ, ನನ್ನ ಬಳಿ ಸುಮಾರು 5,000 ಜನರ ಸಂಪರ್ಕ ಸಂಖ್ಯೆಗಳಿವೆ. ಇವುಗಳ ಮೂಲಕ ನಾನೊಬ್ಬನೇ ದಿನಕ್ಕೆ 10-15,000 ಜನರನ್ನು ತಲುಪಬಲ್ಲೆ,” ಎಂದು ಕಳೆದ ತಿಂಗಳು ಮತದಾನ ನಡೆದ ಪಶ್ಚಿಮ ಉತ್ತರ ಪ್ರದೇಶದ ಮೀರತ್ ಲೋಕಸಭಾ ಕ್ಷೇತ್ರದ ಬಿಜೆಪಿಯ ಸಾಮಾಜಿಕ ಮಾಧ್ಯಮ ಸಂಯೋಜಕ ಅಂಕುರ್ ರಾಣಾ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ, ಅವರ ಸಂದೇಶಗಳು ಲಕ್ಷಾಂತರ ಮತದಾರರನ್ನು ತಲುಪುವುದನ್ನು ಖಾತ್ರಿಪಡಿಸುವ ತಂಡದಲ್ಲಿ ಅವರು ಭಾಗವಾಗಿದ್ದಾರೆ. ಉತ್ತರ ಪ್ರದೇಶವೊಂದರಲ್ಲೇ ಹತ್ತಕ್ಕೂ ಹೆಚ್ಚು ಕ್ಷೇತ್ರಗಳ ವಾಟ್ಸಾಪ್ ಗ್ರೂಪ್‌ಗಳಲ್ಲಿ ಈ ಸಂದೇಶಗಳು ಹರಿದಾಡುತ್ತವೆ.

ಈ ಕಾರ್ಯಗಳು ತುಂಬಾ ಕಷ್ಟವಾದದ್ದು. ಆದರೆ ಬಿಜೆಪಿ ಈ ಲೋಕಸಭೆ ಚುನಾವಣೆಯಲ್ಲಿ 370 ಸ್ಥಾನಗಳ ಗುರಿಯನ್ನು ಸಾಧಿಸಲು ಪ್ರಮುಖ ಮಾರ್ಗಗಳಾಗಿ ವಾಟ್ಸಾಪ್ ಸೇರಿದಂತೆ ಇತರ ಸಂದೇಶ ಮತ್ತು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ಗುರುತಿಸಿಕೊಂಡಿದೆ.

ವಾಟ್ಸಾಪ್ ಅಪ್ಲಿಕೇಶನ್ ಅನ್ನು ಆಯ್ಕೆ ಮಾಡಲು ಉತ್ತಮ ಕಾರಣವೂ ಇದೆ. ಜಾಗತಿಕವಾಗಿ ವಾಟ್ಸಾಪ್ ಗೆ ಭಾರತವು ಪ್ರಮುಖ ಮಾರುಕಟ್ಟೆಯಾಗಿದೆ. ವಾಟ್ಸಾಪ್ ನಲ್ಲಿ ಗಂಟೆಗಟ್ಟಲೆ ಕಳೆಯುವ ಸುಮಾರು 50 ಕೋಟಿ ಬಳಕೆದಾರರಿದ್ದಾರೆ.

ವಾಟ್ಸಾಪ್ ನಲ್ಲಿ ಅವರು ‘ಗುಡ್ ಮಾರ್ನಿಂಗ್’ ನಿಂದ ಎಲ್ಲವನ್ನೂ ಇತರರಿಗೆ ಕಳುಹಿಸುತ್ತಾರೆ. ನಿರ್ದಿಷ್ಟವಾಗಿ, ಅವರು ವಿವಿಧ ಭಾಷೆಗಳಲ್ಲಿ ರಾಜಕೀಯ ಸಂದೇಶಗಳನ್ನು ಕಳುಹಿಸುತ್ತಾರೆ.

ಈ ಚುನಾವಣಾ ಯಂತ್ರದಲ್ಲಿ ಅಂಕುರ್ ಅವರಂತಹ ಕಾರ್ಯಕರ್ತರು, ಬಿಜೆಪಿ ಕುರಿತ ಸುದ್ದಿಗಳು ಎಲ್ಲಾ ವೇದಿಕೆಗಳಲ್ಲಿ ಭಾಗವಹಿಸುವುದನ್ನು ಖಚಿತಪಡಿಸುವ ಬೃಹತ್ ಕಾರ್ಯದಲ್ಲಿ ಸಣ್ಣ ಪಾತ್ರವನ್ನು ವಹಿಸುತ್ತಾರೆ.

ಉತ್ತರ ಪ್ರದೇಶದ ಲೋಕಸಭಾ ಕ್ಷೇತ್ರಗಳಿಗೆ ಸಾಮಾಜಿಕ ಮಾಧ್ಯಮ ಸಂಯೋಜಕರಾಗಿರುವ ಇತರ 10 ಜನರೊಂದಿಗೆ ಬಿಬಿಸಿ ಮಾತನಾಡಿದೆ. ಅವರೆಲ್ಲರೂ ನೂರಕ್ಕೂ ಹೆಚ್ಚು ವಾಟ್ಸಾಪ್ ಗ್ರೂಪ್‌ಗಳನ್ನು ನಿರ್ವಹಿಸುತ್ತಿದ್ದು, ಪ್ರತಿ ಗುಂಪಿನಲ್ಲಿ 200 ರಿಂದ 2,000 ಸದಸ್ಯರಿದ್ದಾರೆ ಎಂದು ಹೇಳಿದ್ದಾರೆ.

ಅಂಕುರ್ ರಾಣಾ

ಸುದ್ದಿ ಎಲ್ಲಿಂದ ಬರುತ್ತದೆ?
ಈ ಕಾರ್ಯವಿಧಾನವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಮೀರತ್‌ನ ಬಿಜೆಪಿ ಕಾರ್ಯಕರ್ತರ ಪ್ರಕಾರ, “ದೆಹಲಿಯ ಪಕ್ಷದ ಪ್ರಧಾನ ಕಚೇರಿಯಿಂದ ಪ್ರತಿದಿನ, ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಹೊಗಳುವುದರಿಂದ ಹಿಡಿದು ವಿರೋಧ ಪಕ್ಷವನ್ನು ಟೀಕಿಸುವವರೆಗೆ ಟ್ರೆಂಡಿಂಗ್ ಮಾಡಬಹುದಾದ ರಾಜಕೀಯ ಸಂದೇಶಗಳು ಮತ್ತು ಹ್ಯಾಶ್‌ಟ್ಯಾಗ್‌ಗಳನ್ನು ರಾಜ್ಯದ ಪಕ್ಷದ ಪ್ರಧಾನ ಕಚೇರಿಗೆ ಕಳುಹಿಸಲಾಗುತ್ತದೆ” ಎಂದು ಹೇಳುತ್ತಾರೆ.

ಅಲ್ಲಿಂದ ಅಂಕುರ್ ಸೇರಿದಂತೆ ಮೀರತ್ ಕ್ಷೇತ್ರದ 180 ಕಾರ್ಯಕರ್ತರಿಗೆ ಸುದ್ದಿ ತಲುಪುತ್ತದೆ. ಅವರು ಸಂದೇಶಗಳನ್ನು ಇನ್ನಷ್ಟು ಆಂತರಿಕ ಮಟ್ಟಕ್ಕೆ ಹರಡುತ್ತಾರೆ. ನಂತರ, ಆ ಸಂದೇಶಗಳು ಮತಗಟ್ಟೆ ಮಟ್ಟದಲ್ಲಿ ಪ್ರಚಾರವನ್ನು ನಿರ್ವಹಿಸುವವರಿಗೆ ತಲುಪುತ್ತವೆ.

