ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ರಕ್ಷಾ ಬಂಧನ್ Archives » Dynamic Leader
October 17, 2024
Home Posts tagged ರಕ್ಷಾ ಬಂಧನ್
ದೇಶ

ರಕ್ಷಾ ಬಂಧನದ ಹಿನ್ನೆಲೆಯಲ್ಲಿ ರಾಣಿ ಕರ್ಣಾವತಿ-ರಾಜ ಹುಮಾಯೂನ್ ಕಥೆಯನ್ನು ಸುಧಾ ಮೂರ್ತಿ ಅವರು ಹಂಚಿಕೊಂಡಿರುವ ವಿಡಿಯೋಗೆ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದೀಗ ಆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಉತ್ತರ ರಾಜ್ಯಗಳಲ್ಲಿ ಅತ್ಯಂತ ಜನಪ್ರಿಯ ಹಬ್ಬವಾದ ರಕ್ಷಾ ಬಂಧನವನ್ನು ನಿನ್ನೆ (ಆಗಸ್ಟ್ 19) ಆಚರಿಸಲಾಯಿತು. ಇದು ಸಹೋದರ – ಸಹೋದರಿಯರ ನಡುವಿನ ಪ್ರೀತಿಯ ಬಾಂಧವ್ಯವನ್ನು ವ್ಯಕ್ತಪಡಿಸುವ ಸಲುವಾಗಿ ಇದನ್ನು ಪ್ರತಿ ವರ್ಷವೂ ಆಚರಿಸಲಾಗುತ್ತದೆ.

ಪ್ರಧಾನಿ ಮೋದಿ, ಸಂಸದ ರಾಹುಲ್ ಗಾಂಧಿ ಸೇರಿದಂತೆ ಹಲವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ರಕ್ಷಾ ಬಂಧನದ ಶುಭಾಶಯಗಳನ್ನು ಹಂಚಿಕೊಂಡಿದ್ದರು. ಆ ರೀತಿಯಲ್ಲಿ, ರಾಜ್ಯಸಭಾ ಸಂಸದೆ ಹಾಗೂ ಇನ್ಫೋಸಿಸ್ ನಾರಾಯಣಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಅವರು ರಕ್ಷಾ ಬಂಧನದ ಕುರಿತು ಮಾತನಾಡುವ ವಿಡಿಯೋವೊಂದನ್ನು ತಮ್ಮ ‘ಎಕ್ಸ್’ ಪೇಜ್ ನಲ್ಲಿ ಹಂಚಿಕೊಂಡಿದ್ದರು.

ಅದರಲ್ಲಿ, 16ನೇ ಶತಮಾನದ ರಾಣಿ ಕರ್ಣಾವತಿ ತನ್ನ ಶತ್ರುಗಳಿಂದ ದಾಳಿಗೊಳಗಾದಾಗ ಮೊಘಲ್ ಚಕ್ರವರ್ತಿ ಹುಮಾಯೂನ್‌ಗೆ ಸಣ್ಣ ಹಗ್ಗವೊಂದನ್ನು ಕಳುಹಿಸಿ, ತನ್ನನ್ನು ಕಿರಿಯ ಸಹೋದರಿ ಎಂದು ಭಾವಿಸಿ ಸಹಾಯ ಮಾಡುವಂತೆ ಕೇಳಿಕೊಂಡಳು ಎಂದು ಸುಧಾ ಮೂರ್ತಿ ವಿಡಿಯೊದಲ್ಲಿ ಉಲ್ಲೇಖಿಸಿದ್ದರು.

ಈ ಪೋಸ್ಟ್ ಅಡಿಯಲ್ಲಿ ಕಾಮೆಂಟ್ ಮಾಡಿದ ಅನೇಕರು, ರಕ್ಷಾ ಬಂಧನದ ಇತಿಹಾಸವು ಮಹಾಭಾರತದ ಕಾಲಕ್ಕೆ ಸೇರಿದ್ದು, ಶಿಶುಪಾಲನನ್ನು ಕೊಲ್ಲಲು ಕೃಷ್ಣನು ಸುದರ್ಶನ ಚಕ್ರವನ್ನು ಬಳಸಿದಾಗ, ಅದು ಅವರ ಬೆರಳನ್ನು ಕತ್ತರಿಸಿತು, ದ್ರೌಪದಿ ತಕ್ಷಣವೇ ಸಣ್ಣ ಬಟ್ಟೆಯಿಂದ ಗಾಯವನ್ನು ಕಟ್ಟಿದರು ಅದುವೆ ನಂತರ ರಕ್ಷಾ ಬಂಧನವಾಯಿತು ಎಂದು ಸೂಚಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸುಧಾ ಮೂರ್ತಿ, “ರಕ್ಷಾ ಬಂಧನದ ಬಗ್ಗೆ ನಾನು ಹಂಚಿಕೊಂಡ ಕಥೆಯು ಹಬ್ಬಕ್ಕೆ ಸಂಬಂಧಿಸಿದ ಅನೇಕ ಕಥೆಗಳಲ್ಲಿ ಒಂದಾಗಿದೆ. ನಾನು ವಿಡಿಯೊದಲ್ಲಿ ಹೇಳಿದಂತೆ, ಇದು ಈಗಾಗಲೇ ಭೂಮಿಯ ಸಂಪ್ರದಾಯವಾಗಿದೆ. ರಕ್ಷಾ ಬಂಧನದ ಹಿಂದಿನ ಸುಂದರವಾದ ಸಂಕೇತಗಳ ಬಗ್ಗೆ ನಾನು ಬೆಳೆದಾಗ ಕಲಿತ ಅನೇಕ ಕಥೆಗಳಲ್ಲಿ ಒಂದನ್ನು ಹೈಲೈಟ್ ಮಾಡುವುದೆ ನನ್ನ ಉದ್ದೇಶವಾಗಿತ್ತು. ರಕ್ಷಾ ಬಂಧನ ಬಹಳ ಪ್ರಾಚೀನವಾದ ಸಂಪ್ರದಾಯ” ಎಂದು ಹೇಳಿದ್ದಾರೆ.