ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Ayodhya Archives » Page 2 of 2 » Dynamic Leader
October 23, 2024
Home Posts tagged Ayodhya (Page 2)
ದೇಶ

ಅಯೋಧ್ಯಯಲ್ಲಿ ಭಗವಾನ್ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡುವುದಕ್ಕೆ ಪುರಿ ಶಂಕರಾಚಾರ್ಯ ವಿರೋಧ ವ್ಯಕ್ತಪಡಿಸಿದ್ದಾರೆ.

2019ರಲ್ಲಿ ಉತ್ತರ ಪ್ರದೇಶದ ಅಯೋಧ್ಯೆ ರಾಮ ಜನ್ಮಭೂಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಇದರ ಬೆನ್ನಲ್ಲೇ ರಾಮನ ಜನ್ಮಭೂಮಿ ಎಂದು ನಂಬುತ್ತಿರುವ ಅಯೋಧ್ಯೆಯ ರಾಮ ಜನ್ಮ ಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣವಾಗುತ್ತಿದೆ.

ಈ ದೇವಸ್ಥಾನದ ನಿರ್ಮಾಣ ಕಾಮಗಾರಿ ಮುಗಿದು ಜನವರಿ 22 ರಂದು ರಾಮ ಮಂದಿರ ಕುಂಭಾಭಿಷೇಕ ನಡೆಯಲಿದೆ ಎಂದು ಘೋಷಿಸಲಾಗಿದೆ. ಈ ಕುಂಭಾಭಿಷೇಕ ಸಮಾರಂಭಕ್ಕೆ 3000 ವಿಐಪಿಗಳು ಸೇರಿದಂತೆ 7000 ಜನರನ್ನು ಆಹ್ವಾನಿಸಲಾಗಿದೆ.

ಈ ಸಂಬಂಧ ಆಮಂತ್ರಣ ಪತ್ರಿಕೆಗಳನ್ನು ಸಂಬಂಧಪಟ್ಟವರಿಗೆ ಖುದ್ದಾಗಿ ನೀಡಲಾಗುತ್ತಿದೆ. ಇದಕ್ಕಾಗಿ ಶ್ರೀರಾಮ ಜನ್ಮಭೂಮಿ ಟ್ರಸ್ಟ್, ಆರ್‌ಎಸ್‌ಎಸ್‌ ಸಂಘಟನೆ ಮತ್ತಿತರರು ಶ್ರಮಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಅಯೋಧ್ಯೆಯಲ್ಲಿ ವಿಶೇಷ ವಿಮಾನ ಮತ್ತು ರೈಲು ಸೇವೆಗಳನ್ನು ಸ್ಥಾಪಿಸಲಾಗಿದೆ.

ಈ ಹಿನ್ನಲೆಯಲ್ಲಿ, ಒಡಿಶಾದ ಪುರಿ ಮಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರು ಅಯೋಧ್ಯೆಯಲ್ಲಿರುವ ರಾಮ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸುವ ಆಹ್ವಾನವನ್ನು ತಿರಸ್ಕರಿಸಿದ್ದಾರೆ. ಈ ಕುರಿತು ಅವರು ನೀಡಿರುವ ಸಂದರ್ಶನದಲ್ಲಿ,

“ಅಯೋಧ್ಯೆಯಿಂದ ನಮ್ಮ ಮಠಕ್ಕೆ ಆಹ್ವಾನ ಬಂದಿದೆ. ನಾನು ಅಲ್ಲಿಗೆ ಹೋಗುವುದಾದರೆ ಒಬ್ಬ ಸಹಾಯಕನ ಜೊತೆ ಬರಬಹುದು ಎಂದಿತ್ತು. ನೀವು ನೂರು ಜನರೊಂದಿಗೆ ಬಂದರೂ ನಿಮಗೆ ಅವಕಾಶ ನೀಡುವುದಾಗಿ ಹೇಳಿದರೂ ನಾನು ಆ ದಿನ ಅಲ್ಲಿಗೆ ಹೋಗುವುದಿಲ್ಲ. ಇದರಲ್ಲಿ ನನಗೆ ಸ್ವಲ್ಪವೂ ವಿಷಾದವಿಲ್ಲ. ಆದರೆ ನಾನು ಇತರ ಸನಾತನ ಹಿಂದೂಗಳಂತೆ ಸಂತೋಷವಾಗಿದ್ದೇನೆ.

ನಾನು ಹಿಂದಿನಿಂದಲೂ ಅಯೋಧ್ಯೆಗೆ ಭೇಟಿ ನೀಡುತ್ತಿದ್ದೇನೆ ಮತ್ತು ಮುಂದೆ ಶ್ರೀರಾಮನ ದರ್ಶನಕ್ಕಾಗಿ ಅದೇ ನಗರಕ್ಕೆ ಭೇಟಿ ನೀಡುತ್ತೇನೆ. ಅದರಲ್ಲೂ ಶತಮಾನಗಳಿಂದ ನನೆಗುದಿಗೆ ಬಿದ್ದಿದ್ದ ರಾಮಮಂದಿರದ ಕಾಮಗಾರಿ ಕೊನೆಗೂ ಈಡೇರಿದೆ.

