ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Dravida Model Archives » Dynamic Leader
October 23, 2024
Home Posts tagged Dravida Model
ರಾಜಕೀಯ

ಚೆನ್ನೈ: 2021ರ ವಿಧಾನಸಭೆ ಚುನಾವಣೆಗೂ ಮುನ್ನ ಪ್ರಕಟಿಸಲಾದ ಡಿಎಂಕೆ ಚುನಾವಣಾ ಪ್ರಣಾಳಿಕೆಯಲ್ಲಿ ‘ತಮಿಳುನಾಡಿನ ಎಲ್ಲ ಗೃಹಿಣಿಯರಿಗೆ ಮಾಸಿಕ ರೂ.1,000 ಹಕ್ಕುಭತ್ಯೆ ನೀಡುತ್ತೇವೆ’ ಎಂದು ಘೋಷಿಸಲಾಗಿತ್ತು.

ಡಿಎಂಕೆ ಚುನಾವಣೆಯಲ್ಲಿ ಗೆದ್ದು ತಮಿಳುನಾಡಿನಲ್ಲಿ ಸರ್ಕಾರ ರಚಿಸಿದಾಗ, ಹಲವಾರು ಘೋಷಣೆಗಳನ್ನು ಜಾರಿಗೆ ತಂದರೂ, ಮನೆಯ ಎಜಮಾನಿಗೆ ತಿಂಗಳಿಗೆ ರೂ.1,000 ಹಕ್ಕುಭತ್ಯೆ ನೀಡುವ ಯೋಜನೆಯನ್ನು ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಏತನ್ಮಧ್ಯೆ, ತಮಿಳುನಾಡು ವಿಧಾನಸಭೆಯಲ್ಲಿ ಮಂಡಿಸಲಾದ 2023-24ನೇ ಸಾಲಿನ ಬಜೆಟ್‌ನಲ್ಲಿ ಮನೆಯ ಎಜಮಾನಿಗೆ ಮಾಸಿಕ ರೂ.1,000 ಹಕ್ಕುಭತ್ಯೆ ನೀಡುವ ಯೋಜನೆಗೆ ರೂ.7 ಸಾವಿರ ಕೋಟಿ ಹಣವನ್ನು ನಿಗದಿಪಡಿಸಲಾಯಿತು. ಮತ್ತು ಮಾಜಿ ಮುಖ್ಯಮಂತ್ರಿ ದಿವಂಗತ ಅಣ್ಣಾದುರೈ ಅವರ ಜನ್ಮದಿನವಾದ ಸೆಪ್ಟೆಂಬರ್ 15 ರಂದು (ಇಂದು) ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಘೋಷಿಸಿತು.

ಕಳೆದ ಜುಲೈ 24 ರಂದು ಧರ್ಮಪುರಿ ಜಿಲ್ಲೆಯ ತೊಪ್ಪೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಮಹಿಳೆಯರು ಅರ್ಜಿ ಸಲ್ಲಿಸುವ ಶಿಬಿರವನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಉದ್ಘಾಟಿಸಿದರು. ಇದಕ್ಕಾಗಿ ರಾಜ್ಯಾದ್ಯಂತ 35 ಸಾವಿರದ 925 ಶಿಬಿರಗಳನ್ನು ನಡೆಸಲಾಗಿದೆ. 68 ಸಾವಿರದ 190 ಸ್ವಯಂಸೇವಕರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸರ್ಕಾರವು ಕಲೈಜ್ಞರ್ ಮಹಿಳಾ ಹಕ್ಕುಭತ್ಯೆ ಯೋಜನೆಗೆ ವಿವರವಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಈ ಯೋಜನೆಗೆ ಒಂದು ಕೋಟಿ 63 ಲಕ್ಷ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಸುಮಾರು 56 ಲಕ್ಷದ 50 ಸಾವಿರ ಅರ್ಜಿಗಳು ಅನರ್ಹವೆಂದು ತಿರಸ್ಕೃತಗೊಂಡಿವೆ. ಅಂತಿಮವಾಗಿ 1 ಕೋಟಿ 6 ಲಕ್ಷದ 55 ಸಾವಿರ ಅರ್ಹ ಅರ್ಜಿಗಳನ್ನು ಸ್ವೀಕರಿಸಲಾಯಿತು. ಈ ಹಿನ್ನಲೆಯಲ್ಲಿ, ಒಂದು ಕೋಟಿ ಮನೆಯ ಎಜಮಾನಿಗೆ ಮಾಸಿಕ ರೂ.1,000 ನೀಡುವ ಕಲೈಜ್ಞರ್ ಮಹಿಳಾ ಹಕ್ಕುಭತ್ಯೆ ಯೋಜನೆಯನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಇಂದು ಉದ್ಘಾಟಿಸಿದರು. ಈ ಯೋಜನೆಯನ್ನು ಇತರ ಜಿಲ್ಲೆಗಳಲ್ಲಿ ಆಯಾ ಜಿಲ್ಲೆಯ ಸಚಿವರು ಉದ್ಘಾಟಿಸಿದ್ದಾರೆ.

