• About
  • Advertise
  • Privacy & Policy
  • Contact
Dynamic Leader | ಡೈನಾಮಿಕ್ ಲೀಡರ್
Advertisement
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಲೇಖನ
  • ಸಂಪಾದಕೀಯ
No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಲೇಖನ
  • ಸಂಪಾದಕೀಯ
No Result
View All Result
Dynamic Leader | ಡೈನಾಮಿಕ್ ಲೀಡರ್
No Result
View All Result
Home ದೇಶ

ಕಾಶ್ಮೀರ ದಾಳಿಯನ್ನು ಮೋದಿ ಬಿಹಾರ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ: ತಿರುಮಾವಳವನ್ ಖಂಡನೆ!

"ಭಾರತ ಸರ್ಕಾರದ ಗುಪ್ತಚರ ಮತ್ತು ಭದ್ರತಾ ಸಂಸ್ಥೆಗಳು ವಿಫಲವಾಗಿವೆ ಹಾಗಾಗಿ, ಗೃಹ ಸಚಿವರನ್ನು ವಜಾಗೊಳಿಸಿ" - ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ

by Dynamic Leader
24/04/2025
in ದೇಶ
0
ಕಾಶ್ಮೀರ ದಾಳಿಯನ್ನು ಮೋದಿ ಬಿಹಾರ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ: ತಿರುಮಾವಳವನ್ ಖಂಡನೆ!
0
SHARES
37
VIEWS
Share on FacebookShare on Twitter

“ಭಯೋತ್ಪಾದಕರ ದಾಳಿಯ ಹೊಣೆ ಹೊತ್ತು ಅಮಿತ್ ಶಾ ಅವರು ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿರುವ ತಿರುಮಾವಳವನ್, “ಮೋದಿ ಈ ದುರಂತವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ಆಘಾತಕಾರಿಯಾಗಿದೆ” ಎಂದು ಹೇಳಿದ್ದಾರೆ. “ಭಯೋತ್ಪಾದಕರು ದಾಳಿ ನಡೆಸಿದ ಸ್ಥಳಕ್ಕೆ ಭೇಟಿ ನೀಡುವ ಬದಲು, ಪ್ರಧಾನಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದಾರೆ” ಎಂದು ತಿರುಮಾವಳವನ್ ಕಿಡಿಕಾರಿದ್ದಾರೆ.

ಇಂದು ಸುದ್ದಿಗಾರರನ್ನು ಭೇಟಿ ಮಾಡಿದ ತಿರುಮಾವಳವನ್, “ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿ ಅತ್ಯಂತ ಆಘಾತಕಾರಿಯಾಗಿದ್ದು, ಭಯೋತ್ಪಾದನೆಯನ್ನು ತಡೆಗಟ್ಟಲು ಒಕ್ಕೂಟ ಸರ್ಕಾರದೊಂದಿಗೆ ಒಗ್ಗೂಡಿ ನಿಲ್ಲಬೇಕೆಂದು ಎಲ್ಲಾ ಭಾರತೀಯರಿಗೆ “ವಿಡುದಲೈ ಚಿರುತ್ತೈಗಳ್” ಮನವಿ ಮಾಡುತ್ತದೆ.

ಅದೇ ಸಮಯದಲ್ಲಿ, ಕಾಶ್ಮೀರದಲ್ಲಿ ಭಯೋತ್ಪಾದನೆ ನಿರ್ಮೂಲನೆಯಾಗಿದೆ… ಪ್ರಜಾಪ್ರಭುತ್ವವನ್ನು ಸ್ಥಾಪಿಸಲಾಗಿದೆ… ಯಾವುದೇ ದಾಳಿಗಳಿಲ್ಲ… ಶಾಂತಿ ಇದೆ… ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡಬಹುದು… ಎಂದು ಅಮಿತ್ ಶಾ ಭರವಸೆ ನೀಡಿದ್ದರು.

