ಕುವೆಂಪುನಗರದಲ್ಲಿ ಮಹಾತ್ಮ ಗಾಂಧಿಜೀಯವರ 154ನೇ ಜನ್ಮ ದಿನಾಚರಣೆ! » Dynamic Leader
October 21, 2024
ಬೆಂಗಳೂರು

ಕುವೆಂಪುನಗರದಲ್ಲಿ ಮಹಾತ್ಮ ಗಾಂಧಿಜೀಯವರ 154ನೇ ಜನ್ಮ ದಿನಾಚರಣೆ!

ಬೆಂಗಳೂರು: ಕೆ.ಆರ್.ಪುರಂ ವ್ಯಾಪ್ತಿಯ ಕುವೆಂಪುನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ “ಕುವೆಂಪುನಗರ ಪೀಪಲ್ಸ್ ವೆಲ್ಫೇರ್ ಅಸೋಸಿಯೇಷನ್” ವತಿಯಿಂದ ಇಂದು ಮಹಾತ್ಮ ಗಾಂಧಿಯವರ 154ನೇ ಜನ್ಮ ದಿನಾಚರನೆಯನ್ನು ಬಹಳ ವಿಭೃಂಜಣೆಯಿಂದ ಆಚರಿಸಲಾಯಿತು.

ಸಂಘದ ಪದಾಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು ಮತ್ತು ಕುವೆಂಪುನಗರದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಗಣ್ಯರಿಂದ ಬಾಪೂಜಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಎಲ್ಲರಿಗೂ ಸಿಹಿ ಹಂಚಲಾಯಿತು.

ಮಹಾತ್ಮಾ ಗಾಂಧಿಯವರದ್ದು ಅಪರೂಪದ ವ್ಯಕ್ತಿತ್ವ; ಶಸ್ತ್ರಾಸ್ತ್ರಗಳ ವಿರುದ್ಧ ಹೋರಾಡಿ ಗೆದ್ದ ಅಹಿಂಸಾತ್ಮಕ ಪಾರಿವಾಳ. ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್ಸ್ಟೈನ್ ಒಮ್ಮೆ ಅವರ ಬಗ್ಗೆ ಪ್ರಸ್ತಾಪಿಸುತ್ತಾ “ಇಂತಹ ಮನುಷ್ಯ ಈ ಭೂಮಿಯ ಮೇಲೆ ಬದುಕಿದ್ದರು ಎಂದು ಮುಂದಿನ ಪೀಳಿಗೆ ನಂಬುವುದು ತುಂಬಾ ಕಷ್ಟ” ಎಂದರು.

“ಉನ್ನತವಾದ ಗುರಿಯಿಟ್ಟುಕೊಂಡರೆ ಸಾಲದು; ಅದನ್ನು ಸಾಧಿಸುವ ಮಾರ್ಗವೂ ಪ್ರಾಮಾಣಿಕವಾಗಿರಬೇಕು” ಎಂದು ಹೇಳಿದ್ದು ಮಾತ್ರವಲ್ಲ ಹೇಳಿದಂತೆ ಬದುಕಿ ತೋರಿಸಿದವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು. ಅಹಿಂಸೆ ಮತ್ತು ಸತ್ಯ ಎಂದಿಗೂ ಸೋಲುವುದಿಲ್ಲ ಎಂದು ಅವರು ದೃಢವಾಗಿ ನಂಬಿದ್ದರು.

ಅನೇಕ ಗುಲಾಮಗಿರಿ ದೇಶಗಳಲ್ಲಿ ಜನರನ್ನು ಮುನ್ನಡೆಸುವ ನಾಯಕರು ಶಸ್ತ್ರಾಸ್ತ್ರಗಳನ್ನು ಹಿಡಿದು ಸ್ವಾತಂತ್ರ್ಯಕ್ಕಾಗಿ ಹೋರಾಡಿದಾಗ, ಅಹಿಂಸೆಯ ಮೂಲಕ ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧ ನಿರಾಯುಧವಾಗಿ ಹೋರಾಡಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ಅವರು. ಅಹಿಂಸೆ, ಸತ್ಯ, ಸಮರ್ಪಣೆ, ಪರಿಶ್ರಮದಲ್ಲಿ ಕೊನೆಯವರೆಗೂ ದೃಢವಾಗಿದ್ದ ಅವರು, ಎಂದಿಗೂ ತಾನು ನಂಬಿದ ತತ್ವ ಸಿದ್ಧಾಂತಗಳೊಂದಿಗೆ ರಾಜಿ ಮಾಡಿಕೊಂಡಿಲ್ಲ ಮತ್ತು ಅವರು ಎಂದಿಗೂ ಹಿಂಸೆಯನ್ನು ಪ್ರತಿಪಾದಿಸಲಿಲ್ಲ.