ಈ ಯೋಜನೆಯಡಿ, ಅರ್ಹ ಗೃಹಿಣಿಯರ ಬ್ಯಾಂಕ್ ಖಾತೆಗಳಿಗೆ ಈಗಾಗಲೇ ಒಂದು ರೂಪಾಯಿಯನ್ನು ಕಳುಹಿಸಿಕೊಟ್ಟು ಪರೀಕ್ಷಿಸಲಾಗಿದೆ. ಈ ನಡುವೆ ನಿನ್ನೆಯಿಂದ ಹಲವರ ಬ್ಯಾಂಕ್ ಖಾತೆಗೆ ರೂ.1000 ಜಮಾ ಆಗಿದೆ. ಆದರೆ, ತಕ್ಷಣವೇ ಬ್ಯಾಂಕ್ ಖಾತೆಯಿಂದ ಹಣ ತೆಗೆಯಲು ಸಾಧ್ಯವಾಗಲಿಲ್ಲ. ಖಾತೆಯಿಂದ ಇಂದು ಹಣವನ್ನು ತೆಗೆಯಬಹುದು. ಅಲ್ಲದೆ, ತಿರಸ್ಕರಿಸಿದ ಅರ್ಜಿದಾರರಿಗೆ ಮರು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ದಾಖಲೆ ಪರಿಶೀಲನೆಯಲ್ಲಿ ಅರ್ಹ ಫಲಾನುಭವಿಗಳಾಗಿದ್ದರೆ ಅವರನ್ನೂ ಕಲೈಜ್ಞರ್ ಮಹಿಳಾ ಹಕ್ಕುಭತ್ಯೆ ಯೋಜನೆಗೆ ಸೇರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಉದ್ಯೋಗ ವಿದೇಶ

ತಮಿಳುನಾಡಿನಲ್ಲಿ ‘ಸರ್ವ-ಜಾತಿ ಪುರೋಹಿತರು’ ಯೋಜನೆಯಡಿ ಅರ್ಚಕರಾಗಲು ಮೂವರು ಮಹಿಳೆಯರು ಕೋರ್ಸ್ ಪೂರ್ಣಗೊಳಿಸಿದ್ದಾರೆ.

ತಮಿಳುನಾಡು ಸರ್ಕಾರವು ಎಲ್ಲಾ ಸಮುದಾಯಗಳ ಪುರೋಹಿತರಿಗೆ ತರಬೇತಿ ನೀಡುವ ‘ಅರ್ಚಕರ್ ಪಯಿರ್ಚಿ ಪಲ್ಲಿ’ (ಪುರೋಹಿತರ ತರಬೇತಿ ಶಾಲೆಗಳು) ನಡೆಸುತ್ತದೆ. ಇದೇ ಮೊದಲ ಬಾರಿಗೆ ಮಹಿಳೆಯರು ದಾಖಲಾಗಿದ್ದು ಮತ್ತು ಕೋರ್ಸ್ ಪೂರ್ಣಗೊಳಿಸಿದ್ದಾರೆ.