ಗೋವರ್ಧನ ಪೀಠ ಹಾಗೂ ಮಠದ ಅಧಿಕಾರ ವ್ಯಾಪ್ತಿಯು ಪ್ರಯಾಗದವರೆಗೆ ವ್ಯಾಪಿಸಿದೆ. ಆದರೆ ಕುಂಭಾಭಿಷೇಕ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಮ್ಮಿಂದ ಯಾವುದೇ ಸಲಹೆ, ಮಾರ್ಗದರ್ಶನ ಪಡೆದಿಲ್ಲ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿಯವರು ತಮ್ಮನ್ನು ಜಾತ್ಯತೀತರು ಎಂದು ಬಿಂಬಿಸಿಕೊಳ್ಳಲು ಒಲವು ತೋರುತ್ತಿಲ್ಲ.

ಅವರು ಧೈರ್ಯಶಾಲಿ; ಹಿಂದುತ್ವ ಮತ್ತು ವಿಗ್ರಹಾರಾಧನೆಯ ಪರಿಕಲ್ಪನೆಯಲ್ಲಿ ಹೆಮ್ಮೆಪಡುತ್ತಿದ್ದಾರೆ. ತಾನು ಜಾತ್ಯತೀತ ಎಂದು ಬಿಂಬಿಸಿಕೊಳ್ಳುವ ಹೇಡಿಯಲ್ಲ. ಆದರೆ, ಶಂಕರಾಚಾರ್ಯರಾಗಿ ನಾನು ಅಲ್ಲಿ ಏನು ಮಾಡುವುದು, ಪ್ರಧಾನಿ ಮೋದಿ ಪ್ರತಿಮೆಯನ್ನು ಮುಟ್ಟಿ ಅಲ್ಲಿ ಸ್ಥಾಪಿಸುವಾಗ, ನಾನು ಅವರನ್ನು ಶ್ಲಾಘಿಸಬೇಕೇ? ಶಾಸ್ತ್ರಗಳಲ್ಲಿ ಹೇಳಿರುವ ನಿಯಮಗಳ ಪ್ರಕಾರ ಮೂಲವರ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು.

ಪ್ರಧಾನಿ ನರೇಂದ್ರ ಮೋದಿಯವರು ರಾಮನ ಮೂರ್ತಿಯನ್ನು ಮುಟ್ಟಿ ದೇವಾಲಯದ ಗರ್ಭಗುಡಿಯೊಳಗೆ ಪ್ರತಿಷ್ಠಾಪಿಸುವಾಗ ಶಂಕರಾಚಾರ್ಯನಾಗಿ ನಾನು ಏನು ಮಾಡಬೇಕು? ಅವರು ಪ್ರತಿಮೆಯನ್ನು ಪ್ರತಿಷ್ಠಾಪಿಸುವಾಗ ನಾನು ಅಲ್ಲಿ ಚಪ್ಪಾಳೆ ತಟ್ಟಿ ಅಥವಾ ಹುರಿದುಂಬಿಸಬೇಕೆಂದು ನೀವು ನಿರೀಕ್ಷಿಸುತ್ತೀರಾ? ನನ್ನ ಜವಾಬ್ದಾರಿಗೆಂದು ಒಂದು ಗೌರವವಿದೆ” ಎಂದು ಹೇಳಿದ್ದಾರೆ.

ಈ ಹಿಂದೆ ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಕೂಡ ಪ್ರಧಾನಿ ಮೋದಿಯವರು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿರುವುದನ್ನು ಟೀಕಿಸಿದ್ದರು.

ಅವರು ತಮ್ಮ ‘ಎಕ್ಸ್’ ಸೈಟ್‌ನಲ್ಲಿ, “ರಾಮನು ತನ್ನ ಪತ್ನಿ ಸೀತೆಯನ್ನು ರಕ್ಷಿಸಿಕೊಳ್ಳಲು ಸುಮಾರು ಒಂದೂವರೆ ದಶಕಗಳ ಕಾಲ ಹೋರಾಡಿದರು. ಇಂತಹ ರಾಮನ ಭಕ್ತರಾದ ನಾವು, ಪತ್ನಿಯನ್ನು ತ್ಯಜಿಸಿದ ಮೋದಿಗೆ ರಾಮಮಂದಿರ ಪೂಜೆ ಮಾಡಲು ಹೇಗೆ ಅವಕಾಶ ನೀಡುವುದು” ಎಂಬ ಪ್ರಶ್ನೆಯನ್ನು ಎತ್ತಿದ್ದರು ಇದು ಟೀಕೆಗೆ ಕಾರಣವಾಗಿತ್ತು.

“ಇದು ಬಿಜೆಪಿಯ ರಾಮ ಮಂದಿರ” ಎಂಬುದು ಸರಿಯಾಗಿಯೇ ಇದೆ!

