ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಭ್ರಷ್ಟಾಚಾರ Archives » Dynamic Leader
October 19, 2024
Home Posts tagged ಭ್ರಷ್ಟಾಚಾರ
ರಾಜ್ಯ

ಬೆಂಗಳೂರು: ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಕೋಮುವಾದ, ಭ್ರಷ್ಟಾಚಾರದಿಂದ ಬೇಸತ್ತ ಜನರು ಕಾಂಗ್ರೆಸ್ ಪಕ್ಷಕ್ಕೆ ಭಾರೀ ಬಹುಮತ ನೀಡಿ ಅಧಿಕಾರದಲ್ಲಿ ಕೂರಿಸಿದರು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜನರನ್ನು ವಂಚಿಸಿ ಭ್ರಷ್ಟಾಚಾರದಲ್ಲಿ ಭಾಗಿಯಾದ ವರದಿಗಳು ಬಹಿರಂಗವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದು ಕೋಮುವಾದದಷ್ಟೇ ಅಪಾಯಕಾರಿ ಎಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ.

ಅವರು ಮಾತನಾಡುತ್ತಾ, “ಕೋಮುವಾದದಂತೆ ಭೃಷ್ಟಾಚಾರವು ರಾಜ್ಯದ ಹಿತ ದೃಷ್ಟಿಯಿಂದ ಕೊನೆಗಾಣಬೇಕಾಗಿದೆ. ಮತ ನೀಡಿ ಚುನಾಯಿಸಿದ ಜನರ ಹಿತಕ್ಕಿಂತ ಪಕ್ಷದ ಹಿತಾಸಕ್ತಿ ಮತ್ತು ಸ್ವಾರ್ಥಹಿತಾಸಕ್ತಿಯೇ ಮುಖ್ಯ ಎಂಬುದು ಎದ್ದು ಕಾಣುತ್ತಿದೆ. ಇಲ್ಲಿ ಯಾರೂ ಸುಭಗರಲ್ಲ ಎಂದು ಮಾಧ್ಯಮಗಳ ವರದಿಗಳು ಬಹಿರಂಗ ಪಡಿಸುತ್ತದೆ. ಸಮುದಾಯದ ಅಭಿವೃದ್ಧಿ ನಿಗಮಗಳು ಸೇರಿದಂತೆ ಇನ್ನಿತರ ಮಂಡಳಿಗಳಲ್ಲಿ ಕಳೆದ ವರ್ಷಗಳಲ್ಲಿಯೇ ಸುಮಾರು ನಾಲ್ಕು ನೂರು ಕೋಟಿ ರೂಪಾಯಿಗೂ ಅಧಿಕವಾದ ಮೊತ್ತವನ್ನು ಅಕ್ರಮವಾಗಿ ಅನಧಿಕೃತ ಖಾತೆಗಳಿಗೆ ಜಮೆ ಮಾಡಿ, ಫಲಾನುಭವಿಗಳಿಗೆ ಸಲ್ಲಬೇಕಾದ ಹಣವನ್ನು ದುರುಪಯೋಗ ಪಡಿಸಲಾಗಿದೆ.

ಈ ಅವಧಿಯಲ್ಲಿ, ಸಿದ್ದರಾಮಯ್ಯರ ಅವಧಿಯೂ ಸೇರಿದಂತೆ ಜಗದೀಶ್ ಶೆಟ್ಟರ್, ಯಡಿಯೂರಪ್ಪ, ಕುಮಾರಸ್ವಾಮಿ, ಬಸವರಾಜ್ ಬೊಮ್ಮಾಯಿ ಕೂಡಾ ಮುಖ್ಯ ಮಂತ್ರಿಯಾಗಿದ್ದರು. ಈ ಬಗ್ಗೆಯೂ ತನಿಖೆ ನಡೆಯಬೇಕು” ಎಂದು ಹೇಳಿದ ತಾಹೇರ್ ಹುಸೇನ್, “ಈಗ ವಿಧಾನ ಸಭೆಯಲ್ಲಿ ಭೃಷ್ಟಾಚಾರ, ಅಕ್ರಮ ತಡೆಯುವ ಮಾತನಾಡುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಂದಾಯ ಸಚಿವರಾಗಿದ್ದಾಗ ಬೆಳೆ ನಷ್ಟ ಪರಿಹಾರದಲ್ಲೂ ಅಕ್ರಮ ನಡೆದಿದೆ. ಸಂಬಂಧವೇ ಇಲ್ಲದ ಅನ್ಯ ಖಾತೆದಾರರ ಖಾತೆಗೆ ಕೋಟ್ಯಾಂತರ ರೂಪಾಯಿ ಪಾವತಿಯಾದ ಬಗ್ಗೆ ಚರ್ಚೆ ನಡೆಯುತ್ತಿದೆ. ಪರಸ್ಪರ ಸೇಡಿನ ರಾಜಕೀಯ ಮಾಡಿ ಜನರನ್ನು ವಂಚಿಸಬೇಡಿ. ವಾಲ್ಮೀಕಿ ನಿಗಮದ ಹಗರಣ ಬೆಳಕಿಗೆ ಬಂದ ಮೇಲೆ ಬಿಜೆಪಿ ಆಡಳಿತಾವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಪರಿಶೀಲನೆಗೆ ಸರ್ಕಾರ ಸಿದ್ಧವಾಗಿದೆ.

ಬಿಜೆಪಿ ವಿರುದ್ಧ ಆರೋಪ ಕೇಳಿ ಬಂದಾಗ ಕೇಂದ್ರದಿಂದ ಇಡಿ ಓಡೋಡಿ ರಾಜ್ಯಕ್ಕೆ ಬಂತು. ಈ ಎರಡೂ ನಡೆಯನ್ನು ಪರಸ್ಪರ ಟೀಕಿಸುತ್ತಿದ್ದಾರೆ. ಈಗ ಇಡಿ ಯ ಮೇಲೆ ಕೇಸನ್ನೂ ದಾಖಲಿಸಲಾಗಿದೆ. ಮುಖ್ಯಮಂತ್ರಿಗಳ ಹೆಸರು ಹೇಳುವಂತೆ ಇಡಿ ಅಧಿಕಾರಿಗಳು ಒತ್ತಡ ಹೇರುತ್ತಿರುವ ಆರೋಪಗಳು ಕೇಳಿ ಬರುತ್ತಿವೆ. ಇದು ಸಭ್ಯ ರಾಜಕಾರಣವಲ್ಲ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆಯಲ್ಲ. ಭ್ರಷ್ಟಾಚಾರವನ್ನು ತೊಡೆದು ಹಾಕಲು, ಅಪರಾಧಿಗಳು ಕಾನೂನಿನಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡದೆ, ಪ್ರಾಮಾಣಿಕ ರೀತಿಯ ಪ್ರಯತ್ನ ಮಾಡಿ, ರಾಜ್ಯದ ಜನರ ಅಭಿವೃದ್ದಿಯತ್ತ ಗಮನಹರಿಸಲು ಆಡಳಿತ ಮತ್ತು ವಿರೋಧಪಕ್ಷ ಗಮನ ಹರಿಸಲಿ” ಎಂದು ಅವರು ಆಗ್ರಹಿಸಿದ್ದಾರೆ.

ರಾಜ್ಯ

ಬೆಂಗಳೂರು: “ಸರಣಿ ಭ್ರಷ್ಟಾಚಾರದ ಸರದಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕರ್ಮಕಾಂಡ ಅಗೆದಷ್ಟು ಆಳವಾಗಿದೆ; ಬಗೆದಷ್ಟು ಹೊರಬರುತ್ತಿದೆ” ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.

“ಸಹಕಾರ ಇಲಾಖೆಯ ಅಪೆಕ್ಸ್ ಬ್ಯಾಂಕ್ ಗಳಲ್ಲಿ ಬಹುಕೋಟಿ ರೂಪಾಯಿ ಮೊತ್ತದ ಬೃಹತ್ ಹಗರಣ ಬೆಳಕಿಗೆ ಬಂದಿದ್ದು, ಹಗರಣದ ತನಿಖೆ ನಡೆಸುವಂತೆ ಮಾನ್ಯ ಹೈಕೋರ್ಟ್ ತಾಕೀತು ಮಾಡಿದೆ” ಎಂದು ಹೇಳಿರುವ ಆರ್.ಅಶೋಕ್,

“ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ತಮ್ಮ ಸರ್ಕಾರದಲ್ಲಿ ಹಣಗರಣವಿಲ್ಲದ ಇಲಾಖೆ ಇಲ್ಲ ಎಂಬ ನಾಚಿಕೆಗೇಡು ಪರಿಸ್ಥಿತಿ ಇದೆ. ಇನ್ನಾದರೂ ರಾಜೀನಾಮೆ ಕೊಟ್ಟು ಕರ್ನಾಟಕದ ಮರ್ಯಾದೆ ಉಳಿಸಿ” ಎಂದು ಕಿಡಿಕಾರಿದ್ದಾರೆ.

