ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Coimbatore Archives » Dynamic Leader
October 23, 2024
Home Posts tagged Coimbatore
ದೇಶ

ಕೊಯಮತ್ತೂರಿನಲ್ಲಿ ಕಳೆದ ವರ್ಷ ಸಂಭವಿಸಿದ ಕಾರು ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳು ಮತ್ತೊಬ್ಬನನ್ನು ಬಂಧಿಸಿದ್ದಾರೆ!

ಕಳೆದ ವರ್ಷ, ಕೊಯಮತ್ತೂರು ಟೌನ್ ಹಾಲ್ ಪ್ರದೇಶದ ಕೋಟೆ ಈಶ್ವರನ್ ದೇವಾಲಯದ ಮುಂಭಾಗದಲ್ಲಿ ನಡೆದ ಕಾರ್ ಸ್ಫೋಟದಲ್ಲಿ ಆರೋಪಿ ಜಮೇಶಾ ಮುಬಿನ್ ಸುಟ್ಟು ಕರಕಲಾಗಿದ್ದರು. ಈ ಬಗ್ಗೆ ಎನ್‌ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 13 ಮಂದಿಯನ್ನು ಬಂಧಿಸಿದ್ದಾರೆ.

ಈ ಹಿನ್ನಲೆಯಲ್ಲಿ, ಈ ಪ್ರಕರಣದಲ್ಲಿ 14ನೇ ವ್ಯಕ್ತಿಯಾಗಿ ಪೋತ್ತನೂರು ತಿರುಮರೈ ನಗರದ ತಾಹಾ ನಸೀರ್ (27) ಎಂಬಾತನನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಇವರು ಕಾರ್ ಸರ್ವಿಸ್ ಕಂಪನಿಯಲ್ಲಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದರು.

ಕಾರ್ ಸ್ಪೋಟ ಅಪಘಾತದ ಬಗ್ಗೆ ನಸೀರ್‌ಗೆ ಮೊದಲೇ ಮಾಹಿತಿ ಇತ್ತು ಎಂಬ ಶಂಕೆಯ ಆಧಾರದ ಮೇಲೆ, ನಿನ್ನೆ ನಾಸೀರ್ ನನ್ನು ಬಂಧಿಸಿದ್ದ ರಾಷ್ಟ್ರೀಯ ಗುಪ್ತಚರ ದಳದ ಅಧಿಕಾರಿಗಳು ಇಂದು ಚೆನ್ನೈನ ಪೂನ್ದಮಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಹಾಕಿದ್ದಾರೆ.

ದೇಶ

ಕೊಯಮತ್ತೂರು: ಕೊಯಮತ್ತೂರಿನಲ್ಲಿ ಎನ್‌ಐಎ ದಾಳಿಯ ಹೆಸರಿನಲ್ಲಿ ಮುಸ್ಲಿಂ ಜನರನ್ನು ಭಯೋತ್ಪಾದಕರಂತೆ ಬಿಂಬಿಸುವುದನ್ನು ಒಪ್ಪಲಾಗದು ಎಂದು ‘ಮನಿದನೇಯ ಮಕ್ಕಳ್ ಕಚ್ಚಿ’ ಮುಖ್ಯಸ್ಥ ಜವಾಹಿರುಲ್ಲಾ ಹೇಳಿದ್ದಾರೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಳೆದ ವರ್ಷ ಕೊಯಮತ್ತೂರಿನಲ್ಲಿ ನಡೆದ ಕಾರ್ ಸ್ಫೋಟ ಘಟನೆಯನ್ನು ಮುಂದಿಟ್ಟುಕೊಂಡು ಎನ್‌ಐಎ ಅಧಿಕಾರಿಗಳು ವಿವಿಧ ಸ್ಥಳಗಳಲ್ಲಿ ಮುಸ್ಲಿಂ ಕುಟುಂಬಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಇದು ನಿಜಕ್ಕೂ ಖಂಡನೀಯ.