ದೇಶ

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೂ ಮುನ್ನವೇ ಪ್ರಧಾನಿ ಮೋದಿಯವರು ತಮ್ಮ ಲೋಕಸಭಾ ಚುನಾವಣಾ ಪ್ರಚಾರವನ್ನು ಎಸ್ ಪಿಜಿ ಸೈನಿಕರಂತೆ ಕಾರಿನ ಹೊರಭಾಗದಲ್ಲಿ ನಿಂತು, ನೇತಾಡುತ್ತಾ ಕೈ ಬೀಸುವ ಮೂಲಕ ಆರಂಭಿಸಿದರು.

ಅಯೋಧ್ಯೆ ರಾಮಮಂದಿರ ಉದ್ಘಾಟನಾ ಸಮಾರಂಭವನ್ನು ರಾಜಕೀಯ ಲಾಭ ಮತ್ತು ಲೋಕಸಭಾ ಚುನಾವಣಾ ಪ್ರಚಾರದ ಭಾಗವಾಗಿ ಪರಿವರ್ತಿಸಲು ಬಿಜೆಪಿ ಸಕ್ರಿಯವಾಗಿ ಪ್ರಯತ್ನಿಸುತ್ತಿದ್ದರೆ, ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೂ ಮುನ್ನ ಪ್ರಧಾನಿ ಮೋದಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.

ರಾಮಮಂದಿರ ಇರುವ ಅಯೋಧ್ಯೆಯಲ್ಲಿ ಅಭಿವೃದ್ಧಿ ಕಾರ್ಯದ ಹೆಸರಿನಲ್ಲಿ 15,700 ಕೋಟಿ ರೂಪಾಯಿಗಳ ಯೋಜನೆಗಳಿಗೆ ಪ್ರಧಾನಿ ಮೋದಿ ಶನಿವಾರ ಚಾಲನೆ ನೀಡಿದರು. ರೂ.1,450 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, 240 ಕೋಟಿ ರೂಪಾಯಿ ವೆಚ್ಚದಲ್ಲಿ ಪರಿಷ್ಕರಿಸಿದ “ಅಯೋಧ್ಯಾ ಧಾಮ್” ಜಂಕ್ಷನ್ ರೈಲು ನಿಲ್ದಾಣ, ಎರಡು ಹೊಸ “ಅಮೃತ್ ಭಾರತ್” ರೈಲುಗಳು ಮತ್ತು 6 ಹೊಸ “ವಂದೇ ಭಾರತ್ ರೈಲು”ಗಳನ್ನು ಮೋದಿ ಉದ್ಘಾಟಿಸಿದರು.

ರೋಡ್ ಶೋ:
ಯೋಜನೆಗಳನ್ನು ಉದ್ಘಾಟಿಸಿದ ನಂತರ ಪ್ರಧಾನಿ ಮೋದಿ ಅಯೋಧ್ಯೆಯಲ್ಲಿ ರೋಡ್ ಶೋ ನಡೆಸಿದರು. ಅದೂ ಕೂಡ ಅಯೋಧ್ಯೆ ರಾಮಮಂದಿರ ಉದ್ಘಾಟನೆಗೂ ಮುನ್ನವೇ ಪ್ರಧಾನಿ ಮೋದಿಯವರು ತಮ್ಮ ಲೋಕಸಭಾ ಚುನಾವಣಾ ಪ್ರಚಾರವನ್ನು ಎಸ್ ಪಿಜಿ ಸೈನಿಕರಂತೆ ಕಾರಿನ ಹೊರಭಾಗದಲ್ಲಿ ನಿಂತು, ನೇತಾಡುತ್ತಾ ಕೈ ಬೀಸುವ ಮೂಲಕ ಆರಂಭಿಸಿದರು.

ವಿದ್ಯಾರ್ಥಿಗಳಿಗೆ ಕೇಸರಿ ಕ್ಯಾಪ್ ತೊಡಿಸಿ ಶೂಟಿಂಗ್ ಮಾಡಿಸಿದ ಮೋದಿ:
ಅಯೋಧ್ಯೆ ಕಲ್ಯಾಣ ಯೋಜನೆಗಳ ಹೆಸರಿನಲ್ಲಿ 2 ಹೊಸ “ಅಮೃತ್ ಭಾರತ್” ರೈಲುಗಳು ಮತ್ತು 6 ಹೊಸ “ವಂದೇ ಭಾರತ್ ರೈಲುಗಳು” ಎಂಬ 8 ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಇದಕ್ಕೂ ಮೊದಲು ಕೇಸರಿ ಬಣ್ಣದಲ್ಲಿ ನಿರ್ಮಿಸಲಾಗಿದ್ದ “ಅಮೃತ್ ಭಾರತ್” ರೈಲಿಗೆ ಪ್ರವೇಶಿಸಿದ ಮೋದಿ, ವಿದ್ಯಾರ್ಥಿಗಳಿಂದ ಪ್ರತ್ಯೇಕ ಶೂಟಿಂಗ್ ಸೆಟ್ ಹಾಕಿದ್ದರು. ಅಂದರೆ ವಿದ್ಯಾರ್ಥಿಗಳಿಗೆ ಕೇಸರಿ ಟೋಪಿಗಳನ್ನು ಧರಿಸುವಂತೆ ಮಾಡಿ, ಅವರ ಬಳಿ ಒಂದು ತುಂಡು ಚೀಟಿಯನ್ನು ಕೊಟ್ಟು; ಅದನ್ನು ಓದುವಂತೆ ಮಾಡಿ, ಪ್ರಧಾನಿ ಮೋದಿ ಹೇಳುವುದನ್ನು ವಿದ್ಯಾರ್ಥಿಗಳು ಕೇಳುವ ಹಾಗೆ ಚಿತ್ರೀಕರಣ ನಡೆಸಿದರು.

