ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Democracy Archives » Dynamic Leader
October 23, 2024
Home Posts tagged Democracy
ವಿದೇಶ

ಕೀವ್: 22ನೇ ಭಾರತ-ರಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ರಷ್ಯಾಕ್ಕೆ ತೆರಳಿದ್ದಾರೆ. ಇಂದು ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ಮೋದಿ ಮಾತುಕತೆ ನಡೆಸಲಿದ್ದಾರೆ. ವಿವಿಧ ರಾಜಕೀಯ ಸನ್ನಿವೇಶಗಳಿಂದಾಗಿ ಈ ಮಾತುಕತೆ ಮಹತ್ವ ಪಡೆದುಕೊಂಡಿದೆ. ಉಭಯ ದೇಶಗಳ ನಾಯಕರ ಭೇಟಿಯ ಬಳಿಕ ಈ ಬಗ್ಗೆ ಸಂಪೂರ್ಣ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.

ಈ ಹಿನ್ನೆಲೆಯಲ್ಲಿ, ಮೋದಿ ಮತ್ತು ಪುಟಿನ್ ಭೇಟಿಯ ಕುರಿತು ತಮ್ಮ ‘ಎಕ್ಸ್’ ಸೈಟ್‌ನಲ್ಲಿ ಪೋಸ್ಟ್ ಮಾಡಿರುವ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ರಷ್ಯಾದ ಕ್ಷಿಪಣಿ ದಾಳಿಯಿಂದ ಉಕ್ರೇನ್‌ನಲ್ಲಿ ಇಂದು 13 ಮಕ್ಕಳು ಸೇರಿದಂತೆ 37 ಜನರು ಸಾವನ್ನಪ್ಪಿದ್ದಾರೆ. ಯುವ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಮಕ್ಕಳ ಆಸ್ಪತ್ರೆಯ ಮೇಲೆ ರಷ್ಯಾ ಇಂದು ಕ್ಷಿಪಣಿ ದಾಳಿ ನಡೆಸಿದೆ. ಅವರಲ್ಲಿ ಹಲವರು ಅವಶೇಷಗಳಡಿ ಸಿಲುಕಿದ್ದಾರೆ.

ಇಂತಹ ಸನ್ನಿವೇಶದಲ್ಲಿ, ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ನಾಯಕರೊಬ್ಬರು, ಮಾಸ್ಕೋದಲ್ಲಿ ವಿಶ್ವದ ಅತ್ಯಂತ ಕೆಟ್ಟ ಅಪರಾಧಿಯನ್ನು ತಬ್ಬಿಕೊಂಡಿರುವುದು ಬಹಳ ನಿರಾಶೆಯನ್ನು ಮೂಡಿಸಿದೆ ಮತ್ತು ಶಾಂತಿಯ ಮೇಲಿನ ಹೊಡೆತದಂತಿದೆ ಎಂದು ಮೋದಿ-ಪುಟಿನ್ ಭೇಟಿಯ ಬಗ್ಗೆ ಟ್ವೀಟ್ ಮಾಡಿದ್ದಾರೆ. ಜೂನ್ 14 ರಂದು ಇಟಲಿಯಲ್ಲಿ ನಡೆದ ಜಿ7 ಸಮ್ಮೇಳನದಲ್ಲಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ್ದು ಗಮನಾರ್ಹ.

ಇದನ್ನೂ ಓದಿ:
“ಮೋದಿ ಮರು ಆಯ್ಕೆ ಆಕಸ್ಮಿಕವಲ್ಲ; ಅವರ ಹಲವು ವರ್ಷಗಳ ಪರಿಶ್ರಮದ ಫಲ” – ವ್ಲಾಡಿಮಿರ್ ಪುಟಿನ್ ಶ್ಲಾಘನೆ!

 

ಸಂಪಾದಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಬೇಕೆಂಬುದು ಮೂಲಭೂತವಾಗಿ ಪ್ರಜಾಪ್ರಭುತ್ವ ವಿರೋಧಿಯಾಗಿದೆ; ಮತ್ತು ಇದು ಸಂವಿಧಾನದಲ್ಲಿ ಒದಗಿಸಲಾದ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯವನ್ನು ಹಾಳುಮಾಡುವ ಕ್ರಮವಾಗಿದೆ.

ಸಂವಿಧಾನ ಏನು ಹೇಳುತ್ತದೆ?
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳು ನಡೆಸುವುದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕ್ರಮವಾಗಿ ಸಂಸತ್ತು/ವಿಧಾನಸಭೆಗೆ ಉತ್ತರದಾಯಿಗಳಾಗಿರಬೇಕು ಎಂಬ ಸಾಂವಿಧಾನಿಕ ನಿಬಂಧನೆಯನ್ನು ಉಲ್ಲಂಘಿಸುತ್ತದೆ. ಸಂವಿಧಾನದ 75(3)ನೇ ವಿಧಿಯು ಸಂಸತ್ತಿಗೆ/ಶಾಸಕಾಂಗಕ್ಕೆ ಉತ್ತರಿಸಲು ಮಂತ್ರಿಗಳು ಸಾಮೂಹಿಕವಾಗಿ ಜವಾಬ್ದಾರರಾಗಿರುತ್ತಾರೆ ಎಂದು ಹೇಳುತ್ತದೆ. ಅದೇ ರೀತಿ 164(1)ನೇ ವಿಧಿಯು ರಾಜ್ಯಗಳಲ್ಲಿ ಆಡಳಿತ ನಡೆಸುವ ಮಂತ್ರಿಗಳು ರಾಜ್ಯ ಶಾಸಕಾಂಗಗಳಿಗೆ ಉತ್ತರಿಸಲು ಸಾಮೂಹಿಕವಾಗಿ ಜವಾಬ್ದಾರರಾಗಿರುತ್ತಾರೆ.

ಸಂವಿಧಾನದ ಪ್ರಕಾರ, ಸಂಸತ್ತು/ವಿಧಾನಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಿ ಅಂಗೀಕಾರವಾದರೆ ಮತ್ತು ಸಂಸತ್ತು/ವಿಧಾನಸಭೆಯಲ್ಲಿ ವಿಶ್ವಾಸ ಕಳೆದುಕೊಂಡರೆ ಅಥವಾ ಹಣಕಾಸು ಮಸೂದೆ ಸೋತರೆ ಸರ್ಕಾರವು ರಾಜೀನಾಮೆ ನೀಡಲು ಬದ್ಧವಾಗಿರುತ್ತದೆ. ಬದಲಿ ಸರ್ಕಾರ ರಚಿಸಲು ಸಾಧ್ಯವಾಗದಿದ್ದರೆ ಲೋಕಸಭೆ/ವಿಧಾನಸಭೆ ವಿಸರ್ಜಿಸಿ ಉಪಚುನಾವಣೆ ನಡೆಸಬೇಕು.

ಅಧಿಕಾರಾವಧಿಯನ್ನು ವಿಸ್ತರಿಸುವುದು ಕಾನೂನು ಬಾಹಿರ:
ಲೋಕಸಭೆ ಅಥವಾ ರಾಜ್ಯ ವಿಧಾನಸಭೆಗಳಿಗೆ ಯಾವುದೇ ನಿಗದಿತ ಅಧಿಕಾರಾವಧಿ ಇರುವುದಿಲ್ಲ. ಸಂವಿಧಾನದ 83(2) ಮತ್ತು 172(1) ಲೋಕಸಭೆ ಅಥವಾ ರಾಜ್ಯ ವಿಧಾನಸಭೆಗಳ ಅಧಿಕಾರಾವಧಿಯು ಯಾವ ಕಾರಣಕ್ಕಾದರೂ ಅವುಗಳನ್ನು ಮೊದಲೇ ವಿಸರ್ಜಿಸದಿದ್ದರೆ ಐದು ವರ್ಷ ಆಗಲಿದೆ ಎಂದು ತಿಳಿಸಲಾಗಿದೆ.

ಲೋಕಸಭೆ ಅಥವಾ ರಾಜ್ಯ ವಿಧಾನಸಭೆಗಳ ಅಧಿಕಾರಾವಧಿಯನ್ನು ವಿಸ್ತರಿಸುವ ಯಾವುದೇ ಪ್ರಯತ್ನವು ಸಂವಿಧಾನ ವಿರೋಧಿ ಮಾತ್ರವಲ್ಲದೆ ಪ್ರಜಾಪ್ರಭುತ್ವ ವಿರೋಧಿಯೂ ಆಗಿದೆ. ಜನಪ್ರತಿನಿಧಿಗಳ ಮೂಲಕ ಜನರ ಹಿತ ಸದಾ ಮೇಲುಗೈ ಸಾಧಿಸಬೇಕು.

ರಾಷ್ಟ್ರಪತಿ ಆಳ್ವಿಕೆಗೆ ಪ್ರಯತ್ನ:
ಏಕಕಾಲಕ್ಕೆ ಚುನಾವಣೆ ನಡೆಸುವ ಉದ್ದೇಶದಿಂದ ಸಂವಿಧಾನಕ್ಕೆ ತಿದ್ದುಪಡಿ ತರಲು ವಿವಿಧ ಸಲಹೆಗಳನ್ನು ಮುಂದಿಡಲಾಗಿದೆ. ಈ ನಿಟ್ಟಿನಲ್ಲಿ ನೀತಿ ಆಯೋಗವು, ಲೋಕಸಭೆಯ ವಿಸರ್ಜನೆ ಅನಿವಾರ್ಯವಾದರೆ, ಉಳಿದ ಲೋಕಸಭೆಯು ಕಡಿಮೆ ಅವಧಿಯನ್ನು ಹೊಂದಿದ್ದರೆ, ಆ ಅವಧಿಗೆ ದೇಶದಾದ್ಯಂತ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತರಲು ಸೂಕ್ತವಾದ ಒಂದು ಷರತ್ತನ್ನು ರಚಿಸಬಹುದು ಎಂದು ಸಲಹೆ ನೀಡಿದೆ. ಅಂದರೆ ಮುಂದಿನ ಚುನಾವಣೆ ನಡೆದು ಹೊಸ ಸರ್ಕಾರ ರಚನೆಯಾಗುವವರೆಗೆ ಅವರೇ ನೇಮಿಸುವ ಸಚಿವ ಸಂಪುಟವೇ ದೇಶದ ಆಡಳಿತ ನಡೆಸಬೇಕು ಎಂಬ ಪ್ರಸ್ತಾಪವು ರಾಷ್ಟ್ರಪತಿಯನ್ನು ಆಡಳಿತಗಾರನನ್ನಾಗಿ ಮಾಡುತ್ತದೆ. ಇದು ಹಿತ್ತಲಿನ ಮೂಲಕ ರಾಷ್ಟ್ರಪತಿ ಆಳ್ವಿಕೆಯನ್ನು ತರುವ ಕ್ರಮವಾಗಿದೆ.

ವಿಧಾನಸಭಾ ಸದಸ್ಯರನ್ನು ಆಯ್ಕೆ ಮಾಡುವ ಹಕ್ಕಿನ ಮೇಲೆ ದಾಳಿ:
ವಿಧಾನಸಭೆ ವಿಸರ್ಜನೆಯ ಸಮಯದಲ್ಲಿ, ಉಳಿದ ಅವಧಿಯು ದೀರ್ಘವಾಗಿದ್ದರೆ, ಹೊಸದಾಗಿ ಚುನಾವಣೆಗಳನ್ನು ನಡೆಸಬೇಕು ಮತ್ತು ಅವು ಉಳಿದ ಅವಧಿಗೆ ಮಾತ್ರ ಇರುತ್ತವೆ. ಅಂದರೆ, ಎರಡು ವರ್ಷಗಳ ಅಧಿಕಾರಾವಧಿಯ ನಂತರ ವಿಸರ್ಜಿಸಲ್ಪಟ್ಟರೆ, ಮುಂದಿನ ಚುನಾವಣೆಯು ಮೂರು ವರ್ಷಗಳ ಅವಧಿಗೆ ಮಾತ್ರ ಮಾನ್ಯವಾಗಿರುತ್ತದೆ.

ಈ ಕಾರಣಕ್ಕಾಗಿಯೇ ಏಕಕಾಲಕ್ಕೆ ಚುನಾವಣೆ ನಡೆಸಬೇಕು ಎಂದು ಸಮರ್ಥಿಸಿಕೊಳ್ಳಲಾಗುತ್ತಿದೆ. ಏಕಕಾಲಕ್ಕೆ ಚುನಾವಣೆ ನಡೆಸುವ ಪ್ರಯತ್ನವು ಪ್ರಜಾಪ್ರಭುತ್ವದ ಮೇಲೆ ನಡೆಸುವ ದಾಳಿಯಾಗಿದೆ. 2015ರ ಸಂಸದೀಯ ಸ್ಥಾಯಿ ಸಮಿತಿಯ 79ನೇ ವರದಿ ಮತ್ತು ಹಣಕಾಸು ಆಯೋಗ ಜಾರಿಗೊಳಿಸಿರುವ ಪ್ರಸ್ತಾವನೆಯಲ್ಲಿ, ‘ಕೆಲವು ಶಾಸಕಾಂಗಗಳ ಅಧಿಕಾರಾವಧಿಯನ್ನು ವಿಸ್ತರಿಸುವುದು,ಅಥವಾ ಕೆಲವು ಶಾಸಕಾಂಗಗಳ ಅಧಿಕಾರಾವಧಿಯನ್ನು ಕಡಿತಗೊಳಿಸುವುದು’ ಎಂದು ಸೂಚಿಸಿದೆ. ಈ ರೀತಿ ಶಾಸಕಾಂಗದ ಅಧಿಕಾರಾವಧಿಯನ್ನು ವಿಸ್ತರಿಸುವುದು ಅಥವಾ ಮೊಟಕುಗೊಳಿಸುವುದು ರಾಜ್ಯಗಳ ಹಕ್ಕುಗಳ ಮೇಲಿನ ದಾಳಿಯಾಗಿದೆ. ಇದು ರಾಜ್ಯದ ಜನರು ತಮ್ಮ ಶಾಸಕರನ್ನು ಆಯ್ಕೆ ಮಾಡುವ ಹಕ್ಕಿನ ಮೇಲಿನ ದಾಳಿಯಾಗಿದೆ.

ರಾಜ್ಯ ಶಾಸಕಾಂಗಗಳಿಗೆ ಸಂಬಂಧಿಸಿದಂತೆ ಮತ್ತೊಂದು ಸಲಹೆಯನ್ನೂ ಮುಂದಿಡಲಾಗಿದೆ. ‘ರಾಜ್ಯ ವಿಧಾನಸಭೆಯು ಅದರ ಅವಧಿಯ ಅಂತ್ಯದ ಮೊದಲೇ ವಿಸರ್ಜಿಸಲ್ಪಟ್ಟರೆ, ರಾಜ್ಯದ ರಾಜ್ಯಪಾಲರು ಅದರ ಉಳಿದ ಅವಧಿಗೆ ರಾಜ್ಯವನ್ನು ಆಳುವುದು’ ಎಂದು ಹೇಳಿದೆ. ಇದರರ್ಥ ಕೇಂದ್ರ ಸರ್ಕಾರದ ಆಡಳಿತವನ್ನು ರಾಜ್ಯಗಳ ಮೇಲೆ ನೇರವಾಗಿ ತರುವುದನ್ನು ಬಿಟ್ಟರೆ ಬೇರೇನೂ ಅಲ್ಲ!

ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಸ್ತಾಪಗಳು:
ಸಂಸತ್ತು/ಶಾಸಕಾಂಗಗಳ ಜವಾಬ್ದಾರಿಯನ್ನು ನಿರಾಕರಿಸುವ ಮತ್ತು ಆಡಳಿತಗಾರರ ಅಧಿಕಾರಾವಧಿಯನ್ನು ವಿಸ್ತರಿಸುವ ಅಸಂಖ್ಯಾತ ಪ್ರಸ್ತಾಪಗಳನ್ನು ಮುಂದಿಡಲಾಗಿದೆ. ಭಾರತದ ಕಾನೂನು ಆಯೋಗದ ಕರಡು, ವರ್ಕಿಂಗ್ ಪೇಪರ್ ಸೇರಿದಂತೆ ಸದನದಲ್ಲಿ ಅವಿಶ್ವಾಸ ಗೊತ್ತುವಳಿ ಮಂಡನೆಯಾದಾಗ ಸದನಕ್ಕೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವ ನಿರ್ಣಯವನ್ನು ಲಗತ್ತಿಸಬೇಕು ಎಂದು ಪ್ರಸ್ತಾಪಿಸಲಾಗಿದೆ. ಇದರರ್ಥ ಹೊಸ ಸರ್ಕಾರವನ್ನು ಆಯ್ಕೆ ಮಾಡುವ ಷರತ್ತಿನೊಂದಿಗೆ ಸದಸ್ಯರು ಹಾಲಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬಹುದು ಎಂಬುದಾಗಿದೆ. ಚುನಾಯಿತ ಶಾಸಕರು ಮತ್ತು ಲೋಕಸಭೆಯ ಸದಸ್ಯರು ಯಾವುದೇ ಸರ್ಕಾರಕ್ಕೆ ಮತ ಚಲಾಯಿಸುವ ಹಕ್ಕನ್ನು ಮೊಟಕುಗೊಳಿಸಲಾಗದು. ಅಥವಾ ಸದನದಲ್ಲಿ ನಿಶ್ಚಿತ ಬಹುಮತ ಹೊಂದಿರುವ ಆಡಳಿತ ಪಕ್ಷವು ಸದನವನ್ನು ವಿಸರ್ಜಿಸುವ ಮತ್ತು ಅವಧಿಪೂರ್ವ ಚುನಾವಣೆಗೆ ಶಿಫಾರಸು ಮಾಡುವ ಹಕ್ಕನ್ನು ಮೊಟಕುಗೊಳಿಸಲಾಗದು ಎಂದಿದೆ.

ರಾಜ್ಯ ಸರ್ಕಾರಗಳ ವಿಸರ್ಜನೆಯೇ ಸಮಸ್ಯೆ:
ಲೋಕಸಭೆ ಚುನಾವಣೆಯೊಂದಿಗೆ ರಾಜ್ಯ ವಿಧಾನಸಭೆಗಳಿಗೂ ಚುನಾವಣೆ ನಡೆಸುವ ಎಲ್ಲಾ ಪ್ರಸ್ತಾಪಗಳು ಒಕ್ಕೂಟ ತತ್ವ ಮತ್ತು ರಾಜ್ಯಗಳ ಹಕ್ಕುಗಳನ್ನು ಗೌರವಿಸದ ಪ್ರವೃತ್ತಿಯನ್ನು ಸಹ ತೋರಿಸುತ್ತದೆ. ಮೊದಲನೆಯದಾಗಿ, ಕೇಂದ್ರ ಸರ್ಕಾರವು ಸಂವಿಧಾನದ 356ನೇ ವಿಧಿಯನ್ನು ನಿರಂಕುಶವಾಗಿ ದುರುಪಯೋಗಪಡಿಸಿಕೊಂಡಿದ್ದು, ಜನರಿಂದ ಆಯ್ಕೆಯಾದ ಹಲವಾರು ರಾಜ್ಯ ಸರ್ಕಾರಗಳನ್ನು ವಿಸರ್ಜಿಸಿದ ಪರಿಣಾಮ ಲೋಕಸಭೆ ಮತ್ತು ಹಲವಾರು ರಾಜ್ಯಗಳ ವಿಧಾನಸಭೆಗಳಿಗೆ ಒಂದೇ ಸಮಯದಲ್ಲಿ ಚುನಾವಣೆಗಳನ್ನು ನಡೆಸುವುದು ಅಸಾಧ್ಯವಾಯಿತು.

1959ರಲ್ಲಿ ಕೇರಳದಲ್ಲಿ ಕಮ್ಯುನಿಸ್ಟ್ ಸರ್ಕಾರದ ವಿಸರ್ಜನೆಯೊಂದಿಗೆ ಈ ಪ್ರಕ್ರಿಯೆ ಪ್ರಾರಂಭವಾಯಿತು. ಏಕಕಾಲಕ್ಕೆ ಚುನಾವಣೆ ನಡೆಸುವ ಹೆಸರಿನಲ್ಲಿ ಮುಂದಿಡುವ ಎಲ್ಲ ಪ್ರಸ್ತಾಪಗಳು ರಾಜ್ಯಪಾಲರ ಒಳಗೊಳ್ಳುವಿಕೆ ಮತ್ತು ಆ ಮೂಲಕ ಕೇಂದ್ರ ಸರ್ಕಾರದ ಹಸ್ತಕ್ಷೇಪವನ್ನು ಹೆಚ್ಚಿಸುತ್ತವೆ.

ಭಾರತವು ಅಸಂಖ್ಯಾತ ವೈವಿಧ್ಯತೆಯನ್ನು ಹೊಂದಿರುವ ವಿಶಾಲ ದೇಶವಾಗಿದೆ. ಆದ್ದರಿಂದ ಸಂಯುಕ್ತ ವ್ಯವಸ್ಥೆ (ಫೆಡರಲಿಸಂ) ಆಧಾರಿತ ರಾಜಕೀಯ ಪ್ರಜಾಪ್ರಭುತ್ವ ವ್ಯವಸ್ಥೆ ಮಾತ್ರ ಇಲ್ಲಿ ಉಳಿಯಲು ಸಾಧ್ಯ. ರಾಜ್ಯಗಳಿಗೆ ವಿವಿಧ ಹಂತಗಳಲ್ಲಿ ಚುನಾವಣೆಗಳು ನಡೆಸುವುದು ಒಕ್ಕೂಟ ವ್ಯವಸ್ಥೆಯಲ್ಲಿ ಒಂದು ವೈಶಿಷ್ಟ್ಯವಾಗಿದೆ. ಆದ್ದರಿಂದ, ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಯಾವುದೇ ಕೃತಕ ಪ್ರಯತ್ನವನ್ನು ಸಂಪೂರ್ಣವಾಗಿ ವಿರೋಧಿಸಲಾಗುವುದು. ಏಕಕಾಲದಲ್ಲಿ ಚುನಾವಣೆ ನಡೆಸುವುದು ಸಂವಿಧಾನದ ಆಧಾರದ ಮೇಲೆ ಪ್ರಸ್ತುತವಾಗಿರುವ ಸಂಸದೀಯ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಲಿದೆ.

ದೇಶ ರಾಜಕೀಯ ವಿದೇಶ

ಭಾರತದ ಪ್ರಜಾಪ್ರಭುತ್ವವು ಭಾಗಶಃ ಸ್ವತಂತ್ರವಾಗಿದೆ ಎಂದು ಅಮೆರಿಕದ ಫ್ರೀಡಂ ಹೌಸ್ ಎಂಬ ಪ್ರಜಾಪ್ರಭುತ್ವ ಸಂಶೋಧನಾ ಸಂಸ್ಥೆ ಅಂದಾಜು ಮಾಡಿದೆ.  ಸ್ವೀಡನ್‌ನ ವಿ-ಡೆಮ್ ಇದನ್ನು ‘ಚುನಾಯಿತ ಸರ್ವಾಧಿಕಾರ’ ಎಂದು ವ್ಯಾಖ್ಯಾನಿಸಿದೆ. (ಈ ಸಂಸ್ಥೆಯು ದೇಶಗಳ ಸರ್ಕಾರಗಳ ಸ್ವರೂಪವನ್ನು ಪರಿಶೀಲಿಸುತ್ತದೆ ಮತ್ತು ಮೌಲ್ಯಮಾಪನ ಮಾಡುತ್ತದೆ) ಲಂಡನ್ ನಿಂದ ಪ್ರಕಟವಾಗುವ ಎಕನಾಮಿಸ್ಟ್ ನಿಯತಕಾಲಿಕದ ಸಂಶೋಧನಾ ಸಂಸ್ಥೆಯ ಪ್ರಕಾರ ಭಾರತ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ 53ನೇ ಸ್ಥಾನಕ್ಕೆ ಕುಸಿದಿದೆ ಎಂದು ಹೇಳುತ್ತಿದೆ. ಈ ಪ್ರಜಾಸತ್ತಾತ್ಮಕ ಪತನದಲ್ಲಿ ಭಾರತದ ಸಂಸತ್ತಿನ ಉಭಯ ಸದನಗಳ ಸದಸ್ಯರ ಪಾತ್ರವೂ ಅಡಗಿದೆ. ಭಾರತೀಯ ಸಂಸತ್ತು ಹೇಗೆ ದುರ್ಬಲವಾಯಿತು ಎಂಬುದರ ಕಿರು ಪಟ್ಟಿಯನ್ನು ನಾನು ನಿಮಗೆ ನೀಡುತ್ತೇನೆ.

ಜನರಿಗೆ ಬೇಕಾಗಿರುವುದು ಏನು?
ರಾಜ್ಯಸಭೆಯ ನಿಯಮ ಸಂಖ್ಯೆ 267ರ ಅಡಿಯಲ್ಲಿ, (ಸಂಸತ್ತಿಗೂ ಇದೇ ರೀತಿಯ ನಿಯಮವಿದೆ) ಜನರ ಮೇಲೆ ಪರಿಣಾಮ ಬೀರುವ ಅಥವಾ ಜನರು ತಿಳಿದುಕೊಳ್ಳಬೇಕಾದ ಮತ್ತು ತಕ್ಷಣವೇ ಚರ್ಚಿಸಬೇಕಾದ ಪ್ರಮುಖ ವಿಷಯಗಳ ಬಗ್ಗೆ ಸರ್ಕಾರದ ಗಮನವನ್ನು ಸೆಳೆಯಲು, ವಿರೋಧ ಪಕ್ಷಗಳ ಸದಸ್ಯರು ಹಲವಾರು ಔಪಚಾರಿಕ ಮನವಿಗಳನ್ನು ಸಲ್ಲಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಉಭಯ ಸದನಗಳಲ್ಲಿ ವಿರೋಧ ಪಕ್ಷದ ಸದಸ್ಯರು ಇಂತಹ ಹಲವಾರು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಭಾರತದ ಭೂಪ್ರದೇಶಲ್ಲಿ ಚೀನಾ ಸೇನೆಯ ಒಳನುಗ್ಗುವಿಕೆ ಮತ್ತು ಅದಾನಿ ಸಮೂಹ ಕುರಿತು ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆ ಪ್ರಕಟಿಸಿದ ವರದಿಯ ಬಗ್ಗೆ ಚರ್ಚಿಸಲು ಅವರು ಒತ್ತಾಯಿ ಮಾಡಿದರು. ಆದರೆ, ಪ್ರತಿಯೊಂದು ಮನವಿಯನ್ನೂ ಸ್ಪೀಕರ್ ತಿರಸ್ಕರಿಸಿದ್ದಾರೆ. ‘ಯಾವುದನ್ನು ಚರ್ಚಿಸಬೇಕು ಎಂದು ಅಧಿಕೃತ ಅಧ್ಯಯನ ಸಮಿತಿ ಮುಂಚಿತವಾಗಿ ನಿರ್ಧರಿಸಿದ್ದನ್ನು ಹೊರತುಪಡಿಸಿ, ಸಾರ್ವಜನಿಕ ಪರವಾಗಿ ಚರ್ಚಿಸಲು ತುರ್ತು ಏನೂ ಇಲ್ಲ. ಭಾರತೀಯ ಜನರು ಸುರಕ್ಷಿತವಾಗಿ ಮತ್ತು ತೃಪ್ತರಾಗಿದ್ದಾರೆ’ ಎಂದು ತಿಳೀಸಿ, ಸಂಸತ್ತಿನಲ್ಲಿ ತುರ್ತು ಚರ್ಚೆಯ ಅಗತ್ಯವಿರುವ ಯಾವುದಕ್ಕೂ ಅವರು ತಲೆಕೆಡಿಸಿಕೊಳ್ಳಲಿಲ್ಲ.

ರಾಷ್ಟ್ರಪತಿ ಶೈಲಿಯಲ್ಲಿ ಪ್ರಧಾನಿ!
ಪ್ರಧಾನಿ ಲೋಕಸಭೆಯ ಸದಸ್ಯರಾಗಿದ್ದರೆ ಅವರನ್ನು ಸದನದ ‘ನಾಯಕರು’ ಎಂದು ಕರೆಯಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ 17ನೇ ಲೋಕಸಭೆಯ ನಾಯಕರು. ಆದರೆ ಅವರು ಸದನಗಳಿಗೆ ಬರುವುದೇ ಅಪರೂಪವಾಗಿದೆ. ಅಧ್ಯಕ್ಷರ ಭಾಷಣಕ್ಕೆ ಧನ್ಯವಾದ ನಿರ್ಣಯದ ಮೇಲಿನ ಚರ್ಚೆಗಳಿಗೆ ವಾರ್ಷಿಕವಾಗಿ ಪ್ರತಿಕ್ರಿಯಿಸುತ್ತಾರೆ. ಈ ಎರಡು ಸಂದರ್ಭಗಳನ್ನು ಬಿಟ್ಟರೆ ಮೋದಿ ಅವರು ಸದನದಲ್ಲಿ ದೊಡ್ಡದಾಗಿ ಮಾತನಾಡಿದ್ದು ನನಗೆ ನೆನಪಿಲ್ಲ. ಸಂಸತ್ತಿನಲ್ಲಿ ಕೇಳುವ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಉತ್ತರಿಸುವುದೂ ಇಲ್ಲ. ಯಾರಾದರು ಒಬ್ಬ ಸಚಿವರು ಅವರ ಪರವಾಗಿ ಸದನದಲ್ಲಿ ಉತ್ತರಿಸುತ್ತಾರೆ. (ಬ್ರಿಟಿಷ್ ಸಂಸತ್ತಿನ ಹೌಸ್ ಆಫ್ ಕಾಮನ್ಸ್‌ನಲ್ಲಿ ಪ್ರಧಾನ ಮಂತ್ರಿಯೇ ಪ್ರತಿ ಬುಧವಾರ ಉತ್ತರಿಸುವ ಪ್ರಶ್ನೆ-ಉತ್ತರ ಸಮಯ ವಿಧಾನ, ಭಾರತದಲ್ಲಿಯೂ ಇರಬೇಕಿತ್ತು ಎಂದು ನಾನು ಭಾವಿಸುತ್ತೇನೆ) ಹಿಂದಿನ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಡಾ.ಮನಮೋಹನ್ ಸಿಂಗ್ ಅಥವಾ ಅಟಲ್ ಬಿಹಾರಿ ವಾಜಪೇಯಿ ಅವರ ವಿಧಾನಕ್ಕಿಂತ ಮೋದಿಯವರ ವಿಧಾನ ವಿಭಿನ್ನವಾಗಿದೆ. ಪ್ರಧಾನಿ ರಾಷ್ಟ್ರಪತಿಯಂತೆ ವರ್ತಿಸುತ್ತಾರೆ. ಪ್ರಧಾನಿಯವರು ಹೀಗೆಯೇ ರಾಷ್ಟ್ರಪತಿಯಾಗಿ ಮುಂದುವರಿದರೆ, ಎಲ್ಲದರಲ್ಲೂ ರಾಷ್ಟ್ರಪತಿಯಂತೆ ವರ್ತಿಸಲು ಆರಂಭಿಸಿದರೆ ಭಾರತ ಸಂಸದೀಯ ಪ್ರಜಾಪ್ರಭುತ್ವವಾಗಿ ಹೆಚ್ಚು ದಿನ ಉಳಿಯುವುದಿಲ್ಲ.

ಸಾಂದರ್ಭಿಕ ಚಿತ್ರ

ಸದನ ಕೆಲಸ ಮಾಡಬಾರದೇ?
ಬ್ರಿಟನ್‌ನ ಲೋಕಸಭೆಯು ವರ್ಷದಲ್ಲಿ 135 ದಿನಗಳ ಕಾಲ ಸಭೆ ಸೇರುತ್ತದೆ. ಭಾರತದಲ್ಲಿ 2021ರಲ್ಲಿ ಲೋಕಸಭೆಯು 59 ದಿನಗಳವರೆಗೆ ಮತ್ತು ರಾಜ್ಯಸಭೆಯು 58 ದಿನಗಳವರೆಗೆ ಮಾತ್ರ ಸಭೆ ಸೇರಿತ್ತು. 2022ರಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗಳೆರಡೂ ಕೇವಲ 56 ದಿನಗಳ ಕಾಲ ನಡೆದವು. ಸದನದಲ್ಲಿ ಗದ್ದಲ ಉಂಟಾಗಿ ಬಹುತೇಕ ದಿನಗಳು ಕಲಾಪ ನಡೆಯದೆ ಮುಂದೂಡಲ್ಪಟ್ಟವು. ದಿವಂಗತ ಬಿಜೆಪಿ ನಾಯಕ ಅರುಣ್ ಜೇಟ್ಲಿ ಅವರು ಒಮ್ಮೆ “ಸದಗಳಲ್ಲಿ ಏನೂ ನಡೆಯದಂತೆ ಅಡ್ಡಿಪಡಿಸುವುದು ಮತ್ತು ಅದನ್ನು ತಡೆಯುವುದು ಸಂಸದೀಯ ಕಾರ್ಯವಿಧಾನದಲ್ಲಿ ಕಾನೂನುಬದ್ಧ ತಂತ್ರವಾಗಿದೆ” ಎಂದು ಹೇಳಿದ್ದರು. 2010ರ ಚಳಿಗಾಲದ ಅಧಿವೇಶನದ ಉದ್ದಕ್ಕೂ, ಒಂದು ಸಚಿವರ ರಾಜೀನಾಮೆಗೆ ಆಗ್ರಹಿಸಿ, ಸಂಸದೀಯ ಜಂಟಿ ಸಮಿತಿ ರಚಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸಿ, ವಿರೋಧ ಪಕ್ಷಗಳು ಅಡ್ಡಿಪಡಿಸಿದ್ದರಿಂದ ಯಾವುದೇ ಕ್ರಮವಿಲ್ಲದೆ ಅಧಿವೇಶನವು ಮುಕ್ತಾಯಗೊಂಡಿತು. ಆ ಅಧಿವೇಶನದಲ್ಲಿ ಲೋಕಸಭೆಯು ತನ್ನ ನಿಗದಿತ ಸಮಯದ 6% ಮತ್ತು ರಾಜ್ಯಸಭೆ 2% ಮಾತ್ರ ಕಾರ್ಯನಿರ್ವಹಿಸಿತು.

ಇತ್ತೀಚಿನ ದಿನಗಳಲ್ಲಿ ಈ ತಂತ್ರವನ್ನು ಮತ್ತಷ್ಟು ಸುಧಾರಿಸಲಾಗಿದೆ ಮತ್ತು ಬಲಪಡಿಸಲಾಗಿದೆ. ಪ್ರಸಕ್ತ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಆಡಳಿತ ಪಕ್ಷವೇ ಕಲಾಪ ನಡೆಯದಂತೆ ತಡೆದು ಪ್ರತಿ ದಿನವೂ ಅವಾಂತರವನ್ನು ಸೃಷ್ಟಿಸುತ್ತಿದೆ. ಕೆಲವೇ ದಿನಗಳು ಚರ್ಚೆಗಳಾಗಿ ಹೆಚ್ಚಿನ ದಿನಗಳಲ್ಲಿ ಗದ್ದಲ-ಮುಂದೂಡಿಕೆಗಳು ಆದರೆ, ಸಂಸತ್ ಅಧಿವೇಶನವೇ ಅನಗತ್ಯವಾಗಿಬಿಡುತ್ತದೆ. ಸರ್ಕಾರ ಮಾಂಡಿಸುವ ವಿಧೇಯಕಗಳು ಚರ್ಚೆಯಿಲ್ಲದೆ ಅಂಗೀಕಾರ ಪಡೆದುಕೊಳ್ಳುತ್ತವೆ. ಈ ಹಿಂದೆಯೂ ಕೆಲವೊಮ್ಮೆ ಈ ರೀತಿಯಾಗಿದೆ. ಇನ್ನು ಮುಂದೆ ಸಂಸತ್ತಿನ ಸಭೆಗಳು ಕೆಲವೇ ದಿನಗಳು ಸೇರಿ, ಗದ್ದಲ, ಆರೋಪ-ಪ್ರತ್ಯಾರೋಪದ ಮಧ್ಯೆಯೇ ವಿಧೇಯಕಗಳ ಮೇಲೆ  ಚರ್ಚೆಯಾಗದೆ ಮತದಾನವನ್ನು ಮಾಡಿ ತಮ್ಮ ಕರ್ತವ್ಯವನ್ನು ಮುಗಿಸಿಕೊಳ್ಳುತ್ತದೆ.

ಚರ್ಚೆಗಳಿಲ್ಲದ ಸಂಸತ್ತು:
ಸಂಸತ್ತಿನ ಉಭಯ ಸದನಗಳು ಜನರ ಸಮಸ್ಯೆಗಳನ್ನು ಚರ್ಚಿಸಲಿಕಾಗಿಯೇ ಇರುವುದು. ಭಾರತದ ಸಂಸತ್ತಿನಲ್ಲಿ ಹಲವು ಪ್ರಮುಖ ವಿಷಯಗಳ ಬಗ್ಗೆ ಭಾರಿ ಚರ್ಚೆಗಳು ನಡೆದಿವೆ. 1962ರ ಚೀನಾದ ಆಕ್ರಮಣದಲ್ಲಿ ಭಾರತದ ಅವಮಾನಕರ ಸೋಲಿನ ಬಗ್ಗೆ ಸಂಸತ್ತು ಚರ್ಚೆ ನಡೆಸಿತು. ಹರಿದಾಸ್ ಮುಂದ್ರಾ ಕಂಪನಿಯಲ್ಲಿ ಎಲ್.ಐ.ಸಿ ಹೂಡಿಕೆ ಮಾಡಿದ ಬಗ್ಗೆ ಸಂಸತ್ತ್ ಚರ್ಚೆ ಮಾಡಿದೆ. ಬೋಫೋರ್ಸ್ ಫಿರಂಗಿಗಳ ಆಮದಿಗೆ ಕಮಿಷನ್ ಪಡೆಯಲಾಗಿದೆ ಎಂಬ ಆರೋಪದ ಮೇಲೆ ಸದನದಲ್ಲಿ ಹಲವು ಬಾರಿ ಚರ್ಚೆ ನಡೆದಿದೆ. ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣದ ಬಗ್ಗೆಯೂ ಚರ್ಚೆ ನಡೆದಿರುತ್ತದೆ.

ಸಂಸದೀಯ ಪ್ರಜಾಪ್ರಭುತ್ವದಲ್ಲಿ ಈ ಎಲ್ಲಾ ಚರ್ಚೆಗಳು ಮತದಾನವಿಲ್ಲದೆ ಅಂತಿಮಗೊಂಡ ವಿಷಯಗಳಾಗಿವೇ. ಹಾಗಾಗಿ ಸರ್ಕಾರ ಚರ್ಚೆಗೆ ಹೆದರುವ ಅಗತ್ಯವಿಲ್ಲ. ಅಲ್ಲದೆ ಈ ಸರ್ಕಾರಕ್ಕೆ ಸಂಸತ್ತಿನಲ್ಲಿ ಬಹುಮತದ ಬೆಂಬಲವಿದೆ. ಹಾಗಾಗಿ ಚರ್ಚೆಯ ನಂತರ ಅಧಿಕಾರ ಕಳೆದುಕೊಳ್ಳುತ್ತೇವೆ ಎಂಬ ಭಯ ಪಡುವ ಅಗತ್ಯವಿಲ್ಲ. ಆದರೆ ಈ ಸರ್ಕಾರ ಯಾವ ವಿಚಾರಕ್ಕಾಗಿ ಅಂಜುತ್ತಿದೆ ಎಂದರೆ, ವಿರೋಧ ಪಕ್ಷಗಳು ಸರ್ಕಾರಕ್ಕೆ ಮುಜುಗರ ತರುವ ವಿಷಯಗಳ ಬಗ್ಗೆ ಸದನದಲ್ಲಿ ಮಾತನಾಡುತ್ತವೆ ಎಂದೇ ಅಂಜಿಕೊಂಡಿದೆ. ಭಾರತವು ಚರ್ಚೆಗಳಿಲ್ಲದ ಸಂಸತ್ತು ಎಂಬ ಯುಗವನ್ನು ಪ್ರವೇಶಿಸಿದೆಯೇ? ‘ಹೌದು’ ಎಂದೇ ಹೆದರುತ್ತಿದ್ದೇನೆ; ನನ್ನ ಭಯ ನಿಜವಾಗಿದ್ದರೆ, ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವಕ್ಕಾಗಿ ನಾವು ಶೀಘ್ರದಲ್ಲೇ ‘ವಿದಾಯ ಸಮಾರಂಭ’ವನ್ನು ನಡೆಸಬೇಕಾಗಿದೆ.

ಸಾಂದರ್ಭಿಕ ಚಿತ್ರ

ಕಾದಿರುವ ಬೆದರಿಕೆ:
ಹೊಸ ಅಧಿವೇಶನಕ್ಕಾಗಿ ಸಂಸತ್ತಿನ ಸಭೆ ಸೇರುವುದಾಗಿ ಕಲ್ಪಿಸಿಕೊಳ್ಳಿ; ಉಭಯ ಸದನಗಳ ಎಲ್ಲಾ ಸದಸ್ಯರು ಒಂದು ದೊಡ್ಡ ಸಭಾಂಗಣದಲ್ಲಿ ಒಟ್ಟುಗೂಡಿರುವುದಾಗಿ ಊಹಿಸಿಕೊಳ್ಳಿ; ಭಾರತದ ಗಣರಾಜ್ಯದ ಅಧ್ಯಕ್ಷರು ಅದರ ಎಲ್ಲಾ ಸದಸ್ಯರಿಂದ ಚುನಾಯಿತರಾಗಿದ್ದಾರೆ ಎಂದು ಕಲ್ಪಿಸಿಕೊಳ್ಳಿ; ಆ ಅಭ್ಯರ್ಥಿಯ ವಿರುದ್ಧ ಯಾರೂ ಮತ ಚಲಾಯಿಸಲು ಆಗುವುದಿಲ್ಲ ಮತ್ತು ಮತದಾನದಿಂದ ಯಾರೊಬ್ಬರೂ ದೂರವಿರಲು ಸಾದ್ಯವಿಲ್ಲ. How is Indian democracy falling?

ವಾಸ್ತವವಾಗಿ ಅಲ್ಲಿ ಒಬ್ಬರೇ ಅಭ್ಯರ್ಥಿ ಇರುತ್ತಾರೆ. ದೇಶದ ಸಮಸ್ತ ಜನತೆ ಈ ಚುನಾವಣಾ ಫಲಿತಾಂಶವನ್ನು ‘ಜನತಂತ್ರದ ವಿಜಯ’ ಎಂದು ಸಂಭ್ರಮಿಸುತ್ತಾರೆ. ಇದು ಭಾರತದಲ್ಲಿ ಸಾದ್ಯವೇ? ಖಂಡಿತ ಸಾದ್ಯವಿದೆ! ಕಾರಣ ನಾವು ಈಗ ನಿರಂತರವಾಗಿ, ಏಕರೂಪವಾಗಿ; ಒಂದು ಪಕ್ಷದ ಆಡಳಿತದತ್ತ ಸಾಗುತ್ತಿದ್ದೇವೆ. 15 ರಾಜ್ಯಗಳು ಒಂದೇ ರಾಜಕೀಯ ಪಕ್ಷದಿಂದ ಆಳ್ವಿಕೆ ನಡೆಸುತ್ತಿರುವ ಹಿನ್ನಲೆಯಲ್ಲಿ, ಆ ಪಕ್ಷ ಮತ್ತು ಅದರ ಮಿತ್ರ ಪಕ್ಷಗಳು ಒಟ್ಟಾಗಿ ಲೋಕಸಭೆಯಲ್ಲಿ 362 ಮತ್ತು ರಾಜ್ಯಸಭೆಯಲ್ಲಿ 163 ಸದಸ್ಯರನ್ನು ಹೊಂದಿರುವುದರಿಂದ, ಭಾರತವನ್ನು ‘ಪ್ರಜಾಸತ್ತಾತ್ಮಕ ಗಣರಾಜ್ಯ’ ಸ್ಥಾನಮಾನದಿಂದ ‘ಪ್ರಜೆಗಳ ಗಣರಾಜ್ಯ’ ಎಂದು ಬದಲಾಯಿಸುವುದನ್ನು ಯಾರೂ ತಡೆಯಲು ಸಾದ್ಯವಿಲ್ಲ.How is Indian democracy falling?

ಈ ಅಪಾಯವು ಸ್ವಲ್ಪ ದೂರದಲ್ಲಿದೆ. ಆದರೆ, ಅದು ನಡೆಯುವುದಿಲ್ಲ ಎಂದು ನಿರಾಕರಣೆ ಮಾಡಲಾಗದು. ಭಾರತ ಹೀಗೆ ಪ್ರಜೆಗಳ ಗಣರಾಜ್ಯವಾಗಿ ಬದಲಾದಾಗ, ಭಾರತದ ಪ್ರಜಾಸತ್ತಾತ್ಮಕ ಗಣರಾಜ್ಯವು ಕೊನೆಯದಾಗಿ ಅದು ವಿಶ್ರಾಂತಿ ತೆಗೆದುಕೊಳ್ಳಬೇಕಾದ ಸ್ಥಳಕ್ಕೆ ಹೋಗಿ ಸೇರಿರುತ್ತದೆ! How is Indian democracy falling?

ಕೃಪೆ: arunchol.com
ಕನ್ನಡಕ್ಕೆ: ಡಿ.ಸಿ.ಪ್ರಕಾಶ್, ಸಂಪಾದಕರು,
ಡೈನಾಮಿಕ್ ಲೀಡರ್

ದೇಶ ವಿದೇಶ

ಡಿ.ಸಿ.ಪ್ರಕಾಶ್, ಸಂಪಾದಕರು

ಮುಂದಿನ ವರ್ಷ ನಡೆಯಲಿರುವ ಸಂಸತ್ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಅದರ ಭಾಗವಾಗಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ, ಸಂಸದ ರಾಹುಲ್‌ಗಾಂಧಿ ಅವರು ಭಾರತ್ ಜೋಡೊ ಯಾತ್ರೆಯ ಹೆಸರಿನಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಕೈಗೊಂಡು ದೇಶದ ಜನರನ್ನು ಭೇಟಿ ಮಾಡಿ ಅವರ ಅಹವಾಲು ಆಲಿಸಿದರು. ಈ ಏಕತಾ ಯಾತ್ರೆಗೆ ಜನ ಅದ್ಧೂರಿ ಸ್ವಾಗತ ನೀಡಿದ್ದರು.

ಏಕತಾ ಯಾತ್ರೆ ಮುಗಿಸಿ ಇಂಗ್ಲೆಂಡ್ ರಾಜಧಾನಿ ಲಂಡನ್ ಗೆ ತೆರಳಿದ ರಾಹುಲ್ ಗಾಂಧಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಹಾಗೂ ಅಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ರಾಹುಲ್ ಭಾಗವಹಿಸುತ್ತಿದ್ದಾರೆ. ಲಂಡನ್ ನಲ್ಲಿ ಮಾತನಾಡಿದ ರಾಹುಲ್ ಗಾಂಧಿ, ‘ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ. ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷ ನಾಯಕರ ಮೇಲೆ ನಿಗಾ ಇಡಲಾಗುತ್ತಿದೆ. ದೇಶದಲ್ಲಿ ನಿರುದ್ಯೋಗ ಹೆಚ್ಚಿದೆ. ಇದೇ ವೇಳೆ ಬೆಲೆಯೂ ಏರಿಕೆಯಾಗಿದೆ. ಭಾರತದ ಸಂಪೂರ್ಣ ಆರ್ಥಿಕತೆಯನ್ನು ಒಬ್ಬರು ಅಥವಾ ಇಬ್ಬರು ನಿಯಂತ್ರಿಸುತ್ತಿದ್ದಾರೆ. ಹಾಗಾಗಿ ಜನರು ತಮ್ಮ ಆರ್ಥಿಕತೆಯನ್ನು ಕಳೆದುಕೊಂಡಿದ್ದಾರೆ. ಅಮೆರಿಕ, ಭಾರತದಂತಹ ಪ್ರಜಾಸತ್ತಾತ್ಮಕ ರಾಷ್ಟ್ರಗಳ ಉತ್ಪಾದನೆ ಕುಸಿದು ಚೀನಾಕ್ಕೆ ಸ್ಥಳಾಂತರವಾಗುತ್ತಿದೆ’ ಎಂದು ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

Kiran Rijiju

ಇದರಿಂದ ಕೆಂಡಾಮಂಡಲರಾದ ಬಿಜೆಪಿ ಸದಸ್ಯರು ‘ರಾಹುಲ್ ಗಾಂಧಿ ವಿಶ್ವಮಟ್ಟದಲ್ಲಿ ಭಾರತದ ಕೀರ್ತಿಯನ್ನು ಕೆಡಿಸಿದ್ದಾರೆ’ ಎಂದು ತೀವ್ರ ಟೀಕೆ ಮಾಡುತ್ತಿದ್ದಾರೆ. ಈ ಸಂಬಂಧ ಕೇಂದ್ರ ಕಾನೂನು ಸಚಿವ ರಿಜಿಜು ಮಾತನಾಡಿ, ರಾಹುಲ್ ಗಾಂಧಿಯ ಹೆಸರು ಹೇಳದೆ, ‘ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆಗೆ ಮಸಿ ಬಳಿಯುವ ಉದ್ದೇಶದಿಂದ ಕೆಲವರು ದೇಶದ ಪ್ರಜಾಪ್ರಭುತ್ವದ ಬಗ್ಗೆ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಆದರೆ ಈ ಪ್ರಯತ್ನ ಎಂದಿಗೂ ಯಶಸ್ವಿಯಾಗುವುದಿಲ್ಲ. ಅಮೆರಿಕ ಬಹುಶಃ ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವವಾಗಿದೆ. ಆದರೆ ಭಾರತವು ಪ್ರಜಾಪ್ರಭುತ್ವದ ತಾಯಿನಾಡು. ನ್ಯಾಯಾಲಯಗಳು ವಿರೋಧ ಪಕ್ಷಗಳಂತೆ ವರ್ತಿಸಬೇಕು ಎಂದು ಅವರು ಭಾವಿಸುತ್ತಿದ್ದಾರೆ. ಅವರು ಸರ್ಕಾರದ ವಿರುದ್ಧ ಮತ್ತು ಅವರ ಪರವಾಗಿ ತೀರ್ಪುಗಳನ್ನು ಬಯಸುತ್ತಿದ್ದಾರೆ. ಆದರೆ ಅದು ಆಗದ ಕಾರಣದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರುದ್ಧ ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ’ ಎಂದು ತೀವ್ರವಾಗಿ ಟೀಕಿಸಿದ್ದರು.

Jayaram Ramesh

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಯರಾಮ್ ರಮೇಶ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಇದಕ್ಕೆ ವಿವರಣೆ ನೀಡಿದ್ದಾರೆ: ‘ರಾಹುಲ್ ಗಾಂಧಿ ಅವರು ಚೀನಾದಂತಹ ರಾಜ್ಯ-ನಿಯಂತ್ರಿತ ಉದ್ಯಮ ವ್ಯವಸ್ಥೆಯ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿದ್ದಾರೆ ಮತ್ತು ಭಾರತದಂತಹ ಪ್ರಜಾಪ್ರಭುತ್ವ ದೇಶಗಳಲ್ಲಿ ಉತ್ಪಾದನಾ ಸಾಧನಗಳನ್ನು ಗರಿಷ್ಠಗೊಳಿಸಲು ಒತ್ತು ನೀಡುವ ಅವಶ್ಯಕತೆಯಿದೆ. ಬಿಜೆಪಿಯವರಿಗೆ ಆ ಮಾತಿನ ಸೂಕ್ಷ್ಮತೆ ಅರ್ಥವಾಗುತ್ತಿಲ್ಲ’ ಎಂದರು. ಇದೇ ವೇಳೆ ರಾಹುಲ್ ಭಾಷಣಕ್ಕೆ ಹಲವರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

Anyone who tries to discredit India will never succeed: Kiren Rijiju
The comments come in wake of the ruling BJP attacking Congress leader Rahul Gandhi and accusing him of attempting to defame and denigrate India on foreign soil after the latter’s speech at Cambridge. Union minister of law Kiren Rijiju on Monday said that anyone who attempts to discredit India and its institution will never succeed.