ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನ; ಡಿಎಂಕೆ ಖಂಡನೆ! » Dynamic Leader
October 22, 2024
ದೇಶ

ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನ; ಡಿಎಂಕೆ ಖಂಡನೆ!

2024ರ ಸಂಸತ್ತಿನ ಚುನಾವಣೆಯಲ್ಲಿ ಜನ ಬಡ್ಡಿ ಸಮೇತ ಅಸಲನ್ನೂ ಮರುಪಾವತಿಸಲಿದ್ದಾರೆ ಎಂದು ಮನೀಶ್ ಸಿಸೋಡಿಯಾ ಬಂಧನವನ್ನು ಡಿಎಂಕೆ ಖಂಡಿಸಿದೆ.

ಚೆನ್ನೈ: ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನ, ಡಿಎಂಕೆ ಖಜಾಂಚಿ ಟಿ.ಆರ್.ಬಾಲು ಖಂಡನೆ.

ಈ ಕುರಿತು ಡಿಎಂಕೆ ಖಜಾಂಚಿ ಹಾಗೂ ಡಿಎಂಕೆ ಪಕ್ಷದ ಸಂಸದೀಯ ಸಮಿತಿ ಅಧ್ಯಕ್ಷ ಟಿ.ಆರ್.ಬಾಲು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ, “ಆಮ್ ಆದ್ಮಿ ನೇತೃತ್ವದ ದೆಹಲಿ ಸರ್ಕಾರದ ಹೊಸ ಮದ್ಯ ನೀತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿರುವುದನ್ನು ನಾನು ಬಲವಾಗಿ ಖಂಡಿಸುತ್ತೇನೆ. ವಿಚಾರಣೆಗೆ ಹಾಜರಾಗುವ ಮೊದಲು ‘ಸಿಬಿಐ ತನ್ನನ್ನು ಬಂದಿಸಲಿದೆ’ ಎಂದು ಮನೀಶ್ ಸಿಸೋಡಿಯಾ ಹೇಳಿದಂತೆಯೇ ಕೇಂದ್ರ ಸರ್ಕಾರದ ಸಿಬಿಐ ಇದೀಗ ಅವರನ್ನು ಬಂಧಿಸಿ 5 ದಿನಗಳ ಕಸ್ಟಡಿ ಪಡೆದಿದೆ.

ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳನ್ನು ವಿರೋಧ ಪಕ್ಷಗಳ ಮೇಲೆ ಬಳಸಿಕೊಳ್ಳುವ ಬಿಜೆಪಿಯ ಪ್ರವೃತ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೇಂದ್ರ ಸರಕಾರದ ಅಧೀನದಲ್ಲಿರುವ ಎಲ್ಲಾ ಸಂಸ್ಥೆಗಳನ್ನು ತನ್ನ ಮಿತ್ರಪಕ್ಷಗಳೆಂದು ಬಿಂಬಿಸುವ ಮೂಲಕ ಪ್ರತಿಪಕ್ಷ ನಾಯಕರ ಮೇಲೆ ದಬ್ಬಾಳಿಕೆ ನಡೆಸುವ ಪ್ರವೃತ್ತಿ ಕಳವಳಕಾರಿಯಾಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ ಮಾತ್ರವಲ್ಲ, ಘೋರ ಕಾನೂನು ಭಾಹಿರವೂ ಆಗಿದೆ. ಈ ಆಡಳಿತದಲ್ಲಿ ಗುಪ್ತಚರ ಸಂಸ್ಥೆಗಳ ಸ್ವಾತಂತ್ರ್ಯವು ಗಾಳಿಯಲ್ಲಿ ಹಾರಿದಂತೆ ಬೇರೆ ಯಾವ ಆಡಳಿತದಲ್ಲೂ ಹೀಗಾಗಲಿಲ್ಲ. ಪ್ರತಿಪಕ್ಷ ನಾಯಕರನ್ನು ಗುರಿಯಾಗಿಸಿಕೊಂಡು ಒಬ್ಬೊಬ್ಬರನ್ನಾಗಿ ಬಂಧಿಸುತ್ತಿರುವುದು ಇದರಿಂದ ಸಾಬೀತಾಗುತ್ತಿದೆ.