ಇದರ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಮ್ಮ ಎಕ್ಸ್ ಸೈಟ್‌ನಲ್ಲಿ, (ಹಿಂದೆ ಟ್ವಿಟರ್) “ಮಹಿಳೆ ವಿಮಾನವನ್ನು ಚಲಿಸಿದರೂ, ಬಾಹ್ಯಾಕಾಶಕ್ಕೆ ಹೋಗಿ ಬಂದಿದ್ದರೂ, ದೇವಾಲಯದ ಗರ್ಭಗುಡಿಗಳು ಅವರು ಪ್ರವೇಶಿಸಲು ಸಾಧ್ಯವಾಗದ ಸ್ಥಳಗಳಾಗಿದ್ದವು. ಸ್ತ್ರೀ ದೇವತೆಗಳ ದೇವಾಲಯಗಳ ವಿಷಯವೂ ಇದೇ ಆಗಿತ್ತು.

ಆದರೆ, ಇನ್ನು ಮುಂದೆ ಹಾಗಾಗುವುದಿಲ್ಲ! ಎಲ್ಲ ಜಾತಿಯವರೂ ಅರ್ಚಕರಾಗಬಹುದು ಎಂಬ ಪೆರಿಯಾರ್ ಅವರ ಎದೆಗೆ ಚುಚ್ಚಿದ ಮುಳ್ಳನ್ನು ನಮ್ಮ ದ್ರಾವಿಡ ಮಾದರಿಯ ಆಡಳಿತ ತೆಗೆದುಹಾಕಿದಾಗ, ಗರ್ಭಿಣಿಯರೂ ಗರ್ಭಗುಡಿಯೊಳಗೆ…. ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪೋಸ್ಟ್ ಮಾಡಿದ್ದಾರೆ.

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ದ್ರಾವಿಡ ಚಳವಳಿಯ ಉಗಮಕ್ಕೆ ಕೆಲವು ವರ್ಷಗಳ ಹಿಂದೆ ಅಂದರೆ, 1912ರಲ್ಲಿ ಡಾ.ಸಿ.ನಟೇಶನಾರ್, ಅವರಂತಹ ಕೆಲವು ವಕೀಲರು ಒಟ್ಟುಗೂಡಿ, ಚೆನ್ನೈ ಕಾಲೇಜುಗಳಲ್ಲಿ ಓದುತ್ತಿದ್ದ ಬ್ರಾಹ್ಮಣೇತರ ವಿದ್ಯಾರ್ಥಿಗಳಿಗೆ ಇತರೆ ಹಾಸ್ಟೆಲ್‌ಗಳಲ್ಲಿ ಉಳಿದು ಓದುವ ಅವಕಾಶವನ್ನು ನಿರಾಕರಿಸಿದ್ದರಿಂದ ತಮ್ಮ ದುಸ್ಥಿತಿಯ ನಡುವೆಯೂ ತಾವೇ ತಿರುವಲ್ಲಿಕೇಣಿಯಲ್ಲಿ ‘ದ್ರಾವಿಡನ್ ಹಾಸ್ಟೆಲ್’ ನಡೆಸಿ ಅನೇಕರು, ತುಳಿತಕ್ಕೊಳಗಾದವರ ಶಿಕ್ಷಣಕ್ಕೆ ಸಹಾಯ ಮಾಡಿದರು.