ಅಮಿತ್ ಶಾ ಅವರು, ‘ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿ, ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿ, ಶಾಂತಿಯನ್ನು ಪುನಃಸ್ಥಾಪಿಸಿದ್ದೇವೆ ಮತ್ತು ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿದ್ದೇವೆ’ ಎಂದು ಬಡಾಯಿ ಕೊಚ್ಚಿಕೊಂಡಿದ್ದರು. ಆದರೆ ಆ ನಂತರವೇ ಇಂತಹ ಭಯಾನಕ ಘಟನೆ ನಡೆದಿದೆ” ಎಂದು ಹೇಳಿದ್ದಾರೆ.

ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು, “ಭಾರತ ಸರ್ಕಾರದ ಗುಪ್ತಚರ ಮತ್ತು ಭದ್ರತಾ ಸಂಸ್ಥೆಗಳು ವಿಫಲವಾಗಿವೆ. ಗೃಹ ಸಚಿವರನ್ನು ವಜಾ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.

“ಗೃಹ ಸಚಿವ ಅಮಿತ್ ಶಾ ಅವರು, ಈ ದುರಂತದ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ‘ವಿಡುದಲೈ ಚಿರುತ್ತೈಗಳ್’ ಪಕ್ಷದ ಪರವಾಗಿ ನಾವು ಕೂಡ ಒತ್ತಾಯಿಸುತ್ತಿದ್ದೇವೆ. ಇದು ರಾಜಕೀಯ ಪ್ರೇರಿತ ಹೇಳಿಕೆಯಲ್ಲ, ದೇಶದ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಈ ವಿಚಾರವನ್ನು ಮುಂದಿಡಲಾಗುತ್ತಿದೆ.”

ಭಯೋತ್ಪಾದಕ ದಾಳಿಯನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವ ಮೋದಿ
“ಪ್ರಧಾನಿ ಮೋದಿಯವರು ಸೌದಿ ಅರೇಬಿಯಾ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ದೇಶಕ್ಕೆ ಮರಳಿದ್ದರು. ಪ್ರವಾಸಿಗರು ದಾಳಿಗೆ ಒಳಗಾದ ಸ್ಥಳಕ್ಕೆ ಭೇಟಿ ನೀಡುತ್ತಾರೆ ಎಂದು ನಾವು ಕೂಡ ಭಾವಿಸಿದ್ದೆವು. ಆದರೆ ಅವರು, ಬಿಹಾರಕ್ಕೆ ತೆರಳಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಆಘಾತಕಾರಿಯಾಗಿದೆ.

ಗೃಹ ಸಚಿವರಷ್ಟೇ ಅಲ್ಲ, ಪ್ರಧಾನಿಯೂ ಅಲ್ಲಿಗೆ ಹೋಗಿದ್ದರೆ ಜನತೆಗೆ ಸಮಾಧಾನವಾಗುತ್ತಿತ್ತು. ಆದರೆ, ಈ ದಾಳಿಯನ್ನು ಬಿಹಾರ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ” ಎಂದು ಬೇಸರ ವ್ಯಕ್ತಪ್ಡಿಸಿದ್ದಾರೆ.

Tags: Bihar ElectionModiPahalgam AttackTerrorist attackಅಮಿತ್ ಶಾಆರ್ಟಿಕಲ್ 370ಗೃಹ ಸಚಿವಚುನಾವಣಾ ಪ್ರಚಾರತೊಲ್.ತಿರುಮಾವಳವನ್ಪಹಲ್ಗಾಮ್ ದಾಳಿಬಿಹಾರ ಚುನಾವಣೆಭಯೋತ್ಪಾದಕರ ದಾಳಿಮೋದಿವಿಡುದಲೈ ಚಿರುತ್ತೈಗಳ್ಸುಬ್ರಮಣಿಯನ್ ಸ್ವಾಮಿ
Previous Post