2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಮ್ಮ ನೀತಿಗಳಿಗೆ ವಿರುದ್ಧವಾಗಿ ಯೋಚಿಸುವ ಸಾಹಿತಿಗಳು, ಪತ್ರಕರ್ತರು, ಚಿಂತಕರು, ಕಲಾವಿದರಿಗೆ ಬೆದರಿಕೆ ಹಾಕುವ ಪ್ರವೃತ್ತಿ ಆರಂಭವಾಗಿದೆ. ಬಿಜೆಪಿಯ ಇಂತಹ ಅಧಿಕಾರ ಬೆದರಿಕೆಯ ಆಕ್ಟೋಪಸ್ ಕೈಗಳು, 2024ರ ಸಂಸತ್ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ, ಅದು ಈಗ ಅತ್ಯಂತ ವೇಗವಾಗಿ ಮತ್ತು ಅರಾಜಕವಾಗಿ ವಿರೋಧ ಪಕ್ಷಗಳತ್ತ ಸಾಗಿ ಬರುತ್ತಿದೆ. “ಸಿಬಿಐಗೆ ಬಂಧಿಸಲು ಇಷ್ಟವಿಲ್ಲ. ಆದರೆ ರಾಜಕೀಯ ಒತ್ತಡದಿಂದ ಈ ಬಂಧನ ಮಾಡಲಾಗುತ್ತಿದೆ,’’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆರೋಪವನ್ನು ಸುಲಭವಾಗಿ ತಳ್ಳಿ ಹಾಕುವಂತಿಲ್ಲ.

ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕೇಳಿಬರುತ್ತಿರುವ ಹಿಮಾಲಯದ ಆರೋಪಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಆಡಳಿತ ಪಕ್ಷವು ಈ ರೀತಿಯ ಬಂಧನಕ್ಕೆ ಮುಂದಾಗಿದೆ. ವಿರೋಧ ಪಕ್ಷಗಳ ಮೇಲೆ ಸೇಡು ತೀರಿಸಿಕೊಳ್ಳಲು, ಅಧಿಕಾರದಲ್ಲಿದ್ದಾಗ ಸರ್ಕಾರಿ ಸಂಸ್ಥೆಗಳನ್ನು ಬಳಸಿಕೊಂಡವರು, ನಂತರ ಇತಿಹಾಸದ ಕಸದ ಬುಟ್ಟಿಗೆ ಎಸೆಯಲ್ಪಟ್ಟ ಅನೇಕ ಉದಾಹರಣೆಗಳಿವೆ ಎಂಬುದನ್ನು ಕೇಂದ್ರ ಬಿ.ಜೆ.ಪಿ ಸರ್ಕಾರದಲ್ಲಿ ಸಿಬಿಐ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರು ಇದನ್ನು ನೆನಪು ಮಾಡಿಕೊಳ್ಳಬೇಕೆಂದು ನಾನು ಅವರಲ್ಲಿ ಕೇಳಿಕೊಳ್ಳುತ್ತೇನೆ.

ಮಾಧ್ಯಮಗಳನ್ನು ಬಳಸಿಕೊಂಡು ಸತ್ಯಗಳನ್ನು ಎಷ್ಟೇ ಮರೆಮಾಚಿದರೂ ಅದು ಜನಸಮೂಹದ ಮಧ್ಯೆ ಅಂಬಲವಾಗಿ ಬಿಡುತ್ತದೆ. ವಿರೋಧ ಪಕ್ಷಗಳ ಮೇಲೆ ಸೇಡು ತೀರಿಸಿಕೊಂಡು, ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಉಗ್ರ ಪ್ರವೃತ್ತಿಯನ್ನು ಒಕ್ಕೂಟ ಬಿಜೆಪಿ ಸರಕಾರ ಕೂಡಲೇ ಕೈಬಿಡಬೇಕು. ಇಲ್ಲದಿದ್ದರೆ ಈ ವಿಷಯಗಳನ್ನು ಗಮನಿಸುತ್ತಿರುವ ಜನರು ಕೇವಲ ವೀಕ್ಷಕರಾಗಿರುವುದಿಲ್ಲ; ಅವರು ಪಾಠ ಕಲಿಸುವ ನ್ಯಾಯಾಧೀಶರಾಗುತ್ತಾರೆ. ಮತ್ತು 2024ರ ಸಂಸತ್ತಿನ ಚುನಾವಣೆಯಲ್ಲಿ ಬಡ್ಡಿ ಸಮೇತ ಅಸಲನ್ನು ಮರು ಪಾವತಿಸುತ್ತಾರೆ ಎಂದು ನಾನು ನಿಮಗೆ ಎಚ್ಚರಿಸಲು ಬಯಸುತ್ತೇನೆ” ಎಂದು ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Posts