ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಸೈಬರ್ ಕ್ರೈಂ Archives » Dynamic Leader
October 21, 2024
Home Posts tagged ಸೈಬರ್ ಕ್ರೈಂ
ದೇಶ

ಮಹಾರಾಷ್ಟ್ರದಲ್ಲಿ ಇಸ್ಲಾಂ ಧರ್ಮ ಮತ್ತು ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿಂದೂ ಧಾರ್ಮಿಕ ಮುಖಂಡ ಮಹಂತ್ ರಾಮಗಿರಿ ಮಹಾರಾಜ್ ವಿರುದ್ಧ 67 ಪ್ರಕರಣಗಳು ದಾಖಲಾಗಿವೆ.

ರಾಮಗಿರಿ ಮಹಾರಾಜರು ಹಂಚಿಕೊಂಡಿರುವ ವಿವಾದಾತ್ಮಕ ಮಾನಹಾನಿಕರ ಅಭಿಪ್ರಾಯಗಳು ಮತ್ತು ಮಾಹಿತಿಗಳನ್ನು ಅಂತರ್ಜಾಲದಿಂದ ತೆಗೆದುಹಾಕುತ್ತಿದ್ದೇವೆ ಎಂದು ಸೈಬರ್ ಕ್ರೈಂ ಬ್ರಾಂಚ್ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇಸ್ಲಾಂ ಧರ್ಮ ಮತ್ತು ಪ್ರವಾದಿ ಮುಹಮ್ಮದ್ ಅವರನ್ನು ನಿಂದಿಸಿದ ಮಹಂತ್ ರಾಮಗಿರಿ ಮಹಾರಾಜ್ ವಿರುದ್ಧ ರಾಜ್ಯಾದ್ಯಂತ ಇದುವರೆಗೆ 67 ಪ್ರಕರಣಗಳು ದಾಖಲಾಗಿವೆ.

‘ರಾಮಗಿರಿ ಮಹಾರಾಜ್ ವಿರುದ್ಧ ಹಲವು ಪ್ರಕರಣಗಳು ದಾಖಲಾದ ನಂತರ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು ಎಂಬ ಕಾರಣಕ್ಕಾಗಿ ಅವರ ವಿರುದ್ಧವೂ ಪ್ರಕರಣ ದಾಖಲಿಸಬೇಕು ಎಂಬ ಮನವಿಯನ್ನು ವಿರೋಧಿಸಿ, ಮಹಾರಾಷ್ಟ್ರ ಅಡ್ವೊಕೇಟ್ ಜನರಲ್ ವೀರೇಂದ್ರ ಸರಾಫ್ ಅವರು,  ಸಲ್ಲಿಸಿದ ಅರ್ಜಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

ವಕೀಲ ವಾಸಿ ಸೈಯದ್ ಮತ್ತು ಇತರರು ಸಲ್ಲಿಸಿದ ಅರ್ಜಿಯಲ್ಲಿ, ‘2014 ರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರವು ಮುಸ್ಲಿಮರ ವಿರುದ್ಧ ಕೋಮುವಾದಿ ಕ್ರಮಗಳನ್ನು ನಿರಂತರವಾಗಿ ತೆಗೆದುಕೊಳ್ಳುತ್ತಿದೆ. ಮುಸ್ಲಿಮರನ್ನು ಕಡೆಗಣಿಸುವುದು, ಸಾಮೂಹಿಕ ಹತ್ಯೆಗಳನ್ನು ಮಾಡುವುದು, ಗಲಭೆಗಳನ್ನು ಮಾಡುವುದು ಮುಂತಾದ ಹಲವು ವಿಷಯಗಳು ನಿರಂತರವಾಗಿ ನಡೆಯುತ್ತಿವೆ ಎಂದು ಉಲ್ಲೇಖಿಸಲಾಗಿತ್ತು.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಇಜಾಜ್ ನಖ್ವಿ, ‘ರಾಮಗಿರಿ ಮಹಾರಾಜ್ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಶಿಂಧೆ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ ಮತ್ತು ರಾಜ್ಯದ ಧರ್ಮ ಪ್ರಚಾರಕರನ್ನು ರಕ್ಷಿಸುತ್ತಿದ್ದಾರೆ’ ಎಂದು ವಾದಿಸಿದರು. ‘ಅದೇ ರೀತಿ ಬಿಜೆಪಿ ಶಾಸಕ ನಿತೇಶ್ ರಾಣೆ ಅವರ ಅವಹೇಳನಕಾರಿ ಭಾಷಣದ ವಿರುದ್ಧವೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ನಖ್ವಿ ಉಲ್ಲೇಖಿಸಿದರು.

