• About
  • Advertise
  • Privacy & Policy
  • Contact
Dynamic Leader | ಡೈನಾಮಿಕ್ ಲೀಡರ್
Advertisement
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ
No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ
No Result
View All Result
Dynamic Leader | ಡೈನಾಮಿಕ್ ಲೀಡರ್
No Result
View All Result
Home ದೇಶ

ಭಾರತದಲ್ಲಿ 3700 ಅಣೆಕಟ್ಟುಗಳು ಅಪಾಯದಲ್ಲಿದೆ – ವಿಶ್ವಸಂಸ್ಥೆ ಎಚ್ಚರಿಕೆ!

by Dynamic Leader
10/01/2023
in ದೇಶ, ಬೆಂಗಳೂರು, ರಾಜ್ಯ
0
0
SHARES
0
VIEWS
Share on FacebookShare on Twitter

ಡಿ.ಸಿ.ಪ್ರಕಾಶ್, ಸಂಪಾದಕರು

ಬೆಂಗಳೂರು: ಭಾರತದಲ್ಲಿ 3700 ಅಣೆಕಟ್ಟುಗಳು ಅಪಾಯದಲ್ಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದ್ದು ಸಂಚಲನ ಮೂಡಿಸಿದೆ.

2050 ರ ವೇಳೆಗೆ ಭಾರತದ 3,700 ಅಣೆಕಟ್ಟುಗಳು ತಮ್ಮ ನೀರಿನ ಸಂಗ್ರಹಣಾ ಸಾಮರ್ಥ್ಯದಲ್ಲಿ ಶೇ.25 ರಷ್ಟನ್ನು ಕಳೆದುಕೊಳ್ಳುವ ಸಾದ್ಯತೆಯಿದೆ. ಮತ್ತು ಹೂಳು ತುಂಬುವುದರಿಂದ ಈ ಅಪಾಯ ಬರುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.

50 ವರ್ಷಕ್ಕಿಂತ ಹಳೆಯದಾದ ಅಣೆಕಟ್ಟುಗಳು ತಮ್ಮ ನೀರಿನ ಸಂಗ್ರಹಣಾ ಸಾಮರ್ಥ್ಯದಲ್ಲಿ ಶೇ.30 ರಷ್ಟನ್ನು ಕಳೆದುಕೊಳ್ಳುತ್ತವೆ ಮತ್ತು ಪ್ರಪಂಚದಾದ್ಯಂತದ ಸುಮಾರು 50,000 ಅಣೆಕಟ್ಟುಗಳು ಹೂಳು ತುಂಬುವಿಕೆಯಿಂದಾಗಿ ತಮ್ಮ ನೀರಿನ ಸಂಗ್ರಹಣಾ ಸಾಮರ್ಥ್ಯದಲ್ಲಿ ಶೇ.13 ರಿಂದ ಶೇ.19 ರಷ್ಟು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ವಿಶ್ವಸಂಸ್ಥೆಯ ಸಹಯೋಗದೊಂದಿಗೆ ಪರಿಸರ ಮತ್ತು ಆರೋಗ್ಯ ಕೇಂದ್ರ ವಿಶ್ವವಿದ್ಯಾನಿಲಯ ವಿಶ್ವಾದ್ಯಂತ ಅಸ್ತಿತ್ವದಲ್ಲಿರುವ ಅಣೆಕಟ್ಟುಗಳ ಭವಿಷ್ಯವನ್ನು ಪರಿಶೀಲಿಸಿ ಅಧ್ಯಯನವುನ್ನು ನಡೆಸಿದೆ. ದೊಡ್ಡ ಅಣೆಕಟ್ಟುಗಳು ಮತ್ತು ಜಲಾಶಯಗಳು ವಿದ್ಯುತ್ ಮತ್ತು ಕುಡಿಯುವ ನೀರನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಮತ್ತು ಈ ಜಲಾಶಯಗಳೆಲ್ಲವೂ ಏಕಕಾಲದಲ್ಲಿ ಪರಿಣಾಮ ಬೀರುತ್ತವೆ ಎಂದೂ ಅಧ್ಯಯನವು ಬಹಿರಂಗಪಡಿಸಿದೆ.