ಅದರಲ್ಲೂ ಯುವಕರನ್ನು ತಲುಪುವಲ್ಲಿ ವಾಟ್ಸಾಪ್ ಪರಿಣಾಮಕಾರಿ ಎನ್ನುತ್ತಾರೆ ಅಂಕುರ್. ಸಂಭಾವನೆ ಇಲ್ಲದೆ ಬಿಜೆಪಿಗಾಗಿ ಈ ಕೆಲಸ ಮಾಡುವ ಅಂಕುರ್, ಮುಂಬೈನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕಂಪನಿ ನಡೆಸುತ್ತಿದ್ದಾರೆ. 40 ವರ್ಷ ಮೇಲ್ಪಟ್ಟವರು ಫೇಸ್ ಬುಕ್ ನಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ ಎಂದು ಅವರು ವರದಿ ಮಾಡಿದ್ದಾರೆ.

“ದಿನಕ್ಕೆ ಸರಾಸರಿ 1 ಲಕ್ಷದಿಂದ 1.5 ಲಕ್ಷದವರೆಗೆ ಹೊಸ ಜನರನ್ನು ತಲುಪುವುದು ನಮ್ಮ ಗುರಿಯಾಗಿದೆ” ಎಂದು ಅವರು ಹೇಳುತ್ತಾರೆ.

ಮತದಾರರೊಂದಿಗೆ ನೇರ ಸಂಪರ್ಕ:
ಸಾಮಾಜಿಕ ಮಾಧ್ಯಮಕ್ಕೆ ಸಂಬಂಧಿಸಿದಂತೆ, ಬಿಜೆಪಿಯ ಸಾಮಾಜಿಕ ಮಾಧ್ಯಮ ಪ್ರಚಾರವು ತನ್ನ ಪ್ರತಿಸ್ಪರ್ಧಿಗಳಿಂದ ದೂರ ಸರಿಯುತ್ತಿರುವಂತೆ ತೋರುತ್ತಿದೆ ಎಂಬುದು ತಜ್ಞರು ಅಭಿಪ್ರಾಯವಾಗಿದೆ. ಆದರೆ ವೈಯಕ್ತಿಕ ಸಂಪರ್ಕವಿಲ್ಲದೆ ಇದು ಕೆಲಸ ಮಾಡುವುದಿಲ್ಲ ಎಂದು ಕಾರ್ಯಕರ್ತರು ಹೇಳುತ್ತಾರೆ. ನಿರ್ದಿಷ್ಟವಾಗಿ, ಅವರಿಗೆ ಮೊದಲು ಜನರ ಸಂಪರ್ಕ ಸಂಖ್ಯೆಗಳು ಬೇಕು.

“ಪಕ್ಷದ ಉನ್ನತ ಕಾರ್ಯಕರ್ತನಿಂದ ಹಿಡಿದು ತಳಮಟ್ಟದ ಕಾರ್ಯಕರ್ತರವರೆಗೆ, ಅಧ್ಯಕ್ಷರು ಸೇರಿದಂತೆ ಎಲ್ಲರೂ 60 ಮತದಾರರಿಗೆ ಜವಾಬ್ದಾರರು” ಎಂದು ಮೀರತ್ ಬಳಿಯ ಮತಗಟ್ಟೆಯ ಪ್ರಚಾರ ಉಸ್ತುವಾರಿ ವಿಪಿನ್ ವಿಬಾಲಾ ಹೇಳುತ್ತಾರೆ.

“ನಮಗೆ ಒಪ್ಪಿಸಿದ 60 ಜನರೊಂದಿಗೆ ನಾವು ನಿರಂತರ ನೇರ ಸಂಪರ್ಕದಲ್ಲಿರಬೇಕು. ಬಿಜೆಪಿಗೆ ಮತ ಹಾಕುವಂತೆ ಅವರನ್ನು ಪ್ರೇರೇಪಿಸಬೇಕು. ಅವರ ಮೊಬೈಲ್ ನಂಬರ್ ಪಡೆದು ಮೆಸೇಜ್ ಗ್ರೂಪ್ ಗಳಿಗೆ ಅವರ ಹೆಸರನ್ನು ಸೇರಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ” ಎಂದು ಅವರು ಹೇಳುತ್ತಾರೆ.

ವಿಪಿನ್ ತಮ್ಮ ಅಧೀನದಲ್ಲಿರುವ ಮತದಾರರ ವಾಟ್ಸಾಪ್ ಗ್ರೂಪ್‌ಗೆ ‘ಮಾನವೀಯತೆಯೇ ಜೀವನ’ (Humanity is Life) ಎಂದು ಹೆಸರಿಟ್ಟಿದ್ದಾರೆ. ಅಂತೆಯೇ, ಗುಂಪು ಬಹಿರಂಗವಾಗಿ ರಾಜಕೀಯವಾಗದಂತೆ ನೋಡಿಕೊಳ್ಳುವುದು ಕೂಡ ಈ ಕೆಲಸದ ಭಾಗವಾಗಿದೆ. ಅಂತರ್ಜಾಲ ವಿಷಯದಲ್ಲಿ ಯಾವುದೇ ರೀತಿಯ ಸಂಭಾಷಣೆಯ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿರುವುದು ಅಸಾಧ್ಯವೆಂದು ಎಲ್ಲರಿಗೂ ತಿಳಿದಿದೆ.

ವಿಪಿನ್ ವಿಬಾಲಾ

ವಾಟ್ಸಾಪ್ ನಲ್ಲಿ ಪ್ರತ್ಯೇಕವಾಗಿ ಅಥವಾ ಗುಂಪುಗಳಲ್ಲಿ ಸಂದೇಶಗಳನ್ನು ಕಳುಹಿಸಿದಾಗ, ಏನನ್ನು ಹಂಚಿಕೊಳ್ಳಲಾಗುತ್ತಿದೆ ಮತ್ತು ಸಂದೇಶವು ಮೂಲತಃ ಎಲ್ಲಿಂದ ಬಂದಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವುದು ತುಂಬಾ ಕಷ್ಟವಾಗಿರುತ್ತದೆ.

ಹಂಚಿಕೊಳ್ಳುತ್ತಿರುವ ಸುಳ್ಳು ಸುದ್ದಿಗಳು:
ಕೆಲವು ಗುಂಪುಗಳಲ್ಲಿ; ಬಿಬಿಸಿ ನೋಡಿದ ಹಾಗೆ, ಹಲವು ಬಾರಿ ಹಂಚಿಕೊಂಡಿರುವ ವೈರಲ್ ಸಂದೇಶಗಳಲ್ಲಿ, ಕಾಂಗ್ರೆಸ್ ಪಕ್ಷ ಮುಸ್ಲಿಂ ಅಲ್ಪಸಂಖ್ಯಾತರನ್ನು ಓಲೈಸುತ್ತಿದೆ ಎಂಬ ಸುದ್ದಿಯೇ ಪ್ರಮುಖವಾಗಿದೆ.

ಹಿಂದಿಯಲ್ಲಿರುವ ಆ ಸಂದೇಶದಲ್ಲಿ, “ಕಾಂಗ್ರೆಸ್ ಈಗಾಗಲೇ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಿದೆ. ಅವರು ಅದನ್ನು ಅಧಿಕೃತವಾಗಿ ಘೋಷಿಸಲಿಲ್ಲ,” ಎಂದು ಉಲ್ಲೇಖಿಸಲಾಗಿದೆ. ಕಾಂಗ್ರೆಸ್ ಮುಸ್ಲಿಂ ಸಮುದಾಯದ ಪರವಾಗಿ ನಡೆದುಕೊಳ್ಳುತ್ತಿರುವ 18 ಮಾರ್ಗಗಳನ್ನೂ ವರದಿಯಲ್ಲಿ ಪಟ್ಟಿ ಮಾಡಲಾಗಿದೆ.