Source: theekkathir.in

ರಾಜ್ಯ

ಬೆಂಗಳೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಶ್ರೀರಾಮ ಮಂದಿರದಲ್ಲಿ ಜನವರಿ 22 ರಂದು ನಡೆಯಲಿರುವ ಶ್ರೀರಾಮದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ದ ಅಖಿಲ ಭಾರತೀಯ ಸಂಪರ್ಕ್ ಪ್ರಮುಖ್ ಆಗಿರುವ ರಾಮಲಾಲ್ ಅವರು ಹಾಗೂ ಇತರರು ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ ಪರವಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಆಹ್ವಾನ ಪತ್ರಿಕೆ ನೀಡಿದ್ದಾರೆ.

ಆಹ್ವಾನ ಪತ್ರಿಕೆಯನ್ನು ತುಂಬು ಹೃದಯದಿಂದ ಸ್ವೀಕರಿಸಿಕೊಂಡ ಹೆಚ್.ಡಿ.ಕುಮಾರಸ್ವಾಮಿ ಅವರು “ನನ್ನನ್ನು ಆಹ್ವಾನಿಸಿದ ಅವರೆಲ್ಲರಿಗೂ (ಸ್ವಯಂ ಸೇವಕ ಸಂಘ-RSS) ಧನ್ಯವಾದಗಳು. ಶ್ರೀರಾಮದೇವರ ಪ್ರಾಣ ಪ್ರತಿಷ್ಠೆ ಹಾಗೂ ಶ್ರೀರಾಮ ಸೇವಾ ಕೈಂಕರ್ಯದಲ್ಲಿ ಕುಟುಂಬ ಸಮೇತವಾಗಿ ಸಂತೋಷದಿಂದ ಭಾಗಿಯಾಗುತ್ತೇನೆ” ಎಂದು ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ಗಮನಾರ್ಹ.

ದೇಶ

ಡಿ.ಸಿ.ಪ್ರಕಾಶ್

ಡಿಸೆಂಬರ್ 6, 1992 ರಂದು ಕರಸೇವೆ ಎಂಬ ಹೆಸರಿನಲ್ಲಿ ಸಂಘಟಿಸಲಾದ ಗುಂಪು ಬಾಬರಿ ಮಸೀದಿಯನ್ನು ಕೆಡವಿ ನೆಲಸಮಗೊಳಿಸಿತು. ಡಿಸೆಂಬರ್ 6, ಜಾತ್ಯತೀತತೆಯ ಮೇಲೆ ಗಡಪಾರೆ ಇಳಿಸಿದ ದಿನ.

ಮಸೀದಿ ಧ್ವಂಸ ಪ್ರಕರಣದಲ್ಲಿ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಅಶೋಕ್ ಸಿಂಘಾಲ್, ಉಮಾಭಾರತಿ ಮತ್ತಿತರರು ಆರೋಪಿಗಳಾಗಿದ್ದರು. ಆದರೆ ಒಟ್ಟಾರೆ ಎಲ್ಲರೂ ಖುಲಾಸೆಗೊಂಡರು. ಸಿಬಿಐ ಇವರ ಮೇಲಿನ ಆರೋಪಗಳನ್ನು ಸಾಬೀತುಪಡಿಸಿಲ್ಲ ಎಂದು ನ್ಯಾಯಾಲಯ ಹೇಳಿತು.

ಬಾಬರಿ ಮಸೀದಿಯನ್ನು 1528-1530ರ ಅವಧಿಯಲ್ಲಿ ಬಾಬರ್‌ನ ಕಮಾಂಡರ್ ಮೀರ್ ಬಾಕಿ ಅವರಿಂದ ನಿರ್ಮಿಸಲಾಯಿತು. ಆದರೆ, ಮಸೀದಿಯ ಜಾಗ ಶ್ರೀರಾಮನ ಜನ್ಮಸ್ಥಳ ಎಂದು ಸಂಘಪರಿವಾರದಿಂದ ಸುಳ್ಳು ಪ್ರಚಾರವನ್ನು ಬಹಳ ವ್ಯವಸ್ಥಿತವಾಗಿ ಮಾಡಲಾಯಿತು. ಆದರೂ ಕೊನೆಯವರೆಗೆ ಇದಕ್ಕೆ ಯಾವುದೇ ಪುರಾವೆಗಳನ್ನು ನೀಡಲು ಅವರಿಂದ ಸಾಧ್ಯವಾಗಲಿಲ್ಲ.