ಹೂಳುಗಳ ಶೇಖರಣೆಯಿಂದಾಗಿ ಭಾರತದಲ್ಲಿರುವ 3,700 ಅಣೆಕಟ್ಟುಗಳು 2050ರ ವೇಳೆಗೆ ಒಟ್ಟು ಸಂಗ್ರಹಣೆಯಲ್ಲಿ ಶೇ.26 ರಷ್ಟುನ್ನು ಕಳೆದುಕೊಳ್ಳುತ್ತವೆ. ಇದು ಭವಿಷ್ಯದ ನೀರಿನ ಭದ್ರತೆ, ನೀರಾವರಿ ಮತ್ತು ವಿದ್ಯುತ್ ಉತ್ಪಾದನೆಯನ್ನು ದುರ್ಬಲಗೊಳಿಸುವಂತೆ ಮಾಡುತ್ತದೆ ಎಂದು ವಿಶ್ವಸಂಸ್ಥೆಯ ಹೊಸ ಅಧ್ಯಯನವು ಎಚ್ಚರಿಕೆಯನ್ನು ನೀಡಿದೆ.

ನೀರು, ಪರಿಸರ ಮತ್ತು ಆರೋಗ್ಯದ ಕುರಿತು ವಿಶ್ವಸಂಸ್ಥೆಯ ವಿಶ್ವವಿದ್ಯಾಲಯವು ನಡೆಸಿದ ಅಧ್ಯಯನದ ಪ್ರಕಾರ, 150 ದೇಶಗಳಲ್ಲಿನ 47,403 ದೊಡ್ಡ ಅಣೆಕಟ್ಟುಗಳಲ್ಲಿ 6,316 ಶತಕೋಟಿ ಘನ ಮೀಟರ್ ನೀರಿನ ಸಂಗ್ರಹವು ಕಡಿಮೆಯಾಗುತ್ತದೆ. ಮತ್ತು 2050ರ ವೇಳೆಗೆ 4,665 ಶತಕೋಟಿ ಘನ ಮೀಟರ್ ನೀರಿನ ಸಂಗ್ರದಲ್ಲಿ ಶೇ.26ರಷ್ಟು ನೀರಿನ ಸಂಗ್ರಹವು ನಷ್ಟವಾಗುತ್ತದೆ ಎಂದು ಅದು ಅಂದಾಜಿಸಿದೆ.

ಭಾರತ ಮಾತ್ರವಲ್ಲದೆ ಚೀನಾ, ಇಂಡೋನೇಷ್ಯಾ, ಫ್ರಾನ್ಸ್ ಮತ್ತು ಕೆನಡಾ ಸೇರಿದಂತೆ ಇತರ ದೇಶಗಳಲ್ಲಿ ಅಣೆಕಟ್ಟುಗಳ ಜಲಾಶಯದ ಸಾಮರ್ಥ್ಯ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅಧ್ಯಯನ ತಿಳಿಸಿದೆ.

2022 ರ ಹೊತ್ತಿಗೆ, ಏಷ್ಯಾ-ಪೆಸಿಫಿಕ್ ಪ್ರದೇಶ ಮತ್ತು ಪ್ರಪಂಚವು ತಮ್ಮ ಹೆಚ್ಚುವರಿ ಶೇಖರಣಾ ಸಾಮರ್ಥ್ಯದಲ್ಲಿ ಶೇ.13 ರಷ್ಟನ್ನು ಕಳೆದುಕೊಂಡಿದೆ ಎಂದು ಅಂದಾಜಿಸಲಾಗಿದೆ. ವಿಶ್ವದಲ್ಲಿನ ಈ ಭೂಭಾಗದ ಜನಸಂಖ್ಯೆ ಶೇ.60ರಷ್ಟು ಇರುವುದರಿಂದ ನೀರು ಮತ್ತು ಆಹಾರ ಭದ್ರತೆಯನ್ನು ಉಳಿಸಿಕೊಳ್ಳಲು ನೀರಿನ ಸಂರಕ್ಷಣೆ ನಿರ್ಣಾಯಕವಾಗಿದೆ ಎಂದು ಅಧ್ಯಯನವು ಸ್ಪಷ್ಟಪಡಿಸಿದೆ.