ದೇಶ

ನವದೆಹಲಿ: ಷೇರು ಮಾರುಕಟ್ಟೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಇದರಿಂದ ಜನ ಸಾಮಾನ್ಯರಿಗೆ 38 ಲಕ್ಷ ಕೋಟಿ ರೂ.ನಷ್ಟವಾಗಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ದೆಹಲಿಯ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡಿದ ರಾಹುಲ್ ಗಾಂಧಿ, “ಷೇರು ಮಾರುಕಟ್ಟೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಚುನಾವಣೋತ್ತರ ಸಮೀಕ್ಷೆಗಳನ್ನು ವ್ಯವಸ್ಥಿತವಾಗಿ ತಿರುಚಲಾಗಿದೆ. ಷೇರು ಮಾರುಕಟ್ಟೆಯಲ್ಲಿ ಲಾಭ ಗಳಿಸಲು ಸಮೀಕ್ಷೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಜೂನ್ 4ರೊಳಗೆ ಷೇರುಗಳನ್ನು ಖರೀದಿಸುವಂತೆ ಮೇ 14ರಂದು ಅಮಿತ್ ಶಾ ಹೇಳಿದ್ದಾರೆ.

38 ಲಕ್ಷ ಕೋಟಿ ನಷ್ಟ:
ನಿರ್ದಿಷ್ಟ 5 ಕೋಟಿ ಕುಟುಂಬಗಳು ಷೇರು ಮಾರುಕಟ್ಟೆಯಲ್ಲಿ ನಿರ್ದಿಷ್ಟ ಸಮಯದಲ್ಲಿ ಹೂಡಿಕೆ ಮಾಡುವಂತೆ ಅಮಿತ್ ಶಾ ಕೇಳಿದ್ದು ಏಕೆ? ಷೇರು ಮಾರುಕಟ್ಟೆ ಅಕ್ರಮಗಳ ಬಗ್ಗೆ ಸೆಬಿ ತನಿಖೆ ನಡೆಸಬೇಕು. ಷೇರು ಮಾರುಕಟ್ಟೆಯಲ್ಲಿ 38 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ಇದರಿಂದ ಜನಸಾಮಾನ್ಯರು ತೊಂದರೆಗೀಡಾಗಿದ್ದಾರೆ. ಕೆಲವರು ಹಣ ಸಂಪಾದಿಸಲು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹಾಯ ಮಾಡಿದ್ದಾರೆ. ಬಿಜೆಪಿಯ ಸಮೀಕ್ಷೆಯಿಂದ ಷೇರುಗಳು ಗಣನೀಯವಾಗಿ ಏರಿಕೆ ಕಂಡಿತ್ತು.

ನಕಲಿ ಸಮೀಕ್ಷೆಗಳು:
ದುಬಾರಿ ಬೆಲೆಯ ಲಾಭ ಪಡೆದು ಬಿಜೆಪಿ ಹಣ ಗಳಿಸಿದೆ. ನಕಲಿ ಸಮೀಕ್ಷೆ ನಡೆಸಿದವರ ವಿರುದ್ಧ ತನಿಖೆ ನಡೆಸಬೇಕು. ಚುನಾವಣಾ ಮತದಾನಕ್ಕೂ ಮುನ್ನ ಮೇ 30 ಮತ್ತು 31 ರಂದು ಷೇರುಪೇಟೆಯಲ್ಲಿ ಹೂಡಿಕೆಯ ಸಂಗ್ರಹವು ಹೆಚ್ಚಾಗಿತ್ತು. ಚುನಾವಣೆ ನಂತರ ಷೇರುಪೇಟೆ ಕುಸಿತದಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರ್ದಿಷ್ಟ ಕೆಲವೇ ಕುಟುಂಬಗಳು ಹಣ ಗಳಿಸಲು ಸಂಚು ನಡೆದಿದೆ.

ಸಂಸದೀಯ ಜಂಟಿ ಸಮಿತಿ:
ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಬೇಕು. ಸೆಬಿ ತನಿಖೆಯನ್ನು ಎದುರಿಸುತ್ತಿರುವ ಮಾಧ್ಯಮ ಕಂಪನಿಯೊಂದಕ್ಕೆ ಷೇರು ಮಾರುಕಟ್ಟೆ ಕುರಿತು ಅಮಿತ್ ಶಾ ಸಂದರ್ಶನ ನೀಡಿದ್ದು ಏಕೆ? ಪ್ರಧಾನಿ ಮೋದಿ ಕೂಡ ಷೇರು ಮಾರುಕಟ್ಟೆಯ ಬಗ್ಗೆ ಮಾತನಾಡಿದ್ದಾರೆ. ಷೇರು ಮಾರುಕಟ್ಟೆ ಏರಿಕೆಯ ಬಗ್ಗೆ ಮೋದಿ ಏಕೆ ಬಹಿರಂಗವಾಗಿ ಮಾತನಾಡಬೇಕು? ಜೂನ್ 4 ರಂದು ಷೇರು ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆ ಇರುತ್ತದೆ ಎಂದು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಸಲಹೆ ನೀಡಿದ್ದು ಕಾನೂನು ಬಾಹಿರ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಲೇಖನ

ಡಿ.ಸಿ.ಪ್ರಕಾಶ್ ಸಂಪಾದಕರು

‘ಮೋದಿ ಕುಟುಂಬ, ಮೋದಿ ಕುಟುಂಬ’ ಎಂಬ ಘೋಷವಾಕ್ಯವನ್ನು ಮೋದಿ ಹೊರತುಪಡಿಸಿ ಉಳಿದೆಲ್ಲ ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಮೋದಿಯವರ ಕುಟುಂಬದಲ್ಲಿ ಭ್ರಷ್ಟರನ್ನು ಮುಕ್ತಗೊಳಿಸುವುದು ಬಹಿರಂಗವಾದಂತೆ ಇದೀಗ ಲೈಂಗಿಕ ದೌರ್ಜನ್ಯ ಎಸಗಿದ ದುಷ್ಕರ್ಮಿಗಳು ಕೂಡಾ ಸ್ವಚ್ಛಂದವಾಗಿ ಓಡಾಡುತ್ತಿರುವುದು ಬಹಿರಂಗವಾಗಿದೆ! ಬಿಜೆಪಿ ಕೇವಲ ಪಕ್ಷಮಾತ್ರವಲ್ಲ, ಅಪರಾಧಗಳನ್ನು ತೊಳೆಯುವ (Washing Machine) ಯಂತ್ರವೂ ಹೌದು ಎಂದು ಕಾಂಗ್ರೆಸ್ ವ್ಯಂಗ್ಯವಾಡುತ್ತಿದೆ.

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಜಿಂದಾಲ್, ಸುವೇಂದು ಅಧಿಕಾರಿ ಮುಂತಾದ ಅಸಂಖ್ಯಾತರ ಮೇಲಿದ್ದ ಅಪರಾಧಗಳನ್ನು ಬಿಜೆಪಿ ಹೇಗೆ ತೆಗೆದುಹಾಕಿತು ಎಂಬುದನ್ನು ಇಂಡಿಯನ್ ಎಕ್ಸ್‌ಪ್ರೆಸ್ (Indian Express) ಗ್ರೂಪ್‌ನ ಮಾಹಿತಿ ದೃಢಪಡಿಸಿದೆ. ಅದರಲ್ಲಿ, ವಿರೋಧ ಪಕ್ಷದಿಂದ ಬಿಜೆಪಿಗೆ ಬಲವಂತವಾಗಿ ಎಳೆದ 25 ಜನರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳಲ್ಲಿ 3 ಪ್ರಕರಣಗಳನ್ನು ಶಿಕ್ಷೆಯಿಲ್ಲದೆ ಮುಚ್ಚಲಾಯಿತು ಮತ್ತು 20 ಪ್ರಕರಣಗಳನ್ನು ಕೇಂದ್ರ ಬಿಜೆಪಿ ಸರ್ಕಾರವು ಸ್ಥಗಿತಗೊಳಿಸಿದೆ ಎಂದು ಸ್ಪಷ್ಟಪಡಿಸಿದೆ.

