ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಕನ್ನಡ ಕಲಿಕೆ Archives » Dynamic Leader
October 23, 2024
Home Posts tagged ಕನ್ನಡ ಕಲಿಕೆ
ರಾಜ್ಯ ಶಿಕ್ಷಣ

ಭಾಗ:2

ಕಾಂ.ನವೀನ್ ಸೂರಿಂಜೆ ಅವರೇ, ನೀವು ಅಥವಾ ಈಗಿನ ‘ಕನ್ನಡ ಅಭಿವೃದ್ಧಿ ಪ್ರಾಧಿಕಾರದ – ಮದರಸಗಳಲ್ಲಿ ಕನ್ನಡಕಲಿಕೆ’  ನಿಲುವನ್ನು ಒಪ್ಪದಿರುವ ಎಡಪಂತಿಯ ಅಥವಾ ಜಾತ್ಯತೀತ ಕಾಂಗ್ರೆಸ್ಸಿಗರ ಗಮನಕ್ಕೆ ಈ ಒಂದು ಪ್ರತಿಕ್ರಿಯೆ!

ನವೀನ್ ಸೂರಿಂಜೆಯ ಅಭಿಪ್ರಾಯ: ಮದರಸಾದಲ್ಲಿ ‘ಕನ್ನಡ ಕಲಿಕೆ’ ಎಂಬ ಸರ್ಕಾರಿ ಕಾರ್ಯಕ್ರಮ ಯೋಜನೆಯನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರ ಏಕೆ ಕೈಬಿಟ್ಟಿತ್ತು ಎಂಬುದನ್ನು ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆಯವರು ಸ್ಪಷ್ಟವಾಗಿ ಹೇಳಬೇಕಿತ್ತು.

ಖಾಸಿಂ ಸಾಬ್ ಅವರ ಪ್ರತಿಕ್ರಿಯೆ: ಕೈ ಬಿಟ್ಟಿದ್ದಕ್ಕೆ ಕಾರಣ ಹಾಳಾಗಿ ಹೋಗಲಿ. ಮದರಸಾದಲ್ಲಿ ‘ಕನ್ನಡ ಕಲಿಕೆ’ ಎಂಬ ಸರ್ಕಾರಿ ಕಾರ್ಯಕ್ರಮ ಯೋಜನೆಯನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರ ಯಾಕೆ ಕೈಗೆತ್ತಿಕೊಂಡಿತು. ಈ ಕಾನ್ಸೆಪ್ಟ್, ಪ್ಲಾನ್ ಯೋಜನೆ ಪ್ರಾಧಿಕಾರಕ್ಕೆ ಬಂದಿದ್ದಾದರು ಯಾವಾಗ? ಹೇಗೆ? ಯಾರು ಈ ಪ್ರಾಧಿಕಾರಕ್ಕೆ ಮನವಿ ಮಾಡಿದ್ದರು. ಅಲ್ಲದೆ, ಈ ಯೋಜನೆಯನ್ನು ಕೈಬಿಡುವ ಮೊದಲು ಇದರ ಕುರಿತು ಸೌಜನ್ಯಕ್ಕಾದರೂ ಒಂದಷ್ಟು ಮುಸ್ಲಿಂ ಸಮುದಾಯದ ಪ್ರತಿನಿದಿಗಳ ಜೊತೆ ಚರ್ಚೆ, ಸಂವಾದ ನಡೆಸಬಹುಗಾಗಿತ್ತು. ಇದನ್ನು ಪ್ರಾಧಿಕಾರ ಮಾಡಲಿಲ್ಲ. ಇದು ತಪ್ಪಲ್ಲವೇ?

ನಿಮ್ಮ ಅಭಿಪ್ರಾಯ: “ವಿರೋಧ ಪ್ರಕಟವಾದ್ದರಿಂದ ಆ ವಿಷಯವನ್ನು ಕೈ ಬಿಡಲಾಗಿದೆ.”

ನಮ್ಮ ಪ್ರತಿಕ್ರಿಯೆ: ಇಂತಹ ಆರ್ಥ ಪೂರ್ಣ, ಮುಸ್ಲಿಂ ಸಮುದಾಯಕ್ಕೆ ಕನಿಷ್ಠ ಈ ಒಂದು ಕ್ಷೇತ್ರದಲ್ಲಾದರೂ ನ್ಯಾಯ, ಅವಕಾಶ ಸಿಗಬಹುದಾದ ಈ  ಯೋಜನೆಯನ್ನು ಖಂಡಿತವಾಗಿಯೂ ‘ಸಾಮಾಜಿಕ ನ್ಯಾಯ’ ಬಯಸುವ ಮುಸ್ಲಿಮರು ವಿರೋಧಿಸುತ್ತಿರಲಿಲ್ಲ. ಅಂದಹಾಗೆ ನಿಜವಾಗಿಯೂ ಇದಕ್ಕೆ ವಿರೋಧ ಪ್ರಕಟವಾಯಿತ? ಇದನ್ನು ವಿರೋಧಿಸಿದ ಒಂದಷ್ಟು ಮುಸ್ಲಿಂ ಸಂಘ / ಸಂಸ್ಥೆ / ಜಮಾಮ್ / ಗುಂಪು/ ಬರಹಗಾರರ / ಬುದ್ಧಿಜೀವಿಗಳ ಹೆಸರುಗಳನ್ನು ಹೇಳಿ? ಏಕೆಂದರೆ, ನಾನು ಸಹ ಒಬ್ಬ ಕರ್ನಾಟಕದ ಮುಸ್ಲಿಂ ಸೋಶಿಯಲ್ ಆಕ್ಟಿವಿಸ್ಟ್, ನಾನು ವಿರೋಧ ಮಾಡಲಿಲ್ಲ. ನನ್ನಂತಹ ನೂರಾರು ಕನ್ನಡಿಗ ಮುಸ್ಲಿಂ ಸುಮುದಾಯ ಪ್ರತಿನಿಧಿಗಳು ಈ ಪ್ರಾಧಿಕಾರದ ನಿಲುವಿನ ಪರವಾಗಿದ್ದೆವು. ಕೊನೆಗೂ ಇಂತಹ ಒಂದು ಮುಸ್ಲಿಮರ ಸಾಮಾಜಿಕ ನ್ಯಾಯದ ಸಣ್ಣ ಮಟ್ಟದ ಆಪರ್ಚೂನಿಟಿಯನ್ನು ಪ್ರಾಧಿಕಾರ ಮಿಸ್ ಮಾಡಿದೆ.