ಎಲ್.ಕೆ.ಅಡ್ವಾಣಿಯವರು ಈ ಕಥೆಯನ್ನು ಹರಡುತ್ತಲೇ ರಥಯಾತ್ರೆಯನ್ನೂ ನಡೆಸಿದರು. ವಿ.ಪಿ.ಸಿಂಗ್ ನೇತೃತ್ವದ ರಾಷ್ಟ್ರೀಯ ರಂಗದ ಆಡಳಿತದಲ್ಲಿ ಮಂಡಲ್ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಘೋಷಿಸಿದ್ದೇ ಆರ್‌ಎಸ್‌ಎಸ್ ಪರಿವಾರ ಅಯೋಧ್ಯೆ ವಿಷಯವನ್ನು ಗಂಭೀರವಾಗಿ ಪರಿಗಣಿಸಲು ಕಾರಣ.

ಮಂಡಲ್-ಕಮಂಡಲ್ ಎಂಬ ಚರ್ಚೆಗಳು ನಡೆದವು. ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬಾರದು ಎಂಬುದು ಆರ್‌ಎಸ್‌ಎಸ್ ಪರಿವಾರದ ಚಿಂತನೆ. ಅದಕ್ಕಾಗಿಯೇ ಅವರು ರಾಮಮಂದಿರ ಸಮಸ್ಯೆಯನ್ನು ಕೈಗೆತ್ತಿಕೊಂಡರು.

ನರೇಂದ್ರ ಮೋದಿ ಆಡಳಿತದಲ್ಲಿ ಅಯೋಧ್ಯೆ ನಿವೇಶನಕ್ಕೆ ಸಂಬಂಧಿಸಿದ ಪ್ರಕರಣವನ್ನು ಸಹ ಜಾಣ್ಮೆಯಿಂದ ಮುಚ್ಚಿ ಹಾಕಲಾಯಿತು ಮತ್ತು ಮಸೀದಿ ಕೆಡವಿದ ಸ್ಥಳದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ರಾಮನ ಮಂದಿರವನ್ನೂ ನಿರ್ಮಿಸಲಾಯಿತು. ಅಯೋಧ್ಯೆ ವಿಚಾರದಲ್ಲಿ ನ್ಯಾಯಾಲಯ ನೀಡಿದ್ದು ತೀರ್ಪು; ನ್ಯಾಯವಲ್ಲ! ಎಂಬುದು ಎಲ್ಲರಿಗೂ ತಿಳಿದ ವಿಷಯ.

ಇದೀಗ ದೇಶಾದ್ಯಂತ ಜಾತಿವಾರು ಜನಗಣತಿ ನಡೆಯಬೇಕೆಂಬ ಬೇಡಿಕೆ ಮುನ್ನೆಲೆಗೆ ಬಂದಿದೆ. ಮತ್ತೊಂದೆಡೆ, ರಾಮಮಂದಿರ ನಿರ್ಮಾಣವನ್ನು ಪ್ರಧಾನಿ ಮೋದಿಯವರು ತಮ್ಮ 10 ವರ್ಷಗಳ ಆಡಳಿತದ ಸಾಧನೆ ಎಂದು ಬಿಂಬಿಸುತ್ತಿದ್ದಾರೆ. 1990ರ ದಶಕದಲ್ಲಿ ಇದ್ದ ಅದೇ ಪರಿಸ್ಥಿತಿ ಈಗ ಮರುಕಳಿಸಿದೆ.

ಜಾತಿವಾರು ಜನಗಣತಿಯನ್ನು ಬಿಜೆಪಿ ಒಪ್ಪುತ್ತಿಲ್ಲ. ಆದರೆ ಸಾಮಾಜಿಕ ನ್ಯಾಯದ ಶಕ್ತಿಗಳು ಇದನ್ನು ಖಚಿತಪಡಿಸಬೇಕು. ಮತೀಯವಾದಕ್ಕೆ ದೇಶ ಭಾರೀ ಬೆಲೆ ಕೊಟ್ಟಿದೆ. ಭಾರತವು ಜಾತ್ಯತೀತ ರಾಷ್ಟ್ರವಾಗಿ ಮುಂದುವರಿಯುತ್ತದೆಯೇ ಅಥವಾ ಇಲ್ಲವೇ ಎಂಬುದು ಡಿಸೆಂಬರ್-6 ರ ಹೊತ್ತಿಗೆ ಎದ್ದಿರುವ ಪ್ರಶ್ನೆಯಾಗಿದೆ.