ಈ ಹಿನ್ನಲೆಯಲ್ಲಿ, ಬಿಜೆಪಿ ಅಭ್ಯರ್ಥಿಗಳು, ಎನ್‌ಡಿಎ ಮೈತ್ರಿ ಪಕ್ಷದ ಅಭ್ಯರ್ಥಿಗಳು ಹಾಗೂ ಕೇಂದ್ರ ಬಿಜೆಪಿಯಿಂದ ನೇಮಕಗೊಂಡಿರುವ ರಾಜ್ಯಪಾಲರ ದೌರ್ಜನ್ಯಗಳಿಂದ ಬಿಜೆಪಿ ಭ್ರಷ್ಟಾಚಾರ ಮಾತ್ರವಲ್ಲ ಲೈಂಗಿಕ ಅಪರಾಧಿಗಳ ಡೇರೆಯೂ ಆಗಿದೆ ಎಂಬ ಮಾಹಿತಿ ಬಯಲಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ವಿಷಯ ತಿಳಿದಿದ್ದರೂ ಮೋದಿ ಅವರ ಪರ ಮತ ಸಂಗ್ರಹಿಸಿದರು.

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಬ್ರಿಜ್ ಭೂಷಣ್ ಪುತ್ರ ಕರಣ್ ಭೂಷಣ್‌ಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದಾರೆ. ಕರಣ್ ಭೂಷಣ್ ಮಾತ್ರವಲ್ಲ, ಬಿಜೆಪಿಯ ಸುಮಾರು 44 ಹಾಲಿ ಸಂಸದರ ಮೇಲೂ ಮಹಿಳೆಯರ ವಿರುದ್ಧ ಪ್ರಕರಣಗಳಿವೆ.

ಬಿಜೆಪಿ ಕಾರ್ಯಕಾರಿಣಿಗಳಷ್ಟೇ ಅಲ್ಲ, ಕೇಂದ್ರ ಬಿಜೆಪಿ ಸರ್ಕಾರದಿಂದ ನಾಮನಿರ್ದೇಶನಗೊಂಡ ರಾಜ್ಯಪಾಲರುಗಳು ಕೂಡ ಲೈಂಗಿಕ ಅಪರಾಧಿಗಳಾಗಿದ್ದಾರೆ ಎಂಬುದಕ್ಕೆ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರು ರಾಜಭವನದ ಉದ್ಯೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣವೇ ಸಾಕ್ಷಿಯಾಗಿದೆ. ಈ ಹಿನ್ನಲೆಯಲ್ಲಿ, ಬಿಜೆಪಿಯಿಂದ ಲೈಂಗಿಕ ವ್ಯಸನಿಗಳು ಅಧಿಕಾರದಲ್ಲಿದ್ದರೆ, ದೇಶದಲ್ಲೂ ಮಹಿಳೆಯರ ಮೇಲಿನ ಅಪರಾಧಗಳು ಹೆಚ್ಚಾಗುತ್ತವೆ ಎಂಬ ಅಂಶಕ್ಕೆ ಅನುಗುಣವಾಗಿ,

2022ರ ರಾಷ್ಟ್ರೀಯ ಅಪರಾಧ ಸೂಚ್ಯಂಕದ ಪ್ರಕಾರ, *2014ಕ್ಕೆ ಹೋಲಿಸಿದರೆ 2022ರಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ಸುಮಾರು 31%ರಷ್ಟು ಹೆಚ್ಚಾಗಿದೆ. ಅಂದರೆ 2022ರಲ್ಲಿ ಕೇಂದ್ರ ಸಚಿವಾಲಯದ ಮಾಹಿತಿ ಪ್ರಕಾರ ಮಹಿಳೆಯರ ಮೇಲಿನ ಅಪರಾಧಗಳಿಗೆ ಸಂಬಂಧಿಸಿದಂತೆ 4,45,256 ಪ್ರಕರಣಗಳು ದಾಖಲಾಗಿವೆ* ಎಂದು ತಿಳಿದು ಬಂದಿದೆ.

ಆದಾಗ್ಯೂ, ಇದನ್ನೆಲ್ಲ ನೋಡುತ್ತಿರುವ ಮೋದಿಯವರು ಇಂಥದ್ದೇನೂ ಆಗದಂತೆ ಮೌನವಾಗಿ ಇದ್ದಾರೆ. ಆದರೆ, ಅವರು ಮೌನ ಮುರಿಯುತ್ತಿರುವುದು ಕೇವಲ ಮುಸ್ಲಿಮರನ್ನು ದೂಷಿಸಲು ಮತ್ತು ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಹೊರಿಸಲು ಮಾತ್ರವೇ. ಇದು ಪ್ರಜಾಪ್ರಭುತ್ವಕ್ಕೆ ಮತ್ತೊಂದು ಅಪಾಯವಾಗಿದೆ.

ಈ ಹಿನ್ನಲೆಯಲ್ಲಿ, ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದಿರುವ ಬಿಜೆಪಿಗೆ ಅಪಾಯ ಎಂಬಂತೆ ‘ಇಂಡಿಯಾ’ ಮೈತ್ರಿಕೂಟ ಬಲಗೊಳ್ಳುತ್ತಿರುವುದು ಬಿಜೆಪಿಗೆ ಭಾರೀ ಹಿನ್ನಡೆ ತಂದಿದೆ. ಹೀಗಾಗಿ, ಅತಾಶೆಯಲ್ಲಿರುವ ಬಿಜೆಪಿ ಸೋಲಿನ ಭಯದಿಂದ, ನಾವು ಏನು ಮಾತನಾಡುತ್ತಿದ್ದೇವೆ ಎಂದು ತಿಳಿಯದೆ, ನಾವು ಯಾವ ರೀತಿಯ ಪೋಸ್ಟ್ ಮಾಡುತ್ತಿದ್ದೇವೆ ಎಂದು ಅರ್ಥೈಸಿಕೊಳ್ಳದೇ

ಮುಸ್ಲಿಮರನ್ನು ಶತ್ರುಗಳಂತೆ ಕಾಣುವ ಆರೆಸ್ಸೆಸ್-ಬಿಜೆಪಿ ಧಾರ್ಮಿಕ ಭಿನ್ನಾಭಿಪ್ರಾಯ ಸೃಷ್ಟಿಸುವ ದ್ವೇಷಪೂರಿತ ವಿಡಿಯೋಗಳನ್ನು ಅಂತರ್ಜಾಲದಲ್ಲಿ ಹಾಕುವುದು, ಮತ ಕಳೆದುಕೊಳ್ಳುವ ಭೀತಿಯಿಂದ ಮತ್ತೆ ಪೋಸ್ಟ್‌ಗಳನ್ನು ಅಳಿಸಿ ಹಾಕುವುದು ಇತ್ಯಾದಿಗಳನ್ನು ಮಾಡುತ್ತಿದ್ದಾರೆ. ಇದರಿಂದಾಗಿ 400 ಸೀಟು ವಶಪಡಿಸಿಕೊಳ್ಳುವ ಬಿಜೆಪಿಯ ಹಿಂದಿನ ಘೋಷಣೆ ಮಾಯವಾಗಿದೆ.

ಬೆಂಗಳೂರು

ಬೆಂಗಳೂರು: ವಸತಿ ಸಚಿವರಾದ ಬಿ.ಝಡ್.ಜಮೀರ್ ಅಹಮದ್ ಖಾನ್ ಮತ್ತು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ (Slum Board) ನೂತನ ಅಧ್ಯಕ್ಷರಾದ ಪ್ರಸಾದ್ ಅಬ್ಬಯ್ಯ ಅವರು ಇಂದು ಬೆಂಗಳೂರು ಸರ್ವಜ್ಞ ನಗರ ಕ್ಷೇತ್ರದ ಮಾರುತಿ ಸೇವಾ ನಗರ ಮತ್ತು ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ನಗರೇಶ್ವರ ನಾಗೇನಹಳ್ಳಿ ಸರ್ವೆ ನಂ.13ರಲ್ಲಿ ಸ್ಲಮ್ ಬೋರ್ಡ್ ವತಿಯಿಂದ ನಿರ್ಮಿಸಲಾಗುತ್ತಿರುವ 768 ಮನೆಗಳ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಣೆ ಮಾಡಲು ಬಂದಿದ್ದಾರೆ.

ನೆನ್ನೆ ನಮ್ಮ ಡೈನಾಮಿಕ್ ಲೀಡರ್, “ಕೊಳಗೇರಿ ಮಂಡಳಿಯ ಕರ್ಮಕಾಂಡ-1” ಶೀರ್ಷಿಕೆಯಡಿ, ‘ಕೊಳಗೇರಿ ಜನರ ಮನೆಗಳನ್ನು ಶಾಸಕ ಬೈರತಿ ಬಸವರಾಜ್ ಹಿಂಬಾಲಕರಿಗೆ ಹಂಚಿಕೆ ಮಾಡುತ್ತಿರುವ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು! ಕಂಡುಕೊಳ್ಳದ ವಸತಿ ಸಚಿವ’ ಎಂಬ ತನಿಖಾ ಸುದ್ಧಿಯನ್ನು ಪ್ರಕಟಿಸಿತ್ತು.

