ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಕೊಯಮತ್ತೂರು Archives » Dynamic Leader
October 17, 2024
Home Posts tagged ಕೊಯಮತ್ತೂರು
ಕ್ರೈಂ ರಿಪೋರ್ಟ್ಸ್ ದೇಶ

ಕೊಯಮತ್ತೂರು: ‘ಸಿಮಿ’ಯನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸುವ ಕುರಿತು ಇಂದು ಮತ್ತು ನಾಳೆ (ಜೂನ್ 18 ಮತ್ತು 19) ಕುನ್ನೂರು ಮುನ್ಸಿಪಲ್ ಕಚೇರಿಯಲ್ಲಿ ವಿಚಾರಣೆ ನಡೆಯುತ್ತಿದೆ.

ಕೊಯಮತ್ತೂರು ಪೊಲೀಸ್ ವರದಿ:
ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಸಿಮಿ) ಅನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸುವ ಬಗ್ಗೆ, ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್ ನೇತೃತ್ವದ, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಮಧ್ಯಸ್ಥಿಕೆ ನ್ಯಾಯಮಂಡಳಿ, ಕುನ್ನೂರು ಪುರಸಭೆ ಕಚೇರಿ ಸಭಾಂಗಣದಲ್ಲಿ ಇಂದು ಮತ್ತು ನಾಳೆ ನಡೆಯುತ್ತದೆ.

ಈ ಕುರಿತು ಸಾಕ್ಷ್ಯ ನೀಡಲು ಬಯಸುವವರು ತಮ್ಮ ಅಫಿಡವಿಟ್‌ಗಳನ್ನು (ಎರಡು ಪ್ರತಿಗಳು) ಸಲ್ಲಿಸಬಹುದು. ಬೆಳಗ್ಗೆ 10:00 ಗಂಟೆಯಿಂದ ವಿಚಾರಣೆ ನಡೆಯಲಿದ್ದು, ಯಾವುದೇ ಅಡ್ಡ ಪರೀಕ್ಷೆ ಇದ್ದರೆ, ಅದಕ್ಕಾಗಿ ನೀವು ನ್ಯಾಯಮಂಡಳಿಯಲ್ಲಿ ಖುದ್ದಾಗಿ ಹಾಜರಾಗಬಹುದು ಎಂದು ಪೊಲೀಸ್ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ರಾಜಕೀಯ

ಕೊಯಮತ್ತೂರು: ‘ಕೊಯಮತ್ತೂರು ಲೋಕಸಭಾ ಕ್ಷೇತ್ರದ ಕೆಲವು ಪ್ರದೇಶಗಳಲ್ಲಿ ಒಂದು ಲಕ್ಷ ಮತದಾರರು ಮತ ಹೊಂದಿಲ್ಲ’ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ.

ಕೊಯಮತ್ತೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಣ್ಣಾಮಲೈ, “ಕೊಯಮತ್ತೂರು ಲೋಕಸಭಾ ಕ್ಷೇತ್ರದ ಕೆಲವು ಪ್ರದೇಶಗಳಲ್ಲಿ ಒಂದು ಲಕ್ಷ ಮತದಾರರು ಮತ ಹೊಂದಿಲ್ಲ. ಚುನಾವಣಾ ವೀಕ್ಷಕರು, ಚುನಾವಣಾ ಅಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಬಿಜೆಪಿ ವತಿಯಿಂದ ದೂರು ನೀಡಲಾಗಿದೆ. ಆದರೂ ಈ ಒಂದು ಲಕ್ಷ ಮತಗಳಿಗೆ ಯಾರು ಹೊಣೆ. ಇದು ಡಿಎಂಕೆಯ ರಾಜಕೀಯ ಷಡ್ಯಂತ್ರ” ಎಂದು ಹೇಳಿದ್ದಾರೆ.