ರಷ್ಯಾದ ವಿಮೋಚನೆಗಾಗಿ ಹೋರಾಡಿದ ಲೆನಿನ್, ಚೀನಾದ ವಿಮೋಚನೆಗಾಗಿ ಹೋರಾಡಿದ ಮಾವೋ (ಮಾಓ ತ್ಸೆ ತುಂಗ್) ಮುಂತಾದ ವಿಶ್ವದ ಯಾವುದೇ ದೇಶವನ್ನು ತೆಗೆದುಕೊಂಡರೂ ದೇಶಗಳು ಸ್ವಾತಂತ್ರ್ಯ ಪಡೆದಾಗ, ಆ ದೇಶದಲ್ಲಿ ಸ್ಥಾಪಿಸಲಾದ ಸರ್ಕಾರದ ನಾಯಕತ್ವವನ್ನು ಅವರೇ ವಹಿಸಿಕೊಂಡಿದ್ದರು.

ಆದರೆ ಭಾರತದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧೀಜಿಯವರು ಮಾತ್ರ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ, ಇತರರಿಗೆ ಆಡಳಿತದ ಜವಾಬ್ದಾರಿಯನ್ನು ವಹಿಸಿಕೊಟ್ಟು ಮೊದಲಿನಂತೆ ಸರಳ ವ್ಯಕ್ತಿಯಂತೆ ದೇಶದ ಏಕತೆಗೆ ಮತ್ತು ಪ್ರಗತಿಗೆ ಶ್ರಮಿಸಲು ಮುಂದಾದರು.

ಒಂದು ದೇಶವನ್ನು ಮುನ್ನಡೆಸುವ ನಾಯಕ ಹೇಗಿರಬೇಕು ಎಂಬುದಕ್ಕೆ ಅವರೇ ಉದಾಹರಣೆಯಾಗಿದ್ದರು. ಆದ್ದರಿಂದಲೇ ಮೋಹನ್ ದಾಸ್ ಕರಮಚಂದ ಗಾಂಧಿ “ಮಹಾತ್ಮ” ಆದರು. ಈ ಬಿರುದನ್ನು ಕವಿ ರವೀಂದ್ರನಾಥ ಟ್ಯಾಗೋರ್ ಅವರು ನೀಡಿದ್ದಾರೆ. 1909ರಲ್ಲಿ ಪ್ರಂಜಿವನ್ ಮೆಹ್ತಾ ಎಂಬ ಸ್ನೇಹಿತ ಗಾಂಧಿಗೆ ಬರೆದ ಪತ್ರದಲ್ಲಿ ಮೊದಲ ಬಾರಿಗೆ ಅವರನ್ನು “ಮಹಾತ್ಮ” ಎಂದು ಕರೆದಿದ್ದರು.

ಭಾರತ ಸ್ವತಂತ್ರವಾದಾಗ ವಿದೇಶಿ ಪತ್ರಕರ್ತರೊಬ್ಬರು ಮಹಾತ್ಮ ಗಾಂಧಿಯನ್ನು ಭೇಟಿಯಾಗಿ, “ದೇಶದ ಜನತೆಗೆ ನೀವು ಈಗ ಏನು ಹೇಳಲು ಬಯಸುತ್ತೀರಿ?” ಎಂದು ಕೇಳಿದರು. ಅದಕ್ಕೆ ಗಾಂಧಿಯವರು, “ನನ್ನ ಜೀವನವೇ ನನ್ನ ಸಂದೇಶ” ಎಂದರು.

“ನನ್ನ ಜೀವನವೇ ನನ್ನ ಸಂದೇಶ” ಎಂದು ಸಾರಿದ ಮಹಾತ್ಮ ಗಾಂಧಿಯವರ ಜನ್ಮ ದಿನಾಚರನೆಯನ್ನು ಆಚರಿಸುವುದಲ್ಲದೇ  ಅದನ್ನು ಮುಂದಿನ ತಲಮಾರಿಗೆ ಪರಿಚಯಿಸುವ ಕೆಲಸವೂ ಮಾಡುತ್ತಿರುವ ಕುವೆಂಪುನಗರ ಪೀಪಲ್ಸ್ ವೆಲ್ಫೇರ್ ಅಸೋಸಿಯೇಷನ್ ಪದಾಧಿಕಾರಿಗಳ ಮತ್ತು ಆಡಳಿತ ಮಂಡಳಿ ಸದಸ್ಯರ ಕಾರ್ಯ ಶ್ಲಾಘನೀಯ.

ಇದನ್ನೂ ಓದಿ: ಗಾಂಧಿ ಅವರ ಆಶಯದಂತೆ ಕಟ್ಟ ಕಡೆಯ ವ್ಯಕ್ತಿಗೂ ಬದುಕುವ ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಸರ್ಕಾರದ ಗುರಿಯಾಗಿದೆ! – ಸಿದ್ದರಾಮಯ್ಯ

Related Posts