ವಿದೇಶ Archives » Page 7 of 12 » Dynamic Leader
October 23, 2024
Home Archive by category ವಿದೇಶ (Page 7)

ವಿದೇಶ

ವಿದೇಶ

ಹಮಾಸ್‌ನ ಹಿರಿಯ ಅಧಿಕಾರಿ ಅಲಿ ಬರಾಕಾ ಮಾತನಾಡಿ, ಸೋವಿಯತ್ ರಷ್ಯಾದಂತೆ ಅಮೆರಿಕವೂ ಮುಂದೊಂದು ದಿನ ಕುಸಿಯಲಿದೆ. ಇಸ್ರೇಲ್-ಹಮಾಸ್ ಯುದ್ಧದಲ್ಲಿ ಅಮೆರಿಕ ಇಸ್ರೇಲ್ ಅನ್ನು ಬೆಂಬಲಿಸುತ್ತಿದೆ. ಇದರಿಂದ ಪ್ಯಾಲೆಸ್ತೀನ್ ನಲ್ಲಿ ಇಸ್ರೇಲ್ ಸೇನೆ ಕ್ರೂರ ದಾಳಿ ನಡೆಸುತ್ತಿದೆ.

ಈ ಹಿನ್ನಲೆಯಲ್ಲಿ, ಹಮಾಸ್ ಸಂಘಟನೆಯ ಹಿರಿಯ ಅಧಿಕಾರಿ ಅಲಿ ಬರಾಕಾ ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ, ‘ಸೋವಿಯತ್ ರಷ್ಯಾದಂತೆ ಅಮೆರಿಕ ಒಡೆಯುತ್ತದೆ. ಅಮೆರಿಕದ ಶತ್ರು ರಾಷ್ಟ್ರಗಳೆಲ್ಲ ಒಂದಾಗಲು ಸಮಾಲೋಚನೆ ನಡೆಸಲಾಗುತ್ತಿದೆ. ಅವರೆಲ್ಲರೂ ಒಟ್ಟಾಗಿ ಯುದ್ಧಕ್ಕೆ ಮುಂದಾದರೆ ಅಮೆರಿಕಕ್ಕೆ ಭಾರಿ ನಷ್ಟವಾಗುತ್ತದೆ.

ಅಮೇರಿಕ ಪ್ರಬಲ ರಾಷ್ಟ್ರವಾಗಿ ಇರುವುದಿಲ್ಲ. ಅಮೆರಿಕದ ಮೇಲೆ ದಾಳಿ ಮಾಡಿದ್ದಕ್ಕಾಗಿ ನಾನು ಉತ್ತರ ಕೊರಿಯಾವನ್ನು ಶ್ಲಾಘಿಸುತ್ತೇನೆ. ಅಮೆರಿಕದ ಮೇಲೆ ದಾಳಿ ಮಾಡುವ ವಿಶ್ವದ ಏಕೈಕ ವ್ಯಕ್ತಿ ಎಂದರೆ ಅದು ಉತ್ತರ ಕೊರಿಯಾದ ನಾಯಕ ಮಾತ್ರ. ಅಮೆರಿಕ ಮೇಲೆ ದಾಳಿ ಮಾಡುವ ಸಾಮರ್ಥ್ಯವನ್ನು ಉತ್ತರ ಕೊರಿಯಾ ಹೊಂದಿರುವುದರಿಂದ, ಉತ್ತರ ಕೊರಿಯಾ ಕೂಡ ನಮ್ಮ ಮೈತ್ರಿಗೆ ಸೇರಬಹುದು.

ಹಮಾಸ್ ನಿಯೋಗ ಇತ್ತೀಚೆಗೆ ರಷ್ಯಾದ ಮಾಸ್ಕೋಗೆ ಭೇಟಿ ನೀಡಿತ್ತು; ಅದೇ ರೀತಿ ಚೀನಾಕ್ಕೆ ಹೋಗುತ್ತದೆ. ಇರಾನ್‌ಗೆ ಅಮೆರಿಕದ ಮೇಲೆ ದಾಳಿ ಮಾಡುವ ಸಾಮರ್ಥ್ಯ ಇಲ್ಲ. ಈ ಯುದ್ಧದಲ್ಲಿ ಇರಾನ್ ಮಧ್ಯಪ್ರವೇಶಿಸಿದರೆ, ಅದು ಜಿಯೋನಿಸ್ಟ್ ಸಂಘಟನೆ ಮತ್ತು ಅಮೆರಿಕದ ನೆಲೆಗಳ ಮೇಲೆ ದಾಳಿ ಮಾಡುತ್ತದೆ. ಆದರೆ ಇರಾನ್ ಬಳಿ ಸಾಕಷ್ಟು ಶಸ್ತ್ರಾಸ್ತ್ರಗಳಿಲ್ಲ.’ ಎಂದು ಹೇಳಿದರು.

ವಿದೇಶ

ವಾಷಿಂಗ್ಟನ್: ಕಳೆದೊಂದು ವರ್ಷದಲ್ಲಿ ಅಕ್ರಮವಾಗಿ ಅಮೆರಿಕ ಪ್ರವೇಶಿಸಲು ಯತ್ನಿಸಿದ 97,000 ಭಾರತೀಯರಲ್ಲಿ ಹೆಚ್ಚಿನವರು ಗುಜರಾತ್ ಮತ್ತು ಪಂಜಾಬ್ ಮೂಲದವರು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಅಮೆರಿಕ ಪೌರತ್ವ ಅಧಿಕಾರಿಗಳ ಪ್ರಕಾರ, ಇತ್ತೀಚಿನ ದಿನಗಳಲ್ಲಿ ವಿವಿಧ ಗಡಿಗಳ ಮೂಲಕ ಅಕ್ರಮವಾಗಿ ಅಮೆರಿಕ ಪ್ರವೇಶಿಸುವ ಭಾರತೀಯರ ಸಂಖ್ಯೆ ಹಲವಾರು ಪಟ್ಟು ಹೆಚ್ಚಾಗಿದೆ. ಅಮೆರಿಕ ಕಸ್ಟಮ್ಸ್ ಮತ್ತು ಗಡಿ ಬಧ್ರತಾ ಪ್ರಾಧಿಕಾರದ ಮಾಹಿತಿಯ ಪ್ರಕಾರ, ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸಿದ 96,917 ಜನರನ್ನು ಬಂಧಿಸಲಾಗಿದೆ.