ಕೊಯಮತ್ತೂರು ಲೋಕಸಭಾ ಕ್ಷೇತ್ರದ ಕೆಲವು ಪ್ರದೇಶಗಳಲ್ಲಿ ಒಂದು ಲಕ್ಷ ಮತದಾರರು ಮತ ಹೊಂದಿಲ್ಲ ಎಂದು ಚುನಾವಣೆ ಮುಗಿಯುವ ಸಂದರ್ಭದಲ್ಲಿ ಹೇಳುತ್ತಿರುವುದು ತಮಿಳುನಾಡು ರಾಜಕೀಯ ವಲಯದಲ್ಲಿ ನಗೆಪಾಟಿಲಿಗೆ ಕಾರಣವಾಗಿದೆ.

ಈ ಹಿಂದೆಯೇ ಪೋಲಿಂಗ್ ಏಜೆಂಟರನ್ನು ನೇಮಕಮಾಡಿ ಯಾವ ಮತದಾರರು ಬದುಕಿದ್ದಾರೆ, ಎಷ್ಟು ಜನ ಸತ್ತಿದ್ದಾರೆ, ಎಷ್ಟು ಜನ ತಮ್ಮ ಮನೆಯನ್ನು ಬದಲಾಯಿಸಿಕೊಂಡಿದ್ದಾರೆ, ಎಷ್ಟು ಜನರು ಕ್ಷೇತ್ರಕ್ಕೆ ಹೊಸದಾಗಿ ಬಂದಿದ್ದಾರೆ ಎಂದೆಲ್ಲಾ ಸರ್ವೆ ಮಾಡಿಸಲಾಗಿದೆ. ಚುನಾವಣಾ ದಿನಾಂಕ ಘೋಷಣೆ ಮಾಡಿದ ನಂತರವೂ ಮತದಾರರನ್ನು ಸೇರಿಸಲು ಮತ್ತು ತೆಗೆದುಹಾಕಲು ಚುನಾವಣಾ ಆಯೋಗ ಸಾಕಷ್ಟು ಕಾಲಾವಕಾಶವನ್ನೂ ನೀಡಿತ್ತು? ಕೊಯಮತ್ತೂರು ಬಿಜೆಪಿ ಅದನ್ನು ಯಾಕೆ ಸದುಪಯೋಗ ಪಡಿಸಿಕೊಂಡಿಲ್ಲ? ಅಂತಿಮ ಮತದಾರರ ನೋಂದಣಿ, ಪರಿಶೀಲನೆ ಮತ್ತು ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾದಾಗ ಪಕ್ಷದ ಸದಸ್ಯರು ಏನು ಮಾಡುತ್ತಿದ್ದರು? ಆಗ ನಿಮಗೆ ಗೊತ್ತಿಲ್ಲವೇ ಒಂದು ಲಕ್ಷ ಮತದಾರರು ಮತ ಹೊಂದಿಲ್ಲದ ವಿಚಾರ? ರಾಷ್ಟ್ರೀಯ ಪಕ್ಷವಾದ ಬಿಜೆಪಿ ಇದನ್ನು ಆಗಲೇ ಯಾಕೆ ಸರಿಪಡಿಸಲಿಲ್ಲ? ಈ ವಿಚಾರದಲ್ಲಿ ಬಿಜೆಪಿ ಬಹಳ ಎಚ್ಚರಿಕೆ ವಹಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗಾಗಿ ನೀವು ಹೇಳುತ್ತಿರುವುದು ಸುಳ್ಳು.  

