• About
  • Advertise
  • Privacy & Policy
  • Contact
Dynamic Leader | ಡೈನಾಮಿಕ್ ಲೀಡರ್
Advertisement
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಲೇಖನ
  • ಸಂಪಾದಕೀಯ
No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಲೇಖನ
  • ಸಂಪಾದಕೀಯ
No Result
View All Result
Dynamic Leader | ಡೈನಾಮಿಕ್ ಲೀಡರ್
No Result
View All Result
Home ರಾಜ್ಯ

ಮುಸ್ಲಿಮರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಮುಸ್ಲಿಂ ಚಿಂತಕರ ಚಾವಡಿ ಸರ್ವಾನುಮತದ ಮನವಿ! 

by Dynamic Leader
01/07/2023
in ರಾಜ್ಯ
0
ಮುಸ್ಲಿಮರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಮುಸ್ಲಿಂ ಚಿಂತಕರ ಚಾವಡಿ ಸರ್ವಾನುಮತದ ಮನವಿ! 
0
SHARES
0
VIEWS
Share on FacebookShare on Twitter

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ನೂತನ ರಾಜ್ಯ ಸರ್ಕಾರದ ಮೊದಲ ಬಜೆಟ್‍ನಲ್ಲಿ, ರಾಜ್ಯದ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ, ಈ ಹಿಂದೆ ಮುಖ್ಯಮಂತ್ರಿಗಳು ಭರವಸೆ ನೀಡಿದಂತೆ, ಅನುದಾನ ನೀಡಬೇಕೆಂದು ಒತ್ತಾಯಿಸಿ, ನಾಡಿನ ಮುಸ್ಲಿಂ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ‘ಮುಸ್ಲಿಂ ಚಿಂತಕರ ಚಾವಡಿ’ಯ ನಿಯೋಗವು, ಗುರುವಾರ ಸಂಜೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳಿಗೆ ಖುದ್ದು ಮನವಿಯನ್ನು ಸಲ್ಲಿಸಿತು.

ಮನವಿ ಸಲ್ಲಿಕೆಗೂ ಮುನ್ನ ನಿಯೋಗದ ಸದಸ್ಯರು, ಮುಖ್ಯಮಂತ್ರಿಗಳೊಂದಿಗೆ ರಾಜ್ಯದ ಮುಸ್ಲಿಂ ಸಮುದಾಯ ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ವಿವರವನ್ನು ಹಂಚಿಕೊಂಡರು. ಮುಸ್ಲಿಂ ಚಿಂತಕರ ಚಾವಡಿಯ ರಾಜ್ಯ ಸಮಿತಿ ಕಾರ್ಯದರ್ಶಿ ಅನಿಸ್ ಪಾಶಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮುಸ್ಲಿಂ ಚಿಂತಕರ ಚಾವಡಿಯ ನಿಯೋಗದ ಸದಸ್ಯರನ್ನು ಪರಿಚಯಿಸಿ, ಚಾವಡಿಯ ಕಾರ್ಯವೈಖರಿಯ ಬಗ್ಗೆ ಮುಖ್ಯಮಂತ್ರಿಗಳಿಗೆ ತಿಳಿಸಿಕೊಟ್ಟರು.

ನಿಯೋಗದ ಹಿರಿಯ ಸದಸ್ಯರಾದ ಬರಹಗಾರ್ತಿ, ಹಾಸನದ ಬಾನು ಮುಷ್ತಾಕ್ ಅವರು, ರಾಜ್ಯದ ಮುಸ್ಲಿಂ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳು, ಸರ್ಕಾರದಿಂದ ಮುಸ್ಲಿಂ ಮಹಿಳೆಯರ ಸಬಲೀಕರಣಕ್ಕಾಗಿ ಆಗಬೇಕಾದ ಸಹಾಯ ಹಾಗೂ ಯೋಜನೆಗಳನ್ನು ರೂಪಿಸುವ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ವಿಚಾರ ವಿನಿಮಯ ಮಾಡಿಕೊಂಡರು. 