ಇದನ್ನೂ ಓದಿ: ಕೊಳಗೇರಿ ಜನರ ಮನೆಗಳನ್ನು ಶಾಸಕ ಬೈರತಿ ಬಸವರಾಜ್ ಹಿಂಬಾಲಕರಿಗೆ ಹಂಚಿಕೆ ಮಾಡುತ್ತಿರುವ ಕೊಳಗೇರಿ ಮಂಡಳಿಯ ಭ್ರಷ್ಟ ಅಧಿಕಾರಿಗಳು.! ಕಂಡುಕೊಳ್ಳದ ವಸತಿ ಸಚಿವರು.!!

ಡೈನಾಮಿಕ್ ಲೀಡರ್‌ ನಲ್ಲಿ ಪ್ರಕಟವಾದ ಸುದ್ಧಿಯಲ್ಲಿ, “ಶಾಸಕರಾದ ಬೈರತಿ ಬಸವರಾಜ್ ನೀಡಿದ ಫಲಾನುಭವಿಗಳ ಪಟ್ಟಿಗೆ ಅಕ್ರಮವಾಗಿ ಅನುಮೋದನೆ ನೀಡಿ, ಕೊಳಗೇರಿ ಜನರ ಮನೆಗಳನ್ನು ಶಾಸಕರ ಹಿಂಬಾಲಕರಿಗೆ, ಕಾರ್ಯಕರ್ತರಿಗೆ ಹಾಗೂ ಅವರ ಚೇಲಾ ಬಾಲಗಳಿಗೆ ಹಂಚಿಕೆ ಮಾಡಲು ಶ್ರಮಿಸುತ್ತಿರುವ ಮಂಡಳಿಯ ಆಯುಕ್ತರಾದ ವೆಂಕಟೇಶ್, ಮುಖ್ಯ ಇಂಜಿನೀಯರ್ ಬಾಲರಾಜ್, ತಾಂತ್ರಿಕ ನಿರ್ದೇಶಕರಾದ ಸುಧೀರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಚರನ್ ರಾಜ್, ಸಹಾಯಕ ಇಂಜಿನಿಯರ್ ನಂದಕಿರಣ್ ಹಾಗೂ ಮ್ಯಾನೇಜರ್ ಫ್ರಾನ್ಸಿಸ್ ಇವರುಗಳ ವಿರುದ್ಧ ಸರ್ಕಾರ ಕೂಡಲೇ ಕ್ರಮ ವಹಿಸಬೇಕೆಂದು ಕೊಳಗೇರಿ ಬಡಜನರ ಪರವಾಗಿ ಕೋರುತ್ತೇವೆ” ಎಂದು ವರದಿ ಮಾಡಿತ್ತು.

ಜೊತೆಯಲ್ಲೇ, “ಶಾಸಕರಾದ ಬೈರತಿ ಬಸವರಾಜ್ ಮತ್ತು ಮಂಡಳಿಯ ಭ್ರಷ್ಟ ಅಧಿಕಾರಿಗಳು ಜಂಟಿಯಾಗಿ ತಯಾರಿಸಿರುವ 768 ಫಲಾನುಭವಿಗಳ ಪಟ್ಟಿಯನ್ನು ಈ ಕೂಡಲೇ ರದ್ಧುಗೊಳಿಸಿ, ನಿಜವಾದ ಕೊಳಗೇರಿ ಬಡಜನರಿಗೆ ಸದರಿ ಮನೆಗಳನ್ನು ಹಂಚಿಕೆ ಮಾಡಲು ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು” ಎಂದೂ ಮನವಿ ಮಾಡಿತ್ತು.

ಈ ಹಿನ್ನಲೆಯಲ್ಲಿ, ಕೆ.ಆರ್.ಪುರಂ ವಿಧಾನಸಭಾ ಮತಕ್ಷೇತ್ರದ ನಗರೇಶ್ವರ ನಾಗೇನಹಳ್ಳಿ ಸರ್ವೆ ನಂ.13ರಲ್ಲಿ, ಸ್ಲಮ್ ಬೋರ್ಡ್ ವತಿಯಿಂದ ನಿರ್ಮಸಲಾಗುತ್ತಿರುವ 768 ಮನೆಗಳ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಣೆ ಮಾಡಲು ಮಂಡಳಿಯ ಅಧಿಕಾರಿಗಳೊಂದಿಗೆ ಬಂದಿರುವುದು ಸ್ವಾಗತಾರ್ಹ. ಅದೇ ವೇಳೆಯಲ್ಲಿ ಮಂಡಳಿಯ ಅಧಿಕಾರಿಗಳು ನಿಮ್ಮಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಾರೆ; ಎಚ್ಚರದಿಂದ ಇರಲು ನಮ್ಮ ಮನವಿ. ಆದಷ್ಟು ಬೇಗೆ ನಮ್ಮ ಕೋರಿಕೆಯ ಮೇಲೆ ಕ್ರಮ ಕೈಗೊಂಡು ಕೊಳಗೇರಿ ಬಡಜನರಿಗೆ ನೆರವಾಗುತ್ತೀರಿ ಎಂದು ನಂಬಿದ್ದೇವೆ.

ರಾಜ್ಯ

ಡಿ.ಸಿ.ಪ್ರಕಾಶ್ ಸಂಪಾದಕರು
dynamicleaderdesk@gmail.com

“ಕೊಳಗೇರಿ ಮಂಡಳಿ ಸರ್ಕಾರಿ ಸಂಸ್ಥಯೋ? ಅಥವಾ ಶಾಸಕರ ಭವನವೋ? ಮಂಡಳಿಯ ಅಧಿಕಾರಿಗಳು ಸಂಬಳ ಪಡೆಯುವುದು ಕೊಳಗೇರಿ ಜನರ ಹೆಸರಿನಲ್ಲೋ? ಅಥವಾ ಶಾಸಕರ ಬಳಿಯೋ? ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಉತ್ತರ ಕೊಡಬೇಕಿದೆ”

ಬೆಂಗಳೂರು ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ, ನಗರೇಶ್ವರ ನಾಗೇನಹಳ್ಳಿ ಸರ್ವೆ ನಂ.13ರಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ PAMY (HFA)-Phase-3 ಯೋಜನೆಯಡಿ ನಿರ್ಮಿಸಿರುವ 768 (ಜಿ+3) ಮನೆಗಳನ್ನು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನಾ) (ತಿದ್ದುಪಡಿ) ನಿಯಮಗಳು, 2004. ನಿಯಮ 8(i), (ii) ಮತ್ತು (iii)ಕ್ಕೆ ಮತ್ತು ಸರ್ಕಾರದ ಆದೇಶ ಸಂಖ್ಯೆ: ವಇ 115 ಕೊಮಂಇ 2013 (1) ಹಾಗೂ ವಇ 115 ಕೊಮಂಇ 2013 (2)ರ ಪ್ರಕಾರ ಕೊಳಗೇರಿ ನಿವಾಸಿಗಳಿಗೆ ಹಂಚಿಕೆ ಮಾಡಬೇಕು. ಕೊಳಗೇರಿ ಮಂಡಳಿ ಸ್ಥಾಪಿತವಾಗಿರುವುದೇ ಕೊಳಗೇರಿ ಜನರಿಗೆ ಪುನರ್ವಸತಿ ಕಲ್ಪಿಸಿಕೊಡುವುದಕ್ಕಾಗಿ. ಯೋಜನೆ ಯಾವುದೇ ಇದ್ದರೂ ಫಲಾನುಭವಿ ಕೊಳಗೇರಿ ಜನರಾಗಿರಬೇಕು; ಇದು ಮಂಡಳಿಯ ನಿಯಮ.

ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ರಾಜೀವ್‌ಗಾಂಧಿ ನಗರಕ್ಕೆ (ದೇವಸಂದ್ರ) 107 ಮನೆಗಳು, ಸಂಜಯ್‌ಗಾಂಧಿ ನಗರಕ್ಕೆ (ದೇವಸಂದ್ರ) 245 ಮನೆಗಳು, ರಾಮಮೂರ್ತಿನಗರ ಸರ್ವೆ ನಂ.85ರಲ್ಲಿನ ಕೊಳಗೇರಿ ಪ್ರದೇಶಕ್ಕೆ 337 ಮನೆಗಳು ಹಾಗೂ ಭಟ್ಟರಹಳ್ಳಿ ಜನತಾ ಕಾಲೋನಿಗೆ 79 ಮನೆಗಳು ಒಟ್ಟು 768 ಮನೆಗಳನ್ನು ಸ್ಥಳಾಂತರ ಮಾಡುವ ಉದ್ದೇಶದಿಂದ ಕೊಳಗೇರಿ ಮಂಡಳಿ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ಸಿದ್ದಪಡಿಸಿ, ಮನೆಗಳನ್ನು ನಿರ್ಮಾಣ ಮಾಡಿತ್ತು.

