ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಗೋಧಿ ಆಮದು Archives » Dynamic Leader
October 16, 2024
Home Posts tagged ಗೋಧಿ ಆಮದು
ಲೇಖನ

ಜಾಗತಿಕ ರೈತರು ಕ್ವಿಂಟಾಲ್ ಗೋಧಿಯನ್ನು 3,000 ರಿಂದ 4,000 ರೂ.ಗೆ ಮಾರಾಟ ಮಾಡುತ್ತಿರುವಾಗ, ಭಾರತೀಯ ರೈತರಿಗೆ ಸಿಗುವುದು ಕೇವಲ 2,400 ರಿಂದ 2,600 ರೂ. ಮಾತ್ರ!

“ರೈತರು ಬದುಕಬಾರದು” ಎಂಬುದಕ್ಕಾಗಿ ಭಾರತದಲ್ಲಿ ಒಬ್ಬ ವ್ಯಕ್ತಿ ದಣಿವರಿಯದೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರೆ, ಅವರು ಬೇರೆ ಯಾರೂ ಅಲ್ಲ; ಅವರೇ ನಮ್ಮ ‘ದೇವಮಾನವ’ ಭಾರತದ ಪ್ರಧಾನಿ ಮೋದಿ!

ಈ ಹಿಂದೆ, ಭಾರತದ ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇನೆ ಎಂದು ಹೇಳುತ್ತಲೇ ಗೋಧಿಯನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡಿದ ನಿರ್ದಯಿ ಮಗುವೇ ಈ ದೇವಮಾನವ?

ಒಂದು ಕ್ವಿಂಟಲ್ ಗೋಧಿಯ ಅಂತಾರಾಷ್ಟ್ರೀಯ ಬೆಲೆ ರೂ.3,000 ಕ್ಕಿಂತ ಕಡಿಮೆ ಇಲ್ಲ. ಇದು ಗರಿಷ್ಠ 4,000 ರೂ.ಗೆ ಮಾರಾಟವಾಗುತ್ತದೆ. ವಿಶ್ವದಾದ್ಯಂತ ರೈತರು ಕ್ವಿಂಟಲ್ ಗೋಧಿಯನ್ನು 4,000 ರೂ.ಗೆ ಮಾರಾಟ ಮಾಡುವ ಮೂಲಕ ಲಾಭ ಗಳಿಸುತ್ತಿದ್ದಾರೆ. ಆದರೆ ಭಾರತದ ರೈತರಿಗೆ ಸಿಗುವುದು ಕೇವಲ 2,400 ರಿಂದ 2,600 ರೂ. ಮಾತ್ರ. ಭಾರತ ಸರ್ಕಾರವು ಒದಗಿಸಿದ ಕನಿಷ್ಠ ಬೆಂಬಲ ಬೆಲೆ (Minimum Support Price) ಕೇವಲ 2,275 ರೂ. ಮಾತ್ರ.

ಜಾಗತಿಕವಾಗಿ ಗೋಧಿಯ ಬೆಲೆ ಗಗನಕ್ಕೇರುತ್ತಿರುವಾಗ, ರಫ್ತು ಮಾಡಿದರೆ, ಭಾರತೀಯ ರೈತರಿಗೆ ಸ್ವಯವಾಗಿಯೇ ದುಪ್ಪಟ್ಟು ಆದಾಯ ಸಿಗುತ್ತವೆ. ಆದರೆ, ಇದನ್ನು ‘ದೇವಮಾನವ’ ಸಹಿಸಿಕೊಳ್ಳುತ್ತಿಲ್ಲ. ಕಳೆದ ಮೂರು ವರ್ಷಗಳಿಂದ ಗೋಧಿ ರಫ್ತನ್ನು ನಿಷೇಧಿಸಲಾಗಿದೆ.