ಹಿಂದುಳಿದ ವರ್ಗದವರು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪಡೆಯಲು ಈ ದೇಶ ಎರಡನ್ನು ಕಳೆದುಕೊಂಡಿದೆ. ಒಂದು ವಿ.ಪಿ.ಸಿಂಗ್ ಅವರ ಅಧಿಕಾರ. ಮತ್ತೊಂದು ಐತಿಹಾಸಿಕವಾದ ಬಾಬರಿ ಮಸೀದಿ. ಅದು ಮತ್ತೊಮ್ಮೆ ಮರುಕಳಿಸದಿರಲು ನಾವು ಮರೆಯಬಾರದ ದಿನ ಡಿಸೆಂಬರ್-6.

ದೇಶ

ಲೆಪ್ಚಾ: 2014 ರಿಂದ ಪ್ರತಿ ವರ್ಷವೂ ಸೈನಿಕರೊಂದಿಗೆ ದೀಪಾವಳಿ ಆಚರಿಸುತ್ತಿದ್ದ ಪ್ರಧಾನಿ ಮೋದಿ, ಈ ವರ್ಷ ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ಸೇನಾ ಯೋಧರೊಂದಿಗೆ ದೀಪಾವಳಿ ಆಚರಿಸಿದರು. ಯೋಧರ ನಡುವೆ ಮಾತನಾಡಿದ ಮೋದಿ ಅವರು,

“ರಾಮ ಇರುವ ಸ್ಥಳ ಅಯೋಧ್ಯೆ” ಎಂದು ಹೇಳಲಾಗುತ್ತದೆ. ಆದರೆ, ನನ್ನ ಪ್ರಕಾರ ಸೈನಿಕರು ಎಲ್ಲಿದ್ದಾರೋ ಆ ಸ್ಥಳವೇ ನನಗೆ ಅಯೋಧ್ಯೆ” ಎಂದು ಹೇಳಿದ್ದಾರೆ.

ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ನನಗೆ ಹೆಮ್ಮೆ ಇದೆ. ಯಾವುದೇ ಸವಾಲನ್ನು ಎದುರಿಸಲು ಯೋಧರು ಸಿದ್ಧರಾಗಿದ್ದಾರೆ. ನಮ್ಮ ಯೋಧರು ಎಲ್ಲದರಲ್ಲೂ ಮುಂದಿದ್ದಾರೆ. ದೇಶವು ತನ್ನ ಸೈನಿಕರಿಗೆ ಋಣಿಯಾಗಿದೆ. ಸ್ವಾವಲಂಬನೆಯ ಭಾರತ ಎಂಬ ಗುರಿಯತ್ತ ನಮ್ಮ ದೇಶ ಸಾಗುತ್ತಿದೆ. ಭಾರತದಲ್ಲಿ ಭದ್ರತಾ ಉಪಕರಣಗಳ ಉತ್ಪಾದನೆ 1 ಲಕ್ಷ ಕೋಟಿ ದಾಟಿದೆ. 140 ಕೋಟಿ ಜನ ನಿಮ್ಮೊಂದಿಗಿದ್ದಾರೆ. ಪ್ರತಿಯೊಬ್ಬ ಭಾರತೀಯನೂ ನಿಮಗಾಗಿ ಪ್ರಾರ್ಥಿಸುತ್ತಿದ್ದಾನೆ.

ಭದ್ರತಾ ಪಡೆಗಳೊಂದಿಗೆ ದೀಪಾವಳಿಯನ್ನು ಆಚರಿಸುತ್ತಿದ್ದೇನೆ. ಇಲ್ಲಿಂದ ನಾಡಿನ ಜನರಿಗೆ ಶುಭಾಶಯಗಳನ್ನು ಹೇಳುವುದು  ವಿಷೇಶವಾಗಿರುತ್ತದೆ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ರಾಮ ಇರುವ ಸ್ಥಳ ಅಯೋಧ್ಯೆ ಎಂದು ಹೇಳಲಾಗುತ್ತದೆ. ಆದರೆ, ನನ್ನ ಪ್ರಕಾರ ಸೈನಿಕರು ಎಲ್ಲಿದ್ದಾರೋ ಆ ಸ್ಥಳವೇ ನನಗೆ ಅಯೋಧ್ಯೆ”

ಪ್ರಸ್ತುತ ಜಗತ್ತು ಎದುರಿಸುತ್ತಿರುವ ಸಮಸ್ಯೆಗಳ ನಡುವೆ ಭಾರತದ ಮೇಲಿನ ನಿರೀಕ್ಷೆ ಹೆಚ್ಚುತ್ತಲೇ ಇದೆ. ಇಂತಹ ಸಂದರ್ಭಗಳಲ್ಲಿ ಭಾರತದ ಗಡಿ ಪ್ರದೇಶಗಳು ಸುರಕ್ಷಿತವಾಗಿರುವುದು ಮುಖ್ಯ. ದೇಶದಲ್ಲಿ ಶಾಂತಿಯುತ ವಾತಾವರಣ ನಿರ್ಮಿಸುತ್ತಿದ್ದೇವೆ. ಅದರಲ್ಲಿ ನಿಮಗೆ ಮಹತ್ವದ ಪಾತ್ರವಿದೆ. ಗಡಿಯಲ್ಲಿ ಯೋಧರು ಹಿಮಾಲಯದಂತೆ ಗಟ್ಟಿಯಾಗಿ ನಿಂತಿರುವುದರಿಂದ ನಮ್ಮ ದೇಶ ಸುರಕ್ಷಿತವಾಗಿದೆ. ಎಂದು ಮೋದಿ ಹಾಳಿದ್ದಾರೆ.