ನಿಯೋಗದಲ್ಲಿ ಹಾಜರಿದ್ದು ಮಾತನಾಡಿದ ಕಾಂಗ್ರೆಸ್ ಮುಖಂಡ, ರಾಯಚೂರಿನ ಡಾ.ರಜಾಕ್ ಉಸ್ತಾದ್ ಅವರು, ಮುಸ್ಲಿಂ ಸಮುದಾಯ ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು, ಈ ಹಿಂದಿನ ಸರ್ಕಾರ ನಿಲ್ಲಿಸಿದ ಯೋಜನೆಗಳು, ಸವಲತ್ತುಗಳ ಬಗ್ಗೆ ವಿವರಿಸಿದರು. ಶಿಕ್ಷಣ, ಉದ್ಯೋಗ, ಕೈಗಾರಿಕೆ, ವಿವಿಧ ಕ್ಷೇತ್ರಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮುಸ್ಲಿಮರ ಸಬಲೀಕರಣಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು. 

ವಿಜಯನಗರ ಜಿಲ್ಲೆಯ ಪ್ರೊ.ರಹಮತ್ ತರೀಕೆರೆ ಹಾಗೂ ಮೈಸೂರಿನ ಪ್ರೊ.ಮುಜಾಫರ್ ಅಸ್ಸಾದಿ ಅವರು ಮಾತನಾಡಿ, ಕಳೆದ ಹಲವು ವರ್ಷಗಳಲ್ಲಿ ಮುಸ್ಲಿಂ ಸಮುದಾಯದ ಅಭಿವೃದ್ಧಿ ಹೇಗೆ ಕುಂಠಿತ ಆಗಿದೆ. ರಾಜ್ಯ ಸರ್ಕಾರ ಮುಸ್ಲಿಮರ ಅಭಿವೃದ್ಧಿಗೆ ಈ ಹಿಂದೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಭರವಸೆ ನೀಡಿದಂತೆ ಹೆಚ್ಚಿನ ಅನುದಾನವನ್ನು ನೀಡಿ, ಸಮುದಾಯದ ಅಭಿವೃದ್ಧಿಗೆ ಮುಂದಾಗಬೇಕೆಂದು ಒತ್ತಾಯಿಸಿದರು. 

ದಾವಣಗೆರೆಯ ಬರಹಗಾರ ಜೆ.ಕಲೀಂಭಾಷಾ, ಬೀದರ್ ನ ಸಾಮಾಜಿಕ ಕಾರ್ಯಕರ್ತ ಮಸ್ತಾನ್ ಬಿರಾದಾರ್, ವಿಜಯನಗರದ ಬರಹಗಾರ ಬಿ.ಪೀರ್ ಬಾಷ ಸೇರಿದಂತೆ ಹಲವರು ನಿಯೋಗದಲ್ಲಿದ್ದರು. ನಿಯೋಗದ ಸದಸ್ಯರ ಎಲ್ಲ ಅಭಿಪ್ರಾಯಗಳನ್ನು ಮುಕ್ತವಾಗಿ ಕೇಳಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈಗಾಗಲೇ ಚುನಾವಣೆ ವೇಳೆ ಭರವಸೆ ನೀಡಿರುವಂತೆ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಅಗತ್ಯ ಇರುವ ಎಲ್ಲ ರೀತಿಯ ಅನುದಾನ ನೀಡಲು ಪ್ರಯತ್ನಿಸುವೆ. ಈಗಾಗಲೇ ಬಜೆಟ್ ತಯಾರಿ ಬಹುತೇಕ ಪೂರ್ಣ ಆಗಿರುವ ಹಿನ್ನೆಲೆಯಲ್ಲಿ ಮತ್ತು ಐದು ಗ್ಯಾರಂಟಿಗಳನ್ನು ಸರ್ಕಾರ ಈಡೇರಿಸಲು ಮುಂದಾಗಿದ್ದು, ಈ ಸಾಲಿನಲ್ಲಿ ಸಾಧ್ಯವಾದಷ್ಟೂ ಅನುದಾನವನ್ನು ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ನೀಡಲಾಗುವುದು. ಮುಂಬರುವ ದಿನಗಳಲ್ಲಿ ತಾವೆಲ್ಲ ಒತ್ತಾಯ ಮಾಡಿರುವಂತೆ ಸಮಗ್ರ ಅಭಿವೃದ್ಧಿಗೆ ಚಿಂತನೆ ಮಾಡಲಾಗುವುದೆಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಾಸೀರ್ ಅಹಮದ್ ಹಾಜರಿದ್ದರು.