ನಿಮ್ಮ ಅಭಿಪ್ರಾಯ: “ಇದು ಅತಿಯಾಯ್ತು. ಕನ್ನಡ ಕಲಿಯುವುದಕ್ಕೂ ಮುಸ್ಲೀಮರ ವಿರೋಧವೇ?” ಎಂಬ ಪ್ರಶ್ನೆ / ಹೊಸ ಆರೋಪವನ್ನು ಮುಸ್ಲಿಮರು ಎದುರಿಸಬೇಕಾಗುತ್ತದೆ.

ನಮ್ಮ ಪ್ರತಿಕ್ರಿಯೆ: ಇದು ಒಂದು ಭೂತ. ಇಂತಹ ನೂರಾರು ಭೂತ, ಬೊಂಬೆಗಳನ್ನು ಕರ್ನಾಟಕದ ಜಾತ್ಯತೀತ / ಜನಪರ / ಪ್ರಗತಿಪರ / ಕ್ರಾಂತಿಕಾರಿ ಸಂಘಟನೆಗಳು ಮುಸ್ಲಿಮರಿಗೆ ನೀಡಿವೆ. ಇಲ್ಲೂ ಕೂಡು ಅದೇ ಮತ್ತೆ ಪರಿವರ್ತನೆಯಾಗಿದೆ. ಇಂತಹವುಗಳು ಬೇಡ. ಇಂತಹ ನಾಡಪರ ಯೋಜನೆಗಳಿಗೂ “ಮುಸ್ಲಿಮರ ವಿರೋಧವೇ?” ಅನ್ನುವ ಕೋಮುವಾದಿಗಳ ಪ್ರಶ್ನೆಗೆ ನಿಮ್ಮ ಈ ಗುಮಾನಿ ಸರಿಯಾಗಿದೆ. ಇದರ ನಡುವೆ ಒಂದಷ್ಟು ತಾಳ್ಮೆಯಿಂದ ಜಾತ್ಯತೀತ ಮನಸ್ಥರು ಒಂದನ್ನು ಯೋಚಿಸಬೇಕಿತ್ತು. ಮುಸ್ಲಿಮರ ಸ್ವಂತ ಅಭಿಪ್ರಾಯಗಳನ್ನು ಪಡೆಯದೆ ಇದರ ಸಾದಕ – ಬಾದಕಗಳ ನಿರ್ಣಯ, ಅಂಗಿಕಾರ, ತಿರಸ್ಕಾರಗಳನ್ನು ಮಾಡುವುದು ‘ಆರೋಗ್ಯಕರ ಸಮಾಜದ ಬುದ್ದಿಜೀವಿ’ಗಳ ಲಕ್ಷಣವಲ್ಲ. ಜೊತೆಗೆ, ಇಂತಹ ‘ಹೊಸ ಆರೋಪ’ಗಳು ಅಥವಾ ‘ಹಳೆಯ ಆರೋಪ’ಗಳು ಕರ್ನಾಟಕದ ಮುಸ್ಲಿಮರಿಗೆ ಹೊಸದಲ್ಲ. ಇಂತಹ ಕಲ್ಪಿತ ವಿರೋಧಿ – ಶತೃತ್ವಗಳು ಹೊರತಾಗಿಯೂ ನಾಡಿನ ಮುಸ್ಲಿಮರು ಅಭಿವೃದ್ಧಿ, ಸಮಾನ ಪಾಲು, ಸಮಾನ ಭಾಗವಹಿಸುವಿಕೆಗಳ ಕುರಿತು ಹೆಚ್ಚು ಚಿಂತಿತರಾಗಿದ್ದಾರೆ.

ನಿಮ್ಮ ಅಭಿಪ್ರಾಯ: ಮದರಸದಲ್ಲಿ ಸರ್ಕಾರಿ ಪ್ರಾಯೋಜಿತ ಕನ್ನಡ ಕಲಿಕಾ ಕಾರ್ಯಕ್ರಮವು ಈ ಕೆಳಕಂಡ ಅಪಾಯ / ಅಪ್ರಸ್ತುತೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಪ್ರಾಧಿಕಾರವು ಕಾರ್ಯಕ್ರಮವನ್ನು ರದ್ದುಗೊಳಿಸಿದೆ ಎಂದು ನಾವು ಭಾವಿಸುತ್ತೇವೆ.

ನಮ್ಮ ಪ್ರತಿಕ್ರಿಯೆ: ಅಪಾಯ / ಅಪ್ರಸ್ತುತೆಗಳನ್ನು ಎದುರಿಸಬೇಕಾಗುತ್ತದೆ ಅಂತ ಹೇಳಿದ್ದೀರಿ. ಯಾರಿಗೆ ಆಪಾಯ? ಹೇಗೆ?  ಮದರಸಗಳಲ್ಲಿ ಕನ್ನಡಕಲಿಕೆಯಿಂದ ಮುಸ್ಲಿಂ ಸಮುದಾಯಕ್ಕೆ, ಈ ಮಕ್ಕಳ ಭವಿಷ್ಯದಲ್ಲಿ ಆಗಬಹುದಾದ ಬದಲಾವಣೆ, ಸಿಗಬಹುದಾದ ಅವಕಾಶಗಳ ಕುರಿತು ನಿಮಗೂ ಜೊತೆಗೆ ಪ್ರಾಧಿಕಾರದ ಅಧ್ಯಕ್ಷರ ಗಮನಕ್ಕೂ ಇಲ್ಲ ಅಂತ ಕಾಣುತ್ತೆ. ಕರ್ನಾಟಕದ ಮದರಸಗಳಲ್ಲಿ ಕನ್ನಡ ಕಲಿಸಬಾರದೆ…!? ಇದು ಸಹ ಒಂದು ರೀತಿಯ ಸರ್ಕಾರದ ಪಾಲಿದಾರಿಕೆಯಲ್ಲಿನ ವಂಚನೆಯಲ್ಲವೇ?