ಭಾರತದ 3,700 ಪ್ರಮುಖ ಅಣೆಕಟ್ಟುಗಳು 2050 ರ ವೇಳೆಗೆ ತಮ್ಮ ಆರಂಭಿಕ ಒಟ್ಟು ಸಂಗ್ರಹಣೆಯಲ್ಲಿ ಸರಾಸರಿಯಾಗಿ ಶೇ.26ರಷ್ಟು ಕಳೆದುಕೊಳ್ಳುತ್ತವೆ ಎಂದು ವಿಶ್ವಸಂಸ್ಥೆ ಹೇಳಿದೆ. ಭಾರತ ಮಾತ್ರವಲ್ಲದೆ ವಿಶ್ವದ ಅತ್ಯಂತ ಅಣೆಕಟ್ಟುಗಳನ್ನು ಹೊಂದಿರುವ ಚೀನಾ ರಾಷ್ಟ್ರದ ಅಣೆಕಟ್ಟುಗಳು ಕೂಡ 2050ರ ಹೊತ್ತಿಗೆ ತಮ್ಮ ಸಂಗ್ರಹದ ಶೇ.10ರಷ್ಟನ್ನು ಕಳೆದುಕೊಳ್ಳುತ್ತದೆ.

ನೀರಿನ ಸಂಗ್ರಹಣೆಯ ಮೂಲಸೌಕರ್ಯವು ಅಭಿವೃದ್ಧಿಗೆ ನಿರ್ಣಾಯಕವಾಗಿರುವುದರಿಂದ, ಪ್ರಮುಖ ಅಣೆಕಟ್ಟುಗಳು ಮತ್ತು ಜಲಾಶಯಗಳನ್ನು ಜಲವಿದ್ಯುತ್, ಪ್ರವಾಹ ನಿಯಂತ್ರಣ ಮತ್ತು ನೀರಾವರಿ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ದುರಸ್ತಿ ಮಾಡಬೇಕು. ನಿರ್ದಿಷ್ಟವಾಗಿ ಹೇಳುವುದಾದರೆ, ಹೂಳು ಸಂಗ್ರಹವಾಗುವುದನ್ನು ತಡೆಯಲು ಪ್ರಯತ್ನಿಸಬೇಕು ಎಂದು ಅಧ್ಯಯನದ ಫಲಿತಾಂಶಗಳು ಸೂಚಿಸುತ್ತವೆ.

Tags: cauveryDamsHogenakalಅಣೆಕಟ್ಟುಕಾವೇರಿಜಲಾಶಯಹೊಗೆನಕಲ್
Previous Post

ಎಸ್.ಸಿ./ಎಸ್.ಟಿ.ಪಂಗಡಗಳ ಅಲೆಮಾರಿಗಳಿಗೆ ಸಿಗುತ್ತಿರುವ ಸೌಲಭ್ಯಗಳನ್ನು ಹಿಂದುಳಿದ ಅಲೆಮಾರಿ ಬುಡುಕಟ್ಟುಗಳಿಗೂ ನೀಡಿ?

Next Post

ಬಲವಂತದ ಧಾರ್ಮಿಕ ಮತಾಂತರದ ವಿರುದ್ಧದ ಪ್ರಕರಣದಲ್ಲಿ ಬಲವಾದ ಆಕ್ಷೇಪಣೆಯನ್ನು ಮಂಡಿಸಿದ ಹಿರಿಯ ವಕೀಲ ವಿಲ್ಸನ್!

Next Post

ಬಲವಂತದ ಧಾರ್ಮಿಕ ಮತಾಂತರದ ವಿರುದ್ಧದ ಪ್ರಕರಣದಲ್ಲಿ ಬಲವಾದ ಆಕ್ಷೇಪಣೆಯನ್ನು ಮಂಡಿಸಿದ ಹಿರಿಯ ವಕೀಲ ವಿಲ್ಸನ್!

