ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಕೇಂದ್ರ ಆಯುಷ್ ಸಚಿವಾಲಯ Archives » Dynamic Leader
October 17, 2024
Home Posts tagged ಕೇಂದ್ರ ಆಯುಷ್ ಸಚಿವಾಲಯ
ದೇಶ

ಪತಂಜಲಿ ಕಂಪನಿಯು ಸಸ್ಯಾಹಾರಿ ಉತ್ಪನ್ನಗಳ ಜೊತೆಗೆ ಮಾಂಸಾಹಾರಿ ಉತ್ಪನ್ನಗಳನ್ನು ಬೆರೆಸಿ ಮಾರಾಟ ಮಾಡುವ ಮೂಲಕ ಭಾರೀ ವಿವಾದದಲ್ಲಿ ಸಿಲುಕಿದೆ!

ಬಿಜೆಪಿ ಬೆಂಬಲಿಗರಾದ ಯೋಗ ಪ್ರಚಾರಕ ಬಾಬಾ ರಾಮದೇವ್ ಅವರು ಪತಂಜಲಿ (Patanjali) ಎಂಬ ಕಂಪನಿಯನ್ನು ನಡೆಸುತ್ತಿದ್ದಾರೆ. ಈ ಕಂಪನಿಯನ್ನು ಬಿಜೆಪಿ ಮತ್ತು ಅದರ ಬೆಂಬಲಿಗರು ಹೆಚ್ಚು ಪ್ರಚಾರ ಮಾಡಿ ಬರುತ್ತಿದ್ದಾರೆ. ಇದರಿಂದಾಗಿಯೇ ಭಾರತದಲ್ಲಿ ಪ್ರಮುಖ ಕಂಪನಿಯಾಗಿ ಬೆಳೆದಿದೆ.

ಇತ್ತೀಚಿಗೆ ಪತಂಜಲಿ ಕಂಪನಿಯು ಅಲೋಪತಿ ಔಷಧದ ವಿರುದ್ಧ ಹಲವಾರು ಸುಳ್ಳು ಜಾಹೀರಾತುಗಳನ್ನು ಪ್ರಕಟಿಸಿತ್ತು. ಅದರಲ್ಲಿ ಅನೇಕ ತಪ್ಪು ಅಭಿಪ್ರಾಯಗಳಿದ್ದವು; ಅಲೋಪತಿ ಔಷಧದ ವಿರುದ್ಧವೂ ಅಭಿಪ್ರಾಯಗಳಿದ್ದವು. ಇದರಿಂದ ಸಾರ್ವಜನಿಕರಲ್ಲಿ ತಪ್ಪು ಕಲ್ಪನೆಗಳು ಹರಡಿದವು.

ಈ ಕುರಿತು, ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಾದ ಸಂದರ್ಭದಲ್ಲಿ, ಬಾಬಾ ರಾಮ್‌ದೇವ್ ಮತ್ತು ಪತಂಜಲಿ ಪರವಾಗಿ ನ್ಯಾಯಾಲಯದಲ್ಲಿ ಸಾರ್ವಜನಿಕ ಕ್ಷಮೆಯಾಚಿಸಲಾಯಿತು. ಈ ಹಿನ್ನೆಲೆಯಲ್ಲಿ, ಪತಂಜಲಿ ಕಂಪನಿ ಸದ್ಯ ಮತ್ತೊಂದು ಭಾರೀ ವಿವಾದದಲ್ಲಿ ಸಿಲುಕಿಕೊಂಡಿದೆ.

ಪತಂಜಲಿ ಕಂಪನಿಯು ಸಸ್ಯಾಹಾರದೊಂದಿಗೆ ತಯಾರಿಸುವ ಉತ್ಪನ್ನಗಳನ್ನು ಸೂಚಿಸಲು ಹಸಿರು ಚುಕ್ಕೆ ಇಟ್ಟು ಮಾರಾಟ ಮಾಡುತ್ತದೆ. ಆ ರೀತಿಯಲ್ಲಿ, ಸಸ್ಯಾಹಾರಿ ಟೂತ್ ಪೇಸ್ಟ್ (Toothpaste) ಹೆಸರಿನಲ್ಲಿ ಮಾರಾಟ ಮಾಡುವ ಪತಂಜಲಿ ಕಂಪನಿಯ ಉತ್ಪನ್ನದಲ್ಲಿ ಸಮುದ್ರಫೆನ್ (Sepia Officinalis) ಎಂಬ ಮೀನಿನ ಜಾತಿಯ ಸಾರವನ್ನು (Essence) ಸೇರಿಸಲಾಗುತ್ತಿದೆ ಎಂದು ದೂರು ನೀಡಲಾಗಿದೆ.

ಈ ಕುರಿತು ವಕೀಲ ಯಾದೀನ್ ಶರ್ಮಾ ದೆಹಲಿ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅದರಲ್ಲಿ, “ಆಯುಷ್ ಸಚಿವಾಲಯಕ್ಕೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ” ಎನ್ನಲಾಗಿದೆ. ಈ ಕುರಿತು ವಿವರಣೆ ನೀಡುವಂತೆ ದೆಹಲಿ ಹೈಕೋರ್ಟ್ ಪತಂಜಲಿಗೆ ನೋಟಿಸ್ ಕಳುಹಿಸಿದೆ.

ರಾಜ್ಯ

“ದಾನಿಗಳ ಎದೆಹಾಲನ್ನು ಯಾವುದೇ ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ. ಇದನ್ನು ಮಕ್ಕಳಿಗೆ ಮಾತ್ರ ನೀಡಬೇಕು” – FSSAI

ಭಾರತದ ಅತ್ಯುನ್ನತ ಆಹಾರ ನಿಯಂತ್ರಣ ಪ್ರಾಧಿಕಾರವಾದ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI), ಎದೆ ಹಾಲನ್ನು ಸಂಸ್ಕರಿಸಲು ಅಥವಾ ಮಾರಾಟ ಮಾಡಲು ಮಾನ್ಯತೆ ನೀಡಿರುವುದಿಲ್ಲೆವೆಂದು, ಅದಕ್ಕಾಗಿ ಪರವಾನಗಿಗಳನ್ನು ನೀಡುವುದನ್ನು ತಪ್ಪಿಸುವಂತೆ ರಾಜ್ಯ ಪರವಾನಗಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಈ ಕುರಿತು ಪ್ರಕಟಿಸಿರುವ ಹೇಳಿಕೆಯಲ್ಲಿ, “ಎದೆ ಹಾಲು ಮತ್ತು ಅದರ ಉತ್ಪನ್ನಗಳ ವಾಣಿಜ್ಯೀಕರಣಕ್ಕಾಗಿ ವಿವಿಧ ನೋಂದಾಯಿತ ಸಂಘ ಸಂಸ್ಥೆಗಳಿಂದ ಹಲವು ಅನುಮೋದನೆ ನಮೂನೆಗಳನ್ನು ಸ್ವೀಕರಿಸಲಾಗಿದೆ.

ಸಾರ್ವಜನಿಕ ಆರೋಗ್ಯ ಹಾಲುಣಿಸುವ ಕೇಂದ್ರಗಳ (LMC) ಮಾರ್ಗಸೂಚಿಗಳ ಪ್ರಕಾರ, ದಾನಿಗಳ ಎದೆ ಹಾಲನ್ನು ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ಬಳಸುವಂತಿಲ್ಲ. ಇದನ್ನು ಮಕ್ಕಳಿಗೆ ಮಾತ್ರ ನೀಡಬೇಕು. ಕಳೆದ 10 ವರ್ಷಗಳಲ್ಲಿ, ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಂದ ಪಡೆದ ಮಾನವ ಎದೆ ಹಾಲನ್ನು ಮಾರಾಟ ಉದ್ದೇಶಗಳಿಗಾಗಿ ಪುಡಿ (Powder) ರೂಪದಲ್ಲಿ ಸಂಸ್ಕರಿಸಲು ಹಲವಾರು ಕಂಪನಿಗಳು ಹುಟ್ಟಿಕೊಂಡಿವೆ.

ಎದೆಹಾಲು ಮತ್ತು ಅದರ ಉತ್ಪನ್ನಗಳ ವಾಣಿಜ್ಯೀಕರಣಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಸಲಹೆ ನೀಡಲಾಗಿದೆ. ವಾಣಿಜ್ಯ ಉದ್ದೇಶಗಳಿಗಾಗಿ ತಾಯಿಯ ಹಾಲನ್ನು ಬಳಸುವುದು ಕಾನೂನುಬಾಹಿರವಾಗಿದೆ. FSSAI, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ, 2006 ಮತ್ತು ಅದರ ಸಂಬಂಧಿತ ನಿಯಮಗಳ ಅಡಿಯಲ್ಲಿ ಯಾವುದೇ ಉಲ್ಲಂಘನೆಯು ದಂಡದ ಕ್ರಮಕ್ಕೆ ಕಾರಣವಾಗುತ್ತದೆ.

ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ರಿಟಿಷ್ ಮೂಲದ ನಿಯೋಲಾಕ್ಟ (Neolacta) ಕಂಪನಿ, ಕೇಂದ್ರ ಆಯುಷ್ ಸಚಿವಾಲಯದಿಂದ ಪರವಾನಗಿ ಪಡೆದು ಎದೆಹಾಲಿನ ವಾಣಿಜ್ಯೀಕರಣದಲ್ಲಿ ತೊಡಗಿರುವುದು ಬಹಿರಂಗವಾಗಿದೆ. BPNI ನೀಡಿದ ದೂರಿನ ನಂತರ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಅಲ್ಲದೆ, ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಲಾಗಿದೆ. ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.