ಇದನ್ನೂ ಓದಿ: Part-1: ಕರ್ನಾಟಕದ ಮದರಸಗಳಲ್ಲಿ ಕನ್ನಡ ಕಲಿಸಬಾರದೆ..!? – ಖಾಸಿಂ ಸಾಬ್ ಎ.

ನವೀನ್ ಸೂರಿಂಜೆ.., ನಾನು ಇಷ್ಟು ಹೇಳಿದ ನಂತರ ನೀವು ನೀಡಿದ ಎಂಟು ಕಾರಣ – ಸಮರ್ಥನೆಗಳಿಗೆ ನಾನು ಉತ್ತರಿಸುವುದು ಅಪ್ರಸ್ತುತ ಎಂಬುದು ನನ್ನ ಭಾವನೆ. ಅಲ್ಲದೆ, ಕರ್ನಾಟಕದ ಮದರಸಗಳು ಮೊದಲು ಅಧಿಕೃತವಾಗಿ ದಾಖಲಾಗಬೇಕು(ನೋಂದಣಿ ). ಅಲ್ಲಿ ಓದಿದ ವಿದ್ಯಾರ್ಥಿಗಳ ಅಂಕ ಪಟ್ಟಿ (Marks Card) ಎಲ್ಲಾ ಸರ್ಕಾರಿ ಉದ್ಯೋಗಗಳಿಗೆ ಅನ್ವಯವಾಗಬೇಕು. ಕರ್ನಾಟಕ ಮದರಸಗಳ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸಬೇಕು. ಮದರಸಗಳ ಆಧುನೀಕರಣದ ಜೊತೆಗೆ ಪಠ್ಯ ಪುಸ್ತಕಗಳನ್ನು ಸರ್ಕಾರವೇ ನಿರ್ಧರಿಸಬೇಕು ಎಂಬುದು ನನ್ನ ಅಭಿಪ್ರಾಯ.

ಮುಸ್ಲಿಂ ವಿರೋಧಿ ಕೋಮುಶಕ್ತಿಗಳು ಮದರಸ ಮೇಲೆ ಸವಾರಿ ಮಾಡುವುದು ಇದು ಮೊದಲಲ್ಲ; ಕೊನೆಯೂ ಅಲ್ಲ. ಕೋಮುವಾದಿ ಬುದ್ದಿಗೆ ತನ್ನ ಅಜೆಂಡ ಜಾರಿಗೊಳಿಸಲು ನೆಪಗಳೇ ಬೇಕಾಗಿಲ್ಲ. 2b ಮುಸ್ಲಿಂ ಒಬಿಸಿ ಮೀಸಲಾತಿಯನ್ನು ಯಾವುದೆ ಪೂರ್ವ ಯೋಜನೆ ಇಲ್ಲದೆಯೆ ಒಂದೇ ದಿನದಲ್ಲಿ ಕಿತ್ತುಕೊಂಡವರಿಗೆ ಮದರಸ ಒಂದು ಲೆಕ್ಕವಲ್ಲ. ಕೋಮುವಾದಿಗಳು ಮುಂದೊಂದುದಿನ ಇದನ್ನು ದುರ್ಬಳಕೆಮಾಡಿ ಕೊಂಡಿಯಾರು ಎಂಬ ಗುಮಾನಿಗಳಿಗೆ ಯಡೆಮಾಡಿಕೊಟ್ಟರೆ ಬಹುಶಃ ಮುಸ್ಲಿಂ ಸಮುದಾಯ ನಾಡಿನಲ್ಲಿ ಸಾಮಾಜಿಕ ನ್ಯಾಯ – ಸಮಪಾಲು ವಡೆಯುವುದು ಅಸಾಧ್ಯ. ಕೋಮುವಾದಿಗಳು ಸಹ ಇದನ್ನೇ ಬಯಸುತ್ತಿದ್ದಾರೆ, ಸರ್ಕಾರದ ನಿಗಮ / ಮಂಡಳಿ / ಪ್ರಾಧಿಕಾರಗಳು ಸಹ ಪರೋಕ್ಷವಾಗಿ ಈ ನೀತಿಗಳ ಜಾರಿಯಲ್ಲಿಯೇ ಇವೆ.

ಸಾಧ್ಯವಾದರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ತಂಡವು ಕರ್ನಾಟಕದ ಮದರಸಗಳ ಕುರಿತು ಸಮೀಕ್ಷೆ ನಡೆಸಿ ಕನ್ನಡ ಕಲಿಕೆಯ ಅಗತ್ಯ, ಭವಿಷ್ಯದ ಉದ್ಯೋಗಗಳ ಆದ್ಯತೆ, ಸಾಧ್ಯತೆ, ಈ ಮೂಲಕ ಅವಕಾಶಗಳ ಕುರಿತು ಒಂದು ಸಮಗ್ರ ಅಧ್ಯಯನ ನಡೆಸಲಿ. ಆ ಬಳಿಕ ನಿರ್ಧಾರ ಕೈಗೊಳ್ಳಲಿ. ಅದು ಬಿಟ್ಟು ಏಕಾ-ಏಕಿ ಮದರಸಗಳಲ್ಲಿ ಕಡ್ಡಾಯ ಕನ್ನಡ ಕಲಿಕೆ ಆದೇಶ ಜಾರಿ, ಇದರ ಬೆನ್ನಲ್ಲೆ ಈ ಆದೇಶವನ್ನು ಹಿಂಪಡೆದದ್ದು, ಇಂತಹ ಊಹಾ-ಪೋಹ ಚಲ್ಲಾಟಗಳು, ಕಲ್ಪಿತ ಸತ್ಯ-ಸುಳ್ಳುಗಳ ಆಧಾರದ ಯೋಜನೆಗಳನ್ನು ಹಮ್ಮಿಕೊಳ್ಳುವುದು ಬೇಡ.