‘ಉತ್ತಮ ಬೆಲೆ ಸಿಕ್ಕರೆ ರೈತರು ನಮ್ಮ ಮಾತು ಕೇಳುವುದಿಲ್ಲ. ನಿರ್ದಿಷ್ಟವಾಗಿ ಹೇಳುವುದಾದರೆ, ಬಹಳಷ್ಟು ಗೋಧಿಯನ್ನು ಉತ್ಪಾದಿಸುವವರು ಉತ್ತರದ ರೈತರು. ನಾವು ಅವರನ್ನು ಸದಾ ಸಾಲದಲ್ಲಿಟ್ಟರೆ, ಅವರು ಪ್ರಧಾನಮಂತ್ರಿಗಳ ಆರ್ಥಿಕ ನೆರವು ಯೋಜನೆಯ ಹೆಸರಿನಲ್ಲಿ ನಾವು ನೀಡುವ 6000 ರೂಪಾಯಿಗಾಗಿ ನಮ್ಮ ಪಾದಗಳನ್ನು ಕಾಯುತ್ತಾರೆ’ ಎಂದು ಮೋದಿ ಭಾವಿಸಿರಬಹುದು?

ಈ ದೇವಮಾನವರ ಯೋಜನೆಗಳ ಹೊರತಾಗಿಯೂ, ಪ್ರಕೃತಿ ಈ ವರ್ಷ ರೈತರಿಗೆ ಸ್ವಲ್ಪ ಹೆಚ್ಚುವರಿ ಬೆಲೆ ಪಡೆಯಲು ಸಹಾಯ ಮಾಡಿದೆ. ಹೆಚ್ಚಿನ ಹಾನಿ ಇಲ್ಲದೆ ಬೆಳೆದಿದೆ. ಗೋಧಿ ಆಮದಿಗೆ ಉತ್ತೇಜನ ನೀಡದಿದ್ದರೆ ಭಾರತೀಯ ರೈತರಿಗೆ ಹೆಚ್ಚಿನ ಬೆಲೆ ಸಿಗಲಿದೆ. ಆದರೆ ಮೋದಿ ರಷ್ಯಾದಿಂದ ಐದು ಮಿಲಿಯನ್ ಟನ್ ಗೋಧಿ ಆಮದು ಮಾಡಿಕೊಳ್ಳಲು ಅನುಮತಿ ನೀಡಿದ್ದಾರೆ.

ಸರಿ, ಆಮದು ಮಾಡಿಕೊಂಡು ಹೇಗಾದರೂ ತೊಲಗಲಿ ಎಂದರೂ ಭಾರತದ ಗೋಧಿ ರೈತರು ವಿಶ್ವದ ಗೋಧಿ ರೈತರೊಂದಿಗೆ ಪೈಪೋಟಿ ನಡೆಸುತ್ತಾರೆ ಎಂದು ಬಯಸಿದರೆ, ಆಮದು ಸುಂಕ ಮುಕ್ತಕ್ಕೆ ಅವಕಾಶ ನೀಡುವ ಮೂಲಕ ಮೋದಿ ಭಾರತೀಯ ರೈತರ ಹೊಟ್ಟೆಗೆ ಹೊಡೆದಿದ್ದಾರೆ.

ವಿಶ್ವ ವ್ಯಾಪಾರ ಸಂಸ್ಥೆ (WTO) ನಿಬಂಧನೆಗಳ ಪ್ರಕಾರ, ಭಾರತವು ವಿದೇಶದಿಂದ ಆಮದು ಮಾಡಿಕೊಳ್ಳುವ ಗೋಧಿಗೆ 40% ಸುಂಕವನ್ನು ವಿಧಿಸಬಹುದು. ಆದರೆ ಉದ್ಯಮಿಗಳಿಗಾಗಿ ಅವತರಿಸಿರುವ ‘ದೇವಮಾನವ’ ಹೇಗೆ ತೆರಿಗೆ ವಿಧಿಸುತ್ತಾರೆ? ಬಿಸ್ಕತ್ತು ತಯಾರಕರು ಮತ್ತು ಗೋಧಿ ಹಿಟ್ಟಿನ ಗಿರಣಿ ಮಾಲೀಕರಂತಹ ಕಾರ್ಪೊರೇಟ್ ಕಂಪನಿಗಳಿಗೆ ಲಾಭದಾಯಕವಾಗಲು ಅವರು ಗೋಧಿಯನ್ನು ಸುಂಕ ರಹಿತ ಆಮದು ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ.