Tags: Karnataka Muslim UnityMuslim Chintakara ChavadiMuslim Demandsಕರ್ನಾಟಕ ಮುಸ್ಲಿಂ ಯುನಿಟಿಮುಸ್ಲಿಂ ಚಿಂತಕರ ಚಾವಡಿಮುಸ್ಲಿಂ ಬೇಡಿಕೆಗಳು
Previous Post

ಮಾತು ಕೊಡುವುದು ದೊಡ್ಡದಲ್ಲ; ಕೊಟ್ಟ ಮಾತು ಉಳಿಸಿಕೊಳ್ಳುವುದೇ ನಿಜವಾದ ಸವಾಲು!

Next Post

ನಾಳೆ ಅಂತರಾಷ್ಟ್ರೀಯ ಬಿರಿಯಾನಿ ದಿನ; ಬೆಂಗಳೂರಿನಲ್ಲಿ 24000ಕ್ಕೂ ಹೆಚ್ಚು ಬಿರಿಯಾನಿ ರೆಸ್ಟೋರೆಂಟ್‌ಗಳು ಇವೆ! ಸ್ವಿಗ್ಗಿ

Dynamic Leader

Next Post
ನಾಳೆ ಅಂತರಾಷ್ಟ್ರೀಯ ಬಿರಿಯಾನಿ ದಿನ; ಬೆಂಗಳೂರಿನಲ್ಲಿ 24000ಕ್ಕೂ ಹೆಚ್ಚು ಬಿರಿಯಾನಿ ರೆಸ್ಟೋರೆಂಟ್‌ಗಳು ಇವೆ! ಸ್ವಿಗ್ಗಿ

ನಾಳೆ ಅಂತರಾಷ್ಟ್ರೀಯ ಬಿರಿಯಾನಿ ದಿನ; ಬೆಂಗಳೂರಿನಲ್ಲಿ 24000ಕ್ಕೂ ಹೆಚ್ಚು ಬಿರಿಯಾನಿ ರೆಸ್ಟೋರೆಂಟ್‌ಗಳು ಇವೆ! ಸ್ವಿಗ್ಗಿ

Stay Connected test

  • 23.9k Followers
  • 99 Subscribers
  • Trending
  • Comments
  • Latest
ಜಾತಿಯೇ ಇಲ್ಲದಿದ್ದರೆ, ನೀವೆಲ್ಲರೂ ಯಾರು? – ಫುಲೆ ಚಿತ್ರದ ವಿಚಾರವಾಗಿ ಅನುರಾಗ್ ಗರಂ!

ಜಾತಿಯೇ ಇಲ್ಲದಿದ್ದರೆ, ನೀವೆಲ್ಲರೂ ಯಾರು? – ಫುಲೆ ಚಿತ್ರದ ವಿಚಾರವಾಗಿ ಅನುರಾಗ್ ಗರಂ!

18/04/2025
ಯಾದಗಿರಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಮಟ್ಟದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿಯ ಸಭೆ!

ಯಾದಗಿರಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಮಟ್ಟದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿಯ ಸಭೆ!

10/04/2025
ರಾಜೀವ್ ಗಾಂಧಿ ನಗರ ಮೈದಾನದಲ್ಲಿ ಅಂಬೇಡ್ಕರ್ ಜಯಂತ್ಯೋತ್ಸವ ಅಂಗವಾಗಿ ಪಂದ್ಯಾವಳಿ

ರಾಜೀವ್ ಗಾಂಧಿ ನಗರ ಮೈದಾನದಲ್ಲಿ ಅಂಬೇಡ್ಕರ್ ಜಯಂತ್ಯೋತ್ಸವ ಅಂಗವಾಗಿ ಪಂದ್ಯಾವಳಿ

12/04/2025
ಕೆ.ಆರ್.ಪುರಂ: ಕಾಂಗ್ರೆಸ್ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಬಹಳ ವಿಜೃಂಭಣೆಯಿಂದ ನಡೆದ ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ!

ಕೆ.ಆರ್.ಪುರಂ: ಕಾಂಗ್ರೆಸ್ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಬಹಳ ವಿಜೃಂಭಣೆಯಿಂದ ನಡೆದ ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ!

