ವಿದೇಶ Archives » Page 6 of 12 » Dynamic Leader
October 23, 2024
Home Archive by category ವಿದೇಶ (Page 6)

ವಿದೇಶ

ವಿದೇಶ

ಅಮೆರಿಕದಲ್ಲಿ ಬಂದೂಕು ಸಂಸ್ಕೃತಿಯ ಕಾರಣದಿಂದಾಗಿ 2023ರಲ್ಲಿ ಬರೋಬ್ಬರಿ 42,000 ಅಮೆರಿಕನ್ನರು ಹತ್ಯೆಯಾಗಿದ್ದಾರೆ ಎಂದು ಗನ್ ವಯಲೆನ್ಸ್ ಆರ್ಕೈವ್‌ನ ಡೇಟಾ ತೋರಿಸುತ್ತದೆ.

ಅಮೆರಿಕದ ರಾಜಕೀಯವನ್ನು ದೇಶದ ಕಾರ್ಪೊರೇಟ್ ಗಳು, ವಿಶೇಷವಾಗಿ ಶಸ್ತ್ರಾಸ್ತ್ರ ಉದ್ಯಮಗಳು ನಿರ್ಧರಿಸುತ್ತದೆ. ಈ ಕಂಪನಿಗಳ ಪ್ರಾಬಲ್ಯದಿಂದಾಗಿ ಅಮೆರಿಕ ಹಲವು ದೇಶಗಳ ಮೇಲೆ ಯುದ್ಧ ಹೇರಿದೆ. ಇದರ ಹಿನ್ನೆಲೆಯಲ್ಲಿ ಅಮೆರಿಕದ ಆರ್ಥಿಕತೆಯಲ್ಲಿ (ಯುದ್ಧದ ಆರ್ಥಿಕತೆ) ಶಸ್ತ್ರಾಸ್ತ್ರಗಳು ಪ್ರಮುಖ ಪಾತ್ರ ವಹಿಸುತ್ತಿವೆ.

ಈ ಶಸ್ತ್ರಾಸ್ತ್ರ ಆರ್ಥಿಕತೆಯ ಪಿಡುಗು ಅಮೆರಿಕವನ್ನೂ ಬಿಟ್ಟಿಲ್ಲ. ಪ್ರತಿ ವರ್ಷ ಅಮೆರಿಕದಲ್ಲಿ ಶಾಲೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಠಾತ್ ಗುಂಡಿನ ದಾಳಿಗಳು ನಡೆಯುತ್ತಲೇ ಇವೆ. ಈ ಗುಂಡಿನ ದಾಳಿಯನ್ನು ನಿಯಂತ್ರಿಸಲು ಅಮೆರಿಕ ಸರ್ಕಾರ ಹರಸಾಹಸ ಪಡುತ್ತಿದೆ.

ಅಮೆರಿಕ ಗನ್ ವಯಲೆನ್ಸ್ ಆರ್ಕೈವ್‌ನ ಮಾಹಿತಿಯ ಪ್ರಕಾರ 2023ರಲ್ಲಿ ಬರೋಬ್ಬರಿ 42,000 ಜನರು ಬಂದೂಕು ಹಿಂಸಾಚಾರದಿಂದ ಸಾವನ್ನಪ್ಪಿದ್ದಾರೆ. ಇಂತಹ ಗುಂಡಿನ ದಾಳಿಯಲ್ಲಿ 17 ವರ್ಷದೊಳಗಿನ 1,600 ಮಕ್ಕಳು ಸಾವನ್ನಪ್ಪಿದ್ದಾರೆ. ಈ ಪೈಕಿ 23,760 ಮಂದಿ ಬಂದೂಕಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮತ್ತು ಯಾವುದೇ ಕಾರಣವಿಲ್ಲದೆ 18,507 ಜನರು ಆತ್ಮರಕ್ಷಣೆಗಾಗಿ ಹಾಗೂ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಂಕಿಅಂಶಗಳು ತೋರಿಸುತ್ತವೆ.

ವಿದೇಶ

ಇಸ್ಲಾಮಾಬಾದ್: 44 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮಾಜಿ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ (Zulfikar Ali Bhutto) ಅವರ ಗಲ್ಲು ಶಿಕ್ಷೆ ಪ್ರಕರಣದ ಮರು ವಿಚಾರಣೆಯನ್ನು 2024ರ ಜನವರಿಯಲ್ಲಿ ನಡೆಸಲಾಗುವುದು ಎಂದು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಪ್ರಕಟಿಸಿದೆ.

ಪಾಕಿಸ್ತಾನದಲ್ಲಿ ಪ್ರಜಾಸತ್ತಾತ್ಮಕವಾಗಿ ನಡೆದ ಚುನಾವಣೆಯಲ್ಲಿ, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ನಾಯಕ ಜುಲ್ಫಿಕರ್ ಅಲಿ ಭುಟ್ಟೊ ಮೊದಲ ಪ್ರಧಾನಿಯಾಗಿ ಆಯ್ಕೆಯಾದರು. ಆದಾಗ್ಯೂ, ಆಗಿನ ಅಧ್ಯಕ್ಷ ಮುಹಮದ್ ಜಿಯಾ-ಉಲ್-ಹಕ್ (Muhammad Zia-ul-Haq) ಅವರು 1977ರಲ್ಲಿ ಭುಟ್ಟೋ ಅವರ ಆಡಳಿತವನ್ನು ಉರುಳಿಸಿ, ಮಿಲಿಟರಿ ಆಡಳಿತವನ್ನು ಹೇರಿದರು. ನಂತರ, ನವಾಬ್ ಮುಹಮ್ಮದ್ ಅಹ್ಮದ್ ಕುರೋಶಿ ಎಂಬ ರಾಜಕೀಯ ನಾಯಕನನ್ನು ಕೊಲೆ ಮಾಡಿದರು ಎಂದು ಜುಲ್ಫಿಕರ್ ಅಲಿ ಭುಟ್ಟೊ ವಿರುದ್ಧ ಕೊಲೆ ಆರೋಪ ಮಾಡಿ ಅವರನ್ನು ಏಪ್ರಿಲ್ 4, 1979 ರಂದು ಗಲ್ಲಿಗೇರಿಸಲು ಆದೇಶಿಸಿದರು.

