ಜನವರಿ 26 ರಿಂದ ‘ಹಾತ್ ಸೇ ಹಾತ್ ಜೋಡೋ' (ಕೈ ಜೋಡಿಸೋಣ) ಅಭಿಯಾನ! » Dynamic Leader
October 22, 2024
ದೇಶ ರಾಜಕೀಯ ರಾಜ್ಯ

ಜನವರಿ 26 ರಿಂದ ‘ಹಾತ್ ಸೇ ಹಾತ್ ಜೋಡೋ’ (ಕೈ ಜೋಡಿಸೋಣ) ಅಭಿಯಾನ!

ಡಿ.ಸಿ.ಪ್ರಕಾಶ್, ಸಂಪಾದಕರು

ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಮುಕ್ತಾಯವಾಗುತ್ತಿದ್ದಂತೆ, ಯಾತ್ರೆಗಳು ನಡೆಯದ ರಾಜ್ಯಗಳಲ್ಲಿ ಕಾಂಗ್ರೆಸ್ ಘಟಕಗಳು ರಾಷ್ಟ್ರೀಯ ನಾಯಕರುಗಳ ನಿರ್ದೇಶನದಂತೆ ರಾಜ್ಯಾದ್ಯಂತ ಯಾತ್ರೆಗಳನ್ನು ನಡೆಸುತ್ತಿವೆ. ಭಾರತ್ ಜೋಡೋ ಯಾತ್ರೆಯ ಮುಂದುವರಿದ ಭಾಗವಾಗಿ, ಕಾಂಗ್ರೆಸ್ ಪಕ್ಷವು ಜನವರಿ 26 ರಿಂದ ಎರಡು ತಿಂಗಳ ಅವಧಿಯ ‘ಹಾತ್ ಸೇ ಹಾತ್ ಜೋಡೋ’ (ಕೈ ಜೋಡಿಸೋಣ) ಅಭಿಯಾನವನ್ನು ಅಂತಿಮಗೊಳಿಸಿದೆ. ಪ್ರಧಾನ ಕಾರ್ಯದರ್ಶಿ ಪ್ರಿಯಂಕಾ ಗಾಂಧಿ ಮುದಳುತ್ವದಲ್ಲಿ ಈ ಯಾತ್ರೆಗಳು ನಡೆಯಲಿವೆ.

ಈ ಯಾತ್ರೆಯ ಒಂದು ಭಾಗವು, ಎಲ್ಲಾ ಗ್ರಾಮ ಪಂಚಾಯತಿಗಳು ಮತ್ತು ಮತದಾನದ ಚಾವಡಿಗಳನ್ನು ಒಳಗೊಂಡಿರುವ, ಕ್ಷೇತ್ರ ಮಟ್ಟದಲ್ಲಿ ನಡೆಯುವ ಪ್ರಯಾಣವಾಗಿರುತ್ತದೆ. ಈ ಯಾತ್ರೆಯ ಕುರಿತ ರಾಹುಲ್ ಗಾಂಧಿಯ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿಯ ವಿರುದ್ಧದ ಅಪರಾಧಪತ್ರಿಕೆಯಾಗಿ ಎಲ್ಲಡೆಯು ವಿತರಿಸಲಾಗುವುದು. ಪ್ರತಿ ರಾಜ್ಯದಲ್ಲೂ ಮಹಿಳಾ ಯಾತ್ರೆಗಳನ್ನು ಸಂಘಟಿಸಿ ಪ್ರಿಯಾಂಕಾ ಗಾಂಧಿಯೇ ಅದನ್ನು ಮುನ್ನಡೆಸುತ್ತಾರೆ ಎಂದು ಹೇಳಲಾಗುತ್ತಿದೆ.

ಬಿಹಾರ ಕಾಂಗ್ರೆಸ್ ಮುಖಂಡ ಅಖಿಲೇಶ್ ಪ್ರಸಾದ್ ಸಿಂಗ್, ಬಂಕಾ ಜಿಲ್ಲೆಯ ಐತಿಹಾಸಿಕವಾದ ಮಂದರ್ ಮಲೆನಾಡಿನಿಂದ ಬುದ್ಧ ಗಯಾವರೆಗೆ 1,250 ಕಿ.ಮೀ., ರಾಜ್ಯಮಟ್ಟದ ಕಾಂಗ್ರೆಸ್ ಯಾತ್ರೆಯನ್ನು ಗುರುವಾರ ಪ್ರಾರಂಭಿಸಿದ್ದಾರೆ.

ಅದೇ ರೀತಿ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮುಖಂಡ ಆದಿರ್ ರಂಜನ್ ಚೌದ್ರಿಕೂಡ ಯಾತ್ರೆಯನ್ನು ಆಯೋಜಿಸಿದ್ದಾರೆ. ರಾಜ್ಯಾದ್ಯಂತ ಸುಮಾರು 800 ಕಿ.ಮೀ., ದೂರದ ಯಾತ್ರೆಯನ್ನು ಅವರು ಮುನ್ನಡೆಸಲಿದ್ದಾರೆ. ಕೆಲವು ದಿನಗಳ ಹಿಂದೆ ಗಂಗಾ ಸಾಗರದ ದಕ್ಷಿಣ ತುದಿಯಿಂದ ಡಾರ್ಜಿಲಿಂಗ್ ವರೆಗೆ ನಡಿಗೆ ಪ್ರಯಾಣ ನಡೆಸಿದ್ದರು.