ಆದರೆ, ಕೊಳಗೇರಿ ಮಂಡಳಿಗೆ ಸದರಿ ಮನೆಗಳನ್ನು ಮೇಲ್ಕಂಡವರಿಗೆ ಹಂಚಿಕೆ ಮಾಡುವ ಅಥವಾ ಸ್ಥಳಾಂತರ ಮಾಡುವ ಯಾವ ಉದ್ದೇಶವೂ ಇಲ್ಲ. ಸದರಿ ಮನೆಗಳನ್ನು ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಬೈರತಿ ಬಸವರಾಜ್ ಸೂಚಿಸುವ ಕಾರ್ಯಕರ್ತರಿಗೆ ಹಾಗೂ ಅವರ ಹಿಂಬಾಲಕರಿಗೆ ಹಂಚಿಕೆ ಮಾಡಬೇಕೆಂಬದು ಮಂಡಳಿಯ ಇರಾದೆಯಾಗಿದೆ.

ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ, ಶಾಸಕ ಬೈರತಿ ಬಸವರಾಜ್ ಅವರು ತಮ್ಮ ಕಾರ್ಯಕರ್ತರಿಂದ ಹಾಗೂ ಹಿಂಬಾಲಕರಿಂದ ಅರ್ಜಿಗಳನ್ನು ಪಡೆದು, ಪಟ್ಟಿಮಾಡಿ, 768 ಫಲಾನುಭವಿಗಳಿಗೆ ಮಂಡಳಿಯಿಂದ ಅಕ್ರಮವಾಗಿ ಅನುಮೋದನೆ ಪಡೆದುಕೊಂಡಿದ್ದರು. ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರಕ್ಕೆ ಯಾವುದೇ ಆಶ್ರಯ ಸಮಿತಿ ಇಲ್ಲ್ಲ. ಸರ್ಕಾರ (ವಸತಿ ಇಲಾಖೆ) ಅಥವಾ ಕೊಳಗೇರಿ ಮಂಡಳಿ ಯಾವುದೇ ಆಶ್ರಯ ಸಮಿತಿಗಳನ್ನು ರಚನೆ ಮಾಡಿರುವುದಿಲ್ಲ. ಆದರೂ ಇವರು 768 ಫಲಾನುಭವಿಗಳ ಪಟ್ಟಿಯಲ್ಲಿ ತಮ್ಮನ್ನು ಆಶ್ರಯ ಸಮಿತಿ ಅಧ್ಯಕ್ಷರು ಎಂದು ಬರೆಸಿಕೊಂಡಿದ್ದಾರೆ. ಇದನ್ನು ಅನುಮೋದಿಸಿ ಅವರೊಂದಿಗೆ ಮಂಡಳಿಯ ಆಯುಕ್ತರಾದ ವೆಂಕಟೇಶ್ ಸಹಾ ಸಹಿ ಮಾಡಿದ್ದಾರೆ. ಇದು ಮಂಡಳಿಯ ನಿಯಮಗಳಿಗೆ ವಿರುದ್ಧವಾದದ್ದು ಮತ್ತು ದೊಡ್ಡ ಅಪರಾಧವಾಗಿದೆ.

ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಲ್ಲಿ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ನಿರ್ಮಿಸಿರುವ ವಸತಿ ಮನೆಗಳನ್ನು, ಫಲಾನುಭವಿಗಳಿಗೆ ಹಂಚಿಕೆ ಮಾಡಲು ಸರ್ಕಾರದ (ವಸತಿ ಇಲಾಖೆ) ವತಿಯಿಂದ ಆಶ್ರಯ ಸಮಿತಿಯನ್ನು ರಚಿಸಲಾಗಿರುವ ಬಗ್ಗೆ ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸುವಂತೆ ದಿನಾಂಕ: 04.03.2023 ರಂದು ವಸತಿ ಇಲಾಖೆಗೆ ಅರ್ಜಿ ಬರೆಯಲಾಗಿತ್ತು. ಪತ್ರಕ್ಕೆ ಉತ್ತರ ನೀಡಿದ ವಸತಿ ಇಲಾಖೆಯ ಅಧೀನ ಕಾರ್ಯದರ್ಶಿ-2 ರವರು “ಕೋರಿರುವ ಮಾಹಿತಿಯು ಇಲಾಖೆಯಲ್ಲಿ ಲಭ್ಯವಿರುವುದಿಲ್ಲ” ಎಂದು ಹೇಳಿ, ಮಾಹಿತಿಯನ್ನು ನೇರವಾಗಿ ಒದಗಿಸಲು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಆಯುಕ್ತರಿಗೆ ಸೆಕ್ಷನ್ 6(3) ರಡಿಯಲ್ಲಿ ಅರ್ಜಿಯನ್ನು ವರ್ಗಾವಣೆ ಮಾಡಿದರು.

ವಸತಿ ಇಲಾಖೆ, ಸೆಕ್ಷನ್ 6(3)ರ ಅಡಿಯಲ್ಲಿ ವರ್ಗಾಯಿಸಿದ ಪತ್ರಕ್ಕೆ ಮಾಹಿತಿ ಒದಗಿಸಿದ ಮಂಡಳಿಯ ನಂ.1ನೇ ವಿಭಾಗದ ಕಾರ್ಯಪಾಲಕ ಅಭಿಯಂತರರು “ತಾವು ಕೋರಿರುವ ಮಾಹಿತಿಯನ್ನು ಪರಿಶೀಲಿಸಲಾಗಿದ್ದು ಸದರಿ ಆದೇಶವು ಈ ಕಛೇರಿಯಲ್ಲಿ ಲಭ್ಯವಿರುವುದಿಲ್ಲ. ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ನಂ.2ನೇ ಉಪ ವಿಭಾಗ ಬೆಂಗಳೂರು ರವರ ಬಳಿಯೂ ಲಭ್ಯವಿರುವುದಿಲ್ಲ” ಎಂದು ಮಾಹಿತಿ ನೀಡಿದ್ದಾರೆ” ಹಾಗಾಗಿ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಲ್ಲಿ ಆಶ್ರಯ ಸಮಿತಿಯೇ ರಚನೆಯಾಗಿಲ್ಲ ಎಂಬುದು ಸಾಬೀತಾಗಿದೆ.

ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಗರ ಆಶ್ರಯ ಸಮಿತಿಯನ್ನು ಪುನರ್ ರಚಿಸುವ ಬಗ್ಗೆ ಸರ್ಕಾರದ ಆದೇಶ ಸಂಖ್ಯೆ: ವಇ ಹೆಚ್‌ಎಎಸ್ 2013, ಬೆಂಗಳೂರು, ದಿನಾಂಕ: 31ನೇ ಅಕ್ಟೋಬರ್ 2013 ರಂದು ನಗರ ಆಶ್ರಯ ಸಮಿತಿಗಳನ್ನು ಪುನರ್ ರಚಿಸಲಾಗಿದೆ. ಅದರಂತೆ, ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ವಿಧಾನಸಭಾ ಸದಸ್ಯರು ಅಧ್ಯಕ್ಷರಾಗಿರುತ್ತಾರೆ. ಸಂಬಂಧಿಸಿದ ವಿಧಾನಸಭಾ ಕ್ಷೇತ್ರದಲ್ಲಿ ವಾಸವಾಗಿರುವ ವಿಧಾನ ಪರಿಷತ್ತಿನ ಸದಸ್ಯರು, ಪಾಲಿಕೆಯ ಮಹಾಪೌರರು ಅಥವಾ ಮಹಾನಗರ ಪಾಲಿಕೆಯ ಪ್ರತಿನಿಧಿ, ಸಂಬಂಧಪಟ್ಟ ಕಂದಾಯ ಉಪವಿಭಾಗಾಧಿಕಾರಿ, ತಾಲ್ಲೂಕಿನ ತಹಶೀಲ್ದಾರರು ಸದಸ್ಯರಾಗಿರುತ್ತಾರೆ. ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ಆಯುಕ್ತರು ನಾಮ ನಿರ್ದೇಶನ ಮಾಡುವ ಜಂಟಿ/ಉಪ ಆಯುಕ್ತರು ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ.

ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಹಾಗೂ ಸಾಮಾನ್ಯ ವರ್ಗದ ತಲಾ ಒಬ್ಬ ಪ್ರತಿನಿಧಿ ನಾಮನಿರ್ದೇಶಿತ ಸದಸ್ಯರಾಗಿರುತ್ತಾರೆ. ಮೇಲಿನ ಸದಸ್ಯರ ಪೈಕಿ ಒಬ್ಬರು ಮಹಿಳೆಯಾಗಿರಬೇಕು. ಇದುವೇ ಆಶ್ರಯ ಸಮಿತಿ ರಚನೆಯ ವಿಧಾನ. ಮನೆ ಕೋರಿ ಬರುವ ಅರ್ಜಿಗಳನ್ನು ಇವರೆಲ್ಲರೂ ಸೇರಿ ಪರಿಶೀಲಿಸಿ, ಅಂತಿಮಗೊಳಿಸಿ, ಪಟ್ಟಿ ಮಾಡಿದ ಮೇಲೆ ಅಧ್ಯಕ್ಷರು (ಶಾಸಕರು) ಪಟ್ಟಿಗೆ ಸಹಿ ಮಾಡುತ್ತಾರೆ. ಆ ಪಟ್ಟಿಯಲ್ಲಿರುವವರೇ ಅಧಿಕೃತ ಫಲಾನುಭವಿಗಳು. ಅಂತಹವರಿಗೆ ಸಂಬಂಧಪಟ್ಟ ಸರ್ಕಾರಿ ಸಂಸ್ಥೆಗಳು ಮನೆಗಳನ್ನು ಹಂಚಿಕೆ ಮಾಡುತ್ತದೆ. ಇದ್ಯಾವುದೂ ಇಲ್ಲದೇ ತನಗೆ ಇಷ್ಟ ಬಂದವರನ್ನೆಲ್ಲ ಸೇರಿಸಿಕೊಂಡು ಅಕ್ರಮವಾಗಿ ಪಟ್ಟಿ ಮಾಡಿ, ಅದಕ್ಕೆ ಅಶ್ರಯ ಸಮಿತಿ ಅಧ್ಯಕ್ಷರೆಂದು ಸಹಿ ಮಾಡಿಸಿ, ಮನೆಗಳನ್ನು ಹಂಚಿಕೆ ಮಾಡುತ್ತಿರುವುದು ಕಾನೂನು ಬಾಹಿರವಾದ ಕೆಲಸವಲ್ಲದೇ ಮತ್ತೇನು? ಇದು ಅಕ್ಷಮ್ಯ ಅಪರಾಧವೂ ಆಗಿದೆ.

912 (ಜಿ+3) ಮನೆಗಳ ಪೈಕಿ (ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಮನೆಗಳನ್ನೂ ಸೇರಿ) 912 ಮನೆಗಳು ಮೇಲ್ಛಾವಣಿ ಮಟ್ಟ ಮತ್ತು 96 ಮನೆಗಳು ಪೂರ್ಣತಾ ಹಂತದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಂಡಳಿ ತಿಳಿಸಿದೆ. ಮನೆಗಳ ಕಾಮಗಾರಿ ಪೂರ್ಣವಾಗಲು ಕನಿಷ್ಟ ಇನ್ನೂ ಒಂದೂವರೆ ವರ್ಷವಾದರೂ ಬೇಕು ಎಂದು ಹೇಳಲಾಗುತ್ತಿದೆ. ಕಾಮಗಾರಿ ಮುಗಿಸಲು ಮಂಡಳಿಯಲ್ಲಿ ಹಣವೂ ಇಲ್ಲ. ಈ ಹಿನ್ನಲೆಯಲ್ಲಿ ಮನೆಗಳನ್ನು ಹಂಚಿಕೆ ಮಾಡುವ ತರಾತುರಿ ಯಾಕೆ?

ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ 768 ಫಲಾನುಭವಿಗಳ ಪಟ್ಟಿಗೆ ಅನುಮೋದನೆ ಕೊಡುವ ಮೂಲಕ ಶಾಸಕರು ಚುನಾವಣೆಯಲ್ಲಿ ಅತ್ಯಧಿಕ ಮತಗಳನ್ನು ಪಡೆಯಲು ಮಂಡಳಿ ಅನುವು ಮಾಡಿಕೊಟ್ಟಿತು. ಮುಂಬರುವ ಸಂಸತ್ ಚುನಾವಣೆಯಲ್ಲಿ ಮುಂದಿನಂತೆಯೇ ಮತ ಗಳಿಸಲು ಇದೀಗ ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಶಾಸಕರಾದ ಬೈರತಿ ಬಸವರಾಜ್ ಅವರಿಗೆ ಚುನಾವಣೆಯಲ್ಲಿ ಅನುಕೂಲವಾಗಬೇಕು ಎಂಬುದಕ್ಕಾಗಿ, ಕೊಳಗೇರಿ ಜನರ ಮನೆಗಳನ್ನು ಶಾಸಕರು ಕೈತೋರಿಸುವ ಫಲಾನುಭವಿಗಳಿಗೆ ಮಂಡಳಿ ಹಂಚಿಕೆ ಮಾಡುತ್ತಿರುವುದು ಕಾನೂನು ಬಾಹಿರವಲ್ಲವೇ? ಕೊಳಗೇರಿ ಮಂಡಳಿ ಸರ್ಕಾರಿ ಸಂಸ್ಥಯೋ? ಅಥವಾ ಶಾಸಕರ ಭವನವೋ? ಮಂಡಳಿಯ ಅಧಿಕಾರಿಗಳು ಸಂಬಳ ಪಡೆಯುವುದು ಕೊಳಗೇರಿ ಜನರ ಹೆಸರಿನಲ್ಲೋ? ಅಥವಾ ಶಾಸಕರ ಬಳಿಯೋ? ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಉತ್ತರ ಕೊಡಬೇಕಿದೆ.

ಕಳೆದ ವರ್ಷ ಜನವರಿ 20 ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮತ್ತು ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಜನಶಕ್ತಿ ವೇದಿಕೆಯಿಂದ ಪತ್ರ ಬರೆದು, “ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ, ನಗರೇಶ್ವರ ನಾಗೇನಹಳ್ಳಿ ಸರ್ವೆ ನಂ.13ರಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ನಿರ್ಮಿಸುತ್ತಿರುವ ಮನೆಗಳನ್ನು, ಅನುಕೂಲಸ್ಥ ವರ್ಗದವರಿಗೆ ಹಂಚಿಕೆ ಮಾಡುವುದನ್ನು ತಡೆಗಟ್ಟಬೇಕೆಂದು ಕೋರಲಾಯಿತು. ನಮ್ಮ ಮನವಿಯನ್ನು ಮಾನ್ಯ ಮಾಡಿದ ವಸತಿ ಇಲಾಖೆ, ದೂರಿನಲ್ಲಿರುವ ಅಂಶಗಳನ್ನು ನಿಯಮಾನುಸಾರ ಕೂಲಂಕಷವಾಗಿ ಪರಿಶೀಲಿಸಿ, ವಾಸ್ತವಾಂಶದ ಅಭಿಪ್ರಾಯದ ವರದಿಯೊಂದನ್ನು ಅತ್ಯಂತ ಜರೂರಾಗಿ ಸರ್ಕಾರಕ್ಕೆ ಕಳುಹಿಸಿಕೋಡುವಂತೆ ಕೊಳಗೇರಿ ಅಭಿವೃದ್ಧಿ ಮಂಡಳಿಯ ಆಯುಕ್ತರನ್ನು ಕೋರಿತು. ಆದರೆ ವರ್ಷವಾದರೂ ಇನ್ನು ವರದಿಯನ್ನು ಕಳುಹಿಸಿಕೊಡಲಿಲ್ಲ. ಇದು ಶಾಸಕರ ಮೇಲೆ ಮಂಡಳಿಯ ಅಧಿಕಾರಿಗಳು ಇಟ್ಟಿರುವ ವಿಶ್ವಾಸವನ್ನು ತೋರಿಸುತ್ತದೆ.

ಚುನಾವಣೆ ರಾಜಕಾರಣಕ್ಕಾಗಿ ಕೊಳಗೇರಿ ಜನರ ಮನೆಗಳನ್ನು ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಬೈರತಿ ಬಸವರಾಜ್ ಅವರು ಮಂಡಳಿ ನಿಯಮಗಳನ್ನು ಗಾಳಿಗೆದೂರಿ ಮತ್ತು ತಮ್ಮನ್ನು ಆಶ್ರಯ ಸಮಿತಿ ಅಧ್ಯಕ್ಷರೆಂದು ಹೇಳಿಕೊಂಡು ತಮ್ಮ ಕಾರ್ಯಕರ್ತರಿಗೆ, ಹಿಂಬಾಲಕರಿಗೆ ಹಾಗೂ ಸ್ಥಿತಿವಂತರಿಗೆ ಸದರಿ ಮನೆಗಳನ್ನು ಅಕ್ರಮವಾಗಿ ಹಂಚಿಕೆ ಮಾಡುತ್ತಿದ್ದಾರೆ. ಇದು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನಾ) (ತಿದ್ದುಪಡಿ) ನಿಯಮಗಳು, 2004. ನಿಯಮ 8(i), (ii) ಮತ್ತು (iii)ಕ್ಕೆ ಹಾಗೂ ಸರ್ಕಾರದ ಆದೇಶ ಸಂಖ್ಯೆ: ವಇ 115 ಕೊಮಂಇ 2013 (1) ಮತ್ತು ವಇ 115 ಕೊಮಂಇ 2013 (2)ಕ್ಕೆ ವಿರೋಧವಾಗಿದೆ.