ಈ ಹಿನ್ನಲೆಯಲ್ಲಿ, 2011ರಲ್ಲಿ ಆಗಿನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಪಾಕ್ ಸಚಿವ ಸಂಪುಟದಲ್ಲಿ ಭುಟ್ಟೋ ಗಲ್ಲಿಗೇರಿದ ಪ್ರಕರಣವನ್ನು ಮತ್ತೆ ಮರು ತನಿಖೆಗೆ ನೀಡುವ ಬಗ್ಗೆ ತೀರ್ಮಾನ ಮಾಡಿದರು. ಈ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿತ್ತು. ರಾಷ್ಟ್ರೀಯ ಮಹತ್ವದ ಈ ಘಟನೆಗೆ ಸಂಬಂಧಿಸಿದಂತೆ, ಸೂಕ್ತ ರೀತಿಯಲ್ಲಿ ತನಿಖೆ ನಡೆಸಲಾಗುವುದು ಎಂಬ ಮಾಹಿತಿಯೂ ಕೇಳಿಬರುತ್ತಿದೆ.

ಇದೀಗ ಈ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಖಾಜಿ ಫೈಜ್ ಇಸಾ (Qazi Faez Isa) ನೇತೃತ್ವದ 9 ನ್ಯಾಯಾಧೀಶರ ಸಂವಿಧಾನ ಪೀಠದ ಮುಂದೆ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗಿದೆ. ಜನವರಿ 2024ರಲ್ಲಿ ದಿನಾಂಕವನ್ನು ನಿರ್ದಿಷ್ಟಪಡಿಸದೆ ಮರು-ವಿಚಾರಣೆಗಾಗಿ ಪ್ರಕರಣವನ್ನು ಸ್ವೀಕರಿಸಲಾದ್ದು, ನಂತರ ಪ್ರಕರಣದ ವಿಚಾರಣೆಯನ್ನು ಟಿವಿಯಲ್ಲಿ ನೇರ ಪ್ರಸಾರ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ವಿದೇಶ

ವಾಷಿಂಗ್ಟನ್, ಪ್ಯಾಲೆಸ್ತೀನ್‌ನ ಗಾಜಾದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ನಡೆಯುತ್ತಿದೆ. ಹಮಾಸ್ ಅನ್ನು ನಿರ್ಮೂಲನೆ ಮಾಡುತ್ತೇವೆ ಎಂಬ ಘೋಷಣೆಯೊಂದಿಗೆ ಇಸ್ರೇಲ್ ಆಕ್ರಮಣಕಾರಿ ದಾಳಿ ನಡೆಸುತ್ತಿದೆ. ಸುಮಾರು 2 ತಿಂಗಳಿನಿಂದ ನಡೆಯುತ್ತಿರುವ ಈ ಯುದ್ಧದಿಂದಾಗಿ ಗಾಜಾದ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ.

ಇದರ ಪರಿಣಾಮವಾಗಿ, ವಿವಿಧ ದೇಶಗಳು ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮವನ್ನು ಉತ್ತೇಜಿಸಿವೆ. ಆದಾಗ್ಯೂ, ಕದನ ವಿರಾಮ ಮಾತುಕತೆ ವಿಫಲವಾಗಿ ಕೊನೆಗೊಂಡಿತು. ತರುವಾಯ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವಿಶ್ವಸಂಸ್ಥೆಯ ಸಂವಿಧಾನ ಆರ್ಟಿಕಲ್ 99 ಅನ್ನು ಬಳಸಿಕೊಂಡು ತುರ್ತು ಸಭೆಗೆ ಕರೆ ನೀಡಿದರು. ಈ ಸಭೆಯಲ್ಲಿ, ಗಾಜಾದಲ್ಲಿ ಕದನ ವಿರಾಮದ ಬಗ್ಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ನಿರ್ಣಯವನ್ನು ತರಲಾಯಿತು. ಈ ನಿರ್ಣಯವನ್ನು ಅಮೆರಿಕ ತನ್ನ ವೀಟೋ ಅಧಿಕಾರವನ್ನು ಬಳಸಿ ನಿರಾಕರಿಸಿದೆ.