ಇವರಲ್ಲಿ 30,010 ಮಂದಿ ಕೆನಡಾದ ಮೂಲಕ ಮತ್ತು 41,770 ಮಂದಿ ಮೆಕ್ಸಿಕೋ ಮೂಲಕ ಗಡಿ ದಾಟಲು ಪ್ರಯತ್ನಿಸಿ ಅಮೆರಿಕ ಅಧಿಕಾರಿಗಳ ಬಳಿ ಸಿಕ್ಕಿಬಿದ್ದಿದ್ದಾರೆ. ಉಳಿದವರು, ಅಮೆರಿಕ ಗಡಿಯನ್ನು ಪ್ರವೇಶಿಸಿದ ನಂತರ ಅಧಿಕಾರಿಗಳು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. 2019-20ರಲ್ಲಿ ಅಮೆರಿಕ ಪ್ರವೇಶಿಸಲು ಯತ್ನಿಸುತ್ತಿದ್ದ 19,883 ಭಾರತೀಯರನ್ನು ಬಂಧಿಸಲಾಗಿದ್ದು, 2023ರ ವೇಳೆಗೆ ಈ ಸಂಖ್ಯೆ 5 ಪಟ್ಟು ಹೆಚ್ಚಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

ಅಕ್ರಮವಾಗಿ ಅಮೆರಿಕ ಪ್ರವೇಶಿಸಲು ಯತ್ನಿಸಿದವರಲ್ಲಿ ಹೆಚ್ಚಿನವರು ಗುಜರಾತ್ ಮತ್ತು ಪಂಜಾಬ್ ಮೂಲದವರು ಎಂದು ವರದಿಯಾಗಿದೆ. ಅದೇ ಸಮಯದಲ್ಲಿ, ಗಡಿ ದಾಟಿ ಸಿಕ್ಕಿಬಿದ್ದವರು ಕೇವಲ ಒಂದು ಸಣ್ಣ ಪ್ರಮಾಣ ಮಾತ್ರ. ಒಬ್ಬ ವ್ಯಕ್ತಿ ಸಿಕ್ಕಿಬಿದ್ದರೆ, ಕನಿಷ್ಠ 10 ಜನರು ಅಕ್ರಮವಾಗಿ ಅಮೆರಿಕ ಪ್ರವೇಶಿಸುತ್ತಾರೆ ಎಂದು ಗುಜರಾತ್‌ನ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.

ವಿದೇಶ

ಬೀಜಿಂಗ್: ಚೀನಾದ ಬೈದು (Baidu) ಮತ್ತು ಅಲಿಬಾಬಾ (Alibaba) ಆನ್‌ಲೈನ್ ನಕ್ಷೆಗಳಿಂದ ಇಸ್ರೇಲ್ ಹೆಸರನ್ನು ತೆಗೆದುಹಾಕಲಾಗಿದೆ. ಪ್ಯಾಲೆಸ್ತೀನ್ ಗೆ ಬೆಂಬಲ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಇಸ್ರೇಲ್ ಮತ್ತು ಹಮಾಸ್ ನಡುವೆ 20 ದಿನಗಳಿಗೂ ಹೆಚ್ಚು ಕಾಲ ಸಂಘರ್ಷ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಚೀನಾದ ಪ್ರಮುಖ ತಂತ್ರಜ್ಞಾನ ಕಂಪನಿಗಳಾದ ಅಲಿಬಾಬಾ ಮತ್ತು ಬೈದು ತಮ್ಮ ಆನ್‌ಲೈನ್ ನಕ್ಷೆಗಳಿಂದ ಇಸ್ರೇಲ್ ಹೆಸರನ್ನು ತೆಗೆದುಹಾಕಿವೆ. ಚೀನಾದ ಪ್ಯಾಲೆಸ್ತೀನ್ ಪರ ನಿಲುವನ್ನು ಬೆಂಬಲಿಸುವ ಸಲುವಾಗಿ ಚೀನಾದ ಕಂಪನಿಗಳು ಈ ಕ್ರಮವನ್ನು ತೆಗೆದುಕೊಂಡಿರಬಹುದು ಎಂದು ಹೇಳಲಾಗುತ್ತದೆ.

ಆದಾಗ್ಯೂ, ಬೈದುವಿನ ಚೈನೀಸ್ ಭಾಷೆಯ ಆನ್‌ಲೈನ್ ನಕ್ಷೆಯಲ್ಲಿ ಅಂತರಾಷ್ಟ್ರೀಯವಾಗಿ ಸೂಚಿಸಲಾದ ಅಳತೆಗಳ ಪ್ರಕಾರ ಇಸ್ರೇಲ್‌ನ ಗಡಿಗಳನ್ನು ಗುರುತಿಸಲಾಗಿದ್ದರೂ ಆ ಪ್ರದೇಶದಲ್ಲಿ ಇಸ್ರೇಲ್ ಹೆಸರನ್ನು ಉಲ್ಲೇಖಿಸಲಾಗಿಲ್ಲ. ಅಲಿಬಾಬಾ ಮತ್ತು ಬೈದು ಕಂಪನಿಗಳು ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ.

ಇಸ್ರೇಲ್-ಹಮಾಸ್ ಯುದ್ಧದಲ್ಲಿ ಯಾರನ್ನೂ ಬೆಂಬಲಿಸದ ಚೀನಾ ಪ್ಯಾಲೆಸ್ತೀನ್ ಗೆ ಪ್ರತ್ಯೇಕ ರಾಜ್ಯ ನೀಡುವುದೇ ಪರಿಹಾರ ಎಂದು ಹೇಳಿದ್ದು ಗಮನಾರ್ಹ.

ವಿದೇಶ

ದುಬೈ: ಶೇಕ್ ರಶೀದ್ ಆಡಿಟೋರಿಯಂನಲ್ಲಿ ಯುಎಇ ಒಕ್ಕಲಿಗರ ಸಂಘ ಇಂದು ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಉತ್ಸವವನ್ನು ಶ್ರೀ.ಆದಿಚುಂಚನಗಿರಿ ಮಹಸಂಸ್ಥಾನದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಿ ಮಾತನಾಡಿದರು.

