ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Deepika Padukone Archives » Dynamic Leader
October 16, 2024
Home Posts tagged Deepika Padukone
ಸಿನಿಮಾ

ವರದಿ: ಅರುಣ್ ಜಿ.,

ಡಾರ್ಲಿಂಗ್ ಪ್ರಭಾಸ್, ಬಿಗ್ ಬಿ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ದಿಶಾ ಪಠಾಣಿ ನಟಿಸುತ್ತಿರುವ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಪ್ರಾಜೆಕ್ಟ್ K. ಮುಂದಿನ ವರ್ಷದ ಸಂಕ್ರಾಂತಿ ಹಬ್ಬಕ್ಕೆ ತೆರೆಗೆ ಬರಲಿರುವ ಈ ಚಿತ್ರದಿಂದ ಕ್ರೇಜಿ ಅಪ್ ಡೇಟ್ ವೊಂದು ಹೊರಬಿದಿದ್ದೆ. ಎಲ್ಲರ ನಿರೀಕ್ಷೆಯಂತೆ ಉಲಗನಾಯಗನ್ ಕಮಲ್ ಹಾಸನ್ ಪ್ರಾಜೆಕ್ಟ್ K ಭಾಗವಾಗಿದ್ದಾರೆ. ಸ್ಪೆಷಲ್ ವಿಡಿಯೋ ಝಲಕ್ ಮೂಲಕ ಕಮಲ್ ಎಂಟ್ರಿ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಿದೆ.

ಕಳೆದೊಂದು ತಿಂಗಳಿನಿಂದ ಪ್ರಾಜೆಕ್ಟ್ K ಸಿನಿಮಾದಲ್ಲಿ ಕಮಲ್ ಹಾಸನ್, ಪ್ರಭಾಸ್ ಎದುರು ವಿಲನ್ ಆಗಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಅದರಂತೆ ಈಗ ಚಿತ್ರತಂಡ ಕಮಲ್ ಎಂಟ್ರಿ ಬಗ್ಗೆ  ಘೋಷಿಸಿದೆ. ಆದರೆ, ಪ್ರಭಾಸ್ ಗೆ ಉಲಗನಾಯಗನ್ ಖಳನಾಯಕ ಅನ್ನೋದರ ಬಗ್ಗೆ ಗುಟ್ಟು ಬಿಟ್ಟು ಕೊಟ್ಟಿಲ್ಲ. ಪ್ರಮುಖ ಪಾತ್ರವೊಂದರಲ್ಲಿ ಕಮಲ್ ಹಾಸನ್ ನಟಿಸಲಿದ್ದಾರೆ ಎಂದಷ್ಟೇ ತಿಳಿಸಿದೆ.

ಪ್ರಾಜೆಕ್ಟ್ K ಸಿನಿಮಾದಲ್ಲಿ ನಟಿಸುತ್ತಿರುವುದರ ಬಗ್ಗೆ ಕಮಲ್ ಹಾಸನ್ ಮಾತನಾಡಿ, “ನಾನು 50 ವರ್ಷದ ಹಿಂದೆ ನೃತ್ಯ ಸಹಾಯಕ ಮತ್ತು ಸಹಾಯಕ ನಿರ್ದೇಶಕನಾಗಿದ್ದಾಗ ನಿರ್ಮಾಣ ವಲಯದಲ್ಲಿ ಅಶ್ವಿನಿ ದತ್ ಹೆಸರು ದೊಡ್ಡ ಮಟ್ಟದಲ್ಲಿ ಖ್ಯಾತಿಗೊಳಿಸಿತ್ತು. ಐವತ್ತು ವರ್ಷದ ನಂತರ ನಾವು ಒಂದಾಗುತ್ತಿದ್ದೇವೆ. ಇಂದಿನ ಪೀಳಿಗೆಯ ಅದ್ಭುತ ನಿರ್ದೇಶಕ ನಾಗ್ ಅಶ್ವಿನ್, ನನ್ನ ಸಹನಟರಾದ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಜಿ ಜೊತೆ ನಟಿಸುತ್ತಿರುವುದು ಖುಷಿಕೊಟ್ಟಿದೆ. ಪ್ರಾಜೆಕ್ಟ್ K ಸಿನಿಮಾಗಾಗಿ ನಾನು ಕುತೂಹಲದಿಂದ ಕಾಯುತ್ತಿದ್ದೇನೆ” ಎಂದರು.

ನಿರ್ಮಾಪಕ ಅಶ್ವಿನಿ ದತ್,  “ಸುದೀರ್ಘವಾದ ವೃತ್ತಿ ಜೀವನದಲ್ಲಿ ‌ನಿಮ್ಮೊಟ್ಟಿಗೆ ಕೆಲಸ ಮಾಡುವುದು ನನ್ನ ಕನಸಾಗಿತ್ತು. ಪ್ರಾಜೆಕ್ಟ್ ಕೆ ಮೂಲಕ ಅದು ನನಸಾಗಿದೆ. ಕಮಲ್ ಹಾಸನ್-ಅಮಿತಾಬ್ ಜಿ ಅವರೊಟ್ಟಿಗಿನ ಕೆಲಸ ಮಾಡುವ ಅವಕಾಶ ದೊರೆತಿರುವುದು ನನಗೆ ಆಶೀರ್ವಾದ” ಎಂದರು.

ನಿರ್ದೇಶಕ ನಾಗ್ ಅಶ್ವಿನ್, “ಕಮಲ್ ಸರ್ ಜೊತೆ ಕೆಲಸ ಮಾಡಲು ಉತ್ಸುಕರಾಗಿದ್ದೇನೆ. ನಮ್ಮ ಜಗತ್ತನ್ನು ಪೂರ್ಣಗೊಳಿಸಲು ಅವರು ಒಪ್ಪಿಕೊಂಡಿರುವುದು ಸಂತಸ” ಎಂದರು. 

ವೈಯಂತಿ ಮೂವೀಸ್ ಬ್ಯಾನರ್‌ನಲ್ಲಿ ಅದ್ಧೂರಿಯಾಗಿ ಮೂಡಿ ಬರುತ್ತಿರುವ ಮಲ್ಟಿ ಸ್ಟಾರ್  ಪ್ರಾಜೆಕ್ಟ್ ಕೆ ಸಿನಿಮಾಗೆ ಮಹಾನಟಿ ಸಿನಿಮಾ ಖ್ಯಾತಿಯ ನಾಗ್ ಅಶ್ವಿನ್ ಆಕ್ಷನ್ ಕಟ್ ಹೇಳಿದ್ದಾರೆ.

ದೇಶ ರಾಜಕೀಯ ಸಿನಿಮಾ

ಕೇರಳ: ಪಠಾಣ್ ಚಿತ್ರ ರೂ.700 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿರುವುದನ್ನು ಎತ್ತಿ ತೋರಿಸಿರುವ ಪ್ರಕಾಶ್ ರಾಜ್, ಚಿತ್ರವನ್ನು ಬ್ಯಾನ್ ಮಾಡಬೇಕು ಎಂದು ಹೇಳಿದವರನ್ನು ತೀವ್ರವಾಗಿ ಟೀಕಿಸಿದ್ದಾರೆ.

ನಟ ಪ್ರಕಾಶ್ ರಾಜ್ ಹಲವು ವರ್ಷಗಳಿಂದ ಕೇಂದ್ರ ಸರ್ಕಾರವನ್ನು ಟೀಕಿಸುತ್ತಲೇ ಬಂದಿದ್ದಾರೆ. ಈ ಕಾರಣಕ್ಕಾಗಿ, ಅವರು #JustAsking ಎಂಬ ಹ್ಯಾಶ್‌ಟ್ಯಾಗ್ ಅನ್ನು ರಚಿಸಿಕೊಂಡು ಹಲವಾರು ಟೀಕೆಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ. ಬಾಲಿವುಡ್‌ನ ಬಾದ್‌ಶಾ ಎಂದು ಕರೆಯಲ್ಪಡುವ ಶಾರುಖ್ ಖಾನ್ ಅಭಿನಯದ `ಝೀರೋ’ ಚಿತ್ರವು 2018 ರಲ್ಲಿ ಬಿಡುಗಡೆಯಾಗಿತ್ತು. ಆ ನಂತರ ಚಿತ್ರಗಳು ಬಿಡುಗಡೆಯಾಗಿರಲಿಲ್ಲ. ಸುಮಾರು 3 ವರ್ಷಗಳ ನಂತರ ಅವರು ನಾಯಕನಾಗಿ ನಟಿಸಿರುವ ಪಠಾಣ್ ಚಿತ್ರವು ಬಿಡುಗಡೆಯಾಗಿ ಕಲೆಕ್ಷನ್ ಹಿಟ್ ಹೊಡೆಯುತ್ತಿದೆ.

ಮೊದಲು, ಚಿತ್ರದ ‘ಬೇಷರಂ ರಂಗ್’ ಹಾಡು ಬಿಡುಗಡೆಯಾಗಿತ್ತು. ಇದು ಅಭಿಮಾನಿಗಳನ್ನು ತುಂಬಾ ಪ್ರಭಾವಿಸಿತು. ಅದರೊಂದಿಗೆ ವಿವಾದವನ್ನೂ ಸೃಷ್ಟಿಸಿತು. ‘ದೀಪಿಕಾ ಪಡುಕೋಣೆ ಕೇಸರಿ ಬಿಕಿನಿಯಲ್ಲಿ ತೋರಿಸಿರುವುದು ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸಿದೆ’ ಎಂದು ಆರೋಪಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆದವು. ಹಾಡು ಸಾಂಸ್ಕೃತಿಕವಾಗಿ ಆಕ್ಷೇಪಾರ್ಹವಾಗಿರುವುದರಿಂದ ಚಿತ್ರವನ್ನು ಬ್ಯಾನ್ ಮಾಡುವಂತೆ ‘boycott pathaan’ ಎಂಬ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡ್ ಆಯಿತು. ಅದರಲ್ಲೂ ‘ದೀಪಿಕಾ ಕೇಸರಿ ಬಣ್ಣದ ಬಿಕಿನಿ ಯಾಕೆ ತೊಟ್ಟರು’? ಎಂಬ ವಿವಾದವನ್ನು ಸೃಷ್ಟಿಸಲಾಯಿತು.

ಇದೇ ವೇಳೆ ಪಠಾಣ್ ಹಾಡಿನ ವಿರುದ್ಧದ ಕಾಮೆಂಟ್‌ಗಳನ್ನು ಪ್ರಕಾಶ್‌ರಾಜ್ ಖಂಡಿಸಿದರು. ಸಚಿವ ನರೋತ್ತಮ್ ಅವರ ಸಂದೇಶವನ್ನು ಹಂಚಿಕೊಂಡ ಪ್ರಕಾಶ್ ರಾಜ್, ‘ಇದು ಅಸಹ್ಯಕರವಾಗಿದೆ. ಈ ರೀತಿಯ ಬಣ್ಣ ಕುರುಡುತನವನ್ನು ಎಷ್ಟು ದಿನ ಸಹಿಸಿಕೊಳ್ಳಬೇಕು’ ಎಂದು ಪ್ರಶ್ನಿಸಿದ್ದರು.

ಅದೇ ರೀತಿ ಫುಟ್ಬಾಲ್ ವಿಶ್ವಕಪ್‌ನೊಂದಿಗೆ ದೀಪಿಕಾ ಪಡುಕೋಣೆ ಇರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಹಾಕಿದ ನಟ ಪ್ರಕಾಶ್ ರಾಜ್, ‘ದೀಪಿಕಾ ಪಡುಕೋಣೆ ಬಗ್ಗೆ ನನಗೆ ಹೆಮ್ಮೆಯಿದೆ’ ಎಂದು ಕೇಳಿದ್ದರು. ಮತ್ತು ‘ಬೇಷರಂ ರಂಗ್’ ಹಾಡನ್ನು ಪ್ರತಿಭಟಿಸಿದ ಮತಾಂಧರು ಈಗ ವಿಶ್ವಕಪ್ ಅನ್ನು ಬಹಿಷ್ಕರಿಸುತ್ತಾರೆಯೇ ಎಂದೂ ಕೇಳಿದ್ದರು.

ಈ ಹಿನ್ನಲೆಯಲ್ಲಿ ಇದೀಗ ಮತ್ತೊಮ್ಮೆ ಪ್ರಶ್ನೆಯನ್ನು ಎತ್ತಿದ್ದಾರೆ ನಟ ಪ್ರಕಾಶ್ ರಾಜ್. ಪಠಾಣ್ ಚಿತ್ರ ರೂ.700 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿರುವುದನ್ನು ಎತ್ತಿ ತೋರಿಸಿರುವ ಅವರು ‘ಪಠಾಣ್ ಚಿತ್ರ ರೂ.700 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಆದರೆ ಈ ಚಿತ್ರವನ್ನು ವಿರೋಧಿಸಿದವರು ನರೇಂದ್ರ ಮೋದಿ ಚಿತ್ರಕ್ಕೆ 30 ಕೋಟಿ ಕೂಡ ಕಲೆಕ್ಷನ್ ಮಾಡಲು ಸಾಧ್ಯವಾಗಿಲ್ಲ.

ಇದಕ್ಕೆ ಮೊದಲು ಕಾಶ್ಮೀರ ಫೈಲ್ಸ್ ಎಂಬ ಪ್ರಚಾರ ಸಿನಿಮಾ ಮಾಡಿದರು. ಈ ಚಿತ್ರವನ್ನು ನೋಡಿದ ಅಂತರಾಷ್ಟ್ರೀಯ ಕಲಾವಿದರು ಉಗುಳಿ ಹೋಗಿದ್ದಾರೆ. ಆದರೂ ಇವರಿಗೆ ಬುದ್ದಿ ಬಂದಂತೆ ಕಾಣುತ್ತಿಲ್ಲ. ‘ಕಾಶ್ಮೀರ್ ಫೈಲ್ಸ್’ ಅನ್ನು ನಿರ್ದೇಶಿಸಿದ ವಿವೇಕ್ ಅಗ್ನಿಹೋತ್ರಿ ಈ ಚಿತ್ರಕ್ಕೆ ಏಕೆ ಆಸ್ಕರ್ ನೀಡಲಿಲ್ಲ? ಎಂದು ಕೊರಗುತ್ತಿರುವುದು ವಿಚಿತ್ರವಾಗಿದೆ. ಈ ಸಿನಿಮಾಗೆ ಆಸ್ಕರ್ ಇಲ್ಲ; ಭಾಸ್ಕರ್ ಕೂಡ ಸಿಗುವುದಿಲ್ಲ’. ಎಂದು ಪ್ರಕಾಶ್ ರಾಜ್ ಹೇಳಿದಾರೆ.