ಹಮಾಸ್ ಬಳಿ ಇನ್ನೂ 100ಕ್ಕೂ ಹೆಚ್ಚು ಒತ್ತೆಯಾಳುಗಳು ಇದ್ದು, ಕದನ ವಿರಾಮ ನಿರ್ಣಯವು ಅವರ ಕೈಗೆ ಅಧಿಕಾರವನ್ನು ನೀಡುತ್ತದೆ ಎಂದು ಹೇಳಿ, ಅಮೆರಿಕ ತನ್ನ ವೀಟೋ ಅಧಿಕಾರವನ್ನು ಬಳಸಿ ನಿರ್ಣಯಕ್ಕೆ ಆಕ್ಷೇಪ ವ್ಯಕ್ತಪಡಿ ನಿರಾಕರಿಸಿದೆ. ಈ ಕುರಿತು ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಅಮೆರಿಕದ ಉಪ ರಾಯಭಾರಿ ರಾಬರ್ಟ್ ವುಡ್, “ಕದನ ವಿರಾಮ ಮತ್ತೊಂದು ಕದನವನ್ನು ಸೃಷ್ಟಿಸುತ್ತದೆ. ಏಕೆಂದರೆ ಹಮಾಸ್ ಶಾಶ್ವತ ಶಾಂತಿಗಾಗಿ ಎರಡು ದೇಶಗಳ ಪರಿಹಾರವನ್ನು ಕಾಣಲು ಬಯಸುತ್ತಿಲ್ಲ” ಎಂದು ಹೇಳಿದ್ದಾರೆ.

ವಿದೇಶ

ಪಶ್ಚಿಮ ನೇಪಾಳದ ದೋರ್ತಿ ಪುರಸಭೆಯು ಪಿಂಕಿ ಮತ್ತು ಸುರೇಂದ್ರ ಪಾಂಡೆಯ ಸಲಿಂಗ ವಿವಾಹವನ್ನು ಕಾನೂನುಬದ್ಧವಾಗಿ ನೋಂದಾಯಿಸಿದೆ.

ನೇಪಾಳದ ತೃತೀಯ ಲಿಂಗಿಯಾಗಿರುವ ಪಿಂಕಿ ಅವರು ಸುರೇಂದ್ರ ಪಾಂಡೆ ಅವರನ್ನು ವಿವಾಹವಾಗಿದ್ದಾರೆ. ಆದರೆ ಸರ್ಕಾರ ಆರಂಭದಲ್ಲಿ ಅವರ ವಿವಾಹವನ್ನು ನೋಂದಾಯಿಸಲು ನಿರಾಕರಿಸಿತು. ಪರಿಣಾಮವಾಗಿ, ಪಿಂಕಿ ಮತ್ತು ಸುರೇಂದ್ರ ಪಾಂಡೆ ಸಲಿಂಗ ವಿವಾಹಕ್ಕೆ ಮಾನ್ಯತೆ ಕೋರಿ ಪ್ರಕರಣವನ್ನು ದಾಖಲಿಸಿದರು.

ಆದರೆ ಈ ಬಗ್ಗೆ ತನಿಖೆ ನಡೆಸಿದ ಕಠ್ಮಂಡು ಜಿಲ್ಲಾ ನ್ಯಾಯಾಲಯ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಲು ನಿರಾಕರಿಸಿತು. ಇದರಿಂದ ಪಿಂಕಿ-ಸುರೇಂದ್ರ ಪಾಂಡೆ ಮದುವೆಗೆ ಮನ್ನಣೆ ಸಿಗಲಿಲ್ಲ. ಇದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲಾಯಿತು. ಪ್ರಕರಣವನ್ನು ವಿಚಾರಿಸಿದ ನೇಪಾಳದ ಸುಪ್ರೀಂ ಕೋರ್ಟ್ ಇದೀಗ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಿ ಆದೇಶ ಹೊರಡಿಸಿದೆ.

ಇದರ ನಂತರ, ಪಶ್ಚಿಮ ನೇಪಾಳದ ದೋರ್ತಿ ಪುರಸಭೆಯು ಪಿಂಕಿ ಮತ್ತು ಸುರೇಂದ್ರ ಪಾಂಡೆಯ ಸಲಿಂಗ ವಿವಾಹವನ್ನು ಕಾನೂನುಬದ್ಧವಾಗಿ ನೋಂದಾಯಿಸಿದೆ. ಸಲಿಂಗ ದಂಪತಿಗಳು ತಮ್ಮ ಮದುವೆಯನ್ನು ನೋಂದಾಯಿಸಿದ್ದಕ್ಕಾಗಿ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.

ವಿದೇಶ

ವಿಶ್ವದ ಶ್ರೀಮಂತರಲ್ಲಿ ಒಬ್ಬರಾದ ಎಲಾನ್ ಮಸ್ಕ್ ಅವರನ್ನು ಗಾಜಾ ಗಡಿಗೆ ಬಂದು ಇಸ್ರೇಲ್ ಮಾಡಿರುವ ವಿನಾಶವನ್ನು ನೋಡುವಂತೆ ಹಮಾಸ್‌ನ ಹಿರಿಯ ನಾಯಕರೊಬ್ಬರು ಆಹ್ವಾನಿಸಿದ್ದಾರೆ.

“ಗಾಜಾ ಗಡಿಗೆ ಬಂದು, ಗಾಜಾದ ಜನರ ವಿರುದ್ಧ ನಡೆದ ವಿಧ್ವಂಸಕ ಕೃತ್ಯಗಳನ್ನು ಪ್ರತ್ಯಕ್ಷವಾಗಿ ನೋಡಿ ತಿಳಿದುಕೊಳ್ಳುವಂತೆ ನಾವು ಅವರಿಗೆ ಕರೆ ನೀಡುತ್ತೇವೆ. 50 ದಿನಗಳಲ್ಲಿ, ಗಾಜಾದ ರಕ್ಷಣೆಯಿಲ್ಲದ ಮನೆಗಳ ಮೇಲೆ ಇಸ್ರೇಲ್ 40,000 ಟನ್ ಸ್ಫೋಟಕಗಳನ್ನು ಬೀಳಿಸಿದೆ. ಮತ್ತು ಅಮೆರಿಕ, ಇಸ್ರೇಲ್ ನೊಂದಿಗೆ ಸಂಬಂಧಗಳನ್ನು ವಿಸ್ತರಿಸಲು ಮತ್ತು ಅವರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವುದು ಕುರಿತು ಮರುಪರಿಶೀಲನೆ ಮಾಡಬೇಕು” ಎಂದು ಹಮಾಸ್‌ನ ಹಿರಿಯ ನಾಯಕ ಒಸಾಮಾ ಹಮ್ದಾನ್ ಹೇಳಿದ್ದಾರೆ.