ಕಾರ್ ಬಾಂಬ್ ದಾಳಿಗೆ ಕಾರಣರಾದವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವುದನ್ನು ನಾವು ಬೆಂಬಲಿಸುತ್ತೇವೆ. ಆದರೆ, ಅರೇಬಿಕ್ ಅಧ್ಯಯನ ಮಾಡಿದ ಮಾಜಿ ವಿದ್ಯಾರ್ಥಿಗಳ ಕುಟುಂಬಗಳನ್ನು ಗುರಿಯಾಗಿಸಿಕೊಂಡು, ಮುಂಜಾನೆ ವೇಳೆಯಲ್ಲಿ ಅವರ ಮನೆಯ ಬಾಗಿಲು ಮುರಿದಂತೆ ಬಡಿದು, ತನಿಖೆಯ ಹೆಸರಿನಲ್ಲಿ ಕರೆದುಕೊಂಡು ಹೋಗಿ, ಮುಸ್ಲಿಂ ಬಾಂಧವರನ್ನು ಜನರಲ್ಲಿ ಭಯೋತ್ಪಾದಕರಂತೆ ಬಿಂಬಿಸುತ್ತಿರುವುದು ಖಂಡನೀಯ. ಅವರು (ಎನ್ಐಎ) ಇದನ್ನು ಬದಲಾಯಿಸಿಕೊಳ್ಳಬೇಕು” ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಜವಾಹಿರುಲ್ಲಾ, “ಅರೇಬಿಕ್ ಭಾಷೆ ವಿಶ್ವದ ಹಲವು ದೇಶಗಳಲ್ಲಿ ಮಾತನಾಡುವ ಭಾಷೆಯಾಗಿದೆ. ಅರೇಬಿಕ್ ಅಧ್ಯಯನ ಮಾಡಿದ ಮಾಜಿ ಮತ್ತು ಪ್ರಸ್ತುತ ವಿದ್ಯಾರ್ಥಿಗಳ ಕುಟುಂಬಗಳನ್ನು ತನಿಖೆಯ ಹೆಸರಿನಲ್ಲಿ ಎನ್ಐಎ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಮುಸ್ಲಿಂ ಬಾಂಧವರ ಭವಿಷ್ಯವನ್ನು ಹಾಳುಮಾಡಿದ್ದಾರೆ. ಅವರ ಬಳಿಯಿದ್ದ ಲ್ಯಾಪ್‌ಟಾಪ್ ಮತ್ತು ನಗದನ್ನು ತೆಗೆದುಕೊಂಡು ಹೋಗಿದ್ದಾರೆ. ನಿರ್ದಿಷ್ಟವಾಗಿ ಅವರನ್ನು ಭಯೋತ್ಪಾದಕರಂತೆ ಚಿತ್ರಿಸಿ, ಮನೆಯನ್ನು ಖಾಲಿ ಮಾಡುವಂತೆ ಹೇಳಿ ಕಿರುಕುಳ ನೀಡುತ್ತಿದ್ದಾರೆ.

ಕೊಯಮತ್ತೂರು ಭಯೋತ್ಪಾದಕರ ಶಿಬಿರ ಎಂಬ ಚಿತ್ರಣವನ್ನು ಎನ್‌ಐಎ ಸೃಷ್ಟಿಸುತ್ತಿದೆ. ಮಾಲೆಗಾಂವ್ ಸ್ಫೋಟ ನಡೆಸಿದವರು ಯಾರು? ಅಭಿನವ್ ಭಾರತ್ ಎಂಬ ಸಂಘಟನೆಯೇ ರೈಲಿನಲ್ಲಿ ಬಾಂಬ್ ಸ್ಫೋಟ ನಡೆಸಿದ್ದು ಎಂಬ ವಿಷಯವನ್ನು ನಾವೇ (ಇಸ್ಲಾಮಿಕ್ ಸಂಸ್ಥೆಗಳು) ಕಂಡುಹಿಡಿದು ಹೇಳಿದ್ದು. ಅಲ್ಪಸಂಖ್ಯಾತರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಎನ್‌ಐಎ ಮೊಕದ್ದಮೆಗಳನ್ನು ದಾಖಲಿಸಿ ಶಿಕ್ಷೆ ನೀಡುತ್ತಿದೆ” ಎಂದರು.

“ಮೊಹಮದ್ ಅಜರುದ್ದೀನ್ ಈಗಾಗಲೇ ಕ್ರಿಮಿನಲ್ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಕಾರು ಸ್ಫೋಟ ಘಟನೆಗೂ, ಅರೇಬಿಕ್ ಭಾಷೆ ಓದಿದ ವಿದ್ಯಾರ್ಥಿಗಳಿಗೂ ಸಂಬಂಧ ಕಲ್ಪಿಸಿ ಎನ್ಐಎ ಪ್ರಕರಣ ದಾಖಲಿಸಿರುವುದು ಖಂಡನೀಯ” ಎಂದು ಹೇಳಿದ್ದಾರೆ. ಪತ್ರಿಕಾ ಘೋಷ್ಠಿಯಲ್ಲಿ ತಂದೆ ಪೆರಿಯಾರ್ ದ್ರಾವಿಡರ್ ಕಳಗಂ ಅಧ್ಯಕ್ಷ ಕೋವೈ ರಾಮಕೃಷ್ಣನ್ ಉಪಸ್ಥಿತರಿದ್ದರು.

ದೇಶ

ಕೊಯಮತ್ತೂರು ಜಿಲ್ಲೆಯ ಮೇಟ್ಟುಪಾಳ್ಯಂ ನಗರಸಭೆಯಲ್ಲಿ 33 ವಾರ್ಡ್‌ಗಳಿವೆ. ಅಧ್ಯಕ್ಷರಾಗಿ ಮೆಹ್ರಿಬಾ ಪರ್ವೀನ್, ಉಪಾಧ್ಯಕ್ಷರಾಗಿ ಅರುಳ್ ವಡಿವು ಇದ್ದಾರೆ. ಈ ಹಿನ್ನಲೆಯಲ್ಲಿ, ನಗರಸಭೆ ವ್ಯಾಪ್ತಿಯ 11ನೇ ವಾರ್ಡ್‌ನಲ್ಲಿ ಡಿಎಂಕೆ ನಗರ ಕಾರ್ಯದರ್ಶಿ ಮೊಹಮ್ಮದ್ ಯೂನಸ್ ಅವರ ಪತ್ನಿ ಜಮೃತ್ ಬೇಗಂ ವಾರ್ಡ್ ಸದಸ್ಯರಾಗಿ ಇದ್ದಾರೆ.

ಅವರ ವಾರ್ಡ್‌ನಲ್ಲಿ ತ್ಯಾಜ್ಯ ನೀರು ಕಾಲುವೆ ದುರಸ್ತಿ, ವಸತಿ ಪ್ರದೇಶದಲ್ಲಿ ಕಸ ಸಂಗ್ರಹ, ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಕಾಮಗಾರಿ ನಡೆಸಲು ನಗರಸಭೆ ಆಡಳಿತ ಮಂಡಳಿಗೆ ವಾರ್ಡ್ ಸದಸ್ಯೆ ಜಮೃತ್ ಬೇಗಂ ಹಲವು ಬಾರಿ ಒತ್ತಾಯಿಸಿದ್ದಾರೆ. ಆದರೆ ಇದಕ್ಕೆ ನಗರಸಭೆ ಅಧ್ಯಕ್ಷರು ಸೂಕ್ತ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.

ಏತನ್ಮಧ್ಯೆ, ಅವರ 11ನೇ ವಾರ್ಡ್‌ನಲ್ಲಿ 5 ದಿನಗಳಿಂದ ಕಸ ಸಂಗ್ರಹಿಸಲು ಸ್ವಚ್ಛತಾ ಕಾರ್ಯಕರ್ತರು ಬಂದಿಲ್ಲ ಎಂದು ಹೇಳಲಾಗುತ್ತಿದೆ. ಇದರಿಂದ ವಾರ್ಡ್ನ ಜನರು ಅವರ ಮನೆಗೆ ತೆರಳಿ ವಾಗ್ವಾದ ನಡೆಸಿದ್ದಾರೆ. ಇದರಿಂದ ಹತಾಶರಾದ ಜಮೃತ್ ಬೇಗಂ ಹಾಗೂ ಅವರ ಪುತ್ರರು ವಾರ್ಡ್ ವ್ಯಾಪ್ತಿಯಲ್ಲಿ ಸಂಗ್ರಹವಾದ ಕಸವನ್ನು ವಿಲೇವಾರಿ ಮಾಡುವ ಕಾರ್ಯದಲ್ಲಿ ತೊಡಗಿದರು.

ಇದೇ ವೇಳೆ ನಗರಸಭೆ ಆಡಳಿತ ಕಸ ಸಂಗ್ರಹಿಸದ ಕಾರಣ ವಾರ್ಡ್ ಸದಸ್ಯರೊಬ್ಬರು ತಮ್ಮ ಪುತ್ರರೊಂದಿಗೆ ಸೇರಿ ಕಸ ಎತ್ತುತ್ತಿರುವುದನ್ನು ಕಂಡ ಬಡಾವಣೆಯ ನಿವಾಸಿಗಳು ಮೊಬೈಲ್ ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.

A DMK councillor of the Mettupalayam Municipality collected waste from houses, allegedly after conservancy workers of the civic body failed to do their duty for five days. M.Jamruth Begum, councillor of ward no: 11 of the municipality, stepped in for conservancy work on Tuesday along with her sons.

ರಾಜಕೀಯ

ಬೆಂಗಳೂರು: ಬಿಜೆಪಿ ಮಾಜಿ ಮುಖಂಡ ಅಣ್ಣಾದೊರೈ ಅವರು, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ವಿರುದ್ಧ ಕೊಯಮತ್ತೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ. ಬಿಜೆಪಿಯ ಸ್ಥಳೀಯಾಡಳಿತ ಅಭಿವೃದ್ಧಿ ವಿಭಾಗದ ಕಾರ್ಯದರ್ಶಿಯಾಗಿದ್ದ ಅಣ್ಣಾದೊರೈ ಅವರನ್ನು 4 ದಿನಗಳ ಹಿಂದೆ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಈ ಹಿನ್ನಲೆಯಲ್ಲಿ ಕೊಯಮತ್ತೂರು ಪೊಲೀಸ್ ಕಮಿಷನರ್ ಕಚೇರಿ ಎದುರು ಅಣ್ಣಾದೊರೈ ಸುದ್ದಿಗಾರರನ್ನು ಭೇಟಿ ಮಾಡಿದರು.

“ನಾನು ಚೆನ್ನೈ, ಪಾಂಡಿಚೇರಿ ಮತ್ತು ಕೊಯಮತ್ತೂರಿನಲ್ಲಿ ‘ಪಳೆಯ ಸೋರು ಡಾಟ್ ಕಾಮ್’ ಅನ್ನು ನಡೆಸುತ್ತಿದ್ದೇನೆ. ಕೊಯಮತ್ತೂರಿನ ಕಟ್ಟಡ ಮಾಲೀಕರೊಂದಿಗೆ ನಮಗೆ ಸಮಸ್ಯೆ ಇತ್ತು, ಆದ್ದರಿಂದ ನಾವು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೇವೆ. ನಾನು ಬಿಜೆಪಿಯಲ್ಲಿದ್ದೇನೆ ಎಂಬ ಕಾರಣಕ್ಕೆ ಕಟ್ಟಡ ಮಾಲೀಕರು ಅಣ್ಣಾಮಲೈ ಅವರ ಬಳಿ ಮಾತನಾಡಿದ್ದಾರೆ. ಅಣ್ಣಾಮಲೈ ಆದೇಶದ ಮೇರೆಗೆ ಬಿಜೆಪಿ ಜಿಲ್ಲಾಧ್ಯಕ್ಷರು, ‘ಪಳೆಯ ಸೋರು ಡಾಟ್ ಕಾಮ್’ ನಡೆಸುತ್ತಿದ್ದ ನನ್ನ ಕಚೇರಿಯ ಬೀಗವನ್ನು ಒಡೆದು, ಒಳಗಿದ್ದ ಸಾಮಾನುಗಳನ್ನು ಕದ್ದು, ಬಿಜೆಪಿ ಧ್ವಜ ನೆಟ್ಟು, ಸೇವಾ ಕೇಂದ್ರ ಎಂಬ ಬೋರ್ಡನ್ನು ಹಾಕಿದ್ದಾರೆ.

ಬಿಜೆಪಿಯವರು ಈ ರೀತಿ ಅನ್ಯಾಯ ಮಾಡುತ್ತಾರೆ ಎಂದು ಗೊತ್ತಿದ್ದರೆ ನಾನು ಈ ಪಕ್ಷಕ್ಕೆ ಸೇರುತ್ತಿರಲಿಲ್ಲ. ಸ್ವಪಕ್ಷದ ಕಾರ್ಯಕರ್ತರನ್ನು ಕರೆದು ಪ್ರಶ್ನಿಸದೆ, ಪಕ್ಷದ ಕಾರ್ಯಕರ್ತರಿಂದಲೇ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ನಾನು ಮಾಲೀಕನಿಗೆ ಹಣ ಪಾವತಿಸುವುದಾಗಿಯೇ ಇರಲಿ, ಪ್ರಕರಣ ನ್ಯಾಯಾಲಯದಲ್ಲಿರುವಾಗ ಕಚೇರಿಯ ಪೀಠೋಪಕರಣಗಳನ್ನು ಒಡೆದು ಖಾಲಿ ಮಾಡುವುದು ಯಾವ ನ್ಯಾಯ? ನನ್ನನ್ನು ಬಿಜೆಪಿಯಿಂದ ಉಚ್ಚಾಟಿಸಿರುವ ವಿಷಯ ನಿನ್ನೆ ಬೆಳಗ್ಗೆಯಷ್ಟೇ ತಿಳಿದು ಬಂದಿತು. ಅಣ್ಣಾಮಲೈ ಇದರಲ್ಲಿ ನೇರವಾಗಿ ಭಾಗವಾಗಿದ್ದಾರೆ. ಆದ್ದರಿಂದಲೇ ಅವರ ವಿರುದ್ಧ ದೂರು ದಾಖಲಿಸಿದ್ದೇನೆ. ಎಲ್ಲರ ಮೇಲೂ FIR ದಾಖಲು ಮಾಡುವಂತೆ ಪೊಲೀಸ್ ಅಧಿಕಾರಿಯ ಬಳಿ ಮನವಿ ಮಾಡಿದ್ದೇನೆ” ಎಂದರು.

ರಾಜಕೀಯ

ಮಣಿಪುರದಲ್ಲಿ ಕ್ರಿಶ್ಚಿಯನ್ನರ ಮೇಲಿನ ದಾಳಿಯನ್ನು ಖಂಡಿಸಿ ಕೋಯಂಬತ್ತೂರಿನ ಉಕ್ಕಡಂ ಪ್ರದೇಶದಲ್ಲಿ ಎಸ್‌ಡಿಪಿಐ ಪಕ್ಷವು ಪ್ರತಿಭಟನೆಯನ್ನು ನಡೆಸಿತು.

ಮಣಿಪುರದಲ್ಲಿ ಕ್ರಿಶ್ಚಿಯನ್ನರ ಮೇಲಿನ ದಾಳಿಯನ್ನು ವಿರೋಧಿಸಿ ಎಸ್‌ಡಿಪಿಐ ಸದಸ್ಯರು ಕೊಯಮತ್ತೂರಿನಲ್ಲಿ ಮೇಣದಬತ್ತಿಯ ಪ್ರದರ್ಶನ ನಡೆಸಿದರು. ಇದರಲ್ಲಿ ಕ್ರೈಸ್ತರು, ಮುಸ್ಲಿಮರು, ವಿವಿಧ ಪಕ್ಷಗಳು ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಮಣಿಪುರದಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಕುಕಿ-ಮೈತೇಯಿ ಎಂಬ ಎರಡು ಪಂಗಡಗಳ ನಡುವೆ ತೀವ್ರ ಸಂಘರ್ಷ ನಡೆಯುತ್ತಿದೆ. ವಿವಿಧೆಡೆ ಬೆಂಕಿ ಹಚ್ಚಿದ ಘಟನೆಗಳೂ ನಡೆದಿವೆ. ಇದನ್ನು ತಡೆಯಲು ಸರ್ಕಾರ ಸೇನೆಯನ್ನು ನಿಯೋಜಿಸಿ ಹಲವು ಕಟ್ಟುನಿಟ್ಟಿನ ನಿರ್ಬಂಧ ಹಾಗೂ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕುಕಿ ಪಂಥದ ಚರ್ಚುಗಳನ್ನು ಗುರಿಯಾಗಿಸಿ ಮೈತೇಯ್ ಜನರು ನಡೆಸಿದ ಘಟನೆಗಳೂ ಈ ಗಲಭೆಯಲ್ಲಿ ನಡೆದಿವೆ. ವರದಿಗಳ ಪ್ರಕಾರ, ಇಲ್ಲಿಯವರೆಗೆ 25ಕ್ಕೂ ಹೆಚ್ಚು ಚರ್ಚ್‌ಗಳ ಮೇಲೆ ದಾಳಿ ನಡೆಸಲಾಗಿದೆ ಮತ್ತು ಮೂರು ಚರ್ಚ್‌ಗಳಿಗೆ ಬೆಂಕಿ ಹಚ್ಚಲಾಗಿದೆ.

ಈ ಸಂದರ್ಭದಲ್ಲಿ, ಮಣಿಪುರದಲ್ಲಿ ಕ್ರಿಶ್ಚಿಯನ್ನರ ಮೇಲಿನ ದಾಳಿಯನ್ನು ಖಂಡಿಸಿ ಎಸ್‌ಡಿಪಿಐ ಪಕ್ಷವು ಕೊಯಂಬತ್ತೂರಿನ ಉಕ್ಕಡಂ ಪ್ರದೇಶದಲ್ಲಿ ಮೇಣದಬತ್ತಿಯ ಪ್ರದರ್ಶನವನ್ನು ನಡೆಸಿತು. ಇದರಲ್ಲಿ ಎಸ್‌ಡಿಪಿಐ, ಮುಸ್ಲಿಮರು, ಕ್ರಿಶ್ಚಿಯನ್ನರು, ವಿಡುದಲೈ ಚಿರುತ್ತೈಗಳ್ ಸೇರಿದಂತೆ ಪಕ್ಷಗಳು ಭಾಗವಹಿಸಿ ಮಣಿಪುರದ ಘಟನೆಯನ್ನು ಖಂಡಿಸಿ ಮತ್ತು ಅಲ್ಲಿ ನಡೆಯುತ್ತಿರುವ ಧಾರ್ಮಿಕ ಸಂಘರ್ಷಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಡಿ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಎ.ಮುಸ್ತಫಾ ವಹಿಸಿದ್ದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ವಿ.ಎಂ.ಅಬು ತಾಹಿರ್, ರಾಜ್ಯ ಕಾರ್ಯದರ್ಶಿ ಹಾಗೂ ವ್ಯಾಪಾರಿಗಳ ಸಂಘದ ಮುಖಂಡ ಎ.ಅಬ್ದುಲ್ ಕರೀಂ, ಎನ್.ರಘುಪು ನಿಸ್ತಾರ್-ರಾಜ್ಯ ಪ್ರಧಾನ ಕಾರ್ಯದರ್ಶಿ (ಎಸ್‌ಡಿಪಿಐ ಟ್ರೇಡ್ ಯೂನಿಯನ್), ಕು.ರಾಮಕೃಷ್ಣನ್- ಪ್ರಧಾನ ಕಾರ್ಯದರ್ಶಿ, ತಂದೈ ಪೆರಿಯಾರ್ ದ್ರಾವಿಡರ್ ಕಳಗಂ, ಸುಸಿ ಕಲೈಯರಸನ್-ಅಧ್ಯಕ್ಷರು, ಕೊಯಮತ್ತೂರು ವಿಡುದಲೈ ಚಿರುತ್ತೈಗಳ್,  ಕಾಮ್ರೇಡ್ ಮು.ಇಲವೇನಿಲ್-ರಾಜ್ಯ ಕಾರ್ಯದರ್ಶಿ, ತಮಿಳು ಟೈಗರ್ಸ್ ಪಾರ್ಟಿ, ಮುಂತಾದವರು ಉಪಸ್ಥಿತರಿದ್ದರು.