ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಸಿಸಿಬಿ Archives » Dynamic Leader
October 16, 2024
Home Posts tagged ಸಿಸಿಬಿ
ದೇಶ

ಬೆಂಗಳೂರು : ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಪ್ರಕರಣದ ತನಿಖೆಯನ್ನು ಕೇಂದ್ರ ಗೃಹ ಸಚಿವಾಲಯ ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ವಹಿಸಿದೆ. ಸದ್ಯ ರಾಜ್ಯ ಪೊಲೀಸ್‌ ಇಲಾಖೆಯ ಸಿಸಿಬಿ ಪೊಲೀಸರು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ. ಈಗ ಎನ್‌ಐಎ ಪ್ರಕರಣದ ವಿಚಾರಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ. ಪ್ರಕರಣದಲ್ಲಿ ಇನ್ನು ಯಾವುದೇ ಆರೋಪಿಯನ್ನು ಬಂಧಿಸಿಲ್ಲ.

ಮಾರ್ಚ್‌ 1 ರಂದು ವೈಟ್‌ಫೀಲ್ಡ್‌ನ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆ ಹೋಟೆಲ್‌ನಲ್ಲಿ ಮಧ್ಯಾಹ್ನ ಬಾಂಬ್‌ ಸ್ಫೋಟವಾಗಿತ್ತು. ಘಟನೆಯಲ್ಲಿ 9 ಜನ ಗಾಯಗೊಂಡಿದ್ದರು. ಮೊದಲು ಸಿಲಿಂಡರ್‌ ಸ್ಫೋಟ ಎನ್ನಲಾಗಿತ್ತು. ಆದರೆ, ಬಳಿಕ ಅದು ಸುಧಾರಿತ ಐಇಡಿ ಬಳಸಿ ಮಾಡಿರುವ ಸ್ಫೋಟ ಎಂದು ದೃಢವಾಯಿತು. ಗ್ರಾಹಕನ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ಬಾಂಬ್‌ ಇರುವ ಬ್ಯಾಗ್‌ ಅನ್ನು ಹೋಟೆಲ್‌ನಲ್ಲಿಯೆ ಬಿಟ್ಟು ಹೋಗಿದ್ದ. ಅದು ಬಳಿಕ ಸ್ಫೋಟಗೊಂಡಿತ್ತು.

ಸ್ಫೋಟದ ತನಿಖೆಯನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದು, ಬಿಜೆಪಿ ನಾಯಕರು ಎನ್‌ಐಎ ತನಿಖೆಗೆ ಆಗ್ರಹಿಸಿದ್ದರು. ಅದರಂತೆ ಕೇಂದ್ರ ಗೃಹ ಸಚಿವಾಲಯ ಪ್ರಕರಣದ ತನಿಖೆಯನ್ನು ಈಗ ಎನ್‌ಐಎಗೆ ವಹಿಸಿದೆ. ಈಗಾಗಲೇ ಎನ್‌ಐಎ ಅಧಿಕಾರಿಗಳು ಪ್ರಕರಣದ ವಿಚಾರವಾಗಿ ಸಿಸಿಬಿ ಪೊಲೀಸರಿಗೆ ಸಹಾಯ ಮಾಡುತ್ತಿದ್ದರು. ಈಗ ಪೂರ್ತಿ ಪ್ರಕರಣವನ್ನು ಅವರೇ ತನಿಖೆ ನಡೆಸಲಿದ್ದಾರೆ.

ರಾಜ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಇಂದು ಪಾಲ್ಗೊಂಡು ಮಾತನಾಡಿದರು.

ಆಯಾ ಠಾಣಾ ವ್ಯಾಪ್ತಿಗಳಲ್ಲಿ ಅಕ್ರಮ ಚಟುವಟಿಕೆಗಳು, ಕಾನೂನು ಬಾಹಿರ ಸಂಘಟಿತ ಅಪರಾಧಗಳು ನಡೆಯುತ್ತಿದ್ದರೆ ಡಿಸಿಪಿ, ಎಸ್.ಪಿ ಮಟ್ಟದ ಅಧಿಕಾರಿಗಳನ್ನೂ ಹೊಣೆ ಮಾಡಿ ಸರ್ಕಾರ ಕ್ರಮ ಕೈಗೊಳ್ಳಲಿದೆ. ನಮ್ಮ ಸರ್ಕಾರ ಕೇವಲ‌ ಕೆಳ ಹಂತದ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡು ಕೈತೊಳೆದುಕೊಳ್ಳುವುದಿಲ್ಲ, ಹಿರಿಯ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸುಳ್ಳು ಸುದ್ದಿ, ವದಂತಿಗಳ ಮೂಲಕ ಸಮಾಜದ ಶಾಂತಿ ಕದಡುವವರ ವಿರುದ್ಧ ಸ್ವಯಂಪ್ರೇರಿತ ಎಫ್.ಐ.ಆರ್ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು. ಸೂಕ್ಷ್ಮ ಪ್ರಕರಣಗಳಲ್ಲಿ ದೂರು ಕೊಡುವವರು ಬರಲಿ ಎಂದು ಕಾಯುತ್ತಾ ಕೂರಬಾರದು ಎಂದು ಪೊಲೀಸ್ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಸಿಸಿಬಿಯನ್ನು ಇನ್ನಷ್ಟು ಸದೃಢಗೊಳಿಸಲು 230 ಸಿಬ್ಬಂದಿಯನ್ನು ಹೊಸದಾಗಿ ನೇಮಿಸಿಕೊಳ್ಳಲು ಒಪ್ಪಿಗೆ ನೀಡಲಾಗಿದೆ. ಸಿಬ್ಬಂದಿಗೆ ಅಗತ್ಯವಿದ್ದರೆ ಹೊಸ ಕಟ್ಟಡಗಳನ್ನು ಒದಗಿಸಲಾಗುವುದು ಎಂಬ ಭರವಸೆಯನ್ನು ನೀಡಿದರು.

ಹಿರಿಯ ಅಧಿಕಾರಿಗಳು ಜನ ಸಂಪರ್ಕಕ್ಕೆ ಸಿಗದೇ ಹೋದರೆ , ಜನಸ್ನೇಹಿ ಆಗದೇ ಹೋದರೆ ಅಂತಹ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಠಾಣೆಗೆ ಬರುವ ಬಡವರು, ಜನಸಾಮಾನ್ಯರಿಗೆ ಪೊಲೀಸ್ ವ್ಯವಸ್ಥೆ ಬಗ್ಗೆ ಭರವಸೆ ಹುಟ್ಟುವ ರೀತಿಯಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸಬೇಕು ಎಂದು ಹೇಳಿದರು.

ಇದನ್ನೂ ಓದಿ: ಕಲೈಜ್ಞರ್ ಮಹಿಳಾ ಹಕ್ಕುಭತ್ಯೆ ಯೋಜನೆಗೆ ಇಂದು ಚಾಲನೆ; ತಮಿಳುನಾಡಿನಲ್ಲಿ ಸಂಭ್ರಮದ ವಾತಾವರಣ!

ಉದ್ಯೋಗ ಕ್ರೈಂ ರಿಪೋರ್ಟ್ಸ್

DRDOನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, 35 ಜನರಿಂದ 82 ಲಕ್ಷ ರೂಪಾಯಿಗಳನ್ನು ಪಡೆದು, ನಕಲಿ ದಾಖಲೆಗಳನ್ನು ಸೃಷ್ಟಿಸಿ, ವಂಚಿಸಿರುವ DRDO ಉದ್ಯೋಗಿಗಳಾದ 1) ಮಾಲಕೊಂಡಯ್ಯ 2) ಪಿ.ಎಸ್.ನಂಜಮ್ಮ  3) ಸತ್ಯನಾರಾಯಣ, 4) ಡಿ.ಜಿ.ರಾವ್, 5) ಸಲೀಂ 6) ಮಾಲಕೊಂಡಯ್ಯನ ಪತ್ನಿ ರಮಣಮ್ಮ ಮತ್ತು ಇತರರ ವಿರುದ್ದ ಟಿ.ಸಿ.ಪಾಳ್ಯ ಮುಖ್ಯ ರಸ್ತೆಯಲ್ಲಿರುವ ಪಿ ಅಂಡ್ ಟಿ ಕಾಲೋನಿ ನಿವಾಸಿ ಷಣ್ಮುಗಂ ಅವರು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

MEG ಸೆಂಟರ್‌ನಲ್ಲಿ ಕೆಲಸ ಮಾಡಿ 2019ರಲ್ಲಿ ನಿವೃತ್ತಿ ಹೊಂದಿರುವ ಷಣ್ಮುಗಂ ಅವರನ್ನು ಕೆಲಸದ ವಿಚಾರದಲ್ಲಿ ಪರಿಚಯ ಮಾಡಿಕೊಂದಿದ್ದ ಮಾಲಕೊಂಡಯ್ಯ, “DRDOನಲ್ಲಿ 1200 ಹುದ್ದೆಗಳಿಗೆ  ಅರ್ಜಿ ಕರೆದಿದ್ದಾರೆ; ಯಾರಾದರು ಅಭ್ಯರ್ಥಿಗಳು (Candidate) ಇದ್ದರೆ ಹೇಳು; ನೇರವಾಗಿ ನೇಮಕಾತಿ (Appointment) ಕೊಡಿಸುತ್ತೇನೆ; ಪ್ರತಿ ವ್ಯಕ್ತಿಗೆ 2 ಲಕ್ಷ ರೂಪಾಯಿ ಆಗುತ್ತೆ ಎಂದು ಹೇಳಿದ್ದಾರೆ. ಇದನ್ನು ನಿಜವೆಂದು ನಂಬಿದ ಷಣ್ಮುಗಂ, ಬೆಂಗಳೂರು ಮತ್ತು ತಮಿಳುನಾಡಿನಿಂದ ಸುಮಾರು 35 ಜನರನ್ನು ಮಾಲಕೊಂಡಯ್ಯ ಅವರಿಗೆ ಹಂತ ಹಂತವಾಗಿ ಪರಿಚಯ ಮಾಡಿಕೊಟ್ಟಿದ್ದಾರೆ. ಮಾಲಕೊಂಡಯ್ಯ ಅವರು, ಸದರಿ 35 ಜನರಿಗೆ ಕೆಲಸ ಕೊಡಿಸುವ ಬರವಸೆ ನೀಡಿ, ಬಣ್ಣದ ಮಾತುಗಳನ್ನು ಹಾಡಿ, ಅವರಿಂದ 82 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ.

ಹಣಕೊಟ್ಟವರಿಗೆ ಅನುಮಾನ ಬರಬಾರದು ಎಂಬುದಕ್ಕಾಗಿ, DRDOನಲ್ಲಿ ಅಕೌಂಟ್ ಆಫೀಸರ್ ಆಗಿರುವ ಪಿ.ಎಸ್.ನಂಜಮ್ಮ ಅವರನ್ನು ಬಳಸಿಕೊಂಡು, ದಾಖಲೆಗಳನ್ನು ದೃಢೀಕರಿಸಿ ಎಲ್ಲರಿಗೂ ನೀಡುತ್ತಿದ್ದರು. ಕೇಳಿದರೆ, “ಅಪಾಯಿಂಟ್ಮೆಂಟ್ ಎಲ್ಲವೂ ಆನ್‌ಲೈನ್‌ನಲ್ಲಿ ನಡೆಯುತ್ತಿದೆ. ನೀವು ಹಣ ಕೊಟ್ಟಿರುವುದರಿಂದ ನಿಮಗೆ ನೇರವಾಗಿ ಕೆಲಸ ಸಿಗಲಿದೆ. ನೇರವಾಗಿ ಕೆಲಸ ಸಿಗಬೇಕಾದರೆ ಒಳಗಿರುವ ಅಧಿಕಾರಿಗಳು ‘ಇವರು ನನಗೆ ಪರಿಚಯವಿದ್ದಾರೆ; ಇವರ ನಡವಳಿಕೆ ಚನ್ನಾಗಿದೆ’ ಎಂದು ಹೇಳಿ ದಾಖಲೆಯನ್ನು ದೃಢೀಕರಿಸಿ ಕೊಡಬೇಕು. ಆಗ ನಿಮಗೆ ಕೆಲಸ ಸಿಗುತ್ತದೆ” ಎಂದು ಹೇಳಿದ್ದಾರೆ.

ನಂತರ, ದಾಖಲೆಗಳ ಪರಿಶೀಲನೆಯೆಂಬ ಹೊಸ ನಾಟಕವನ್ನು ಶುರು ಮಾಡಿದ್ದಾರೆ. ಅದಕ್ಕಾಗಿ, ನ್ಯೂ ತಿಪ್ಪಸಂದ್ರ ಬಳಿ ಮಾಲಕೊಂಡಯ್ಯ ಅವರ ಸಂಬಂಧಿ ನಾಗೇಂದ್ರ ನಡೆಸುವ ಪಿಜಿಯ ಬಳಿಗೆ ಎಲ್ಲರನ್ನು ಕರೆಸಿಕೊಂಡು, ಅಲ್ಲಿಗೆ ನಕಲಿ DRDO ಅಧಿಕಾರಿಗಳನ್ನು ಕರೆಸಿ, ಇವರೆಲ್ಲರು DRDO ಅಧಿಕಾರಿಗಳೆಂದು ನಂಬಿಸಿ, ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.

ನಂತರ ಹಣ ನೀಡಿ, ಕೆಲಸಕ್ಕಾಗಿ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಅನುಮಾನ ಬರಬಾರದು ಎಂಬುದಕ್ಕಾಗಿ, ಮುಂದೆ ನಿಂತು ಹಣ ಪಡೆದುಕೊಟ್ಟ ಷಣ್ಮುಗಂ, ಕಮಲಕಣ್ಣನ್, ಶಂಕರ್, ಗಣೇಶ್, ರಾಮ್ ಪ್ರಸಾದ್ ಮತ್ತು ನಾಗರಾಜ್ ಮುಂತಾದವರನ್ನು DRDO ಕಛೇರಿಯ ಒಳಗೆ ಕರೆಸಿಕೊಂಡು, ಅಲ್ಲಿ ಮಾಲಕೊಂಡಯ್ಯನೊಂದಿಗೆ ಶಾಮೀಲಾಗಿರುವ ಡಿ.ಜಿ.ರಾವ್, ಸಲೀಂ ಮುಂತಾದ ಇನ್ನೂ ಕೆಲವು ಆಫೀಸರ್‌ಗಳೊಂದಿಗೆ ಮಾತನಾಡಿಸಿ ನಂಬಿಸುವ ನಾಟಕ ಮಾಡಿದ್ದಾರೆ.

ಅಧಿಕಾರಿಗಳು ಮಾಲಕೊಂಡಯ್ಯ ಹೇಳಿ ಕೊಟ್ಟಂತೆ ‘ಇನ್ನು ಹತ್ತು ದಿನಗಳಲ್ಲಿ ನಿಮ್ಮ ಕೆಲಸ ಆಗಿ ಬಿಡುತ್ತದೆ’, ‘ಲಿಸ್ಟ್ ಆಗಿದೆ’, ‘ಇನ್ನು ಸಹಿ ಆಗಿಲ್ಲ’ ಎಂದು ಭರವಸೆಯ ಮಾತುಗಳನ್ನು ಹೇಳಿ ಕಳುಹಿಸಿದ್ದಾರೆ. ‘DRDO ಅಧಿಕಾರಿಗಳಿಗೆ ಹಣ ಕೊಟ್ಟಿದ್ದೇನೆ; ಅವರೆಲ್ಲರು ನಮ್ಮ ಕೆಲಸ ಮಾಡಿಕೊಡುತ್ತಾರೆ’ ಎಂದು ದೂರುದಾರ ಷಣ್ಮುಗಂ ಬಳಿ ಮಾಲಕೊಂಡಯ್ಯ ಹೇಳಿಕೊಂಡಿದ್ದಾರೆ.    

ಕೆಲಸ ಕೊಡುವ ವಿಚಾರವನ್ನು ಹೀಗೆ ಎಳೆಯುತ್ತಾ ಹೋಗುವ ಮಾಲಕೊಂಡಯ್ಯ, ಒತ್ತಡ ಹೆಚ್ಚಾದಾಗ ‘ಜಾಬ್ ಲಿಸ್ಟ್’ ಕೊಡಿಸುವ ಕಾರ್ಯವನ್ನು ಮಾಡಿದ್ದಾರೆ. ಹಣ ಕೊಟ್ಟ ಎಲ್ಲರಿಗೂ DRDO ಟೆಕ್ನಿಕಲ್ ಆಫೀಸರ್ ಸತ್ಯನಾರಾಯಣ ಮತ್ತು ಅಕೌಂಟ್ ಆಫೀಸರ್ ಪಿ.ಎಸ್.ನಂಜಮ್ಮ ಮೂಲಕ ನಕಲಿ ಜಾಬ್ ಲಿಸ್ಟ್ ತಯಾರಿಸಿ ಎಲ್ಲರಿಗೂ ಹಂಚಿಕೆ ಮಾಡಿದ್ದಾರೆ.

ಆದರೆ, ಹಣಕೊಟ್ಟವರಿಗೆ ಈ ಜಾಬ್ ಲಿಸ್ಟ್, ದಾಖಲೆ ದೃಢೀಕರಣ ಎಲ್ಲವೂ ನಾಟಕ, ನಮ್ಮಿಂದ ಹಣ ಪಡೆದು ವಂಚಿಸಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ, ಮಾಲಕೊಂಡಯ್ಯ ಕೆಲವರಿಗೆ ಚೆಕ್ ನೀಡಿದ್ದಾರೆ. ಇನ್ನು ಕೆಲವರಿಗೆ ಹಣ ಕೊಡಲು ಸಮಯ ಕೇಳಿ, ಹಣ ಕೊಟ್ಟವರನ್ನು ತಿಂಗಳು ಗಟ್ಟಲೆ ಕಛೇರಿಯ ಬಳಿ ತಿರುಗಾಡುವಂತೆ ಮಾಡಿದ್ದಾರೆ. ಕೊಟ್ಟಿದ್ದ ಚೆಕ್ ಯಾವುದರಲ್ಲೂ ಹಣವಿಲ್ಲ. ಎಲ್ಲವೂ ಬೋನ್ಸ್ ಆಗಿದೆ.

ಮೊಬೈಲಿಗೆ ಕರೆ ಮಾಡಿದರೆ ಪಿಕ್ ಮಾಡುವುದಿಲ್ಲ, ಕಛೇರಿ ಬಳಿಯೂ ಸಿಗುವುದಿಲ್ಲ. ಮನೆ ವಿಳಾಸ ಹುಡುಕಿಕೊಂಡು ಹೋದರೆ, ಮಾಲಕೊಂಡಯ್ಯ ಹೆಂಡತಿ ರಮಣಮ್ಮನನ್ನು ಬಿಟ್ಟು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬಯ್ಯುವಂತೆ ಮತ್ತು ಅಮಾನುಷ್ಯವಾಗಿ ವರ್ತಿಸುವಂತೆ ಮಾಡಿದ್ದಾರೆ. ಇದರಿಂದ ಬೇಸತ್ತ ಷಣ್ಮುಗಂ ತಾಳಲಾರದೆ, ತಿಳಿದವರ ಬಳಿ, ಮಗ-ಮಗಳ ಬಳಿ, ಬಡ್ಡಿಗೆ ಎಂದು ಇದುವರೆಗೆ ಸುಮಾರು 25 ಲಕ್ಷ ರೂಪಾಯಿಗಳನ್ನು ಸಾಲ ಮಾಡಿ ಎಲ್ಲರಿಗೂ ಸ್ವಲ್ಪ ಸ್ವಲ್ಪ ಹಂಚಿದ್ದಾರೆ.

ಈ ರೀತಿ ಕೆಲಸ ಕೊಡಿಸುವುದಾಗಿ ನಂಬಿಸಿ, 35 ಜನರಿಂದ ರೂ.82 ಲಕ್ಷ ಹಣವನ್ನು ಪಡೆದು, ವಂಚನೆ ಮಾಡಿರುವ ಮಾಲಕೊಂಡಯ್ಯ, ಕಾಲ ಕಳೆದಂತೆ ಹಣಕೊಟ್ಟವರ ಬಳಿ “ನನಗೂ ಈ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ… ಎಲ್ಲರ ಹಣ ಷಣ್ಮುಗಂ ಬಳಿ ಇದೆ… ಆತನ ಬಳಿಯೇ ಹಣ ಪಡೆದುಕೊಳ್ಳಿ… ಏನಿದ್ದರೂ ಆತನ ಬಳಿಯೇ ಮಾತನಾಡಿಕೊಳ್ಳಿ… ನನಗೆ ಯಾರೂ ಪೋನ್ ಮಾಡಬೇಡಿ” ಎಂದು ಹೇಳಿ, ಈ ವಿಚಾರದಿಂದ ದೂರ ಸರಿದುಕೊಂಡಿದ್ದಾರೆ.

ಕೇಳಿದರೆ, “ಕೆಲವರಿಗೆ ಹಣ ಕೊಟ್ಟಂತೆ ಬಾಕಿ ಉಳಿದವರಿಗೂ ನೀನೆ ಹಣ ಕೊಡು; ನಿಮ್ಮ ಜಮೀನು ಮಾರಿ ಕೊಡು ಎಂದು ದುರಹಂಕಾರದಿಂದ ಮಾತನಾಡಿದ್ದಾರೆ. “ನಾನು ಯಾವುದೇ ಹಣ ತಿಂದಿಲ್ಲ… ನೀನು ಏನು ಬೇಕಾದರು ಮಾಡಿಕೊ… ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ… ನನಗೆ ಇನ್ನು ಮುಂದೆ ಪೋನ್ ಮಾಡಬೇಡ” ಎಂದು ಹೇಳಿ ಷಣ್ಮುಗಂ ಅವರನ್ನು ಗದರಿಸಿ ಸಂಪರ್ಕವನ್ನು ಕಡಿತ ಮಾಡಿಕೊಂಡಿದ್ದಾರೆ. ಮೋಸಹೋದ ಜನರು ಅನ್ಯ ಮಾರ್ಗವಿಲ್ಲದೆ, ಈಗ ಷಣ್ಮುಗಂ ಅವರಿಗೆ ದಿನನಿತ್ಯ ಪೋನ್ ಮಾಡಿ, ಹಣ ಕೊಡುವಂತೆ ತೊಂದರೆ ನೀಡುತ್ತಿದ್ದಾರೆ.

ಕೆಲಸ ಕೊಡಿಸುವುದಾಗಿ ನಂಬಿಸಿ, ಜನರನ್ನು ಕರೆದುಕೊಂಡು ಬರುವಂತೆ ಮಾಡಿದ ಮಾಲಕೊಂಡಯ್ಯ, ಅವರಿಂದ ಹಣ ಪಡೆದು, ಅವರು ನೀಡುವ ದಾಖಲೆಗಳನ್ನು DRDOನಲ್ಲಿ ಅಕೌಂಟ್ ಆಫೀಸರ್ ಆಗಿ ಕೆಲಸ ಮಾಡುವ ಪಿ.ಎಸ್.ನಂಜಮ್ಮ ಮತ್ತು ಇತರರಿಂದ ದೃಢೀಕರಿಸಿ ಕೊಟ್ಟು, ನಿಮಗೆ ನೇರವಾಗಿ ನೇಮಕಾತಿ ಕೊಡುತ್ತೇನೆಂದು ಎಲ್ಲರನ್ನೂ ನಂಬಿಸಿದ್ದಾರೆ. 28 ಹುಡುಗರನ್ನು ಪಿಜಿಯಲ್ಲಿ ಕೂರಿಸಿ, ದಾಖಲೆಗಳ ಪರಿಶೀಲನೆ ಎಂದು ನಾಟಕವಾಡಿ ನಂತರ, DRDOನಲ್ಲಿ ಟೆಕ್ನಿಕಲ್ ಆಫೀಸರ್ ಆಗಿರುವ ಸತ್ಯನಾರಾಯಣ ಮತ್ತು ಅಕೌಂಟ್ ಆಫೀಸರ್ ಪಿ.ಎಸ್.ನಂಜಮ್ಮ ಜೊತೆ ಸೇರಿಕೋಂಡು Job List ಎಂಬ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಎಲ್ಲರಿಗೂ ಹಂಚಿದ್ದಾರೆ.

ಇವರು ಬರೀ ಷಣ್ಮುಗಂ ಕಡೆಯಿರುವ 35 ಜನರಿಗೆ ಮಾತ್ರ ಏಮಾರಿಸಿಲ್ಲ. ಇವರಿಂದ ಏಮಾರಿದವರು ನೂರಾರು ಜನರಿದ್ದಾರೆ. ಇವರೆಲ್ಲ ನೆಪ ಮಾತ್ರಕ್ಕೆ DRDOನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಮಾಡುತ್ತಿರುವುದೆಲ್ಲ DRDO ಹೆಸರಿನಲ್ಲಿ ನಕಲಿ ನೇಮಕಾತಿ ದಂಧೆ. ಡಿ ಗ್ರೂಪ್ ನೌಕರನಾದ ಮಾಲಕೊಂಡಯ್ಯನಿಗೆ ಒಳಗಿರುವ ಆಫೀಸರ್‌ಗಳು ಬೆನ್ನೆಲುಬಾಗಿ ನಿಂತು ನಕಲಿ ದಾಖಲೆಗಳನ್ನು ತಯಾರಿಸಿ ಕೊಡುತ್ತಿರುವುದು ಷಣ್ಮುಗಂ ನೀಡಿರುವ ದೂರಿನಿಂದ ಬಹಿರಂಗವಾಗಿದೆ. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಿಚಾರಣೆ ಪ್ರಗತಿಯಲ್ಲಿದೆ.         

ಕ್ರೈಂ ರಿಪೋರ್ಟ್ಸ್

ಮಾರ ಕಾಸ್ತ್ರಗಳೊಂದಿಗೆ ದರೋಡೆ ಮಾಡಲು ಸಂಚು ರೂಪಿಸಿದ್ದ ರೌಡಿ ಶಿಟರ್ ಮಹೇಶ @ ಸಿದ್ದಾಪುರ ಮಹೇಶನ 5 ಜನ ಸಹಚರರ ಬಂಧನ. ಒಂದು ಪಾರ್ಚೂನರ್ ಕಾರು ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಬೆಂಗಳೂರು: ಜೂನ್ 17 ರಂದು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ಸರಹದ್ದಿನ KSRTC ಕೇಂದ್ರ ಕಚೇರಿಯ ಪಕ್ಕದ ಬಿಟಿಎಸ್ ಸರ್ವೀಸ್ ರಸ್ತೆಯಲ್ಲಿ, ಒಂಟಿಯಾಗಿ ಹೋಗುವ ಸಾರ್ವಜನಿಕರನ್ನು ಅಡ್ಡಗಟ್ಟಿ ಅವರಿಗೆ ಮಾರಕಾಸ್ತ್ರಗಳಾದ ಲಾಂಗು, ಮಚ್ಚು, ಚಾಕು ದೊಣ್ಣೆಗಳಿಂದ ಹಲ್ಲೆ ಮಾಡಿ, ಅವರಿಂದ ನಗದು ಮತ್ತು ಚಿನ್ನಾಭರಣಗಳನ್ನು ದೋಚಲು ಸಜ್ಜಾಗಿದ್ದ ರೌಡಿ ಶೀಟರ್ ಮಹೇಶ @ ಸಿದ್ದಾಪುರದ ಮಹೇಶನ 5 ಜನ ಸಹಚರರನ್ನು ಹಿಡಿಯುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ. ಇವರುಗಳ ಕಡೆಯಿಂದ ಮಾರಕಾಸ್ತ್ರಗಳನ್ನು ಮತ್ತು ಪಾರ್ಚೂನ್ ಕಾರನ್ನು ಅಮಾನತ್ತು ಪಡಿಸಿಕೊಂಡಿರುತ್ತದೆ.

ಇವರುಗಳು ಕಳೆದ ವರ್ಷ ಬನಶಂಕರಿ ಮೆಟ್ರೋ ನಿಲ್ದಾಣ ಹತ್ತಿರ ರೌಡಿ ಶೀಟರ್ ಮದನ್ @ ಪಿಟೀಲ್ ಎಂಬುವವನನ್ನು ಕೊಲೆ ಮಾಡಿದ್ದ ಮಹೇಶ @ ಸಿದ್ದಾಪುರ ಮಹೇಶ್ ಎಂಬುವವನ ಸಹಚರರಾಗಿರುತ್ತಾರೆ.

ಇವರುಗಳು ಈ ದಿನ ಮಹೇಶನ ಎದುರಾಳಿಯಾದ ವಿಲ್ಸನ್ ಗಾರ್ಡನ್ ನಾಗ ಅಥವಾ ಆತನ ಸಹಚರರು ಸಿಕ್ಕರೆ ಅವರುಗಳನ್ನು ಹೊಡೆಯಬೇಕೆಂದು ಮತ್ತು ದಾರಿಯಲ್ಲಿ ಒಂಟಿಯಾಗಿ ಬರುವ ಸಾರ್ವಜನಿಕರ ಮೇಲೆ ಹಲ್ಲೆ ಮಾಡಿ ಅವರಿಂದ ನಗದು ಹಣ ಅಥವಾ ಒಡವೆಗಳನ್ನು ದೋಚಲು ಹೊಂಚು ಹಾಕುತ್ತಿದ್ದುದಾಗಿ ತಿಳಿಸಿರುತ್ತಾರೆ. ಮೇಲ್ಕಂಡ ಆಸಾಮಿಗಳ ವಿರುದ್ದ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದರೋಡೆ ಸಂಚು ರೂಪಿಸಿದ ಕುರಿತು ಪ್ರಕರಣ ದಾಖಲಾಗಿದ್ದು, ಪ್ರಕರಣ ಮುಂದುವರೆದಿದೆ.

ಈ ಕಾರ್ಯಾಚರಣೆಯನ್ನು ಸಿಸಿಬಿ, ಸಂಘಟಿತ ಅಪರಾಧ ದಳ (ಪಶ್ಚಿಮ) ದ ಅಧಿಕಾರಿಗಳು ಮತ್ತು ಸಿಬ್ಬಂಧಿಗಳು ಯಶಸ್ವಿಯಾಗಿ ಆರೋಪಿಗಳನ್ನು ಮಾಲಿನ ಸಮೇತ ವಶಕ್ಕೆ ಪಡೆದುಕೊಂಡಿರುತ್ತಾರೆ.  

ಕ್ರೈಂ ರಿಪೋರ್ಟ್ಸ್

ಬೆಂಗಳೂರು: ಸಿಸಿಬಿ ಕಾರ್ಯಚರಣೆ, ತಮಿಳುನಾಡು ಮೂಲದ ಇಬ್ಬರು ಬಂಧನ. ಕೋಟ್ಯಾಂತರ ಬೆಲೆಬಾಳುವ 6.5 ಕೆಜಿ ತೂಕದ ನಿಷೇಧಿತ ಅಂಬರ್ ಗ್ರೀಸ್ ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ದಿನಾಂಕ: 30-05-2023 ರಂದು ತಮಿಳುನಾಡು ರಾಜ್ಯದಿಂದ ಬೆಂಗಳೂರಿಗೆ ಬಂದು, ಕಾನೂನು ಬಾಹೀರವಾಗಿ ಸುಮಾರು 6.5 ಕೆಜಿ ತೂಕದ ನಿಷೇಧಿತ ಅಂಬರ್ ಗ್ರೀಸ್ ವಸ್ತುವನ್ನು, ಕೋಟ್ಯಾಂತರ ರೂಪಾಯಿ ಬೆಲೆಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಇಬ್ಬರು ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ ಸಿಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಇಬ್ಬರು ಆಸಾಮಿಗಳನ್ನು ಬಂಧಿಸಿ ಕೋಟ್ಯಾಂತರ ಮೌಲ್ಯದ ನಿಷೇಧಿತ ಅಂಬರ್ ಗ್ರೀಸ್ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.

ಈ ಆರೋಪಿಗಳ ವಿರುದ್ಧ ಬೆಂಗಳೂರು ನಗರ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಸಿಸಿಬಿ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕ್ರೈಂ ರಿಪೋರ್ಟ್ಸ್

ಬೆಂಗಳೂರು: ಅಂತರಾಷ್ಟ್ರೀಯ, ಅಂತರರಾಜ್ಯ ಹಾಗೂ ಸ್ಥಳೀಯ ಡ್ರಗ್ ಪೆಡ್ಲರ್‌ಗಳ ಜಾಲವನ್ನು ಭೇದಿಸಿ, ಸುಮಾರು 7 ಕೋಟಿ 6 ಲಕ್ಷಕ್ಕೂ ಅಧಿಕ ಮೌಲ್ಯದ ವಿವಿಧ ರೀತಿಯ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Ganja

ಬೆಂಗಳೂರು ನಗರ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳವು, ಡ್ರಗ್ ಪೆಡ್ಲರ್‌ಗಳ ವಿರುದ್ಧ ಕಾರ್ಯಚರಣೆಯನ್ನು ಮುಂದುವರಿಸಿ, ಕಳೆದ ಒಂದು ತಿಂಗಳಿನಿಂದ ಸಂಗ್ರಹಿಸಲಾದ ಮಾಹಿತಿಗಳ ಆಧಾರದ ಮೇಲೆ ನೈಜೀರಿಯಾದ ಇಬ್ಬರು, ಐವರಿಕೋಸ್ಟ್ ದೇಶದ ಒಬ್ಬರು, ಕೇರಳದ 12 ಜನ, ಪಶ್ಚಿಮ ಬಂಗಾಳದ ಒಬ್ಬ, ಆಂದ್ರ ಪ್ರದೇಶದ ಒಬ್ಬ ಮತ್ತು ಬೆಂಗಳೂರಿನ ಇಬ್ಬರು ವ್ಯಕ್ತಿಗಳು ಸೇರಿದಂತೆ ಒಟ್ಟು 19 ಜನ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿ, ಅಂದಾಜು 7,06,00,000/- ಮೌಲ್ಯದ ನಿಷೇಧಿತ ಮಾದಕ ವಸ್ತುಗಳಾದ 6kg Hashish Oil, 51.89kg Ganja, 140grm MDMA Crystal, 236 Ecstasy Pills, 34 LSD strips, 23grm Cocaine, 17 Mobile Phone, 1 Car, 1 Bike ಅನ್ನು ವಸಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

Wilson Garden PS Cr. No.100/2023 u/s 8(c), 20 (ii) (B) 27-A, 29 NDPS Act

ಬಂಧಿತ ಆರೋಪಿಗಳು, ಕಡಿಮೆ ಸಮಯದಲ್ಲಿ ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕಡಿಮೆ ಬೆಲೆಗೆ ನಿಷೇಧಿತ ಮಾದಕ ವಸ್ತುಗಳನ್ನು ಖರೀದಿ ಮಾಡಿ, ಅವುಗಳನ್ನು ಪರಿಚಯಸ್ಥ ಗಿರಾಕಿಗಳಿಗೆ, ವಿದ್ಯಾರ್ಥಿಗಳಿಗೆ, ಐಟಿ/ಬಿಟಿ ಉದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ, ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿರುತ್ತಾರೆ.

Ashok Nagar Cr. No.76/2023 u/s 8(c), 22(b)(c), 23, 27-A, 29 NDPS Act

ಬಂಧಿತ ಆರೋಪಿಗಳ ವಿರುದ್ಧ ಬೆಂಗಳೂರಿನ ವಿಲ್ಸನ್ ಗಾರ್ಡನ್, ಬೇಗೂರು, ಅಶೋಕ್ ನಗರ, ಬಾಣಸವಾಡಿ, ಸಿದ್ದಾಪುರ, ಪುಲಿಕೇಶಿನಗರ, ಹೆಣ್ಣೂರು, ಕೆ.ಆರ್.ಪುರ, ಯಲಹಂಕ ಹಾಗೂ ಆರ್.ಟಿ.ನಗರ ಠಾಣೆಗಳಲ್ಲಿ NDPS ಕಾಯ್ದೆ-1985 ರೀತ್ಯಾ ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Begur PS Cr. No.84/2023 u/s 8(c) 22(c) NDPS Act

ಈ ಕಾರ್ಯಚರಣೆಯನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಮತ್ತು ಸಿಬ್ಬಂಧಿಗಳ ತಂಡವು ಯಶಸ್ವಿಯಾಗಿ ಕೈಗೊಂಡಿರುತ್ತಾರೆ.