ಶಾಸಕರಾದ ಬೈರತಿ ಬಸವರಾಜ್ ನೀಡಿದ ಫಲಾನುಭವಿಗಳ ಪಟ್ಟಿಗೆ ಅಕ್ರಮವಾಗಿ ಅನುಮೋದನೆ ನೀಡಿ, ಕೊಳಗೇರಿ ಜನರ ಮನೆಗಳನ್ನು ಶಾಸಕರ ಹಿಂಬಾಲಕರಿಗೆ, ಕಾರ್ಯಕರ್ತರಿಗೆ ಹಾಗೂ ಅವರ ಚೇಲಾ ಬಾಲಗಳಿಗೆ ಹಂಚಿಕೆ ಮಾಡಲು ಶ್ರಮಿಸುತ್ತಿರುವ ಮಂಡಳಿಯ ಆಯುಕ್ತರಾದ ವೆಂಕಟೇಶ್, ಮುಖ್ಯ ಇಂಜಿನೀಯರ್ ಬಾಲರಾಜ್, ತಾಂತ್ರಿಕ ನಿರ್ದೇಶಕರಾದ ಸುಧೀರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಚರನ್ ರಾಜ್, ಸಹಾಯಕ ಇಂಜಿನಿಯರ್ ನಂದಕಿರಣ್ ಹಾಗೂ ಮ್ಯಾನೇಜರ್ ಫ್ರಾನ್ಸಿಸ್ ಇವರುಗಳ ವಿರುದ್ಧ ಸರ್ಕಾರ ಕೂಡಲೇ ಕ್ರಮ ವಹಿಸಬೇಕೆಂದು ಕೊಳಗೇರಿ ಬಡಜನರ ಪರವಾಗಿ ಕೋರುತ್ತೇವೆ.

ಶಾಸಕರಾದ ಬೈರತಿ ಬಸವರಾಜ್ ಮತ್ತು ಮಂಡಳಿಯ ಭ್ರಷ್ಟ ಅಧಿಕಾರಿಗಳು ಜಂಟಿಯಾಗಿ ತಯಾರಿಸಿರುವ 768 ಫಲಾನುಭವಿಗಳ ಪಟ್ಟಿಯನ್ನು ಈ ಕೂಡಲೇ ರದ್ಧುಗೊಳಿಸಿ, ನಿಜವಾದ ಕೊಳಗೇರಿ ಬಡಜನರಿಗೆ ಸದರಿ ಮನೆಗಳನ್ನು ಹಂಚಿಕೆ ಮಾಡಲು ಸರ್ಕಾರ ಈ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂಬುದು ನಮ್ಮೆಲ್ಲರ ಮನವಿಯಾಗಿದೆ.    

ದೇಶ ರಾಜಕೀಯ

ಸಿಯೋನಿ: ಮಧ್ಯಪ್ರದೇಶದ ಸಿಯೋನಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರವಿಲ್ಲ ಎಂದು ಹೇಳಿದ್ದಾರೆ.

“ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ನಮ್ಮ ದೇಶದ ಜನರನ್ನು ಉಳಿಸಲು ನಾವು ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಿದ್ದೇವೆ. ಮತ್ತು ಬಡವರು ಆಹಾರದ ಕೊರತೆಯಿಂದ ಬಳಲದಂತೆ ನಾವು ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ. ಅದಕ್ಕಾಗಿಯೇ ನಾವು ಜನರಿಗೆ ಉಚಿತ ಪಡಿತರ ವಸ್ತುಗಳನ್ನು ನೀಡಿದವು.

ಗರೀಬ್ ಕಲ್ಯಾಣ್ ಯೋಜನೆಯಡಿ ಉಚಿತ ಆಹಾರ ಧಾನ್ಯಗಳ ವಿತರಣೆಯು ಡಿಸೆಂಬರ್‌ನಲ್ಲಿ ಕೊನೆಗೊಳ್ಳಲಿದೆ. ಆದರೆ ಬಡವರ ನೋವನ್ನು ಅರಿತು ಡಿಸೆಂಬರ್ ನಂತರ ಮುಂದಿನ ಐದು ವರ್ಷಗಳ ಕಾಲ ಒದಗಿಸಲು ನಿರ್ಧರಿಸಿದ್ದೇವೆ.

ನಾನು ಬಡತನದಿಂದ ಎದ್ದು ಬಂದಿದ್ದೇನೆ. ಬಡತನ ಎಂದರೆ ಏನು ಎಂಬುದನ್ನು ಪುಸ್ತಕಗಳಲ್ಲಿ ಓದುವ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಆದಿವಾಸಿಗಳ ಕಲ್ಯಾಣದ ಬಗ್ಗೆ ಕಾಳಜಿ ಇಲ್ಲ. ಸ್ವಾತಂತ್ರ್ಯಾ ನಂತರ 60 ವರ್ಷಗಳ ಕಾಲ ಕಾಂಗ್ರೆಸ್ ಆಡಳಿತದಲ್ಲಿ ಆದಿವಾಸಿಗಳಿಗೆ ಯಾವುದೇ ಒಳಿತಾಗಲಿಲ್ಲ.

2014ರ ಮೊದಲು ಕಾಂಗ್ರೆಸ್ ಆಡಳಿತದಲ್ಲಿ ಪ್ರತಿ ಯೋಜನೆಯಲ್ಲಿ ಹಲವು ಲಕ್ಷ ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ. ಈಗ ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ಇಲ್ಲ. ಬಡವರ ಹಕ್ಕುಗಳಿಗಾಗಿ ನಾವು ಉಳಿಸಿದ ಹಣವನ್ನು ಈಗ ಬಡವರಿಗಾಗಿ ಖರ್ಚು ಮಾಡಲಾಗುತ್ತಿದೆ. ಇದುವೇ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರದ ನಡುವಿನ ದೊಡ್ಡ ವ್ಯತ್ಯಾಸವಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದರು.

ಇದಕ್ಕೂ ಮುನ್ನ ಛತ್ತೀಸ್‌ಗಢದ ಬಮಲೇಶ್ವರಿ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಪೂಜೆ ಸಲ್ಲಿಸಿದರು. ಅವರನ್ನು ದೇವಸ್ಥಾನದ ಆಡಳಿತ ಮಂಡಳಿಯವರು ಸ್ವಾಗತಿಸಿದರು.

ದೇಶ

ನವದೆಹಲಿ: ಭಗವಾನ್ ಶ್ರೀರಾಮನ ಸಿದ್ಧಾಂತಗಳು ಭ್ರಷ್ಟಾಚಾರ ಮತ್ತು ಭಯೋತ್ಪಾದನೆಯ ದುಷ್ಟ ಶಕ್ತಿಗಳನ್ನು ತೊಡೆದುಹಾಕಲು ನಮಗೆ ಸಹಾಯ ಮಾಡುತ್ತವೆ ಎಂದು ರಾಷ್ಟ್ರಪತಿಗಳು ದಸರಾ ಸಂದರ್ಭದಲ್ಲಿ ಮಾತನಾಡಿದರು.

ನವರಾತ್ರಿಯ ಪ್ರಯುಕ್ತ ಧಾರ್ವಿುಕ ಲೀಲಾ ಸಮಿತಿಯು ಆಯೋಜಿಸಿದ್ದ ದಸರಾ ಉತ್ಸವವು ದೆಹಲಿಯ ಕೆಂಪುಕೋಟೆಯಲ್ಲಿ ನಡೆಯಿತು. ಇದರಲ್ಲಿ ಭಾಗವಹಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, “ಭ್ರಷ್ಟಾಚಾರ ಮತ್ತು ಭಯೋತ್ಪಾದನೆ ಇಂದಿಗೂ ದೇಶಕ್ಕೆ ದೊಡ್ಡ ಸವಾಲಾಗಿದೆ. ಇವುಗಳನ್ನು ನಾವು ಎದುರಿಸುತ್ತಿದ್ದೇವೆ. ಈ ದುಷ್ಟ ಶಕ್ತಿಗಳನ್ನು ತೊಲಗಿಸಲು ಶ್ರೀರಾಮನ ವಿಚಾರಧಾರೆಗಳು ಸಹಕಾರಿಯಾಗಲಿವೆ” ಎಂದು ಹೇಳಿದರು.