Stay Connected test

  • 23.9k Followers
  • 99 Subscribers
  • Trending
  • Comments
  • Latest

ಜಾತಿಯೇ ಇಲ್ಲದಿದ್ದರೆ, ನೀವೆಲ್ಲರೂ ಯಾರು? – ಫುಲೆ ಚಿತ್ರದ ವಿಚಾರವಾಗಿ ಅನುರಾಗ್ ಗರಂ!

18/04/2025
ಚುನಾವಣಾ ಅಭ್ಯರ್ಥಿಗಳು ಇನ್ನು ಮುಂದೆ ಗುಂಪು ಸೇರಿಸಿ ಮೆರವಣಿಗೆ ನಡೆಸಿ ಅರ್ಜಿಗಳನ್ನು ಸಲ್ಲಿಸಬೇಕಾಗಿಲ್ಲ. ಆನ್ಲೈನ್ನಲ್ಲಿ ನಾಮಪತ್ರಗಳನ್ನು ಸಲ್ಲಿಸುವ ಸಲುವಾಗಿ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ.

ಇನ್ನು ಮುಂದೆ ನಾಮಪತ್ರ ಸಲ್ಲಿಕೆ ಆನ್‌ಲೈನ್‌ನಲ್ಲಿ ಮಾತ್ರ; ಗದ್ದಲಕ್ಕೆ ಅಂತ್ಯ ಹಾಡಿದ ಚುನಾವಣಾ ಆಯೋಗ!

24/07/2025
ಚಂದ್ರಬಾಬು ನಾಯ್ಡು

ಚಲಾವಣೆಯಲ್ಲಿರುವ 500 ರೂಪಾಯಿ ನೋಟುಗಳನ್ನು ಹಿಂಪಡೆಯಬೇಕು: ಚಂದ್ರಬಾಬು ನಾಯ್ಡು ಒತ್ತಾಯ!

28/05/2025

ಯಾದಗಿರಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಮಟ್ಟದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿಯ ಸಭೆ!

10/04/2025

ಫಿಪ ವಿಶ್ವಕಪ್ ಫುಟ್ ಬಾಲ್ ಫೈನಲ್:

0

‘ಶ್ರೀ.ಸಿದ್ದಗಂಗಾ ಸಿರಿ ಪ್ರಶಸ್ತಿ’

0

ಅಖಿಲ ಭಾರತ ಹಿಂದೂ ಮಹಾಸಭಾ ಹೆಸರಿನಲ್ಲಿ ಪುಂಡಾಟಿಕೆ!

0

ಕೊರೊನಾ ಆರ್ಭಟಕ್ಕೆ ಚೀನಾ ತತ್ತರ…!

0

ಮಣಿಪುರದಲ್ಲಿ ಮೋದಿ ನಡೆಸಿದ ರೋಡ್‌ಶೋ ಪರಿಹಾರ ಶಿಬಿರಗಳಲ್ಲಿರುವ ಜನರ ಕೂಗು ಕೇಳುವುದರಿಂದ ತಪ್ಪಿಸಿಕೊಳ್ಳಲು ಮಾಡಿದ ಹೇಡಿತನದ ತಂತ್ರ: ಖರ್ಗೆ

13/09/2025

ಆರ್‌ಎಸ್‌ಎಸ್‌ಗೆ ಪ್ರಧಾನಿ ಮೋದಿ ಅವರ ಸಂದೇಶವೇನು? ಮೋಹನ್ ಭಾಗವತ್ ಅವರನ್ನು ಅಭಿನಂದಿಸುವ ಲೇಖನದಲ್ಲಿ ಸುಳಿವು!

11/09/2025

ರಾಜ್ಯದ ಸಮಸ್ಯೆಗಳನ್ನು ಪರಿಹರಿಸಲು ಸುಪ್ರೀಂ ಕೋರ್ಟ್ ಹೆಡ್ ಮಾಸ್ಟರಲ್ಲ – ಕೇಂದ್ರ ಸರ್ಕಾರ

11/09/2025
ರಾಹುಲ್ ಗಾಂಧಿ

‘ಮತ ಕಳ್ಳರು ರಾಜೀನಾಮೆ ನೀಡಬೇಕು’ ಘೋಷಣೆ ದೇಶಾದ್ಯಂತ ಸಾಬೀತಾಗಿದೆ: ರಾಹುಲ್ ಗಾಂಧಿ

10/09/2025

Recent News

ಮಣಿಪುರದಲ್ಲಿ ಮೋದಿ ನಡೆಸಿದ ರೋಡ್‌ಶೋ ಪರಿಹಾರ ಶಿಬಿರಗಳಲ್ಲಿರುವ ಜನರ ಕೂಗು ಕೇಳುವುದರಿಂದ ತಪ್ಪಿಸಿಕೊಳ್ಳಲು ಮಾಡಿದ ಹೇಡಿತನದ ತಂತ್ರ: ಖರ್ಗೆ