ಜಮ್ಮು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯ ಕುರಿತು ಸಚಿವ ಸಂಪುಟ ಸಭೆಯಲ್ಲಿ ಖಂಡನಾ ನಿರ್ಣಯ

Next Post

ಯುದ್ಧ ಮತ್ತು ಶಾಂತಿಗಾಗಿ ಶಿಮ್ಲಾ ಒಪ್ಪಂದ; ರದ್ದುಗೊಳಿಸಿದರೆ ಏನಾಗಬಹುದು? – ಒಂದು ನೋಟ

Dynamic Leader

Next Post
ಯುದ್ಧ ಮತ್ತು ಶಾಂತಿಗಾಗಿ ಶಿಮ್ಲಾ ಒಪ್ಪಂದ; ರದ್ದುಗೊಳಿಸಿದರೆ ಏನಾಗಬಹುದು? – ಒಂದು ನೋಟ

ಯುದ್ಧ ಮತ್ತು ಶಾಂತಿಗಾಗಿ ಶಿಮ್ಲಾ ಒಪ್ಪಂದ; ರದ್ದುಗೊಳಿಸಿದರೆ ಏನಾಗಬಹುದು? - ಒಂದು ನೋಟ

Stay Connected test

  • 23.9k Followers
  • 99 Subscribers
  • Trending
  • Comments
  • Latest
ಜಾತಿಯೇ ಇಲ್ಲದಿದ್ದರೆ, ನೀವೆಲ್ಲರೂ ಯಾರು? – ಫುಲೆ ಚಿತ್ರದ ವಿಚಾರವಾಗಿ ಅನುರಾಗ್ ಗರಂ!

ಜಾತಿಯೇ ಇಲ್ಲದಿದ್ದರೆ, ನೀವೆಲ್ಲರೂ ಯಾರು? – ಫುಲೆ ಚಿತ್ರದ ವಿಚಾರವಾಗಿ ಅನುರಾಗ್ ಗರಂ!

18/04/2025
ಯಾದಗಿರಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಮಟ್ಟದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿಯ ಸಭೆ!

ಯಾದಗಿರಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಮಟ್ಟದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿಯ ಸಭೆ!

10/04/2025
ರಾಜೀವ್ ಗಾಂಧಿ ನಗರ ಮೈದಾನದಲ್ಲಿ ಅಂಬೇಡ್ಕರ್ ಜಯಂತ್ಯೋತ್ಸವ ಅಂಗವಾಗಿ ಪಂದ್ಯಾವಳಿ

ರಾಜೀವ್ ಗಾಂಧಿ ನಗರ ಮೈದಾನದಲ್ಲಿ ಅಂಬೇಡ್ಕರ್ ಜಯಂತ್ಯೋತ್ಸವ ಅಂಗವಾಗಿ ಪಂದ್ಯಾವಳಿ

12/04/2025
ಕೆ.ಆರ್.ಪುರಂ: ಕಾಂಗ್ರೆಸ್ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಬಹಳ ವಿಜೃಂಭಣೆಯಿಂದ ನಡೆದ ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ!

ಕೆ.ಆರ್.ಪುರಂ: ಕಾಂಗ್ರೆಸ್ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಬಹಳ ವಿಜೃಂಭಣೆಯಿಂದ ನಡೆದ ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ!

14/04/2025
ಫಿಪ ವಿಶ್ವಕಪ್ ಫುಟ್ ಬಾಲ್ ಫೈನಲ್:

ಫಿಪ ವಿಶ್ವಕಪ್ ಫುಟ್ ಬಾಲ್ ಫೈನಲ್:

0
‘ಶ್ರೀ.ಸಿದ್ದಗಂಗಾ ಸಿರಿ ಪ್ರಶಸ್ತಿ’

‘ಶ್ರೀ.ಸಿದ್ದಗಂಗಾ ಸಿರಿ ಪ್ರಶಸ್ತಿ’

0
ಅಖಿಲ ಭಾರತ ಹಿಂದೂ ಮಹಾಸಭಾ ಹೆಸರಿನಲ್ಲಿ ಪುಂಡಾಟಿಕೆ!