ಈ ಹಿಂದೆ ಇಸ್ರೇಲ್‌ಗೆ ಭೇಟಿ ನೀಡಿದ್ದ ಎಲಾನ್ ಮಸ್ಕ್, ಹಮಾಸ್ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ್ದರು. ಮತ್ತು ಎಲಾನ್ ಮಸ್ಕ್ ಅವರು ದ್ವೇಷ ಹರಡುವುದನ್ನು ತಡೆಯಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದರು.

ವಿದೇಶ

ಬ್ಯಾಂಕಾಕ್: ಜಗತ್ತಿನಾದ್ಯಂತ ಇರುವ ಹಿಂದೂ ಸಂಘಟನೆಗಳನ್ನು ಒಗ್ಗೂಡಿಸಿ ಬಲಪಡಿಸಲು ಹಾಗೂ ಸನಾತನ ಧರ್ಮ ವಿರೋಧಿ ಹೋರಾಟಕ್ಕೆ ತಕ್ಕ ಉತ್ತರ ನೀಡುವುದು ಸೇರಿದಂತೆ ಮಹತ್ವದ ನಿರ್ಣಯಗಳನ್ನು ವಿಶ್ವ ಹಿಂದೂ ಸಮ್ಮೇಳನದಲ್ಲಿ ಅಂಗೀಕರಿಸಲಾಯಿತು.

ಆಗ್ನೇಯ ಏಷ್ಯಾದ ದೇಶವಾದ ಥೈಲ್ಯಾಂಡ್‌ನ ರಾಜಧಾನಿ ಬ್ಯಾಂಕಾಕ್‌ನಲ್ಲಿ, ‘ವಿಶ್ವ ಹಿಂದೂ ಕಾಂಗ್ರೆಸ್ 2023’ ಸಮ್ಮೇಳನವು ಇದೇ 24 ರಂದು ಪ್ರಾರಂಭವಾಗಿ ನಿನ್ನೆ ಕೊನೆಗೊಂಡಿತು. ಥೈಲ್ಯಾಂಡ್‌ ಪ್ರಧಾನಿ ಶ್ರೇತಾ ಥಾವಿಸಿನ್ ಅವರು ಉದ್ಘಾಟಿಸಿದ ಈ ಸಮ್ಮೇಳನದಲ್ಲಿ 61 ದೇಶಗಳ 2,100 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ಇದರಲ್ಲಿ ಆರ್‌ಎಸ್‌ಎಸ್ ಅಧ್ಯಕ್ಷ ಮೋಹನ್ ಭಾಗವತ್, ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಸೇರಿದಂತೆ ಹಲವರು ಭಾಗವಹಿಸಿದ್ದರು. ಅಂತಿಮ ದಿನವಾದ ನಿನ್ನೆ ಸಮ್ಮೇಳನದಲ್ಲಿ ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಲಾಯಿತು.

ಇದರಲ್ಲಿ ಜಗತ್ತಿನಾದ್ಯಂತ ಇರುವ ಹಿಂದೂ ಸಂಘಟನೆಗಳನ್ನು ಕ್ರೋಢೀಕರಿಸಿ ಬಲಪಡಿಸಬೇಕು, ಸನಾತನ ಧರ್ಮದ ವಿರುದ್ಧದ ಅಭಿಪ್ರಾಯಗಳಿಗೆ ತಕ್ಕ ಉತ್ತರ ನೀಡಬೇಕು ಸೇರಿದಂತೆ ನಾನಾ ನಿರ್ಣಯಗಳನ್ನು ಅಂಗೀಕರಿಸಲಾಯಿತು.ಕಾರ್ಯಕ್ರಮದ ಕೊನೆಯಲ್ಲಿ ವಿಶ್ವ ಹಿಂದೂ ಸಮ್ಮೇಳನದ ಸಂಸ್ಥಾಪಕ ಸ್ವಾಮಿ ವಿಜ್ಞಾನಾನಂದ ಅವರು ಮಾತನಾಡಿದರು.

“ಕರೋನಾ ಅವಧಿಯಲ್ಲಿ ಹಿಂದೂಗಳನ್ನು ಸಂಘಟಿಸುವುದರಲ್ಲಿ ಕುಸಿತ ಕಂಡುಬಂದಿತು; ಈಗ ಈ ಚಟುವಟಿಕೆ ಪುನಶ್ಚೇತನಗೊಂಡಿದೆ. ಕ್ರೈಸ್ತ ಸಂಘಟನೆಗಳ ವಶದಲ್ಲಿರುವ ಹಿಂದೂ ದೇವಾಲಯದ ಭೂಮಿಯನ್ನು ವಾಪಸ್ ಪಡೆಯಬೇಕು. ಅದಕ್ಕಾಗಿ ಕಾನೂನು ಕ್ರಮವನ್ನೂ ಕೈಗೊಳ್ಳಬೇಕು” ಎಂದು ಹೇಳಿದರು.

ಕ್ರೈಂ ರಿಪೋರ್ಟ್ಸ್ ವಿದೇಶ

ಮಾಸ್ಕೋ: ರಷ್ಯಾದ 23 ವರ್ಷದ ವೆರಾ ಪೆಖ್ತೆಲೆವಾ (Vera Pekhteleva) ಎಂಬ ಮಹಿಳೆ, ವ್ಲಾಡಿಸ್ಲಾವ್ ಕಾನ್ಯಸ್ (Vladislav Kanyus) ಜೊತೆಗಿನ ಸಂಬಂಧವನ್ನು ಮುರಿದುಕೊಂಡರು. ಅದರಿಂದ ಉಂಟಾದ ಸಮಸ್ಯೆಯಿಂದ ಕಾನ್ಯಸ್ ವೆರಾಳನ್ನು ಬರ್ಬರವಾಗಿ ಹತ್ಯೆ ಮಾಡಿದನು. ಮೂರೂವರೆ ಗಂಟೆಗಳ ಕಾಲ ಅತ್ಯಾಚಾರ ಮತ್ತು ಚಿತ್ರಹಿಂಸೆ ನೀಡಿದ ನಂತರ, ಆಕೆಯನ್ನು 111 ಬಾರಿ ಪದೇ ಪದೇ ಇರಿದು ಕಬ್ಬಿಣದ ಕೇಬಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿನು.

ವೆರಾಳ ಕಿರುಚಾಟ ಕೇಳಿದ ನೆರೆಹೊರೆಯವರು ಪೊಲೀಸರಿಗೆ 7 ಬಾರಿ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಂತರ ಪೊಲೀಸರು ಸ್ಥಳಕ್ಕೆ ತಲುಪಿದಾಗ ವೆರಾ ಶವವಾಗಿ ಪತ್ತೆಯಾಗಿದ್ದರು. ಪೊಲೀಸರು ಕಾನ್ಯಸ್ ನನ್ನು ಬಂಧಿಸಿದರು. ವಿಚಾರಣೆಯ ಕೊನೆಯಲ್ಲಿ, ಕಾನ್ಯಸ್ ಗೆ ಕನಿಷ್ಠ 17 ವರ್ಷಗಳ ಜೈಲು ಶಿಕ್ಷೆಯನ್ನು ನೀಡಲಾಯಿತು.

ಈ ಹಿನ್ನಲೆಯಲ್ಲಿ, ಅಪರಾಧಿ ಕಾನ್ಯಸ್ ಉಕ್ರೇನ್‌ನಲ್ಲಿ ಯುದ್ಧಕ್ಕೆ ಸೇರಲು ನಿರ್ಧರಿಸಿದ ಕಾರಣಕ್ಕೆ ರಷ್ಯಾದ ಅಧ್ಯಕ್ಷ ಪುಟಿನ್ ಅವನನ್ನು ಕ್ಷಮಾದಾನದ ಮೇಲೆ ಬಿಡುಗಡೆ ಮಾಡಿದ್ದಾರೆ. ಒಟ್ಟು 17 ವರ್ಷಗಳ ಶಿಕ್ಷೆಯ ಅವಧಿಯಲ್ಲಿ 1 ವರ್ಷವೂ ಪೂರ್ಣಗೊಳ್ಳದ ಹಿನ್ನಲೆಯಲ್ಲಿ ಆತನನ್ನು ಬಿಡುಗಡೆ ಮಾಡಲಾಗಿದೆ.

ವೆರಾ ಅವರ ತಾಯಿ ಒಕ್ಸಾನಾ, ಮಿಲಿಟರಿ ಸಮವಸ್ತ್ರದಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಶಸ್ತ್ರಸಜ್ಜಿತವಾದ ಕಾನ್ಯಸ್ ಅವರ ಫೋಟೋವನ್ನು ನೋಡಿ ವಿಚಲಿತರಾದರು. ತನ್ನ ಮಗಳ ಕೊಲೆಗಾರನನ್ನು ಕ್ಷಮಿಸಿದ್ದಕ್ಕಾಗಿ ಪುಟಿನ್ ಅವರನ್ನು ದೂಷಿಸಿದರು.

“ಕ್ರೂರವಾಗಿ ಹತ್ಯೆ ಮಾಡಿದವನ ಬಳಿ ರಷ್ಯಾವನ್ನು ರಕ್ಷಿಸಲು ನೀವು ಹೇಗೆ ಆಯುಧವನ್ನು ನೀಡಬಹುದು? ಇದು ನನಗೆ ಹೊಡೆತವಾಗಿದೆ. ನನ್ನ ಮಗು ಅವಳ ಸಮಾಧಿಯಲ್ಲಿ ಕೊಳೆಯುತ್ತಿದ್ದಾಳೆ; ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ, ನನ್ನ ಜೀವನದಲ್ಲಿ ಇನ್ನು ಭರವಸೆ ಇಲ್ಲ.

ನಾನು ಬದುಕುವುದಿಲ್ಲ; ನಾನು ಜೀವಂತವಿದ್ದರೂ ಇಲ್ಲದಂತೆ ಇದ್ದೇನೆ. ಅಂತಹ ಘಟನೆ ನನ್ನನ್ನು ಸಂಪೂರ್ಣವಾಗಿ ಬೆಚ್ಚಿಬೀಳಿಸಿದೆ. ನಾನು ತುಂಬಾ ಬಲಶಾಲಿ; ಆದರೆ ನಮ್ಮ ಸರ್ಕಾರದ ಈ ಅನ್ಯಾಯ ನನ್ನನ್ನು ಜೀವನದ ಕೊನೆಯ ಹಂತಕ್ಕೆ ತಳ್ಳೀದೆ. ಮುಂದೇನು ಮಾಡಬೇಕು ಎಂದು ತಿಳಿಯದ ಸ್ಥಿತಿಯಲ್ಲಿ ಇದ್ದೇನೆ”  ಎಂದು ಅವರು ಅಳಲು ತೋಡಿಕೊಂಡರು.