ಆ ಸಂದೇಶ ಎಲ್ಲಿಂದ ಬಂತು ಎಂಬುದನ್ನು ಪತ್ತೆಹಚ್ಚುವುದು ಕಷ್ಟ. ಆದರೆ, ಸತ್ಯವೆಂದರೆ, ಇತ್ತೀಚಿನ ವಾರಗಳಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ನಾಯಕತ್ವವು ಮಾಡಿದ ಅಭಿಪ್ರಾಯಗಳನ್ನು ಇದು ಪ್ರತಿಬಿಂಬಿಸುವಂತಿದೆ.

ವಿರೋಧ ಪಕ್ಷ ಅಧಿಕಾರಕ್ಕೆ ಬಂದರೆ ಜನರ ಆಸ್ತಿಯನ್ನು “ನುಸುಳುಕೋರರಿಗೆ” ಕೊಡಲಾಗುವುದು ಎಂದು ಮುಸ್ಲಿಮರನ್ನು ಗುರಿಯಾಗಿಸಿ ಹೇಳುವ ರೀತಿಯಲ್ಲಿ, ಪ್ರಧಾನಿ ಮೋದಿ ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರ ಮೇಲೆ ಆರೋಪ ಹೊರಿಸಲಾಗಿತ್ತು.

ಬಿಜೆಪಿಯ ಅಧಿಕೃತ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಪೋಸ್ಟ್ ಮಾಡಿದ ವೀಡಿಯೊಗಳು ಈ ವಿಷಯವನ್ನು ಪದೇ ಪದೇ ಪುನರುಚ್ಚಿಸಿದಂತೆ ಇದ್ದವು. ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲೂ ಇದನ್ನು ಅಳವಡಿಸಲಾಗಿದೆ ಎಂದು ಬಿಜೆಪಿ ನಾಯಕರು ತಪ್ಪಾಗಿ ಹೇಳಿದರು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಆಸ್ತಿ ಹಂಚಿಕೆ ಅಥವಾ ಮುಸ್ಲಿಮರು ಎಂಬ ಪದವನ್ನು ಎಲ್ಲೂ ಉಲ್ಲೇಖಿಸಿಲ್ಲ.

ರಾಜಕೀಯ ಪಕ್ಷಗಳು ಅಧಿಕೃತವಾಗಿ ಹೇಳುವುದು ಸಾಮಾನ್ಯವಾಗಿ ವಾಟ್ಸಾಪ್ ಗ್ರೂಪ್‌ಗಳಲ್ಲಿ ಪ್ರತಿಫಲಿಸುತ್ತದೆ ಎಂದು ರಟ್ಜರ್ಸ್ ವಿಶ್ವವಿದ್ಯಾಲಯದ (Rutgers University) ಸಹಾಯಕ ಪ್ರಾಧ್ಯಾಪಕ ಕಿರಣ್ ಕರಿಮೆಲ್ಲಾ ಹೇಳುತ್ತಾರೆ. ಆದರೆ ನಂತರ ಯಾವುದು ಅಧಿಕೃತ ಮತ್ತು ಅನಧಿಕೃತ ಎಂಬುದನ್ನು ಆಯ್ಕೆ ಮಾಡುವುದು ಕಷ್ಟ ಎಂದು ಹೇಳಿದ್ದಾರೆ.

“ಇದನ್ನು ಉನ್ನತ ಮಟ್ಟದಿಂದ ನಿಯಂತ್ರಿಸಲಾಗುತ್ತದೆ. ಮೊದಲಿಗೆ ತಾಂತ್ರಿಕ ತಂಡದ (ಬಿಜೆಪಿಯ ಸಾಮಾಜಿಕ ಮಾಧ್ಯಮ ತಂಡ) ಚಟುವಟಿಕೆಗಳು. ತರುವಾಯ, ಶಾಶ್ವತ ಮತ್ತು ಸಂಯೋಜಿತ ವಿಷಯಗಳು. ಆದರೆ, ಈ ಸಂದೇಶಗಳನ್ನು ಹರಡುವಲ್ಲಿ ಸಾಮಾನ್ಯ ಜನರು ತೊಡಗಿಸಿಕೊಂಡಿರುವುದು ಹೊಸ ವಿಷಯವಾಗಿದೆ” ಎಂದು ಅವರು ಹೇಳುತ್ತಾರೆ. ಅಲ್ಲದೆ, ವಾಟ್ಸಾಪ್‌ನ ಸ್ವರೂಪವನ್ನು ಅವಲಂಬಿಸಿ, “ಯಾವುದು ಐಟಿ ತಂಡದಿಂದ ಅಭಿವೃದ್ಧಿಪಡಿಸಿದ್ದು ಮತ್ತು ಯಾವುದು ಸಾಮಾನ್ಯ ಕಾರ್ಯಕರ್ತರಿಂದ ಪ್ರಸಾರವಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟ” ಎಂದೂ ಅವರು ಹೇಳಿದ್ದಾರೆ.

ಅಲ್ಲದೆ, ಅಂತಹ ಸುದ್ದಿಗಳು ಒಂದು ನಿರ್ದಿಷ್ಟ (ಸಾಮಾಜಿಕ) ಮಾಧ್ಯಮದಲ್ಲಿ ಹುಟ್ಟಿಕೊಂಡು ನಂತರ ಎಲ್ಲಾ ಸಾಮಾಜಿಕ ಮಾಧ್ಯಮಗಳಿಗೆ ಹರಡುವುದರಿಂದ, ಜನರು ತಾವು ನೋಡುತ್ತಿರುವುದನ್ನು ನಿಜವೆಂದು ನಂಬಿಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.

ಕೃಪೆ:ಬಿಬಿಸಿ

ದೇಶ

ಡಿ.ಸಿ.ಪ್ರಕಾಶ್

ಅದಾನಿ ಗ್ರೂಪ್ ವಿರುದ್ಧ ಸುಳ್ಳು ಆರೋಪ ಮಾಡಿದ್ದಕ್ಕಾಗಿ ದೆಹಲಿ ಹೈಕೋರ್ಟ್‌ನಲ್ಲಿ ಮೋದಿ ವಿರುದ್ಧ ಕೇಸ್!

ಗುಜರಾತ್‌ನ ಅದಾನಿ ಮತ್ತು ಮೋದಿ ಅವರು ವಿಮಾನದಲ್ಲಿ ಪ್ರತ್ಯೇಕವಾಗಿ ಹಾರುವ ಮಟ್ಟಿಗೆ ಸ್ನೇಹಿತರು. ಭಾರತದಲ್ಲಿ ಸರ್ವಾಧಿಕಾರವನ್ನು ಮತ್ತು ಬಂಡವಾಳಶಾಹಿಯನ್ನು ಸ್ಥಾಪಿಸಲು ಕಠಿಣವಾಗಿ ಶ್ರಮಿಸುವವರು.

ಹೀಗಾಗಿ, ಕಳೆದ 10 ವರ್ಷಗಳ ಮೋದಿ ಆಡಳಿತದಲ್ಲಿ ಅದಾನಿ ಬಗ್ಗೆ ಪ್ರಶ್ನೆ ಎತ್ತಿದರೆ ಅಧಿಕಾರ ಕಳೆದುಕೊಳ್ಳುವ ಮತ್ತು ವಿಶ್ವ ಮಾಧ್ಯಮಗಳು ಮತ್ತು ಸಂಘಟನೆಗಳು ಅದಾನಿ ಸಮೂಹವನ್ನು ಟೀಕಿಸಿದರೂ ಕೇಂದ್ರ ಬಿಜೆಪಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬ ಪರಿಸ್ಥಿತಿಯೇ ಮುಂದುವರೆದಿದೆ.

ಹೀಗಿರುವಾಗ ಕಳೆದ 10 ವರ್ಷಗಳಲ್ಲಿ ಕೇಂದ್ರ ಬಿಜೆಪಿ ಸರಕಾರ ನಡೆಸಿದ ಸರ್ವಾಧಿಕಾರ ಹಾಗೂ ಅದಾನಿ ಸಮೂಹದ ಬಂಡವಾಳಶಾಹಿ ಚಟುವಟಿಕೆಗಳಿಂದಾಗಿ, ಬಿಜೆಪಿ ಮತ್ತು ಅದಾನಿ ಗ್ರೂಪ್ ಎರಡೂ ಜನರು ಮತ್ತು ಹೂಡಿಕೆದಾರರಲ್ಲಿ ತೀವ್ರ ಅಸಮಾಧಾನವನ್ನು ಗಳಿಸಿವೆ.