ಮೊದಲು ಸಮೀಕ್ಷೆ ನಡೆಸಿ ಅದರ ಆಧಾರದ ಮೇಲೆ ಮದರಸಗಳಲ್ಲಿ ಕನ್ನಡ ಕಲಿಕೆಯ ಅಗತ್ಯವೋ, ಬೇಡವೋ ಎಂಬುದನ್ನು ನಿರ್ಧರಿಸಬೇಕು. ಸಂಸ್ಕೃತ, ಕ್ರಿಶ್ಚಿಯನ್, ಬುದ್ಧಿಸ್ಟ್ ಇತರೆ ಧಾರ್ಮಿಕ ಶಾಲೆಗಳಲ್ಲಿ  ಕನ್ನಡವನ್ನು ಕಲಿಸಲಾಗುತ್ತಿದೆಯೇ? ಇಂಗ್ಲಿಷ್ ಮೀಡಿಯಂ ಶಾಲೆಗಳಲ್ಲಿ ಕನ್ನಡ ಕಲಿಸ್ತಾರಾ? ಎಂಬ ವಿಷಯಗಳು, ಮದರಸದಲ್ಲಿ ಕನ್ನಡ ಕಲಿಸಬಾರದು ಎಂಬುದಕ್ಕೆ ಆಧಾರವಾಗಬಾರದು. ಇಲ್ಲೆಲ್ಲಾ ಕನ್ನಡ ಕಲಿಸಲಾಗುತ್ತೋ ಇಲ್ಲವೋ ಎಂಬುದನ್ನು ನೋಡಿಕೊಂಡು ಮದರಸದಲ್ಲಿ ಕಲಿಸಬೇಕೋ ಬೇಡವೋ ಎಂಬುದನ್ನು ನಿರ್ಧರಿಸುವುದು ಸರಿಯಲ್ಲ.

ಇಂಗ್ಲಿಷ್ ಮಾಧ್ಯಮಗಳ ಹಾವಳಿಯಿಂದ ಕನ್ನಡ ಕಲಿಕೆ ದುಸ್ತರವಾಗಿರುವ ಈ ಕಾಲಘಟ್ಟದಲ್ಲಿ, ಮುಸ್ಲಿಂ ಸಮುದಾಯದ ಮಕ್ಕಳಿಗೆ ಕನ್ನಡ ದಕ್ಕುವುದರಿಂದ ಲಾಭ ಹೆಚ್ಚು. ಈ ಮಕ್ಕಳು ಇಂಗ್ಲಿಷ್ ಅಥವಾ ಉರ್ದು ಮೀಡಿಯಂ ಶಾಲೆಗೆ ಹೋದರೂ ಕನ್ನಡ ಪ್ಲಸ್ ಆಗಿ ಅವರಿಗೆ ದಕ್ಕುತ್ತದೆ. ಮದರಸದಲ್ಲಿ ಕನ್ನಡ ಕಲಿಸಬೇಡಿ ಎನ್ನುವುದಕ್ಕಿಂತ ಕನ್ನಡ ಮೀಡಿಯಂನಲ್ಲಿ ಕಲಿತವರಿಗೆ ಉದ್ಯೋಗದಲ್ಲಿ ಆದ್ಯತೆ ಸಿಗುವಂತೆ, ಮದರಸದಲ್ಲಿ ಕನ್ನಡ ಕಲಿತ ಮಕ್ಕಳಿಗೆ ಉದ್ಯೋಗಗಳಲ್ಲಿ ಆದ್ಯತೆಗಳನ್ನು ಕಲ್ಪಿಸಲು ಸಾಧ್ಯವೆ ಎಂಬ ನಿಟ್ಟಿನ ಆರೋಗ್ಯಕರ ಚಿಂತನೆ ಹೆಚ್ಚು ಉತ್ತಮ ವಾಗಬಹುದು.

ಮದರಸದಲ್ಲಿ ಕನ್ನಡ ಕಲಿಯುವುದರಿಂದ ಮುಸ್ಲಿಮರಿಗೆ ಕನ್ನಡ ಬರುವುದಿಲ್ಲ ಎಂಬ ಸಂದೇಹ ಹೋಗುತ್ತದೆ ಅಂತಲೋ ಅಥವಾ ಮುಂದೆ ಕೋಮುವಾದಿ ಪಕ್ಷಗಳು ಅಧಿಕಾರಕ್ಕೆ ಬಂದರೆ ಮದರಸಗಳ ಮೇಲೆ ಸವಾರಿ ಮಾಡಲು ಅವಕಾಶ ನೀಡಿದಂತ್ತಾಗುತ್ತದೆ ಎಂದು ಊಹಿಸಿಕೊಂಡು ಕರ್ನಾಟಕದ ಮದರಸಗಳಲ್ಲಿ ಕನ್ನಡ ಕಲಿಕೆ ವಿರೋಧಿಸುವುದು ಸೂಕ್ತವಲ್ಲ. ಅಲ್ಲದೆ ಇಂತಹ ಭಯದ ಗುಮಾನಿಗಳಿಂದ ಮುಸ್ಲಿಮರಿಗೆ ಸಿಗಬಹುದಾದ ಇಂತಹ ಕಿಂಚಿತ್ತು ಅವಕಾಶಗಳನ್ನು ಸಹ ಕಸಿದು ಕೊಳ್ಳುವುದು ಬೇಡ.

