ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
G20 Archives » Dynamic Leader
October 23, 2024
Home Posts tagged G20
ದೇಶ

ತಂಜಾವೂರು: ಅಷ್ಟ ಖನಿಜಗಳಿಂದ ಮಾಡಲಾದ 28 ಅಡಿ ಎತ್ತರದ ನಟರಾಜನ ಪ್ರತಿಮೆ ದೆಹಲಿಯ ಜಿ-20 ಸಮ್ಮೇಳ ಸಭಾಂಗಣದ ಮುಂಭಾಗದಲ್ಲಿ ಪ್ರತಿಷ್ಠಾಪಿಸಲು ತಂಜಾವೂರಿನ ಸ್ವಾಮಿಮಲೈನಿಂದ ಹೊರಟಿದೆ.

ಜಿ20 ಶೃಂಗಸಭೆ ಮುಂದಿನ ತಿಂಗಳು 9 ಮತ್ತು 10 ರಂದು ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯಲಿದೆ. ಸಮ್ಮೇಳನದ ಸ್ಥಳದ ಮುಂಭಾಗದಲ್ಲಿ ಸ್ಥಾಪಿಸಲು, ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ, ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ವತಿಯಿಂದ, ಚೋಳರ ಕಾಲದ ನಟರಾಜನ ಪ್ರತಿಮೆಯನ್ನು ವಿನ್ಯಾಸಗೊಳಿಸಲು ನಿರ್ಧರಿಸಲಾಯಿತು.

ಇದನ್ನೂ ಓದಿ: ಆಂಧ್ರಪ್ರದೇಶದಲ್ಲಿ ಹುಂಡಿಯಲ್ಲಿ ರೂ.100 ಕೋಟಿ ಚೆಕ್ ಪಾವತಿಸಿದ ಭಕ್ತ; ಬ್ಯಾಂಕ್ ಮೊರೆ ಹೋದ ದೇವಸ್ಥಾನದ ಆಡಳಿತಾಧಿಕಾರಿಗಳಿಗೆ ನಿರಾಸೆ!

ಅದರ ನಂತರ, ತಂಜಾವೂರು ಜಿಲ್ಲೆಯ ಸ್ವಾಮಿಮಲೈನ ‘ಎಸ್.ದೇವಸೇನಾಪತಿ ಸ್ಥಪತಿ ಸನ್ಸ್’ ಕಂಪನಿಯ ಸ್ಥಪತಿಗಳಾದ ರಾಧಾಕೃಷ್ಣನ್, ಶ್ರೀಕಂಠನ್, ಸ್ವಾಮಿನಾಥನ್ ಮೂವರೂ ಸೇರಿ, ಪ್ರತಿಮೆಯನ್ನು ವಿನ್ಯಾಸಗೊಳಿಸುವ ಕೆಲಸ ಪ್ರಾರಂಭಿಸಿದರು. ಪ್ರತಿಮೆ ಶೇ.75ರಷ್ಟು ಸಂಪೂರ್ಣವಾದ ಸ್ಥಿತಿಯಲ್ಲಿ, ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಮುಖ್ಯಸ್ಥ ಆರ್ಥಲ್ ಪಾಂಡ್ಯಾ, ಕೇಂದ್ರ ಅಧಿಕಾರಿಗಳಾದ ಜವಾಹರ್ ಪ್ರಸಾದ್ ಮತ್ತು ಮನೋಗನ್ ದೀಕ್ಷಿತ್ ಪ್ರತಿಮೆಯನ್ನು ಪಡೆದುಕೊಂಡರು.

ನಂತರ ಪ್ರತಿಮೆಯನ್ನು ಪೊಕ್ಲೈನ್ ಯಂತ್ರದ ಮೂಲಕ ಲಾರಿಯಲ್ಲಿ ಇರಿಸಿ ಕಳುಹಿಸಿ ಕೊಡಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದ ಭಕ್ತಾದಿಗಳು ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಕಳುಹಿಸಿಕೊಟ್ಟರು. ನಟರಾಜನ ಪ್ರತಿಮೆ ಉಳುಂದೂರುಪೇಟೆ, ಸೇಲಂ, ಬೆಂಗಳೂರು, ನಾಗ್ಪುರ, ಆಗ್ರಾ ಮೂಲಕ ದೆಹಲಿಗೆ ದಿನಾಂಕ 28 ರಂದು ತಲುಪಲಿದ್ದು, ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದೂ ಹೇಳಲಾಗುತ್ತಿದೆ.

ಇದನ್ನೂ ಓದಿ: ಡಾ.ಸಿದ್ದಲಿಂಗಯ್ಯ ಸ್ಮರಣೆ ಕಾರ್ಯಕ್ರಮ: ಬರೀ ಅಂಬಾನಿ-ಅದಾನಿ ಜೇಬಿನಲ್ಲಿ ಹಣ ಇದ್ದರೆ ಬಡವರ, ಮಧ್ಯಮ ವರ್ಗದವರ ಉದ್ಧಾರ ಸಾಧ್ಯವಿಲ್ಲ! – ಸಿದ್ದರಾಮಯ್ಯ

ಇದರ ಬಗ್ಗೆ ಮಾತನಾಡಿದ ಸ್ಥಪತಿಗಳು, “ತಾಮ್ರ, ಹಿತ್ತಾಳೆ, ಚಿನ್ನ, ಬೆಳ್ಳಿ, ಕಬ್ಬಿಣ, ಪಾದರಸ ಮುಂತಾದ ಅಷ್ಟ (ಎಂಟು) ಖನಿಜಗಳಿಂದ ವಿಗ್ರಹ ನಿರ್ಮಿಸಲಾಗಿದ್ದು, ವಿಶೇಷತೆ ಪಡೆದುಕೊಂಡಿರುವ ಈ ವಿಗ್ರಹವು 28 ಅಡಿ ಎತ್ತರ, 21 ಅಡಿ ಅಗಲ ಮತ್ತು ಸುಮಾರು 25 ಸಾವಿರ ಕೆಜಿ ತೂಕದ 51 ಜ್ವಾಲೆಗಳು ತಿರುವಾಚಿಯಲ್ಲಿ ನೆಲೆಗೊಂಡಿವೆ. ರೂ.10 ಕೋಟಿ ವೆಚ್ಚದಲ್ಲಿ ವಿನ್ಯಾಸ ಮಾಡಲಾಗಿದೆ” ಎಂದು ಹೇಳಿದ್ದಾರೆ.

ದೇಶ

ಡಿ.ಸಿ.ಪ್ರಕಾಶ್ ಸಂಪಾದಕರು

ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನದಿಂದ ರಷ್ಯಾ-ಉಕ್ರೇನ್ ಯುದ್ಧ ಶೀಘ್ರದಲ್ಲೇ ಅಂತ್ಯಗೊಳ್ಳುವ ನಿರೀಕ್ಷೆಯಿದೆ!

ಮಾರ್ಚ್ ಮೊದಲ ವಾರದಲ್ಲಿ ಈ ಸಂಬಂಧ ಅಧಿಸೂಚನೆ ಹೊರಬೀಳುವ ಸಾದ್ಯತೆಯಿದೆ ಎಂದು ಹೇಳಲಾಗುತ್ತಿದೆ. ಕಳೆದ ವರ್ಷ ಫೆಬ್ರವರಿ 25 ರಂದು ಪೂರ್ವ ಯುರೋಪಿಯನ್ ದೇಶವಾದ ಉಕ್ರೇನ್ ಮೇಲೆ ರಷ್ಯಾ ಯುದ್ಧವನ್ನು ಪ್ರಾರಂಭಿಸಿತು. ಯುದ್ಧ ಪ್ರಾರಂಭಿಸಿ ಒಂದು ವರ್ಷವು ಹತ್ತಿರವಾಗುತ್ತಿದ್ದರೂ ಯುದ್ಧವು ನಿಂತಪಾಡಿಲ್ಲ. ಈ ಯುದ್ಧದಿಂದ ದೊಡ್ಡ ಹಾನಿಯೇ ಎದುರಾಗಿದೆ. ಈ ಯುದ್ಧವು ಅಂತರರಾಷ್ಟ್ರೀಯ ರಾಜಕೀಯದಲ್ಲಿ ಪ್ರಮುಖ ಬದಲಾವಣೆಗಳನ್ನು ತಂದಿತು. ಕಚ್ಚಾ ತೈಲ ಮತ್ತು ಆಹಾರ ಉತ್ಪನ್ನಗಳ ಅಂತರರಾಷ್ಟ್ರೀಯ ವಿತರಣೆಯ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರಿತು. ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳು ರಷ್ಯಾದ ವಿರುದ್ಧ ದ್ವನಿಗೂಡಿಸಿದರೂ ಈ ವಿಷಯದಲ್ಲಿ ಭಾರತವು ತಟಸ್ಥವಾಗಿ ಉಳಿದುಕೊಂಡಿತು.

ಪ್ರಧಾನಿ ನರೇಂದ್ರ ಮೋದಿಯವರು ಯುದ್ಧವನ್ನು ಕೊನೆಗಾಣಿಸುವಂತೆ ಮತ್ತು ಮಾತುಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತೆ ಎರಡೂ ದೇಶಗಳನ್ನು ಒತ್ತಾಯಿಸುತ್ತ ಬಂದರು. ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಹಲವಾರು ಬಾರಿ ಮಾತಕತೆಯನ್ನೂ ನಡೆಸಿದರು.

ವಿಶ್ವದ ಅತಿದೊಡ್ಡ ಆರ್ಥಿಕತೆಗಳ ಸಮೂಹವಾದ ‘G-20’ ನ ಅಧ್ಯಕ್ಷ ಸ್ಥಾನವನ್ನು ಭಾರತ ಈ ವರ್ಷ ವಹಿಸಿಕೊಂಡಿದೆ. ಈ ವರ್ಷದ ಸಮ್ಮೇಳನವು ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆಯಲಿದೆ. ‘ಉಕ್ರೇನ್-ರಷ್ಯಾ ಯುದ್ಧವನ್ನು ತಡೆಯಲು ಪ್ರಧಾನಿ ಮೋದಿಯಿಂದ ಮಾತ್ರ ಸಾಧ್ಯ’ ಎಂದು ಅಮೆರಿಕ ಸೇರಿದಂತೆ ಇತರ ದೇಶಗಳು ಹೇಳಿಕೊಂಡು ಬರುತ್ತಿವೆ. ಅವರ ಸಾಮೀಪ್ಯವನ್ನು ಬಳಸಿ, ಯುದ್ಧವನ್ನು ನಿಲ್ಲಿಸಲು ಪುಟಿನ್ ಅವರನ್ನು ಒತ್ತಾಯಿಸುವಂತೆ ವಿಶ್ವ ನಾಯಕರು ಪ್ರಧಾನಿ ಮೋದಿ ಅವರನ್ನು ಒತ್ತಾಯಿಸುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ದಕ್ಷಿಣ ಏಷ್ಯಾ ರಾಷ್ಟ್ರವಾದ ಅಫ್ಘಾನಿಸ್ತಾನದ ಪರಿಸ್ಥಿತಿ ಕುರಿತು ಚರ್ಚಿಸುವ ಸಭೆ ಇತ್ತೀಚೆಗೆ ರಷ್ಯಾದಲ್ಲಿ ನಡೆಯಿತು. ಇದರಲ್ಲಿ ನಮ್ಮ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭಾಗವಹಿಸಿದ್ದರು. ನಂತರ ಅವರು ಪುಟಿನ್ ಅವರೊಂದಿಗೆ ಖಾಸಗಿ ಮಾತುಕತೆ ನಡೆಸಿದ್ದರು. ಇದು ಜಾಗತಿಕವಾಗಿ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈ ಹಿನ್ನಲೆಯಲ್ಲಿ ರಷ್ಯಾ ನಂತರ ಅಜಿತ್ ದೋವಲ್ ಕಳೆದ 10 ದಿನಗಳಿಂದ ಅಮೆರಿಕ, ಜರ್ಮನಿ, ಫ್ರಾನ್ಸ್ ಸೇರಿದಂತೆ ಎಂಟು ದೇಶಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ವಿಶೇಷ ಸಂದೇಶವನ್ನು ಆ ದೇಶದ ನಾಯಕರೊಂದಿಗೆ ಹಂಚಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮಾರ್ಚ್ ಮೊದಲ ವಾರದಲ್ಲಿ ರಷ್ಯಾ-ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದ ಘೋಷಣೆಯೊಂದನ್ನು ಪ್ರಧಾನಿ ಮೋದಿ ಮಾಡಲಿದ್ದಾರೆ ಎಂಬ ಸುದ್ದಿ ಹೊಸದಿಲ್ಲಿಯ ಅಧಿಕಾರ ವಲಯದಲ್ಲಿ ಹರಿದಾಡುತ್ತಿದೆ. ಇದಕ್ಕಾಗಿ ಮೊದಲ ವಾರದಲ್ಲಿ ಪ್ರಧಾನಿ ಮೋದಿ ರಷ್ಯಾ ಪ್ರವಾಸ ಮಾಡಬಹುದು ಅಥವಾ ಪುಟಿನ್ ಭಾರತಕ್ಕೆ ಬರಬಹುದು ಎನ್ನಲಾಗುತ್ತಿದೆ. ಭಾರತವು G-20 ನಾಯಕತ್ವವನ್ನು ವಹಿಸಿಕೊಂಡ ನಂತರ, ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸುವ ಮೂಲಕ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ಪ್ರಭಾವ ಇನ್ನೂ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.