ನಾವು ಗೆಲ್ಲದ ಕ್ಷೇತ್ರದಲ್ಲೂ ಬಿಜೆಪಿ ಹೆಣಗಾಡುತ್ತಿದೆ: ಜೈರಾಮ್ ರಮೇಶ್ » Dynamic Leader
October 22, 2024
ರಾಜಕೀಯ

ನಾವು ಗೆಲ್ಲದ ಕ್ಷೇತ್ರದಲ್ಲೂ ಬಿಜೆಪಿ ಹೆಣಗಾಡುತ್ತಿದೆ: ಜೈರಾಮ್ ರಮೇಶ್

ನವದೆಹಲಿ: ಜೂನ್ 4ರ ನಂತರ ಮೋದಿ ಮಾಜಿ ಪ್ರಧಾನಿಯಾಗಲಿದ್ದಾರೆ. ಜನರು ಅವರನ್ನು ಅಧಿಕಾರದಿಂದ ಹೊರಹಾಕುತ್ತಾರೆ ಎಂಬುದು ಅವರಿಗೂ (ಮೋದಿ) ತಿಳಿದಿದೆ. 1984 ರಿಂದ ನಾವು ಗೆಲ್ಲದ ಕ್ಷೇತ್ರದಲ್ಲೂ ಬಿಜೆಪಿ ಹೆಣಗಾಡುತ್ತಿದೆ ಎಂದು ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

ಈ ಸಂಬಂಧ ಜೈರಾಮ್ ರಮೇಶ್ ಅವರು ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ಲೋಕಸಭೆ ಚುನಾವಣೆಯ ಮೊದಲ ಹಂತದ ನಂತರ, ಇಂಡಿಯಾ ಮೈತ್ರಿಕೂಟವು ಬಹುಮತದ ಸ್ಥಾನಗಳನ್ನು ಪಡೆಯುತ್ತದೆ ಎಂಬುದು ಸ್ಪಷ್ಟವಾಯಿತು. ಇಂದು ನಡೆಯುತ್ತಿರುವ 3ನೇ ಹಂತದ ಚುನಾವಣೆಯ ನಂತರವೂ ಇದೇ ಪರಿಸ್ಥಿತಿ ಇರಲಿದೆ.

1984ರ ನಂತರ ನಾವು ಗುಜರಾತ್‌ನ ಸೂರತ್‌ ಕ್ಷೇತ್ರದಿಂದ ಗೆದ್ದಿಲ್ಲ. ಅಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬೆದರಿಕೆ ಹಾಕಿ ನಾಮಪತ್ರ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿಗಳ ನಾಮಪತ್ರವನ್ನೂ ಹಿಂಪಡೆಯಲಾಗಿದೆ. 1984 ರಿಂದ ನಾವು ಗೆಲ್ಲದಿದ್ದರೂ ಅವರು ಗೆಲ್ಲಲು ಹೆಣಗಾಡುತ್ತಿದ್ದಾರೆ; ಅದಕ್ಕೆ ಈ ಅಡ್ಡದಾರಿಯನ್ನು ಆಯ್ಕೆಮಾಡಿಕೊಂಡರು. ಇದುವೇ ಅಲ್ಲಿನ ವಾಸ್ಥವಾಂಶ.

ಜೂನ್ 4ರ ನಂತರ ಮೋದಿ ಮಾಜಿ ಪ್ರಧಾನಿಯಾಗಲಿದ್ದಾರೆ. ಜನರು ಅವರನ್ನು ಅಧಿಕಾರದಿಂದ ಹೊರಹಾಕುತ್ತಾರೆ ಎಂಬುದು ಅವರಿಗೂ (ಮೋದಿ) ತಿಳಿದಿದೆ. ಜೂನ್ 4ರ ನಂತರ ಅವರು ಪ್ರಧಾನಿಯಾಗುವುದಿಲ್ಲವಾದ್ದರಿಂದ, ಈಗ ಅವರು ಆರಾಮವಾಗಿ ಕಚೇರಿಯಲ್ಲಿ ಕುಳಿತುಕೊಳ್ಳಲಿ ಎಂದು ಅವರು ಹೇಳಿದ್ದಾರೆ.

Related Posts