ಅಖಿಲ ಭಾರತ ಹಿಂದೂ ಮಹಾಸಭಾ ಹೆಸರಿನಲ್ಲಿ ಪುಂಡಾಟಿಕೆ!

0
ಕೊರೊನಾ ಆರ್ಭಟಕ್ಕೆ ಚೀನಾ ತತ್ತರ!

ಕೊರೊನಾ ಆರ್ಭಟಕ್ಕೆ ಚೀನಾ ತತ್ತರ…!

0
ಭಾರತದಲ್ಲಿ ಆಪಲ್ ಹೂಡಿಕೆಗೆ ಡೊನಾಲ್ಡ್ ಟ್ರಂಪ್ ವಿರೋಧ!

ಭಾರತದಲ್ಲಿ ಆಪಲ್ ಹೂಡಿಕೆಗೆ ಡೊನಾಲ್ಡ್ ಟ್ರಂಪ್ ವಿರೋಧ!

15/05/2025
ಗಡುವು ವಿಧಿಸಿದ ಸುಪ್ರೀಂ ಕೋರ್ಟ್: 14 ಪ್ರಶ್ನೆಗಳನ್ನು ಎತ್ತಿದ ರಾಷ್ಟ್ರಪತಿ!

ಗಡುವು ವಿಧಿಸಿದ ಸುಪ್ರೀಂ ಕೋರ್ಟ್: 14 ಪ್ರಶ್ನೆಗಳನ್ನು ಎತ್ತಿದ ರಾಷ್ಟ್ರಪತಿ!

15/05/2025
ಭಯೋತ್ಪಾದಕರ ಸಹೋದರಿ: ಬಿಜೆಪಿಗರ ಮನಸ್ಸಿನಲ್ಲಿ ಫ್ಯಾಸಿಸ್ಟ್ ಭಯೋತ್ಪಾದನೆ ಹರಡಿದೆ – ತಮಿಮುನ್ ಅನ್ಸಾರಿ

ಭಯೋತ್ಪಾದಕರ ಸಹೋದರಿ: ಬಿಜೆಪಿಗರ ಮನಸ್ಸಿನಲ್ಲಿ ಫ್ಯಾಸಿಸ್ಟ್ ಭಯೋತ್ಪಾದನೆ ಹರಡಿದೆ – ತಮಿಮುನ್ ಅನ್ಸಾರಿ

14/05/2025
ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಬಾಲಕಿ ಖುಷಿ ಅವರ ಪೋಷಕರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಡಿ.ಕೆ.ಶಿವಕುಮಾರ್

ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಬಾಲಕಿ ಖುಷಿ ಅವರ ಪೋಷಕರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಡಿ.ಕೆ.ಶಿವಕುಮಾರ್

14/05/2025

Recent News

ಭಾರತದಲ್ಲಿ ಆಪಲ್ ಹೂಡಿಕೆಗೆ ಡೊನಾಲ್ಡ್ ಟ್ರಂಪ್ ವಿರೋಧ!

ಭಾರತದಲ್ಲಿ ಆಪಲ್ ಹೂಡಿಕೆಗೆ ಡೊನಾಲ್ಡ್ ಟ್ರಂಪ್ ವಿರೋಧ!

15/05/2025
ಗಡುವು ವಿಧಿಸಿದ ಸುಪ್ರೀಂ ಕೋರ್ಟ್: 14 ಪ್ರಶ್ನೆಗಳನ್ನು ಎತ್ತಿದ ರಾಷ್ಟ್ರಪತಿ!

ಗಡುವು ವಿಧಿಸಿದ ಸುಪ್ರೀಂ ಕೋರ್ಟ್: 14 ಪ್ರಶ್ನೆಗಳನ್ನು ಎತ್ತಿದ ರಾಷ್ಟ್ರಪತಿ!