ಜಸ್ಟೀಸ್ ಪಾರ್ಟಿಯ ಸಂಸ್ಥಾಕರು-1920

ಶೂದ್ರನಿಗೆ ಶಿಕ್ಷಣವಿಲ್ಲ ಎಂದ ಮನುಧರ್ಮ:
ಶೂದ್ರ, ಪಂಚಮ ಹಾಗೂ ಕೆಳವರ್ಗದವರಿಗೆ ಶಿಕ್ಷಣ ನೀಡಬಾರದು ಎಂಬ ಮನು ಧರ್ಮದ ನೀತಿಯನ್ನು ಪಾಲಿಸಿಕೊಂಡು ಬಂದಿತು ಇತಿಹಾಸ; ಮನು ಧರ್ಮದ ಪ್ರಕಾರ ರಾಜರ ಕಾಲದಲ್ಲೂ ಬ್ರಾಹ್ಮಣ ಮಕ್ಕಳಿಗೆ ಮಾತ್ರ ಓದಲು ಅವಕಾಶವಿತ್ತು; ಇತರರಿಗೆ ಇಲ್ಲ! ಮಧುರೈ ನಾಯಕರ ಆಳ್ವಿಕೆಯಲ್ಲಿ, ಇಟಾಲಿಯನ್ ಪಾದ್ರಿ ರಾಬರ್ಟ್ ಡಿ ನೊಬಿಲಿ ಅವರು ಅಧ್ಯಯನ ಮಾಡಿ ಹೇಳಿದಂತೆ “10 ಸಾವಿರ ಬ್ರಾಹ್ಮಣ ಮಕ್ಕಳು ಸಂಸ್ಕೃತ ಶಿಕ್ಷಣವನ್ನು ಪಡೆದಿದ್ದಾರೆ” ಎಂದು ಹೇಳಿದ್ದಾರೆ. (1610ನೇ ವರ್ಷ) ಅದನ್ನು ಹಿಮ್ಮೆಟ್ಟಿಸಿ, ತುಳಿತಕ್ಕೊಳಗಾದವರಿಗೆ ಶಿಕ್ಷಣ, ಆರೋಗ್ಯ, ವೈಚಾರಿಕತೆ ಮತ್ತು ಮಹಿಳಾ ಹಕ್ಕುಗಳನ್ನು ನೀಡಲು ಜನ್ಮ ತಾಳಿದ್ದೇ ಜಸ್ಟೀಸ್ ಪಾರ್ಟಿ ಎಂಬ ದ್ರಾವಿಡ ಹಾಗೂ ಸ್ವಾಭಿಮಾನ ಚಳುವಳಿ!

ಕೆ.ಕಾಮರಾಜ್

ಜಸ್ಟೀಸ್ ಪಾರ್ಟಿಯ ಆಹಾರ ಕಾರ್ಯಕ್ರಮ:
ಸರ್ ಪಿಟ್ಟಿ ತ್ಯಾಗರಾಯರು ಚೆನ್ನೈ ಪ್ರಾಂತ್ಯದ ಅಧ್ಯಕ್ಷರಾಗಿ (ಆಗ ಮೇಯರ್ ಹುದ್ದೆ ಇರಲಿಲ್ಲ) ಚೆನ್ನೈ ಕಾರ್ಪೊರೇಷನ್ ಶಾಲೆಗಳಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳಿಗೆ ಆಹಾರ ನೀಡುವ ಯೋಜನೆಯನ್ನು ಮೊಟ್ಟ ಮೊದಲ ಬಾರಿಗೆ ಪ್ರಾರಂಭಿಸಿದರು. ಬ್ರಿಟಿಷ್ ಸರ್ಕಾರವು ಅದನ್ನು ಸ್ವಲ್ಪ ಕಾಲದವರೆಗೆ ನಡೆಸಲು ಅವಕಾಶ ಮಾಡಿಕೊಟ್ಟಿತು. ನಂತರ ಅನುದಾನ ನಿರಾಕರಿಸಿದ ಕಾರಣ ಯೋಜನೆಯನ್ನು ಅಲ್ಲಿಗೆ ನಿಲ್ಲಿಸಬೇಕಾಯಿತು; ಆಗ ಸರ್ಕಾರಕ್ಕೆ ಪೂರ್ಣ ಅಧಿಕಾರ ಇರಲಿಲ್ಲ!