ಅಂತಹ ಸುಂಕವಿಲ್ಲದೆ ವಿದೇಶಿ ಗೋಧಿ ಭಾರತದ ಮಾರುಕಟ್ಟೆಗೆ ಬರುವುದಾದರೇ ಇಲ್ಲಿ ಗೋಧಿ ಬೆಲೆ ಕ್ವಿಂಟಲ್‌ಗೆ 2000 ರೂಪಾಯಿಗಿಂತ ಕಡಿಮೆಯಾದರೂ ಆಶ್ಚರ್ಯವಿಲ್ಲ. ಇದುವೇ ಈ ‘ದೇವಮಾನವ’ ರೈತನ ಆದಾಯವನ್ನು ದ್ವಿಗುಣಗೊಳಿಸುವ ಯೋಗ್ಯತೆ.

ರೈತರಿಂದ 32 ಮಿಲಿಯನ್ ಟನ್ ಗೋಧಿಯನ್ನು ಖರೀದಿಸುವ ಬದಲು ಭಾರತ ಸರ್ಕಾರವು ಕೇವಲ 26 ಮಿಲಿಯನ್ ಟನ್ ಗೋಧಿಯನ್ನು ಮಾತ್ರ ಖರೀದಿಸಿದೆ.

ಭಾರತವು ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಗೋಧಿ ಉತ್ಪಾದಕ ರಾಷ್ಟ್ರವಾಗಿದೆ. ಇದು 2024-25ರ ವಾರ್ಷಿಕ ಗುರಿ 112 ಮಿಲಿಯನ್ ಟನ್‌ಗಳಲ್ಲಿ ಸ್ವಲ್ಪ ಇಳಿಕೆಯಾಗಿದೆ. ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನವು ಇಳುವರಿ ಮೇಲೆ ದೊಡ್ಡ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂದು ಪರಿಸರ ತಜ್ಞರು ಹೇಳುತ್ತಾರೆ. ಇತಿಹಾಸದಲ್ಲಿ ಮೊದಲ ಬಾರಿಗೆ ನವದೆಹಲಿಯಲ್ಲಿ ತಾಪಮಾನ 52.9C ಗೆ ಏರಿದರೆ, ಭವಿಷ್ಯದಲ್ಲಿ ಭಾರತವು ಇನ್ನೂ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಇದೆಲ್ಲದರ ಬಗ್ಗೆ ಯಾವುದೇ ಆಲೋಚನೆಯಿಲ್ಲದೆ, ‘ದೇವಮಾನವ’ ಕನ್ಯಾಕುಮಾರಿ ವಿವೇಕಾನಂದ ಬಂಡೆಯ ಮೇಲೆ ಕುಳಿತು ಧ್ಯಾನ ಮಾಡುತ್ತಾರೆ. ಇದಕ್ಕೆ ಕಾಲವೇ ಉತ್ತರಿಸಬೇಕು.

ಅವತಾರ ಪುರುಷನಾದ ಶ್ರೀಕೃಷ್ಣನು ತಾಯಿಯ ಗರ್ಭದಲ್ಲಿ ಜನಿಸಿದವರು. ಮತ್ತೊಂದು ಅವತಾರ ಪುರುಷನಾದ ಭಗವಾನ್ ಶ್ರೀರಾಮನು ಕೂಡ ತಾಯಿಯ ಗರ್ಭದಲ್ಲಿ ಜನಿಸಿದವರು. ಆದರೆ ನಮ್ಮ ‘ದೇವಮಾನವ’ ಮೋದಿಜಿ ತನ್ನ ತಾಯಿಯ ಗರ್ಭದಿಂದ ಹುಟ್ಟಿರುವುದನ್ನು ಒಪ್ಪಿಕೊಳ್ಳಲು ನಿರಾಕರಿಸಿ ‘ನಾನು ಆಕಾಶದಿಂದ ಜಿಗಿದವನು’ ಎನ್ನುತ್ತಾರೆ.

ಹೀಗೆ ತಲೆ ಬುರುಡೆ ಒಣಗಿ ಹೋದವರಬಳಿ ಮಾತನಾಡಿ ಏನು ಪ್ರಯೋಜನ? ಜೈ ಭಾರತ್.

ಅಂಕಣಕಾರ: ದೂರನ್ ನಂಬಿ
ಮೂಲ: ವಿಕಟನ್.ಕಾಂ
ಕನ್ನಡಕ್ಕೆ: ಡಿ.ಸಿ.ಪ್ರಕಾಶ್