“ಹೊರನಾಡಿನ ಕನ್ನಡಿಗರು ತಾಯ್ನಾಡಿನ ಮೇಲೆ ಇರಿಸಿರುವ ಪ್ರೀತಿ, ಅಭಿಮಾನ ಅವರ್ಣನೀಯ. ನಾಡಪ್ರಭುಗಳ ಸ್ಫೂರ್ತಿ, ಅದರ್ಶದೊಂದಿಗೆ ಬದುಕು ಕಟ್ಟಿಕೊಂಡು ಸಮಾಜಮುಖಿಗಳಾಗಿ ಹೆಜ್ಜೆ ಹಾಕುತ್ತಿರುವ ಅವರೆಲ್ಲರೂ ಅಭಿನಂದನೀಯರು. ಅವರ ಜತೆಗೂಡಿ ನಾಡಪ್ರಭುಗಳನ್ನು ಸ್ಮರಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ” ಎಂದು ಹೇಳಿದರು.

ಮಾಜಿ ಸಚಿವರಾದ ಸಿ.ಪಿ.ಯೋಗೇಶ್ವರ್, ಶಾಸಕರಾದ ಸಮೃದ್ಧಿ ಮಂಜುನಾಥ್, ಸ್ವರೂಪ್ ಪ್ರಕಾಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಯುಎಇ ಒಕ್ಕಲಿಗರ ಸಂಘದ ಅಧ್ಯಕ್ಷೆ ರಶ್ಮಿ ನಂದಕಿಶೋರ್, ಉಪಾಧ್ಯಕ್ಷ ಹರೀಶ್ ಕೋಡಿ ಸೇರಿದಂತೆ ಸಂಘದ ಎಲ್ಲಾ ಪದಾಧಿಕಾರಿಗಳು, ಕನ್ನಡ ಬಂಧುಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ವಿದೇಶ

ಡಿ.ಸಿ.ಪ್ರಕಾಶ್ ಸಂಪಾದಕರು

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ನಿಕಟವಾಗಿದ್ದ ರಕ್ಷಣಾ ಸಚಿವ ಕ್ವಿನ್ ಗ್ಯಾಂಗ್ ಅನ್ನು ಕೆಲವು ತಿಂಗಳ ಹಿಂದೆ ಇದ್ದಕ್ಕಿದ್ದಂತೆ ಕಣ್ಮರೆಯಾದ ನಂತರ, ಅವರನ್ನು ಸಚಿವ ಸ್ಥಾನದಿಂದ ಪದಚ್ಯುತಿಗೊಳಿಸಿದ್ದಾರೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್. ಈ ಹಿಂದೆ ವಿದೇಶಾಂಗ ಸಚಿವರೂ ಇದೇ ರೀತಿಯಲ್ಲಿ ಕಣ್ಮರೆಯಾಗಿದ್ದು ಅವರನ್ನೂ ಸಹ ಹುದ್ದೆಯಿಂದ ತೆಗೆದುಹಾಕಲಾಗಿದೆ. ಚೀನಾದಲ್ಲಿ ಸಚಿವರುಗಳು ಇದ್ದಕ್ಕಿದ್ದಂತೆ ನಾಪತ್ತೆಯಾಗುವುದು ಮತ್ತು ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುತ್ತಿರುವುದು ನಿರಂತರವಾಗಿ ನಡೆಯುತ್ತಿದೆ. ಇದು ಚೀನಾದ ಜನರಲ್ಲಿ ಭಾರೀ ಸಂಚಲನ ಮೂಡಿಸಿದೆ.

ಮೊದಲು ಕಾಣೆಯಾದ ವಿದೇಶಾಂಗ ಮಂತ್ರಿ: ಚೀನಾದ ವಿದೇಶಾಂಗ ಸಚಿವರಾಗಿದ್ದ ಕ್ವಿನ್ ಗ್ಯಾಂಗ್ (Qin Gang) ಜೂನ್ ಅಂತ್ಯದಿಂದ ನಾಪತ್ತೆಯಾಗಿದ್ದಾರೆ. ಕಳೆದ ಜೂನ್ 25 ರಂದು ರಷ್ಯಾ, ಶ್ರೀಲಂಕಾ ಮತ್ತು ವಿಯೆಟ್ನಾಂ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಕ್ವಿನ್ ಗ್ಯಾಂಗ್ ನಂತರ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿಲ್ಲ. ಅಂತರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಪ್ರಕಟಿಸಿದ ನಂತರವೇ ಹೊರಜಗತ್ತಿಗೆ ಇಂಥದ್ದೊಂದು ಘಟನೆ ನಡೆದಿರುವುದು ತಿಳಿದು ಬಂದಿತು. ಒಂದು ತಿಂಗಳು ಕಳೆದಿದ್ದರೂ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್ ಬಗ್ಗೆ ಇನ್ನೂ ಯಾವುದೇ ಸುದ್ದಿ ಇಲ್ಲ. ಈ ಹಿನ್ನಲೆಯಲ್ಲಿ, ಕ್ವಿನ್ ಗ್ಯಾಂಗ್ ಅವರನ್ನು ಸಚಿವ ಸ್ಥಾನದಿಂದ ತೆಗೆದು ವಾಂಗ್ ಯಿ ಅವರನ್ನು ಚೀನಾದ ಹೊಸ ವಿದೇಶಾಂಗ ಸಚಿವರನ್ನಾಗಿ ನೇಮಿಸಲಾಯಿತು.

ಟಿವಿ ಶೋ ನಿರೂಪಕಿ ಫೂ ಕ್ಸಿಯಾಟಿಯನ್ (Fu Xiaotian) ಎಂಬ ಮಹಿಳೆಯೊಂದಿಗೆ ಮಾಜಿ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್

ಏನು ಕಾರಣ: ಆರಂಭದಲ್ಲಿ, ಅನಾರೋಗ್ಯದ ಕಾರಣದಿಂದ ಕ್ವಿನ್ ಗ್ಯಾಂಗ್ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ ಎಂದು ವರದಿಗಳಾದವು. ನಂತರ ಸಚಿವ ಸ್ಥಾನದಿಂದ ವಜಾಗೊಳಿಸಿದ ಮೇಲೆ ರಹಸ್ಯ ಬಯಲಾಯಿತು. ಅಂದರೆ, ಟಿವಿ ಶೋ ನಿರೂಪಕಿ ಫೂ ಕ್ಸಿಯಾಟಿಯನ್ (Fu Xiaotian) ಎಂಬ ಮಹಿಳೆಯೊಂದಿಗೆ ಕ್ವಿನ್ ಗ್ಯಾಂಗ್ ರಹಸ್ಯ ಸಂಬಂಧದಲ್ಲಿದ್ದು, ಚೀನಾ ಸರ್ಕಾರದ ಪ್ರಮುಖ ಹುದ್ದೆಯಲ್ಲಿರುವವರು ವಿವಾಹೇತರ ಸಂಬಂಧ ಹೊಂದಬಾರದು ಎಂಬ ಅಧಿಕೃತ ಆದೇಶವಾಗಿರುವ ಕಾರಣ ಕ್ವಿನ್ ಗ್ಯಾಂಗನ್ನು ನಾಪತ್ತೆಮಾಡಿರಬಹುದು ಎಂಬ ವರದಿಗಳೂ ಸೋರಿಕೆಯಾಗುತ್ತಿವೆ.

ಪ್ರಸ್ತುತ ನಾಪತ್ತೆಯಾಗಿರುವ ರಕ್ಷಣಾ ಸಚಿವರು: ಚೀನಾದ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್ ಅವರಂತೆಯೇ ರಕ್ಷಣಾ ಸಚಿವ ಶಾಂಗ್‌ಫು ಕೂಡ ಕಣ್ಮರೆಯಾಗಿದ್ದಾರೆ. ಕೊನೆಯ ಬಾರಿಗೆ ಕಳೆದ ಆಗಸ್ಟ್ ಅಂತ್ಯದಲ್ಲಿ ಚೀನಾ-ಆಫ್ರಿಕಾ ಶಾಂತಿ ಮತ್ತು ಭದ್ರತಾ ವೇದಿಕೆಯ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿದ್ದರು. ನಂತರ ಅವರು ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗದ ಕಾರಣ, ಲಿ ಶಾಂಗ್‌ಫು ಕೂಡ ನಾಪತ್ತೆಯಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿತು. ಈ ಹಿನ್ನಲೆಯಲ್ಲಿ ಶಾಂಗ್‌ಫು ಅವರನ್ನು ಚೀನಾದ ರಕ್ಷಣಾ ಸಚಿವ ಸ್ಥಾನದಿಂದ ತೆಗೆದುಹಾಕಲಾಗಿದೆ ಎಂದು ಚೀನಾ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ. ಔಪಚಾರಿಕವಾಗಿ, ಶಾಂಗ್‌ಫು ಅವರಿಗೆ ಸಂಬಂಧಿಸಿದ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಿ, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಒಪ್ಪಿಗೆಯಿಂದ ತೆಗೆದುಹಾಕಲಾಗಿದೆ.

ಚೀನಾ ರಕ್ಷಣಾ ಮಾಜಿ ಸಚಿವ ಲಿ ಶಾಂಗ್‌ಫು

ಏನು ಕಾರಣ: ಲಿ ಶಾಂಗ್‌ಫು ಚೀನಾದ ರಕ್ಷಣಾ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ, ಚೀನಾ-ಅಮೆರಿಕಾ ಮಿಲಿಟರಿ ವಿನಿಮಯದಲ್ಲಿ ಸಮಸ್ಯೆ ಉಂಟಾಗಿದೆ ಎನ್ನಲಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಚೀನಾ ರಷ್ಯಾದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಿದ ನಂತರ, ಅಮೆರಿಕಾ ಶಾಂಗ್‌ಫು ಅವರನ್ನು ತಮ್ಮ ದೇಶಕ್ಕೆ ಬರುವುದನ್ನು ನಿಷೇಧಿಸಿತು. ಅದೇ ರೀತಿ ಅವರು ಸಚಿವರಾಗಿದ್ದಾಗ ಚೀನಾ ತೈವಾನ್‌ಗೆ ಶಸ್ತ್ರಾಸ್ತ್ರ ಪೂರೈಸಿದ್ದು ಕೂಡ ಅಮೆರಿಕಾವನ್ನು ಕೆರಳಿಸಿತ್ತು. ಏತನ್ಮಧ್ಯೆ, ಅಮೆರಿಕಾ ರಕ್ಷಣಾ ಇಲಾಖೆಯ ಪ್ರತಿನಿಧಿಗಳು ಪ್ರಾದೇಶಿಕ ಭದ್ರತಾ ಸಮಾಲೋಚನೆಗಾಗಿ ಮುಂದಿನ ತಿಂಗಳು ಚೀನಾಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ, ಅಮೆರಿಕಾದಿಂದ ನಿಷೇಧಕ್ಕೊಳಗಾಗಿರುವ ಲಿ ಶಾಂಗ್‌ಫು ರಕ್ಷಣಾ ಸಚಿವರಾಗಿರುವುದು ಸೂಕ್ತವಲ್ಲ ಎಂಬ ಕಾರಣಕ್ಕೆ ಅವರನ್ನು ಹುದ್ದೆಯಿಂದ ಕೆಳಗಿಳಿಸಿರಬಹುದು ಎನ್ನಲಾಗುತ್ತಿದೆ.

ಪದಚ್ಯುತಿ ಮಾಡಿದೆಲ್ಲವೂ ಸರಿಯೇ… ಆದರೆ ಕಾಣೆಯಾದವರ ಗತಿಯೇನು?’ ಇದನ್ನು ಚೀನಾ ಸರ್ಕಾರ ಮರೆಮಾಚುತ್ತಿರುವುದೇ ಇಲ್ಲಿ ನಿಗೂಢ!