ಎಂ.ಕರುಣಾನಿಧಿ

ಸ್ವಾತಂತ್ರ್ಯದ ನಂತರ ಮುಖ್ಯಮಂತ್ರಿಯಾದ ಕಾಂಗ್ರೆಸ್ ನ ಕೆ.ಕಾಮರಾಜ ಅವರು ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಊಟದ ಕಾರ್ಯಕ್ರಮವನ್ನು ಆರಂಭಿಸಿ, ಬಡಮಕ್ಕಳು ಓದುವುದನ್ನು ಮುಂದುವರಿಸುವಂತೆ ಮಾಡಿದರು! ಬಡ ಮಕ್ಕಳು, ಹಳ್ಳಿಗಳಲ್ಲಿನ ಜನರು, ತುಳಿತಕ್ಕೊಳಗಾದ ಸಮುದಾಯದ ಮಕ್ಕಳು ಮುಂದುವರಿದು ಓದಿ ಪ್ರಗತಿ ಹೊಂದಲು ಈ ಮಧ್ಯಾಹ್ನದ ಊಟದ ಕಾರ್ಯಕ್ರಮವು ಮೆಟ್ಟಿಲು (ಆಕ್ಷನ್ ಬೂಸ್ಟರ್) ಆಗಿ ಸಹಾಯ ಮಾಡಿತು! ಅವರ ನಂತರ ಮುಖ್ಯಮಂತ್ರಿಯಾದ ಡಿಎಂಕೆ ಪಕ್ಷದ ಸಿ.ಎಂ.ಅಣ್ಣಾದುರೈ ಹಾಗೂ ಎಂ.ಕರುನಾನಿಧಿ ಆ ಯೋಜನೆಯನ್ನು ಮುಂದುವರಿಸಿಕೊಂಡು ಹೋದರು.

ಎಂಜಿಆರ್

ನಂತರ ಮುಖ್ಯಮಂತ್ರಿಯಾದ ಎಂ.ಜಿ.ರಾಮಚಂದ್ರನ್ (ಎಂಜಿಆರ್) ನೇತೃತ್ವದ ಎಡಿಎಂಕೆ ಸರ್ಕಾರ ಅಧಿಕಾರಕ್ಕೆ ಬಂದಾಗ. ಮಧ್ಯಾಹ್ನ ಊಟ ಕಾರ್ಯಕ್ರಮ ‘ಪೌಷ್ಟಿಕ ಆಹಾರ ಯೋಜನೆ’ ಎಂಬ ಹೆಸರಿನಲ್ಲಿ ಮುಂದುವರೆಯಿತು. ಆನಂತರ ಎಂ.ಕರುಣಾನಿಧಿ ನೇತೃತ್ವದ ಡಿಎಂಕೆ ಸರ್ಕಾರ ಮತ್ತೆ ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೇಲೆ, ಎರಡು ಮೊಟ್ಟೆ ಅಥವಾ ಬಾಳೆಹಣ್ಣು ನೀಡಿ ಅದನ್ನು ನಿಜವಾಗಿಯೂ ಪೌಷ್ಟಿಕಾಂಶವನ್ನಾಗಿ ಮಾಡಿದರು. ಮತ್ತು ಮಕ್ಕಳ ಹಸಿವು ನೀಗಿಸುವ ಜೊತೆಗೆ ಮಕ್ಕಳ ಪೋಷಣೆಯನ್ನು ಬೆಂಬಲಿಸಲು ಮತ್ತು ಮಕ್ಕಳ ಯೋಗಕ್ಷೇಮಕ್ಕೆ ಸಹಾಯ ಮಾಡಲು ಅವರು ಈ ಕಾರ್ಯಕ್ರಮವನ್ನು ಮತ್ತಷ್ಟು ಪರಿಷ್ಕರಿಸಿದರು. ಮುಂದಿನ ದಿನಗಳಲ್ಲಿ ಆ ಯೋಜನೆಯನ್ನು ಜೆ.ಜಯಲಲಿತಾ ನೇತೃತ್ವದ ಎಐಎಡಿಎಂಕೆ ಸರ್ಕಾರವು ಕೂಡ ಮುಂದುವರಿಸಿತು.