ಇದರಿಂದ ಮೋದಿಯ ವರ್ಚಸ್ಸು ಕಡಿಮೆಯಾಗಿದ್ದು, ಬಿಜೆಪಿಯ ಬಹುಪಾಲು ಸಾರ್ವಜನಿಕ ಸಭೆಗಳು ಜನ ಸೇರದೆ ಬಿಕೋ ಎನ್ನುತ್ತಿದೆ. ಜನ ಸೇರದ ಸಾರ್ವಜನಿಕ ಸಭೆಗಳಲ್ಲಿ ಬಿಜೆಪಿಯ ಹಿರಿಯ ನಾಯಕರಾದ ಮೋದಿ, ಅಮಿತ್ ಶಾ ಮತ್ತು ನಡ್ಡಾ ಮುಂತಾದ ಹಿರಿಯ ನಾಯಕರುಗಳು ಸುಳ್ಳು ಮತ್ತು ದ್ವೇಷವನ್ನು ಉಗುಳುತ್ತಿದ್ದಾರೆ.

ಜನ ಸೇರದ ಸಭೆಗಳಲ್ಲಿ ಮಾತನಾಡಿದರೆ ಜನರ ಗಮನಕ್ಕೆ ಬರುವುದಿಲ್ಲ ಎಂಬುದನ್ನು ಅರಿತ ಮೋದಿ, ಅದಾನಿ-ಅಂಬಾನಿಯಂತಹ ಬಂಡವಾಳಶಾಹಿಗಳು ವೈಫಲ್ಯದ ಭೀತಿಯಿಂದ ಟೆಂಪೋಗಳಲ್ಲಿ ಕಪ್ಪುಹಣ ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿ ಟಿಕೆಗೆ ಗುರಿಯಾಗಿದ್ದರು.

ಇದರಿಂದಾಗಿ ತೀವ್ರ ಅಸಮಧಾನಕ್ಕೆ ಒಳಗಾದ ಅದಾನಿ ಸಮೂಹ, ಅಲ್ಲಿಯವರೆಗೆ ಬಿಜೆಪಿಗೆ ನಿಷ್ಠರಾಗಿ ಕೆಲಸ ಮಾಡುವುದನ್ನು ನಿಲ್ಲಿಸಿ, ಪಶ್ಚಿಮ ಬಂಗಾಳದ ಸಂದೇಶ್ ಖಾಲಿ ವಿಷಯದಲ್ಲಿ ಬಿಜೆಪಿಯ ನಾಟಕವನ್ನು ಬಹಿರಂಗ ಪಡಿಸಿತು.

ಅದಾದ ನಂತರವೂ ಅದಾನಿ ಗ್ರೂಪ್ ಪಡೆದ ಹೂಡಿಕೆಯಲ್ಲಿನ ಕುಸಿತ ಹಾಗೂ ಬಿಜೆಪಿಯ ಅಧಿಕಾರ ಕುಸಿತದಿಂದಾಗಿ ಅದಾನಿ ಗ್ರೂಪ್ ನೇರವಾಗಿ ಮೋದಿ ವಿರುದ್ಧವೇ ದೆಹಲಿ ಹೈಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದೆ.

ಅದಕ್ಕೆ ಅದಾನಿ ಗ್ರೂಪ್ ನೀಡಿರುವ ಕಾರಣ, ‘ಯಾವುದೇ ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಮೋದಿ ಮಾತನಾಡಿದ್ದಾರೆ. ಇದಕ್ಕಾದ ನ್ಯಾಯವನ್ನು ಅದಾನಿ ಗ್ರೂಪ್‌ ಪಡೆಯಬೇಕು’ ಎಂಬುದಾಗಿದೆ.

ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ, ‘ಅದಾನಿ ಹಗರಣದ ಬಗ್ಗೆ ಸ್ವತಃ ಮೋದಿಯೇ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಂತಹ ತನಿಖಾ ಸಂಸ್ಥೆಗಳು ಈ ವಿಷಯದಲ್ಲಿ ಸೂಕ್ತ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ.

ಇದರಿಂದ ಜಾಗತಿಕ ಹೂಡಿಕೆದಾರರಲ್ಲಿ ಗೊಂದಲ ಮೂಡಿದ್ದು ಮಾತ್ರವಲ್ಲದೆ ಕೇಂದ್ರ ಬಿಜೆಪಿ ಸರಕಾರ ಮಾಡಿರುವ ಹಲವು ಆರ್ಥಿಕ ಭ್ರಷ್ಟಾಚಾರಗಳು ಜನರಲ್ಲಿ ಬಯಲಾಗಿದೆ.

ರಾಜಕೀಯ

ಚಂಡೀಗಢ: ಚುನಾವಣಾ ಪ್ರಚಾರಕ್ಕೆ ಹರಿಯಾಣಕ್ಕೆ ತೆರಳಿದ್ದ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಟೆಂಪೋದಲ್ಲಿ ಪ್ರಯಾಣಿಸಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

“ಅದಾನಿ, ಅಂಬಾನಿ ಬಗ್ಗೆ ಮಾತನಾಡುವುದನ್ನು ತಪ್ಪಿಸಲು ಕಾಂಗ್ರೆಸ್ ಟೆಂಪೋದಲ್ಲಿ ಹಣ ತೆಗೆದುಕೊಂಡಿದೆ” ಎಂದು ಪ್ರಧಾನಿ ಮೋದಿ ಟೀಕಿಸಿದ್ದರು. ಇದಕ್ಕೆ, “ಕಾಂಗ್ರೆಸ್ ಟೆಂಪೋದಲ್ಲಿ ಹಣ ಖರೀದಿಸಿದ್ದು ಪ್ರಧಾನಿ ಮೋದಿಗೆ ಹೇಗೆ ಗೊತ್ತು? ಹಿಂದಿನ ಅನುಭವ ಏನಾದರು ಇದೆಯಾ? ಕಾಂಗ್ರೆಸ್ ಹಣ ಪಡೆದಿದ್ದರೆ ಜಾರಿ ನಿರ್ದೇಶನಾಲಯ, ಸಿಬಿಐ, ಆದಾಯ ತೆರಿಗೆ ಇಲಾಖೆ ಸೇರಿದಂತೆ ತನಿಖಾ ಸಂಸ್ಥೆಗಳನ್ನು ಕಳುಹಿಸಿ ತನಿಖೆ ನಡೆಸಲಿ” ಎಂದು ರಾಹುಲ್ ಉತ್ತರಿಸಿದ್ದರು.

ಈ ಹಿನ್ನೆಲೆಯಲ್ಲಿ, ಚುನಾವಣಾ ಪ್ರಚಾರಕ್ಕಾಗಿ ಹರಿಯಾಣ ರಾಜ್ಯಕ್ಕೆ ತೆರಳಿದ್ದ ರಾಹುಲ್ ಟೆಂಪೋದಲ್ಲಿ ಪ್ರಯಾಣಿಸಿದರು. ಟೆಂಪೋದಲ್ಲಿ 5ಕ್ಕೂ ಹೆಚ್ಚು ಜನರೊಂದಿಗೆ ರಾಹುಲ್ ಸಂವಾದ ನಡೆಸುತ್ತಿರುವ ಫೋಟೋಗಳನ್ನು ಕಾಂಗ್ರೆಸ್ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಅಲ್ಲದೆ, “ಮೋದಿಯವರ ಟೆಂಪೋ ಅನ್ಯಾಯವಾದದ್ದು; ನಮ್ಮ ಟೆಂಪೋ ನ್ಯಾಯೋಚಿತವಾದದ್ದು” ಎಂದು ಕಾಂಗ್ರೆಸ್ ಹೇಳಿದೆ.

ರಾಜಕೀಯ

ಉತ್ತರ ಪ್ರದೇಶದಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಜನರು ವ್ಯಕ್ತಪಡಿಸುತ್ತಿರುವ ಜನ ಬೆಂಬಲವನ್ನು ತೋರಿಸುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.
https://x.com/i/status/1792125814118785335

ದೇಶಾದ್ಯಂತ 7 ಹಂತದ ಚುನಾವಣೆಯ ಪೈಕಿ 4 ಹಂತಗಳು ಪೂರ್ಣಗೊಂಡಿವೆ. ನಾಳೆ (ಮೇ 20) 5ನೇ ಹಂತದ ಚುನಾವಣೆ ನಡೆದರೆ, 6ನೇ ಹಂತದ ಚುನಾವಣೆ ಮೇ 25 ರಂದು ನಡೆಯಲಿದೆ. 5ನೇ ಹಂತದ ಕ್ಷೇತ್ರಗಳ ಚುನಾವಣಾ ಪ್ರಚಾರ ನಿನ್ನೆ ಪೂರ್ಣಗೊಂಡಿದ್ದರೆ, ಉಳಿದ ಕ್ಷೇತ್ರಗಳಲ್ಲಿ ಎಲ್ಲಾ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ತೊಡಗಿವೆ.
https://x.com/i/status/1792125814118785335

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಇಂಡಿಯಾ ಮೈತ್ರಿಕೂಟದ ಪರವಾಗಿ ಸ್ಪರ್ಧಿಸುತ್ತಿವೆ. ಹೀಗಾಗಿ ಉತ್ತರಪ್ರದೇಶದಲ್ಲಿ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಒಟ್ಟಿಗೆ ಪ್ರಚಾರ ಮಾಡುತ್ತಿದ್ದಾರೆ. ಅದರಂತೆ, ರಾಹುಲ್ ಗಾಂಧಿ ಮತ್ತು ಅಖಿಲೇಶ್ ಉತ್ತರಪ್ರದೇಶದ ಪ್ರಯಾಗರಾಜ್ ಬಳಿ ಇರುವ ಫುಲ್ಪುರ್ ಲೋಕಸಭಾ ಕ್ಷೇತ್ರದಲ್ಲಿ ಜಂಟಿಯಾಗಿ ಪ್ರಚಾರ ನಡೆಸಿದರು.
https://x.com/i/status/1792152028283535798

ಆ ವೇಳೆ 4 ಲಕ್ಷಕ್ಕೂ ಹೆಚ್ಚು ಜನ ಅಲ್ಲಿ ನೆರೆದಿದ್ದರು. ಪ್ರತಿಯೊಬ್ಬರ ಕೈಯಲ್ಲೂ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ಧ್ವಜ ಮತ್ತು ಅಂಬೇಡ್ಕರ್ ಅವರ ಭಾವಚಿತ್ರವಿರುವ ಬ್ಯಾನರ್ ಇತ್ತು. ಎಲ್ಲರೂ ತಮ್ಮ ತಮ್ಮ ಘೋಷಣೆಗಳನ್ನು ಎತ್ತಿದರು. ಒಂದು ಹಂತದಲ್ಲಿ ಬ್ಯಾರಿಕೇಡ್‌ಗಳನ್ನು ದಾಟಿ ರಾಹುಲ್ ಮತ್ತು ಅಖಿಲೇಶ್ ಅವರನ್ನು ನೋಡಲು ಪ್ರೇಕ್ಷಕರು ವೇದಿಕೆಯತ್ತ ನುಗ್ಗಿದರು.

ಇದರಿಂದ ರಾಹುಲ್ ಗಾಂಧಿ ತಮ್ಮ ಭಾಷಣವನ್ನು ಬೇಗ ಮುಗಿಸುವಂತಾಯಿತು. ಆದಾಗ್ಯೂ ಸಂವಿಧಾನವನ್ನು ರಕ್ಷಿಸಲು ಜನರು ಧ್ವನಿ ಎತ್ತಲು ಪ್ರಾರಂಭಿಸಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ. ದಕ್ಷಿಣ ಮತ್ತು ಈಶಾನ್ಯ ಮಾತ್ರವಲ್ಲದೆ ಉತ್ತರದಲ್ಲೂ ಬಿಜೆಪಿಯ ನಕಲಿ ಮುಖವಾಡವನ್ನು ಜನರು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ಇಂಡಿಯಾ ಮೈತ್ರಿಕೂಟಕ್ಕೆ ಜನಬೆಂಬಲ, ಅದೂ ಕೂಡ ಬಿಜೆಪಿ ಆಡಳಿತವಿರುವ ಉತ್ತರಪ್ರದೇಶದಲ್ಲಿ ಜನಸಮೂಹವು ಸಾಗರದಂತೆ ಹರಿದುಬಂದಿದೆ.
https://x.com/i/status/1792152028283535798

ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಅನೇಕರಿಂದ ಕಾಮೆಂಟ್‌ಗಳನ್ನು ಪಡೆಯುತ್ತಿದೆ. ಇಂಡಿಯಾ ಮೈತ್ರಿಕೂಟಕ್ಕೆ ಜನಬೆಂಬಲ ಹೆಚ್ಚುತ್ತಿದ್ದು, ಮೋದಿ, ಅಮಿತ್ ಶಾ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಬಿಜೆಪಿ ಸದಸ್ಯರು ಆಘಾತಕ್ಕೆ ಒಳಗಾಗಿದ್ದಾರೆ.

ರಾಜಕೀಯ

ಬುಲ್ಡೋಜರ್‌ಗಳನ್ನು ಎಲ್ಲಿ ಬಳಸಬೇಕು ಮತ್ತು ಎಲ್ಲಿ ಬಳಸಬಾರದು ಎಂಬುದನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಕಲಿಯಬೇಕು ಎಂದು ಪ್ರಧಾನಿ ಮೋದಿ ಹೇಳಿದರು.

ಲಕ್ನೋ,
ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಗೆದ್ದು ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿ ರಾಮಮಂದಿರವನ್ನು ಬುಲ್ಡೋಜರ್‌ ಮೂಲಕ ಕೆಡವುತ್ತಾರೆ. ಬಾಲರಾಮ, ದೇವಸ್ಥಾನದಿಂದ ಗುಡಾರಕ್ಕೆ ಹಿಂತಿರುಗುತ್ತಾರೆ.

ಬುಲ್ಡೋಜರ್‌ಗಳನ್ನು ಎಲ್ಲಿ ಬಳಸಬೇಕು ಮತ್ತು ಎಲ್ಲಿ ಬಳಸಬಾರದು ಎಂಬ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ತರಬೇತಿ ಪಡೆಯಬೇಕು. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ದೇಶದ ಪ್ರಗತಿಗೆ ಶ್ರಮಿಸುತ್ತಿದೆ. ಇನ್ನೊಂದೆಡೆ ಇಂಡಿಯಾ ಮೈತ್ರಿಕೂಟ ಗೊಂದಲಗಳನ್ನು ಸೃಷ್ಟಿಸುತ್ತಿದೆ. ಚುನಾವಣೆಯಲ್ಲಿ ಗೆಲ್ಲುವ ಮೂಲಕ ಮೋದಿ ಸರ್ಕಾರ ಹ್ಯಾಟ್ರಿಕ್ ಸಾಧನೆ ಮಾಡಲಿದೆ.” ಎಂದು ಹೇಳಿದರು.

ರಾಜಕೀಯ

ಈ ವಿಡಿಯೋ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದು ಮಾತ್ರವಲ್ಲ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ 1989ರ ಅಡಿಯಲ್ಲಿ ಅಪರಾಧವೂ ಆಗಿದೆ!