ಉಕ್ರೇನ್‌ನ ಗಡಿಯಲ್ಲಿರುವ ದಕ್ಷಿಣ ರಷ್ಯಾದಲ್ಲಿರುವ ರೋಸ್ಟೋವ್‌ಗೆ ಕಾನ್ಯಸ್ ನನ್ನು ವರ್ಗಾಯಿಸಲಾಗಿದೆ ಎಂದು ಜೈಲು ಅಧಿಕಾರಿಗಳು ಬುಧವಾರ ದೃಢಪಡಿಸಿದ್ದಾರೆ ಎಂದು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಅಲಿಯೋನಾ ಪೊಪೊವಾ (Alyona Popova) ಹೇಳಿದ್ದಾರೆ. ಮತ್ತು ಅವರು ನವೆಂಬರ್ 3 ರಂದು ಮುಖ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿಯ ಪತ್ರವನ್ನೂ ಹಂಚಿಕೊಂಡಿದ್ದಾರೆ. ಅದರಲ್ಲಿ, ಕಾನ್ಯಸ್ ಗೆ ಕ್ಷಮಾದಾನ ನೀಡಲಾಗಿದೆ ಎಂದು, ಅವರ ಶಿಕ್ಷೆಯನ್ನು ಏಪ್ರಿಲ್ 27 ರಂದು ಅಧ್ಯಕ್ಷರ ಆದೇಶದ ಮೇರೆಗೆ ತೆಗೆದುಹಾಕಲಾಗಿದೆ ಎಂದು ತಿಳಿಸಲಾಗಿತ್ತು.

ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅಧ್ಯಕ್ಷರ ನೀತಿಯನ್ನು ಬೆಂಬಲಿಸಿದ್ದಾರೆ. “ಉಕ್ರೇನ್‌ನಲ್ಲಿ ಯುದ್ಧ ಮಾಡಲು ಕಳುಹಿಸಲಾಗಿರುವ ರಷ್ಯಾದ ಕೈದಿಗಳು ಅವರ ಅಪರಾಧಗಳಿಗಾಗಿ ರಕ್ತದಿಂದ ಪ್ರಾಯಶ್ಚಿತ್ತ ಮಾಡುತ್ತಿದ್ದಾರೆ” ಎಂದು ಪೆಸ್ಕೋವ್ ಹೇಳಿದ್ದಾರೆ.

ವಿದೇಶ

ತೈವಾನ್‌ನ ಜನಸಂಖ್ಯೆಯಲ್ಲಿ ವೃದ್ಧರ ಸಂಖ್ಯೆ ಹೆಚ್ಚಾಗಿರುವುದರಿಂದ ಅಲ್ಲಿ ಯುವ ಕಾರ್ಮಿಕರಿಗೆ ಕೊರತೆ ಇದೆ. ಆದ್ದರಿಂದ ವಿದೇಶದಿಂದ ಕಾರ್ಮಿಕರನ್ನು ನೇಮಿಸಿಕೊಳ್ಳಲು ನಿರ್ಧರಿಸಿರುವ ತೈವಾನ್, ಭಾರತದಿಂದ 1 ಲಕ್ಷ ಜನರನ್ನು ನೇಮಿಸಿಕೊಳ್ಳಲು ಯೋಜಿಸಿದೆ.

ಅಧಿಕೃತ ವರದಿಗಳ ಪ್ರಕಾರ ತೈವಾನ್ ಒಂದು ಲಕ್ಷ ಭಾರತೀಯರಿಗೆ ಉದ್ಯೋಗ ನೀಡಲು ನಿರ್ಧರಿಸಿದೆ. ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ತೈವಾನ್ ಸರ್ಕಾರವು ಡಿಸೆಂಬರ್ ಆರಂಭದ ವೇಳೆಗೆ ಕಾರ್ಖಾನೆಗಳು, ಫಾರ್ಮ್‌ಗಳು ಮತ್ತು ಔಷಧ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕನಿಷ್ಠ 1 ಲಕ್ಷ ಭಾರತೀಯ ಕಾರ್ಮಿಕರನ್ನು ನೇಮಿಸಿಕೊಳ್ಳಲು ಯೋಜಿಸಿದೆ. ಈ ನಿಟ್ಟಿನಲ್ಲಿ ಭಾರತ ಮತ್ತು ತೈವಾನ್ ನಡುವೆ ಡಿಸೆಂಬರ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದು ತಿಳಿಸಲಾಗಿದೆ.

ಭಾರತ ಮತ್ತು ತೈವಾನ್ ನಡುವಿನ ಉದ್ಯೋಗ ಒಪ್ಪಂದ ಇದರ ಅಂತಿಮ ಹಂತದ ಮಾತುಕತೆ ನಡೆಯುತ್ತಿದ್ದು, ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಶಿ ಖಚಿತಪಡಿಸಿದ್ದಾರೆ ಎನ್ನಲಾಗಿದೆ. ತೈವಾನ್‌ನ ಜನಸಂಖ್ಯೆಯಲ್ಲಿ ವೃದ್ಧರ ಸಂಖ್ಯೆ ಹೆಚ್ಚಾಗಿರುವುದರಿಂದ ಅಲ್ಲಿ ಯುವ ಕಾರ್ಮಿಕರಿಗೆ ಕೊರತೆ ಇದೆ.