ಜೆ.ಜಯಲಲಿತಾ

ಮುಂದುವರಿದು, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ದ್ರಾವಿಡ ಮಾದರಿ ಸರ್ಕಾರದ ಎರಡು ವರ್ಷಗಳ ಆಡಳಿತದಲ್ಲಿ, ಕೆಲವು ಸರ್ಕಾರಿ ಶಾಲೆಗಳಲ್ಲಿ ಮೊದಲ ಹಂತವಾಗಿ ಮಧ್ಯಾಹ್ನದ ಊಟದ ಜೊತೆಗೆ ಉಪಹಾರವನ್ನೂ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಎಂ.ಕರುಣಾನಿಧಿ ಶತಮಾನೋತ್ಸವದ ಸಂದರ್ಭದಲ್ಲಿ (25.8.2023) ರಾಜ್ಯದಾದ್ಯಂತ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಅಪರೂಪದ ಹಸಿವು ನೀಗಿಸಿ ಶಿಕ್ಷಣ (ಮಧ್ಯಾಹ್ನದ ಊಟದ ಜೊತೆಗೆ ಉಪಹಾರ) ನೀಡುವ ವಿನೂತನ ಕಾರ್ಯಕ್ರಮವನ್ನು ಎಂ.ಕರುಣಾನಿಧಿ ಅವರು ಶಿಕ್ಷಣ ಪಡೆದ ತಂಜಾವೂರಿನ ತಿರುಕ್ಕುವಲದಲ್ಲಿನ ಶಾಲೆಯಲ್ಲಿ ಪ್ರಾರಂಭಿಸಿದ್ದಾರೆ.

ಎಂ.ಕೆ.ಸ್ಟಾಲಿನ್

ಓದಿ… ಓದಿ… ಓದಿ… ಎಂದು ಈ ಹಿಂದೆ ಹೇಳಿದಾಗ ಹಳ್ಳಿಯ ಬಡ ವಿದ್ಯಾರ್ಥಿಗಳು, ಬಡತನದ ಕಾರಣಗಳಿಂದ ದನ-ಕರುಗಳನ್ನು ಮೇಯಿಸಲು ಮುಂದಾಗಿದ್ದರು. ಹಸಿವು, ಹಸಿವು ಎಂಬ ಪರಿಸ್ಥಿತಿಯನ್ನು ಬದಲಾಯಿಸಿದ ಕರ್ಮವೀರ ಕಾಮರಾಜರು ಮಧ್ಯಹ್ನದ ಊಟದ ಕಾರ್ಯಕ್ರಮವನ್ನು ತಂದು ಹಸಿವು ನೀಗಿಸಿ ಶಿಕ್ಷಣ ನೀಡುವ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಬಂದ ಸರ್ಕಾರಗಳು ಆ ಯೋಜನೆಯನ್ನು ವಿಸ್ತರಿಸಿ, ಪೌಷ್ಟಿಕ ಆಹಾರವನ್ನಾಗಿ ಪರಿವರ್ತಿಸಿತು. ಇದೀಗ ಬಂದಿರುವ ಡಿಎಂಕೆ ಸರ್ಕಾರ ವಿದ್ಯಾರ್ಥಿಗಳು ಹಸಿವಿನಿಂದ ಶಿಕ್ಷಣ ಪಡೆಯಬಾರದು ಎಂಬ ಉದ್ದೇಶದಿಂದ ಉಪಹಾರ ಸೇವಿಸಿ ತೃಪ್ತರಾಗಿ ನಂತರ ತರಗತಿಯಲ್ಲಿ ಕೂತು ಶಿಕ್ಷಣ ಪಡೆಯಲಿ ಎಂದು ತೀರ್ಮಾನಿಸಿ ಈ ಯೋಜನೆಯನ್ನು ಜಾರಿಗೆ ತಂದಿರುವುದು ಒಂದು ದೊಡ್ಡ ಶೈಕ್ಷಣಿಕ ಕ್ರಾಂತಿಯೇ ಆಗಿದೆ!