ದೇಶ

ಅಲಿಘರ್: ಉತ್ತರ ಪ್ರದೇಶದ ಪ್ರಮುಖ ನಗರವಾಗಿರುವ ಅಲಿಘರ್ ಹೆಸರನ್ನು ಹರಿಘರ್ ಎಂದು ಬದಲಾಯಿಸಲು ಮುನ್ಸಿಪಲ್ ಕಾರ್ಪೊರೇಷನ್ ಸಭೆಯು ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿದೆ.

ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. 2018ರಲ್ಲಿ ಅಲಹಾಬಾದ್ ನಗರವನ್ನು ಪ್ರಯಾಗ್ ರಾಜ್ ಎಂದು ಮತ್ತು ಫೈಜಾಬಾದ್ ಜಿಲ್ಲೆಯನ್ನು ಅಯೋಧ್ಯೆ ಜಿಲ್ಲೆ ಎಂದು ಮರುನಾಮಕರಣ ಮಾಡಲಾಯಿತು. ಅಲ್ಲದೆ, ಅಗತ್ಯ ಬಿದ್ದರೆ ಇತರೆ ಊರುಗಳ ಹೆಸರನ್ನೂ ಬದಲಾಯಿಸಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದರು.

ಈ ಹಿನ್ನಲೆಯಲ್ಲಿ ಮೇಯರ್ ಪ್ರಶಾಂತ್ ಸಿಂಘಾಲ್ ಅವರು ನಿನ್ನೆ ಅಲಿಘರ್ ಮುನ್ಸಿಪಲ್ ಕಾರ್ಪೊರೇಷನ್ ನಲ್ಲಿ ನಗರದ ಹೆಸರನ್ನು ಹರಿಘರ್ ಎಂದು ಬದಲಾಯಿಸುವ ನಿರ್ಣಯವನ್ನು ಮಂಡಿಸಿದರು. ಎಲ್ಲಾ ಕೌನ್ಸಿಲರ್‌ಗಳು ನಿರ್ಣಯವನ್ನು ಬೆಂಬಲಿಸಿದ್ದರಿಂದ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಈ ನಿರ್ಣಯವನ್ನು ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸಲಿದ್ದಾರೆ. ರಾಜ್ಯ ಸರ್ಕಾರವು ಅದನ್ನು ಅಂಗೀಕರಿಸಿದರೆ, ಅದನ್ನು ಕೇಂದ್ರ ಗೃಹ ಸಚಿವಾಲಯ ಮತ್ತು ಇತರ ಸಂಬಂಧಿತ ಇಲಾಖೆಗಳಿಗೆ ರವಾನಿಸಲಾಗುತ್ತದೆ. ಅವರ ಅನುಮೋದನೆಯ ನಂತರ ರಾಜ್ಯ ಸರ್ಕಾರ ಅಧಿಕೃತವಾಗಿ ಹೆಸರನ್ನು ಬದಲಾಯಿಸಬಹುದು.

ಈ ಕುರಿತು ಮಾತನಾಡಿರುವ ಮೇಯರ್ ಪ್ರಶಾಂತ್ ಸಿಂಘಾಲ್, “ಅಲಿಘರ್ ಹೆಸರನ್ನು ಹರಿಘರ್ ಎಂದು ಬದಲಾಯಿಸಬೇಕೆಂಬುದು ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದೆ. ಆಗಲೇ ಈ ನಗರಕ್ಕೆ ಹರಿಘರ್ ಎಂಬ ಹೆಸರೇ ಇತ್ತು; ಪುರಾಣಗಳಲ್ಲಿಯೂ ಈ ಹೆಸರನ್ನು ಉಲ್ಲೇಖಿಸಲಾಗಿದೆ. ಕಾಲಕ್ರಮೇಣ ಅದು ಅಲಿಘರ್ ಎಂದು ಬದಲಾಗಿದೆ.

ಪ್ರಸ್ತುತ ಅದರ ಹೆಮ್ಮೆಯನ್ನು ಮರುಸ್ಥಾಪಿಸಲು ಪುನಃ ಹರಿಘರ್ ಎಂದು ಮರು ನಾಮಕರಣ ಮಾಡಲು ನಿರ್ಧರಿಸಲಾಗಿದೆ” ಎಂದರು.