• ಖಾಸಿಂ ಸಾಬ್, ಬೆಂಗಳೂರು.

ರಾಜ್ಯ ಶಿಕ್ಷಣ

ನವೀನ್ ಸೂರಿಂಜೆ., ಕರ್ನಾಟಕದ ಮದರಸ – ಕನ್ನಡ ಕಲಿಕೆ – ಕೋಮುವ್ಯಾದಿ ನುಸುಳುವಿಕೆ ಕುರಿತು ನಿಮ್ಮ ನೀಲುವನ್ನು ಬದಲಾವಣೆ ಮಾಡಿಕೊಳ್ಳಲು, ನೀವು ಇತ್ತೀಚೆಗೆ ಪ್ರಕಟಿಸಿದ ಎರಡು ಲೇಖನಗಳ ಎರಡು ಭಾಗಗಳಿಗೆ ನನ್ನ ಪ್ರಶ್ನೆ – ಪ್ರತಿಕ್ರಿಯೆಗಳು!

 ‘ಮದರಸಗಳಲ್ಲಿ ಕನ್ನಡ ಜಾರಿ’  ಸುತ್ತೋಲೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು.

 ‘ವಿರೋಧ ಪ್ರಕಟವಾದ್ದರಿಂದ ಈ ವಿಷಯನ್ನು ಕೈ ಬಿಡಲಾಗಿದೆ’ ಕನ್ನಡ ಅಭಿವೃದ್ಧಿ ಪ್ರಾಧಿಕಾರ,  ಅಧ್ಯಕ್ಷರು, ಪುರುಷೋತ್ತಮ ಬಿಳಿಮಲೆ.

ಈ ಪ್ರಾಧಿಕಾರಕ್ಕೆ ಮನವಿಸಲ್ಲಿಸಿದ್ದು ಯಾರು? ಇದಕ್ಕೆ ವಿರೋಧವ್ಯಕ್ತ ಪಡಿಸಿದ್ದು ಯಾರು?

ನವೀನ್ ಸೂರಿಂಜೆ: ‘ಮದರಸದಲ್ಲಿ ಕನ್ನಡ ಜಾರಿ’ ಇದು ಸರ್ಕಾರವೊಂದು ಮಾಡಬೇಕಾದ ಆಧ್ಯತೆಯ ಕೆಲಸವಲ್ಲ. ಮದರಸ ಮಾತ್ರವಲ್ಲ, ಸಂಸ್ಕೃತ ವೇದ ಪಾಠ ಶಾಲೆ, ಕ್ರಿಶ್ಚಿಯನ್ನರ ಆರಾಧನೆ (Adoration) ಕೇಂದ್ರಗಳಲ್ಲೂ ಕನ್ನಡ ಕಡ್ಡಾಯ ಮಾಡುವುದು ಸರ್ಕಾರಿ ಪ್ರಾಧಿಕಾರದ ಕೆಲಸವಲ್ಲ.

ಖಾಸಿಂ ಸಾಬ್: ಮದರಸದಲ್ಲಿ, ಸಂಸ್ಕೃತ ವೇದ ಪಾಠ ಶಾಲೆ, ಕ್ರಿಶ್ಚಿಯನ್, ಬುದ್ಧಿಸ್ಟ್, ಪಾರ್ಸಿ, ಜೈನ್… ಇತರೆ ಧರ್ಮಗಳ ಆರಾಧನಾ ಧಾರ್ಮಿಕ ವಿದ್ಯಾಭ್ಯಾಸ ಕೇಂದ್ರಗಳಲ್ಲಿ ಕನ್ನಡ ಜಾರಿ ಏಕೆ ಆಗ ಬಾರದು?

ನವೀನ್ ಸೂರಿಂಜೆ: ಮುಸ್ಲೀಮರ ಮೇಲಿನ ಸಾವಿರಾರು ಆರೋಪಗಳಿಗೆ ಮದರಸ ಕಾರಣವಾಗಿರುವಂತೆ ಮುಸ್ಲೀಮರಿಗೆ ಕನ್ನಡ ಬರಲ್ಲ ಎಂಬ ಆರೋಪಕ್ಕೂ ಮದರಸಾವೇ ಕಾರಣವಾಗಿದೆ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರ ಕಂಡಿದ್ದು ವಿಪರ್ಯಾಸ!

ಖಾಸಿಂ ಸಾಬ್: ಮುಸ್ಲೀಮರ ಮೇಲಿನ ಸಾವಿರಾರು ಆರೋಪಗಳಿಗೆ ಮದರಸಾ ಕಾರಣವಾಗಿದೆ ಎಂದು ಯಾವ ವರದಿಗಳು ಹೇಳಿವೆ? ಮುಸ್ಲೀಮರಿಗೆ ಕನ್ನಡ ಬರಲ್ಲ ಎಂಬ ಆರೋಪಕ್ಕೂ ಮದರಸಾವೇ ಕಾರಣವಾಗಿ… ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರ ಯಾವಾಗ ಹೇಳಿದ್ದು , ಅದನ್ನು ಅಧಿಕೃತವಾಗಿ ಹೇಳಿದ್ದು ಯಾರು, ಯಾವ ಸರ್ಕಾರ, ಯಾವ ಆಯೋಗ, ಯಾವ ಸಮಿತಿ?