ಕರ್ನಾಟಕ ಬಿಜೆಪಿಯ ಅಧಿಕೃತ ಎಕ್ಸ್ ಪೇಜ್ ನಲ್ಲಿ ಅನಿಮೇಟೆಡ್ ವಿಡಿಯೋವೊಂದನ್ನು ಹಾಕಲಾಗಿದೆ. ಆ ಅನಿಮೇಟೆಡ್ ವಿಡಿಯೋದಲ್ಲಿ, SC, ST ಮತ್ತು ಹಿಂದುಳಿದ ವರ್ಗಗಳನ್ನು (OBC) ಒಂದು ಬುಟ್ಟಿಯಲ್ಲಿ “ಮೊಟ್ಟೆ”ಯಂತೆ ಚಿತ್ರಿಸಲಾಗಿದೆ. ಇದು ಮೀಸಲಾತಿಯನ್ನು ಸೂಚಿಸುತ್ತದೆ. ಈ ಮೀಸಲಾತಿ ಬುಟ್ಟಿಗೆ ರಾಹುಲ್ ಗಾಂಧಿ ಮುಸ್ಲಿಂ ಸಮುದಾಯದ ಮತ್ತೊಂದು ದೊಡ್ಡ ಸೈಜಿನ “ಮೊಟ್ಟೆ”ಯನ್ನು ತಂದು ಹಾಕುತ್ತಾರೆ. ಕಾಂಗ್ರೆಸ್ ನಾಯಕರು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗಿಂತ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಅನುದಾನವನ್ನು ನೀಡುತ್ತಿದ್ದು, ಮತ್ತು ಅವರ ಮೀಸಲಾತಿ ಕೋಟಾವನ್ನು ಸಹ ಮುಸ್ಲಿಮರಿಗೆ ನೀಡುತ್ತಿದ್ದಾರೆ ಎಂಬಂತೆ ಬಿಂಬಿಸಲಾಗಿದೆ.

ಕರ್ನಾಟಕ ಬಿಜೆಪಿಯು ತಮ್ಮ ಅಧಿಕೃತ ಎಕ್ಸ್ ಪೇಜ್ ನಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಮತ್ತು ಧಾರ್ಮಿಕ ಸಂಘರ್ಷವನ್ನು ಸೃಷ್ಟಿಸುವ ಸಲುವಾಗಿ, ಅನಿಮೇಟೆಡ್ ವಿಡಿಯೋವನ್ನು ಪ್ರಕಟಿಸಿದ್ದಕ್ಕಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಬಿಜೆಪಿ ಸಾಮಾಜಿಕ ಮಾಧ್ಯಮ ಉಸ್ತುವಾರಿ ಅಮಿತ್ ಮಾಳವೀಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತು.

ಈ ವಿಡಿಯೋ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದು ಮಾತ್ರವಲ್ಲದೆ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ 1989ರ ಅಡಿಯಲ್ಲಿ ಅಪರಾಧವೂ ಆಗಿದೆ ಎಂದೂ ಕಾಂಗ್ರೆಸ್ ಪಕ್ಷ ಪ್ರತಿಪಾದಿಸಿತು. ಇದರ ಬೆನ್ನಲ್ಲೇ ಬೆಂಗಳೂರು ಪೊಲೀಸರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಬಿಜೆಪಿ ಸಾಮಾಜಿಕ ಜಾಲತಾಣ ಉಸ್ತುವಾರಿ ಅಮಿತ್ ಮಾಳವೀಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಮತೀಯ ಘರ್ಷಣೆ ಹಾಗೂ ದ್ವೇಷ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಹಿನ್ನಲೆಯಲ್ಲಿ, ಕರ್ನಾಟಕ ಬಿಜೆಪಿಯ ಎಕ್ಸ್ ಪೇಜ್ ನಲ್ಲಿ ಮುಸ್ಲಿಮರ ಬಗ್ಗೆ ಪ್ರಕಟಿಸಿರುವ ಅನಿಮೇಟೆಡ್ ವಿಡಿಯೋವನ್ನು ತಕ್ಷಣ ತೆಗೆದು ಹಾಕುವಂತೆ ಚುನಾವಣಾ ಆಯೋಗ ಎಕ್ಸ್ ಜಾಲತಾಣ ಕಂಪನಿಗೆ ಸೂಚಿಸಿದೆ.

ರಾಜಕೀಯ

ರಾಯ್‌ ಬರೇಲಿ (ಯುಪಿ): ದೇಶದ್ರೋಹಿ (Traitors) ಎಂದು ಕರೆಯುವ ಸರ್ಕಾರ ದೇಶದಲ್ಲಿ ಸ್ಥಾಪನೆಯಾಗುತ್ತದೆ ಎಂದು ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರು ಅವರು ಊಹಿಸಿರಲಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ಬೇಸರ ವ್ಯಕ್ತಪಡಿಸಿದರು.

ಪ್ರಚಾರದ ಹಾದಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾಷೆಯ ಬಗ್ಗೆಯೂ ಅವರು ವಾಗ್ದಾಳಿ ನಡೆಸಿದರು.

ರಾಯ್ ಬರೇಲಿ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ”ಮಹಾತ್ಮ ಗಾಂಧಿ, ಪಂಡಿತ್ ಜವಾಹರಲಾಲ್ ನೆಹರು ಮುಂತಾದವರು ಜನರ ಹಕ್ಕುಗಳನ್ನು ಬಲಪಡಿಸಲು ಚಳುವಳಿಗಳನ್ನು ಕೈಗೊಂಡರು. ಅವರನ್ನು ದೇಶದ್ರೋಹಿಗಳೆಂದು ಕರೆದು (ಜನರಿಗೆ) ‘ನೀವು ನಮಗೆ 400 ಸ್ಥಾನಗಳನ್ನು ನೀಡಿದರೆ, ನಾವು ಸಂವಿಧಾನವನ್ನು ಬದಲಾಯಿಸುತ್ತೇವೆ’ ಎಂದು ಹೇಳುವ ಸರ್ಕಾರ ಬರುತ್ತದೆ ಎಂದು ಅವರು ಎಂದಿಗೂ ಊಹಿಸಿರಲಿಲ್ಲ” ಎಂದು ಹೇಳಿದರು.

ರಾಜಕೀಯ

7 ಹಂತದ ಲೋಕಸಭೆ ಚುನಾವಣೆಯ ಮೊದಲ ಎರಡು ಹಂತಗಳು ಮುಗಿದಿವೆ. ಮೂರನೇ ಹಂತದ ಚುನಾವಣೆಗೆ ನಾಳೆ ಮತದಾನ ನಡೆಯಲಿದೆ. ಈ ಹಿನ್ನಲೆಯಲ್ಲಿ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಸಂಸತ್ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು.

ಆಗ ಮಾತನಾಡಿದ ರಾಹುಲ್ ಗಾಂಧಿ, “ಮೀಸಲಾತಿಯನ್ನು ತೆಗೆದುಹಾಕಲು ಮತ್ತು ಸಂವಿಧಾನವನ್ನು ಬದಲಾಯಿಸಲು ಬಯಸುತ್ತಿರುವ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಬಯಸುತ್ತಿದೆ. ಆದರೆ ಅವರಿಗೆ 150 ಸೀಟುಗಳೂ ಸಿಗುವುದಿಲ್ಲ.

ಇಂಡಿಯಾ ಮೈತ್ರಿಕೂಟ ಸರ್ಕಾರದ ನಂತರ ನಾವು ಮೀಸಲಾತಿಯನ್ನು ರಕ್ಷಿಸುವುದಲ್ಲದೆ ಜನರಿಗೆ ಅಗತ್ಯ ಮೀಸಲಾತಿಯನ್ನು ನೀಡುತ್ತೇವೆ. ಸಂವಿಧಾನ, ಜನರ ಹಕ್ಕು, ಮೀಸಲಾತಿ ಇತ್ಯಾದಿಗಳನ್ನು ಉಳಿಸಲು ಈ ಚುನಾವಣೆಯಲ್ಲಿ ಹೋರಾಟ ನಡೆಸುತ್ತಿದ್ದೇವೆ.

ಆದಿವಾಸಿಗಳು, ದಲಿತರು ಮತ್ತು ಹಿಂದುಳಿದವರಂತಹ ದೇಶದ ಜನರಿಗೆ ಏನೆಲ್ಲಾ ಹಕ್ಕುಗಳು ಸಿಕ್ಕಿವೆಯೋ ಅದು ಸಂವಿಧಾನದ ಮೂಲಕ ಮಾತ್ರ. ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುವ ಭರವಸೆಯನ್ನು ಈಡೇರಿಸುವಲ್ಲಿ ಪ್ರಧಾನಿ ಮೋದಿ ವಿಫಲರಾಗಿದ್ದಾರೆ. ಇದರಿಂದ ದೇಶದಲ್ಲಿ ನಿರುದ್ಯೋಗ ಪ್ರಮಾಣ 45 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿದೆ” ಎಂದರು.

ಲೇಖನ

ಡಿ.ಸಿ.ಪ್ರಕಾಶ್ ಸಂಪಾದಕರು

‘ಮೋದಿ ಕುಟುಂಬ, ಮೋದಿ ಕುಟುಂಬ’ ಎಂಬ ಘೋಷವಾಕ್ಯವನ್ನು ಮೋದಿ ಹೊರತುಪಡಿಸಿ ಉಳಿದೆಲ್ಲ ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಮೋದಿಯವರ ಕುಟುಂಬದಲ್ಲಿ ಭ್ರಷ್ಟರನ್ನು ಮುಕ್ತಗೊಳಿಸುವುದು ಬಹಿರಂಗವಾದಂತೆ ಇದೀಗ ಲೈಂಗಿಕ ದೌರ್ಜನ್ಯ ಎಸಗಿದ ದುಷ್ಕರ್ಮಿಗಳು ಕೂಡಾ ಸ್ವಚ್ಛಂದವಾಗಿ ಓಡಾಡುತ್ತಿರುವುದು ಬಹಿರಂಗವಾಗಿದೆ! ಬಿಜೆಪಿ ಕೇವಲ ಪಕ್ಷಮಾತ್ರವಲ್ಲ, ಅಪರಾಧಗಳನ್ನು ತೊಳೆಯುವ (Washing Machine) ಯಂತ್ರವೂ ಹೌದು ಎಂದು ಕಾಂಗ್ರೆಸ್ ವ್ಯಂಗ್ಯವಾಡುತ್ತಿದೆ.

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಜಿಂದಾಲ್, ಸುವೇಂದು ಅಧಿಕಾರಿ ಮುಂತಾದ ಅಸಂಖ್ಯಾತರ ಮೇಲಿದ್ದ ಅಪರಾಧಗಳನ್ನು ಬಿಜೆಪಿ ಹೇಗೆ ತೆಗೆದುಹಾಕಿತು ಎಂಬುದನ್ನು ಇಂಡಿಯನ್ ಎಕ್ಸ್‌ಪ್ರೆಸ್ (Indian Express) ಗ್ರೂಪ್‌ನ ಮಾಹಿತಿ ದೃಢಪಡಿಸಿದೆ. ಅದರಲ್ಲಿ, ವಿರೋಧ ಪಕ್ಷದಿಂದ ಬಿಜೆಪಿಗೆ ಬಲವಂತವಾಗಿ ಎಳೆದ 25 ಜನರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳಲ್ಲಿ 3 ಪ್ರಕರಣಗಳನ್ನು ಶಿಕ್ಷೆಯಿಲ್ಲದೆ ಮುಚ್ಚಲಾಯಿತು ಮತ್ತು 20 ಪ್ರಕರಣಗಳನ್ನು ಕೇಂದ್ರ ಬಿಜೆಪಿ ಸರ್ಕಾರವು ಸ್ಥಗಿತಗೊಳಿಸಿದೆ ಎಂದು ಸ್ಪಷ್ಟಪಡಿಸಿದೆ.

ಈ ಹಿನ್ನಲೆಯಲ್ಲಿ, ಬಿಜೆಪಿ ಅಭ್ಯರ್ಥಿಗಳು, ಎನ್‌ಡಿಎ ಮೈತ್ರಿ ಪಕ್ಷದ ಅಭ್ಯರ್ಥಿಗಳು ಹಾಗೂ ಕೇಂದ್ರ ಬಿಜೆಪಿಯಿಂದ ನೇಮಕಗೊಂಡಿರುವ ರಾಜ್ಯಪಾಲರ ದೌರ್ಜನ್ಯಗಳಿಂದ ಬಿಜೆಪಿ ಭ್ರಷ್ಟಾಚಾರ ಮಾತ್ರವಲ್ಲ ಲೈಂಗಿಕ ಅಪರಾಧಿಗಳ ಡೇರೆಯೂ ಆಗಿದೆ ಎಂಬ ಮಾಹಿತಿ ಬಯಲಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ವಿಷಯ ತಿಳಿದಿದ್ದರೂ ಮೋದಿ ಅವರ ಪರ ಮತ ಸಂಗ್ರಹಿಸಿದರು.

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಬ್ರಿಜ್ ಭೂಷಣ್ ಪುತ್ರ ಕರಣ್ ಭೂಷಣ್‌ಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದಾರೆ. ಕರಣ್ ಭೂಷಣ್ ಮಾತ್ರವಲ್ಲ, ಬಿಜೆಪಿಯ ಸುಮಾರು 44 ಹಾಲಿ ಸಂಸದರ ಮೇಲೂ ಮಹಿಳೆಯರ ವಿರುದ್ಧ ಪ್ರಕರಣಗಳಿವೆ.

ಬಿಜೆಪಿ ಕಾರ್ಯಕಾರಿಣಿಗಳಷ್ಟೇ ಅಲ್ಲ, ಕೇಂದ್ರ ಬಿಜೆಪಿ ಸರ್ಕಾರದಿಂದ ನಾಮನಿರ್ದೇಶನಗೊಂಡ ರಾಜ್ಯಪಾಲರುಗಳು ಕೂಡ ಲೈಂಗಿಕ ಅಪರಾಧಿಗಳಾಗಿದ್ದಾರೆ ಎಂಬುದಕ್ಕೆ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರು ರಾಜಭವನದ ಉದ್ಯೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣವೇ ಸಾಕ್ಷಿಯಾಗಿದೆ. ಈ ಹಿನ್ನಲೆಯಲ್ಲಿ, ಬಿಜೆಪಿಯಿಂದ ಲೈಂಗಿಕ ವ್ಯಸನಿಗಳು ಅಧಿಕಾರದಲ್ಲಿದ್ದರೆ, ದೇಶದಲ್ಲೂ ಮಹಿಳೆಯರ ಮೇಲಿನ ಅಪರಾಧಗಳು ಹೆಚ್ಚಾಗುತ್ತವೆ ಎಂಬ ಅಂಶಕ್ಕೆ ಅನುಗುಣವಾಗಿ,

2022ರ ರಾಷ್ಟ್ರೀಯ ಅಪರಾಧ ಸೂಚ್ಯಂಕದ ಪ್ರಕಾರ, *2014ಕ್ಕೆ ಹೋಲಿಸಿದರೆ 2022ರಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ಸುಮಾರು 31%ರಷ್ಟು ಹೆಚ್ಚಾಗಿದೆ. ಅಂದರೆ 2022ರಲ್ಲಿ ಕೇಂದ್ರ ಸಚಿವಾಲಯದ ಮಾಹಿತಿ ಪ್ರಕಾರ ಮಹಿಳೆಯರ ಮೇಲಿನ ಅಪರಾಧಗಳಿಗೆ ಸಂಬಂಧಿಸಿದಂತೆ 4,45,256 ಪ್ರಕರಣಗಳು ದಾಖಲಾಗಿವೆ* ಎಂದು ತಿಳಿದು ಬಂದಿದೆ.