ಆದರೆ, ನ್ಯಾಯಮೂರ್ತಿಗಳಾದ ರೇವತಿ ಮೊಹಿತೆ ಮತ್ತು ಪೃಥ್ವಿರಾಜ್ ಚವಾಣ್ ಅವರನ್ನೊಳಗೊಂಡ ಪೀಠವು, ‘ರಾಮಗಿರಿ ಮಹಾರಾಜ್ ಅವರ ವೀಡಿಯೊಗಳನ್ನು ತೆಗೆದುಹಾಕಲು ಮತ್ತು ರಾಣೆ ಅವರು ಮಾಡಿರುವ ಮಾನಹಾನಿ ಭಾಷಣಕ್ಕೆ ಸಂಬಂಧಿಸಿದ ಆರೋಪಗಳಿಗೆ, ಕಾನೂನು ಕ್ರಮಗಳಿಗೆ ಸಂಬಂಧಿಸಿದ ಅರ್ಜಿಗಳ ಮೇಲೆ ಈಗಾಗಲೇ ತಡಮಾಡದೆ ತನಿಖೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ದ್ವೇಷದ ಭಾಷಣದ ಬಗ್ಗೆ ಕೇಳಲಾದ ಪ್ರಶ್ನೆಗೆ, ‘ನಾವು ಮಾತನಾಡುವುದನ್ನು ತಡೆಯಲು ಸಾಧ್ಯವಿಲ್ಲ. ಆದರೆ, ಈ ಬಗ್ಗೆ ಪೊಲೀಸರು ಎಲ್ಲಿ ಬೇಕಾದರೂ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸುತ್ತಾರೆ. ಏಕನಾಥ್ ಶಿಂಧೆ ಮತ್ತು ರಾಮಗಿರಿ ಒಂದೇ ವೇದಿಕೆಯಲ್ಲಿದ್ದರು ಎಂದ ಮಾತ್ರಕ್ಕೆ ಎಫ್‌ಐಆರ್ ದಾಖಲಿಸಬೇಕು ಎಂದಲ್ಲ. ನೀವು ತಪ್ಪು ಉದ್ದೇಶಗಳನ್ನು ಸಾಬೀತು ಪಡಿಸಬೇಕು. ತಪ್ಪು ಕಂಡುಬಂದಲ್ಲಿ ಎಫ್‌ಐಆರ್ ದಾಖಲಿಸಲಾಗುವುದು. ನೀವು (ನಖ್ವಿ) ಇದನ್ನು ರಾಜಕೀಯ ವಿಷಯವಾಗಿ ಪರಿವರ್ತಿಸುತ್ತಿದ್ದೀರಿ. ನೀವು ಮುಖ್ಯ ವಿಷಯದಿಂದ ಹೊರಗುಳಿದರೆ ಅದು ತಪ್ಪಾಗುತ್ತದೆ. ನಿಮ್ಮ ಮುಖ್ಯ ಸಮಸ್ಯೆ ವಿಡಿಯೋಗಳನ್ನು ತೆಗೆದುಹಾಕುವುದು ಅಷ್ಟೇ ಆಗಿದೆ’ ಎಂದು ಹೇಳಿದರು.

ರಾಮಗಿರಿ ಮಹಾರಾಜರ ವಿರುದ್ಧ ಈಗಾಗಲೇ ಸೆಪ್ಟೆಂಬರ್ 19 ರವರೆಗೆ 67 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದ ಅಡ್ವೊಕೇಟ್ ಜನರಲ್ ವೀರೇಂದ್ರ ಸರಾಫ್, ಅರ್ಜಿದಾರರ ಮನವಿಗೆ ವಿರೋಧ ವ್ಯಕ್ತಪಸಿದರು. ಪ್ರಕರಣದಿಂದ ಮುಖ್ಯಮಂತ್ರಿ ಹೆಸರನ್ನು ತೆಗೆದುಹಾಕಬೇಕು ಎಂಬ ವಕೀಲ ಸರಾಫ್ ಅವರ ಮನವಿಗೆ ಸಮ್ಮತಿಸಿದ ಪೀಠ, ಅರ್ಜಿದಾರರಿಗೆ ದಂಡ ವಿಧಿಸುವ ಎಚ್ಚರಿಕೆಯನ್ನು ನೀಡಿತು. ಅಕ್ಟೋಬರ್ 17 ರಂದು ಮತ್ತೊಮ್ಮೆ ಈ ಅರ್ಜಿಯ ವಿಚಾರಣೆಯನ್ನು ನಡೆಸುವುದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ.

ಕ್ರೈಂ ರಿಪೋರ್ಟ್ಸ್

ಬೆಂಗಳೂರು: ಬೆಂಗಳೂರು ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆ ಅಧಿಕಾರಿಗಳು ಫ್ರೀ ಆಕ್ಟಿವೇಟೆಡ್ ಸಿಮ್ ಕಾರ್ಡುಗಳನ್ನು ದುರುಪಯೋಗಪಡಿಸಿ, ಪ್ರತಿಷ್ಠಿತ ಕ್ಯಾಬ್ (Cab Aggregators) ಆಪರೇಟಿವ್ ಸಂಸ್ಥೆಗಳಿಗೆ ವಂಚನೆ ಮಾಡುತ್ತಿದ್ದ ಜಾಲವನ್ನು ಪತ್ತೆಹಚ್ಚಿ 3 ಆರೋಪಿಗಳನ್ನು ಬಂಧಸಿದ್ದಾರೆ. 1055 ಫ್ರೀ ಆಕ್ಟಿವೇಟೆಡ್ ಮೊಬೈಲ್ ಸಿಮ್ ಕಾರ್ಡುಗಳು, 15 ಮೊಬೈಲ್ ಪೋನ್, 4 ಲ್ಯಾಪ್‌ಟಾಪ್, 1 ಕಂಪ್ಯೂಟರ್ ಸಿಸ್ಟಮ್ ಅನ್ನು ವಸಕ್ಕೆ ಪಡೆಯಲಾಗಿದೆ.

ಬೆಂಗಳೂರು ನಗರದಲ್ಲಿ ಬಾಡಿಗೆ ವಾಹನ ಸೇವೆ ನೀಡುತ್ತಿರುವ ಹೆಸರಾಂತ ಕಂಪನಿಗಳಾದ ಉಬರ್ ಮತ್ತು ರ‍್ಯಾಪಿಡೋ ಕಂಪನಿಗಳಿಗೆ ಡ್ರೈವರ್‌ಗಳನ್ನು ಮತ್ತು ವಾಹನಗಳನ್ನು ನೋಂದಣಿ ಮಾಡುವ ಸಲುವಾಗಿ ವೆಂಡರ್‌ಶಿಪ್ ಪಡೆದು, ಆನ್‌ಲೈನ್ ಮೂಲಕ ಡ್ರೈವರ್ ಮತ್ತು ವಾಹನಗಳನ್ನು ಅಟಾಚ್ ಮಾಡಿಸಿ, ಬೇರೆಯವರ ಹೆಸರಿನಲ್ಲಿ ತೆಗೆದುಕೊಂಡಿದ್ದ ಸಾವಿರಾರು ಮೊಬೈಲ್ ಸಿಮ್ ಕಾರ್ಡುಗಳನ್ನು ಉಪಯೋಗಿಸಿ, ಯಾವುದೇ ಸಂಚಾರ ಸೇವೆಯನ್ನು ನೀಡದೆ, ಸಾಪ್ಟ್ ವೇರ್ ದುರುಪಯೋಗಪಡಿಸಿಕೊಂಡು ಸಂಚಾರಿ ಸೇವೆ ನೀಡಿದಂತೆ ಮಾಡಿ ಕಂಪನಿಗಳಿಂದ ಬರುತ್ತಿದ್ದ ಸಾವಿರಾರು ರೂಪಾಯಿಗಳ ಇನ್ ಸೆಂಟಿವ್ ಹಣವನ್ನು ಪಡೆದು, ಕಂಪನಿಗಳಿಗೆ ಮೋಸ ಮಾಡುತ್ತಿದ್ದ 3 ಆಸಾಮಿಗಳನ್ನು ದಸ್ತಗಿರಿ ಮಾಡಲಾಗಿರುತ್ತದೆ.

ಸಾಂದರ್ಭಿಕ ಚಿತ್ರ

ಇವರುಗಳಲ್ಲಿ ಎ1 ಆರೋಪಿಯು ಉಬರ್ ಮತ್ತು ರ‍್ಯಾಪಿಡೋ ಕಂಪೆನಿಗಳ ವೆಂಡರ್‌ಶಿಪ್ ಪಡೆದಿದ್ದು, ಈತನ ಸ್ನೇಹಿತನಾದ ಎ2 ಫೈನಾನ್ಸ್ ಕಂಪನಿಯಲ್ಲಿ ಲೋನ್ ಕೊಡಿಸುವ ಕೆಲಸ ಮಾಡಿಕೊಂಡಿದ್ದು, ಎ3 ಆರೋಪಿಯು ವೋಡಾ ಪೋನ್ ಕಂಪನಿಯಲ್ಲಿ ಸಿಮ್ ಡಿಸ್ಟ್ರಿಬ್ಯೂಟರ್ ಆಗಿ ಕೆಲಸ ಮಾಡಿಕೊಂಡಿದ್ದು, ಈ ಮೂರು ಜನರು ಸೇರಿ ಸುಲುಭವಾಗಿ ಹಣ ಮಾಡುವ ಸಲುವಾಗಿ, ದುರುದ್ದೇಶದಿಂದ ಒಳ ಸಂಚು ರೂಪಿಸಿ, ಎ1 ಹೊಂದಿದ್ದ ಉಬರ್ ಮತ್ತು ರ‍್ಯಾಪಿಡೋ ವೆಂಡರ್‌ಶಿಪ್ನ ಸಹಾಯದಿಂದ ಎ2 ಒದಗಿಸುತ್ತಿದ್ದ ದಾಖಲಾತಿಗಳನ್ನು ಬಳಸಿ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿ, ಎ3 ನೀಡುತ್ತಿದ್ದ ಫ್ರೀ ಆಕ್ಟಿವೇಟೆಡ್ ಸಿಮ್ ಕಾರ್ಡುಗಳನ್ನು ಬಳಸಿಕೊಂಡು ಕಾರು / ಬೈಕುಗಳು ಓಡುವ ರೀತಿಯಲ್ಲಿ ಮೊಬೈಲ್ ಪೋನ್, ಲ್ಯಾಪ್‌ಟಾಪ್‌ಗಳ ಮೂಲಕ ಸಾಪ್ಟ್ ವೇರ್ ಬಳಸಿ ಯಾವುದೇ ವಾಹನವನ್ನು ಚಲಿಸದೇ ಇದ್ದರೂ ವಾಹನಗಳು ಚಲಿಸಿದ ರೀತಿಯಲ್ಲಿ ಡಾಟಾ ಸೃಷ್ಟಿಸಿ, ಕಂಪನಿಗಳಿಂದ ವೆಂಡರ್‌ಗೆ ಬರುವ ಇನ್‌ಸೆಂಟಿವ್ ಹಣವನ್ನು ಅಕ್ರಮವಾಗಿ ಪಡೆದುಕೊಂಡು ಹಂಚಿಕೊಳ್ಳುತ್ತಿದ್ದರೆಂಬುದು ತನಿಖೆಯಲ್ಲಿ ದೃಢಪಟ್ಟಿರುತ್ತದೆ.

ಮೇಲ್ಕಂಡ 3 ಜನ ಆರೋಪಿಗಳನ್ನು ವಶಕ್ಕೆ ಪಡೆದು ಅವರುಗಳ ವಿಚಾರಣೆ ಮಾಡಿ ಅವರು ಕೃತ್ಯಕ್ಕೆ ಉಪಯೋಗಿಸುತ್ತಿದ್ದ 1055 ಫ್ರೀ ಆಕ್ಟಿವೇಟೆಡ್ ಮೊಬೈಲ್ ಸಿಮ್‌ಗಳು, 15 ಮೊಬೈಲ್ ಪೋನ್‌ಗಳು, 4 ಲ್ಯಾಪ್‌ಟಾಪ್, 1 ಕಂಪ್ಯೂಟರ್ ಸಿಸ್ಟಮ್ ಮತ್ತು ಒಂದು ಬಯೋಮೆಟ್ರಿಕ್ ಡಿವೈಸ್ ಇವುಗಳನ್ನು ವಶಪಡಿಸಿಕೊಂಡಿರುತ್ತಾರೆ. ಈ ಆರೋಪಿಗಳ ವಿರುದ್ಧ ಐಪಿಸಿ, ಟೆಲಿಗ್ರಾಫ್ ಆಕ್ಟ್ ಹಾಗೂ ಐಟಿ ಆಕ್ಟ್ ಗಳಡಿಯಲ್ಲಿ ತನಿಖೆ ಮುಂದುವರಿದಿದೆ ಎಂದು ಸೈಬರ್ ಕ್ರೈಂ ಪೊಲೀಸ್ ಅಧಿಕಾರಿಗಳಿಂದ ತಿಳಿದುಬಂದಿದೆ.