ದಸರಾ ಉತ್ಸವದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮುಂತಾದವರು ಭಾಗವಹಿಸಿದ್ದರು.

ದೇಶ ರಾಜಕೀಯ

ತೆಲುಗು ದೇಶಂ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಯುವ ಕೌಶಲ್ಯಾಭಿವೃದ್ಧಿ ತರಬೇತಿಯಲ್ಲಿ ಭ್ರಷ್ಟಾಚಾರ:
2015ರಲ್ಲಿ ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಅಧಿಕಾರದಲ್ಲಿದ್ದಾಗ ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ 3,350 ಕೋಟಿ ರೂ.ಗಳ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಈ ಯೋಜನೆಯಲ್ಲಿ ರಾಜ್ಯ ಸರ್ಕಾರ ಶೇ.10 ರಷ್ಟು ಪಾಲು ಪಾವತಿಸಬೇಕು. ಆದರೆ, ರಾಜ್ಯ ಸರ್ಕಾರದ ಪಾಲಿನ 240 ಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ನಕಲಿ ಬಿಲ್‌ಗಳು ಮತ್ತು ಇನ್‌ವಾಯ್ಸ್‌ಗಳ ಮೂಲಕ ಜಿಎಸ್‌ಟಿಯನ್ನು ವಂಚಿಸಿದ ಆರೋಪವೂ ಇದೆ.

ಚಂದ್ರಬಾಬು ನಾಯ್ಡು ಬಂಧನ:
ತಂತ್ರಜ್ಞಾನ ಕಂಪನಿಗಳು ಮತ್ತು ಸರ್ಕಾರದ ನಡುವಿನ ಯೋಜನೆಯ ವೆಚ್ಚದ ಹಂಚಿಕೆಯಲ್ಲಿ ಅಕ್ರಮಗಳು ನಡೆದಿದೆ (371 ಕೋಟಿ ರೂ.ಗಳಲ್ಲಿ 241 ಕೋಟಿ ರೂ.ಗಳು ಭ್ರಷ್ಟಾಚಾರ ನಡೆದಿರುವುದಾಗಿ) ಎಂದು ಸಿಐಡಿ 2017-18ರ ರಿಮಾಂಡ್ ವರದಿಯಲ್ಲಿ ಆರೋಪಿಸಿದೆ. ಅಲ್ಲದೆ, ಈ ಹಿಂದೆ ಸಿಐಡಿ ಪ್ರಕರಣ ದಾಖಲಿಸಿದ್ದ 26 ಮಂದಿಗೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿತ್ತು. ನಂತರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಬಾಬು ನಾಯ್ಡು ಅವರನ್ನು ಸೆಪ್ಟೆಂಬರ್ 9 ರಂದು ಬಂಧಿಸಲಾಗಿತ್ತು. ಸದ್ಯ ರಾಜಮಹೇಂದ್ರವರಂ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಆಂಧ್ರ ಹೈಕೋರ್ಟ್!
ಚಂದ್ರಬಾಬು ನಾಯ್ಡು ಅವರ ಬಂಧನ ಖಂಡಿಸಿ ರಾಜ್ಯಾದ್ಯಂತ ಸಂಪೂರ್ಣ ಬಂದ್‌ ನಡೆಸಲಾಗಿತ್ತು. ಅವರ ಬಂಧನವನ್ನು ಹಲವರು ಖಂಡಿಸಿದ್ದು, ಕೆಲವರು ಜೈಲಿನಲ್ಲಿದ್ದ ಚಂದ್ರಬಾಬು ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಈ ಹಿನ್ನಲೆಯಲ್ಲಿ ಚಂದ್ರಬಾಬು ನಾಯ್ಡು ಅವರು ಅಮರಾವತಿ ಇನ್ನರ್ ರಿಂಗ್ ರೋಡ್ ವಂಚನೆ ಪ್ರಕರಣ ಮತ್ತು ಅಂಗಲ್ಲು ಗಲಭೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆಂಧ್ರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇದರಲ್ಲಿ ಅಮರಾವತಿ ಇನ್ನರ್ ರಿಂಗ್ ರೋಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಆಂಧ್ರ ಹೈಕೋರ್ಟ್, ಈ ಪ್ರಕರಣದಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಇದೇ 16 ರವರೆಗೆ ಬಂಧಿಸಬಾರದು ಎಂದು ಮಧ್ಯಂತರ ಜಾಮೀನು ನೀಡಿದೆ.

ರಾಜಕೀಯ

ನವದೆಹಲಿ: ಭ್ರಷ್ಟಾಚಾರವನ್ನು ಕೊನೆಗೊಳಿಸುವ ಬಗ್ಗೆ ಪ್ರಧಾನಿ ಮಾತನಾಡುತ್ತಾರೆ. ನೀವು (ಮೋದಿ) ಸುಮಾರು 10 ವರ್ಷಗಳ ಕಾಲ ಅಧಿಕಾರದಲ್ಲಿದ್ದೀರಿ; ಏನು ಮಾಡುತ್ತಿದ್ದೀರಿ?’ ಎಂದು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ. ನಿನ್ನೆ (ಆಗಸ್ಟ್ 15) ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ದೆಹಲಿಯ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿ ಭಾಷಣ ಮಾಡಿದರು. ಇದರಲ್ಲಿ, ಭ್ರಷ್ಟಾಚಾರ, ಕುಟುಂಬ ರಾಜಕಾರಣ ಇತ್ಯಾದಿಗಳನ್ನು ಎತ್ತಿ ತೋರಿಸಿ, ವಿರೋಧ ಪಕ್ಷಗಳನ್ನು ಟೀಕಿಸಿದರು.

ಇದನ್ನೂ ಓದಿ: ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸುವಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹ!

ಮುಂದಿನ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯಿಂದ ಮತ್ತೊಮ್ಮೆ ಧ್ವಜಾರೋಹಣ ಮಾಡುವುದಾಗಿಯೂ ಅವರು ಆಶಿಸಿದರು. ‘ಮುಂದಿನ ಐದು ವರ್ಷಗಳು ಅಭಿವೃದ್ಧಿಯ ಅವಧಿಯಾಗಲಿದ್ದು, 2047ರಲ್ಲಿ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲಿದೆ’ ಎಂದು ಭಾಷಣಮಾಡಿದರು. ಪ್ರಧಾನಿಯವರ ಭಾಷಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಹೀಗೆ ಹೇಳಿದ್ದಾರೆ:

ಇದನ್ನೂ ಓದಿ: ಉಪನಿಷತ್ತುಗಳು, ವೇದಗಳು ಮತ್ತು ಸಂಸ್ಕೃತ ಇಡೀ ಜಗತ್ತಿಗೆ ವಿಶ್ವಕೋಶಗಳಾಗಿವೆ; ಯಾವುದೇ ಆಕ್ಷೇಪವಿಲ್ಲದೆ ಅಧಿಕೃತ ಭಾಷೆಯನ್ನಾಗಿ ಹಿಂದಿಯನ್ನು ಒಪ್ಪಿಕೊಳ್ಳುವ ಅಗತ್ಯವನ್ನು ರೂಪಿಸಿಕೊಲ್ಲಿ! – ಅಮಿತ್ ಶಾ

‘ಭ್ರಷ್ಟಾಚಾರವನ್ನು ಕೊನೆಗೊಳಿಸುವ ಬಗ್ಗೆ ಪ್ರಧಾನಿ ಮಾತನಾಡುತ್ತಾರೆ. ನೀವು (ಮೋದಿ) ಸುಮಾರು 10 ವರ್ಷಗಳ ಕಾಲ ಅಧಿಕಾರದಲ್ಲಿದ್ದೀರಿ; ಏನು ಮಾಡುತ್ತಿದ್ದೀರಿ? ಮುಂದಿನ 5 ವರ್ಷ ಸುವರ್ಣ ಯುಗ ಎಂದೂ ಹೇಳಿದ್ದೀರಿ. ಯಾರಿಗೆ ಸುವರ್ಣ ಯುಗ? ಬಡವರು, ದಲಿತರು, ಅಲ್ಪಸಂಖ್ಯಾತರಿಗಾ? ಎಂದು ಅವರು ಪ್ರಧಾನಿಯನ್ನು ಪ್ರಶ್ನೆ ಮಾಡಿದ್ದಾರೆ.