14/04/2025
ಫಿಪ ವಿಶ್ವಕಪ್ ಫುಟ್ ಬಾಲ್ ಫೈನಲ್:

ಫಿಪ ವಿಶ್ವಕಪ್ ಫುಟ್ ಬಾಲ್ ಫೈನಲ್:

0
‘ಶ್ರೀ.ಸಿದ್ದಗಂಗಾ ಸಿರಿ ಪ್ರಶಸ್ತಿ’

‘ಶ್ರೀ.ಸಿದ್ದಗಂಗಾ ಸಿರಿ ಪ್ರಶಸ್ತಿ’

0
ಅಖಿಲ ಭಾರತ ಹಿಂದೂ ಮಹಾಸಭಾ ಹೆಸರಿನಲ್ಲಿ ಪುಂಡಾಟಿಕೆ!

ಅಖಿಲ ಭಾರತ ಹಿಂದೂ ಮಹಾಸಭಾ ಹೆಸರಿನಲ್ಲಿ ಪುಂಡಾಟಿಕೆ!

0
ಕೊರೊನಾ ಆರ್ಭಟಕ್ಕೆ ಚೀನಾ ತತ್ತರ!

ಕೊರೊನಾ ಆರ್ಭಟಕ್ಕೆ ಚೀನಾ ತತ್ತರ…!

0
ನರೇಗ ಯೋಜನೆಯಲ್ಲಿ 75 ಕೋಟಿ ರೂ.ಗಳ ದುರುಪಯೋಗ: ಗುಜರಾತ್ ಬಿಜೆಪಿ ಸಚಿವರ ಪುತ್ರ ಬಂಧನ!

ನರೇಗ ಯೋಜನೆಯಲ್ಲಿ 75 ಕೋಟಿ ರೂ.ಗಳ ದುರುಪಯೋಗ: ಗುಜರಾತ್ ಬಿಜೆಪಿ ಸಚಿವರ ಪುತ್ರ ಬಂಧನ!

17/05/2025
ಪಾಕಿಸ್ತಾನದ ನಿಲುವನ್ನು ಜಗತ್ತಿಗೆ ಪ್ರಸ್ತುತಪಡಿಸಲು ಶಶಿತರೂರ್ ನೇತೃದಲ್ಲಿ ಸಂಸದರ ತಂಡ!

ಪಾಕಿಸ್ತಾನದ ನಿಲುವನ್ನು ಜಗತ್ತಿಗೆ ಪ್ರಸ್ತುತಪಡಿಸಲು ಶಶಿತರೂರ್ ನೇತೃದಲ್ಲಿ ಸಂಸದರ ತಂಡ!

17/05/2025
ಭಾರತದಲ್ಲಿ ಆಪಲ್ ಹೂಡಿಕೆಗೆ ಡೊನಾಲ್ಡ್ ಟ್ರಂಪ್ ವಿರೋಧ!

ಭಾರತದಲ್ಲಿ ಆಪಲ್ ಹೂಡಿಕೆಗೆ ಡೊನಾಲ್ಡ್ ಟ್ರಂಪ್ ವಿರೋಧ!

15/05/2025
ಗಡುವು ವಿಧಿಸಿದ ಸುಪ್ರೀಂ ಕೋರ್ಟ್: 14 ಪ್ರಶ್ನೆಗಳನ್ನು ಎತ್ತಿದ ರಾಷ್ಟ್ರಪತಿ!

ಗಡುವು ವಿಧಿಸಿದ ಸುಪ್ರೀಂ ಕೋರ್ಟ್: 14 ಪ್ರಶ್ನೆಗಳನ್ನು ಎತ್ತಿದ ರಾಷ್ಟ್ರಪತಿ!

15/05/2025

Recent News

ನರೇಗ ಯೋಜನೆಯಲ್ಲಿ 75 ಕೋಟಿ ರೂ.ಗಳ ದುರುಪಯೋಗ: ಗುಜರಾತ್ ಬಿಜೆಪಿ ಸಚಿವರ ಪುತ್ರ ಬಂಧನ!

ನರೇಗ ಯೋಜನೆಯಲ್ಲಿ 75 ಕೋಟಿ ರೂ.ಗಳ ದುರುಪಯೋಗ: ಗುಜರಾತ್ ಬಿಜೆಪಿ ಸಚಿವರ ಪುತ್ರ ಬಂಧನ!

17/05/2025
ಪಾಕಿಸ್ತಾನದ ನಿಲುವನ್ನು ಜಗತ್ತಿಗೆ ಪ್ರಸ್ತುತಪಡಿಸಲು ಶಶಿತರೂರ್ ನೇತೃದಲ್ಲಿ ಸಂಸದರ ತಂಡ!