13/09/2025

ಆರ್‌ಎಸ್‌ಎಸ್‌ಗೆ ಪ್ರಧಾನಿ ಮೋದಿ ಅವರ ಸಂದೇಶವೇನು? ಮೋಹನ್ ಭಾಗವತ್ ಅವರನ್ನು ಅಭಿನಂದಿಸುವ ಲೇಖನದಲ್ಲಿ ಸುಳಿವು!

11/09/2025

ರಾಜ್ಯದ ಸಮಸ್ಯೆಗಳನ್ನು ಪರಿಹರಿಸಲು ಸುಪ್ರೀಂ ಕೋರ್ಟ್ ಹೆಡ್ ಮಾಸ್ಟರಲ್ಲ – ಕೇಂದ್ರ ಸರ್ಕಾರ

11/09/2025
ರಾಹುಲ್ ಗಾಂಧಿ

‘ಮತ ಕಳ್ಳರು ರಾಜೀನಾಮೆ ನೀಡಬೇಕು’ ಘೋಷಣೆ ದೇಶಾದ್ಯಂತ ಸಾಬೀತಾಗಿದೆ: ರಾಹುಲ್ ಗಾಂಧಿ

10/09/2025
Dynamic Leader | ಡೈನಾಮಿಕ್ ಲೀಡರ್

DYNAMIC LEADER is a popular online Kannada newsportal, going source for technical and digital content for its influential audience around the globe.

Follow Us

Browse by Category

  • ಇತರೆ ಸುದ್ಧಿಗಳು
  • ಉದ್ಯೋಗ
  • ಕ್ರೀಡೆ
  • ಕ್ರೈಂ ರಿಪೋರ್ಟ್ಸ್
  • ದೇಶ
  • ಬೆಂಗಳೂರು
  • ರಾಜಕೀಯ
  • ರಾಜ್ಯ
  • ಲೇಖನ
  • ವಿದೇಶ
  • ಶಿಕ್ಷಣ
  • ಸಂಪಾದಕೀಯ
  • ಸಿನಿಮಾ

You can reach us via email or phone.

ನಮ್ಮ ಸಂಪರ್ಕ: ಡಿ.ಸಿ.ಪ್ರಕಾಶ್, ಸಂಪಾದಕರು
ಫೋನ್ / ವಾಟ್ಸಾಪ್: +91-9741553161
ಈ-ಮೇಲ್: dynamicleaderdesk@gmail.com

Recent News

ಮಣಿಪುರದಲ್ಲಿ ಮೋದಿ ನಡೆಸಿದ ರೋಡ್‌ಶೋ ಪರಿಹಾರ ಶಿಬಿರಗಳಲ್ಲಿರುವ ಜನರ ಕೂಗು ಕೇಳುವುದರಿಂದ ತಪ್ಪಿಸಿಕೊಳ್ಳಲು ಮಾಡಿದ ಹೇಡಿತನದ ತಂತ್ರ: ಖರ್ಗೆ

13/09/2025

ಆರ್‌ಎಸ್‌ಎಸ್‌ಗೆ ಪ್ರಧಾನಿ ಮೋದಿ ಅವರ ಸಂದೇಶವೇನು? ಮೋಹನ್ ಭಾಗವತ್ ಅವರನ್ನು ಅಭಿನಂದಿಸುವ ಲೇಖನದಲ್ಲಿ ಸುಳಿವು!

11/09/2025
  • Site Terms
  • Privacy
  • Advertisement
  • Cookies Policy
  • Contact Us

Copyrights © 2019 - 25 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS

No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ

Copyrights © 2019 - 25 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS