ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಪ್ರತಿಮೆ Archives » Dynamic Leader
October 21, 2024
Home Posts tagged ಪ್ರತಿಮೆ
ರಾಜ್ಯ

ಬೆಂಗಳೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಪುತ್ಥಳಿಗೆ ಕಲಬುರಗಿ ಕೋಟನೂರ್ ಪ್ರದೇಶದಲ್ಲಿ ಅವಮಾನ ಮಾಡಿದ ಕೃತ್ಯ ಖಂಡನಾರ್ಹ. ಅವಮಾನಿಸಿ ಪಟಾಕಿ ಸಿಡಿಸಿ ವಿಕೃತಿ ಮೆರೆದ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕದ ಅಧ್ಯಕ್ಷರಾದ ಅಡ್ವಕೇಟ್ ತಾಹೇರ್ ಹುಸೇನ್ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ಸಂವಿಧಾನ ಶಿಲ್ಪಿಗೆ ಅವಮಾನ ಮಾಡುವುದು ಸಂವಿಧಾನಕ್ಕೆ ಅಪಚಾರಗೈದಂತೆ. ಇತ್ತೀಚೆಗೆ ಇಂತಹಾ ಕಿಡಿಗೇಡಿ ಕೃತ್ಯಗಳು ವ್ಯಾಪಕವಾಗುತ್ತಿದೆ. ಆಡಳಿತದ ಬಗ್ಗೆ ಮತ್ತೆ ಕಾನೂನಿನ ಬಗ್ಗೆ ಭಯವಿಲ್ಲದಿರುವುದೇ ಇಂತಹ ದುಷ್ಕೃತ್ಯ ಮರುಕಳಿಸಲು ಕಾರಣವಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಮುಂದುವರಿಯಬೇಕು.

ದಲಿತರ ಪರ ಹಕ್ಕುಗಳಿಗಾಗಿ ಹೋರಾಡಿ, ದೇಶಕ್ಕೆ ಸಂವಿಧಾನವನ್ನು ರಚಿಸಿದ ಓರ್ವ ಮಹಾನ್ ವ್ಯಕ್ತಿಯನ್ನು ಅವಮಾನಿಸಿ ಅದೇನು ಸಾಧಿಸಿತ್ತಾರೆ?  ಜನರ ಭಾವನೆ ಕೆರಳಿಸಿ ಸಮಾಜದ ಶಾಂತಿ, ನೆಮ್ಮದಿ ಕೆಡಿಸುವುದೇ ಇಂತಹವರ ಗುರಿಯಾಗಿದೆ. ಅಪರಾಧಿಗಳನ್ನು ಬಂಧಿಸಿ ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳಲು ಸರಕಾರ ಹಿಂಜರಿಯಬಾರದು.

ಇಂತಹ ಸಮಾಜಘಾತುಕ ಶಕ್ತಿಗಳನ್ನು ಕೂಡಲೇ ಜಿಲ್ಲೆಯಿಂದ ಗಡಿಪಾರು ಮಾಡಬೇಕಾಗಿದೆ. ಇಂತಹ ಕುಕೃತ್ಯಗಳು ಕಡಿಮೆಯಾಗಳು ಸರ್ಕಾರ ಎಲ್ಲಾ ಆಯಮಗಳಲ್ಲೂ ಚಿಂತಿಸಬೇಕು ಎಂದು ತಾಹೇರ್ ಹುಸೇನ್ ಆಗ್ರಹಿಸಿದ್ದಾರೆ.

ದೇಶ

ತಂಜಾವೂರು: ಅಷ್ಟ ಖನಿಜಗಳಿಂದ ಮಾಡಲಾದ 28 ಅಡಿ ಎತ್ತರದ ನಟರಾಜನ ಪ್ರತಿಮೆ ದೆಹಲಿಯ ಜಿ-20 ಸಮ್ಮೇಳ ಸಭಾಂಗಣದ ಮುಂಭಾಗದಲ್ಲಿ ಪ್ರತಿಷ್ಠಾಪಿಸಲು ತಂಜಾವೂರಿನ ಸ್ವಾಮಿಮಲೈನಿಂದ ಹೊರಟಿದೆ.

ಜಿ20 ಶೃಂಗಸಭೆ ಮುಂದಿನ ತಿಂಗಳು 9 ಮತ್ತು 10 ರಂದು ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯಲಿದೆ. ಸಮ್ಮೇಳನದ ಸ್ಥಳದ ಮುಂಭಾಗದಲ್ಲಿ ಸ್ಥಾಪಿಸಲು, ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ, ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ವತಿಯಿಂದ, ಚೋಳರ ಕಾಲದ ನಟರಾಜನ ಪ್ರತಿಮೆಯನ್ನು ವಿನ್ಯಾಸಗೊಳಿಸಲು ನಿರ್ಧರಿಸಲಾಯಿತು.

ಇದನ್ನೂ ಓದಿ: ಆಂಧ್ರಪ್ರದೇಶದಲ್ಲಿ ಹುಂಡಿಯಲ್ಲಿ ರೂ.100 ಕೋಟಿ ಚೆಕ್ ಪಾವತಿಸಿದ ಭಕ್ತ; ಬ್ಯಾಂಕ್ ಮೊರೆ ಹೋದ ದೇವಸ್ಥಾನದ ಆಡಳಿತಾಧಿಕಾರಿಗಳಿಗೆ ನಿರಾಸೆ!

ಅದರ ನಂತರ, ತಂಜಾವೂರು ಜಿಲ್ಲೆಯ ಸ್ವಾಮಿಮಲೈನ ‘ಎಸ್.ದೇವಸೇನಾಪತಿ ಸ್ಥಪತಿ ಸನ್ಸ್’ ಕಂಪನಿಯ ಸ್ಥಪತಿಗಳಾದ ರಾಧಾಕೃಷ್ಣನ್, ಶ್ರೀಕಂಠನ್, ಸ್ವಾಮಿನಾಥನ್ ಮೂವರೂ ಸೇರಿ, ಪ್ರತಿಮೆಯನ್ನು ವಿನ್ಯಾಸಗೊಳಿಸುವ ಕೆಲಸ ಪ್ರಾರಂಭಿಸಿದರು. ಪ್ರತಿಮೆ ಶೇ.75ರಷ್ಟು ಸಂಪೂರ್ಣವಾದ ಸ್ಥಿತಿಯಲ್ಲಿ, ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಮುಖ್ಯಸ್ಥ ಆರ್ಥಲ್ ಪಾಂಡ್ಯಾ, ಕೇಂದ್ರ ಅಧಿಕಾರಿಗಳಾದ ಜವಾಹರ್ ಪ್ರಸಾದ್ ಮತ್ತು ಮನೋಗನ್ ದೀಕ್ಷಿತ್ ಪ್ರತಿಮೆಯನ್ನು ಪಡೆದುಕೊಂಡರು.

ನಂತರ ಪ್ರತಿಮೆಯನ್ನು ಪೊಕ್ಲೈನ್ ಯಂತ್ರದ ಮೂಲಕ ಲಾರಿಯಲ್ಲಿ ಇರಿಸಿ ಕಳುಹಿಸಿ ಕೊಡಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದ ಭಕ್ತಾದಿಗಳು ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಕಳುಹಿಸಿಕೊಟ್ಟರು. ನಟರಾಜನ ಪ್ರತಿಮೆ ಉಳುಂದೂರುಪೇಟೆ, ಸೇಲಂ, ಬೆಂಗಳೂರು, ನಾಗ್ಪುರ, ಆಗ್ರಾ ಮೂಲಕ ದೆಹಲಿಗೆ ದಿನಾಂಕ 28 ರಂದು ತಲುಪಲಿದ್ದು, ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದೂ ಹೇಳಲಾಗುತ್ತಿದೆ.

ಇದನ್ನೂ ಓದಿ: ಡಾ.ಸಿದ್ದಲಿಂಗಯ್ಯ ಸ್ಮರಣೆ ಕಾರ್ಯಕ್ರಮ: ಬರೀ ಅಂಬಾನಿ-ಅದಾನಿ ಜೇಬಿನಲ್ಲಿ ಹಣ ಇದ್ದರೆ ಬಡವರ, ಮಧ್ಯಮ ವರ್ಗದವರ ಉದ್ಧಾರ ಸಾಧ್ಯವಿಲ್ಲ! – ಸಿದ್ದರಾಮಯ್ಯ

ಇದರ ಬಗ್ಗೆ ಮಾತನಾಡಿದ ಸ್ಥಪತಿಗಳು, “ತಾಮ್ರ, ಹಿತ್ತಾಳೆ, ಚಿನ್ನ, ಬೆಳ್ಳಿ, ಕಬ್ಬಿಣ, ಪಾದರಸ ಮುಂತಾದ ಅಷ್ಟ (ಎಂಟು) ಖನಿಜಗಳಿಂದ ವಿಗ್ರಹ ನಿರ್ಮಿಸಲಾಗಿದ್ದು, ವಿಶೇಷತೆ ಪಡೆದುಕೊಂಡಿರುವ ಈ ವಿಗ್ರಹವು 28 ಅಡಿ ಎತ್ತರ, 21 ಅಡಿ ಅಗಲ ಮತ್ತು ಸುಮಾರು 25 ಸಾವಿರ ಕೆಜಿ ತೂಕದ 51 ಜ್ವಾಲೆಗಳು ತಿರುವಾಚಿಯಲ್ಲಿ ನೆಲೆಗೊಂಡಿವೆ. ರೂ.10 ಕೋಟಿ ವೆಚ್ಚದಲ್ಲಿ ವಿನ್ಯಾಸ ಮಾಡಲಾಗಿದೆ” ಎಂದು ಹೇಳಿದ್ದಾರೆ.

ರಾಜಕೀಯ

“ದಿವಂಗತ ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಅವರಿಗೆ ದ್ರಾವಿಡ ಮಾಡಲ್ ಸರ್ಕಾರದ ಪರವಾಗಿ ಗೌರವಾರ್ಥ ಘೋಷಣೆಯೊಂದನ್ನು ಮಾಡುತ್ತಿದ್ದೇನೆ” ಎಂ.ಕೆ.ಸ್ಟಾಲಿನ್ 

ಚೆನ್ನೈ: ಸಾಮಾಜಿಕ ನ್ಯಾಯ ದೃಷ್ಟಿ ಮತ್ತು ಸಾಮಾಜಿಕ ನ್ಯಾಯ ಪಯಣದಲ್ಲಿ ಈ ಸರ್ಕಾರ ಯಾವುದೇ ಆಮಿಷ, ರಾಜಿ ಇಲ್ಲದೇ ಕೆಲಸ ಮಾಡುತ್ತಿರುವುದಕ್ಕೆ ಸಾಮಾಜಿಕ ನ್ಯಾಯ ರಕ್ಷಕ ವಿ.ಪಿ.ಸಿಂಗ್ ನೀಡಿದ ಉತ್ಸಾಹವೇ ಕಾರಣ. ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಅವರ ಸ್ಮರಣಾರ್ಥ ಚೆನ್ನೈನಲ್ಲಿ ಪೂರ್ಣ ಪ್ರಮಾಣದ ಪ್ರತಿಮೆಯನ್ನು ಸ್ಥಾಪಿಸಲಾಗುವುದು” ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ವಿಧಾನಸಭೆಯಲ್ಲಿ ನಿಯಮ ಸಂಖ್ಯೆ 110ರ ಅಡಿಯಲ್ಲಿ ಇಂದು ಘೋಷಿಸಿದ್ದಾರೆ.

ಸ್ಟಾಲಿನ್ ಅವರು ಇಂದು ವಿಧಾನಸಭೆಯಲ್ಲಿ ಇದನ್ನು ಉದ್ದೇಶಿಸಿ ಮಾತನಾಡುವಾಗ, “ವಿಶ್ವನಾಥ್ ಪ್ರತಾಪ್ ಸಿಂಗ್ ಅವರು ಉತ್ತರ ಪ್ರದೇಶದ ಅಲಹಾಬಾದ್ ಜಿಲ್ಲೆಯಲ್ಲಿ ದೊಡ್ಡ ಜಮೀನ್ದಾರರಾದ ರಾಜ ದಯಾ ಭಗವತಿ ಪ್ರತಾಪ್ ಸಿಂಗ್ ಅವರಿಗೆ ಜನಿಸಿದರು. ಐಷಾರಾಮಿ ಜೀವನ ಲಭಿಸಿದ್ದರೂ ಅದಕ್ಕೆ ಅಂಟಿಕೊಳ್ಳದೇ ಕಾಲೇಜು ದಿನಗಳಲ್ಲಿ ಗಾಂಧಿ ಚಳವಳಿಗೆ ಸೇರಿಕೊಂಡರು; ಭೂದಾನ ಚಳುವಳಿಯಲ್ಲಿ ಭಾಗವಹಿಸಿದರು. ಅವರು ತಮ್ಮ ಜಮೀನುಗಳನ್ನೇ ಭೂದಾನ ಮಾಡಿದರು.

1969ರಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ನಿಂತು ಗೆದ್ದರು. ಉತ್ತರ ಪ್ರದೇಶದ ಮುಖ್ಯಮಂತ್ರಿ; ಕೇಂದ್ರ ವಾಣಿಜ್ಯ ಸಚಿವ; ವಿದೇಶಾಂಗ ವ್ಯವಹಾರಗಳ ಸಚಿವ; ಹಣಕಾಸು ಮತ್ತು ರಕ್ಷಣಾ ಸಚಿವ ಮುಂತಾದ ಉನ್ನತ ಸ್ಥಾನಗಳನ್ನು ಅಲಂಕರಿಸಿದರು. ಅವರು ನ್ಯಾಷನಲ್ ಫ್ರಂಟ್ ರಚಿಸಿ 1989ರಲ್ಲಿ ಭಾರತದ ಪ್ರಧಾನ ಮಂತ್ರಿಯಾದರು. ಸನ್ಮಾನ್ಯ ವಿ.ಪಿ.ಸಿಂಗ್ ಅವರು ಕೇವಲ ಹನ್ನೊಂದು ತಿಂಗಳು ಪ್ರಧಾನಿಯಾಗಿದ್ದರೂ ಅವರ ಸಾಧನೆ ಅಪಾರ. ಅದಕ್ಕಾಗಿಯೇ ನಾವು ಈ ವೇದಿಕೆಯಲ್ಲಿ ನಿಂತು ಅವರನ್ನು ಹೊಗಳುತ್ತಿದ್ದೇವೆ.

ಭಾರತದ ಸಂವಿಧಾನವನ್ನು ರಚಿಸಿದಾಗ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳಿಗೆ ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ ಪ್ರತ್ಯೇಕ ಮೀಸಲಾತಿಯನ್ನು ನೀಡಲಾಯಿತು. ಆದರೆ ಹಿಂದುಳಿದ ವರ್ಗಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲಿಲ್ಲ. ಇದನ್ನು ಒದಗಿಸಲಿಕ್ಕಾಗಿ ರಚಿಸಲಾದ ಎರಡನೇ ಹಿಂದುಳಿದ ವರ್ಗಗಳ ಆಯೋಗವೇ ಬಿ.ಪಿ. ಮಂಡಲ್ ನೇತೃತ್ವದ ಆಯೋಗ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಹಿಂದುಳಿದ ವರ್ಗಗಳಿಗೆ ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ 27% ಮೀಸಲಾತಿಯನ್ನು ನೀಡಬೇಕೆಂದು ಶಿಫಾರಸು ಮಾಡಿದ ಬಿ.ಪಿ.ಮಂಡಲ್ ವರದಿಯನ್ನು     ಯಥಾವತ್ತಾಗಿ ಜಾರಿಗೊಳಿಸಿದವರು ಸಾಮಾಜಿಕ ನ್ಯಾಯದ ಹರಿಕಾರ ವಿ.ಪಿ.ಸಿಂಗ್.

ಅವರು ಹಿಂದುಳಿದ ಸಮುದಾಯಕ್ಕೆ ಸೇರಿದವರಲ್ಲ; ಬಡ ಕುಟುಂಬದವರೂ ಅಲ್ಲ; ಆದರೆ, ಅದನ್ನು ಮಾಡಿದ್ದು ವಿ.ಪಿ.ಸಿಂಗ್. ಮಂಡಲ್ ಆಯೋಗದ ಶಿಫಾರಸನ್ನು ಜಾರಿಗೆ ತರುವುದಾಗಿ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿ ವಿ.ಪಿ.ಸಿಂಗ್ ಘೋಷಿಸಿದಾಗ, ‘ಮುಂದುವರಿದ ಜಾತಿಗೆ ಸೇರಿದವರು ಇದನ್ನು ಮಾಡಲು ಸಾಧ್ಯವಿಲ್ಲ’ ಎಂದು ಸಚಿವರೊಬ್ಬರು ಹೇಳಿದಾಗ, ‘ಇಗೋ, ಈಗಲೇ ದಿನಾಂಕವನ್ನು ಪ್ರಕಟಿಸುತ್ತೇನೆ’ ಎಂದು ಹೇಳಿದ ಗಾಂಭೀರ್ಯತೆಯ ಒಡೆಯ ವಿ.ಪಿ.ಸಿಂಗ್. ಅದುವೇ ಅವರ ಸ್ಥಾನಕ್ಕೆ ಬಿಕ್ಕಟ್ಟಾಯಿತು.   

‘ಕೆಲವೊಮ್ಮೆ ಬದುಕಿಗಿಂತ ಸಾವನ್ನು ಆರಿಸಿಕೊಳ್ಳುವುದೇ ಮೇಲು’ ಎಂದು ಹೇಳಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದವರು ಸ್ವಾಭಿಮಾನಿ ಸೂರ್ಯ ವಿ.ಪಿ.ಸಿಂಗ್. ‘ವಿ.ಪಿ.ಸಿಂಗ್ ಅವರನ್ನು ಬೇಕಾದರೆ ಗಲ್ಲಿಗೇರಿಸಿಕೊಳ್ಳಿ. ಆದರೆ, ದಮನಿತರಿಗೆ ನ್ಯಾಯ ಕೊಡಿಸಿ’ ಎನ್ನುವಷ್ಟರ ಮಟ್ಟಿಗೆ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಹಿಂದುಳಿದ ವರ್ಗಗಳ ಕಲ್ಯಾಣದ ಬಗ್ಗೆ ಕಾಳಜಿ ಹೊಂದಿದ್ದರು.

ಅಧಿಕಾರದಲ್ಲಿದ್ದ 11 ತಿಂಗಳಲ್ಲಿ ಹಿಂದುಳಿದ ವರ್ಗಗಳಿಗೆ 27% ಮೀಸಲಾತಿ; ಮಾಹಿತಿ ಹಕ್ಕು ಕಾಯಿದೆಗೆ ಚಾಲನೆ; ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾರ್ಯಕ್ರಮಕ್ಕೆ ಚಾಲನೆ; ಕೆಲಸ ಮಾಡುವ ಹಕ್ಕನ್ನು ಸಾಂವಿಧಾನಿಕ ಹಕ್ಕನ್ನಾಗಿ ಮಾಡಿದ್ದು; ಚುನಾವಣಾ ಸುಧಾರಣೆಗಳು; ಅಂತರರಾಜ್ಯ ಮಂಡಳಿ; ರಾಷ್ಟ್ರೀಯ ಭದ್ರತಾ ಮಂಡಳಿ; ರೈತರ ಸಮಸ್ಯೆ ಬಗೆಹರಿಸಲು ಮೂರು ಸಮಿತಿಗಳ ರಚನೆ; ದೆಹಲಿಯ ಕೊಳೆಗೇರಿ ನಿವಾಸಿಗಳಿಗೆ ವಸತಿ ಸೌಕರ್ಯ; ಗರಿಷ್ಠ ಚಿಲ್ಲರೆ ಬೆಲೆ (MRP) ಮುದ್ರಿಸಬೇಕು; ಗ್ರಾಹಕರ ರಕ್ಷನೆ ಮುಂತಾದ ಎಲ್ಲವನ್ನೂ ಮಾಡಿ ತೋರಿಸಿದವರು ಮಹಾನ್ ಸಾಧಕ ವಿ.ಪಿ.ಸಿಂಗ್ ಅವರು” ಎಂದು ಹೇಳಿ ಶ್ಲಾಘಿಸಿ ಮಾತನಾಡಿದರು.