ತರುವಾಯ, ವಿದೇಶದಿಂದ ಕಾರ್ಮಿಕರನ್ನು ನೇಮಿಸಿಕೊಳ್ಳಲು ನಿರ್ಧರಿಸಿರುವ ತೈವಾನ್, ಭಾರತದಿಂದ 1 ಲಕ್ಷ ಜನರನ್ನು ನೇಮಿಸಿಕೊಳ್ಳಲು ಯೋಜಿಸಿದೆ. ಈ ಕಾರ್ಮಿಕ ಒಪ್ಪಂದವು ತೈವಾನ್ ಮೇಲೆ ಹಕ್ಕು ಪ್ರತಿಪಾದಿಸುವ ಚೀನಾದೊಂದಿಗೆ ಭೌಗೋಳಿಕ ರಾಜಕೀಯ ಉದ್ವಿಗ್ನತೆಯನ್ನು ಹೆಚ್ಚಿಸಬಹುದು ಎಂದು ಆ ವರದಿಯಲ್ಲಿ ತಿಳಿಸಲಾಗಿದೆ.

ವಿದೇಶ

ನವದೆಹಲಿ: ಬೇಹುಗಾರಿಕೆ ಆರೋಪದಲ್ಲಿ ಕತಾರ್‌ನಲ್ಲಿರುವ ಎಂಟು ಮಾಜಿ ಭಾರತೀಯ ನೌಕಾಪಡೆಯ ಸಿಬ್ಬಂದಿಗೆ ಮರಣದಂಡನೆ ವಿಧಿಸಿದ ವಿರುದ್ಧ ಕೇಂದ್ರ ಸರಕಾರ ಮೇಲ್ಮನವಿ ಸಲ್ಲಿಸಿದೆ.

ಎಂಟು ನಿವೃತ್ತ ಭಾರತೀಯ ನೌಕಾಪಡೆಯ ಅಧಿಕಾರಿಗಳು ಪಶ್ಚಿಮ ಏಷ್ಯಾದ ಕತಾರ್‌ನಲ್ಲಿರುವ ತಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಮತ್ತು ಕನ್ಸಲ್ಟೆನ್ಸಿ ಸರ್ವಿಸಸ್ ಎಂಬ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕತಾರ್ ಸಶಸ್ತ್ರ ಪಡೆಗಳಿಗೆ ತರಬೇತಿ ಸೇರಿದಂತೆ ವಿವಿಧ ಸೇವೆಗಳನ್ನು ಈ ಕಂಪನಿ ಒದಗಿಸುತ್ತದೆ. ಕಂಪನಿಯ ವಿವಿಧ ಪ್ರಮುಖ ಯೋಜನೆಗಳಲ್ಲಿ ಅವರು ಭಾಗವಹಿಸಿದ್ದರು.

ಈ ಹಿನ್ನಲೆಯಲ್ಲಿ, ಎಂಟು ಮಾಜಿ ಭಾರತೀಯ ನೌಕಾಪಡೆಯ ಅಧಿಕಾರಿಗಳು, ಇಸ್ರೇಲ್ ಪರವಾಗಿ ಕತಾರ್‌ನಲ್ಲಿ ಬೇಹುಗಾರಿಕೆ ನಡೆಸಿದರು ಎಂಬ ಆರೋಪ ಹುಟ್ಟಿಕೊಂಡಿತು. ಇದರಿಂದ ಈ ಎಂಟು ಮಂದಿಯನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ಬಂಧಿಸಿ ಜೈಲಿನಲ್ಲಿಡಲಾಗಿತ್ತು. ಅವರ ಜಾಮೀನು ಅರ್ಜಿಯನ್ನು ಹಲವು ಬಾರಿ ತಿರಸ್ಕರಿಸಲಾಗಿತ್ತು. ಈ ಪ್ರಕರಣದಲ್ಲಿ ಕತಾರ್ ನ್ಯಾಯಾಲಯವು ಎಂಟು ಮಾಜಿ ಭಾರತೀಯ ನೌಕಾಪಡೆ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದೆ.

ಈ ಪ್ರಕರಣದಲ್ಲಿ 8 ಭಾರತೀಯರಿಗೆ ವಿಧಿಸಲಾದ ಮರಣದಂಡನೆ ವಿರುದ್ಧ, ಕತಾರ್ ನ್ಯಾಯಾಲಯದಲ್ಲಿ ಕೇಂದ್ರ ಸರ್ಕಾರದ ಪರವಾಗಿ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಶಿ ಹೇಳಿದ್ದಾರೆ.

ಮತ್ತು ನಾವು ಎಂಟು ಜನರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ. ಸಚಿವ ಜೈಶಂಕರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ಎಲ್ಲರಿಗೂ ಗೊತ್ತೇ ಇದೆ. ಎಲ್ಲಾ ರೀತಿಯ ಕಾನೂನು ನೆರವು ಮತ್ತು ರಾಜತಾಂತ್ರಿಕ ನೆರವು ನೀಡಲಾಗುವುದು. ತೀರ್ಪಿನ ವಿವರಗಳನ್ನು ಕಾನೂನು ತಜ್ಞರಿಗೆ ನೀಡಲಾಗಿದೆ. ಕಳೆದ ಮಂಗಳವಾರ, ಎಲ್ಲಾ ಎಂಟು ಮಂದಿಗೆ ರಾಜತಾಂತ್ರಿಕ ನೆರವು ನೀಡಲಾಯಿತು ಎಂದು ಹೇಳಿದರು.