ನವೀನ್ ಸೂರಿಂಜೆ: ಕನ್ನಡ ಅಭಿವೃದ್ದಿ ಪ್ರಾಧಿಕಾರದ ಪುರುಷೋತ್ತಮ ಬಿಳಿಮಲೆಯವರು ಇಂದು ಮದರಸದೊಳಗೆ ಕಾಳಜಿಯಿಂದ ನುಗ್ಗಿ ಕೆಲಸ ಮಾಡುತ್ತಾರೆ ಎಂದಿಟ್ಟುಕೊಳ್ಳೊಣಾ. ಮುಂದೆ ಬರುವ ಬಿಜೆಪಿ ಸರ್ಕಾರಕ್ಕೆ ಇದು ರಹದಾರಿ ಆಗಿರುವುದಿಲ್ಲವೇ?

ಖಾಸಿಂ ಸಾಬ್: ನಿಮ್ಮ ಈ ಗುಮಾನಿ ‘ಮುಸ್ಲಿಮರ ಕಲ್ಯಾಣದ ಕುರಿತಾದ ಮುಸ್ಲಿಂ ಏತರ ಜಾತ್ಯತೀತ ಬುದ್ದಿಜೀವಿಗಳ’ ಗುಮಾನಿಯೆ ಆಗಿದೆ. ಇಂತಹ ಬುದ್ದಿಜೀವಿಗಳ ಗುಮಾನಿಗಳಿಂದ ಮುಸ್ಲಿಂ ಸಮುದಾಯಕ್ಕೆ ಆದ ಲಾಭಕ್ಕಿಂತ ನಷ್ಟವೇ ಹೆಚ್ಚು.

ನವೀನ್ ಸೂರಿಂಜೆ: ಉತ್ತರಾಖಂಡ ಸರ್ಕಾರ ಈಗಾಗಲೇ ಮದರಸಾದಲ್ಲಿ ಶ್ರೀರಾಮ ಕತೆ ಪಾಠ ಮಾಡಲು ವಕ್ಫ್ ಇಲಾಖೆಯ ಮೂಲಕ ಚಿಂತನೆ ನಡೆಸಿದೆ ಎಂಬ ಸುದ್ದಿ ಇದೆ. ಜನವರಿ 25, 2024 ರಂದು ಸುದ್ದಿಗೋಷ್ಠಿ ನಡೆಸಿರುವ ಉತ್ತರಾಖಂಡ ವಕ್ಫ್ ಅಧ್ಯಕ್ಷ ಶಾದಾಬ್ ಅವರು “ಮದರಸ ಆಧುನೀಕರಣ ಕಾರ್ಯಕ್ರಮದ ಭಾಗವಾಗಿ ಉತ್ತರಾಖಂಡ ವಕ್ಫ್ ಮಂಡಳಿಗೆ ಸಂಯೋಜಿತವಾಗಿರುವ ಮದರಸಗಳಿಗೆ ಭಗವಾನ್ ಶ್ರೀರಾಮನ ಅಧ್ಯಯನವನ್ನು ಹೊಸ ಪಠ್ಯಕ್ರಮದಲ್ಲಿ ಪರಿಚಯಿಸಲಾಗುವುದು” ಎಂದು ತಿಳಿಸಿದ್ದಾರೆ.

ಖಾಸಿಂ ಸಾಬ್: ಅಲ್ಲಿನ ರಾಜ್ಯ ಸರಕಾರ ಶ್ರೀರಾಮ ಕತೆ, ಹನುಮಾನ್ ಚಾಲೀಸಾ, ಸಂವಿಧಾನದ ಪೂರ್ವ ಪೀಠಿಕೆ, ಅಂಬೇಡ್ಕರ್ ಅವರ ಜೀವನ ಚರಿತ್ರೆ, ಟಿಪ್ಪುವಿನ ಹುತಾತ್ಮ ಕಥೆಗಳನ್ನು ಭೋದಿಸುತ್ತಿದೆಯೇ ಎಂಬುದು ಸಮಸ್ಯೆಯಲ್ಲ. ಅಲ್ಲಿ ಕಲಿತ ಮಕ್ಕಳಿಗೆ ಅವರು ಕಲಿಯುತ್ತಿರುರ ಅರೇಬಿಕ್ ಭಾಷೆಯಲ್ಲಿ ಆದುನಿಕ, ಕಾಂಪಿಟೇಟಿವ್ ವಿದ್ಯಾಭ್ಯಾಸದ ಜೊತೆಗೆ ನೇಟಿವ್ ಅಧಿಕೃತ ನಾಡ ಭಾಷೆ ಕಲಿಸಲಾಗುತ್ತಿದೆಯೇ ಎಂಬುದು ಮುಖ್ಯವಾಗಬೇಕು.

ನವೀನ್ ಸೂರಿಂಜೆ: ಕರ್ನಾಟಕ ಸರ್ಕಾರವೂ ಭವಿಷ್ಯದಲ್ಲಿ ಇಂತದ್ದೊಂದು ಕೃತ್ಯಕ್ಕೆ ಈಗಲೇ ಅಡಿಪಾಯ ಹಾಕಿಕೊಡುತ್ತದೆಯೇ?

ಖಾಸಿಂ ಸಾಬ್: ಇಲ್ಲಿ ಮುಖ್ಯವಾಗಬೇಕಾದದ್ದು ಕರ್ನಾಟಕದಲ್ಲಿ ಕೋಮುವಾದ ತಡೆಯುವ, ಅದು ನುಸುಳಲು ಅವಕಾಶವಿರುವ ಎಲ್ಲಾ ತೊರೆಗಳನ್ನು ಮುಚ್ಚುವ ಜವಾಬ್ದಾರಿ. ಅವಕಾಶಗಳಿಗಿಂತ, ಮದರಸಗಳಲ್ಲಿ ಓದಿ ಶಿಕ್ಷಣ / ಸರ್ಟಿಫಿಕೇಟ್ ಪಡೆದ ಮಕ್ಕಳ ಭವಿಷ್ಯ ಮುಖ್ಯವಾಗಬೇಕಿದೆ.