ಆದಾಗ್ಯೂ, ಇದನ್ನೆಲ್ಲ ನೋಡುತ್ತಿರುವ ಮೋದಿಯವರು ಇಂಥದ್ದೇನೂ ಆಗದಂತೆ ಮೌನವಾಗಿ ಇದ್ದಾರೆ. ಆದರೆ, ಅವರು ಮೌನ ಮುರಿಯುತ್ತಿರುವುದು ಕೇವಲ ಮುಸ್ಲಿಮರನ್ನು ದೂಷಿಸಲು ಮತ್ತು ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಹೊರಿಸಲು ಮಾತ್ರವೇ. ಇದು ಪ್ರಜಾಪ್ರಭುತ್ವಕ್ಕೆ ಮತ್ತೊಂದು ಅಪಾಯವಾಗಿದೆ.

ಈ ಹಿನ್ನಲೆಯಲ್ಲಿ, ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದಿರುವ ಬಿಜೆಪಿಗೆ ಅಪಾಯ ಎಂಬಂತೆ ‘ಇಂಡಿಯಾ’ ಮೈತ್ರಿಕೂಟ ಬಲಗೊಳ್ಳುತ್ತಿರುವುದು ಬಿಜೆಪಿಗೆ ಭಾರೀ ಹಿನ್ನಡೆ ತಂದಿದೆ. ಹೀಗಾಗಿ, ಅತಾಶೆಯಲ್ಲಿರುವ ಬಿಜೆಪಿ ಸೋಲಿನ ಭಯದಿಂದ, ನಾವು ಏನು ಮಾತನಾಡುತ್ತಿದ್ದೇವೆ ಎಂದು ತಿಳಿಯದೆ, ನಾವು ಯಾವ ರೀತಿಯ ಪೋಸ್ಟ್ ಮಾಡುತ್ತಿದ್ದೇವೆ ಎಂದು ಅರ್ಥೈಸಿಕೊಳ್ಳದೇ

ಮುಸ್ಲಿಮರನ್ನು ಶತ್ರುಗಳಂತೆ ಕಾಣುವ ಆರೆಸ್ಸೆಸ್-ಬಿಜೆಪಿ ಧಾರ್ಮಿಕ ಭಿನ್ನಾಭಿಪ್ರಾಯ ಸೃಷ್ಟಿಸುವ ದ್ವೇಷಪೂರಿತ ವಿಡಿಯೋಗಳನ್ನು ಅಂತರ್ಜಾಲದಲ್ಲಿ ಹಾಕುವುದು, ಮತ ಕಳೆದುಕೊಳ್ಳುವ ಭೀತಿಯಿಂದ ಮತ್ತೆ ಪೋಸ್ಟ್‌ಗಳನ್ನು ಅಳಿಸಿ ಹಾಕುವುದು ಇತ್ಯಾದಿಗಳನ್ನು ಮಾಡುತ್ತಿದ್ದಾರೆ. ಇದರಿಂದಾಗಿ 400 ಸೀಟು ವಶಪಡಿಸಿಕೊಳ್ಳುವ ಬಿಜೆಪಿಯ ಹಿಂದಿನ ಘೋಷಣೆ ಮಾಯವಾಗಿದೆ.

ರಾಜಕೀಯ

ಗಿರೀಶ್ ಕುಮಾರ್ ಯಾದಗಿರಿ

ಯಾದಗಿರಿ: ಲೋಕಸಭಾ ಚುನಾವಣೆ ಹಾಗೂ ಸುರಪುರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ನಿರ್ಧರಿಸಿದೆ ಎಂದು ದಸಂಸ ಜಿಲ್ಲಾಧ್ಯಕ್ಷ ಶರಣು ಎಸ್.ನಾಟೇಕ‌ರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸಂಸ ರಾಜ್ಯ ಸಮಿತಿ ಆದೇಶದ ಮೇರೆಗೆ ಜಿಲ್ಲೆಯಲ್ಲಿನ ಲೋಕಸಭಾ ಚುನಾವಣೆ ಹಾಗೂ ಸುರಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ನಿರ್ಣಯಿಸಲಾಗಿದೆ ಎಂದು ತಿಳಿಸಿದರು.

ರಾಯಚೂರು ಲೋಕಸಭೆ ಅಭ್ಯರ್ಥಿ ಜಿ.ಕುಮಾರನಾಯಕ, ಕಲ್ಬುರ್ಗಿ ಅಭ್ಯರ್ಥಿ ಡಾ.ರಾಧಾಕೃಷ್ಣ ದೊಡ್ಡಮನಿ, ಸುರಪುರ ವಿಧಾನಸಭೆ ಉಪಚುನಾವಣೆ ಅಧಿಕೃತ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಇವರಿಗೆ ಬೆಂಬಲಿಸಲು ಭೀಮವಾದ ಸಮಿತಿಯ ಜಿಲ್ಲಾ, ತಾಲ್ಲೂಕು ವತಿಯಿಂದ ಹೋಬಳಿ ಹಾಗೂ ಹಿರಿಯ ಗ್ರಾಮ, ಮಹಿಳಾ ನಗರ ಘಟಕಗಳ ಪದಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಅವರ ತಂದೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ಅಮಾಯಕ ಹೆಣ್ಣುಮಕ್ಕಳ ಮೇಲೆ ನಡೆಸಿರುವ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ‘ಪೆನ್ ಡ್ರೈವ್’ ಪ್ರಕರಣ ಬಯಲಿಗೆ ಬಂದ್ದಿದ್ದು ಕೂಡಲೇ ಪ್ರಜ್ವಲ್ ರೇವಣ್ಣ ಮತ್ತು ಹೆಚ್.ಡಿ.ರೇವಣ್ಣ ಅವರನ್ನು ಕಾನೂನು ಪ್ರಕಾರ ಶಿಕ್ಷೆಗೆ ಒಳಪಡಿಸಬೇಕೆಂದು ದಸಂಸ ಭೀಮವಾದ ಒತ್ತಾಯಿಸಿದೆ.

ಇದಕ್ಕೂ ಮುನ್ನ ದಸಂಸ ಜಿಲ್ಲಾ ಸಮಿತಿ ವತಿಯಿಂದ ರಾಜ್ಯದ ಹಿರಿಯ ರಾಜಕಾರಣಿ, ಬುದ್ಧ, ಬಸವ ಅಂಬೇಡ್ಕರ್ ಅನುಯಾಯಿಯಾಗಿದ್ದ ದಲಿತ ಚೇತನ ಮಾಜಿ ಸಚಿವ ಹಾಲಿ ಚಾಮರಾಜನಗರ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರ ನಿಧನಕ್ಕೆ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸುದ್ದಿಗೋಷ್ಠಿಯಲ್ಲಿ  ರಾಜ್ಯ ಸಂಚಾಲಕರಾದ ಭೀಮರಾಯ ಸಿಂಧಿಗೇರಿ, ವಿಭಾಗೀಯ ಸಂಚಾಲಕ ಶಿವಶಂಕರ, ಕಲ್ಬುರ್ಗಿ ಜಿಲ್ಲಾ ಸಂಚಾಲಕರಾದ ಕಾಶಿನಾಥ ಶೆಳ್ಳಗಿ, ಮಾರುತಿ ಕಾಳಗಿ, ಯಾದಗಿರಿ ಜಿಲ್ಲಾ ಸಂ. ಸಂಚಾಲಕರಾದ ಮಹಾದೇವಪ್ಪ ಗುರುಸುಣಿಗಿ, ಮಲ್ಲಪ್ಪ ಲಂಡನ್‌ಕರ್, ಮಲ್ಲಿಕಾರ್ಜುನ ತಳವಾರಗೇರಿ. ಸಿದ್ರಾಮ ನಾಯ್ಕಲ್, ತಾ. ಸಂಚಾಲಕ ಶರಣಪ್ಪ ಯರಗೋಳ, ಶರಣು ಹಾಲಳ್ಳಿ ಇನ್ನಿತರರು ಇದ್ದರು.