ಅಸ್ಸಾಂನ ಪೂರ್ವ ಭಾಗದಲ್ಲಿ, ಪಶ್ಚಿಮ ಬಂಗಾಳ-ಅಸ್ಸಾಂ ಗಡಿಯಲ್ಲಿ ತುಪ್ರಿ ಜಿಲ್ಲೆಯ ಕೋಲಕ್ಕಂಜ್ ನಿಂದ ರಾಜ್ಯದ ಪೂರ್ವ ಪ್ರದೇಶದಲ್ಲಿರುವ ಸದಿಯಾ ವರೆಗೆ, ರಾಜ್ಯಾದ್ಯಂತ 835 ಕಿಲೋಮೀಟರ್ ವರೆಗೆ ಒಂದು ಕಠಿಣವಾದ ತಂಡವನ್ನು ರಚಿಸಿಕೊಂಡು ಕಾಂಗ್ರೆಸ್ ಮುಖಂಡ ಭೂಪೇನ್ ಕುಮಾರ್ ಭೋರ ಕೆಲವು ದಿನಗಳ ಹಿಂದೆ ಯಾತ್ರೆಯನ್ನು ಮುಗಿಸಿದ್ದರು.

ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷದ ರಾಜ್ಯ ಉಸ್ತುವಾರಿ ರಣದೀಪಸಿಂಗ್‌ ಸುರ್ಜೆವಾಲಾ ನೇತೃತ್ವದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಎಲ್ಲ ನಾಯಕರು ಒಂದೇ ಬಸ್‌ ಹತ್ತಲಿದ್ದು, ಯಾತ್ರೆಯುದ್ದಕ್ಕೂ ಆಯೋಜಿಸಲಾಗುತ್ತಿರುವ ಸಮಾವೇಶಗಳಲ್ಲಿ ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸುವ ಯೋಜನೆ ಹಾಕಿಕೊಂಡಿದ್ದಾರೆ.

ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಮೂಲಕ ಈ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲೇಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್‌ ಪಕ್ಷ, ಜನವರಿ 11 ರಿಂದ ‘ಪ್ರಜಾ ಧ್ವನಿ’ ಯಾತ್ರೆಯನ್ನು ಹಮ್ಮಿಕೊಂಡಿದ್ದು, ಇದಕ್ಕಾಗಿ ಭರದಿಂದ ಸಿದ್ಧತೆಗಳನ್ನು ಕೈಗೊಂಡಿದೆ.

‘ಪ್ರಜಾ ಧ್ವನಿ’ ಯಾತ್ರೆಗಾಗಿಯೇ ಸಕಲ ಸೌಲಭ್ಯ ಹೊಂದಿರುವ ಎರಡು ಬಸ್‌ಗಳನ್ನು ವಿಶೇಷವಾಗಿ ನಿರ್ಮಿಸಲಾಗಿದ್ದು, ತಲಾ 40 ಜನ ನಾಯಕರನ್ನು ಒಳಗೊಂಡ ಎರಡು ಬಸ್‌ಗಳು ಜನವರಿ 11ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಲಿವೆ. ಈ ಸಂದರ್ಭದಲ್ಲಿ ಪ್ರತಿ ಜಿಲ್ಲೆಯಲ್ಲೂ ಬೃಹತ್‌ ಸಮಾವೇಶ ನಡೆಯಲಿದ್ದು, ಸಾರ್ವಜನಿಕರು ಸೇರಿದಂತೆ ಪಕ್ಷದ ಕಾರ್ಯಕರ್ತರು ಅತ್ಯಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಈಗಾಗಲೇ ಪಕ್ಷ ಸೂಚನೆಯನ್ನು ನೀಡಿದೆ.

ಭಾರತದಲ್ಲಿ ರಾಹುಲ್ ಗಾಂಧಿ ಮಾತ್ರ (ಭಾರತ್ ಜೋಡೋ) ಯಾತ್ರೆ ನಡೆಸುತ್ತಿಲ್ಲ. ಬಿಜೆಪಿಯ ಜನವಿರೋಧಿ, ಆಡಳಿತ ವಿರೋಧಿ ನೀತಿಯನ್ನು ಖಂಡಿಸಿ, ಜಿಲ್ಲೆ ಜಿಲ್ಲೆಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಕಾಂಗ್ರೆಸ್ ಪಕ್ಷವು ಜನಸಾಮಾನ್ಯರೊಂದಿಗೆ ಸೇರಿ ಯಾತ್ರೆಗಳನ್ನು ನಡೆಸುತ್ತಿರುವುದು ವಿಶೇಷ.  

Related Posts