ನವೀನ್ ಸೂರಿಂಜೆ: ಮದರಸಾದಲ್ಲಿ ಕನ್ನಡ ಶಿಕ್ಷಣ ನೀತಿಯ ಕರಡು ಪ್ರತಿಯನ್ನು ಬಿಳಿಮಲೆ ಸಿದ್ದಗೊಳಿಸಿದ್ದಾರೆ?

ಖಾಸಿಂ ಸಾಬ್: ದಯವಿಟ್ಟು ಈ ನೀತಿಯ ಕರಡು ಪ್ರತಿಯನ್ನು ಬಹಿರಂಗ ಪಡಿಸಲಿ; ಇದರ ಆಗು-ಹೋಗುಗಳ ಕುರಿತು ಸಾರ್ವಜನಿಕ ಚರ್ಚೆಯಾಗಲಿ. ಪ್ರಮುಖವಾಗಿ ಮುಸ್ಲಿಂ ಏತರ ಜಾತ್ಯತೀತ ಬುದ್ದಿಜೀವಿಗಳು ಇದರಲ್ಲಿ ಹೆಚ್ಚು ಪಾತ್ರ ವಹಿಸುವುದು ಬೇಡ. ಒಟ್ಟಾರೆ ಸಮಗ್ರ ಮುಸ್ಲಿಂ ಸಮುದಾಯದ ನಡುವೆ ಚರ್ಚೆ, ಅಭಿಪ್ರಾಯಕ್ಕೆ ಬಿಡಿ.

ನವೀನ್ ಸೂರಿಂಜೆ: ನೀತಿಯ ಕರಡು ಪ್ರತಿಯ ಮದರಸ ಧಾರ್ಮಿಕ ಶಿಕ್ಷಣದಲ್ಲಿ ಕಡ್ಡಾಯ ಕಲಿಕೆ ಎನ್ನುವುದು ಸರ್ಕಾರಿ ನೀತಿಯಾದರೆ ಮುಂದೊಂದು ದಿನ ಬಿಜೆಪಿ ಸರ್ಕಾರ ಬಂದಾಗ ‘ಮದರಸಾ ಕೇಸರಿಕರಣದ ವಿರುದ್ದ ಹೋರಾಟ’ ಎಂದು ಮುಸ್ಲಿಂ ಮಕ್ಕಳು ಹೊಸ ಸಂಘರ್ಷ ಎದುರಿಸಲು ಸಿದ್ದರಾಗಬೇಕು.

ಖಾಸಿಂ ಸಾಬ್: ಹೊಸ ಸಂಘರ್ಷ ಹುಟ್ಟುತ್ತದೆ ಎಂಬ ಕಾರಣಕ್ಕೆ ಅವಕಾಶ, ಸವಲತ್ತು, ನ್ಯಾಯಗಳನ್ನು ಕಳೆದು ಕೊಳ್ಳಲು ಸಾಧ್ಯವಿಲ್ಲ. ಹೋರಾಟ ಮಾಡೋಣ ಇದನ್ನು ಎದುರಿಸಲು ನಿಮ್ಮಂತ ಜಾತ್ಯತೀತ ವ್ಯಕ್ತಿಗಳು ಹೇಗೂ ಇರುತ್ತಿರಿ.

ನವೀನ್ ಸೂರಿಂಜೆ: ಮುಸ್ಲೀಮರಿಗೆ ಕನ್ನಡ ಬರಲ್ಲ ಎನ್ನುವುದಕ್ಕೂ ಮದರಸಕ್ಕೂ ಏನು ಸಂಬಂಧ? ಕನ್ನಡ ಬಾರದೇ ಇರುವ ಮುಸ್ಲಿಮರು ಇದ್ದಾರೆ ಎಂದರೆ ಅದಕ್ಕೆ ಕಾರಣ ಶಿಕ್ಷಣದ ಕೊರತೆಯೇ ಹೊರತು ಮದರಸಾವಲ್ಲ. ಕನ್ನಡ ಬಾರದ ತುಳುವರೂ, ಹಿಂದೂಗಳೂ, ಕ್ರಿಶ್ಚಿಯನ್ನರೂ ಅಷ್ಟೇ ಸಂಖ್ಯೆಯಲ್ಲಿ ಇದ್ದಾರೆ. ಭಯೋತ್ಪಾದನೆ, ಹವಾಲ ಹಣ, ಲವ್ ಜಿಹಾದ್, ಆಯುಧ ಸಂಗ್ರಹ, ಕೋಮುಗಲಭೆ ಹೀಗೆ ಎಲ್ಲದಕ್ಕೂ ಮದರಸ ಕಾರಣ ಎಂಬ ಆರೋಪದ ಬಳಿಕ ಈಗ ಮುಸ್ಲಿಮರಿಗೆ ಕನ್ನಡ ಬರಲ್ಲ ಎಂಬ ಆರೋಪಕ್ಕೂ ಮದರಸವೇ ಕಾರಣ ಎಂದು ಪ್ರಾಧಿಕಾರ ಘೋಷಿಸಿದಂತಿದೆ.

ಖಾಸಿಂ ಸಾಬ್: ನಿಜಕ್ಕೂ ಇದನ್ನು ಪ್ರಧಿಕಾರ ಘೋಷಣೆ ಮಾಡಿದೆಯೇ…!?

ನವೀನ್ ಸೂರಿಂಜೆ: ಧಾರ್ಮಿಕ ವಿಚಾರಗಳಲ್ಲಿ ಸರ್ಕಾರ ಅನಗತ್ಯ ಮೂಗು ತೂರಿಸಿ ರಾಡಿ ಎಬ್ಬಿಸಬಾರದು.

ಖಾಸಿಂ ಸಾಬ್: ಮದರಸ (.. ಅಥವಾ ಸಂಸ್ಕೃತ ವೇದ ಪಾಠ ಶಾಲೆ, ಕ್ರಿಶ್ಚಿಯನ್ ಧಾರ್ಮಿಕ ಪಾಠ ಶಾಲೆ) ಗಳ ಶೈಕ್ಷಣಿಕ ವ್ಯವಸ್ಥೆ, ವಿದ್ಯಾರ್ಥಿಗಳ ಭವಿಷ್ಯ, ಸ್ಕಿಲ್ ಡೆವಲಪ್ಮೆಂಟ್, ಮಾಡ್ರನ್ ಎಜುಕೇಶನ್ ಸಿಸ್ಟಮ್, ಕನ್ನಡ, ಇಂಗ್ಲಿಷ್ ಕಲಿಕೆ ಮುಂತಾದ ಮೂಲ ಭೂತ ವಿಶೇಷಗಳಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡುವುದರಲ್ಲಿ ತಪ್ಪೇನು.

ನವೀನ್ ಸೂರಿಂಜೆ: ಧಾರ್ಮಿಕ ಸಂಸ್ಥೆಗಳು ಸಂವಿಧಾನ ಬದ್ದವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಖಾತ್ರಿ ಪಡಿಸಿಕೊಳ್ಳುವುದಷ್ಟೇ ಸರ್ಕಾರದ ಕೆಲಸವೇ ಹೊರತು ಅವರ ಮೂಲಭೂತ ಹಕ್ಕುಗಳನ್ನು ಕಸಿಯುವುದಲ್ಲ.

ಖಾಸಿಂ ಸಾಬ್: ಮದರಸ ಎಂಬುದು ಒಂದು ಸಂಪೂರ್ಣ ಧಾರ್ಮಿಕ ಸಂಸ್ಥೆಯಲ್ಲ; ಅದು ಧಾರ್ಮಿಕ ಸಂಸ್ಥೆಯ ಒಂದು ಭಾಗವಾದ ಕಲಿಕಾ ಅಂಗ. ಎಜುಕೇಶನಲ್ ವಿಂಗ್ ಅಷ್ಟೇ. ಮದರಸವೇ ಮುಸ್ಲಿಮರ ಎಲ್ಲವನ್ನೂ ತೀರ್ಮಾನಿಸುವ ಕೇಂದ್ರವಲ್ಲ. ಖಾತ್ರಿ – ಗ್ಯಾರಂಟಿ ಪಡಿಸಿಕೊಳ್ಳುವುದಷ್ಟೇ ಸರ್ಕಾರದ ಕೆಲಸವೇ… ಇವುಗಳ ಪ್ರಗತಿ – ಅಭಿವೃದ್ಧಿ – ಆದುನಿಕರಣಗಳು ಬೇಡವೇ. ಇದು ಸರ್ಕಾರದ ಹೊಣೆಗಾರಿಕೆ ಅಲ್ಲವೇ?

ನವೀನ್ ಸೂರಿಂಜೆ: ಸಂಸ್ಕೃತ ವೇದ ಪಾಠ ಶಾಲೆಯನ್ನು ಬಿಟ್ಟು ಮದರಸಾವನ್ನೇ ಗುರಿ ಮಾಡಿರುವ ಹಿಂದೆ ‘ಅವರು ಲೆಫ್ಟಿಸ್ಟ್, ಕಾಂಗ್ರೆಸ್ ಆದರೂ ಮುಸ್ಲೀಮರನ್ನೂ ಬಿಟ್ಟಿಲ್ಲ ಮಾರಾಯ್ರೆ’ ಎಂದು ಅನ್ನಿಸಿಕೊಳ್ಳುವ ಇರಾದೆಗಳು ಮುಸ್ಲೀಮರನ್ನು ಭವಿಷ್ಯದಲ್ಲಿ ಅಪಾಯಕ್ಕೆ ದೂಡುತ್ತದೆ.

ಖಾಸಿಂ ಸಾಬ್: ಕರ್ನಾಟಕ ರಾಜ್ಯ ಸರ್ಕಾರದ ಈ ನಿಲುವಿನಿಂದ ರಾಜ್ಯ ಮದರಸಗಳಿಗೆ ಯಾವುದೇ ಇರಾದೆಗಳು, ಗುಮಾನಿಗಳು ಇಲ್ಲ ಮಾರಾಯ್ರೆ.

ನವೀನ್ ಸೂರಿಂಜೆ: ಮದರಸಾಗಳು ಕನ್ನಡ ಸೇರಿದಂತೆ ಯಾವ ಭಾಷೆಯನ್ನಾದರೂ ಕಲಿಸಲಿ. ಪ್ರಾಧಿಕಾರಕ್ಕೆ ಆಸಕ್ತಿ ಇದ್ದರೆ ಅಂತಹ ಮದರಸಾಗಳಿಗೆ ಅನುದಾನ, ಪ್ರೋತ್ಸಾಹ, ಪ್ರಶಸ್ತಿ ನೀಡಲಿ. ಬದಲಾಗಿ, ಸರ್ಕಾರವೇ ನೀತಿಯ ಮೂಲಕವಾಗಿ ಮದರಸ ಪ್ರವೇಶ ಮಾಡುವುದು ಮುಸ್ಲೀಮರ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ.

ಖಾಸಿಂ ಸಾಬ್: ಇದು ಹೇಗೆ ಮುಸ್ಲಿಮರ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿಯೋ,..ಅರ್ಥವಾಗುತ್ತಿಲ್ಲ.

ಈ ಚರ್ಚೆಯ ಸಾರಾಂಶ: ಕರ್ನಾಟಕ ರಾಜ್ಯದಲ್ಲಿನ ಎಲ್ಲ ಮದರಸಗಳಲ್ಲಿ ಕನ್ನಡ ಕಲಿಕೆ ಜಾರಿಯಾಗಲಿ ಎಂಬುದಷ್ಟೇ ಆಗಿದೆ!

ಖಾಸಿಂ ಸಾಬ್ ಎ. ಬೆಂಗಳೂರು.