ಉಪಹಾರ ಸೇವಿಸುತ್ತಿರುವ ಶಾಲಾ ಮಕ್ಕಳು

ಆರ್ಥಿಕ ಮುಗ್ಗಟ್ಟು ಸರಕಾರದ ಗಂಟಲು ಕಟ್ಟುತ್ತಿರುವ ಈ ಸಂದರ್ಭದಲ್ಲಿ ಈ ಯೋಜನೆಗೆ ಆದ್ಯತೆ ನೀಡಲಾಗಿದ್ದು, 17 ಲಕ್ಷ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಈ ಯೋಜನೆಯ ಮೂಲಕ ಕಾಯಕಲ್ಪ ನೀಡಲಾಗಿದೆ. ಈ ಯೋಜನೆ ರೂಪಿಸಿದ ಮಾನ್ಯ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಮೆಚ್ಚಲೇಬೇಕು. ಇದಕ್ಕಾಗಿ ಮುಖ್ಯಮಂತ್ರಿಗಳು ಪ್ರತ್ಯೇಕ ನಿಧಿಯನ್ನು ರಚಿಸಿ ಟ್ರಸ್ಟ್‌ ಮಾಡಿ, ಜನರಲ್ಲಿ ಸುಸ್ಥಿತಿಯಲ್ಲಿರುವವರು ದೇಣಿಗೆ ನೀಡುವಂತೆ ನೋಡಿಕೊಂಡು ಎಲ್ಲಾ ಶಾಲೆಗಳಲ್ಲಿ, ಖಾಸಗಿ ಶಾಲೆಗಳಲ್ಲಿಯೂ ಸಹ ಅವರ ಜವಾಬ್ದಾರಿಯಲ್ಲೇ ಮಕ್ಕಳಿಗೆ ಬೆಳಗಿನ ಉಪಾಹಾರವನ್ನು ನೀಡಬಹುದು. ಆಹಾರದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬಾರದು; ಸ್ವಚ್ಛತೆ ಸೇರಿದಂತೆ!

ಅತಿಯಾದ ನಿದ್ದೆ ಮಕ್ಕಳಿಗೆ ಬಾರದ ಆಹಾರವಾಗಿದ್ದು, ಅದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಲು ತಜ್ಞರು ಯೋಜಿಸಿ ಪರಿಷ್ಕರಿಸಬೇಕು. ಸನಾತನ ಶಿಕ್ಷಣದ ಕಣ್ಣುಗಳನ್ನು ಇರಿಯುತ್ತದೆ ಮತ್ತು ಕುಲ ಶಿಕ್ಷಣವನ್ನು ಹೇರುತ್ತದೆ. ದ್ರಾವಿಡವು ಹಸಿವನ್ನು ನೀಗಿಸಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತದೆ. ಇದೇ ಎರಡರ ನಡುವಿನ ವ್ಯತ್ಯಾಸ!

ದೇಶ

ಮೋದಿಯ ಧಾರ್ಮಿಕ ಆರ್ಯ ಮಾದರಿಯನ್ನು ಸೋಲಿಸಲು ನಾಯಕರು ಮತ್ತು ಕಾರ್ಯಕರ್ತರ ಪಡೆ ಸಾಲುವುದಿಲ್ಲ; ಮೋದಿ ಮಾದರಿಯನ್ನು ಸೋಲಿಸಲು ಪೆರಿಯಾರ್ ಅವರ ದ್ರಾವಿಡ ಮಾದರಿಯೇ ಸರಿಯಾದ ಅಸ್ತ್ರ. ಎಂದು ಡಿಎಂಕೆ ಸಂಸದ ಎ.ರಾಜ ಹೇಳಿದ್ದಾರೆ.

ನೆನ್ನೆ ತಿರುಚ್ಚಿಯಲ್ಲಿ ಡಿಎಂಕೆ ತರಬೇತಿ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ರಾಜ, “ಇಂದು ಜಗತ್ತು ಭಾರತವನ್ನು ನೋಡಿ ಉಗುಳುತ್ತಿದೆ. ನಮ್ಮ ಊರಿನಲ್ಲಿ ಹಲವು ಜಾತಿ ಭೇದಗಳಿವೆ. ಬಡವ-ಶ್ರೀಮಂತ ಎಂಬ ಭೇದವಿದೆ. ಆದರೆ ಅದು ಯಾವುದೇ ಜಾತಿಯ ಮಹಿಳೆಯಾಗಿರಲಿ. ಆ ಮಹಿಳೆಯನ್ನು ಯಾರಾದರೂ ವಿವಸ್ತ್ರಗೊಳಿಸಲು ಸಾಧ್ಯವೇ? ನಾವು ಬಿಟ್ಟುಬಿಡುತ್ತೇವಾ? ಜಾತಿ ಭೇದ ನೋಡುವವರೂ ಕೂಡ, ಬೇರೆ ಜಾತಿಯ ಮಹಿಳೆಗೆ ಅನ್ಯಾಯವಾಗುತ್ತಿದ್ದರೆ ಪ್ರಶ್ನೆ ಮಾಡುತ್ತಾರೆ. ಈ ಮಣ್ಣಿನಲ್ಲಿ ಮಹಿಳೆಗೆ ಪ್ರತ್ಯೇಕ ಗೌರವವಿದೆ. ಆದರೆ ಇದು ಮೋದಿಯ ಬಳಿ ಕಾಣತ್ತಿಲ್ಲ.

ಒಂದು ಕಡೆ ಭ್ರಷ್ಟಾಚಾರ; ಒಂದು ಕಡೆ ಸರ್ವಾಧಿಕಾರ; ಇನ್ನೊಂದು ಕಡೆ ಧಾರ್ಮಿಕತೆ. ಮತೀಯತೆ ಮತ್ತು ಭ್ರಷ್ಟಾಚಾರ ಸೇರಿಕೊಂಡು ಡಿಎಂಕೆ ಪಕ್ಷವನ್ನು ನೋಡಿ, ಇದೊಂದು ಭ್ರಷ್ಟ ಪಕ್ಷ ಮತ್ತು ಕುಟುಂಬ ಆಡಳಿತ ಎಂದು ಹೇಳುತ್ತಿದೆ. ಹೌದು, ಇದು ಕುಟುಂಬ ಆಡಳಿತವೇ? ಗೋಪಾಲಪುರಂನ ಮನೆಯನ್ನು ಅಡಮಾನವಿಟ್ಟು, ಮಿಸಾದಲ್ಲಿ ಬಂಧಿತರಾಗಿ ಒಂದು ವರ್ಷಗಳಿಗೂ ಮೇಲಾಗಿ ಜೈಲಿನಲ್ಲಿದ್ದ ಕಾರ್ಯಕರ್ತರ ಕುಟುಂಬಕ್ಕೆ ಹಣ ಕಳುಹಿಸಿದ ಕುಟುಂಬದ ಯಜಮಾನನೇ ನಮ್ಮ ಕರುಣಾನಿಧಿ. ಈ ರೀತಿ ನೋಡುವುದಾದರೆ ಇದು ಕುಟುಂಬ ಆಡಳಿತವೇ? ನಮ್ಮ ಕುಟುಂಬವನ್ನು ಪ್ರಶ್ನಿಸುವ ಯೋಗ್ಯತೆ ನಿಮಗೆ (ಬಿಜೆಪಿ) ಇಲ್ಲ.

ಮೋದಿ ವಿರುದ್ಧ ಉತ್ತರದ ರಾಜ್ಯಗಳಲ್ಲಿ ದೊಡ್ಡ ಪಡೆಯೇ ಸೇರುತ್ತಿದೆ. ಆದರೆ ಮೋದಿ ಎಂಬ ಮತೀಯವಾದವನ್ನು ಸೋಲಿಸಲು ಈ ಪಡೆ ಸಾಲುವುದಿಲ್ಲ. ತತ್ವದ ಅಗತ್ಯವಿದೆ. ಪೆರಿಯಾರ್ ರವರ ದ್ರಾವಿಡ ತತ್ವವು ಮೋದಿಯನ್ನು ಬೀಳಿಸಬಲ್ಲ ಸರಿಯಾದ ಆಯುಧವಾಗಿದೆ. ಮೋದಿಯವರ ಆರ್ಯ ಮಾದರಿಯನ್ನು ಪೆರಿಯಾರ್ ಅವರ ದ್ರಾವಿಡ ಮಾದರಿಯಿಂದ ಮಾತ್ರ ಸೋಲಿಸಲು ಸಾಧ್ಯ” ಎಂದರು.