ಈ ಮೂಲಕ ನೀವು ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲಲೂ ಕೂಡ ಯೋಗ್ಯರಲ್ಲ ಎಂಬುದು ಈ ಮೂಲಕ ಸ್ಪಷ್ಟವಾಗಿದೆ. ಇದು ಚುನಾವಣೆಯಲ್ಲಿ ಸ್ಪರ್ಧಿಸುವ ಒಂದು ಪಕ್ಷದ ನಾಯಕನಿಗಿರುವ ಮೂಲ ಅರ್ಹತೆಯೇ? ಚುನಾವಣೆ ಗೆಲ್ಲಲು ಏನನ್ನೂ ಮಾಡದೇ ಬರೀ ಒಂದು ಲಕ್ಷ ಮತಗಳ ಅಂತರದಿಂದೆ ಗೆಲ್ಲುತ್ತೇನೆ ಎಂದೆಲ್ಲ ಬಡಾಯಿಕೊಚ್ಚಿಕೊಂಡು ಈಗ ಒಂದು ಲಕ್ಷ ಮತದಾರರು ಮತ ಹೊಂದಿಲ್ಲ; ಮತದಾನದಿಂದ ವಂಚಿತರಾಗಿದ್ದಾರೆ ಎಂದು ಕಥೆ ಹೇಳುತ್ತಿರುವುದು ನಾಚಿಕೆಗೇಡು. ಒಂದು ವೇಳೆ ಚುನಾವಣೆ ಸೋತಾಗ ಇದನ್ನೇ ಕಾರಣವಾಗಿ ಹೇಳಲು ಈಗಲೇ ತಯಾರಿ ಮಾಡಿಕೊಂಡಂತಿದೆ.

ಮತದಾನ ಮುಗಿಯುವ ಮುನ್ನವೇ ನಿಮ್ಮ ಮೂರನೇ ಸ್ಥಾನಕ್ಕೆ ಕಾರಣವನ್ನು ಕಂಡುಕೊಂಡಿದ್ದೀರಿ. ಇದನ್ನೇ ಜೂನ್ 4 ರಂದು ಹೇಳಲು ತಯಾರಾಗಿದ್ದಿರೀ…. ನಿಮ್ಮ ಸ್ನೇಹಿತರಿಗೂ ಇದೇ ಟೆಕ್ನಿಕಲ್ ಹೇಳಿಕೊಡಿ.

ದೇಶ

ಕೊಯಮತ್ತೂರಿನಲ್ಲಿ ಕಳೆದ ವರ್ಷ ಸಂಭವಿಸಿದ ಕಾರು ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳು ಮತ್ತೊಬ್ಬನನ್ನು ಬಂಧಿಸಿದ್ದಾರೆ!

ಕಳೆದ ವರ್ಷ, ಕೊಯಮತ್ತೂರು ಟೌನ್ ಹಾಲ್ ಪ್ರದೇಶದ ಕೋಟೆ ಈಶ್ವರನ್ ದೇವಾಲಯದ ಮುಂಭಾಗದಲ್ಲಿ ನಡೆದ ಕಾರ್ ಸ್ಫೋಟದಲ್ಲಿ ಆರೋಪಿ ಜಮೇಶಾ ಮುಬಿನ್ ಸುಟ್ಟು ಕರಕಲಾಗಿದ್ದರು. ಈ ಬಗ್ಗೆ ಎನ್‌ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 13 ಮಂದಿಯನ್ನು ಬಂಧಿಸಿದ್ದಾರೆ.

ಈ ಹಿನ್ನಲೆಯಲ್ಲಿ, ಈ ಪ್ರಕರಣದಲ್ಲಿ 14ನೇ ವ್ಯಕ್ತಿಯಾಗಿ ಪೋತ್ತನೂರು ತಿರುಮರೈ ನಗರದ ತಾಹಾ ನಸೀರ್ (27) ಎಂಬಾತನನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಇವರು ಕಾರ್ ಸರ್ವಿಸ್ ಕಂಪನಿಯಲ್ಲಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದರು.

ಕಾರ್ ಸ್ಪೋಟ ಅಪಘಾತದ ಬಗ್ಗೆ ನಸೀರ್‌ಗೆ ಮೊದಲೇ ಮಾಹಿತಿ ಇತ್ತು ಎಂಬ ಶಂಕೆಯ ಆಧಾರದ ಮೇಲೆ, ನಿನ್ನೆ ನಾಸೀರ್ ನನ್ನು ಬಂಧಿಸಿದ್ದ ರಾಷ್ಟ್ರೀಯ ಗುಪ್ತಚರ ದಳದ ಅಧಿಕಾರಿಗಳು ಇಂದು ಚೆನ್ನೈನ ಪೂನ್ದಮಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಹಾಕಿದ್ದಾರೆ.

ದೇಶ

ಕೊಯಮತ್ತೂರು: ಕೊಯಮತ್ತೂರಿನಲ್ಲಿ ಎನ್‌ಐಎ ದಾಳಿಯ ಹೆಸರಿನಲ್ಲಿ ಮುಸ್ಲಿಂ ಜನರನ್ನು ಭಯೋತ್ಪಾದಕರಂತೆ ಬಿಂಬಿಸುವುದನ್ನು ಒಪ್ಪಲಾಗದು ಎಂದು ‘ಮನಿದನೇಯ ಮಕ್ಕಳ್ ಕಚ್ಚಿ’ ಮುಖ್ಯಸ್ಥ ಜವಾಹಿರುಲ್ಲಾ ಹೇಳಿದ್ದಾರೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಳೆದ ವರ್ಷ ಕೊಯಮತ್ತೂರಿನಲ್ಲಿ ನಡೆದ ಕಾರ್ ಸ್ಫೋಟ ಘಟನೆಯನ್ನು ಮುಂದಿಟ್ಟುಕೊಂಡು ಎನ್‌ಐಎ ಅಧಿಕಾರಿಗಳು ವಿವಿಧ ಸ್ಥಳಗಳಲ್ಲಿ ಮುಸ್ಲಿಂ ಕುಟುಂಬಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಇದು ನಿಜಕ್ಕೂ ಖಂಡನೀಯ.

ಕಾರ್ ಬಾಂಬ್ ದಾಳಿಗೆ ಕಾರಣರಾದವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವುದನ್ನು ನಾವು ಬೆಂಬಲಿಸುತ್ತೇವೆ. ಆದರೆ, ಅರೇಬಿಕ್ ಅಧ್ಯಯನ ಮಾಡಿದ ಮಾಜಿ ವಿದ್ಯಾರ್ಥಿಗಳ ಕುಟುಂಬಗಳನ್ನು ಗುರಿಯಾಗಿಸಿಕೊಂಡು, ಮುಂಜಾನೆ ವೇಳೆಯಲ್ಲಿ ಅವರ ಮನೆಯ ಬಾಗಿಲು ಮುರಿದಂತೆ ಬಡಿದು, ತನಿಖೆಯ ಹೆಸರಿನಲ್ಲಿ ಕರೆದುಕೊಂಡು ಹೋಗಿ, ಮುಸ್ಲಿಂ ಬಾಂಧವರನ್ನು ಜನರಲ್ಲಿ ಭಯೋತ್ಪಾದಕರಂತೆ ಬಿಂಬಿಸುತ್ತಿರುವುದು ಖಂಡನೀಯ. ಅವರು (ಎನ್ಐಎ) ಇದನ್ನು ಬದಲಾಯಿಸಿಕೊಳ್ಳಬೇಕು” ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಜವಾಹಿರುಲ್ಲಾ, “ಅರೇಬಿಕ್ ಭಾಷೆ ವಿಶ್ವದ ಹಲವು ದೇಶಗಳಲ್ಲಿ ಮಾತನಾಡುವ ಭಾಷೆಯಾಗಿದೆ. ಅರೇಬಿಕ್ ಅಧ್ಯಯನ ಮಾಡಿದ ಮಾಜಿ ಮತ್ತು ಪ್ರಸ್ತುತ ವಿದ್ಯಾರ್ಥಿಗಳ ಕುಟುಂಬಗಳನ್ನು ತನಿಖೆಯ ಹೆಸರಿನಲ್ಲಿ ಎನ್ಐಎ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಮುಸ್ಲಿಂ ಬಾಂಧವರ ಭವಿಷ್ಯವನ್ನು ಹಾಳುಮಾಡಿದ್ದಾರೆ. ಅವರ ಬಳಿಯಿದ್ದ ಲ್ಯಾಪ್‌ಟಾಪ್ ಮತ್ತು ನಗದನ್ನು ತೆಗೆದುಕೊಂಡು ಹೋಗಿದ್ದಾರೆ. ನಿರ್ದಿಷ್ಟವಾಗಿ ಅವರನ್ನು ಭಯೋತ್ಪಾದಕರಂತೆ ಚಿತ್ರಿಸಿ, ಮನೆಯನ್ನು ಖಾಲಿ ಮಾಡುವಂತೆ ಹೇಳಿ ಕಿರುಕುಳ ನೀಡುತ್ತಿದ್ದಾರೆ.

ಕೊಯಮತ್ತೂರು ಭಯೋತ್ಪಾದಕರ ಶಿಬಿರ ಎಂಬ ಚಿತ್ರಣವನ್ನು ಎನ್‌ಐಎ ಸೃಷ್ಟಿಸುತ್ತಿದೆ. ಮಾಲೆಗಾಂವ್ ಸ್ಫೋಟ ನಡೆಸಿದವರು ಯಾರು? ಅಭಿನವ್ ಭಾರತ್ ಎಂಬ ಸಂಘಟನೆಯೇ ರೈಲಿನಲ್ಲಿ ಬಾಂಬ್ ಸ್ಫೋಟ ನಡೆಸಿದ್ದು ಎಂಬ ವಿಷಯವನ್ನು ನಾವೇ (ಇಸ್ಲಾಮಿಕ್ ಸಂಸ್ಥೆಗಳು) ಕಂಡುಹಿಡಿದು ಹೇಳಿದ್ದು. ಅಲ್ಪಸಂಖ್ಯಾತರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಎನ್‌ಐಎ ಮೊಕದ್ದಮೆಗಳನ್ನು ದಾಖಲಿಸಿ ಶಿಕ್ಷೆ ನೀಡುತ್ತಿದೆ” ಎಂದರು.

“ಮೊಹಮದ್ ಅಜರುದ್ದೀನ್ ಈಗಾಗಲೇ ಕ್ರಿಮಿನಲ್ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಕಾರು ಸ್ಫೋಟ ಘಟನೆಗೂ, ಅರೇಬಿಕ್ ಭಾಷೆ ಓದಿದ ವಿದ್ಯಾರ್ಥಿಗಳಿಗೂ ಸಂಬಂಧ ಕಲ್ಪಿಸಿ ಎನ್ಐಎ ಪ್ರಕರಣ ದಾಖಲಿಸಿರುವುದು ಖಂಡನೀಯ” ಎಂದು ಹೇಳಿದ್ದಾರೆ. ಪತ್ರಿಕಾ ಘೋಷ್ಠಿಯಲ್ಲಿ ತಂದೆ ಪೆರಿಯಾರ್ ದ್ರಾವಿಡರ್ ಕಳಗಂ ಅಧ್ಯಕ್ಷ ಕೋವೈ ರಾಮಕೃಷ್ಣನ್ ಉಪಸ್ಥಿತರಿದ್ದರು.

ದೇಶ

ಕೊಯಮತ್ತೂರು ಜಿಲ್ಲೆಯ ಮೇಟ್ಟುಪಾಳ್ಯಂ ನಗರಸಭೆಯಲ್ಲಿ 33 ವಾರ್ಡ್‌ಗಳಿವೆ. ಅಧ್ಯಕ್ಷರಾಗಿ ಮೆಹ್ರಿಬಾ ಪರ್ವೀನ್, ಉಪಾಧ್ಯಕ್ಷರಾಗಿ ಅರುಳ್ ವಡಿವು ಇದ್ದಾರೆ. ಈ ಹಿನ್ನಲೆಯಲ್ಲಿ, ನಗರಸಭೆ ವ್ಯಾಪ್ತಿಯ 11ನೇ ವಾರ್ಡ್‌ನಲ್ಲಿ ಡಿಎಂಕೆ ನಗರ ಕಾರ್ಯದರ್ಶಿ ಮೊಹಮ್ಮದ್ ಯೂನಸ್ ಅವರ ಪತ್ನಿ ಜಮೃತ್ ಬೇಗಂ ವಾರ್ಡ್ ಸದಸ್ಯರಾಗಿ ಇದ್ದಾರೆ.

ಅವರ ವಾರ್ಡ್‌ನಲ್ಲಿ ತ್ಯಾಜ್ಯ ನೀರು ಕಾಲುವೆ ದುರಸ್ತಿ, ವಸತಿ ಪ್ರದೇಶದಲ್ಲಿ ಕಸ ಸಂಗ್ರಹ, ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಕಾಮಗಾರಿ ನಡೆಸಲು ನಗರಸಭೆ ಆಡಳಿತ ಮಂಡಳಿಗೆ ವಾರ್ಡ್ ಸದಸ್ಯೆ ಜಮೃತ್ ಬೇಗಂ ಹಲವು ಬಾರಿ ಒತ್ತಾಯಿಸಿದ್ದಾರೆ. ಆದರೆ ಇದಕ್ಕೆ ನಗರಸಭೆ ಅಧ್ಯಕ್ಷರು ಸೂಕ್ತ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.

ಏತನ್ಮಧ್ಯೆ, ಅವರ 11ನೇ ವಾರ್ಡ್‌ನಲ್ಲಿ 5 ದಿನಗಳಿಂದ ಕಸ ಸಂಗ್ರಹಿಸಲು ಸ್ವಚ್ಛತಾ ಕಾರ್ಯಕರ್ತರು ಬಂದಿಲ್ಲ ಎಂದು ಹೇಳಲಾಗುತ್ತಿದೆ. ಇದರಿಂದ ವಾರ್ಡ್ನ ಜನರು ಅವರ ಮನೆಗೆ ತೆರಳಿ ವಾಗ್ವಾದ ನಡೆಸಿದ್ದಾರೆ. ಇದರಿಂದ ಹತಾಶರಾದ ಜಮೃತ್ ಬೇಗಂ ಹಾಗೂ ಅವರ ಪುತ್ರರು ವಾರ್ಡ್ ವ್ಯಾಪ್ತಿಯಲ್ಲಿ ಸಂಗ್ರಹವಾದ ಕಸವನ್ನು ವಿಲೇವಾರಿ ಮಾಡುವ ಕಾರ್ಯದಲ್ಲಿ ತೊಡಗಿದರು.

ಇದೇ ವೇಳೆ ನಗರಸಭೆ ಆಡಳಿತ ಕಸ ಸಂಗ್ರಹಿಸದ ಕಾರಣ ವಾರ್ಡ್ ಸದಸ್ಯರೊಬ್ಬರು ತಮ್ಮ ಪುತ್ರರೊಂದಿಗೆ ಸೇರಿ ಕಸ ಎತ್ತುತ್ತಿರುವುದನ್ನು ಕಂಡ ಬಡಾವಣೆಯ ನಿವಾಸಿಗಳು ಮೊಬೈಲ್ ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.

A DMK councillor of the Mettupalayam Municipality collected waste from houses, allegedly after conservancy workers of the civic body failed to do their duty for five days. M.Jamruth Begum, councillor of ward no: 11 of the municipality, stepped in for conservancy work on Tuesday along with her sons.

ರಾಜಕೀಯ

ಬೆಂಗಳೂರು: ಬಿಜೆಪಿ ಮಾಜಿ ಮುಖಂಡ ಅಣ್ಣಾದೊರೈ ಅವರು, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ವಿರುದ್ಧ ಕೊಯಮತ್ತೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ. ಬಿಜೆಪಿಯ ಸ್ಥಳೀಯಾಡಳಿತ ಅಭಿವೃದ್ಧಿ ವಿಭಾಗದ ಕಾರ್ಯದರ್ಶಿಯಾಗಿದ್ದ ಅಣ್ಣಾದೊರೈ ಅವರನ್ನು 4 ದಿನಗಳ ಹಿಂದೆ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಈ ಹಿನ್ನಲೆಯಲ್ಲಿ ಕೊಯಮತ್ತೂರು ಪೊಲೀಸ್ ಕಮಿಷನರ್ ಕಚೇರಿ ಎದುರು ಅಣ್ಣಾದೊರೈ ಸುದ್ದಿಗಾರರನ್ನು ಭೇಟಿ ಮಾಡಿದರು.

“ನಾನು ಚೆನ್ನೈ, ಪಾಂಡಿಚೇರಿ ಮತ್ತು ಕೊಯಮತ್ತೂರಿನಲ್ಲಿ ‘ಪಳೆಯ ಸೋರು ಡಾಟ್ ಕಾಮ್’ ಅನ್ನು ನಡೆಸುತ್ತಿದ್ದೇನೆ. ಕೊಯಮತ್ತೂರಿನ ಕಟ್ಟಡ ಮಾಲೀಕರೊಂದಿಗೆ ನಮಗೆ ಸಮಸ್ಯೆ ಇತ್ತು, ಆದ್ದರಿಂದ ನಾವು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೇವೆ. ನಾನು ಬಿಜೆಪಿಯಲ್ಲಿದ್ದೇನೆ ಎಂಬ ಕಾರಣಕ್ಕೆ ಕಟ್ಟಡ ಮಾಲೀಕರು ಅಣ್ಣಾಮಲೈ ಅವರ ಬಳಿ ಮಾತನಾಡಿದ್ದಾರೆ. ಅಣ್ಣಾಮಲೈ ಆದೇಶದ ಮೇರೆಗೆ ಬಿಜೆಪಿ ಜಿಲ್ಲಾಧ್ಯಕ್ಷರು, ‘ಪಳೆಯ ಸೋರು ಡಾಟ್ ಕಾಮ್’ ನಡೆಸುತ್ತಿದ್ದ ನನ್ನ ಕಚೇರಿಯ ಬೀಗವನ್ನು ಒಡೆದು, ಒಳಗಿದ್ದ ಸಾಮಾನುಗಳನ್ನು ಕದ್ದು, ಬಿಜೆಪಿ ಧ್ವಜ ನೆಟ್ಟು, ಸೇವಾ ಕೇಂದ್ರ ಎಂಬ ಬೋರ್ಡನ್ನು ಹಾಕಿದ್ದಾರೆ.

ಬಿಜೆಪಿಯವರು ಈ ರೀತಿ ಅನ್ಯಾಯ ಮಾಡುತ್ತಾರೆ ಎಂದು ಗೊತ್ತಿದ್ದರೆ ನಾನು ಈ ಪಕ್ಷಕ್ಕೆ ಸೇರುತ್ತಿರಲಿಲ್ಲ. ಸ್ವಪಕ್ಷದ ಕಾರ್ಯಕರ್ತರನ್ನು ಕರೆದು ಪ್ರಶ್ನಿಸದೆ, ಪಕ್ಷದ ಕಾರ್ಯಕರ್ತರಿಂದಲೇ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ನಾನು ಮಾಲೀಕನಿಗೆ ಹಣ ಪಾವತಿಸುವುದಾಗಿಯೇ ಇರಲಿ, ಪ್ರಕರಣ ನ್ಯಾಯಾಲಯದಲ್ಲಿರುವಾಗ ಕಚೇರಿಯ ಪೀಠೋಪಕರಣಗಳನ್ನು ಒಡೆದು ಖಾಲಿ ಮಾಡುವುದು ಯಾವ ನ್ಯಾಯ? ನನ್ನನ್ನು ಬಿಜೆಪಿಯಿಂದ ಉಚ್ಚಾಟಿಸಿರುವ ವಿಷಯ ನಿನ್ನೆ ಬೆಳಗ್ಗೆಯಷ್ಟೇ ತಿಳಿದು ಬಂದಿತು. ಅಣ್ಣಾಮಲೈ ಇದರಲ್ಲಿ ನೇರವಾಗಿ ಭಾಗವಾಗಿದ್ದಾರೆ. ಆದ್ದರಿಂದಲೇ ಅವರ ವಿರುದ್ಧ ದೂರು ದಾಖಲಿಸಿದ್ದೇನೆ. ಎಲ್ಲರ ಮೇಲೂ FIR ದಾಖಲು ಮಾಡುವಂತೆ ಪೊಲೀಸ್ ಅಧಿಕಾರಿಯ ಬಳಿ ಮನವಿ ಮಾಡಿದ್ದೇನೆ” ಎಂದರು.