ಪಾಕಿಸ್ತಾನದ ನಿಲುವನ್ನು ಜಗತ್ತಿಗೆ ಪ್ರಸ್ತುತಪಡಿಸಲು ಶಶಿತರೂರ್ ನೇತೃದಲ್ಲಿ ಸಂಸದರ ತಂಡ!

17/05/2025
ಭಾರತದಲ್ಲಿ ಆಪಲ್ ಹೂಡಿಕೆಗೆ ಡೊನಾಲ್ಡ್ ಟ್ರಂಪ್ ವಿರೋಧ!

ಭಾರತದಲ್ಲಿ ಆಪಲ್ ಹೂಡಿಕೆಗೆ ಡೊನಾಲ್ಡ್ ಟ್ರಂಪ್ ವಿರೋಧ!

15/05/2025
ಗಡುವು ವಿಧಿಸಿದ ಸುಪ್ರೀಂ ಕೋರ್ಟ್: 14 ಪ್ರಶ್ನೆಗಳನ್ನು ಎತ್ತಿದ ರಾಷ್ಟ್ರಪತಿ!

ಗಡುವು ವಿಧಿಸಿದ ಸುಪ್ರೀಂ ಕೋರ್ಟ್: 14 ಪ್ರಶ್ನೆಗಳನ್ನು ಎತ್ತಿದ ರಾಷ್ಟ್ರಪತಿ!

15/05/2025
Dynamic Leader | ಡೈನಾಮಿಕ್ ಲೀಡರ್

DYNAMIC LEADER is a popular online Kannada newsportal, going source for technical and digital content for its influential audience around the globe.

Follow Us

Browse by Category

  • ಇತರೆ ಸುದ್ಧಿಗಳು
  • ಉದ್ಯೋಗ
  • ಕ್ರೀಡೆ
  • ಕ್ರೈಂ ರಿಪೋರ್ಟ್ಸ್
  • ದೇಶ
  • ಬೆಂಗಳೂರು
  • ರಾಜಕೀಯ
  • ರಾಜ್ಯ
  • ಲೇಖನ
  • ವಿದೇಶ
  • ಶಿಕ್ಷಣ
  • ಸಂಪಾದಕೀಯ
  • ಸಿನಿಮಾ

You can reach us via email or phone.

ನಮ್ಮ ಸಂಪರ್ಕ: ಡಿ.ಸಿ.ಪ್ರಕಾಶ್, ಸಂಪಾದಕರು
ಫೋನ್ / ವಾಟ್ಸಾಪ್: +91-9741553161
ಈ-ಮೇಲ್: dynamicleaderdesk@gmail.com

Recent News

ನರೇಗ ಯೋಜನೆಯಲ್ಲಿ 75 ಕೋಟಿ ರೂ.ಗಳ ದುರುಪಯೋಗ: ಗುಜರಾತ್ ಬಿಜೆಪಿ ಸಚಿವರ ಪುತ್ರ ಬಂಧನ!

ನರೇಗ ಯೋಜನೆಯಲ್ಲಿ 75 ಕೋಟಿ ರೂ.ಗಳ ದುರುಪಯೋಗ: ಗುಜರಾತ್ ಬಿಜೆಪಿ ಸಚಿವರ ಪುತ್ರ ಬಂಧನ!

17/05/2025
ಪಾಕಿಸ್ತಾನದ ನಿಲುವನ್ನು ಜಗತ್ತಿಗೆ ಪ್ರಸ್ತುತಪಡಿಸಲು ಶಶಿತರೂರ್ ನೇತೃದಲ್ಲಿ ಸಂಸದರ ತಂಡ!

ಪಾಕಿಸ್ತಾನದ ನಿಲುವನ್ನು ಜಗತ್ತಿಗೆ ಪ್ರಸ್ತುತಪಡಿಸಲು ಶಶಿತರೂರ್ ನೇತೃದಲ್ಲಿ ಸಂಸದರ ತಂಡ!

17/05/2025
  • Site Terms
  • Privacy
  • Advertisement
  • Cookies Policy
  • Contact Us

Copyrights © 2019 - 25 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS

No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಲೇಖನ
  • ಸಂಪಾದಕೀಯ

Copyrights © 2019 - 25 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS