ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ವೈಕೊ Archives » Dynamic Leader
October 23, 2024
Home Posts tagged ವೈಕೊ
ರಾಜಕೀಯ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಶತಮಾನೋತ್ಸವದ ಪ್ರಯುಕ್ತ ತಿರು.ವಿ.ಕ.ನಗರದಲ್ಲಿ ಡಿಎಂಕೆ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಸದ ವೈಕೋ (ವೈ.ಗೋಪಾಲಸ್ವಾಮಿ),

“ಭಾರತದ ಉತ್ತರ ಭಾಗಗಳನ್ನು ಆಳಿದ ಚಂದ್ರಗುಪ್ತ ಮೌರ್ಯ ಎಂದಿಗೂ ತಮಿಳುನಾಡಿಗೆ ಕಾಲಿಡಲಿಲ್ಲ. ಆದರೆ, ತಮಿಳುನಾಡಿನ ರಾಜರು ಗಂಗೆಯವರೆಗೂ ಆಳಿದ್ದಾರೆ. ಚೇರ, ಚೋಳ ಮತ್ತು ಪಾಂಡ್ಯರು ಮಲೇಷ್ಯಾ ಮತ್ತು ಥೈಲ್ಯಾಂಡ್ ಮುಂತಾದ ವಿದೇಶಗಳನ್ನು ಗೆದ್ದು ಆಳಿದ್ದಾರೆ. ಈ ಹಿನ್ನಲೆಯಲ್ಲಿ, ಪ್ರಸ್ತುತ ಭಾರತ ಎಂಬ ಸನಾತನವನ್ನು ಮುನ್ನೆಲೆಗೆ ತರುವುದಾದರೆ ಭಾರತ ಛಿದ್ರವಾಗಿ ಬಿಡುತ್ತದೆ ಎಂಬುದನ್ನು ಇಂದಿನ ಆಡಳಿತಗಾರರು ತಿಳಿದುಕೊಳ್ಳಬೇಕು.

ಭಾರತ ಎಂಬುದು ಒಂದು ದೇಶವಲ್ಲ; ರಾಜ್ಯಗಳಿಂದ ಕೂಡಿದ ಒಕ್ಕೂಟ. ಚಕ್ರವರ್ತಿ ಅಕ್ಬರನ ಕಾಲದಲ್ಲೂ ಭಾರತ ಒಂದಾಗಿರಲಿಲ್ಲ; ಬ್ರಿಟಿಷರ ಅವಧಿಯಲ್ಲಿ ವಿವಿಧ ಘಟನೆಗಳ ನಂತರ ಭಾರತವು ಒಕ್ಕೂಟವಾಗಿ ರೂಪುಗೊಂಡಿತು.

ಅವರು ‘ಭಾರತ್’ ಎಂದು ಹೇಳಿಕೊಂಡು, ಹಿಟ್ಲರ್ ಮತ್ತು ಮುಸೊಲಿನಿಯಂತೆ ಸರ್ವಾಧಿಕಾರಿಗಳಾಗಿ ಎಂದು ವರ್ತಿಸುತ್ತಾರೋ ಅಂದು ಭಾರತ ಛಿದ್ರ ಛಿದ್ರವಾಗಿ ಹೋಗಿ ಬಿಡುತ್ತದೆ.” ಎಂದು ಹೇಳಿದರು. ಕಳೆದ ಕೆಲವು ದಿನಗಳಿಂದ ದೇಶದ ಹೆಸರನ್ನು ಭಾರತ್ ಎಂದು ಬದಲಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಅದನ್ನು ವೈಕೋ ಈ ರೀತಿ ಟೀಕಿಸಿದ್ದಾರೆ.