ವಿದೇಶ

ಮಾಸ್ಕೋ: ಬಲ್ಗೇರಿಯಾ ದೇಶಕ್ಕೆ ಸೇರಿದವರು ಬಾಬಾ ವಂಗಾ. ಉತ್ತರ ಮ್ಯಾಸಿಡೋನಿಯಾದಲ್ಲಿ 1911ರಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ತೀವ್ರ ಚಂಡಮಾರುತದಲ್ಲಿ ಸಿಕ್ಕಿಬಿದ್ದ ಅವರು ತನ್ನ ದೃಷ್ಟಿಯನ್ನು ಕಳೆದುಕೊಂಡಿದ್ದರು. ಅದರಿಂದ ಅವರು ಭವಿಷ್ಯವನ್ನು ಊಹಿಸುವ ಶಕ್ತಿಯನ್ನು ಪಡೆದುಕೊಂಡಿದ್ದರು ಎಂದು ಹೇಳಲಾಗುತ್ತದೆ. ಅವರು 1996ರಲ್ಲಿ ನಿಧನರಾದರು.

ಪ್ರಪಂಚದ ವಿದ್ಯಮಾನಗಳ ಬಗ್ಗೆ ಅವರು ಭವಿಷ್ಯ ನುಡಿದ ಶೇಕಡಾ 85ರಷ್ಟು ನಿಜವಾಗಿದೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಚೆರ್ನೋಬಿಲ್ ಪರಮಾಣು ರಿಯಾಕ್ಟರ್ ಅಪಘಾತ, ಇಂಗ್ಲೆಂಡ್‌ನ ರಾಜಕುಮಾರಿ ಡಯಾನಾ ಸಾವು, ಸೋವಿಯತ್ ಒಕ್ಕೂಟದ ವಿಸರ್ಜನೆ ಮತ್ತು ಅಮೆರಿಕ ಅವಳಿ ಗೋಪುರಗಳ ಮೇಲಿನ ದಾಳಿಗಳು ನಿಜವಾಗಿವೆ.

ಈ ಹಿನ್ನಲೆಯಲ್ಲಿ, ಮುಂಬರುವ 2024ರಲ್ಲಿ ಅವರು ಏಳು ಭವಿಷ್ಯವಾಣಿಗಳನ್ನು ನುಡಿದಿದ್ದಾರೆ ಎಂದು ಸುದ್ದಿ ಸಂಸ್ಥೆ ಡೈಲಿ ಸ್ಟಾರ್ ವರದಿ ಮಾಡಿದೆ. ಅವುಗಳನ್ನು ಈ ಕೆಳಗಿನಂತೆ ನೋಡೋಣ.

2024ರಲ್ಲಿ ಭೂಕಂಪ, ಅಗ್ನಿ ಮತ್ತು ಪ್ರವಾಹದಂತಹ ಅನೇಕ ನೈಸರ್ಗಿಕ ವಿಕೋಪಗಳು ಸಂಭವಿಸುತ್ತವೆ. ಕ್ಯಾನ್ಸರ್‌ಗೆ ಮದ್ದು ಕಂಡು ಹಿಡಿಯಲಾಗುವುದು. ಕ್ವಾಂಟಮ್ ಕಂಪ್ಯೂಟರ್‌ಗಳ ಅಭಿವೃದ್ಧಿಯಲ್ಲಿ ಗಮನಾರ್ಹ ಪ್ರಗತಿಗಳು ಸಂಭವಿಸುತ್ತವೆ. ರಷ್ಯಾದ ಅಧ್ಯಕ್ಷ ಪುಟಿನ್ ತನ್ನ ದೇಶದವನೊಬ್ಬನಿಂದ ಹತ್ಯೆಯಾಗುತ್ತಾರೆ.

ಯುರೋಪಿನಲ್ಲಿ ಭಯೋತ್ಪಾದಕರ ದಾಳಿ ಹೆಚ್ಚಾಗಿರುತ್ತದೆ. ಮತ್ತು ಒಂದು “ಪ್ರಮುಖ ದೇಶ” ಮುಂದಿನ ವರ್ಷ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಗಳು ಮತ್ತು ದಾಳಿಗಳನ್ನು ನಡೆಸುತ್ತದೆ. ದೊಡ್ಡ ಆರ್ಥಿಕ ಬಿಕ್ಕಟ್ಟು ಉಂಟಾಗಲಿದೆ. ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ನಿಗೂಢ ಕಾಯಿಲೆಯಿಂದ ಬಳಲಲಿದ್ದಾರೆ.

ಸೈಬರ್ ದಾಳಿಗಳು ಹೆಚ್ಚಾಗುತ್ತವೆ. ಹ್ಯಾಕರ್‌ಗಳು ಹೆಚ್ಚು ಅತ್ಯಾಧುನಿಕರಾಗುತ್ತಾರೆ ಮತ್ತು ಪವರ್ ಗ್ರಿಡ್‌ಗಳು ಹಾಗೂ ನೀರಿನ ಸಂಸ್ಕರಣಾ ಘಟಕಗಳಂತಹ ನಿರ್ಣಾಯಕ ಮೂಲಸೌಕರ್ಯಗಳನ್ನು ಗುರಿಯಾಗಿಸುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಪ್ರತಿ ವರ್ಷವೂ ಸಾಮಾಜಿಕ ಮಾಧ್ಯಮದಲ್ಲಿ ಮುಖ್ಯಾಂಶಗಳಾಗಿ ಹರಿದಾಡುತ್ತವೆ ಎಂಬುದು ಗಮನಾರ್ಹ.