ದೇಶ

ಅಯೋಧ್ಯೆ: ವಿದೇಶಿ ದೇಣಿಗೆ ಸ್ವೀಕರಿಸಲು ಅಯೋಧ್ಯೆ ರಾಮಮಂದಿರದಲ್ಲಿರುವ ‘ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ’ ಎಂಬ ಟ್ರಸ್ಟ್‌ಗೆ  ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ವರದಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 5, 2020 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದರು. 2.7 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದ್ದು, ಕಾಮಗಾರಿಗಳು ಮುಕ್ತಾಯ ಹಂತದಲ್ಲಿವೆ. ಜನವರಿ 2024ರಲ್ಲಿ ರಾಮ ವಿಗ್ರಹಗಳ ಪ್ರತಿಷ್ಠಾಪನೆಯ ನಂತರ ದೇವಾಲಯವನ್ನು ಭಕ್ತರಿಗೆ ಔಪಚಾರಿಕವಾಗಿ ತೆರೆಯಲಾಗುವುದು ಎಂದು ವರದಿಯಾಗಿದೆ.

ಈ ಹಿನ್ನಲೆಯಲ್ಲಿ ವಿದೇಶಿ ದೇಣಿಗೆ ಸ್ವೀಕರಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಕುರಿತು ಮಾತನಾಡಿರುವ ‘ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ’ ಪ್ರಧಾನ ಕಾರ್ಯದರ್ಶಿ ಸಂಪತ್ ರಾಯ್, “ವಿದೇಶಿ ದೇಣಿಗೆ ಸ್ವೀಕರಿಸಲು ಗೃಹ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿತ್ತು. ಇದನ್ನು ಸ್ವೀಕರಿಸಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಪ್ರತಿಷ್ಠಾನಕ್ಕೆ ವಿದೇಶಿ ನಿಧಿ ಪಡೆಯಲು ಅನುಮೋದನೆ ನೀಡಲಾಗಿದೆ” ಎಂದರು.

ದೇಶ

ಏಪ್ರಿಲ್ 23 ರಂದು ಪಾಕಿಸ್ತಾನದ ರಾವಿ ನದಿ ನೀರು ಸೇರಿದಂತೆ 155 ದೇಶಗಳ ನದಿಗಳಿಂದ ಸ್ವೀಕರಿಸಲಾದ ನೀರಿನಿಂದ ಶ್ರೀರಾಮನ ಜಲಾಭಿಷೇಕ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.

ಪಾಕಿಸ್ತಾನದ ರಾವಿ ನದಿಯಿಂದ ಕಲಶದಲ್ಲಿ ತಂದ ನೀರನ್ನು ಸ್ವೀಕರಿಸಿಕೊಂಡ ಹಿಂದೂಗಳ ಮುಖಾಂತರ ಅದನ್ನು ದುಬೈಗೆ ಕಳುಹಿಸಿ ಅಲ್ಲಿಂದ ದೆಹಲಿಗೆ ತರಲಾಗಿದೆ.

ಅದೇ ರೀತಿ 155 ದೇಶಗಳ ನದಿಗಳ ಪವಿತ್ರ ನೀರನ್ನು ತಂದು ಕಲಶದಲ್ಲಿ ಸಂಗ್ರಹಿಸಿಡಲಾಗಿದೆ ಎಂದು ಹೇಳಲಾಗುತ್ತಿದೆ.

ದೇಶ

‘ನಮ್ಮ ದೇಶ ಅಭಿವೃದ್ಧಿ ಹೊಂದಲು, ಕಳೆದುಹೋದ ಸಂಪತ್ತನ್ನು ಮರಳಿ ಪಡೆಯಲು ಎಲ್ಲಾ ಹಿಂದೂಗಳು ಮುಂದಾಗಬೇಕು’ ಎಂದು ಪ್ರವೀಣ್ ತೊಗಾಡಿಯಾ ಮಾತನಾಡಿದ್ದಾರೆ.

ಅಮೇಥಿ: ಉತ್ತರ ಪ್ರದೇಶದ ಅಮೇಥಿಯ ಪುರೇರಾಮದೀನ್ ಗ್ರಾಮದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಪ್ರವೀಣ್ ತೊಗಾಡಿಯಾ, ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ಆದರೆ ಬರಬೇಕಾದ ರಾಮರಾಜ್ಯ ಎಲ್ಲೂ ಕಾಣಲಿಲ್ಲ.

ನಮ್ಮ ದೇಶದ ಹತ್ತಾರು ಸಾವಿರ ಹಿಂದೂಗಳು ಮನೆಗಳನ್ನು ಪಡೆಯಬೇಕು, ಅವರ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯಬೇಕು, ಯುವಕರು ಉದ್ಯೋಗವನ್ನು ಪಡೆಯಬೇಕು ಮತ್ತು ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಯನ್ನು ಪಡೆಯಬೇಕೆಂದು ನಾನು ಬಯಸುತ್ತೇನೆ.

ನಮ್ಮ ದೇಶವು ಅಭಿವೃದ್ಧಿ ಹೊಂದಲು, ಕಳೆದುಹೋದ ಸಂಪತ್ತನ್ನು ಮರಳಿ ಪಡೆಯಲು ಎಲ್ಲಾ ಹಿಂದೂಗಳು ಮುಂದಾಗಬೇಕು.’ ಎಂದು ಹೇಳಿದ್ದರು.