ವಿದೇಶ

ಬೀಜಿಂಗ್: ಇಸ್ರೇಲ್ ಮತ್ತು ಹಮಾಸ್ ನಡುವಿನ ಸಮರದಲ್ಲಿ ಮೌನವಾಗಿದ್ದ ಚೀನಾ ಇದೀಗ ತನ್ನ ನಿಲುವನ್ನು ಬದಲಿಸಿದ್ದು, “ಇಸ್ರೇಲ್ ಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕು ಇದೆ” ಎಂದು ಹೇಳಿದೆ.

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವೂ 18ನೇ ದಿನವೂ ಮುಂದುವರಿದಿದೆ. ಈ ದಾಳಿಯ ಪ್ರಾರಂಭದಿಂದಲೂ, ಅಮೆರಿಕಾ, ಬ್ರಿಟನ್ ಮತ್ತು ಫ್ರಾನ್ಸ್ ಸೇರಿದಂತೆ ದೇಶಗಳು ಇಸ್ರೇಲನ್ನು ಬೆಂಬಲಿಸುತ್ತಾ ಹಮಾಸ್ ಹೋರಾಟಗಾರರನ್ನು ಖಂಡಿಸುತ್ತಾ ಬಂದಿವೆ. ಆದರೆ ಈ ವಿಚಾರದಲ್ಲಿ ಚೀನಾ ಯಾರನ್ನೂ ಬೆಂಬಲಿಸದೆ ದೂರವೇ ಉಳಿದಿತ್ತು.

ಯುದ್ಧವನ್ನು ತಕ್ಷಣವೇ ಕೊನೆಗೊಳಿಸಬೇಕೆಂದು ಕರೆ ನೀಡಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಪ್ಯಾಲೆಸ್ತೀನ್ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಲು ಅರಬ್ ರಾಷ್ಟ್ರಗಳು ಮತ್ತು ಈಜಿಪ್ಟ್ ಜೊತೆ ಸೇರಿ ಕೆಲಸ ಮಾಡಲು ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ ಅಮಾಯಕರನ್ನು ಕೊಂದ ಹಮಾಸ್ ಭಯೋತ್ಪಾದಕರನ್ನು ಖಂಡಿಸಬೇಕು ಎಂದು ಅಮೆರಿಕಾ ಸಂಸದರು ಚೀನಾವನ್ನು ಒತ್ತಾಯಿಸುತ್ತಾ ಬಂದರು. ಇಸ್ರೇಲ್ ಕೂಡ ತಮ್ಮ ಅಸಮಾಧಾನ ವ್ಯಕ್ತಪಡಿಸಿತ್ತು.

ಇದರ ಬಗ್ಗೆ ಮಾತನಾಡಿರುವ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ, “ಪ್ರತಿಯೊಂದು ರಾಷ್ಟ್ರಕ್ಕೂ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕಿದೆ. ಅದೇ ಸಮಯದಲ್ಲಿ, ನಾವು ಅಂತರರಾಷ್ಟ್ರೀಯ ಕಾನೂನುಗಳನ್ನು ಗೌರವಿಸಬೇಕು ಮತ್ತು ಮುಗ್ಧ ಜನರನ್ನು ರಕ್ಷಿಸಬೇಕು. ಯುದ್ಧದಿಂದಾಗಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಅಲ್ಲಿ ಪರಿಸ್ಥಿತಿ ಕೆಟ್ಟಿರುವುದು ಬೇಸರವಾಗಿದೆ. ಅಮಾಯಕರು ಸಂಕಷ್ಟಕ್ಕೆ ಸಿಲುಕಿರುವುದನ್ನು ನಾನು ಖಂಡಿಸುತ್ತೇನೆ ಮತ್ತು ಅಂತರಾಷ್ಟ್ರೀಯ ಕಾನೂನಿನ ಉಲ್ಲಂಘನೆಯ ವಿರುದ್ಧವೂ ಪ್ರತಿಭಟಿಸುತ್ತೇನೆ” ಎಂದು ಹೇಳಿದ್ದಾರೆ.

ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಇದೇ 26 ರಿಂದ 28 ರವರೆಗೆ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಆ ಸಂದರ್ಭದಲ್ಲಿ ದೇಶದ ನಾಯಕರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಅಮೆರಿಕಾ ಮತ್ತು ಐರೋಪ್ಯ ಒಕ್ಕೂಟದಿಂದ ಭಯೋತ್ಪಾದಕ ಸಂಘಟನೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಹಮಾಸ್ ಸಂಘಟನೆಯನ್ನು ಚೀನಾ ಖಂಡಿಸಿರುವುದು ಗನಾರ್ಹ.

ವಿದೇಶ

ವ್ಯಾಟಿಕನ್: ಇಸ್ರೇಲ್ ಮತ್ತು ಹಮಾಸ್ ಭಯೋತ್ಪಾದಕರ ನಡುವಿನ ಸಮರ ಮುಂದುವರಿದಿರುವಾಗಲೇ ಪೋಪ್ ಫ್ರಾನ್ಸಿಸ್ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಇಸ್ರೇಲ್ ಸೇನೆ ಮತ್ತು ಹಮಾಸ್ ಭಯೋತ್ಪಾದಕರ ನಡುವೆ ಕಳೆದ ಅಕ್ಟೋಬರ್ 7 ರಿಂದ ದಾಳಿ ಮುಂದುವರಿಯುತ್ತಿದೆ. ಇದರಲ್ಲಿ ಇಸ್ರೇಲೀಯರು 1,400 ಮಂದಿ ಮತ್ತು ಪ್ಯಾಲೆಸ್ತೀನಿಯರು 4,469 ಮಂದಿ ಸಾವನ್ನಪ್ಪಿದ್ದಾರೆ. ಅಮೆರಿಕ ಯುದ್ಧವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದೆ.

ಈ ಹಿನ್ನಲೆಯಲ್ಲಿ, ವ್ಯಾಟಿಕನ್ ಕ್ಯಾಥೋಲಿಕ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಜಗತ್ತಿನ ವಿವಿಧ ಸಂಘರ್ಷಗಳನ್ನು ಮತ್ತು ಶಾಂತಿಯ ಮಾರ್ಗಗಳನ್ನು ಗುರುತಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವನ್ನು ಕೊನೆಗಾಣಿಸಲು ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ವಿದೇಶ

ಇಸ್ರೇಲ್ ಸೇನೆಯು ಗಾಜಾದ ಮೇಲೆ ವೈಟ್ ಪಾಸ್ಪರಸ್ (ಬಿಳಿ ರಂಜಕ) ಬಾಂಬ್‌ಗಳನ್ನು ಬೀಳಿಸಿದೆ ಎಂದು ಆರೋಪಿಸಲಾಗಿದೆ.

ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವಿನ ಯುದ್ಧ ತೀವ್ರಗೊಂಡಿದೆ. ಹಮಾಸ್, ಮೊದಲು ಇಸ್ರೇಲ್ ಮೇಲೆ ಹಠಾತ್ ದಾಳಿ ನಡೆಸಿ ಅನೇಕ ಸಾವುನೋವುಗಳಿಗೆ ಕಾರಣವಾದಾಗ, ಇಸ್ರೇಲ್ ಉಗ್ರವಾಗಿ ಪ್ರತಿದಾಳಿ ನಡೆಸುತ್ತಿದೆ. ಹಮಾಸ್ ವಶಪಡಿಸಿಕೊಂಡ ಗಾಜಾ ಗಡಿಯಲ್ಲಿರುವ ಪ್ರದೇಶಗಳ ಮೇಲೆ ಇಸ್ರೇಲ್ ಮತ್ತೆ ಹಿಡಿತ ಸಾಧಿಸಿದೆ. ಜೊತೆಗೆ ಗಾಜಾದ ಮೇಲೆ ವೈಮಾನಿಕ ದಾಳಿ ನಡೆಸುವುದನ್ನು ಮುಂದುವರೆಸಿದೆ. ಈ ದಾಳಿಯಲ್ಲಿ ಹಲವು ಮಂದಿ ಸಾವನ್ನಪ್ಪಿದ್ದಾರೆ.

ನಾಲ್ಕನೇ ದಿನವೂ ಯುದ್ಧ ಮುಂದುವರಿದಿದ್ದು, ಇಸ್ರೇಲ್ ಅಂತಾರಾಷ್ಟ್ರೀಯವಾಗಿ ನಿಷೇಧಿತ ವೈಟ್ ಪಾಸ್ಪರಸ್ ಬಾಂಬ್‌ಗಳನ್ನು ಬಳಸುತ್ತಿದೆ ಎಂದು ಆರೋಪಿಸಲಾಗಿದೆ. ಉತ್ತರ ಗಾಜಾದಲ್ಲಿ ಇಸ್ರೇಲಿ ಸೇನೆಯು ಹೆಚ್ಚು ಜನನಿಬಿಡ ಪ್ರದೇಶಗಳ ಮೇಲೆ ವೈಟ್ ಪಾಸ್ಪರಸ್ ಬಾಂಬ್‌ಗಳನ್ನು ಬೀಳಿಸುತ್ತಿದೆ ಎಂದು ಹೇಳಿಕೊಳ್ಳುವ ವೀಡಿಯೊ ಮತ್ತು ಫೋಟೋಗಳನ್ನು ಪ್ಯಾಲೆಸ್ಟೀನಿಯರು ಬಿಡುಗಡೆ ಮಾಡಿದ್ದಾರೆ. ಇದರಿಂದ ಜನರು ಭಯಭೀತರಾಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಬೆಂಕಿಯ ಮಳೆ ಬೀಳುವಂತಿದೆ. ಆದರೆ ಈ ವೀಡಿಯೋ ವಾಸ್ತವವಾಗಿ ಗಾಜಾದಲ್ಲಿ ರೆಕಾರ್ಡ್ ಆಗಿದೆಯೇ? ಇತ್ತೀಚಿನ ವೀಡಿಯೊನಾ? ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ.

ವೈಟ್ ಪಾಸ್ಪರಸ್ ಶೀಘ್ರದಲ್ಲೇ ಹೊತ್ತಿ ಉರಿಯುವ ರಾಸಾಯನಿಕವಾಗಿದೆ. ಗಾಳಿಗೆ ಒಡ್ಡಿಕೊಂಡಾಗ ಅದು ತ್ವರಿತವಾಗಿ ಮತ್ತು ಪ್ರಕಾಶಮಾನವಾಗಿ ಉರಿಯುತ್ತದೆ. ಅಮೆರಿಕಾ ಸೇರಿದಂತೆ ವಿವಿಧ ದೇಶಗಳ ಸೇನೆಗಳು, ಶತ್ರುಗಳ ಗುರಿಗಳನ್ನು ನಾಶಪಡಿಸಲು ಮತ್ತು ಹಾನಿ ಮಾಡಲು ಬೆಂಕಿಯ ಆಯುಧವಾಗಿ ವೈಟ್ ಪಾಸ್ಪರಸ್ ಬಾಂಬುಗಳನ್ನು ಬಳಸುತ್ತವೆ.

ಈ ರಾಸಾಯನಿಕವು ಹೊತ್ತಿಕೊಂಡಾಗ ಹೆಚ್ಚಿನ ಶಾಖವನ್ನು (ಸುಮಾರು 815 ° C) ಉತ್ಪಾದಿಸುತ್ತದೆ ಮತ್ತು ದಟ್ಟವಾದ ಬಿಳಿ ಹೊಗೆಯನ್ನು ಹೊರಸೂಸುತ್ತದೆ. ಉದ್ವಿಗ್ನ ಪ್ರದೇಶಗಳಲ್ಲಿ ಶತ್ರುವನ್ನು ಅಸ್ಥಿರಗೊಳಿಸಲು ಹೊಗೆ ವಲಯವನ್ನು ರಚಿಸಲು ಸೇನೆಗಳು ಈ ರೀತಿಯ ರಾಸಾಯನಿಕವನ್ನು ಬಳಸುತ್ತವೆ.

ಒಮ್ಮೆ ವೈಟ್ ಪಾಸ್ಪರಸ್ ಹೊತ್ತಿಕೊಂಡರೆ ಅದನ್ನು ಆರಿಸುವುದು ಬಹಳ ಕಷ್ಟ. ಹೊತ್ತಿ ಉರಿಯುವ ಈ ರಾಸಾಯನಿಕವು ಮಾನವನ ಚರ್ಮ ಮತ್ತು ಬಟ್ಟೆ ಸೇರಿದಂತೆ ಹಲವು ಪ್ರದೇಶಗಳಿಗೆ ಅಂಟಿಕೊಂಡರೆ ಬಹಳ ತೊಂದರೆಯಾಗುತ್ತದೆ. ಅಂಗಾಂಶ ಮತ್ತು ಮೂಳೆಗೆ ಆಳವಾಗಿ ತೂರಿಕೊಳ್ಳುತ್ತದೆ ಮತ್ತು ತೀವ್ರವಾದ ಸುಡುವಿಕೆಗೆ ಕಾರಣವಾಗುತ್ತದೆ.

ನಾಗರಿಕರ ಮೇಲೆ ವೈಟ್ ಪಾಸ್ಪರಸ್ ಬಾಂಬ್‌ಗಳನ್ನು ಬಳಸುವುದನ್ನು ಯುದ್ಧ ಅಪರಾಧ ಎಂದು ಪರಿಗಣಿಸಲಾಗುತ್ತದೆ. ರಷ್ಯಾ ಇತ್ತೀಚೆಗೆ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಈ ರೀತಿಯ ಬಾಂಬ್ ಅನ್ನು ಬಳಸಿದೆ ಎಂದು ಆರೋಪಿಸಲಾಗಿದೆ ಎಂಬುದು ಗಮನಾರ್ಹ.

ವಿದೇಶ

ನ್ಯೂಯಾರ್ಕ್: ಭಾರತ-ರಷ್ಯಾ ಸ್ನೇಹ ಸ್ಥಿರವಾಗಿದೆ. ರಷ್ಯಾದ ಗಮನ ಏಷ್ಯಾ ರಾಷ್ಟ್ರಗಳತ್ತ ಹೊರಳುತ್ತಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ.

ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ನಡೆದ ವಿದೇಶಿ ಸಂಬಂಧಗಳ ಕೌನ್ಸಿಲ್ ಸಭೆಯಲ್ಲಿ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಮಾತನಾಡಿದರು: “ಕೆನಡಾ ಆರೋಪದಲ್ಲಿ ಅದು ಭಾರತ ಸರ್ಕಾರದ ನೀತಿಯಲ್ಲ. ಖಲಿಸ್ತಾನಿ ಪ್ರತ್ಯೇಕತಾವಾದಿ ನಿಜ್ಜರ್ ಹತ್ಯೆ ಪ್ರಕರಣದ ಪ್ರಮುಖ ಮಾಹಿತಿಯನ್ನು ಕೆನಡಾ ಹಂಚಿಕೊಂಡರೆ ತನಿಖೆ ನಡೆಸಲು ಸಿದ್ಧ.

ಕೆನಡಾ ಸರ್ಕಾರದೊಂದಿಗೆ ಕೆಲವು ವರ್ಷಗಳಿಂದ ನಿರಂತರ ಸಮಸ್ಯೆ ಇದೆ. ಅಂತೆಯೇ, ಭಯೋತ್ಪಾದನೆ ಮತ್ತು ಉಗ್ರವಾದಕ್ಕೆ ಸಂಬಂಧಿಸಿದ ನಿರಂತರ ಸಮಸ್ಯೆ ಇದೆ. ಕೆನಡಾದಲ್ಲಿರುವ ಭಾರತೀಯ ರಾಯಭಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕಲಾಗುತ್ತಿದೆ.

ಭಾರತದಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದವರು ಕೆನಡಾದಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತ-ರಷ್ಯಾ ಸ್ನೇಹ ಸ್ಥಿರವಾಗಿದೆ. ರಷ್ಯಾದ ಗಮನ ಏಷ್ಯಾದ ದೇಶಗಳತ್ತ ತಿರುಗುತ್ತಿದೆ. ಉಕ್ರೇನ್‌ನಲ್ಲಿನ ಯುದ್ಧದಿಂದ ಪಾಶ್ಚಿಮಾತ್ಯ ದೇಶಗಳೊಂದಿಗೆ ರಷ್ಯಾದ ಸಂಬಂಧವು ಹದಗೆಟ್ಟಿದೆ ಎಂದು ಹೇಳಿದ್ದಾರೆ.  

ವಿದೇಶ

ಅಫ್ಘಾನಿಸ್ತಾನದ ತಾಲಿಬಾನ್‌ಗಳು, ಕ್ರಿಶ್ಚಿಯನ್ ಧರ್ಮವನ್ನು ಬೋಧಿಸಿದ ಆರೋಪದ ಮೇಲೆ ಎನ್‌ಜಿಒ ಗುಂಪಿನಿಂದ ಒಬ್ಬ ಅಮೇರಿಕನ್ ಸೇರಿದಂತೆ 18 ಸಿಬ್ಬಂದಿಯನ್ನು ಬಂಧಿಸಿದ್ದಾರೆ.

ತಾಲಿಬಾನ್ ಅಧಿಕಾರಿಗಳು ಈ ತಿಂಗಳು ಕೇಂದ್ರ ಘೋರ್ ಪ್ರಾಂತ್ಯದಲ್ಲಿರುವ ತನ್ನ ಕಚೇರಿಯ ಮೇಲೆ ಎರಡು ಬಾರಿ ದಾಳಿ ನಡೆಸಿ ಸಿಬ್ಬಂದಿಯನ್ನು ಕರೆದೊಯ್ದಿದ್ದಾರೆ ಎಂದು ಅಫ್ಘಾನ್ ಮೂಲದ ಇಂಟರ್ನ್ಯಾಷನಲ್ ಅಸಿಸ್ಟೆನ್ಸ್ ಮಿಷನ್ (ಐಎಎಂ) ಶುಕ್ರವಾರ ದೃಢಪಡಿಸಿದೆ. ಐಎಎಂ ಸ್ವಿಟ್ಜರ್ಲೆಂಡ್‌ನಲ್ಲಿ ನೋಂದಾಯಿಸಲಾದ ಎನ್‌ಜಿಒ ಆಗಿದ್ದು , ಬಂಧಿತರಲ್ಲಿ ಒಬ್ಬ ವಿದೇಶಿಯರೂ ಇದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಆ ವ್ಯಕ್ತಿಯ ರಾಷ್ಟ್ರೀಯತೆಯನ್ನು ಬಹಿರಂಗಪಡಿಸಲಿಲ್ಲ.