15/05/2025
ಭಯೋತ್ಪಾದಕರ ಸಹೋದರಿ: ಬಿಜೆಪಿಗರ ಮನಸ್ಸಿನಲ್ಲಿ ಫ್ಯಾಸಿಸ್ಟ್ ಭಯೋತ್ಪಾದನೆ ಹರಡಿದೆ – ತಮಿಮುನ್ ಅನ್ಸಾರಿ

ಭಯೋತ್ಪಾದಕರ ಸಹೋದರಿ: ಬಿಜೆಪಿಗರ ಮನಸ್ಸಿನಲ್ಲಿ ಫ್ಯಾಸಿಸ್ಟ್ ಭಯೋತ್ಪಾದನೆ ಹರಡಿದೆ – ತಮಿಮುನ್ ಅನ್ಸಾರಿ

14/05/2025
ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಬಾಲಕಿ ಖುಷಿ ಅವರ ಪೋಷಕರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಡಿ.ಕೆ.ಶಿವಕುಮಾರ್

ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಬಾಲಕಿ ಖುಷಿ ಅವರ ಪೋಷಕರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಡಿ.ಕೆ.ಶಿವಕುಮಾರ್

14/05/2025
Dynamic Leader | ಡೈನಾಮಿಕ್ ಲೀಡರ್

DYNAMIC LEADER is a popular online Kannada newsportal, going source for technical and digital content for its influential audience around the globe.

Follow Us

Browse by Category

  • ಇತರೆ ಸುದ್ಧಿಗಳು
  • ಉದ್ಯೋಗ
  • ಕ್ರೀಡೆ
  • ಕ್ರೈಂ ರಿಪೋರ್ಟ್ಸ್
  • ದೇಶ
  • ಬೆಂಗಳೂರು
  • ರಾಜಕೀಯ
  • ರಾಜ್ಯ
  • ಲೇಖನ
  • ವಿದೇಶ
  • ಶಿಕ್ಷಣ
  • ಸಂಪಾದಕೀಯ
  • ಸಿನಿಮಾ

You can reach us via email or phone.

ನಮ್ಮ ಸಂಪರ್ಕ: ಡಿ.ಸಿ.ಪ್ರಕಾಶ್, ಸಂಪಾದಕರು
ಫೋನ್ / ವಾಟ್ಸಾಪ್: +91-9741553161
ಈ-ಮೇಲ್: dynamicleaderdesk@gmail.com

Recent News

ಭಾರತದಲ್ಲಿ ಆಪಲ್ ಹೂಡಿಕೆಗೆ ಡೊನಾಲ್ಡ್ ಟ್ರಂಪ್ ವಿರೋಧ!

ಭಾರತದಲ್ಲಿ ಆಪಲ್ ಹೂಡಿಕೆಗೆ ಡೊನಾಲ್ಡ್ ಟ್ರಂಪ್ ವಿರೋಧ!

15/05/2025
ಗಡುವು ವಿಧಿಸಿದ ಸುಪ್ರೀಂ ಕೋರ್ಟ್: 14 ಪ್ರಶ್ನೆಗಳನ್ನು ಎತ್ತಿದ ರಾಷ್ಟ್ರಪತಿ!

ಗಡುವು ವಿಧಿಸಿದ ಸುಪ್ರೀಂ ಕೋರ್ಟ್: 14 ಪ್ರಶ್ನೆಗಳನ್ನು ಎತ್ತಿದ ರಾಷ್ಟ್ರಪತಿ!

15/05/2025
  • Site Terms
  • Privacy
  • Advertisement
  • Cookies Policy
  • Contact Us

Copyrights © 2019 - 25 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS

No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಲೇಖನ
  • ಸಂಪಾದಕೀಯ

Copyrights © 2019 - 25 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS