ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
A.Raja Archives » Dynamic Leader
October 23, 2024
Home Posts tagged A.Raja
ದೇಶ

ಡಿ.ಸಿ.ಪ್ರಕಾಶ್

“ಪ್ರಪಂಚದಾದ್ಯಂತ ವೃತ್ತಿ ವಿಭಜನೆ ಇದೆ; ಕಾರ್ಮಿಕರ ವಿಭಜನೆ ಭಾರತದಲ್ಲಿ ಮಾತ್ರ ಇದೆ! ಪೆರಿಯಾರ್ ಮತ್ತು ಅಂಬೇಡ್ಕರ್ ಹೇಳುವುದು ಇದನ್ನೆ” – ಎ.ರಾಜಾ

18ನೇ ಲೋಕಸಭೆಯ ಅಧಿವೇಶನ ಜೂನ್ 24 ರಿಂದ ಆರಂಭವಾಗಿದೆ. ಮೊದಲ ಎರಡು ದಿನ ಹೊಸ ಸಂಸದರ ಪ್ರಮಾಣ ವಚನ ಸ್ವೀಕರಿಸುವ ಕಾರ್ಯ ನಡೆಯಿತು. ನಂತರ ಮೂರನೇ ದಿನ ನಡೆದ ಸ್ಪೀಕರ್ ಚುನಾವಣೆಯಲ್ಲಿ ಬಿಜೆಪಿಯ ಓಂ ಬಿರ್ಲಾ ಮತ್ತೆ ಗೆಲುವು ಸಾಧಿಸಿದರು. ಇದರ ಬೆನ್ನಲ್ಲೇ ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ, ಇಂದು ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಬಿಜೆಪಿ ಆಡಳಿತದ ಅರಾಜಕತೆಯನ್ನು ಬಯಲಿಗೆಳೆದವು. ಆ ಮೂಲಕ ಡಿಎಂಕೆ ಲೋಕಸಭೆ ಸಂಸದ ಹಾಗೂ ಡಿಎಂಕೆ ಪಕ್ಷದ ಸಚೇತಕ ಎ.ರಾಜಾ ಬಿಜೆಪಿಯನ್ನು ತೀವ್ರವಾಗಿ ಟೀಕಿಸಿ ಮಾತನಾಡಿದ್ದಾರೆ.

ಈ ಕುರಿತು ಮಾತನಾಡಿದ ಡಿಎಂಕೆ ಸಂಸದ ಎ.ರಾಜಾ, “ಕೇಂದ್ರ ಸರ್ಕಾರವು ತನ್ನ ಆಲೋಚನೆಗಳನ್ನು ರಾಷ್ಟ್ರಪತಿ ಮತ್ತು ಸ್ಪೀಕರ್ ಭಾಷಣಗಳ ಮೂಲಕ ಹೇರಲು ಪ್ರಯತ್ನಿಸುತ್ತದೆ. ಕೇಂದ್ರ ಸರ್ಕಾರ ಫ್ಯಾಸಿಸ್ಟ್ ತತ್ವಗಳಿಗೆ ಬದ್ಧವಾಗಿದೆ. ಬಿಜೆಪಿ ಆಡಳಿತಗಾರರಿಗೆ ತುರ್ತು ಪರಿಸ್ಥಿತಿ ಬಗ್ಗೆ ಮಾತನಾಡುವ ಹಕ್ಕಿಲ್ಲ. ತಮಿಳುನಾಡಿನ ಜನರು 2ನೇ ಬಾರಿ ಫ್ಯಾಸಿಸಂ ವಿರುದ್ಧ ಮತ ಚಲಾಯಿಸಿದ್ದಾರೆ.

300ಕ್ಕೂ ಹೆಚ್ಚು ಸ್ಥಾನಗಳನ್ನು ವಶಪಡಿಸಿಕೊಳ್ಳುತ್ತೇವೆ ಎಂದು ಮೋದಿ ಹೇಳಿದರು. ಆದರೆ ಜನರು ಅದನ್ನು ತಿರಸ್ಕರಿಸಿದರು. ಕೇವಲ 240 ಸ್ಥಾನಗಳನ್ನು ಹೊಂದಿರುವ ಬಿಜೆಪಿ ಸರ್ಕಾರವನ್ನು ರಾಷ್ಟ್ರಪತಿ ಭಾಷಣದ ಮೂಲಕ ಬಹುಮತದ ಸರ್ಕಾರ ಎಂದು ಕರೆಯುವುದು ಹೇಗೆ? ಬಹುಮತದ ಸರ್ಕಾರ ಎಂದು ಹೇಳುವುದೇ ದೊಡ್ದ ಸುಳ್ಳು.

ನಾವು ತಮಿಳುನಾಡಿನಿಂದ ನೀಟ್ ವಿರುದ್ಧ ನಿರ್ಣಯವನ್ನು ಕಳುಹಿಸಿದ್ದೇವೆ. ಇನ್ನೂ ಒಪ್ಪಿಕೊಂಡಿಲ್ಲ. ನೀವು ತಮಿಳುನಾಡನ್ನು ಗೌರವಿಸುವುದಿಲ್ಲ. ನೀವು ನಮ್ಮನ್ನು ಕಸದ ಬುಟ್ಟಿಯಂತೆ ಕಾಣುತ್ತೀರಿ. ಅದಕ್ಕೇ ತಮಿಳುನಾಡು 40 ಕ್ಷೇತ್ರಗಳಲ್ಲೂ ನಿಮ್ಮನ್ನು ಸೋಲಿಸಿ ತಕ್ಕ ಪಾಠ ಕಲಿಸಿದೆ!

ಪ್ರಪಂಚದಾದ್ಯಂತ ವೃತ್ತಿ ವಿಭಜನೆ ಇದೆ; ಕಾರ್ಮಿಕರ ವಿಭಜನೆ ಭಾರತದಲ್ಲಿ ಮಾತ್ರ ಇದೆ! ಪೆರಿಯಾರ್ ಮತ್ತು ಅಂಬೇಡ್ಕರ್ ಹೇಳುವುದು ಇದನ್ನೆ. ಈ ವಿಭಜನೆಯನ್ನು ನೀವು ಹಿಂದೂ ಧರ್ಮದ ಹೆಸರಿನಲ್ಲಿ ಶಾಶ್ವತಗೊಳಿಸಲು ಬಯಸುತ್ತೀರಿ!

ಸಾರ್ವಜನಿಕ ವಲಯದಲ್ಲಿ ಲಾಭವಿಲ್ಲ ಎಂದು ಎಲ್ಲವನ್ನೂ ಹಾಳು ಮಾಡುತ್ತಿದ್ದೀರಿ. ಹಿಂದುಳಿದ ಮತ್ತು ಪರಿಶಿಷ್ಟ ಜಾತಿಗಳಿಗೆ ಸರ್ಕಾರಿ ಉದ್ಯೋಗಗಳು ಸಿಗುವುದಾದರೂ ಹೇಗೆ? ಮೀಸಲಾತಿಯನ್ನು ಸೂಚ್ಯವಾಗಿ ನಾಶಮಾಡಲು ನೀವು ಇದನ್ನು ಮಾಡುತ್ತಿದ್ದೀರಿ. ಏಕೆಂದರೆ ನೀವು ಮೇಲ್ಜಾತಿಗಳಿಂದ ನಡೆಸಲ್ಪಡುವ ಹಿಂದೂ ರಾಷ್ಟ್ರವನ್ನು ನಿರ್ಮಿಸಲು ಬಯಸುತ್ತಿದ್ದೀರಿ.

ನೀಟ್ ಪರೀಕ್ಷೆಯ ಮೂಲಕ, ಬಹುಮತ (Majority), ನಿರ್ವಹಣೆ (Management) ಮತ್ತು ಪಾವತಿ (Payment) ಎಂಬ ಮೂರು ವಿಭಾಗಗಳನ್ನು ಸ್ಥಾಪಿಸಲಾಗಿದೆ. ಅದಕ್ಕಾಗಿಯೇ ನಾವು ನೀಟ್ ಪದ್ಧತಿಯನ್ನು ವಿರೋಧಿಸುತ್ತಿದ್ದೇವೆ. 8 ಕೋಟಿ ಜನರನ್ನು ಪ್ರತಿನಿಧಿಸುವ ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕರಿಸಿ ಕಳುಹಿಸಿಕೊಟ್ಟ NEET ವಿನಾಯಿತಿ ನಿರ್ಧಾರವನ್ನು ಕೇಂದ್ರ ಸರ್ಕಾರ ಕಸದ ಬುಟ್ಟಿಗೆ ಎಸದಿದೆ.

ಮೊಘಲರು ಹೊರಗಿನಿಂದ ಬಂದವರು ಎನ್ನುವುದಾದರೆ, ಆರ್ಯರು ಮಾತ್ರ ಯಾರು? ಅವರೂ ಹೊರಗಿನಿಂದ ಬಂದವರೇ. ಇದಕ್ಕಾಗಿಯೇ ಅಂಬೇಡ್ಕರ್ ಅವರು ‘ದ್ರಾವಿಡರಿಗೆ ಮಾತ್ರ ಭಾರತದ ಭೂಮಿ ಮೇಲೆ ಹಕ್ಕು ಚಲಾಯಿಸುವ ಯೋಗ್ಯತೆ ಇರುವುದು’ ಎಂದು ಹೇಳಿದ್ದರು!

ನಾನು ಪೆರಿಯಾರ್ ಅವರ ದ್ರಾವಿಡ ಮಣ್ಣಿನಿಂದ ಇಲ್ಲಿಗೆ ಬಂದಿದ್ದೇನೆ. ತಮಿಳುನಾಡಿನಲ್ಲಿ ಎಲ್ಲರೂ ಸಮಾನವಾಗಿ ಬದುಕಲು ಮತ್ತು ಉನ್ನತ ಶಿಕ್ಷಣ ಪಡೆಯಲು ಪೆರಿಯಾರ್, ಅಣ್ಣಾದುರೈ ಮತ್ತು ಕರುಣಾನಿಧಿ ಕಾರಣ. ಹಾಗಾಗಿ ದೇಶಕ್ಕೆ ದ್ರಾವಿಡ ನೀತಿಗಳು ಏಕೆ ಬೇಕು ಎಂಬುದನ್ನು ಬಿಜೆಪಿ ಅರಿತುಕೊಳ್ಳಬೇಕು.

ಅದಾನಿ ವಂಚನೆ ಪ್ರಕರಣಕ್ಕೆ ಉತ್ತರಿಸಲು ಪ್ರಧಾನಿಗೆ ಬೆನ್ನೆಲುಬು ಇಲ್ಲ. ವಿರೋಧ ಪಕ್ಷಗಳು 15 ದಿನಗಳ ಕಾಲ ಕಪ್ಪು ಅಂಗಿ ಧರಿಸಿ ಸಂಸತ್ತಿಗೆ ಬಂದು ಪ್ರತಿಭಟನೆ ನಡೆಸಿದರೂ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಕ್ರಮಗಳಿಗೆ ಪ್ರತಿಕ್ರಿಯಿಸದೆ ಇಷ್ಟು ಮೌನವಾಗಿರುವ ಸರ್ಕಾರವನ್ನು ನಾನೆಂದೂ ನೋಡಿಲ್ಲ ಎಂದು ಕಿಡಿಕಾರಿದ್ದಾರೆ.

ದೇಶ

ಮೋದಿಯ ಧಾರ್ಮಿಕ ಆರ್ಯ ಮಾದರಿಯನ್ನು ಸೋಲಿಸಲು ನಾಯಕರು ಮತ್ತು ಕಾರ್ಯಕರ್ತರ ಪಡೆ ಸಾಲುವುದಿಲ್ಲ; ಮೋದಿ ಮಾದರಿಯನ್ನು ಸೋಲಿಸಲು ಪೆರಿಯಾರ್ ಅವರ ದ್ರಾವಿಡ ಮಾದರಿಯೇ ಸರಿಯಾದ ಅಸ್ತ್ರ. ಎಂದು ಡಿಎಂಕೆ ಸಂಸದ ಎ.ರಾಜ ಹೇಳಿದ್ದಾರೆ.

ನೆನ್ನೆ ತಿರುಚ್ಚಿಯಲ್ಲಿ ಡಿಎಂಕೆ ತರಬೇತಿ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ರಾಜ, “ಇಂದು ಜಗತ್ತು ಭಾರತವನ್ನು ನೋಡಿ ಉಗುಳುತ್ತಿದೆ. ನಮ್ಮ ಊರಿನಲ್ಲಿ ಹಲವು ಜಾತಿ ಭೇದಗಳಿವೆ. ಬಡವ-ಶ್ರೀಮಂತ ಎಂಬ ಭೇದವಿದೆ. ಆದರೆ ಅದು ಯಾವುದೇ ಜಾತಿಯ ಮಹಿಳೆಯಾಗಿರಲಿ. ಆ ಮಹಿಳೆಯನ್ನು ಯಾರಾದರೂ ವಿವಸ್ತ್ರಗೊಳಿಸಲು ಸಾಧ್ಯವೇ? ನಾವು ಬಿಟ್ಟುಬಿಡುತ್ತೇವಾ? ಜಾತಿ ಭೇದ ನೋಡುವವರೂ ಕೂಡ, ಬೇರೆ ಜಾತಿಯ ಮಹಿಳೆಗೆ ಅನ್ಯಾಯವಾಗುತ್ತಿದ್ದರೆ ಪ್ರಶ್ನೆ ಮಾಡುತ್ತಾರೆ. ಈ ಮಣ್ಣಿನಲ್ಲಿ ಮಹಿಳೆಗೆ ಪ್ರತ್ಯೇಕ ಗೌರವವಿದೆ. ಆದರೆ ಇದು ಮೋದಿಯ ಬಳಿ ಕಾಣತ್ತಿಲ್ಲ.

ಒಂದು ಕಡೆ ಭ್ರಷ್ಟಾಚಾರ; ಒಂದು ಕಡೆ ಸರ್ವಾಧಿಕಾರ; ಇನ್ನೊಂದು ಕಡೆ ಧಾರ್ಮಿಕತೆ. ಮತೀಯತೆ ಮತ್ತು ಭ್ರಷ್ಟಾಚಾರ ಸೇರಿಕೊಂಡು ಡಿಎಂಕೆ ಪಕ್ಷವನ್ನು ನೋಡಿ, ಇದೊಂದು ಭ್ರಷ್ಟ ಪಕ್ಷ ಮತ್ತು ಕುಟುಂಬ ಆಡಳಿತ ಎಂದು ಹೇಳುತ್ತಿದೆ. ಹೌದು, ಇದು ಕುಟುಂಬ ಆಡಳಿತವೇ? ಗೋಪಾಲಪುರಂನ ಮನೆಯನ್ನು ಅಡಮಾನವಿಟ್ಟು, ಮಿಸಾದಲ್ಲಿ ಬಂಧಿತರಾಗಿ ಒಂದು ವರ್ಷಗಳಿಗೂ ಮೇಲಾಗಿ ಜೈಲಿನಲ್ಲಿದ್ದ ಕಾರ್ಯಕರ್ತರ ಕುಟುಂಬಕ್ಕೆ ಹಣ ಕಳುಹಿಸಿದ ಕುಟುಂಬದ ಯಜಮಾನನೇ ನಮ್ಮ ಕರುಣಾನಿಧಿ. ಈ ರೀತಿ ನೋಡುವುದಾದರೆ ಇದು ಕುಟುಂಬ ಆಡಳಿತವೇ? ನಮ್ಮ ಕುಟುಂಬವನ್ನು ಪ್ರಶ್ನಿಸುವ ಯೋಗ್ಯತೆ ನಿಮಗೆ (ಬಿಜೆಪಿ) ಇಲ್ಲ.

ಮೋದಿ ವಿರುದ್ಧ ಉತ್ತರದ ರಾಜ್ಯಗಳಲ್ಲಿ ದೊಡ್ಡ ಪಡೆಯೇ ಸೇರುತ್ತಿದೆ. ಆದರೆ ಮೋದಿ ಎಂಬ ಮತೀಯವಾದವನ್ನು ಸೋಲಿಸಲು ಈ ಪಡೆ ಸಾಲುವುದಿಲ್ಲ. ತತ್ವದ ಅಗತ್ಯವಿದೆ. ಪೆರಿಯಾರ್ ರವರ ದ್ರಾವಿಡ ತತ್ವವು ಮೋದಿಯನ್ನು ಬೀಳಿಸಬಲ್ಲ ಸರಿಯಾದ ಆಯುಧವಾಗಿದೆ. ಮೋದಿಯವರ ಆರ್ಯ ಮಾದರಿಯನ್ನು ಪೆರಿಯಾರ್ ಅವರ ದ್ರಾವಿಡ ಮಾದರಿಯಿಂದ ಮಾತ್ರ ಸೋಲಿಸಲು ಸಾಧ್ಯ” ಎಂದರು.