“ಈ ಘಟನೆಗಳಿಗೆ ಕಾರಣವಾದ ಸಂದರ್ಭಗಳ ಬಗ್ಗೆ ನಮಗೆ ತಿಳಿದಿಲ್ಲ ಮತ್ತು ನಮ್ಮ ಸಿಬ್ಬಂದಿ ಸದಸ್ಯರ ಬಂಧನಕ್ಕೆ ಕಾರಣವನ್ನು ಸೂಚಿಸಲಾಗಿಲ್ಲ” ಎಂದು IAM ಹೇಳಿಕೆ ತಿಳಿಸಿದೆ. “ನಮ್ಮ ಸಹೋದ್ಯೋಗಿಗಳ ಯೋಗಕ್ಷೇಮ ಮತ್ತು ಸುರಕ್ಷತೆಯು ನಮಗೆ ಅತ್ಯುನ್ನತವಾಗಿದೆ ಮತ್ತು ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅವರ ಶೀಘ್ರ ಬಿಡುಗಡೆಯನ್ನು ಪಡೆಯಲು ನಾವು ಎಲ್ಲವನ್ನೂ ಮಾಡುತ್ತಿದ್ದೇವೆ” ಎಂದು ಅದು ಹೇಳಿದೆ. ಬಂಧಿತರನ್ನು ಅಫ್ಘಾನ್ ರಾಜಧಾನಿ ಕಾಬೂಲ್‌ಗೆ ವರ್ಗಾಯಿಸಲಾಗಿದೆ.

ಬಂಧಿತರಲ್ಲಿ ಅಮೆರಿಕನ್ ಸೇರಿದಂತೆ ಹಲವು ಮಹಿಳೆಯರು ಇದ್ದಾರೆ ಎಂದು ಪ್ರಾಂತೀಯ ಸರ್ಕಾರದ ವಕ್ತಾರ ಅಬ್ದುಲ್ ವಾಹಿದ್ ಹಮಾಸ್ ಹೇಳಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಫ್ಘಾನಿಸ್ತಾನದಲ್ಲಿ “ಕ್ರಿಶ್ಚಿಯಾನಿಟಿ ಪ್ರಚಾರ ಮಾಡುವುದು ಮತ್ತು ಹರಡುವುದು” ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

IAM ತನ್ನ ವೆಬ್‌ಸೈಟ್‌ನಲ್ಲಿ, ಲಾಭೋದ್ದೇಶವಿಲ್ಲದ ನಮ್ಮ ಗುಂಪು ಅಫ್ಘಾನಿಸ್ತಾನದಲ್ಲಿ ಜೀವನವನ್ನು ಸುಧಾರಿಸಲು ಮತ್ತು ಸ್ಥಳೀಯ ಆರೋಗ್ಯ, ಸಮುದಾಯ ಅಭಿವೃದ್ಧಿ ಮತ್ತು ಶಿಕ್ಷಣ ಸಾಮರ್ಥ್ಯವನ್ನು ನಿರ್ಮಿಸಲು ಮಾತ್ರ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳುತ್ತದೆ. “ನಾವು ಅಫ್ಘಾನಿಸ್ತಾನದ ಜನರು ಮತ್ತು ಅಂತರರಾಷ್ಟ್ರೀಯ ಕ್ರಿಶ್ಚಿಯನ್ ಸ್ವಯಂಸೇವಕರ ನಡುವಿನ ಪಾಲುದಾರಿಕೆಯಾಗಿದ್ದೇವೆ ಮತ್ತು ನಾವು 1966 ರಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ.

ಎರಡು ವರ್ಷಗಳ ಹಿಂದೆ ಕಾಬೂಲ್‌ನಲ್ಲಿ ಅಮೆರಿಕಾ ಬೆಂಬಲಿತ ಅಫ್ಘಾನ್ ಸರ್ಕಾರದಿಂದ ಅಧಿಕಾರವನ್ನು ವಶಪಡಿಸಿಕೊಂಡ ನಂತರ ತಾಲಿಬಾನ್ ಇಸ್ಲಾಮಿಕ್ ಕಾನೂನು ಅಥವಾ ಶರಿಯಾದ ಕಠಿಣ ವ್ಯಾಖ್ಯಾನವನ್ನು ವಿಧಿಸಿದೆ. ಅವರು ಹದಿಹರೆಯದ ಹುಡುಗಿಯರನ್ನು ರಾಷ್ಟ್ರವ್ಯಾಪಿ ಆರನೇ ತರಗತಿಯನ್ನು ಮೀರಿದ ಶಾಲೆಗಳಿಂದ ನಿರ್ಬಂಧಿಸಿದ್ದಾರೆ ಮತ್ತು ಹೆಚ್ಚಿನ ಮಹಿಳಾ ಸರ್ಕಾರಿ ಉದ್ಯೋಗಿಗಳನ್ನು ಮನೆಯಲ್ಲೇ ಇರುವಂತೆ ಆದೇಶಿಸಿದ್ದಾರೆ.

ಬಡ ಅಫ್ಘಾನಿಸ್ತಾನದಲ್ಲಿ, ಎನ್‌ಜಿಒ ಸಂಸ್ಥೆಗಳಲ್ಲಿ ಕೆಲಸ ಮಾಡುವುದನ್ನು ತಾಲಿಬಾನ್ ನಿಷೇಧಿಸಿದೆ. ಮಹಿಳೆಯರಿಗೆ ಸಾರ್ವಜನಿಕ ಉದ್ಯಾನವನಗಳು, ಜಿಮ್‌ಗಳು ಅಥವಾ ಸ್ನಾನಗೃಹಗಳಿಗೆ ಭೇಟಿ ನೀಡಲು ಅನುಮತಿಸಲಾಗುವುದಿಲ್ಲ ಮತ್ತು ದೀರ್ಘ ರಸ್ತೆ ಪ್ರವಾಸಗಳಿಗೆ ನಿಕಟ ಪುರುಷ ಸಂಬಂಧಿ ಅವರೊಂದಿಗೆ ಹೋಗಬಹುದು.” ಎಂದು ಹೇಳಿಕೊಂಡಿದೆ.