ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಎಲೆಕ್ಟೋರಲ್ ಬಾಂಡ್‌ ಹಗರಣ Archives » Dynamic Leader
October 23, 2024
Home Posts tagged ಎಲೆಕ್ಟೋರಲ್ ಬಾಂಡ್‌ ಹಗರಣ
ರಾಜಕೀಯ

ವಿರುದುನಗರ: ತಮಿಳುನಾಡು ವಿರುದುನಗರ ಜಿಲ್ಲಾ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಕಛೇರಿ ವತಿಯಿಂದ ಜಿಲ್ಲಾಧಿಕಾರಿಗಳ ಸಭೆಯಲ್ಲಿ, ಮುಸ್ಲಿಂ ಮಹಿಳಾ ಸಹಾಯ ಸಂಘದಿಂದ ಆಯೋಜಿಸಿದ್ದ ಕ್ಷೇಮಾಭಿವೃದ್ಧಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಜಯಶೀಲನ್ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿರುದುನಗರ ಸಂಸದ ಮಾಣಿಕಂ ಟ್ಯಾಗೋರ್ (Manickam Tagore) ಅವರು 108 ಫಲಾನುಭವಿಗಳಿಗೆ 10.24 ಲಕ್ಷ ರೂ.ಗಳ ಕಲ್ಯಾಣ ನೆರವನ್ನು ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಮಾಣಿಕಂ ಟ್ಯಾಗೋರ್, “ನೈತಿಕ ಹಕ್ಕು ಬಗ್ಗೆ ಮಾತನಾಡುವ ಬಿಜೆಪಿಯವರಿಗೆ ಅದೇ ನೈತಿಕ ಹಕ್ಕು ನಿರ್ಮಲಾ ಸೀತಾರಾಮನ್ (Nirmala Sitharaman) ಅವರಿಗಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ನೈತಿಕ ಹಕ್ಕಿನೊಂದಿಗೆ ನಿರ್ಮಲಾ ಸೀತಾರಾಮನ್ ಕೂಡಲೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಹಾಗೆಯೇ ನಿರ್ಮಲಾ ಸೀತಾರಾಮನ್ ಕೆಳಗಿಳಿದು ಎಲ್ಲರಿಗೂ ಮಾದರಿಯಾಗಲಿದ್ದಾರೆಯೇ? ಅಥವಾ, ನೈತಿಕ ಹಕ್ಕು ಎಂಬುದಲ್ಲೆವೂ ಇತರರಿಗೆ ಮಾತ್ರ. ಇತರರಿಗೆ ಬಂದರೆ ರಕ್ತ.. ತನಗೆ ಬಂದರೆ ಅದು ಟೊಮೆಟೊ ಚಟ್ನಿ ಎಂದು ಹೇಳುತ್ತಾರೆಯೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಮುಂದುವರಿದು ಮಾತನಾಡಿದ ಸಂಸದ ಮಾಣಿಕಂ ಟ್ಯಾಗೋರ್, ನಿರ್ಮಲಾ ಸೀತಾರಾಮನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.